ಬರಗಾಲ ಜಲ ಪ್ರವಾಹ
ಬಂದರೆ ಕಾಸಿಲ್ಲ ದುಡ್ಡಿಲ್ಲ
ಜನ ನಾಯಕರ
ಕಳ್ಳ ಖಜಾನೆಯಲ್ಲಿ
ಕುರ್ಚಿಗಾಗಿ ಖರ್ಚು
ಮಾಡುವರು ಕೋಟಿಗಟ್ಟಲೆ
ಪಟ್ಟಾಭಿಷೇಕಕ್ಕೆ
ಸುರಿದು ಎರಚುವರು
ಕಳ್ಳ ಖದೀಮರು
ಕಳ್ಳ ಕಣಜದ ಕಾಸಿನ ರಾಶಿ
ಜನ ಸಾಮಾನ್ಯರಿಗೆ
ಯಾವ ಭದ್ರತೆಯು ಇಲ್ಲ
ಕಳ್ಳ ಸುಳ್ಳ ನಾಯಕರಿಗೆ
ಇರುವುದು ಎ ಬಿ ಸಿ ಡಿ ಭದ್ರತೆ
ವರ್ಷವಿಡಿ ಅನ್ನ ಹಾಕುವ
ರೈತನಿಗಿಲ್ಲ ಒಂದಿಷ್ಟು ಗೌರವ
ಜನರಿಂದಲೇ
ಜನನಾಯಕರ
ಪಟ್ಟ ಕಟ್ಟಿಕೊಂಡು
ಜನರನ್ನೆ ಕಿತ್ತು ತಿನ್ನುವ
ನೀಚರಿಗೆ ಇರುವುದು
ಸಕಾಲ ಸತ್ಕಾರ ಗೌರವ
ಇದು ಏನು ಧರ್ಮವೂ
ಎಂತಹ ಮರ್ಮವೂ
ಬೆಟ್ಟಗುಡ್ಡಗಳ ನಾಡು
ಅದುವೇ ನಮ್ಮ ಮಲೆನಾಡು
ಮಲೆಗಳ ಆವರಿಸಿದ ಮಳೆಕಾಡು
ಇದು ಅಂದದ ಚೆಂದದ ಬೀಡು.
ಒಮ್ಮೆ ಇಲ್ಲಿ ಬಂದು ನೋಡು
ಆದರೆ ಕೊಂಚ ದಿನ ನೆಲೆಸಿಬಿಡು
ಇದು ಸೊಬಗಿನ ಹಾರುಗಗಳ ಗೂಡು
ಇದು ಹಸಿರಿನ ಉಸುರಿನ ಕಾಡು.
ತಣ್ಣನೆ ಗಾಳಿ ಬೀಸಿ ತೂಗುವ ತೊಟ್ಟಿಲು
ಹೆಮ್ಮರಗಳು ಕೈ ಚಾಚಿವೆ
ಬಾನನು ಮುಟ್ಟಲು..
ಕಗ್ಗಾಡು ತುಂಬಿಹುದು ಸುತ್ತಮುತ್ತಲು..
ಗುಡುಗು ಸಿಡಿಲಿಗೆ ಇಣುಕುವ ಅಣಬೆ
ಮಳೆ ಹೊಳೆ ತುಂಬಲು ಹತ್ತುವ ಮೀನು
ದೊಡ್ಡಬ್ಬ ಮುಗಿದರೆ ಹೊರಡುವರು
ಸೋಬೇಟೆಗೆ..
ಹಂದಿ, ಕಡವೆ, ಕಾಡು ಕುರಿ ಬ್ಯಾಟೆಗೆ..
ಎಂತಹ ಪುಣ್ಯವಂತರಣ್ಣ ಇಲ್ಲಿನ ಮಂದಿ
ಸ್ವರ್ಗದ ತುಣುಕನ್ನು ತಾವೇ ಹೊಂದಿ
ಊರಿಗೊಂದು ಮನೆ ಕಟ್ಟಿ
ಮಾರಿಗೊಂದು ಅಡಿಕೆಯ ನೆಟ್ಟಿ..
ಇದು ಸೃಷ್ಟಿಯ ಸೊಬಗಿನ ಮಡಿಲು
ಇದ್ದರೆ ಸಾಕಿಲ್ಲೊಂದು ಪುಟ್ಟ ಗುಡಿಸಲು..
ವಿದ್ಯಾವಂತ ನಾಗರಿಕರಲ್ಲದ
ಪ್ರಕೃತಿ ಆರಾಧಕರಾದ
ಆದಿವಾಸಿಗಳು ತಾವು
ಹುಟ್ಟಿ ಬೆಳೆದ ಪರಿಸರವನ್ನೆ
ದೇವರೆಂದು ಪೂಜಿಸುವರು
ಆರಾಧಿಸುವರು ಎಲ್ಲಾರು ಒಗ್ಗುಡಿ
ವಿದ್ಯಾವಂತ ನಾಗರಿಕರೆಂದು
ಹಿಗ್ಗಿ ಕುಣಿದಾಡುವ ಮೂಢರು
ಮೇಲು ಕೀಳೆಂಬ
ಹಗ್ಗವ ಕಟ್ಟಿಕೊಂಡು
ಹಗ್ಗ ಜಗ್ಗಾಟವಡುವರು
ಕುಲ ಕುಲವೆಂದು ಹೊಡೆದಾಡಿ
ಮನೆ ಮನೆಗೊಂದು
ಬೀದಿ ಬೀದಿಗೊಂದು
ಊರು ಕೇರಿಗೊಂದು
ಗುಡಿಯ ಕಟ್ಟಿಕೊಂಡು
ತಾವೇ ಸೃಷ್ಟಿಸಿದ ಗೊಂಬೆಗೆ
ಚಿತ್ರಿಸಿ ಬರೆದ ಚಿತ್ರಪಟಕ್ಕೆ
ದೇವರ ಪಟ್ಟ ಕಟ್ಟಿ
ಪೂಜಿಸುವರಯ್ಯ ಇವರು
ಎಂತಹ ಮೂರ್ಖ ನಾಗರಿಕ
ನಾಡಿನ ಅನಾಗರಿಕ ಜನರಯ್ಯ
*********ರಾಜು ಹಾಸನ*******
ದೇಶ ಭಕ್ತಿ
ಧರ್ಮ ಭಕ್ತಿ
ಜಾತಿ ಭಕ್ತಿ
ಪಕ್ಷ ಭಕ್ತಿಗಿಂತ
ದೊಡ್ಡದಯ್ಯ
ಆತ್ಮಸಾಕ್ಷಿ
ಮನಃಸಾಕ್ಷಿ
ಮಾನವ ಭಕುತಿ
ಮನುಷ್ಯನ ಮನುಷ್ಯನಾಗಿ
ನೋಡದ ಮುಟ್ಟದ
ಮಾನವಿಯತೆ ಇಲ್ಲದ ಜನರು
ದೇಶ ಧರ್ಮ ಜಾತಿ ಭಕ್ತಿಯ
ಹಣೆಪಟ್ಟಿ ಕಟ್ಟಿಕೊಂಡು
ಊರು ತುಂಬಾ
ಸುತ್ತಿದರೇನು ಬಂತು
ಎಲ್ಲಾ ಭಕ್ತಿಗಳಿಗಿಂತ ಮಿಗಿಲಯ್ಯ
ಈ ಮಾನವ ಭಕುತಿ
ಜನರನ್ನ ಜನರ ತರ
ನೋಡಿದೆ ಮುಟ್ಟದೆ
ಪ್ರಾಣಿಗಳ ತರ ನೋಡುವ
ದೂರವಿಡುವ ಧರ್ಮವು
ಧರ್ಮವೇ ಅಲ್ಲ
ಶ್ರಮವಿಲ್ಲದ ದುಡುಮೆ ಇಲ್ಲ
ಕಾಲಚಕ್ರವಿಲ್ಲದ ಜಗತ್ತಿಲ್ಲ
ಖರ್ಚು ವೆಚ್ಚವಿಲ್ಲದ ವ್ಯವಹಾರವಿಲ್ಲ
ಯತ್ನ ಪ್ರಯತ್ನಗಳಿಲ್ಲದ ಗೆಲುವಿಲ್ಲ
ನೋವು ನಲಿವಿಲ್ಲದ ಬದುಕಿಲ್ಲ
ಏಳು ಬೀಳು ಇಲ್ಲದ ಸಾಧನೆಯಿಲ್ಲ