Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮಳೆಹನಿ

ಮೊದಲ ಮಳೆಯ ಹನಿಯ ಸ್ಪರ್ಶಕ್ಕೆ
ಇಳೆಯ ಜನರ ಮನ ಕಾಯ್ದಿದೆ
ಆಗಸದ ರವಿಯ ಬಿಸಿಲಿನಾಟಕೆ
ಭೂಮಿಯು ಬಾಯಿ ತೆರೆದಿದೆ
ಬಿಸಿಲ ರೌದ್ರವ ಸಹಿಸದೇ
ಜಗದ ಜಾನುವಾರು ಬಸವಳಿದಿದೆ.

ಕಾನನದಿ ಚೈತ್ರದ ಚಿಗುರು ಒಡಮೂಡಿದೆ
ಮರದ ಬೇರು ವರ್ಷದ ಧಾರೆಗೆ ಒಡಲಾಡಿದೆ.
ರೈತನ ಮನ ಮಳೆಯ ಹನಿಗೆ ಕಾಯ್ದಿದೆ
ನಿಸರ್ಗದಲ್ಲಿ ಮೌನದ ಮೆರವಣಿಗೆ ನಡೆದಿದೆ
ನಿಸರ್ಗದ ಮೌನ ವರ್ಷಧಾರೆಯ ನಿರೀಕ್ಷೆಯಲ್ಲಿದೆ.
ಆಗಸದಿ ವರ್ಷದಾರೆ ಹರಿದುಬರಲಿ
ಜಗದ ಮೌನಕೆ ಜನರ ಮನಕ್ಕೆ
ನಿಸರ್ಗದ ನೀರವತೆಗೆ ತಂಪು ತರಲಿ
ಸುಳಿವ ತಂಗಾಳಿಯು ಜನರ ಮನಕೆ ಹರುಷ ತರಲಿ.
ಮಹೇಶ್ ಶಿಕ್ಷಕರು

- MAHESH.हिन्दीशिक्षक

13 Oct 2020, 08:15 pm

@ಮಗು@

ಮುದ್ದುಮುಖದ ಕಂಗಳಿವು
ಏನು ಅರಿಯದ ಹಸುಗೂಸುಗಳು ಕುತೂಹಲ ನಿರೀಕ್ಷೆಗಳ
ಉತ್ಸಾಹದ ಚಿಲುಮೆಗಳಿವು
ಸಂತಸದಿ ದಿನಗಳಯುತ
ಬಾಂಗಳದಿ ಕನಸುಗಳ ಚಿತ್ತಾರ ಬಿಡಿಸುತ್ತಾ
ಸೃಷ್ಟಿ ವೈಚಿತ್ರ್ಯವನ್ನು ಗಮನಿಸುವವು
ಇನ್ನೊಬ್ಬರ ನಗುವಿನ. ನಿರೀಕ್ಷೆಯನ್ನು ತಣಿಸುವವು
ಸರ್ವರಲ್ಲಿ ಪ್ರೀತಿಯ ಬುಗ್ಗೆ ಉಕ್ಕಿಸುವವು
ಎಲ್ಲರಲ್ಲಿಯೂ ಸಂತೋಷವನ್ನು ಹಂಚುತ್ತಾ
ಮನುಷ್ಯತ್ವದ ಸಂದೇಶ ನೀಡುತಿಹವು.
✍️ಮಹೇಶ್.ಶಿಕ್ಷಕರು, (ಬಾ,ಸ,ಪ್ರೌ,ಶಾ, ಮಸ್ಕಿ)

- MAHESH.हिन्दीशिक्षक

13 Oct 2020, 08:06 pm

ಜೀವನ

ಜೀವನ ಸಾವಿನೆಡೆಗಿನ ಓಟ
ಅದನ್ನು ಮರೆತು ನಡುವೆ ಕೋಪದಲಿ ಹಾರಾಟ
ದುಃಖದಲಿ ನರಳಾಟ
ಮತ್ಸರದಿ ಮನದುರಿಯೂತ
ಆಗಾಗ ಸ್ನೇಹದ ಸುಖದೂಟ
ಸುತ್ತಲಿನವರ ಪ್ರೀತಿಗಾಗಿ ಪರದಾಟ

ಉಸಿರ ಕೊನೆತನಕ ಆಸೆಗಳ ಆರ್ಭಟ
ಸೋಲು ಗೆಲುವೆಂಬ ಭಾವನೆಗಳು ಕಲಿಸೋ ಪಾಠ
ಖುಷಿಗಾಗಿ ಬೆಳೆಸಿಕೊಂಡ ಹಲವಾರು ಚಟ
ಯೌವ್ವನದಲಿ ಹೇಳಿಕೊಳ್ಳಲಾಗದ ಮನ್ಮಥನ ಆಟ

ಜೀವನ ಹೇಗೆಂಬುದನ್ನು ತಿಳಿಸಿಕೊಡಲಾಗದ ಆಂಕಗಳಿಗಾಗಿ ತಯಾರಾಗಿರೊ ಪಠ್ಯದ ಪಾಠ
ಓದಿದ ನಂತರ ಕೆಲಸಕ್ಕಾಗಿ ಪರದಾಟ
ಕೆಲಸ ಸಿಗದಾಗ ಸುತ್ತಲಿನವರ ನೋವುಂಟು ಮಾಡೋ ಮಾತಿನ ಹೊಡೆತ

ಕೆಲಸ ಸಿಕ್ಕರೆ ಮದುವೆಯ ಮಾತು
ಇಲ್ಲದಿದ್ದರೆ ಮದುವೆ ಕನಸಿನ ಮಾತು
ಮದುವೆಯಾದರೆ ಮಕ್ಕಳ ಚಿಂತೆ
ಮಕ್ಕಳಾದರೆ ಅವರಿಗಾಗಿ ಹಣ ಕೂಡಿಡುವ ಚಿಂತೆ
ಎಲ್ಲ ಮುಗಿದ ಮೇಲೆ ಮುಪ್ಪಿನ ಚಿಂತೆ
ಇನ್ನೇನುಳಿದಿದೆ ಎನ್ನುವಷ್ಟರಲ್ಲಿ ಏರಲೆ ಬೇಕು ಮಸಣದಿ ಚಿತೆ

ಜೀವನ ಚಕ್ರ ಒಂತರಾ ವಿಚಿತ್ರ
*ತಿಳಿದವರಾರು ಸೃಷ್ಟಿಯ ಚಿತ್ತ*
ದೀರ್ಘಾಲೋಚನೆ ಎಂದಿಗೂ ಬೇಡ
*ಜೀವನ ಇಷ್ಟೆ ಚಿಂತೆಯು ಬೇಡ*☺️

________________*ದೇವಪೂರ್ಣ*

- DevakumarBK Dev

13 Oct 2020, 07:01 pm

ಪುಟ್ಟ ಮಲ್ಲಿ

ಕೋಳಿ ಜಡೆಯ
ತುಂಡು ಲಂಗದ
ಪುಟ್ಟ ಮಲ್ಲಿ
ಪುಟ್ಟ ಪುಟ್ಟ ಕೈ
ಪುಟ್ಟ ಪುಟ್ಟ ಮಾತು
ಪುಟ್ಟ ಪುಟ್ಟ ಹೆಜ್ಜೆ
ಪುಟ್ಟ ಪುಟ್ಟ ಗೆಜ್ಜೆ
ಪುಟ್ಟ ಪುಟ್ಟ ಹೃದಯ
ಪುಟ್ಟ ಪುಟ್ಟ ಕಂದ
ಬಿದ್ದು ಹೊರಳಾಡುವಳು
ನನ್ನೆದೆಯ ಗುಡಿಯ ಮೇಲೆ

ಪುಟ್ಟ ಪುಟ್ಟ ಕಂದನ
ಪುಟ್ಟ ತೊದಲು ಮಾತು
ಕೇಳಲು ಬಲು
ಅಂದ ಚಂದವಯ್ಯ
ಅವಳು ನಕ್ಕರೆ
ಬಲು ಸೊಗಸು
ಅವಳ ಮಾತೇ
ಮುತ್ತಿನ ಹನಿ ಜೇನಿನ ಹನಿ
ಅವಳ ಖುಷಿಯೇ
ನನ್ನ ಉಸಿರು ನನ್ನ ಬದುಕು

- ರಾಜು ಹಾಸನ

13 Oct 2020, 03:25 pm

ಜನ ಸೇವೆ

ಕಾಡಿ ಬೇಡಿ ಭಿಕ್ಷೆ ಬೇಡಿ
ಕೈ ಕಾಲು ಹಿಡಿದು
ಬರುವರು ಗುಲಾಮರು
ಜನರ ಸೇವೆಗೆಂದು
ಗೆದ್ದ ಮೇಲೆ
ಮಾಡಿಸಿಕೊಳ್ಳುವರು
ಜನರಿಂದಲೇ
ತಮ್ಮ ತಮ್ಮ ಸೇವೆ

ಜನರಿಗೆ ಕೊಡುವರು
ಸುಳ್ಳು ಆಶ್ವಾಸನೆ
ಬಗೆಹರಿಯದು ಸಮಸ್ಯೆ
ಬಾರದಿರುವುದು ಪರಿಹಾರ
ನಾವು ಕೊಡಬೇಕಾಗಿದೆ
ಏಟಿಗೆ ಏಟು ತಿರುಗೇಟು
ಇಲ್ಲದಿದ್ದರೆ ಗುಡಿಸಿ
ಗುಂಡಾಂತರ ಮಾಡಿ
ತಿಪ್ಪೆ ಸಾರಿಸಿ
ಪರಾರಿಯಾಗುವರು
ಮನೆಯ ಮುಂದೆ
ರಂಗೋಲಿ ಬಿಡಿಸಿ

- ರಾಜು ಹಾಸನ

12 Oct 2020, 05:06 pm

ವಿಷ ಬೀಜ

ಜಾತಿ ಎಂಬುವುದು ರೋಗ
ಮುಟ್ಟಿದರೆ ಅಂಟಿಕೊಳ್ಳುವುದು
ತೊಳೆದರು ಹೋಗದಿರುವುದು
ಉಜ್ಜಿದರು ಮಾಸದಿರುವುದು
ಸುಟ್ಟರು ಬೂದಿಯಾಗದಿರುವುದು
ಬೂದಿ ಮುಚ್ಚಿದ ಕೆಂಡದಂತೆ
ಸುಡುತ್ತಿದೆ ಅಂಟು ರೋಗವೆಂಬ
ವಿಷ ಬೀಜದ ಕಳೆ ಜಾತಿಯ ಕೊಳೆ

- ರಾಜು ಹಾಸನ

12 Oct 2020, 04:35 pm

ಪಂಗನಾಮ

ಚಿಲ್ಲರೆ ಕೊಟ್ಟರೆ ಮುಟ್ಟುವುದಿಲ್ಲ
ನೋಟು ಕೊಟ್ಟರೆ ಬಿಡುವುದಿಲ್ಲ
ನಮ್ಮ ಅಧಿಕಾರಿಗಳು
ಅರ್ಜಿ ಕೊಟ್ಟರೆ ಸ್ವೀಕರಿಸುವುದಿಲ್ಲ
ಅಧಿಕಾರ ಕೊಟ್ಟರೆ ತಿರಸ್ಕಾರಿಸುವುದಿಲ್ಲ
ನಮ್ಮ ಜನ ನಾಯಕರು

ಹಣ್ಣುಕಾಯಿ ಕೊಟ್ಟರೆ ಆರತಿ
ದುಡ್ಡು ಕೊಟ್ಟರೆ ಮಂಗಳಾರತಿ
ಖಾಲಿ ಕೈಗೆ ಚೆಂಡು ಹೂವು
ಹಣೆಗೆ ಪಂಗನಾಮ ಹಾಕಿ
ಪುಂಗಿ ಊದುವರಯ್ಯ
ಡೊಳ್ಳು ಹೊಟ್ಟೆ ಪೂಜಾರಿಗಳು

- ರಾಜು ಹಾಸನ

12 Oct 2020, 09:30 am

ನಡೆ ನುಡಿ ಹಿತ ಮಿತ

ನಾವು ಆಡುವ
ಮಾತು ಬಲು ಚಂದವೆಂದು
ಆಡದಿರಿ ಹಸಿ ಸುಳ್ಳು
ಚುಚ್ಚದಿರಲಿ ಮಾತು ಮುಳ್ಳಾಗಿ
ಕೊಲ್ಲದಿರಲಿ ಮೌನವಾಗಿ
ಮಾತು ಹಿತವಾಗಿರಲಿ
ಮೌನ ಮಿತವಾಗಿರಲಿ
ಇಲ್ಲವಾದಲ್ಲಿ ಮಾತು
ಮುಳ್ಳಾಗುವುದು
ಮೌನ ವಿಷವಾಗುವುದು
ಎಚ್ಚರವಿರಲಿ
ನಾವು ಆಡುವ ಮಾತಿನಲ್ಲಿ
ಹಿಡಿತವಿರಲಿ
ನಮ್ಮ ನಡೆ ನುಡಿಯಲ್ಲಿ

- ರಾಜು ಹಾಸನ

12 Oct 2020, 12:01 am

ದೇವ ಗಂಗೆ ಕಾವೇರಿ

ಭೂಮಿಯ ದಕ್ಷಿಣ ಬಾಗದ ತುದಿಯಲ್ಲಿ
ಜಲ ಕ್ಷಾಮವು ತೋರಲು ಭಾರತದಿ
ನೆಲ ಜಲ ಪ್ರಾಣಿ ಪಕ್ಷಿ ಮರ ಗಿಡ ಒಣಗಿ
ಋಷಿ ಮುನಿಗಳು ಬೇಡಲು ದೇವರಲಿ //

ಕೈಲಾಸದ ಕಡೆ ಪ್ರಯಾಣವ ಬೇಳೆಸುತಲಿ
ಮಹಾದೇವನ ಬೇಡಿಕೊಳ್ಳಲು ಭಕ್ತಿಯಲ್ಲಿ
ಶ್ರೀ ಅಗಸ್ತ್ಯ ಮುನಿಗಳ ಭಕ್ತಿಗೆ ವಲಿಯುತ
ಪರಶಿವನು ಕರುಣಿಸಿದ ದೇವ ಗಂಗೆಯನು //

ಪಯಣದ ಹಾದಿಯ ಸುಸ್ತನು ಕಳೆಯಲು
ಘಟ್ಟದ ಮೆಗಡೆ ತುಸು ವಿಶ್ರಮಿಸಲು
ಗಜಮುಖ ದೇವನು ಕಾಕರಾಜನ ರೂಪದಿ
ಉರುಳಿಸಿದನು ಜಲ ಕಮಂಡಲವ ಕೆಳಗೆ //

ಉಕ್ಕುತಾ ಹರಿದಳು ದೇವ ಗಂಗೆಯೂ
ಕಾವೇರಿ ಎಂಬ ಹೊಸ ನಾಮದಲಿ
ಘಟ್ಟವ ಇಳಿದು ಜಲ ಭವನೆಯ ನೀಗಿ
ರಭಸದಲಿ ಸಾಗಿದಳು ತಾಯ್ ಕಾವೇರಿ //

ಅಂದಿನಿಂದ ಇಂದಿನವರೆಗೂ ಕಾವೇರಿಯು
ಸಕಲ ಜೀವಜಂತು ರೈತರನು ಸಲಹುತಾ
ಕೊಡಿಗಿನ ಕಾವೇರಿ ಎಂಬೇಸರಿನಲಿ ತಾಯಿ
ಪ್ರಖ್ಯಾತಿ ಯ ಪಡೆದಳು ಭಾರತ ಖಂಡದಲಿ //


ಕಲ್ಮೇಶ ಬಡಿಗೇರ
9743539657
.......ಬಾದಾಮಿ.......

- Kalmesh Badiger

11 Oct 2020, 11:39 am

ನನ್ನ ದೇಶ ನಮ್ಮ ಹೆಮ್ಮೆ

ದೇಶ ಕಾಯೊ ಯೋಧನಿಗೆ ಸಿಗೊ ಗೌರವ
ಈ ನಮ್ಮ ದೇಶದಲ್ಲಿ ಒಬ್ಬ ರಾಜಕಾರಣಿಗೂ ಇಲ್ಲ ಒಬ್ಬ ಅಧಿಕಾರಿಗೂ ಇಲ್ಲ
ಯಾಕೆಂದ್ರೆ
ಒಬ್ಬ ತಪ್ಪು ಹೆಜ್ಜೆ ಇಟ್ಟರೆ ಇಡಿ ಖಾಂದನಕ್ಕೆ ಗೆಜ್ಜೆ ಕಟ್ಟತ್ತಾರೆ
ಯಾಕೆ ಸೈನಿಕರೇನು ತಪ್ಪೆ ಮಾಡಲ್ವ ಮಾಡುತಾರೆ
ಆದರೆ ದೇಶ ಸೇವೆ ಮುಗಿದ ಮೇಲೆ ಪ್ರಾಮಾಣಿಕತೆ ಮೆಚ್ಚಿ
ಪಿಂಚಣಿಗೊಸ್ಕರ ಚಪ್ಪಲಿ ಸವೆದು ಹೋಗಿ ಸುಸ್ತ ಆಗೊ ತರ
ಪಿಡಿಸುತ್ತಾರಲ್ವ ರಾಜಕಾರಣಿಗಳು ,ಅಧಿಕಾರಿಗಳು ಅವರಿಗೆ ಲಂಚ ಅಂತ ಭಿಕ್ಷೆ ನೀಡಬೇಕಲ್ವ ಅದೇ ಒಂದು ತಪ್ಪು
ದೇಶದ ಗಡಿಯಾಚೆ ಹುಲಿ ಬಂದ್ರು ಹೊಡೆದು ಉರುಳಿಸೊ ತಾಕತ್ತು ನಮ್ಮ ಸೈನಿಕರದು
ಅದೇ ದೇಶದೊಳಗಿರೊ ಇಲಿಗಳನ್ನ ಹೊಡೆದು ಬಿಸಾಡೊಣ ಅಂದ್ರೆ ಕಾಯ್ದೆ ಕಾನೂನು ಸಂವಿಧಾನ ಅಂತ ಇದೆ ಸಾಕ್ಷ್ಯಾಧಾರವಿಲ್ಲದೆ ಇಲಿಗಳು ಹೆಗ್ಗಣಗಳ ತರ ಆಗಿದಾವೆ
ಬಿಲ ಬಗೆಯೊದೊಂದೆ ಕೆಲಸ
ಸಾಕ್ಷ್ಯಾಧಾರ ಮೂಲಕ ಸಿಕ್ಕರೆ ಕಾನೂನು ಚೌಕಟ್ಟಲ್ಲಿ ಚಟ್ಟ ಕಟ್ಟೊದೆ

@Wishu

- Wishu@

11 Oct 2020, 11:07 am