Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಜನನಾಯಕ

ಬರಗಾಲ ಜಲ ಪ್ರವಾಹ
ಬಂದರೆ ಕಾಸಿಲ್ಲ ದುಡ್ಡಿಲ್ಲ
ಜನ ನಾಯಕರ
ಕಳ್ಳ ಖಜಾನೆಯಲ್ಲಿ
ಕುರ್ಚಿಗಾಗಿ ಖರ್ಚು
ಮಾಡುವರು ಕೋಟಿಗಟ್ಟಲೆ
ಪಟ್ಟಾಭಿಷೇಕಕ್ಕೆ
ಸುರಿದು ಎರಚುವರು
ಕಳ್ಳ ಖದೀಮರು
ಕಳ್ಳ ಕಣಜದ ಕಾಸಿನ ರಾಶಿ

ಜನ ಸಾಮಾನ್ಯರಿಗೆ
ಯಾವ ಭದ್ರತೆಯು ಇಲ್ಲ
ಕಳ್ಳ ಸುಳ್ಳ ನಾಯಕರಿಗೆ
ಇರುವುದು ಎ ಬಿ ಸಿ ಡಿ ಭದ್ರತೆ
ವರ್ಷವಿಡಿ ಅನ್ನ ಹಾಕುವ
ರೈತನಿಗಿಲ್ಲ ಒಂದಿಷ್ಟು ಗೌರವ
ಜನರಿಂದಲೇ
ಜನನಾಯಕರ
ಪಟ್ಟ ಕಟ್ಟಿಕೊಂಡು
ಜನರನ್ನೆ ಕಿತ್ತು ತಿನ್ನುವ
ನೀಚರಿಗೆ ಇರುವುದು
ಸಕಾಲ ಸತ್ಕಾರ ಗೌರವ
ಇದು ಏನು ಧರ್ಮವೂ
ಎಂತಹ ಮರ್ಮವೂ

- ರಾಜು ಹಾಸನ

13 Nov 2020, 11:02 pm

ಮಲೆನಾಡ ಮನೆ

ಬೆಟ್ಟಗುಡ್ಡಗಳ ನಾಡು
ಅದುವೇ ನಮ್ಮ ಮಲೆನಾಡು
ಮಲೆಗಳ ಆವರಿಸಿದ ಮಳೆಕಾಡು
ಇದು ಅಂದದ ಚೆಂದದ ಬೀಡು.

ಒಮ್ಮೆ ಇಲ್ಲಿ ಬಂದು ನೋಡು
ಆದರೆ ಕೊಂಚ ದಿನ ನೆಲೆಸಿಬಿಡು
ಇದು ಸೊಬಗಿನ ಹಾರುಗಗಳ ಗೂಡು
ಇದು ಹಸಿರಿನ ಉಸುರಿನ ಕಾಡು.

ತಣ್ಣನೆ ಗಾಳಿ ಬೀಸಿ ತೂಗುವ ತೊಟ್ಟಿಲು
ಹೆಮ್ಮರಗಳು ಕೈ ಚಾಚಿವೆ
ಬಾನನು ಮುಟ್ಟಲು..
ಕಗ್ಗಾಡು ತುಂಬಿಹುದು ಸುತ್ತಮುತ್ತಲು..


ಗುಡುಗು ಸಿಡಿಲಿಗೆ ಇಣುಕುವ ಅಣಬೆ
ಮಳೆ ಹೊಳೆ ತುಂಬಲು ಹತ್ತುವ ಮೀನು
ದೊಡ್ಡಬ್ಬ ಮುಗಿದರೆ ಹೊರಡುವರು
ಸೋಬೇಟೆಗೆ..
ಹಂದಿ, ಕಡವೆ, ಕಾಡು ಕುರಿ ಬ್ಯಾಟೆಗೆ..

ಎಂತಹ ಪುಣ್ಯವಂತರಣ್ಣ ಇಲ್ಲಿನ ಮಂದಿ
ಸ್ವರ್ಗದ ತುಣುಕನ್ನು ತಾವೇ ಹೊಂದಿ
ಊರಿಗೊಂದು ಮನೆ ಕಟ್ಟಿ
ಮಾರಿಗೊಂದು ಅಡಿಕೆಯ ನೆಟ್ಟಿ..
ಇದು ಸೃಷ್ಟಿಯ ಸೊಬಗಿನ ಮಡಿಲು
ಇದ್ದರೆ ಸಾಕಿಲ್ಲೊಂದು ಪುಟ್ಟ ಗುಡಿಸಲು..

- ಶ್ರೀಗೋ.

13 Nov 2020, 10:37 am

ಅ-ನಾಗರಿಕ

ವಿದ್ಯಾವಂತ ನಾಗರಿಕರಲ್ಲದ
ಪ್ರಕೃತಿ ಆರಾಧಕರಾದ
ಆದಿವಾಸಿಗಳು ತಾವು
ಹುಟ್ಟಿ ಬೆಳೆದ ಪರಿಸರವನ್ನೆ
ದೇವರೆಂದು ಪೂಜಿಸುವರು
ಆರಾಧಿಸುವರು ಎಲ್ಲಾರು ಒಗ್ಗುಡಿ
ವಿದ್ಯಾವಂತ ನಾಗರಿಕರೆಂದು
ಹಿಗ್ಗಿ ಕುಣಿದಾಡುವ ಮೂಢರು
ಮೇಲು ಕೀಳೆಂಬ
ಹಗ್ಗವ ಕಟ್ಟಿಕೊಂಡು
ಹಗ್ಗ ಜಗ್ಗಾಟವಡುವರು
ಕುಲ ಕುಲವೆಂದು ಹೊಡೆದಾಡಿ
ಮನೆ ಮನೆಗೊಂದು
ಬೀದಿ ಬೀದಿಗೊಂದು
ಊರು ಕೇರಿಗೊಂದು
ಗುಡಿಯ ಕಟ್ಟಿಕೊಂಡು
ತಾವೇ ಸೃಷ್ಟಿಸಿದ ಗೊಂಬೆಗೆ
ಚಿತ್ರಿಸಿ ಬರೆದ ಚಿತ್ರಪಟಕ್ಕೆ
ದೇವರ ಪಟ್ಟ ಕಟ್ಟಿ
ಪೂಜಿಸುವರಯ್ಯ ಇವರು
ಎಂತಹ ಮೂರ್ಖ ನಾಗರಿಕ
ನಾಡಿನ ಅನಾಗರಿಕ ಜನರಯ್ಯ
*********ರಾಜು ಹಾಸನ*******

- ರಾಜು ಹಾಸನ

13 Nov 2020, 12:19 am

ನಾ ಕಂಡ ಹಂಪಿ

ಬೀದಿಯಲಿ ಹೆಣವಾಗಿ ಬಿದ್ದ ಕಲ್ಲುಗಳು
ಕೊರೆದ ಕಂಬಗಳನು ಮುರಿದ ನೋವು
ಎದೆಸೀಳಿ ನಿಲ್ಲಿಸಿದ ಬಯಲು ಆಲಯ
ನೆತ್ತಿಯೋಡೆದು ಉರುಳಿಸಿದ ಗೋಪುರ

ಇಡಿಗಲ್ಲು ಕಡೆದು ಕೆತ್ತಿದ ಕಲಾಕೃತಿಗಳನ್ನು
ಸಾಹಿತ್ಯ ವಿಜ್ಞಾನ ಕಲೆ ಸಂಸ್ಕೃತಿಗಳ ನಾಶ
ಕಣ್ಣೀರು ಕರಗಿ ಕರೆಯೊಂದು ತೋರುತಲಿ
ಅಳಿದುಳಿದ ಕಥೆ ಹೇಳ್ತಾ ನಿಂತದ್ದು ಕಂಡೆ

ಸುತ್ತ ಸುಲ್ತಾನರ ನಡುವೆ ದಿಟ್ಟ ಧೈರ್ಯದಿ
ಹೊನ್ನ ಸೂಸುವ ವಿಜಯ ಸಾಮ್ರಾಜ್ಯ ಕಟ್ಟಿ
ದುಷ್ಟರನು ಸೆದೆಬಡಿದು ತಲೆ ಎತ್ತಿ ನಿಂತದ್ದು ದುಷ್ಕೃತ್ಯಕೆ ಬಲಿಯಾಗಿ ಬರಿದಾದ್ದ ಕಂಡೆ

ಮತ್ತೆ ಕಟ್ಟುವರೆಂದು ಮರಗುತ್ತ ಕೊರಗುತ್ತಾ ಕಲ್ಲಿನಲಿ ಹೊನ್ನ ಕಥೆ ಹೇಳ್ತಾ ನಿಂತಿಹವು
ಸಪ್ತ ಸಾಗರದಾಚೆ ಪಸರಿಸಿದ ಕೀರ್ತಿಯನು
ಹೊಂಚಾಕಿ ಚಿವುಟಿ ಹಾಳು ಗೆಡುಹಿದ ಕಂಡೆ

ಬಂದರೊಬ್ಬ ಯೋಗಿ ಬಿಷ್ಟಪ್ಪಯ್ಯ ನವರು
ಹಂಪಿಯ ವಿರೂಪಾಕ್ಷ ನಿಗೆ ಗೋಪುರ ಕಟ್ಟಿ
ಮತ್ತೆ ಇತಿಹಾಸ ಮರುಕಳಿಸುವಂತೆ ಮಾಡಿ
ಜನಸಾಗರದ ಜಾತ್ರೆಯ ಮಾಡಿದ್ದು ಕಂಡೆ

ಕಲ್ಮೇಶ ಬಡಿಗೇರ
..........ಬಾದಾಮಿ......

- Kalmesh Badiger

11 Nov 2020, 01:00 pm

ಭಕುತಿ

ದೇಶ ಭಕ್ತಿ
ಧರ್ಮ ಭಕ್ತಿ
ಜಾತಿ ಭಕ್ತಿ
ಪಕ್ಷ ಭಕ್ತಿಗಿಂತ
ದೊಡ್ಡದಯ್ಯ
ಆತ್ಮಸಾಕ್ಷಿ
ಮನಃಸಾಕ್ಷಿ
ಮಾನವ ಭಕುತಿ

ಮನುಷ್ಯನ ಮನುಷ್ಯನಾಗಿ
ನೋಡದ ಮುಟ್ಟದ
ಮಾನವಿಯತೆ ಇಲ್ಲದ ಜನರು
ದೇಶ ಧರ್ಮ ಜಾತಿ ಭಕ್ತಿಯ
ಹಣೆಪಟ್ಟಿ ಕಟ್ಟಿಕೊಂಡು
ಊರು ತುಂಬಾ
ಸುತ್ತಿದರೇನು ಬಂತು
ಎಲ್ಲಾ ಭಕ್ತಿಗಳಿಗಿಂತ ಮಿಗಿಲಯ್ಯ
ಈ ಮಾನವ ಭಕುತಿ
ಜನರನ್ನ ಜನರ ತರ
ನೋಡಿದೆ ಮುಟ್ಟದೆ
ಪ್ರಾಣಿಗಳ ತರ ನೋಡುವ
ದೂರವಿಡುವ ಧರ್ಮವು
ಧರ್ಮವೇ ಅಲ್ಲ

- ರಾಜು ಹಾಸನ

10 Nov 2020, 11:37 pm

ಕನಸು

ಕಾಣುವುದು ಹಲವಾರು ಕನಸು
ಆಗುವುದು ಬೇರೆಯೆದ್ದೆ ನನಸು
ಕನಸು ನನಸುಗಳ ಮರೆಯಲ್ಲಿ
ವಿದಿಯಾಟ ಸೂತ್ರ ಹಿಡಿದಿಹುದು

ಅಪ್ಪನು ದುಡಿವಾಗ ಆಟದ ಕನಸು
ಓದುವ ಹಠದಲ್ಲಿ ಪ್ರೀತಿಯ ಕನಸು
ಮದುವೆ ಮಕ್ಕಳ ಕನಸ ಕಾಣುತ್ತಾ
ವೃದ್ಧಾಶ್ರಮ ಸೇರಿಕೊಂಡ ಕನಸು

ಹಣ ಗಳಿಸುವ ಆಸೆಯ ಕನಸು
ಗಳಿಸಿದ ಹಣವ ಕೂಡಿಡುವ ಕನಸು
ಕದ್ದೋದ ಕಳ್ಳನಿಗೆ ಶಫಿಸುವ ಕನಸು
ದೇವರಲ್ಲಿ ಮೊರೆಯಿಟ್ಟು ಕೇಳ್ದ ಕನಸು

ಆಹ್ಹಾ ಅದೆಂತೆಂತಾ ಕನಸು ಕಾಣುತ್ತಾ
ಎಳುತ್ತ ಬೀಳುತ್ತಾ ಸಾಗುವ ಕನಸು
ಆದರೂ ಭಂಡ ರಾಗಿ ನಡೆವ ಕನಸು
ಬಿದ್ದರು ನಗೆಬೀರಿ ನಡೆವ ಕನಸು

ಕತ್ತಲಲಿ ಕಾಣುವುದು ಒಂದು ಕನಸು
ಬೆಳಕಿನಲಿ ಹೇಳುವುದು ಒಂದು ಕನಸು
ಜೀವನದ ಸೂತ್ರಧಾರನ ಮುಂದೆಯೇ
ಸುಳ್ಳೆಂಬ ಈ ನಾಟಕದ ಕನಸೋ ಕನಸು

ಕಲ್ಮೇಶ ಬಡಿಗೇರ
. ಬಾದಾಮಿ

- Kalmesh Badiger

10 Nov 2020, 05:58 pm

ಹೃದಯ

ಮರಳಿ ಬಂದರು ಬಂದು ಬಿಡು ಗೆಳಯ
ನನ್ನ ಹೃದಯದ ಅರಮನೆಯಲ್ಲಿ
ಪುಟ್ಟದೊಂದು ಗುಡಿಯ ಕಟ್ಟಿ
ಪೂಜಿಸುವೆನು.....
ನಿನ್ನ ದೇವತೆಯ ಹುಡುಗಿ....

""".... """

- Supriya C

10 Nov 2020, 01:19 pm

ಹೃದಯ

ಹೃದಯ ಅರಮನೆಯ ಹೆಬ್ಬಾಗಿಲು ತೆರೆದು.....
ಪ್ರೀತಿ,,, ಭಾವನೆ,, ಕವನಗಳ,, ಬರಿಯುತಾ....
ಕನಸುಗಳ ಸರಮಾಲೆಯನ್ನು ಪೋಣಿಸುತ್ತಾ.....
ಕಾದಿರುವೆ ನನ್ನ ಮುದ್ದು ಮನವೇ ❤️....
ಪ್ರೇಮದ ಪಲ್ಲಕ್ಕಿಯಲ್ಲಿ ಬರುವ ನಿನಗೆ
ಸ್ವಾಗತ ಹೇಳಲೂ ಕಾಯುತ್ತಿರುವೆ.......
ನನ್ನ ಹೃದಯದಲ್ಲಿ ಪ್ರೇಮಜ್ಯೋತಿ ಬೆಳಗಿಸಲು ಬಾ

ನನ್ನ ಮುದ್ದು ಮನವೇ....

"""""....... my dreem boy...... """"""

- Supriya C

10 Nov 2020, 01:17 pm

ಸತ್ಯ ಸತ್ಯ

ಶ್ರಮವಿಲ್ಲದ ದುಡುಮೆ ಇಲ್ಲ
ಕಾಲಚಕ್ರವಿಲ್ಲದ ಜಗತ್ತಿಲ್ಲ
ಖರ್ಚು ವೆಚ್ಚವಿಲ್ಲದ ವ್ಯವಹಾರವಿಲ್ಲ
ಯತ್ನ ಪ್ರಯತ್ನಗಳಿಲ್ಲದ ಗೆಲುವಿಲ್ಲ
ನೋವು ನಲಿವಿಲ್ಲದ ಬದುಕಿಲ್ಲ
ಏಳು ಬೀಳು ಇಲ್ಲದ ಸಾಧನೆಯಿಲ್ಲ

- ರಾಜು ಹಾಸನ

09 Nov 2020, 11:42 am

ಹುಡುಗಾಟ

ಮನಸ್ಸೆಂಬ
ಮಾಯಾ ಜಿಂಕೆ
ಮರಕೋತಿ
ಆಟವಾಡುತ್ತಿದೆ
ಯೌವ್ವನದ
ಬಾಲ ಕಟ್ಟಿ

ಯೌವ್ವನ ಕಳಚಿ
ಮುಪ್ಪು ಬಂದರೆ
ಅರಳಿದ ತಾವರೆ
ಮುದುಡಿದ
ತಾವರೆಯಾಗುವುದು
ಯಾವ ಮಾಯಾ
ಜಿಂಕೆಯು ಇಲ್ಲ
ಯಾವ ಮರಕೋತಿ
ಆಟವು ಇಲ್ಲ
ಯಾವ ವಿಧಿ
ಆಟವು ಇಲ್ಲ
ಎಲ್ಲಾ ವಯಸ್ಸಿನ ಆಟ

- ರಾಜು ಹಾಸನ

09 Nov 2020, 11:34 am