ಕೈ ಚೆಲ್ಲಿ ಕುಳಿತೆ ಕತ್ತಲಾಗುವ ಮುನ್ನ
ಬೆಳಕನ್ನೆಕೆ ನೆನೆದು ಕಣ್ಣಿರುಡುವೆ
ಸೂರ್ಯನ ಬೆಳಕೊ ಹೊತ್ತು ಮುಳಗೊತನಕ
ಚಂದಿರನಿಗಾಗಿ ಏಕೆ ಕಾಯುವೆ ಅಮವಾಸ್ಯೆ ದಿನಂದು
ಹುಣ್ಣಿಮೆಯ ರಾತ್ರಿಗೆ ಮರುಳಾಗದಿರೊ ಮತ್ತೊಮ್ಮೆ
ಕ್ಷಣಿಕ ಕಲ್ಪನೆಗಾಗಿ ಕೈ ಚೆಲ್ಲಿ ಕುಳಿತೆ ನಿಲುಕದ ನಕ್ಷತ್ರಕೆ ॥
ಚಿಂತಿಸುವುದೇಕೆ ಮರಳಿಬಾರದ ಕಾಲಕೆ
ತಿರುಗಿ ತಿರುಚಿದರು ಗಡಿಯಾರದ ಮುಳ್ಳು ಮರಳಿತೆ
ಉರುಳಿ ಹೋದ ಸಮಯವಲ್ಲ....
ಚಿಂತಿಸಿ ಫಲವೇನು ಇರುವ ಪ್ರಯತ್ನವ ಕೈ ಚೆಲ್ಲಿ
ಅವಸರವೇಕೆ ಆವೇಷದಲಿ..
ದುಡುಕಿದ ನಿರ್ಧಾರಕೆ ನಿದರ್ಶನ ನಿನ್ನೊಳಗಿನ ತಾಳ್ಮೆ
ಅದನ್ನರಿಯದೆ ಚಿಂತಿಸಿ ಫಲವೇನು .....॥
ಯಾರಿಗಾಗಿ ಕಾಯುತಿರುವೆ ಕಾಯಿಸುವುದೆ ಈ ಸಮಯ
ಕಾಯೊ ಮನಸ್ಸಿದೆ ಕಾಯಿಸೊ ಸಮಯವಿಲ್ಲ
ಯಾರಿಗಾಗಿ ಯಾರು ಇಲ್ಲ ಓಡುತಿಹದು ಕಾಲ
ಕಾಲಘಟ್ಟದಲಿ ಮಿತಿಯಿಲ್ಲ ಕಾಲ ನಿರ್ಣಯವೆ ಅಂತಿಮ
ಕಾಯುತಿರುವೆ ಯಾರಿಗಾಗಿ
ಕಾಯಿಸೊ ಸಮಯ ನಿನ್ನದಲ್ಲ॥
ಅರಳೊ ಹೂವಿಗೆ ಬಾಡಿ ಹೋಗುವ ಸಮಯ ತಿಳಿದಿಲ್ಲ
ಅರಳಿದಾಗ ಹೊಳೆಯುವುದು ತಿಳಿದಿಲ್ಲ
ನಾನಿಲ್ಲಿ ಕ್ಷಣಿಕ ....
ನಾ ಬಾಡಿ ಹೋದರೆ ಬೆಳಗಾಗಿ ಮತ್ತೆ ಹುಟ್ಟಿ ತರುವೆ
ನನ್ನಂತಹ ಸೌಂಧರ್ಯವ ಆದರೆ ಅದು ನಾನಲ್ಲ
ನಾ ಬಿಟ್ಟು ಹೋದ ಜಾಗವಷ್ಟೆ.....॥
ಇನ್ನು ನಾವಿಲ್ಲಿ ಕ್ಷಣಿಕ ಹೊಳೆದಿದ್ದೆಲ್ಲ ಕೇವಲ ಕಾಲ್ಪನಿಕ
ನಮ್ಮ ಕಲ್ಪನೆಗಳು ಮಾತ್ರ ಸುಂದರ .. ಸುಂದರ
ಬಹುದೂರದಾಚೆ ಕಡಲಲಿ ಹೊತ್ತು ಮುಳೊಗೊ ಮುನ್ನ
ಮತ್ತೆ ಯಾಕೆ ಈ ಬೇಸರ ಉದಯಿಸೊ ರವಿ ಕಂಡು....॥
ತಪ್ಪಿ ಹೋದಿತೆ ಕೈಚೆಲ್ಲಿ ಚಿಂತಿಸುವುದೇಕೆ ಯಾರಿಗಾಗಿ
ಅರಳೊ ಮಲ್ಲಿಗೆ ಬಾಡಿ ಹೋದ ಕಾಲಕೆ
ನಾವೆಲ್ಲ ಇಲ್ಲಿ ಕ್ಷಣಿಕ ನಮ್ಮ ಕಲ್ಪನೆಯಲಿ ನಾವು ಕಾಲ್ಪನಿಕ...
ಸೃಷ್ಟಿ ಕರ್ತನೆ ಈ ಜಗದ ನಿರ್ವಾಹಕ
ನಿರ್ಣಯವೆ ಅಂತಿಮ ನಾವಿನ್ನು ಅವನ ಕೈಬೊಂಬೆಗಳು ಮಾತ್ರ ....ಈ ಜೀವನ ॥
****ಧನ್ಯವಾದಗಳೊಂದಿಗೆ****
>ನಾನಿನ್ನು ಚಿಕ್ಕ ಮೀನು<
ಸಾಹಿತ್ಯ ಸಾಹಿತಿಗಳ ಬಲೆಯಲಿ
ನನ್ನದು ಕಿರು ವಾಚನ......
ಅಪರಿಚಿತರಗಿ ಹುಟ್ಟಿ ಬೆಳೆದು
ಚಿರ ಪರಿಚಿತರವಾದ ಸ್ನೇಹ ಸಂಬಂಧ
ಸ್ವಚ್ಚಂದವಾಗಿ ಬಾನಂಗಳದ
ಬಾನಿನಲ್ಲಿ ಹಾರಾಡಿ ತೂರಾಡಿ
ನಕ್ಕು ನಲಿದು ಕುಣಿದು ಕುಪ್ಪಳಿಸಿ
ಹೆಜ್ಜೆಯ ಹಿಂದೆ ಹೆಜ್ಜೆಯನ್ನಿಕ್ಕುತ್ತಾ
ಜೊತೆಗೂಡಿ ನಡೆದಾಡಿದ
ನಮ್ಮಿಬ್ಬರ ಸ್ನೇಹ ಹೀಗೆ ಸಾಗಲಿ
ಚಿರಕಾಲವಿರಲಿ ಸದಾ ಕಾಲವಿರಲಿ
ಉಕ್ಕಿ ಹರಿಯಲಿ ಈ ಸ್ನೇಹದ ಕಡಲು
ನಂಬಿಕೆಯ ಉಸಿರಾಗಿ
ಮಾತು ಮುತ್ತಾಗಿ ಹೊಳೆದು
ಬೆಳಕು ಚೆಲ್ಲಲಿ ನಾವು ಸಾಗುವ
ಈ ಬದುಕಿನ ಪಯಣದ ಹಾದಿಯಲ್ಲಿ
ಹರುಷ ತುಂಬಿದ ಜೇನಾಗಿರಲಿ
ಸಂಬಂಧಗಳ ಸೇತುವೆಯಾಗಿರಲಿ
ಈ ಸ್ನೇಹ ಸಂಬಂಧದ ಬೆಸುಗೆ
ಪ್ರೀತಿ ಮಮಕಾರದ ಮಡಿಲಗಲಿ
ಹೀಗೆ ಸದಾ ಕಾಲ ಚಿರಕಾಲ
ವರುಷ ವರುಷಗಳು ಉರುಳಿದರು
ನಕ್ಕು ನಲಿಯುತ್ತಾ ಸಂತ್ತೋಷದಿ
ಬದುಕಿ ಬಾಳೆಂದು ಹಾರೈಸುವೆನು
ನಿನ್ನ ಹುಟ್ಟು ಹಬ್ಬಕ್ಕೆ ಶುಭ ಕೋರುವೆನು
ಇಂತಿ ನಿನ್ನ ಜೀವದ ಗೆಳೆಯ
ಜೈ ಜೈ ಜೈ ಭೀಮ್
ನಾವು ಜೈ ಭೀಮನ ಮಕ್ಕಳು
ಜೈ ಭೀಮನ ಮರಿ ಆನೆಗಳು
ಇಲ್ಲಿ ಯಾರು ಕೆಮ್ಮಗಿಲ್ಲ
ಕೆಣಕಿದರೆ ಬಿಡೋದಿಲ್ಲ
ಸುಮ್ಮನೆ ಕಾಲುಕೆರದು
ನಮ್ಮ ತಂಟ್ಟೆಗೆ ಬಂದರೆ
ಬಿಡೋದಿಲ್ಲ ಉಳಿಸೋದಿಲ್ಲ
ಉರುಳಿಸಿ ಚಂಡಾಡುವೆವು
ಮನುವಾದಿಗಳ ರುಂಡ ಮುಂಡ
ಗಂಚಾಲಿ ಮಾಡಿದರೆ ಸಿಗಿದು
ತೋರಣ ಕಟ್ಟಿ ಬಿಡುವೆವು
ಎಚ್ಚರ ಎಚ್ಚರ ಎಚ್ಚರ
ಕಟ್ಟೆಚ್ಚರವಿರಲಿ ಮನುವಾದಿಗಳಿಗೆ
ನಾವು ಜೈ ಭೀಮನ ಮಕ್ಕಳು
ನಾವು ಜೈ ಭೀಮನ ಸೈನಿಕರು
ಮೂಢನಂಬಿಕೆಯ ಧಿಕ್ಕರಿಸಿ
ಮೋಸ ವಂಚನೆಯ ಖಂಡಿಸಿ
ಅನ್ಯಾಯದ ವಿರುದ್ಧ ಹೋರಾಡಿ
ದಂಡು ದಾಳಿಗೆ ಹೆದರದೆ ಬೆದರದೆ
ಭೀಮ್ ಕೊರೆಂಗಾವ್ ಗೆದ್ದ
ಸಿಡಿಲ ಸಿಂಹದ ಮರಿಗಳ
ಮರಿ ಮೊಮ್ಮಕ್ಕಳು ನಾವು
ಭಯವಿಲ್ಲ ಹೆದರುವುದಿಲ್ಲ
ಕೆಚ್ಚೆದೆಯ ಕಲಿಗಳು
ಗಂಡೆದೆಯ ಗಂಡುಗಲಿಗಳು
ನಾವು ಜೈ ಭೀಮನ ಮಕ್ಕಳು
ನಾವು ಜೈ ಭೀಮನ ಸೈನಿಕರು
ಬಡವರ ಸ್ತ್ರೀ ಶೋಷಿತರ
ರಕ್ಷಣೆ ಏಳಿಗೆಯ ಸಹಿಸದ
ದುರುಳ ನೀಚರನ್ನು ಸದೆಬಡಿದು
ಸ್ನೇಹ ಪ್ರೀತಿ ಸಮಾನತೆ
ಸಹಬಾಳ್ವೆ ನಮ್ಮಉಸಿರೆಂದು
ಜೀವನ ಪೂರ್ತಿ ಬದುಕುವ
ನ್ಯಾಯ ನೀತಿಗೆ ಬೆಲೆ ಕೊಟ್ಟು
ತಲೆ ಬಾಗಿ ನಡೆಯುವ
ಬುದ್ಧನ ವಂಶಸ್ಥರು
ನಾಗ ಕುಲದವರು
ನಾವು ಜೈ ಭೀಮನ ಮಕ್ಕಳು
ನಾವು ಜೈ ಭೀಮನ ಸೈನಿಕರು
ಬುದ್ದನ ಧರ್ಮವೇ ನನ್ನ ಧರ್ಮ
ಸಂವಿಧಾನವೇ ನನ್ನ ಧರ್ಮ ಗ್ರಂಥ
ಜೈ ಭೀಮನೇ ನನ್ನ ಗುರು
ಜೈ ಭೀಮನೇ ನಮ್ಮ ಕುಲದೇವರು
ನಾವು ಜೈ ಭೀಮನ ಮಕ್ಕಳು
ನಾವು ಜೈ ಭೀಮನ ಸೈನಿಕರು