Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಿರಂತರ

ಪ್ರೀತಿ ಇದ್ದರೆ
ಬದುಕು ಬಂಗಾರ
ಸ್ನೇಹವಿದ್ದರೆ
ಬದುಕು ಸುಂದರ
ಬಂಧುವಿದ್ದರೆ
ಬದುಕು ಸಿಂಗಾರ
ಸಂಬಂಧವಿದ್ದರೆ
ಬದುಕು ನಿರಂತರ

- ರಾಜು ಹಾಸನ

16 Oct 2020, 01:53 pm

ನೆಮ್ಮದಿ

ನರ ಮಾನವ
ಪರದಾಡುವನಯ್ಯ
ನೆಮ್ಮದಿ ನೆಮ್ಮದಿಯೆಂದು
ನೆಮ್ಮದಿಯ ಹುಡುಕುತ್ತಾ
ವಜ್ರ ವೈಢೂರ್ಯವಿದ್ದರು
ಕೊಳ್ಳಲಾಗದಯ್ಯ ನೆಮ್ಮದಿ
ಕೊಳ್ಳುವ ಮಾರುವ
ಮರದ ದಿಮ್ಮಿಯಲ್ಲ
ಕೈ ಗೆ ಸಿಗುವ
ಪಂಜರದ ಹಕ್ಕಿಯಲ್ಲ
ನೆಮ್ಮದಿಗೆ ಬೇಕಾಗಿಲ್ಲ
ಸಿರಿ ಸಂಪತ್ತು ಹಣ ಅಂತಸ್ತು
ಹಿತ ಮಿತವಾದ ಆಸೆ
ಆಲೋಚನೆಗಳಿಂದರೆ
ದೊರಕುವುದಯ್ಯ ನೆಮ್ಮದಿ
ಓಡದಿರು ಮನುಜ
ನೆಮ್ಮದಿಯ ಹುಡುಕುತ್ತಾ
ನಿನ್ನಲ್ಲಿಯೇ ಇರುವುದು ನೆಮ್ಮದಿ
ನಿನ್ನ ಕಾಯಕವೇ
ನಿನ್ನ ನೆಮ್ಮದಿಯ ತಾಣವಯ್ಯ

- ರಾಜು ಹಾಸನ

15 Oct 2020, 11:51 pm

ನನ್ನ ಪ್ರೀತಿಯ ಅರಸಿ

ನನ್ನೊಲವೆ ನನ್ನೊಲವೇ
ಚಂದವಳ್ಳಿಯ ಚಲುವೆ
ನೀ ಎಷ್ಟು ಚಂದ
ನನ್ನೊಲವಿನ ಅರಸಿ
ಮುಗಿಲ ಮಲ್ಲಿಗೆಯೇ
ನಗುವ ಕೆಂದಾವರೆ ಹೂವೆ
ನಲಿವ ಕೆಂಪು ಗುಲಾಬಿಯೇ
ಅರಳೋ ಕೆಂಡ ಸಂಪಿಗೆಯೇ
ನಿನ್ನ ಹರಸಿ ಬಂದಿರುವೆ
ನಿನ್ನ ಅರಸ ನಿನ್ನಲ್ಲಿಗೆ
ನಿನ್ನ ಪ್ರೀತಿಯ ಹರಸಿ
ನನ್ನ ಪ್ರೀತಿಯ ಅರಸಿ

- ರಾಜು ಹಾಸನ

15 Oct 2020, 03:10 pm

ತುಂತುರು ಮಳೆ

ತುಂತುರು ತುಂತುರು
ತುಂತುರು ಮಳೆ
ಹನಿ ಹನಿಯಾಗಿ
ಜಿನುಗುವ ಸೋನೆ ಮಳೆ
ಅಳ್ಳಕೊಳ್ಳ ಉಕ್ಕಿ ಹರಿಯುವ
ಬರಸಿಡಿಲ ಮಳೆ
ರೈತರ ಪಾಲಿನ
ಹರುಷದ ಮಳೆ

ಮಳೆರಾಯ ಬಂದರೆ
ಹರುಷವಯ್ಯ ಹರುಷ
ಸುರಿಯಲಿ ಹನಿ ಹನಿ
ತುಂತುರು ಸೋನೆ ಮಳೆ
ಬಾರದಿರಲಿ ಕಣ್ಣೀರ ಮಳೆ
ಕೊಚ್ಚಿಕೊಂಡು ಹೋಗದಿರಲಿ
ಜನರ ಬದುಕು ಕನಸು
ಬರಸಿಡಿಲ ಹುಚ್ಚು ಮಳೆ

- ರಾಜು ಹಾಸನ

15 Oct 2020, 02:29 am

ದಾರಿ ತಪ್ಪಿದ ಮಗ

ಮಳೆಯೆಂದರೆ
ನೆನೆಯುವುದು ಸಹಜ
ಚಳಿಯೆಂದರೆ
ನಡುಗುವುದು ಉಚಿತ
ಬಿಸಿಲೆಂದರೆ
ಒಣಗುವುದು ಕಚಿತ
ಆಟವೆಂದರೆ
ಸೋಲು ಗೆಲುವು ನಿಶ್ಚಿತ
ನಿಲ್ದಾಣವೆಂದರೆ ಹತ್ತಿ
ಇಳಿಯುವುದು ನಿಯಮ
ಜೀವನವೆಂದರೆ
ಕಲಿಯಬೇಕು ಪಾಠ
ಯಾರು ಯಾರಿಗಾಗಿಯು ಇಲ್ಲ
ಎಲ್ಲರೂ ಅವರವರಿಗಾಗಿ
ನಿನ್ನ ದಾರಿ ನಿನಗಾಗಿ
ಅವರ ದಾರಿ ಅವರಿಗಾಗಿ
ಇಲ್ಲದಿದ್ದರೆ ನೀ ಆಗುವೆ
ದಾರಿ ತಪ್ಪಿದ ಮಗ
*******ರಾಜು ಹಾಸನ*******

- ರಾಜು ಹಾಸನ

15 Oct 2020, 01:21 am

ಪ್ರೀತಿ ನೀ ಯಾಕೆ ಈ ರೀತಿ

ಕಾಣದ ಕುತೂಹಲ ಮನದ ಕದ ತಟ್ಟಿ ದಾಗ
ಕಣ್ಣ ಕಡಲಲ್ಲಿ ಆಸೆಯ ಚಿಲುಮೆ ಉಕ್ಕಿದಾಗಾ
ಕಣ್ಮುಚಿದರು ಕಾಡುವ ನೋಟ ನೀಡಿದಾಗ

ಪ್ರೀತಿ ನೀ ಯಾಕೆ ಈ ರೀತಿ ......

- Kempu

14 Oct 2020, 08:46 pm

@ಕಲಿಸೋಣ ಬನ್ನಿ@

ಕಲಿಯುತ ನಾವು ಕಲಿಸೋಣ ಬನ್ನಿ
ಅಕ್ಷರಗಳ ಬೀಜಗಳ ಬಿತ್ತೋಣ ಬನ್ನಿ
ಸಾಕ್ಷರತೆ ಜ್ಞಾನವ ಬೆಳಗಿಸೋಣ ಬನ್ನಿ.

ಕಲಿಯಲು ಬಂದಿಹವು ಸಂತಸ ತಂದಿಹವು
ಹರುಷ ಮನದಿ ಕಲರವಗೈಯುತಿಹವು
ಮಕ್ಕಳಲ್ಲಿ ಕಲಿಕೆಯ ಜಪಿಸೋಣ ಬನ್ನಿ.

ಮಕ್ಕಳಲ್ಲಿ ಅಕ್ಕರೆಯ ನೀಡಿ
ಆತ್ಮೀಯತೆ ಬೆಳೆಸೋಣ
ಸಾಕ್ಷರತೆಯ ಹೆಚ್ಚಿಸೋಣ
ಮೌಲ್ಯಗಳ ಕಲಿಸೋಣ
ಭವ್ಯ ಭಾರತಕ್ಕೆ ಪ್ರಜೆಗಳ ನಿರ್ಮಿಸೋಣ.

ಕಲಿಯುತ್ತಾ ನಾವು ಕಲಿಸೋಣ ಬನ್ನಿ
ಸುಸಂಸ್ಕೃತ ಸಮಾಜವ ಕಟ್ಟೋಣ ಬನ್ನಿ.
✍️ ಮಹೇಶ್ ಶಿಕ್ಷಕರು

- MAHESH.हिन्दीशिक्षक

13 Oct 2020, 11:00 pm

@ಮೌನವೇ ಲೇಸು@

ಮಾತು ಮಾತುಗಳನ್ನಾಡಿ
ಜನರ ಬಾಯ್ ಸೋತಿವೆ
ಮಾತುಗಳಿಗೆ ಇಲ್ಲವಾಗಿದೆ
ಮತ ಮೌಲ್ಯದ ತೂಕ.

ಎತ್ತನೋಡಿದರತ್ತ
ಮಾತನಾಡುವವರೇ,
ಎಲ್ಲರ ಮಾತಿನಲ್ಲಿ
ನಾನೆಂಬ ಅಹಂಭಾವ,
ಯಾರು ಯಾರದು
ಮಾತು ಕೇಳುವವರಿಲ್ಲ.

ಮಾತು ಕೇಳಿ ಅರಗಿಸಿಕೊಳ್ಳುವವರಿಲ್ಲ
ಮಾತುಗಳನ್ನೇ ಆದರ್ಶವಾಗಿಸಿ ಕೊಳ್ಳುವವರಿಲ್ಲ,
ಮಾತುಗಳನ್ನು ಅನುಷ್ಠಾನ ಮಾಡುವವರಿಲ್ಲ,
ಮಾತು ಮೋಡಗಳಂತೆ ಚದುರುತಿಹುದು
ಗುಡುಗು-ಸಿಡಿಲುಗಳಂತೆ ಕರ್ಕಶವೆನಿಸುತಿಹವು,
ಮಾತುಗಳ ಮಾರ್ದನಿಯಲ್ಲಿ
ಮಾತುಗಳಿಗಿಂತ ಮೌನವೇ ಲೇಸೆನಿಸುತ್ತದೆ.
✍️ ಮಹೇಶ -ಶಿಕ್ಷಕರು

- MAHESH.हिन्दीशिक्षक

13 Oct 2020, 10:51 pm

@ಅಕ್ಷರದ ಆತಂಕ@

ಅಕ್ಷರ ಕಲಿಯಿತು ಜನ ಅಸಂಖ್ಯಾತದಲ್ಲಿ
ಸಾಕ್ಷರ ರಾಯಿತು ಸಾಗರದಲ್ಲಿ
ಸಾಧನೆ ಮಾಡಿತು ಸಾವಿರದಲ್ಲಿ.

ಸಾಧನೆ ಮಾಡುವ ಶರವೇಗದಲ್ಲಿ
ಸಾಹಸ ಮಾಡುವ ಸಡಗರದಲ್ಲಿ
ವೈಭವದ ಬದುಕು ನೀಗಿಸುವಲ್ಲಿ
ಸ್ವೇಚ್ಛೆಯ ಸಂಭ್ರಮದಲ್ಲಿ
ಮಾನವೀಯ ಮೌಲ್ಯ ಮರೆಯಾಯಿತು
ಮನುಷ್ಯನಲ್ಲಿ ಅನುದಿನದಿ.

ಅಕ್ಷರದಿಂದ ಅಕ್ಕರೆ ಸಿಗಲಿಲ್ಲ
ಹಣದಿಂದಲೇ ಆತ್ಮೀಯತೆ ಹರಿಯಲಿಲ್ಲ
ಅಂತಸ್ತು ಗಳಿಂದ ಅಂತಃಕರಣ ಬರಲಿಲ್ಲ
ಬಂಗಲೆಗಳಿಂದ ಬಾಂಧವ್ಯ ಬೆಸೆಯಲಿಲ್ಲ
ವೈಭೋಗದಲ್ಲಿ ವಾಸ್ತವತೆ ಕಾಣಲಿಲ್ಲ
ಅಕ್ಷರವು ಮನುಷ್ಯನಲ್ಲಿ ದ್ವೇಷ ವೈಷಮ್ಯ,
ವೈರುಧ್ಯಗಳನ್ನು ಸೃಷ್ಟಿಸಿತು,
ಮನುಷ್ಯನಲ್ಲಿ ಮಾನವೀಯತೆಯನ್ನು
ಕೊಂದಿತು ಆಧುನಿಕತೆಯ ದಿನಗಳಲ್ಲಿ.
✍️ ಮಹೇಶ್. ಶಿಕ್ಷಕರು

- MAHESH.हिन्दीशिक्षक

13 Oct 2020, 10:44 pm

@ನನ್ನ ಬದುಕು@

ಎಂಥದೋ ಬದುಕದು
ಬಡತನ ಬವಣೆಯ ಆಗರವದು
ಪ್ರೀತಿ ವಾತ್ಸಲ್ಯಗಳ ಕಳೆದುಕೊಂಡು
ಕೊರಗುತಾ ದಿನಗಳೆದ ಬದುಕದು.

ಕೊರತೆಗಳನ್ನು ಅನುಭವಿಸಿ
ಸಮಸ್ಯೆಗಳಲ್ಲಿ ಸುಳಿದಾಡಿ
ಬಸವಳಿದ ದಾರಿದ್ರ್ಯ ದ ದಿನಗಳದು.
ನಿತ್ಯ ನಿರ್ಲಕ್ಷ್ಯತನದ ಬದುಕಿ
ಸೋಲುಗಳ ಸರಪಳಿ ಹೊತ್ತುಕೊಂಡು
ಅವಮಾನಗಳ ಸಹಿಸಿಕೊಂಡು
ಮೌನ ರೋಧಿಸಿದ ದಿನಗಳದು.

ಇನ್ನೊಬ್ಬ ಹಂಗಿನಲಿ ಬದುಕಿ
ಜನರ ನಿಂದೆ ಗಳ ಸಹಿಸಿ
ಅವಮಾನ ಪ್ರಶ್ನಿಸದೆ ಮೌನ ದೇನಿಸಿದ ದಿನಗಳದು.

ಗುರಿಯಿಲ್ಲದ ಜೀವನ
ವಾಸ್ತವದ ಕಲ್ಪನೆ
ಸ್ಪಷ್ಟ ನಿಖರತೆ ಇಲ್ಲದ
ಗಮ್ಯವೀರದ ವ್ಯರ್ಥ ದಿನಗಳದು.

ಆತಂಕಗಳ ತೂಗುಯ್ಯಾಲೆಯಲ್ಲಿ
ಕಂಡ ಕನಸುಗಳ ಬೆನ್ನತ್ತಿ
ಬಸವಳಿದ ಬರ್ಬರ ಬದುಕದು
ಕನಸುಗಳು ಕೈ ತಪ್ಪಿದಾಗ
ಕೊರಗಿದ ಕನಿಕರದ ದಿನಗಳದು.

ತುಳಿದ ಸೋಲುಗಳ ಮೆಟ್ಟಿಲನು
ಅರಳಿದ ಕನಸುಗಳ ತೊಟ್ಟಿಲನು
ಬೆಂಬಿಡದೆ ಬೆನ್ನತ್ತಿ ಬರಸೆಳೆದು
ಅನುಭವದಿ ಧೃಡವಾಗಿ ಕಟ್ಟಿದ
ವಾಸ್ತವದ ಈ ನನ್ನ ಬದುಕದು.
✍️ಮಹೇಶ್ ಶಿಕ್ಷಕರು

- MAHESH.हिन्दीशिक्षक

13 Oct 2020, 08:35 pm