Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸೊಗಸು

ಆಸೆ ಇಷ್ಟ
ಮಾತು‌ ಸುಲಭ
ಕನಸು ಚಂದ
ನನಸು ಕಷ್ಟ

ಬಯಸಿದ ಆಸೆಗಳು
ಕಂಡ ಕನಸುಗಳು
ಕೊಟ್ಟ ಮಾತು
ಪಯಣದ ದಾರಿಯಲ್ಲಿ
ನನಸಾದರೆ
ಚಂದವಯ್ಯ ಚಂದ

ಆಸೆಗಳು ಕನಸಾಗಿ
ಕನಸುಗಳು ನನಸಾಗದಿದ್ದರೆ
ಆಡಿದ ಮಾತು ಪಟ ಪಾಡು
ಯತ್ನ ಪ್ರಯತ್ನಗಳು
ವ್ಯರ್ಥವಯ್ಯ ವ್ಯರ್ಥ

ಮನದ ಆಸೆಗಳು ಸಾವಿರರು
ಕಂಡ ಕನಸುಗಳು ನೂರಾರು
ಆಡಿದ ಮಾತು ಹತ್ತಾರು
ಪಯಣದ ಹಾದಿ ಹಲವರಿದ್ದರು
ಗುರಿ ಮುಟ್ಟುವ ದಾರಿ
ಒಂದೇ ಒಂದೇ ಆಗಿರಲಿ

- ರಾಜು ಹಾಸನ

09 Nov 2020, 11:22 am

ನೆನಪಿನಂಗಳ

ಸುಂದರ ಹೂವಿನ ಹಂದರದೊಳಗೆ
ಮರೆಯಲಿ ನಾಚುತ ಕಿರು ನಗೆ ಚಲ್ಲಿ
ಪರದೆಯ ಮರೆಯಲಿ ಜಾರುತ ನಿಂತ
ಕುಸುಮವೆ ಕಾಡಿದೆ ನಿನ್ನಯ ನೆನಪು //ಪ//

ಪ್ರೇಮ ಪಯಣದ ದಾರಿಯ ತೋರಿ
ಪ್ರೀತಿಯ ಅಮೃತ ಬಳ್ಳಿಯ ಬೆಳೆಸಿ
ಸುಮಧುರ ಇಂಪಿನ ಕಂಪನು ಬೀರಿದ
ಕೋಮಲ ಸುಮವೆ ನಿನ್ನಯ ನೆನಪು //ಚ//೧//

ಕಣ್ಣಿನ ಸನ್ನೆಯ ಸುಳಿಯಲಿ ಸಿಲುಕಿಸಿ
ಸುಮ್ಮನೆ ನಗುತಲಿ ನೆನಪಲಿ ಉಳಿದೆ
ಒಲವಿನ ಮುತ್ತಿನ ಮಾತಿನ ಒಗಟಿನ
ಹೋಳಿಗೆ ನೀಡಿದ ನಿನ್ನಯ ನೆನಪು //೨//

ಸಾಗರದಲೆಯ ತಂಗಾಳಿಯ ಹಾಗೆ
ಮನದಲಿ ಮೂಡಿದೆ ಮಲ್ಲಿಗೆಯಂತೆ
ಕಾಲ್ಗಳ ಗೆಜ್ಜೆಯ ಕುಣಿತಕೆ ಕರಗಿದ
ನನ್ನಯ ಹೃದಯದಿ ನಿನ್ನಯ ನೆನಪು //೩//

ಜೀವ ಭಾವಗಳ ಸಂಗಮಗೊಳಿಸಿ
ಸುಂದರ ಬದುಕಿಗೆ ಮುನ್ನುಡಿ ಬರೆದ
ಸಂಗಾತಿ ಯಾಗುವ ಕನಸನು ಕಂಡು
ಉಸಿರಲಿ ನೇನೆಸುವ ನಿನ್ನ ನೆನಪು //೪//

ಕಲ್ಮೇಶ ಬಡಿಗೇರ
........ಬಾದಾಮಿ.....

- Kalmesh Badiger

08 Nov 2020, 09:05 am

ಭೀಮ ಘರ್ಜನೆ

ಸಿಂಹ ಘರ್ಜನೆ ಭೀಮ ಘರ್ಜನೆ
ಮನುವಾದಿಗಳ ಹುಟ್ಟಡಗಿಸಿದ
ಬಾಬಾಸಾಹೇಬರ
ಸಿಂಹ ಘರ್ಜನೆ ಭೀಮ ಘರ್ಜನೆ

ದುಷ್ಟರ ಎದೆಯಲ್ಲಿ ನಡುಕ ಹುಟ್ಟಿಸಿ
ಮನುವಾದಿಗಳ ನಿದ್ದೆಗೆಡಿಸಿ
ಸಿಂಹ ಸ್ವಪ್ನವಾಗಿ ಕಾಡಿದ
ಭೀಮರಾವ್ ಬಾಬಾಸಾಹೇಬರ
ಸಿಂಹ ಘರ್ಜನೆ ಭೀಮ ಘರ್ಜನೆ

ಚಡ್ಡಿ ಉದುರಿದರು ಚಡ್ಡಿ ಹಿಡಿದು
ಹಳ್ಳ ಕೊಳ್ಳ ಬಿದ್ದು ಓಡಿದರು
ಮನುವಾದಿ ಕುನ್ನಿಗಳು
ದೀನ ದಲಿತರ ಸೂರ್ಯ ಬಾಬಾಸಾಹೇಬರ
ಸಿಂಹ ಘರ್ಜನೆ ಭೀಮ ಘರ್ಜನೆ

ಮನು ಸ್ಮೃತಿಯ ಸುಟ್ಟು
ಸ್ತ್ರೀ ಬಡವರ ಮಕ್ಕಳ ರಕ್ಷಿಸಿ
ಬೊಗಳುವ ಮನುವಾದಿಗಳ ಸದ್ದಡಗಿಸಿದ
ಭಾರತ ರತ್ನ ಬಾಬಾಸಾಹೇಬರ
ಸಿಂಹ ಘರ್ಜನೆ ಭೀಮ ಘರ್ಜನೆ

ಕುನ್ನಿ ಕುತಂತ್ರಿ ಕಂತ್ರಿ
ಕುಲದವರ ಮೈ ಬೆವರು ಇಳಿಸಿ
ಮನುವಾದಿಗಳ ಎಡೆಮುರಿ ಕಟ್ಟಿದ
ವಿಶ್ವ ರತ್ನ ಬಾಬಾಸಾಹೇಬರ
ಸಿಂಹ ಘರ್ಜನೆ ಭೀಮ ಘರ್ಜನೆ

ದಂಡು ದಂಡಾಗಿ ಹಿಂಡೇ
ಅಡ್ಡಿ ಬಂದರೂ ಲೆಕ್ಕಿಸದೆ
ಅಂಜದೆ ಅಳುಕದೆ ಹೆದರದೆ ಬೆದರದೆ
ಏಕಾಂಗಿಯಾಗಿ ಸೆದೆಬಡಿದು
ಹಿಮ್ಮೆಟ್ಟಿಸಿದ ಒಂಟಿಸಲಗ
ಜ್ಞಾನ ಜ್ಯೋತಿ ಬಾಬಾಸಾಹೇಬರ
ಸಿಂಹ ಘರ್ಜನೆ ಭೀಮ ಘರ್ಜನೆ

- ರಾಜು ಹಾಸನ

07 Nov 2020, 11:58 pm

ನಿನ್ನ ನಗುವ

ನಿನ್ನ ನಗುವಿನ ಅಲೆಯಲ್ಲಿ ಕಳೆದೋದೆನು ಚೆಲುವ,
ನೋಡುತ್ತಾ ಕುಳಿತರೆ ನನ್ನೇ ನಾ ಮರೆಯುವೆ
ನಿನ್ನ ನಗುವ,

ನಿನ್ನ ನೋಡಿದ ಮೊದಲ ಕ್ಷಣವೇ ಹುಟ್ಟಿತು ನನ್ನಲ್ಲಿ ಪ್ರೀತಿ,
ತಿಳಿಯಲಾರೇನು ನಿನ್ನ ಮುಂದೆ ಹೇಳುವ ರೀತಿ,

ಕನಸುಗಳು ಚಿಗುರೊಡೆದಿವೆ ನಿನ್ನ ನೆನಪಲಿ,
ಅದೆಷ್ಟು ಕವನಗಳ ಬರೆದೆ ನಿನ್ನ ಗುಂಗಲಿ.

- Veena

07 Nov 2020, 09:42 am

ಸರಳ ಜೀವನ

ಮನಸ್ಸು ನಿಮ೯ಲವಾಗಿದ್ದರೆ
ಅದೇ ಸಾಕ್ಷಾತ್ಕಾರ
ಮಾತು ಮೃದುವಾಗಿದ್ದರೆ
ಅದೇ ಚಮಾತ್ಕಾರ
ನಡತೆ ಶುದ್ಧವಾಗಿದ್ಧರೆ
ಅದೇ ಪುರಸ್ಕಾರ
ಬದುಕು ಸರಳವಾಗಿದ್ದರೆ
ಅವರಿಗೊಂದು ನಮಸ್ಕಾರ

- Mahesh Lakkur

07 Nov 2020, 07:51 am

*** ಹೊತ್ತಿನ ಮುತ್ತು***

ತಪ್ಪಿ ಹೋದಿತೆ ಹೊತ್ತಿನ ಮುತ್ತು
ಮತ್ಯಾಕೆ ಕಲ್ಲಾಯಿತೆ ಮನಸ್ಸು
ಅರಳುವ ಜೀವಕೆ ಬಾಡಿದ ಮಾತೆಕೆ
ಮರುಳಾಗದ ಮಾಣಿಕ್ಯ ಅಂಗೈಯಲ್ಲಿರುವಾಗ॥

ಕೈ ಚೆಲ್ಲಿ ಕುಳಿತೆ ಕತ್ತಲಾಗುವ ಮುನ್ನ
ಬೆಳಕನ್ನೆಕೆ ನೆನೆದು ಕಣ್ಣಿರುಡುವೆ
ಸೂರ್ಯನ ಬೆಳಕೊ ಹೊತ್ತು ಮುಳಗೊತನಕ
ಚಂದಿರನಿಗಾಗಿ ಏಕೆ ಕಾಯುವೆ ಅಮವಾಸ್ಯೆ ದಿನಂದು
ಹುಣ್ಣಿಮೆಯ ರಾತ್ರಿಗೆ ಮರುಳಾಗದಿರೊ ಮತ್ತೊಮ್ಮೆ
ಕ್ಷಣಿಕ ಕಲ್ಪನೆಗಾಗಿ ಕೈ ಚೆಲ್ಲಿ ಕುಳಿತೆ ನಿಲುಕದ ನಕ್ಷತ್ರಕೆ ॥

ಚಿಂತಿಸುವುದೇಕೆ ಮರಳಿಬಾರದ ಕಾಲಕೆ
ತಿರುಗಿ ತಿರುಚಿದರು ಗಡಿಯಾರದ ಮುಳ್ಳು ಮರಳಿತೆ
ಉರುಳಿ ಹೋದ ಸಮಯವಲ್ಲ....
ಚಿಂತಿಸಿ ಫಲವೇನು ಇರುವ ಪ್ರಯತ್ನವ ಕೈ ಚೆಲ್ಲಿ
ಅವಸರವೇಕೆ ಆವೇಷದಲಿ..
ದುಡುಕಿದ ನಿರ್ಧಾರಕೆ ನಿದರ್ಶನ ನಿನ್ನೊಳಗಿನ ತಾಳ್ಮೆ
ಅದನ್ನರಿಯದೆ ಚಿಂತಿಸಿ ಫಲವೇನು .....॥

ಯಾರಿಗಾಗಿ ಕಾಯುತಿರುವೆ ಕಾಯಿಸುವುದೆ ಈ ಸಮಯ
ಕಾಯೊ ಮನಸ್ಸಿದೆ ಕಾಯಿಸೊ ಸಮಯವಿಲ್ಲ
ಯಾರಿಗಾಗಿ ಯಾರು ಇಲ್ಲ ಓಡುತಿಹದು ಕಾಲ
ಕಾಲಘಟ್ಟದಲಿ ಮಿತಿಯಿಲ್ಲ ಕಾಲ ನಿರ್ಣಯವೆ ಅಂತಿಮ
ಕಾಯುತಿರುವೆ ಯಾರಿಗಾಗಿ
ಕಾಯಿಸೊ ಸಮಯ ನಿನ್ನದಲ್ಲ॥

ಅರಳೊ ಹೂವಿಗೆ ಬಾಡಿ ಹೋಗುವ ಸಮಯ ತಿಳಿದಿಲ್ಲ
ಅರಳಿದಾಗ ಹೊಳೆಯುವುದು ತಿಳಿದಿಲ್ಲ
ನಾನಿಲ್ಲಿ ಕ್ಷಣಿಕ ....
ನಾ ಬಾಡಿ ಹೋದರೆ ಬೆಳಗಾಗಿ ಮತ್ತೆ ಹುಟ್ಟಿ ತರುವೆ
ನನ್ನಂತಹ ಸೌಂಧರ್ಯವ ಆದರೆ ಅದು ನಾನಲ್ಲ
ನಾ ಬಿಟ್ಟು ಹೋದ ಜಾಗವಷ್ಟೆ.....॥

ಇನ್ನು ನಾವಿಲ್ಲಿ ಕ್ಷಣಿಕ ಹೊಳೆದಿದ್ದೆಲ್ಲ ಕೇವಲ ಕಾಲ್ಪನಿಕ
ನಮ್ಮ ಕಲ್ಪನೆಗಳು ಮಾತ್ರ ಸುಂದರ .. ಸುಂದರ
ಬಹುದೂರದಾಚೆ ಕಡಲಲಿ ಹೊತ್ತು ಮುಳೊಗೊ ಮುನ್ನ
ಮತ್ತೆ ಯಾಕೆ ಈ ಬೇಸರ ಉದಯಿಸೊ ರವಿ ಕಂಡು....॥


ತಪ್ಪಿ ಹೋದಿತೆ ಕೈಚೆಲ್ಲಿ ಚಿಂತಿಸುವುದೇಕೆ ಯಾರಿಗಾಗಿ
ಅರಳೊ ಮಲ್ಲಿಗೆ ಬಾಡಿ ಹೋದ ಕಾಲಕೆ
ನಾವೆಲ್ಲ ಇಲ್ಲಿ ಕ್ಷಣಿಕ ನಮ್ಮ ಕಲ್ಪನೆಯಲಿ ನಾವು ಕಾಲ್ಪನಿಕ...
ಸೃಷ್ಟಿ ಕರ್ತನೆ ಈ ಜಗದ ನಿರ್ವಾಹಕ
ನಿರ್ಣಯವೆ ಅಂತಿಮ ನಾವಿನ್ನು ಅವನ ಕೈಬೊಂಬೆಗಳು ಮಾತ್ರ ....ಈ ಜೀವನ ॥

****ಧನ್ಯವಾದಗಳೊಂದಿಗೆ****

>ನಾನಿನ್ನು ಚಿಕ್ಕ ಮೀನು<
ಸಾಹಿತ್ಯ ಸಾಹಿತಿಗಳ ಬಲೆಯಲಿ
ನನ್ನದು ಕಿರು ವಾಚನ......

***ವಿಶು(ವೀರೇಶ) ಅಂಗಡಿ ***

- Wishu@

05 Nov 2020, 06:23 pm

ಗೆಳೆಯನ ಹುಟ್ಟುಹಬ್ಬ

ಅಪರಿಚಿತರಗಿ ಹುಟ್ಟಿ ಬೆಳೆದು
ಚಿರ ಪರಿಚಿತರವಾದ ಸ್ನೇಹ ಸಂಬಂಧ
ಸ್ವಚ್ಚಂದವಾಗಿ ಬಾನಂಗಳದ
ಬಾನಿನಲ್ಲಿ ಹಾರಾಡಿ ತೂರಾಡಿ
ನಕ್ಕು ನಲಿದು ಕುಣಿದು ಕುಪ್ಪಳಿಸಿ
ಹೆಜ್ಜೆಯ ಹಿಂದೆ ಹೆಜ್ಜೆಯನ್ನಿಕ್ಕುತ್ತಾ
ಜೊತೆಗೂಡಿ ನಡೆದಾಡಿದ
ನಮ್ಮಿಬ್ಬರ ಸ್ನೇಹ ಹೀಗೆ ಸಾಗಲಿ

ಚಿರಕಾಲವಿರಲಿ ಸದಾ ಕಾಲವಿರಲಿ
ಉಕ್ಕಿ ಹರಿಯಲಿ ಈ ಸ್ನೇಹದ ಕಡಲು
ನಂಬಿಕೆಯ ಉಸಿರಾಗಿ
ಮಾತು ಮುತ್ತಾಗಿ ಹೊಳೆದು
ಬೆಳಕು ಚೆಲ್ಲಲಿ ನಾವು ಸಾಗುವ
ಈ ಬದುಕಿನ ಪಯಣದ ಹಾದಿಯಲ್ಲಿ
ಹರುಷ ತುಂಬಿದ ಜೇನಾಗಿರಲಿ
ಸಂಬಂಧಗಳ ಸೇತುವೆಯಾಗಿರಲಿ
ಈ ಸ್ನೇಹ ಸಂಬಂಧದ ಬೆಸುಗೆ
ಪ್ರೀತಿ ಮಮಕಾರದ ಮಡಿಲಗಲಿ

ಹೀಗೆ ಸದಾ ಕಾಲ ಚಿರಕಾಲ
ವರುಷ ವರುಷಗಳು ಉರುಳಿದರು
ನಕ್ಕು ನಲಿಯುತ್ತಾ ಸಂತ್ತೋಷದಿ
ಬದುಕಿ ಬಾಳೆಂದು ಹಾರೈಸುವೆನು
ನಿನ್ನ ಹುಟ್ಟು ಹಬ್ಬಕ್ಕೆ ಶುಭ ಕೋರುವೆನು
ಇಂತಿ ನಿನ್ನ ಜೀವದ ಗೆಳೆಯ

- ರಾಜು ಹಾಸನ

04 Nov 2020, 11:52 pm

ಬಿಟ್ಟಿರಲಾರದಂತೆ

ಮರೆಯ ಬೇಕು ಅಂದುಕೊಂಡಿದ್ದೆ ನಿನ್ನ
ಯಾಕೆ ಪುನಃ ಪುನಃ ಕಾಣುವೆ ನನ್ನ

ಕಂಡು ಕಾಣದಂತೆ ಇದ್ದೆ ನಿನ್ನ
ಮುಗುಳು ನಗೆಯಲ್ಲೆ ಯಾಕೆ ಕಾಡುವೆ ನನ್ನ

ಮೆಚ್ಚು ಮೆಚ್ಚದಂತೆ ಇದ್ದೆ ನಿನ್ನ
ಯಾಕೆ ಕಿರು ನೋಟದಲ್ಲೆ ಕೆಣಕುವೆ ನನ್ನ

ಕೇಳಿಯು ಕೇಳಿದಂತೆ ಇದ್ದೆ ನಿನ್ನ
ಸದ್ದಿಲ್ಲದೆ ಯಾಕೆ ಕಂಪಿಸುವೆ ನನ್ನ

ಕಂಡ ಕ್ಷಣವೆ ನಿನ್ನ
ಅಂದೇ ಮರೆತು ಹೋದೆ ನನ್ನ

ಕ್ಷಣವು ಕೂಡ ಸ್ಮರಿಸದೆ ನಿನ್ನ
ಹೇಗೆ ಬಿಗಿದು ಇಡಲಿ ಈ ಉಸಿರನ್ನ

ಹೊಗಳಿ ತೆಗಳಿಯಾದರು ನಿನ್ನ
ಮುಗಿಸ ಬೇಕು ಮಾತಿನ ದಿನಚರಿಯನ್ನ

ನಿಜವಾಗಿಯೂ ನಾ ಮೆಚ್ಚಿರುವೆ ನಿನ್ನ
ಕೊನೆಯವರೆಗೂ ಬಿಟ್ಟು ಹೋಗ ಬೇಡ ನನ್ನ.

- Shivakumara S

04 Nov 2020, 11:28 pm

ಕಲೆಗಾರ ದೇವರು

ಗೊಂಬೆ ಆಡಿಸುವವನು ನಾಟಕಕಾರ
ಹಾಸ್ಯ ಮಾಡುವವನು ಹಾಸ್ಯಗಾರ
ಚಿತ್ರ ಬಿಡಿಸುವವನು ಕಲೆಗಾರ
ಮೋಸ ಮಾಡುವವನು ಮೋಸಗಾರ

ಮಣ್ಣು ಮರದ ಕಲ್ಲಿನ ಗೊಂಬೆಗೆ
ಮಂತ್ರ ಪಠಿಸಿ ಪೂಜಿಸಿ ಆರಾಧಿಸಿ
ಹಬ್ಬ ಮಾಡಿದರೆ ಒಲಿದು
ಬರುವನು ಬಯಲಿಗೆ ದೇವರು
ಇವನು ಎಂತಹ
ಜಾದೂಗಾರ ನಾಟಕಕಾರ

ಕುಪ್ಪಳಿಸಿ ಹಾರುವ
ಜಿಗಿ ಜಿಗಿದು ಓಡುವ
ಕಪ್ಪೆ ಹಾವು ಇಲಿ ಹೆಗ್ಗಣ
ಕಾಗೆ ಗೂಬೆ ನವಿಲು
ಕತ್ತೆ ಕುದುರೆ ಹಂದಿ ಎಮ್ಮೆ
ನಾಯಿ ದನದ ಮೇಲೆ
ಸವಾರಿ ಮಾಡುವವನು
ಸೋಜಿಗದ ಹಾಸ್ಯಗಾರ

ಒಂದೇ ತಲೆಗೆ
ಹತ್ತಾರು ಕೈಗಳ ಕಟ್ಟಿ
ಝಳ ಝಳ ಝಳಪಿಸುವ
ಖಡ್ಗ ಮಚ್ಚು ಕೊಡ್ಲಿ ಬಾಣ
ಹಾರೆ ಗುದ್ದಲಿ ಹಿಡಿದು
ದುಷ್ಟರ ಸಂಹಾರಿಸುವ
ಇವನ್ನೊಬ್ಬ ಕೊಲೆಗಾರ
ಚಿತ್ರ ವಿಚಿತ್ರವಾದ ಕಲೆಗಾರ

ಹೇಳಿದ್ದು ಕೇಳೋದಿಲ್ಲ
ಕೇಳಿದ್ದು ಕೊಡೋದಿಲ್ಲ
ಬಿದ್ದು ಬೇಡಿದರು ಬರುವುದಿಲ್ಲ
ನಂಬಿ ಕೆಟ್ಟರು ನಂಬಿ ಮೋಸ
ಹೋದರು ನನ್ನ ಮುಗ್ದ ಜನಗಳು
ಮೋಜಿಗಾದ ಮೋಸಗಾರ

- ರಾಜು ಹಾಸನ

04 Nov 2020, 08:58 pm

ಭೀಮ ಗೀತೆ

ಜೈ ಜೈ ಜೈ ಭೀಮ್
ನಾವು ಜೈ ಭೀಮನ ಮಕ್ಕಳು
ಜೈ ಭೀಮನ ಮರಿ ಆನೆಗಳು
ಇಲ್ಲಿ ಯಾರು ಕೆಮ್ಮಗಿಲ್ಲ
ಕೆಣಕಿದರೆ ಬಿಡೋದಿಲ್ಲ
ಸುಮ್ಮನೆ ಕಾಲುಕೆರದು
ನಮ್ಮ ತಂಟ್ಟೆಗೆ ಬಂದರೆ
ಬಿಡೋದಿಲ್ಲ ಉಳಿಸೋದಿಲ್ಲ
ಉರುಳಿಸಿ ಚಂಡಾಡುವೆವು
ಮನುವಾದಿಗಳ ರುಂಡ ಮುಂಡ
ಗಂಚಾಲಿ ಮಾಡಿದರೆ ಸಿಗಿದು
ತೋರಣ ಕಟ್ಟಿ ಬಿಡುವೆವು
ಎಚ್ಚರ ಎಚ್ಚರ ಎಚ್ಚರ
ಕಟ್ಟೆಚ್ಚರವಿರಲಿ ಮನುವಾದಿಗಳಿಗೆ
ನಾವು ಜೈ ಭೀಮನ ಮಕ್ಕಳು
ನಾವು ಜೈ ಭೀಮನ ಸೈನಿಕರು

ಮೂಢನಂಬಿಕೆಯ ಧಿಕ್ಕರಿಸಿ
ಮೋಸ ವಂಚನೆಯ ಖಂಡಿಸಿ
ಅನ್ಯಾಯದ ವಿರುದ್ಧ ಹೋರಾಡಿ
ದಂಡು ದಾಳಿಗೆ ಹೆದರದೆ ಬೆದರದೆ
ಭೀಮ್ ಕೊರೆಂಗಾವ್ ಗೆದ್ದ
ಸಿಡಿಲ ಸಿಂಹದ ಮರಿಗಳ
ಮರಿ ಮೊಮ್ಮಕ್ಕಳು ನಾವು
ಭಯವಿಲ್ಲ ಹೆದರುವುದಿಲ್ಲ
ಕೆಚ್ಚೆದೆಯ ಕಲಿಗಳು
ಗಂಡೆದೆಯ ಗಂಡುಗಲಿಗಳು
ನಾವು ಜೈ ಭೀಮನ ಮಕ್ಕಳು
ನಾವು ಜೈ ಭೀಮನ ಸೈನಿಕರು

ಬಡವರ ಸ್ತ್ರೀ ಶೋಷಿತರ
ರಕ್ಷಣೆ ಏಳಿಗೆಯ ಸಹಿಸದ
ದುರುಳ ನೀಚರನ್ನು ಸದೆಬಡಿದು
ಸ್ನೇಹ ಪ್ರೀತಿ ಸಮಾನತೆ
ಸಹಬಾಳ್ವೆ ನಮ್ಮಉಸಿರೆಂದು
ಜೀವನ ಪೂರ್ತಿ ಬದುಕುವ
ನ್ಯಾಯ ನೀತಿಗೆ ಬೆಲೆ ಕೊಟ್ಟು
ತಲೆ ಬಾಗಿ ನಡೆಯುವ
ಬುದ್ಧನ ವಂಶಸ್ಥರು
ನಾಗ ಕುಲದವರು
ನಾವು ಜೈ ಭೀಮನ ಮಕ್ಕಳು
ನಾವು ಜೈ ಭೀಮನ ಸೈನಿಕರು

ಬುದ್ದನ ಧರ್ಮವೇ ನನ್ನ ಧರ್ಮ
ಸಂವಿಧಾನವೇ ನನ್ನ ಧರ್ಮ ಗ್ರಂಥ
ಜೈ ಭೀಮನೇ ನನ್ನ ಗುರು
ಜೈ ಭೀಮನೇ ನಮ್ಮ ಕುಲದೇವರು
ನಾವು ಜೈ ಭೀಮನ ಮಕ್ಕಳು
ನಾವು ಜೈ ಭೀಮನ ಸೈನಿಕರು

- ರಾಜು ಹಾಸನ

04 Nov 2020, 02:45 pm