Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

*** ಹೊತ್ತಿನ ಮುತ್ತು***

ತಪ್ಪಿ ಹೋದಿತೆ ಹೊತ್ತಿನ ಮುತ್ತು
ಮತ್ಯಾಕೆ ಕಲ್ಲಾಯಿತೆ ಮನಸ್ಸು
ಅರಳುವ ಜೀವಕೆ ಬಾಡಿದ ಮಾತೆಕೆ
ಮರುಳಾಗದ ಮಾಣಿಕ್ಯ ಅಂಗೈಯಲ್ಲಿರುವಾಗ॥

ಕೈ ಚೆಲ್ಲಿ ಕುಳಿತೆ ಕತ್ತಲಾಗುವ ಮುನ್ನ
ಬೆಳಕನ್ನೆಕೆ ನೆನೆದು ಕಣ್ಣಿರುಡುವೆ
ಸೂರ್ಯನ ಬೆಳಕೊ ಹೊತ್ತು ಮುಳಗೊತನಕ
ಚಂದಿರನಿಗಾಗಿ ಏಕೆ ಕಾಯುವೆ ಅಮವಾಸ್ಯೆ ದಿನಂದು
ಹುಣ್ಣಿಮೆಯ ರಾತ್ರಿಗೆ ಮರುಳಾಗದಿರೊ ಮತ್ತೊಮ್ಮೆ
ಕ್ಷಣಿಕ ಕಲ್ಪನೆಗಾಗಿ ಕೈ ಚೆಲ್ಲಿ ಕುಳಿತೆ ನಿಲುಕದ ನಕ್ಷತ್ರಕೆ ॥

ಚಿಂತಿಸುವುದೇಕೆ ಮರಳಿಬಾರದ ಕಾಲಕೆ
ತಿರುಗಿ ತಿರುಚಿದರು ಗಡಿಯಾರದ ಮುಳ್ಳು ಮರಳಿತೆ
ಉರುಳಿ ಹೋದ ಸಮಯವಲ್ಲ....
ಚಿಂತಿಸಿ ಫಲವೇನು ಇರುವ ಪ್ರಯತ್ನವ ಕೈ ಚೆಲ್ಲಿ
ಅವಸರವೇಕೆ ಆವೇಷದಲಿ..
ದುಡುಕಿದ ನಿರ್ಧಾರಕೆ ನಿದರ್ಶನ ನಿನ್ನೊಳಗಿನ ತಾಳ್ಮೆ
ಅದನ್ನರಿಯದೆ ಚಿಂತಿಸಿ ಫಲವೇನು .....॥

ಯಾರಿಗಾಗಿ ಕಾಯುತಿರುವೆ ಕಾಯಿಸುವುದೆ ಈ ಸಮಯ
ಕಾಯೊ ಮನಸ್ಸಿದೆ ಕಾಯಿಸೊ ಸಮಯವಿಲ್ಲ
ಯಾರಿಗಾಗಿ ಯಾರು ಇಲ್ಲ ಓಡುತಿಹದು ಕಾಲ
ಕಾಲಘಟ್ಟದಲಿ ಮಿತಿಯಿಲ್ಲ ಕಾಲ ನಿರ್ಣಯವೆ ಅಂತಿಮ
ಕಾಯುತಿರುವೆ ಯಾರಿಗಾಗಿ
ಕಾಯಿಸೊ ಸಮಯ ನಿನ್ನದಲ್ಲ॥

ಅರಳೊ ಹೂವಿಗೆ ಬಾಡಿ ಹೋಗುವ ಸಮಯ ತಿಳಿದಿಲ್ಲ
ಅರಳಿದಾಗ ಹೊಳೆಯುವುದು ತಿಳಿದಿಲ್ಲ
ನಾನಿಲ್ಲಿ ಕ್ಷಣಿಕ ....
ನಾ ಬಾಡಿ ಹೋದರೆ ಬೆಳಗಾಗಿ ಮತ್ತೆ ಹುಟ್ಟಿ ತರುವೆ
ನನ್ನಂತಹ ಸೌಂಧರ್ಯವ ಆದರೆ ಅದು ನಾನಲ್ಲ
ನಾ ಬಿಟ್ಟು ಹೋದ ಜಾಗವಷ್ಟೆ.....॥

ಇನ್ನು ನಾವಿಲ್ಲಿ ಕ್ಷಣಿಕ ಹೊಳೆದಿದ್ದೆಲ್ಲ ಕೇವಲ ಕಾಲ್ಪನಿಕ
ನಮ್ಮ ಕಲ್ಪನೆಗಳು ಮಾತ್ರ ಸುಂದರ .. ಸುಂದರ
ಬಹುದೂರದಾಚೆ ಕಡಲಲಿ ಹೊತ್ತು ಮುಳೊಗೊ ಮುನ್ನ
ಮತ್ತೆ ಯಾಕೆ ಈ ಬೇಸರ ಉದಯಿಸೊ ರವಿ ಕಂಡು....॥


ತಪ್ಪಿ ಹೋದಿತೆ ಕೈಚೆಲ್ಲಿ ಚಿಂತಿಸುವುದೇಕೆ ಯಾರಿಗಾಗಿ
ಅರಳೊ ಮಲ್ಲಿಗೆ ಬಾಡಿ ಹೋದ ಕಾಲಕೆ
ನಾವೆಲ್ಲ ಇಲ್ಲಿ ಕ್ಷಣಿಕ ನಮ್ಮ ಕಲ್ಪನೆಯಲಿ ನಾವು ಕಾಲ್ಪನಿಕ...
ಸೃಷ್ಟಿ ಕರ್ತನೆ ಈ ಜಗದ ನಿರ್ವಾಹಕ
ನಿರ್ಣಯವೆ ಅಂತಿಮ ನಾವಿನ್ನು ಅವನ ಕೈಬೊಂಬೆಗಳು ಮಾತ್ರ ....ಈ ಜೀವನ ॥

****ಧನ್ಯವಾದಗಳೊಂದಿಗೆ****

>ನಾನಿನ್ನು ಚಿಕ್ಕ ಮೀನು<
ಸಾಹಿತ್ಯ ಸಾಹಿತಿಗಳ ಬಲೆಯಲಿ
ನನ್ನದು ಕಿರು ವಾಚನ......

***ವಿಶು(ವೀರೇಶ) ಅಂಗಡಿ ***

- Wishu@

05 Nov 2020, 06:23 pm

ಗೆಳೆಯನ ಹುಟ್ಟುಹಬ್ಬ

ಅಪರಿಚಿತರಗಿ ಹುಟ್ಟಿ ಬೆಳೆದು
ಚಿರ ಪರಿಚಿತರವಾದ ಸ್ನೇಹ ಸಂಬಂಧ
ಸ್ವಚ್ಚಂದವಾಗಿ ಬಾನಂಗಳದ
ಬಾನಿನಲ್ಲಿ ಹಾರಾಡಿ ತೂರಾಡಿ
ನಕ್ಕು ನಲಿದು ಕುಣಿದು ಕುಪ್ಪಳಿಸಿ
ಹೆಜ್ಜೆಯ ಹಿಂದೆ ಹೆಜ್ಜೆಯನ್ನಿಕ್ಕುತ್ತಾ
ಜೊತೆಗೂಡಿ ನಡೆದಾಡಿದ
ನಮ್ಮಿಬ್ಬರ ಸ್ನೇಹ ಹೀಗೆ ಸಾಗಲಿ

ಚಿರಕಾಲವಿರಲಿ ಸದಾ ಕಾಲವಿರಲಿ
ಉಕ್ಕಿ ಹರಿಯಲಿ ಈ ಸ್ನೇಹದ ಕಡಲು
ನಂಬಿಕೆಯ ಉಸಿರಾಗಿ
ಮಾತು ಮುತ್ತಾಗಿ ಹೊಳೆದು
ಬೆಳಕು ಚೆಲ್ಲಲಿ ನಾವು ಸಾಗುವ
ಈ ಬದುಕಿನ ಪಯಣದ ಹಾದಿಯಲ್ಲಿ
ಹರುಷ ತುಂಬಿದ ಜೇನಾಗಿರಲಿ
ಸಂಬಂಧಗಳ ಸೇತುವೆಯಾಗಿರಲಿ
ಈ ಸ್ನೇಹ ಸಂಬಂಧದ ಬೆಸುಗೆ
ಪ್ರೀತಿ ಮಮಕಾರದ ಮಡಿಲಗಲಿ

ಹೀಗೆ ಸದಾ ಕಾಲ ಚಿರಕಾಲ
ವರುಷ ವರುಷಗಳು ಉರುಳಿದರು
ನಕ್ಕು ನಲಿಯುತ್ತಾ ಸಂತ್ತೋಷದಿ
ಬದುಕಿ ಬಾಳೆಂದು ಹಾರೈಸುವೆನು
ನಿನ್ನ ಹುಟ್ಟು ಹಬ್ಬಕ್ಕೆ ಶುಭ ಕೋರುವೆನು
ಇಂತಿ ನಿನ್ನ ಜೀವದ ಗೆಳೆಯ

- ರಾಜು ಹಾಸನ

04 Nov 2020, 11:52 pm

ಬಿಟ್ಟಿರಲಾರದಂತೆ

ಮರೆಯ ಬೇಕು ಅಂದುಕೊಂಡಿದ್ದೆ ನಿನ್ನ
ಯಾಕೆ ಪುನಃ ಪುನಃ ಕಾಣುವೆ ನನ್ನ

ಕಂಡು ಕಾಣದಂತೆ ಇದ್ದೆ ನಿನ್ನ
ಮುಗುಳು ನಗೆಯಲ್ಲೆ ಯಾಕೆ ಕಾಡುವೆ ನನ್ನ

ಮೆಚ್ಚು ಮೆಚ್ಚದಂತೆ ಇದ್ದೆ ನಿನ್ನ
ಯಾಕೆ ಕಿರು ನೋಟದಲ್ಲೆ ಕೆಣಕುವೆ ನನ್ನ

ಕೇಳಿಯು ಕೇಳಿದಂತೆ ಇದ್ದೆ ನಿನ್ನ
ಸದ್ದಿಲ್ಲದೆ ಯಾಕೆ ಕಂಪಿಸುವೆ ನನ್ನ

ಕಂಡ ಕ್ಷಣವೆ ನಿನ್ನ
ಅಂದೇ ಮರೆತು ಹೋದೆ ನನ್ನ

ಕ್ಷಣವು ಕೂಡ ಸ್ಮರಿಸದೆ ನಿನ್ನ
ಹೇಗೆ ಬಿಗಿದು ಇಡಲಿ ಈ ಉಸಿರನ್ನ

ಹೊಗಳಿ ತೆಗಳಿಯಾದರು ನಿನ್ನ
ಮುಗಿಸ ಬೇಕು ಮಾತಿನ ದಿನಚರಿಯನ್ನ

ನಿಜವಾಗಿಯೂ ನಾ ಮೆಚ್ಚಿರುವೆ ನಿನ್ನ
ಕೊನೆಯವರೆಗೂ ಬಿಟ್ಟು ಹೋಗ ಬೇಡ ನನ್ನ.

- Shivakumara S

04 Nov 2020, 11:28 pm

ಕಲೆಗಾರ ದೇವರು

ಗೊಂಬೆ ಆಡಿಸುವವನು ನಾಟಕಕಾರ
ಹಾಸ್ಯ ಮಾಡುವವನು ಹಾಸ್ಯಗಾರ
ಚಿತ್ರ ಬಿಡಿಸುವವನು ಕಲೆಗಾರ
ಮೋಸ ಮಾಡುವವನು ಮೋಸಗಾರ

ಮಣ್ಣು ಮರದ ಕಲ್ಲಿನ ಗೊಂಬೆಗೆ
ಮಂತ್ರ ಪಠಿಸಿ ಪೂಜಿಸಿ ಆರಾಧಿಸಿ
ಹಬ್ಬ ಮಾಡಿದರೆ ಒಲಿದು
ಬರುವನು ಬಯಲಿಗೆ ದೇವರು
ಇವನು ಎಂತಹ
ಜಾದೂಗಾರ ನಾಟಕಕಾರ

ಕುಪ್ಪಳಿಸಿ ಹಾರುವ
ಜಿಗಿ ಜಿಗಿದು ಓಡುವ
ಕಪ್ಪೆ ಹಾವು ಇಲಿ ಹೆಗ್ಗಣ
ಕಾಗೆ ಗೂಬೆ ನವಿಲು
ಕತ್ತೆ ಕುದುರೆ ಹಂದಿ ಎಮ್ಮೆ
ನಾಯಿ ದನದ ಮೇಲೆ
ಸವಾರಿ ಮಾಡುವವನು
ಸೋಜಿಗದ ಹಾಸ್ಯಗಾರ

ಒಂದೇ ತಲೆಗೆ
ಹತ್ತಾರು ಕೈಗಳ ಕಟ್ಟಿ
ಝಳ ಝಳ ಝಳಪಿಸುವ
ಖಡ್ಗ ಮಚ್ಚು ಕೊಡ್ಲಿ ಬಾಣ
ಹಾರೆ ಗುದ್ದಲಿ ಹಿಡಿದು
ದುಷ್ಟರ ಸಂಹಾರಿಸುವ
ಇವನ್ನೊಬ್ಬ ಕೊಲೆಗಾರ
ಚಿತ್ರ ವಿಚಿತ್ರವಾದ ಕಲೆಗಾರ

ಹೇಳಿದ್ದು ಕೇಳೋದಿಲ್ಲ
ಕೇಳಿದ್ದು ಕೊಡೋದಿಲ್ಲ
ಬಿದ್ದು ಬೇಡಿದರು ಬರುವುದಿಲ್ಲ
ನಂಬಿ ಕೆಟ್ಟರು ನಂಬಿ ಮೋಸ
ಹೋದರು ನನ್ನ ಮುಗ್ದ ಜನಗಳು
ಮೋಜಿಗಾದ ಮೋಸಗಾರ

- ರಾಜು ಹಾಸನ

04 Nov 2020, 08:58 pm

ಭೀಮ ಗೀತೆ

ಜೈ ಜೈ ಜೈ ಭೀಮ್
ನಾವು ಜೈ ಭೀಮನ ಮಕ್ಕಳು
ಜೈ ಭೀಮನ ಮರಿ ಆನೆಗಳು
ಇಲ್ಲಿ ಯಾರು ಕೆಮ್ಮಗಿಲ್ಲ
ಕೆಣಕಿದರೆ ಬಿಡೋದಿಲ್ಲ
ಸುಮ್ಮನೆ ಕಾಲುಕೆರದು
ನಮ್ಮ ತಂಟ್ಟೆಗೆ ಬಂದರೆ
ಬಿಡೋದಿಲ್ಲ ಉಳಿಸೋದಿಲ್ಲ
ಉರುಳಿಸಿ ಚಂಡಾಡುವೆವು
ಮನುವಾದಿಗಳ ರುಂಡ ಮುಂಡ
ಗಂಚಾಲಿ ಮಾಡಿದರೆ ಸಿಗಿದು
ತೋರಣ ಕಟ್ಟಿ ಬಿಡುವೆವು
ಎಚ್ಚರ ಎಚ್ಚರ ಎಚ್ಚರ
ಕಟ್ಟೆಚ್ಚರವಿರಲಿ ಮನುವಾದಿಗಳಿಗೆ
ನಾವು ಜೈ ಭೀಮನ ಮಕ್ಕಳು
ನಾವು ಜೈ ಭೀಮನ ಸೈನಿಕರು

ಮೂಢನಂಬಿಕೆಯ ಧಿಕ್ಕರಿಸಿ
ಮೋಸ ವಂಚನೆಯ ಖಂಡಿಸಿ
ಅನ್ಯಾಯದ ವಿರುದ್ಧ ಹೋರಾಡಿ
ದಂಡು ದಾಳಿಗೆ ಹೆದರದೆ ಬೆದರದೆ
ಭೀಮ್ ಕೊರೆಂಗಾವ್ ಗೆದ್ದ
ಸಿಡಿಲ ಸಿಂಹದ ಮರಿಗಳ
ಮರಿ ಮೊಮ್ಮಕ್ಕಳು ನಾವು
ಭಯವಿಲ್ಲ ಹೆದರುವುದಿಲ್ಲ
ಕೆಚ್ಚೆದೆಯ ಕಲಿಗಳು
ಗಂಡೆದೆಯ ಗಂಡುಗಲಿಗಳು
ನಾವು ಜೈ ಭೀಮನ ಮಕ್ಕಳು
ನಾವು ಜೈ ಭೀಮನ ಸೈನಿಕರು

ಬಡವರ ಸ್ತ್ರೀ ಶೋಷಿತರ
ರಕ್ಷಣೆ ಏಳಿಗೆಯ ಸಹಿಸದ
ದುರುಳ ನೀಚರನ್ನು ಸದೆಬಡಿದು
ಸ್ನೇಹ ಪ್ರೀತಿ ಸಮಾನತೆ
ಸಹಬಾಳ್ವೆ ನಮ್ಮಉಸಿರೆಂದು
ಜೀವನ ಪೂರ್ತಿ ಬದುಕುವ
ನ್ಯಾಯ ನೀತಿಗೆ ಬೆಲೆ ಕೊಟ್ಟು
ತಲೆ ಬಾಗಿ ನಡೆಯುವ
ಬುದ್ಧನ ವಂಶಸ್ಥರು
ನಾಗ ಕುಲದವರು
ನಾವು ಜೈ ಭೀಮನ ಮಕ್ಕಳು
ನಾವು ಜೈ ಭೀಮನ ಸೈನಿಕರು

ಬುದ್ದನ ಧರ್ಮವೇ ನನ್ನ ಧರ್ಮ
ಸಂವಿಧಾನವೇ ನನ್ನ ಧರ್ಮ ಗ್ರಂಥ
ಜೈ ಭೀಮನೇ ನನ್ನ ಗುರು
ಜೈ ಭೀಮನೇ ನಮ್ಮ ಕುಲದೇವರು
ನಾವು ಜೈ ಭೀಮನ ಮಕ್ಕಳು
ನಾವು ಜೈ ಭೀಮನ ಸೈನಿಕರು

- ರಾಜು ಹಾಸನ

04 Nov 2020, 02:45 pm

ಪ್ರೇಮ ಗೀತೆ

ನನ್ನವಳು ನನ್ನವಳು ನನಗೆಲ್ಲ
ನೀನು ಕೊಟ್ಟ ಪ್ರೀತಿಯೇ ನನಗೆಲ್ಲ
ಸುಮ್ಮನಿರಲು ಬಿಡದು
ನೀ ಬಿಟ್ಟುಹೋದ ಈ ಹೃದಯ
ತಾಳಲಾರೇನು ಸಹಿಸಲಾರೇನು
ಮನಸಿನ ಕಸಿಬಿಸಿಯ
ನಿನ್ನ ಬಿಟ್ಟು ಒಂಟಿಯಾಗಿ
ಬದುಕಿ ಬಾಳುವ ಆಸೆ ನನಗಿಲ್ಲ
ಸನಿಹವೇ ಸುಳಿದಾಡುವ ಜವರಯನ
ಜೋತೆ ಹೋಗುವ ಆಸೆ ನನಗೆಲ್ಲ
ನನ್ನವಳು ನನ್ನವಳು ನನಗೆಲ್ಲ
ನೀನು ಕೊಟ್ಟ ಪ್ರೀತಿಯೇ ನನಗೆಲ್ಲ

ನಿನ್ನ ಮಾತುಗಳಿಲ್ಲದೆ
ಕಿವಿ ಕೇಳಿಸದ ಕಿವುಡನಾಗಿರುವೇ
ನಿನ್ನ ಮಾತುಗಳು ಕೇಳಿಸಿದರು
ಪದೇ ಪದೇ ಕೇಳುವ ಮನಸ್ಸು ನನಗೆಲ್ಲ
ನಿನ್ನ ಪ್ರತಿಬಿಂಬವಿಲ್ಲದೆ
ಕಣ್ಣು ಕಾಣಿಸದ ಕುರುಡನಾಗಿರುವೆ
ನಿನ್ನ ನೋಡಿ ಕಣ್ಣ್
ತುಂಬಿಕೊಳ್ಳುವ ಕನಸುಗಳೆ ನನಗೆಲ್ಲ
ನಿನ್ನ ನಗುವಿಲ್ಲದೆ ಮಾತು
ಬಾರದ ಮೂಗನಾಗಿರುವೇ
ನಿನ್ನ ನಗುವ ಕಂಡು ನಕ್ಕುನಲಿಯುವ
ಮುದ್ದಿನ ಅರಗಿಣಿ ನೀನೆ ನನಗೆಲ್ಲ
ನನ್ನವಳು ನನ್ನವಳು ನನಗೆಲ್ಲ
ನೀನು ಕೊಟ್ಟ ಪ್ರೀತಿಯೇ ನನಗೆಲ್ಲ

ನಿನ್ನ ಪ್ರೀತಿ ಇಲ್ಲದೆ
ಬರಿದಾಗಿದೆ ನನ್ನೆದೆಯ ಗೂಡು
ಬರಿದಾದ ಗೂಡಿಗೆ ನಿನ್ನ ಪ್ರೀತಿಯ
ಬೆಳಕೆ ದಾರಿದೀಪವು ನನಗೆಲ್ಲ
ಉಕ್ಕಿ ಹರಿಯುತವ ಮನಸ್ಸಿನ
ನೋವನು ಬಚ್ಚಿಡಲಾರೇನು
ನನ್ನವಳು ನನ್ನವಳು ನನಗೆಲ್ಲ
ನೀನು ಕೊಟ್ಟ ಪ್ರೀತಿಯೇ ನನಗೆಲ್ಲ

- ರಾಜು ಹಾಸನ

03 Nov 2020, 11:55 pm

ಪ್ರೇಮ ಲೋಕ

ಪ್ರೀತಿ ಮಾಡೋರೆಲ್ಲ
ಪ್ರೇಮಿಯಾಗುವರು
ಪ್ರೇಮಿಯಾದವರೆಲ್ಲ
ಸಂಸಾರಿಯಾಗುವರು
ಸಂಸಾರಿಯಾದವರೆಲ್ಲ
ಪ್ರೇಮ ಲೋಕ ಕಟ್ಟುವರು

- ರಾಜು ಹಾಸನ

03 Nov 2020, 07:57 am

ಸುಳ್ಳೆ ಸುಳ್ಳೋ

ಸುಳ್ಳೆ ಸುಳ್ಳೋ
ನಾನು ಸುಳ್ಳೋ ನೀನು ಸುಳ್ಳೋ
ಎಲ್ಲಾ ಸುಳ್ಳೇ ಸುಳ್ಳೋ
ಪ್ರೀತಿ ಪ್ರೇಮ ಅನ್ನೊದು
ಬರಿ ಸುಳ್ಳೆ ಸುಳ್ಳೋ
ನಾನು ಮಾಡಿದ ಪ್ರೀತಿ ಸುಳ್ಳೋ
ನೀನು ಕೊಟ್ಟ ಪ್ರೀತಿ ಸುಳ್ಳೋ
ನಾನು ಕಂಡ ಕನಸು ಸುಳ್ಳೋ
ನೀನು ಕಟ್ಟಿದ ಕನಸು ಸುಳ್ಳೋ
ಸುಳ್ಳೆ ಸುಳ್ಳೋ ಈ ಪ್ರೀತಿಯಲ್ಲಿ
ನಾನು ಸುಳ್ಳೋ ನೀನು ಸುಳ್ಳೋ
ಎಲ್ಲಾ ಸುಳ್ಳೇ ಸುಳ್ಳೋ

ನಾನು ಬರೆದ ಪ್ರೇಮ ಪತ್ರ ಸುಳ್ಳೋ
ನೀನು ಓದಿ ಬರೆದ ಪ್ರೇಮ ಪತ್ರ ಸುಳ್ಳೋ
ನಾನು ಆಡಿದ ಮಾತು ಸುಳ್ಳೋ
ನೀನು ಇಟ್ಟ ಹಣೆ ಮಾತು ಸುಳ್ಳೋ
ನಾನು ನಂಬಿದ ನೀನು ಸುಳ್ಳೋ
ನೀನು ನಂಬಿದ ನಾನು ಸುಳ್ಳೋ
ಸುಳ್ಳೆ ಸುಳ್ಳೋ ಈ ಪ್ರೀತಿಯಲ್ಲಿ
ನಾನು ಸುಳ್ಳೋ ನೀನು ಸುಳ್ಳೋ
ಎಲ್ಲಾ ಸುಳ್ಳೇ ಸುಳ್ಳೋ

ನಿನಗಾಗಿ ನಾನು ಅತ್ತಿದ್ದು ಸುಳ್ಳೋ
ನನಗಾಗಿ ನೀನು ಅತ್ತಿದ್ದು ಸುಳ್ಳೋ
ನಿನಗಾಗಿ ನಾನು ಬರುತ್ತಿದ್ದದ್ದು ಸುಳ್ಳೋ
ನನಗಾಗಿ ನೀನು ಕಾಯುತ್ತಿದ್ದದ್ದು ಸುಳ್ಳೋ
ಸುಳ್ಳೆ ಸುಳ್ಳೋ ಈ ಪ್ರೀತಿಯಲ್ಲಿ
ನಾನು ಸುಳ್ಳೋ ನೀನು ಸುಳ್ಳೋ
ಎಲ್ಲಾ ಸುಳ್ಳೇ ಸುಳ್ಳೋ

ನಾನು ಸುತ್ತಿ ಬೇಡಿದ್ದು ಸುಳ್ಳೋ
ನೀನು ಬೈದು ಬುದ್ಧಿ ಹೇಳಿದ್ದು ಸುಳ್ಳೋ
ನಿನಗಾಗಿ ನಾನು ಹುಟ್ಟಿದ್ದು ಸುಳ್ಳೋ
ನನಗಾಗಿ ನೀನು ಹುಟ್ಟಿದ್ದು ಸುಳ್ಳೋ
ನಾನು ಮಾಡಿದ ಮೋಸ ಸುಳ್ಳೋ
ನೀನು ಮಾಡಿದ ಮೋಸ ಸುಳ್ಳೋ
ಸುಳ್ಳೆ ಸುಳ್ಳೋ ಈ ಪ್ರೀತಿಯಲ್ಲಿ
ನಾನು ಸುಳ್ಳೋ ನೀನು ಸುಳ್ಳೋ
ಎಲ್ಲಾ ಸುಳ್ಳೇ ಸುಳ್ಳೋ

- ರಾಜು ಹಾಸನ

03 Nov 2020, 12:55 am

ಕರಿ ನೆರಳು

ದೇವರ ಬೈದರೆ
ಬರುವುದಂತೆ ಕರ್ಮ
ಸುತ್ತಿಕೊಳ್ಳುವುದಂತೆ
ಮೈ ತುಂಬಾ ಪಾಪ
ದಿನ ಬೆಳಗಾದರೆ
ಪೂಜಿಸಿ ಆರಾಧಿಸುವ
ಬಡ ಜನರಿಗೆಕ್ಕೆ
ಬಂದಿಲ್ಲಾ ಸಿರಿತನ
ಸುತ್ತಿಕೊಂಡಿರುವುದಯ್ಯ
ಬಡತನವೆಂಬ ವಿಷ ಸರ್ಪ
ಹಾಸಿಕೊಂಡಿರುವುದಯ್ಯ
ಮುಳ್ಳಿನ ಕರಿ ಕಂಬಳಿ
ಸುರಿಯುತ್ತಿರುವುದಯ್ಯ
ಕಣ್ಣೀರಿನ ಮಹಾಮಳೆ
ಹರಿಯುತ್ತಿರುವುದಯ್ಯ
ರಕ್ತ ಕಣ್ಣೀರಿನ ಹೊಳೆ
ಇದು ಯಾಕೆ ಹಿಂಗೇಕ್ಕಯ್ಯ
ನೀ ಹೇಳು ಓ ಮನುಜ

ಒಂದು ಮಾತು
ಒಂದು ದಿನವೂ
ಒಂದು ಕ್ಷಣವೂ
ದೇವರ ಬೈಯದ
ಮೂಕ ಪ್ರಾಣಿಗಳ
ಮಾತು ಕಿತ್ತುಕೊಂಡವನು
ಯಾರಯ್ಯ ಯಾಕಯ್ಯ
ಮೂಕ ಪ್ರಾಣಿಗಳು ಮಾಡಿದ
ತಪ್ಪಾದರೂ ಏನಯ್ಯ
ಯಾವ ಪಾಪ ಪುಣ್ಯದ
ಅರಿವಿಲ್ಲದ ಮೂಕ
ಪ್ರಾಣಿಗಳಿಗೆಕ್ಕಯ್ಯ ಈ ಶಿಕ್ಷೆ
ಎಲ್ಲ ನಮ್ಮ ನಮ್ಮ
ಕನಸಿನ ಭ್ರಮೆ ಅಷ್ಟೆ
ನೀ ತಿಳಿಯಯ್ಯ
ಓ ಮನುಜ ವಿಶ್ವ ಮನುಜ

********ರಾಜು ಹಾಸನ********

- ರಾಜು ಹಾಸನ

02 Nov 2020, 03:21 pm

ಗಿರ್ಗಿಟ್ಲೆ

ಸುಮ್ಮನೆ ಇದ್ದ ಜನರ
ಕಾಲು ಕೆರೆದು ಕೆಣಕಿದರೆ
ಬಿಡರಯ್ಯ ಎಡಬಿಡದೆ
ಕೆಚ್ಚಿಬಿಡುವರಯ್ಯ

ಕರಿ ನಾಗರವ
ಹಿಡಿದು ಮುಟ್ಟಿದರೆ
ಕಚ್ಚದೆ ಮುತ್ತಿಡುವುದೇ
ಮುತ್ತಿಟ್ಟ ಘಳಿಗೆಯಲ್ಲಿ
ಹಾರಿ ಹೋಗದಿರುವುದೇ
ನಮ್ಮ ಪ್ರಾಣ ಪಕ್ಷಿ

ಇಲ್ಲೊಬ್ಬ ಇರುವನಯ್ಯ
ಚಿತ್ರ ವಿಚಿತ್ರವಾದ ಮನುಷ್ಯ
ಕರಿ ನಾಗರವ ಹಿಡಿದು
ತನ್ನ ಕೊರಳು ಹೊಟ್ಟೆಯ ಸುತ್ತ
ಸುತ್ತಿಕೊಂಡಿರುವ
ದೇವಾನು ದೇವರಯ್ಯ

ಕೊರಳಿಗೆ ಸುತ್ತಿಕೊಳ್ಳಲು
ಅದೇನು ಬಂಗಾರ ಒಡವೆಯೇ
ಇಲ್ಲ ಸೊಂಟಕ್ಕೆ
ಸುತ್ತಿ ಕೊಳ್ಳಲು ಬೆಳ್ಳಿ ಉಡ್ದರವೇ

ಯಾಕ್ಕೊ ಏನೋ ಹಿಂಗೇ
ಸುಳ್ಳಿನ ಸರ ಮಾಲೆ ಎಣೆದು
ಮುಗ್ಧ ಜನರ ತಲೆಗೆ ಸುತ್ತಿ
ಗಿರ್ಗಿಟ್ಲೆ ಆಡಿಸುತ್ತಿರುವವನು
ಯಾವನೋ ಯಾರೋ
ನನಗೆ ಗೊತ್ತಿಲ್ಲ ಆ ಆದಾಮನು

- ರಾಜು ಹಾಸನ

02 Nov 2020, 02:45 pm