ನಗುವ ಮೊಗವು ಒಂದಾದರೆ ಅದರೊಳಗಿನ ಅರ್ಥವೇ ಇನೊಂದಾಗಿರುವುದು. ಮೌನಕ್ಕೆ ಸಾವಿರಾರು ಅರ್ಥಗಳಿಹುವುದು ಆದ್ರೂ ಮೌನದ ಮಾತನ್ನು ಅರಿತವರಿಗಷ್ಟೇ ಅದರ ಅರ್ಥ ತಿಳಿಯುವುದು ಅಲ್ವಾ? ಮಾತನಾಡುವ ನಾಲಿಗೆಗೆ ಇರೋ ಬೆಲೆ ಮನುಷ್ಯನ ಮನಸಿಗಿಲ್ಲ..
ಸುಮ್ಮನೆ ಕುಂತಿದ್ದರು
ಬಿಡಲಿಲ್ಲ ಎಳೆದು ತಂದು
ಕುಕ್ಕುರು ಬಡಿಸಿ
ಗುಡಿಯ ಮೇಲೆ ಗುಡಿ ಕಟ್ಟಿ
ಪೂಜಿಸಿದರಯ್ಯ
ಈ ಮೂರ್ಖ ಜನರು
ನಾ ಎಲ್ಲೂ ಕಾಣೆ
ಎಲ್ಲೂ ಕಾಣೆನು
ನಾ ಕರೆದು ಹೇಳಲು ಇಲ್ಲ
ನಾ ಹೋಗಿ ಕೇಳಲು ಇಲ್ಲ
ತಮಗೆ ತಾವೆ ಬಂದು
ಬಾಯಿ ತುಂಬಾ ಹೊಗಳಿ
ಬಾಯಿಗೆ ಬಂದಂತೆ
ಸುಮ್ಮ ಸುಮ್ಮನೇ
ಬೈಯುವರಯ್ಯ
ಈ ಬಾಯಿ ಬಡುಕ ಜನರು
ಇದು ಯಾವ ಧರ್ಮವೂ
ನನಗೆ ಒದಗಿದ ಕರ್ಮವೋ
ನಾ ಎಲ್ಲೂ ಕಾಣೆ
ಎಲ್ಲೂ ಕಾಣೆನು
ಕೇಳಿದ್ದನ್ನು ಕೊಡಲು
ನಾನೇನು ಜಾದೂಗಾರನಲ್ಲ
ನಾನೊಂದು ಜೀವವಿಲ್ಲದ
ಮರದ ಕಲ್ಲಿನ ಗೊಂಬೆ
ಮಣ್ಣಿನ ಮುದ್ದೆ ನಾನಯ್ಯ
ನನ್ನನ್ನೆ ದೇವರೆಂದು
ಪೂಜಿಸುವರಯ್ಯ
ಈ ದಂಡ ಪಿಂಡ ಜನರು
ನಾ ಎಲ್ಲೂ ಕಾಣೆ
ಎಲ್ಲೂ ಕಾಣೆನು
ದೇವರು ಬರುವುದಯ್ಯ
ಮೈ ಮೇಲೆ ಬಂದು
ಕೇಳುವುದಯ್ಯ
ಬಾಲಕ ನಿನ್ನ ಸಮಸ್ಯೆ ಏನೆಂದು
ಭಕ್ತ ಹೇಳುವನಯ್ಯ
ಈ ಭಕ್ತನ ಕೂಗು ಇಷ್ಟು ದಿನ
ನಿನಗೆ ಕೇಳಿಸಲಿಲ್ಲವೇ
ನೀ ಎಲ್ಲಿ ಹೋಗಿದೆ ನನ್ನಪ್ಪ
ನಾ ಊರು ಊರು
ಸುತ್ತಲು ಹೋಗಿದೆ
ನಿನಗೇನು ಕಷ್ಟ
ಏನು ಹೇಳು ಬಾಲಕ
ನನ್ನ ಕಷ್ಟಗಳು ನಿನಗೆ
ತಿಳಿಯದೆ ನನ್ನ ತಂದೆ ನೀನಪ್ಪ
ಊರು ಊರು ಸುತ್ತವ
ನನಗೆ ಮನೆ ಮನೆಗೆ ಭಕ್ತರಿರುವರು
ನಿನ್ನ ಕಷ್ಟ ನನಗೆ ತಿಳಿದಿಲ್ಲ
ಈಗ ಹೇಳು ನನ್ನ ಮಗನೇ
ನನ್ನ ಕಷ್ಟವ ನಾನೇ
ನಿನಗೆ ಹೇಳುವುದಾದರೆ
ನೀನೇಕೆ ಬೇಕಪ್ಪ
ನೀ ಸುಮ್ಮನೆ ಹೋಗಿಬಿಡಪ್ಪ
ನೀನು ಯಾವ ಎಂತಾ
ಬೂಟಾಟಿಕೆ ದೇವರಪ್ಪ
*******ರಾಜು ಹಾಸನ********
ಕಳ್ಳಿ ಮಳ್ಳಿ ಮಿಂಚುಳ್ಳಿ
ಮನಸು ಕದ್ದ ಚೆಂದುಳ್ಳಿ
ಕಾಡಿಸಬೇಡ ನೋಯಿಸಬೇಡ
ಕನಸಿನಲ್ಲಿ ಬಂದು ಕೊಲ್ಲಬೇಡ
ಮಿಂಚಿ ಮಾಯವಾಗಬೇಡ
ಕಂಡು ಮರೆಯಾಗಬೇಡ
ಮನಸು ಕದ್ದು ಓಡಬೇಡ
ಸೋತು ಸುಣ್ಣವಾಗಿರುವೇ
ಕಣ್ಣಾಮುಚ್ಚಾಲೆ ಆಟವೇಕೆ
ನನ್ನ ಕನಸು ಮನಸ್ಸು
ನೀನೇ ಆಗಿರುವಾಗ
ನಾಚಿಕೆಯಾಕೆ ಭಯವೇಕೆ
ಪ್ರೀತಿಯ ಮಾತು ನುಡಿಯಲು
ನನ್ನ ಪ್ರೀತಿಯ ಮಿಂಚುಳ್ಳಿ