ಮತ್ತೆ ಮರುಕಳಿಸಲಾಗದ ಆ ದಿನಗಳು,
ಯಾವುದೇ ಕಲ್ಮಶವೇ ಗೊತ್ತಿಲ್ಲದ ಆ ದಿನಗಳು,
ಸ್ವಲ್ಪ ಮುನಿಸು, ಸ್ವಲ್ಪ ಕೋಪ,
ಜಾಸ್ತಿ ಸಂತೋಷ ವಾಗಿದ್ದ ಆ ಕ್ಷಣಗಳು,
ನೆನಪುಗಳನ್ನಷ್ಟೇ ಉಳಿಸಿ ಮರೆಮಾಚಿ
ಹೋಗಿವೆ ಆ ಬಾಲ್ಯದ ದಿನಗಳು...!
ಸಮಾಜದ ಉಡುಗೊರೆಯಾಗಿ ಜನಿಸಿದ ನೀವು
ಸಾವಿರ ಕಷ್ಟಗಳ ನಡುವೆ ದೃತಿಗೆಡದೆ ಅರಳಿ ಕಂಪಿಸುತ್ತಿರುವ ಚೈತನ್ಯದ ಹೂವು
ನೀವು ನೋವ್ ಇರದಂತೆ ನಟಿಸಿ
ತನ್ನವರ ದುಃಖದಲ್ಲಿ ನಗುವ ಬೇಡುವ ಸ್ವಚ್ಛಂದದ ಮನಸ್ಸು ನಿಮ್ಮದು ಇರುವಾಗ ಬಯಸಿದಂತೆ ಇರುವುದೇ ಜಗವು ನಿಮ್ಮಂತ ಜೀವವ
ನಿಮ್ಮ ಕರ್ತವ್ಯದ ಹಾದಿಯಲ್ಲಿ ಮುಳ್ಳಿನ ಪರದೆಯ ಸರಿಸಿ
ನೈಜತೆಯ ಬೆಳಕಿನಲ್ಲಿ ಭವ್ಯ ಭಾರತದ ಹೆಸರ ಬೆಳಗಿಸುವ ನಿಮ್ಮ ಸಂಕಲ್ಪವ ಹೇಗೆ ಬಣ್ಣಿಸಲಿ ನಾ ಶ್ರಮಭರಿತ ನಿಮ್ಮ ಜೀವನವ
ನಿಮ್ಮ ಹೃದಯದ ಕನಸು ಸಂತಸದಿ ಪುಟಿದೆದ್ದು ಪರಿಶ್ರಮದ ಪತದೊಳಗೆ ಸಹಕರಿಸಿ ಸಂಭ್ರಮಿಸಿ ಸಂಧಿಸಲಿ ನಿಮ್ಮ ಸಾಧನೆಯ ಯಶಸ್ವಿ ಯೊಳಗೆ
ನಿಮ್ಮ ಸರಳತೆಯ ಬದುಕಿನೊಳಗೆ ಮೂಡಬೇಕು ಸದಾ ಮುಗುಳ್ನಗೆ
ನಿಮ್ಮನ್ನು ಸಂತೈಸುವ ಅವಕಾಶ ಬೇಕು ನನಗೆ ಮರೆಯಲ್ಲ ನಾನೆಂದು ಆ ದಿನದ ಗಳಿಗೆ
ಇಂದಿನ ನಿಮ್ಮ ಜನ್ಮದಿನವೂ ಸಾಕ್ಷಿಯಾಗಲಿ ಸರ್ವರು ಹಾರೈಸುವ ಪ್ರಶಂಸೆಯ ಹಿರಿಮೆಗೆ
ಹರ್ಷದಿ ಶುಭ ಕೋರುವ ನಾನು ಆಗ ನನ್ನ ಪ್ರೀತಿಯ ಮನಸ್ಸಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳೊಂದಿಗೆ
ಜಾತಿ ಧರ್ಮ
ಯಾರಿಗೆ ಬೇಕು
ಯಾತಕ್ಕೆ ಬೇಕು
ಮನುಷ್ಯ ಮನುಷ್ಯರ
ಕೊಂದು ತಿನ್ನುವ
ರಕ್ತ ಹೀರುವ
ಬದುಕಲು ಬಿಡದ
ಜಾತಿ ಧರ್ಮ
ಯಾರಿಗೆ ಬೇಕು
ಯಾತಕ್ಕೆ ಬೇಕು
ಮನುವಾದಿಗಳ
ಷಡ್ಯಂತ್ರದ ಉದ್ದರದ
ಕಳ್ಳ ಖಜಾನೆಯ ಕೋಟೆ
ಸುಖದ ಸುಪ್ಪತ್ತಿಗೆಯ
ಜಾತಿ ಧರ್ಮದ
ಮತ ಕೋಟೆ
ಯಾರಿಗು ಬೇಡ
ಯಾತಕ್ಕೂ ಬೇಡ
ಯಾವ ಜಾತಿ
ಧರ್ಮದ ಮತ ಕೋಟೆ
ಉಳಿದು ಬೆಳಯಲಿ
ಜನರ ಪ್ರೀತಿಯ
ಮಾನವ ಧರ್ಮದ
ಮಹಾ ಕೋಟೆ
ಜಾತಿ ಧರ್ಮ
ತಲೆ ಎತ್ತಿದಾಗ
ಸತ್ತು ಹೋಗುವುದು
ಮಾನವ ಕುಲ ಕುಲ
ಬೀಳುವುದು
ಸತ್ತ ಹೆಣಗಳ ರಾಶಿ
ಹರಿಯುವುದು
ರಕ್ತ ಕಣ್ಣೀರಿನ ಕೋಡಿ
ಸತ್ತು ಕೆಟ್ಟರೆ ಯಾವ
ಜಾತಿ ಧರ್ಮದವು
ಬರುವುದಿಲ್ಲ
ಹೋರುವುದಿಲ್ಲ
ಹೋಗುವುದಿಲ್ಲ
ಸತ್ತವರ ಹಿಂದೆ ಹಿಂದೆ
ಆದರು ಕಟ್ಟುವರು
ನೂರೆಂಟು ಜಾತಿ ಧರ್ಮವ
ಸತ್ತು ಸಮಾಧಿ
ಆಗುವ ತನಕ
ಸುಟ್ಟು ಬೂದಿ
ಆಗುವ ತನಕ
ಜನರ ಜನರ
ನಡುವೆ ಜಾತಿ ಧರ್ಮದ
ವಿಷ ಬೀಜ ಬಿತ್ತಿ
ಜಾತಿ ಧರ್ಮದ ಅಡ್ಡಗೋಡೆ
ಕಟ್ಟಿರುವರು ದುಷ್ಟ
ಮನುವಾದಿ ಕುನ್ನಿ ಮರಿಗಳು
ಕೆಡವಿ ಉರುಳಿಸಬೇಕು
ಮನುವಾದಿಗಳ ಜಾತಿ
ಧರ್ಮದ ಅಡ್ಡಗೋಡೆ
ಅಧರ್ಮದ ಮತ ಕೋಟೆ
ಬದುಕಿ ಬಾಳಬೇಕು
ಮನುವಾದಿಗಳ
ಎಡೆಮುರಿ ಕಟ್ಟಿ
ಹೊಡೆದು ಕಟ್ಟಬೇಕು
ಮಾನವ ಧರ್ಮದ
ಮಹಾ ಕೋಟೆ
ಓ ಹೆಣ್ಣೆ ಓ ಹೆಣ್ಣೆ
ತಿಳಿದು ಬಾಳು
ಓ ನನ್ನ ಹೆಣ್ಣೆ
ಹೆಣ್ಣಿಗೆ ಶೀಲವೇ
ಬಂಗಾರ
ವಜ್ರದ ಕವಚ
ನೀ ಮೈ ಮರೆತು
ಹೋಗಬೇಡ
ಕಂಡ ಕಂಡವರ
ಜೊತೆಗೂಡಿ
ಸಂಬಂಧ
ಭಾವನೆಗಳ ಮರೆತು
ಆಚಾರ ವಿಚಾರ
ದಿಕ್ಕರಿಸಿ ಚುಡಾಯಿಸಿ
ಅಪಚಾರ ಮಾಡುವ
ನೀಚಾರು ಇರುವರು
ಎಚ್ಚರ ಎಚ್ಚರ
ಓ ಹೆಣ್ಣೆ ಓ ಹೆಣ್ಣೆ
ತಿಳಿದು ಬಾಳು
ಓ ನನ್ನ ಹೆಣ್ಣೆ
*****ರಾಜು ಹಾಸನ*****
ಅವಮಾನಿಸಿ
ಅಪಮಾನಿಸಿ
ಇಯಳಿಸಿದರು
ಅಂಜದೆ ಅಳುಕದೆ
ಕುಗ್ಗದೆ ಜಗ್ಗದೆ
ಧೈರ್ಯದಿಂದ ನಡೆ
ಹೆದರಿ ಬೆದರಿ
ಬಿದ್ದು ಓಡುವರು
ನಿನ್ನ ಅಣಕಿಸುವ
ಮನುವಾದಿಗಳು
ತಲೆ ತಗ್ಗಿಸಿ ಬಗ್ಗಿಸಿ
ನುಡಿದು ನೆಡೆದರೆ
ಕತ್ತರಿಸುವರು
ನಿನ್ನ ತಲೆ ತಲೆ
ಎಚ್ಚರ ಎಚ್ಚರವಿರಲಿ
ನನ್ನ ಮುಗ್ಧ ಜನಗಳೆ
ದೇವರಂತೆ ದೇವರು
ಇರುವುದಂತೆ
ಬರುವುದಂತೆ
ಕಲ್ಲು ಕಂಬದ
ಮೂಕ ದೇವರು
ಕರೆದರು ಬರುವುದಿಲ್ಲ
ಮಾತು ಬಾರದ
ಮೂಕ ದೇವರು
ಹಬ್ಬ ಹರಿದಿನವೆಂದರೆ
ಕುಣಿದು ಕುಪ್ಪಳಿಸಿ
ಓಡಿ ಓಡಿ ಬರುವುದು
ನಮ್ಮೂರ ದೇವರು
ಯಾರು ನಿನ್ನವರಲ್ಲ
ನಿನಗಾಗಿ ನೀನೇ ಹೊರೆತು
ನಿನಗಾಗಿ ಯಾರು ಅಲ್ಲ
ಕಂಡವರ ಮಾತಿಗೆ
ಮರುಳಾಗಿ ಮೈ
ಮನ ಮರೆಯಬೇಡ
ತೋಳ ಬಲ ಜನ ಬಲ
ಇದ್ದರೆ ಹಿಡಿಯುವರು
ನಿನ್ನ ಕೈ ಕಾಲು
ಇಲ್ಲದಿದ್ದರೆ ಜಾಡಿಸಿ
ಒದೆಯುವರು
ನಿನ್ನ ಸ್ವಾಭಿಮಾನಕ್ಕೆ
ನಾನು ನನ್ನದೇನ್ನುವ
ಜನ ಜಾತ್ರೆಯಲ್ಲಿ ನಿಂತು
ನನ್ನವರು ನನ್ನವರೆಂದು
ಕೂಗಿ ಗೋಗರೆಯುವ
ಹುಚ್ಚು ಯಾತಕೆ
ಓ ನನ್ನ ಮನಸೇ
ಕೇಳುವವನು
ಹೇಳುವವನು
ಒಬ್ಬನೇ ಆದರೂ
ಕಂಡ ಕಂಡಲ್ಲಿ
ಹೊಗಳಿ ತೆಗಳಿ
ಮಾತನಾಡಿ ಮರುಳು
ಮಾಡುವವರು
ಹಲವು ಜನ
ಹತ್ತಾರು ಜನ
ಹತ್ತಾರು ತರ
ನೂರಾರು ಜನ
ನೂರಾರು ತರ
ಮಾತನಾಡುವರೇ
ಹೋರೆತು
ಯಾರು ಕೂಡ
ಒಂದೇ ರೀತಿ
ಒಂದೇ ಸಮ
ಯೋಚಿಸಿ
ಆಲೋಚಸಿ
ಮಾತನಾಡುವ
ಜನರಿಲ್ಲ ಈ
ಪ್ರಪಂಚದಲ್ಲಿ
ಸ್ವಾರ್ಥವೇ
ತುಂಬಿರುವ
ಸ್ವಾರ್ಥಿಗಳ
ಕೆಟ್ಟ ಪ್ರಪಂಚವಿದು
ಯಾರೇ ಏನೇ ಎಷ್ಟೇ
ಮಾತನಾಡಿದರೂ
ನಿನ್ನ ನಡೆ ನುಡಿ
ಬದಲಾಯಿಸಿಕೊಳ್ಳದೆ
ಮುನ್ನುಗ್ಗಿ ನಡೆ
ನಿನ್ನ ದಾರಿಯ ಕಡೆ
ನೀ ಎದೆಗುಂದದೆ
ಬದುಕಿ ಬಾಳು
ಮುಗಿಲೆತ್ತರಕ್ಕೆ
ನೀ ಮಾನವನಾಗಿ
ನಿಸ್ವಾರ್ಥಿಯಾಗಿ
ಓ ಮನುಜ