Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಾ ಚಿರ ಋಣಿ

ನಾನು ನಂಬಿದ
ಜನರು ಬಾರದಿದ್ದರೂ
ನಾನು ಪೂಜಿಸುವ
ದೇವರು ಒಲಿಯದಿದ್ದರು
ನನ್ನ ಸುತ್ತ ಮುತ್ತ
ಇರುವ ಬಂಧು ಬಳಗ
ಸಂಬಂಧ ಬಳ್ಳಿಗಳು
ಬಂದು ಆಗದಿದ್ದರೂ
ಚಿಂತೆಯಿಲ್ಲ ನನಗೆ
ನಾ ಸೋತು ಗೆದ್ದರು
ನಾ ಸತ್ತು ಕೆಟ್ಟರು
ಸತ್ತು ಸಮಾಧಿಯಾದರು
ನನ್ನ ಕೋನೆ ತನಕ
ಎಡೆಬಿಡದೆ ಕೈ ಬಿಡದೆ
ನನ್ನೊಂದಿಗೆ
ಬದುಕಿ ಬಾಳುವ
ನನ್ನ ತಂದೆ
ತಾಯಿಗಳಿದ್ದರೆ ಸಾಕೆನಗೆ
ಯಾವ ಪ್ರಪಂಚ
ಸಿರಿ ಸಂಪತ್ತು ಬೇಡೆನಗೆ
ನನ್ನ ತಂದೆ ತಾಯಿಗಳೆ
ನನಗೆ ದೊಡ್ಡ ಪ್ರಪಂಚ
ಅವರೆ ನನಗೆ
ಮುಗಿಯಾದ ಸಿರಿ ಸಂಪತ್ತು

ನನ್ನ ಬದುಕಿನ
ಪಯಣದ ದಡ ಸೇರಿಸಿದ
ನನ್ನ ಬದುಕಿನ
ನಾವಿಕರು ನಾಯಕರು
ನಾ ಪೂಜಿಸಿ ಆರಾಧಿಸುವ
ನನ್ನ ಮನದ ದೇವರು
ನನ್ನ ತಂದೆ ತಾಯಿಗೆ
ನಾ ಚಿರ ಕಾಲ ಚಿರ ಋಣಿ
*******ರಾಜು ಹಾಸನ********

- ರಾಜು ಹಾಸನ

01 Dec 2020, 11:27 pm

ಪ್ರೀತಿ ಪ್ರೀತಿ

ಪ್ರೀತಿ ಪ್ರೀತಿ
ಪ್ರೀತಿ ಪ್ರೇಮಕ್ಕೆ
ಕಣ್ಣಿಲ್ಲ ಸಾವಿಲ್ಲ
ಆದರೂ ಇರುವುದು
ವ್ಯಾಮೋಹ
ಏಕೋ ಏನೋ
ಗೊತ್ತಿಲ್ಲ
ಸುಳ್ಳೋ ಸತ್ಯವೊ
ತಿಳಿದಿಲ್ಲ


ಕೈ ಕಾಲು ಕಣ್ಣು
ಮಾತು ಬಾರದ
ಮೂಕರೆಂದರೆ
ಉಕ್ಕಿ ಬರುವುದು
ಎಲ್ಲಿಲ್ಲದ
ಕರುಣೆ ಕನಿಕರ
ಅಂದ ಚಂದವರ
ಕಂಡರೆ ಗೊತ್ತು ಗೊತ್ತಿಲ್ಲದೆ
ಹುಟ್ಟುವುದಯ್ಯ
ಪ್ರೀತಿಯ ಮಹಾ ಪುರ
ಇದು ಯಾಂತ
ಹುಚ್ಚು ಪ್ರೀತಿಯಯ್ಯ

ಪ್ರೀತಿಗೆ ಬೇಕು
ಒಳ್ಳೆ ಮನಸು
ಆಸೆಗೆ ಬೇಕು
ರಾಶಿ ಕಾಸು
‌‌

- ರಾಜು ಹಾಸನ

01 Dec 2020, 04:33 pm

ಶ್ರೇಷ್ಠ

ವ್ಯಕ್ತಿ ವ್ಯಕ್ತಿತ್ವದಿಂದ
ಶ್ರೇಷ್ಠನೇ ಹೊರೆತು
ಉಡುಗೆ ತೊಡುಗೆ
ಹಣ ಅಂತಸ್ತು
ಮನೆ ಮಠ
ಗುಡಿ ಗೋಪುರ
ಜಾತಿ ಧರ್ಮದ
ಹುಟ್ಟಿನಿಂದ ಅಲ್ಲ

ತಿಳಿದು ತಿಳಿದು
ಕಂಡು ಕಂಡು
ಕಣ್ಣ್ ಬೆಳಕಲ್ಲೇ
ಜಾತಿ ಧರ್ಮದ
ಕೊಚ್ಚೆ ಗುಂಡಿಗೆ
ಬಿದ್ದು ಬಿದ್ದು
ಹೊರಳಾಡುವರು
ಈ ಮೂರ್ಖ ಜನರು

ಸಂವಿಧಾನ
ಕಾಯುವುದು
ನಿನ್ನ ಬದುಕು
ಜಾತಿ ಧರ್ಮ
ಕೊಲ್ಲುವುದು
ನಿನ್ನ ಬಾಳು

ತಲೆ ತಗ್ಗಿಸಿ
ನೆಡೆಯುವಂತೆ
ಮಾಡುವುದು
ನಿನ್ನ ಜಾತಿ
ಧರ್ಮದ ಮಾದ
ತಲೆ ಎತ್ತಿ ನಡೆಯುವಂತೆ
ಮಾಡುವುದು
ಸಂವಿಧಾನದ ತಾಕತ್ತು

- ರಾಜು ಹಾಸನ

01 Dec 2020, 11:32 am

ಯಾವ ಸ್ಫೂರ್ತಿಯ ಚಿಲುಮೆ

ಯಾವ ಸ್ಫೂರ್ತಿಯ ಚಿಲುಮೆ
ಅವರ ಎದೆಯಾಳದಲ್ಲಿ
ಜಿನುಗುತಿದೆ ಯೋ ಯಾರು ಬಲ್ಲರು//
ಪ್ರೀತಿ ಮಮತೆ ವಾತ್ಸಲ್ಯ
ಅಂತಃಕರಣದ ಭಾವಸ್ಪರ್ಶ ನೀಡಿ
ತನು ಮನದಿ ಸೇವೆಯಗೈದು
ಪಾಲಿಸಿ ಪೋಷಿಸಿ ಏನನ್ನೂ ನಿರೀಕ್ಷಿಸದೆ
ತನ್ನವರೆಂದು ಬಂಧು ಬಾಂಧವರೆಂದು
ದಣಿವರಿಯದೆ ದುಡಿಯುತಿಹರು ವಯೋವೃದ್ಧರು//
ಕಾಯಕದಲ್ಲಿ ತಲ್ಲೀನತೆ
ಸೇವೆಯಲ್ಲಿ ವಿನಮ್ರತೆ
ಕೊಡುಗೈಯಲ್ಲಿ ಉದಾಹರಣೆ
ನಾನೆಂಬ ಅಹಂಕಾರ ಬಿಟ್ಟು
ನಮ್ಮವರೆಲ್ಲರಿವರೂ ಎಂಬ
ಭಾವದಿ ಬದುಕುತಿಹರು
ಸಂತೃಪ್ತಿಯ ಮೊಗ ಹೊತ್ತು ಈ ವಯೋವೃದ್ಧರು//

ವೈಭವದ ಬದುಕ ಬಿಟ್ಟು
ವಾಸ್ತವದ ನೆಲೆಗಟ್ಟಿನ ಮೇಲೆ
ಭೂತದ ಅನುಭವದ ಬಾರ
ವರ್ತಮಾನದ ನಿರ್ಲಕ್ಷ ಗಳ ನಡುವೆ
ಭವಿಷ್ಯದಾತಂಕಗಳ ದಿನಗಳಲ್ಲಿ
ಬವಣೆ ಬೇಗುದಿಗಳ ನಡುವೆ
ಮುಸ್ಸಂಜೆಯ ದಿನಗಳಲ್ಲಿ
ನಗು ಮೊಗವ ಹೊತ್ತು
ಸಾರ್ಥಕ್ಯದ ಬದುಕು
ಕಳೆಯುತಿಹರುಹ ವಯೋವೃದ್ಧರು//

- MAHESH.हिन्दीशिक्षक

01 Dec 2020, 09:07 am

ಬದುಕಿನ ಬಂಡಿ

ಜೀವನವೇ
ಜಿಗುಪ್ಸೆಯಾದರು
ಬದುಕೆ ಬೇಡ
ಎನಿಸಿದರೂ
ಏನೇ ಆದರೂ
ಹೋದರು
ಎಷ್ಟೇ ಇದ್ದರೂ
ಇಲ್ಲದಿದ್ದರೂ
ಯಾರೇ ಬಂದು
ಹೋದರು
ನಿಂತು ನಿಲ್ಲದೆ
ಕುಂತು ಕೂರದೆ
ಓಡುವುದಯ್ಯ
ಬದುಕಿನ ಬಂಡಿ

ಜೀವನ
ಹುಟ್ಟಿನಿಂದ
ಶುರುವಾಗಿ
ನೋವು ನಲಿವಿನ
ಹಾವು ಏಣಿ
ಹತ್ತಿ ಇಳಿದು
ಬಿಟ್ಟು ಬಿಡದ
ನೂರಾರು ಸಾವಿರಾರು
ಸಂಬಂಧಗಳಿದ್ದರು
ಮರೆತು ಮಲಗಬೇಕು
ಮಸಣದ
ಮಂಟಪ ಕಟ್ಟಿಕೊಂಡು
ಒಂದಲ್ಲ
ಒಂದು ದಿವಸ
ಸೇರಬೇಕು
ಮಸಣದ ಗುಂಡಿ
ಇಷ್ಟೇ ನಮ್ಮ ನಿಮ್ಮ
ಜೀವನದ ಆಟ ಪಾಠ

- ರಾಜು ಹಾಸನ

30 Nov 2020, 04:37 pm

ಪ್ರೀತಿ ದೂರವಾದಗ

ಪ್ರೀತಿ ಮಾಡಲು ಕನಸೇ ಕಾವಲು.
ಪ್ರೀತಿ ಉಳಿಯಲು ಮನಸೇ ಮೀಸಲು.
ನನ್ನ ಹೃದಯದರಮನೆಗೆ ಒಡತಿಯು ನೀನೆ.
ಸದಾ ನಿನ್ನ ಪ್ರೀತಿ ಬಯಸುವ ಗೆಳೆಯನು ನಾನೆ.
ಕ್ಷಣಕಾಲ ತೆರೆದಿಡುವೆ ನನ್ನ ಎದೆಯನ್ನ.
ನೊಡು ಬಾ ನನ್ನೊಳಗೆ ನಿನ್ನ.
ಅಲ್ಲಲ್ಲಿ ಬಿದ್ದಿರುವುದು ನೀ ಬಿಟ್ಟ ಪ್ರೀತಿಯ ಹೂ ಬಾಣ.
ಕಿತ್ತೊಗೆದು ಅಪ್ಪಿಕೋ ನನ್ನ.
ನಾ ಕಣ್ಮುಚುವ ಮುನ್ನ.

- jayanth

30 Nov 2020, 09:48 am

ಕ್ರಾಂತಿ

ಕ್ರಾಂತಿ ಮಾಡಲೆ ಬೇಕು ನಾವೆಲ್ಲ
ಮುರಿದ ಮನಸುಗಳಲ್ಲಿ ಒಮ್ಮೆ
ಒಡೆದ ಹೃದಯಗಳಲ್ಲಿ ಇಂದೆ
ಧಣಿದ ದೆಹಗಳಲ್ಲಿ ಈಗಲೆಯೆ

ಒಂಟಿ ಕೈಯ್ಯನು ಕಿತ್ತೊಗೆದು
ಎಂಟು ಕೈಗಳ ಒಟ್ಟಿಗೆ ಸೇರಿಸಿ
ಗರುಡ ಗಂಭವ ಕೈಲಿ ಹಿಡಿದು
ಕ್ರಾಂತಿ ಮಾಡಲೇಬೇಕು ನಾವು

ಅಜ್ಜನ ಆಲದ ಮರದಡಿಯಲ್ಲಿ
ಏಲಕ್ಕಿಯ ಗಿಡವನ್ನಾದರು ನೆಟ್ಟು
ಹೋಗು ಬರುವವರೆಲ್ಲ ನೋಡ್ವಂತೆ
ಕ್ರಾಂತಿಯ ಮಾಡಲೇಬೇಕು ನಾವೆಲ್ಲ

ಹೆಬ್ಬೆರಳಿನ ತುದಿಗಳಿಂದಲೆ ನಾವು
ಹೆಬ್ಬಾವು ಗಳನ್ನೆಲ್ಲ ಸೆದೇಬಡಿದು
ಹುಬ್ಬೇರಿಸಿ ನೋಡುವಂತೆ ಮಾಡ್ವ
ಕ್ರಾಂತಿಯ ಮಾಡಲೆ ಬೇಕು ನಾವೆಲ್ಲ

ಗಗಣದಂಚಿನ ಎತ್ತರವನ್ನು ಮೀರಿದ
ಬಗೆ ಬಗೆಯ ಆಸೆಯ ತೋರಿದಂತ
ತೆನೆ ಬಿಡುವ ಫಸಲಿನಂತೆ ನಾವುಗಳು
ಕ್ರಾಂತಿಯ ಮಾಡಲೆ ಬೇಕು ಪುಟಿದೆದ್ದು

ಕಲ್ಮೇಶ ಬಡಿಗೇರ
9743539657
......ಬಾದಾಮಿ.....

- Kalmesh Badiger

29 Nov 2020, 09:33 pm

ಓರೆ ನೋಟ...

ಆ ನಿನ್ನ ಓರೆ ನೋಟ,
ನನ್ನನ್ನೆ ಸೆಳೆದಂತಿದೆ,
ಕಣ್ಣಲ್ಲೇ ಸನ್ನೆಮಾಡಿ
ಕರೆದಂತಿದೆ....!

ಹೇ ಚೆಲುವೆ...
ಆ ನಿನ್ನ ನವಿಲು ಗಣ್ಣಿಗೆ
ನನ್ನನ್ನೆ ನಾ ಮರೆತಿರುವೆ,
ನಿನ್ನನ್ನೆ ಅರಸುತ್ತ ಹೊರಟಿರುವೆ,

ತಿಳಿದಿಲ್ಲ ನನಗೆ....
ನಿನ್ನದೇ ನೆನಪು ಯಾಕಾಗಿದೆ,
ನೀ ಸಿಗುವೆ ಎಂಬ ನೆಪ ಮಾತ್ರ ಸಾಕಾಗಿದೆ...!!

- Megha

29 Nov 2020, 12:18 pm

ಎಳ್ಳ ಅಮಾವಾಸ್ಯೆಯ ಚರಗ

ಬುತ್ತಿ ಕಟಗೊಂಡು ಹೊಲದಕಡೆ
ಹೊಂಟಿವಿ ಎಲ್ಲ ಚರಗವ ಚಾಲ್ಲಾಕ
ಹೂರಣದ ಕಡಬು ಹೊಳಿಗಿ ತುಪ್ಪ
ಹಾಕ್ಕೊಂಡು ಊಟವ ಜಡಿಲಾಕ

ಅವ್ವನು ಮಾಡಿದ ಎಳ್ಳಿನ ಹೋಳಿಗೆ
ಹೊಂಚಾಕಿ ತಿನ್ನಾಕಂತ ಕಾಯ್ಕೊಂತಾ
ದೇವರ ಪೂಜೆ ಬೇಗ ಮುಗಿಬೇಕಂತ
ಪ್ರಾರ್ಥನೆಯನ್ನು ಮಾಡುತ ಬೇಡುತ್ತಾ

ಜೋಳ ಕಡಲೆ ಕುಸುಬಿ ಅಗಸಿಯ
ಪೈರಿಗಳಿಗೆಲ್ಲ ನೀರನ್ನು ಸಿಂಪಡಿಸುತ್ತಾ
ಹೂರಣಗಡಬು ಹೋಳಿಗೆ ಮುರಿದು
ತುರೂತಾ ಚರಗವ ಚಲ್ಲುತ ಕೂಗಾಕ

ಹುಲ್ಲುಲ್ಲುಗೋ ಸಲಾಂಬರ್ಗೊಯ್
ಅನ್ನುತಾ ಹೊಲವೆಲ್ಲ ವನ್ನು ಸುತ್ತಾಕಾ
ತಂದಿರೋ ಬುತ್ತಿಯ ಕಾಲಿಯ ಮಾಡಿ
ಆಟವಾ ಆಡುತಾ ಒಡುತಾ ಕುಣಿಯಾಕ

ಬಣ್ಣದ ಬೊರಂಗಿ ಹಿಡಿದು ದಾರಕಟ್ಟಾಕ
ದುಡ್ಡು ಕೊಡ್ತೀನಿ ಲಾಗಾಹೊಡಿ ಅನ್ಲಾಕ್
ಕತ್ತಲಾಗುವ ಮುಂಚೆ ದಾರಿಯ ಹಿಡಿದು
ಮನೆಯನು ಸೇರಿ ಬೆಚ್ಚಗೆ ಮಲಗೋಕ

ಕಲ್ಮೇಶ ಬಡಿಗೇರ
9743539657
......ಬಾದಾಮಿ......

- Kalmesh Badiger

29 Nov 2020, 11:23 am

ಶಾಶ್ವತ

ಹಗಲು ರಾತ್ರಿ ಇಲ್ಲದ
ದಿನಗಳು ಇಲ್ಲ
ಮಾನವರೆ ಇಲ್ಲದ
ನಾಡು ನುಡಿ ಇಲ್ಲ
ಸಂಬಂಧಗಳು ಇಲ್ಲದ
ಸಂಸಾರ ಇಲ್ಲ
ಕನಸುಗಳು ಇಲ್ಲದ
ಮನಸುಗಳು ಇಲ್ಲ
ಪ್ರೀತಿ ಪ್ರೇಮ ಇಲ್ಲದ
ಹೃದಯಗಳು ಇಲ್ಲ
ತಂದೆ ತಾಯಿ ಇಲ್ಲದ
ಪ್ರಪಂಚವೇ ಇಲ್ಲ

- ರಾಜು ಹಾಸನ

27 Nov 2020, 12:31 am