Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹುಟ್ಟು ಹಬ್ಬ

ಸುಂದರ ಮನಸ್ಸಿನ
ಮುದ್ದು ಹುಡುಗಿ
ಮುದ್ದು ಹೃದಯಾದ
ನನ್ನ ಬಾಳ ಸಂಗಾತಿ
ನಗು ನಗುತ್ತಾ ಇರಲಿ
ಚಿರ ಕಾಲ ಬೆಳ್ಳಿ ಮೋಡಗಳ
ಚುಕ್ಕಿ ತಾರೆಯಂತೆ
ಹರುಷವಿರಲಿ ಸಾದಾ ಕಾಲ
ಆಗಸದ ಹಕ್ಕಿಯಂತೆ
ಬದುಕು ಬಂಗಾರವಾಗಿರಲಿ
ವರುಷಗಳು ಉರುಳಿದರು
ಸಂತೋಷ ತುಂಬಿರಲೆಂದು
ಹೃತ್ಪೂರ್ವಕ ಹುಟ್ಟು ಹಬ್ಬದ
ಶುಭಾಷಯ ಕೋರುವ
ಇಂತಿ ನಿನ್ನ ಗೆಳಯ

- ರಾಜು ಹಾಸನ

10 Oct 2020, 11:24 pm

ಕಿರು ನಗೆಯಲಿ

ನನ್ನದೆ ಜೀವನದಲಿ ನಿನ್ನಯ ಒಡನಾಟ
ನರ್ತಿಸಿ ನಾಚಿಸುವ ನವಿಲಿನ ನಿನ್ನ ಮೈಮಾಟ
ಕಂಡೆ ನಿನ್ನ ಕೀರು ನಗೆಯ ಕಳ್ಳ ನೋಟ
ಕಾಯ್ದಿರಿಸಲಿ ಮಿಡಿಯುವ ನನ್ನ ಹೃದಯಕೆ
ನುಡಿಸು ಬಾ ಹೂ ಬಾಣ ತಂತಿಯ ಮಿಟಿ

- Wishu@

10 Oct 2020, 08:03 pm

ಮಾನವ 2020

ಕಾಡು ಕಡೆದು ನಾಡು ಬೆಳಸಿದೆ
ನಾಡ ನುಡಿಗಳ ದೂರಸರಿಸಿದೆ
ದಾರಿ ದಾರಿಗು ದೀಪ ವಿರಿಸಿದೆ
ನೀನ್ ಕತ್ತಲಲ್ಲಿ ಮುಳುಗಿದಲ್ಲ //

ಬೆಟ್ಟ ಗುಡ್ಡಗಳ ಅಗೆದು ಬಗೆದೆ
ಹಳ್ಳಕೊಳ್ಳಗಳನ್ನ ಮುಚ್ಚಿಬಿಟ್ಟೆ
ಹರಿವ ನದಿಗೆ ಅಡ್ಡ ಗೋಡೆ ಕಟ್ಟಿ
ಮರವ ಕಡಿದು ಕಲ್ಲುಗಳನು ನೆಟ್ಟೆ //

ಕಾಲಯಮನು ಕೆರಳಿದನೆಂದು
ಹೊಸದೊಂದು ಕಥೆಯಕಟ್ಟಿ
ಮಳೆ ಬೆಳೆಯು ಬತ್ತಿ ಹೋಗಲು
ದೇವರೆಡೆಗೆ ಹೊರಳಿ ಉಳನ್ನಿಟ್ಟೆ //

ಕ್ಷಣಿಕ ಸುಖಕ್ಕೆ ಧನಿಕರಿಗೆ ನಿನ್ನ
ಸಂತಸದ ಪಯಣ ಮಾರಿಬಿಟ್ಟೆ
ಅಯ್ಯೋ ನಾನು ತಪ್ಪು ಮಾಡ್ದೆ
ಎಂದು ನರಳಿ ಪ್ರಾಣವ ಬಿಟ್ಟೆ //

ಮಾನವ ಮಾನವ ಎಚ್ಚರ ಎಚ್ಚರ
ಸಾಕುಮಾಡು ಪ್ರಕೃತಿಯ ನಾಶ
ಕೆರಳಿನಿಂತರೆ ನಡೆವುದು ಅವಾಂತರ
ನೀನೆಲ್ಲಿ ಓಡುವೆ ಆಗ ದೇಶಾಂತರ //

ಕಲ್ಮೇಶ ಬಡಿಗೇರ
9743539657
......ಬಾದಾಮಿ......

- Kalmesh Badiger

10 Oct 2020, 05:39 pm

ತಾಯಿ ದೇವರು

ದುಡಿಯುತಲಿ ದುಃಖವನೆಲ್ಲ ನುಂಗಿ
ಹಾಲುಣಿಸಿ ಕರುಳ ಬಳ್ಳಿಯ ಕುಡಿಗೆ
ಸುತ್ತಿಗೆಯಲಿ ಹಿಡಿಗಲ್ಲು ಪುಡಿಮಾಡಿ
ದಣಿದು ಕುಂತಳು ತಾಯಿ ದೇವರಂತೆ //

ಅರೆಹೊಟ್ಟೆ ಅರೆಬಟ್ಟೆ ಬಿರುಬಿಸಿಲು
ಸುಳಿ ಗಾಳಿ ಚಳಿ ಗೆ ಅಂಜದೆ ತಾಯಿ
ಗುಡುಗು ಸಿಡಿಲು ಮಳೆ ಆರ್ಭಟ ಮೆಟ್ಟಿ
ಮಕ್ಕಳಿಗೆ ಸಲುಹಿದಳು ಮಹಾ ತಾಯಿ //

ಪಡಿಕಲ್ಲುಗಳ ಪುಡಿ ಗುಟ್ಟುತಾ ತಾಯಿ
ಹಸಿವ ನೀಗಿಸಿ ಹೊಸ ಜಗವ ಕಟ್ಟಿದೆ
ಹುಸಿ ಮಾತನಾಡದೆ ಹಸಿ ಕೂಸು ಎತ್ತಿ
ಕರುಣೆ ಮಮತೆಯಲಿ ತೇಲಿಸಿದೆ ತಾಯಿ //


ಕಷ್ಟದಲ್ಲು ಕಲ್ಪವಕ್ಷ ವಾದೆ ಜಗದಲ್ಲಿ
ಅಷ್ಟ ದಿಕ್ಕಿನಲ್ಲು ತಾಯಿ ದೇವರಾದೆ
ಸೃಷ್ಠಿಯಲ್ಲಿ ತಾಯಿಗಿಂತ ದೇವರಿಲ್ಲ
ವೆಂದು ಧರೆಗೆ ಸಾರಿ ಸಾರಿ ಹೇಳಿದಲ್ಲ //

ನಿನ್ನ ಒಡಲ ಕರುಳ ಕುಡಿಯ ಕಂದ
ಅಮ್ಮಾ ಎನಲು ಅಂದ ಮಹಾನಂದ
ದಣಿವು ಮರೆಸಿ ದುಃಖ ವನ್ನ ದೂಡಿ
ನಗುವ ತಾಯಿ ನಿನಗೆ ಕೋಟಿ ಶರಣು //

ಕಲ್ಮೇಶ ಬಡಿಗೇರ
9743539657
......ಬಾದಾಮಿ......

- Kalmesh Badiger

10 Oct 2020, 05:16 pm

ಜಂಬವೇಕೆ

ನಾನು ನನ್ನದೆಂದು
ಕಿತ್ತಾಡಿ ಹೊಡೆದಾಡುವ ಜನ
ಮನೆ ಮೇಲೆ ಮನೆ ಕಟ್ಟಿ
ಹಣದ ಮೇಲೆ ಹಣ ಸಂಪಾದಿಸಿ
ಸಂಪತ್ತಿನ ಮೇಲೆ ಸಂಪತ್ತು
ಕೂಡಿಟ್ಟು ಬಚ್ಚಿಟ್ಟರೇನು ಬಂತು
ತಂದೆ ತಾಯಿ ಕೊಟ್ಟ ಜೀವ
ಪ್ರಾಣ ಭಿಕ್ಷೆಯಾಗಿರುವಾಗ
ಪ್ರಕೃತಿ ಕೊಟ್ಟ ಸಿರಿ ಸಂಪತ್ತು
ನಮ್ಮದಲ್ಲದಿರುವಾಗ ಜಂಬವೇಕೆ
ರೈತ ಬೆಳೆದ ಅನ್ನ ತಿಂದು ಬದುಕುವ
ನಾವು ನನ್ನದೆಂದು ನಮ್ಮದೆಂದು
ಹೇಳುವ ಗರ್ವವು ನಮಗಿಲ್ಲ
ಏನೇ ಆದರೂ ಏನೇ ಇದ್ದರೂ
ಮಣ್ಣಲ್ಲಿ ಮಣ್ಣಾಗಿ ಹೋಗುವುದನ್ನ
ಯಾರಿಂದಲೂ ತಪ್ಪಿಸಲಾಗದು

- ರಾಜು ಹಾಸನ

10 Oct 2020, 03:45 pm

ಏನಿದೇ

ಮನೆ ಮೇಲೆ ಮನೆ
ಸಂಪತ್ತಿನ ಮೇಲೆ ಸಂಪತ್ತು
ಹಣದ ಮೇಲೆ ಹಣ
ಏನಿದ್ದರೇನು ಬಂತು
ತಂದೆ ತಾಯಿ
ಕೊಟ್ಟ ಜೀವ ಜೀವನ
ರೈತ ಬೆಳೆದ ಅನ್ನ
ತಿಂದು ಬದುಕು ನಾವು
ನಮ್ಮದೇನ್ನುವುದು ಏನಿದೆ

- ರಾಜು ಹಾಸನ

10 Oct 2020, 02:56 pm

ಶುಭಾಷಯಗಳು

ಸುಮಧುರ ಸುಂದರ
ಮನಸ್ಸುಗಳ ಸಂಗಮ
ಹೃದಯ ಹೃದಯಗಳ
ಮಿಲನ ಸಂಮಿಲನ
ಪ್ರೀತಿ ಪ್ರೇಮದ
‌ ಬೆಳ್ಳಕ್ಕಿ ಜೋಡಿ
ಜನುಮ ಜನುಮದ
ಅನುಬಂಧದ ಜೋಡಿ
ನವ ನವೀನ
ಮದುಮಕ್ಕಳ ನವ ಜೋಡಿ
ನಗು ನಗುತಾ
ಸುಖವಾಗಿ ಬಾಳಲಿ
ನೂರಾರು ಕಾಲ

- ರಾಜು ಹಾಸನ

10 Oct 2020, 02:35 pm

ನಂಬಿಕೆ ಇಲ್ಲದ ಮೇಲೆ

ನಂಬಿಕೆ ಇಲ್ಲದ ಮೇಲೆ
ಹೂವು ಹಾವಾದಂತೆ
ಅಮೃತವು ವಿಷವಾದಂತೆ
ಬದುಕಿದ್ದು ಸತ್ತಂತೆ

ಜೀವಕ್ಕೆ ಜೀವ ಎಂದು
ನಂಬಿಬಂದೆ ನಾನಂದು
ಅಗ್ನಿಸಾಕ್ಷಿಯಾಗಿ ನುಡಿದೆ ನೀ
ನಂಬಿಕೆಗೆ ನಾನೆ ನೆಂಟನೆಂದು

ಉಸಿರು ನಿಲ್ಲುವ ಮುನ್ನ
ಹೆಸರುಳಿಸುವ ಬಯಕೆ ನನ್ನದು
ಹೆಸರಳಿಸಿ ಉಸಿರಾಡುವ
ಹಾದಿಯಲ್ಲಿ ಸಾಗಿಹೆ ನೀನಿಂದು

ಅಂತರಂಗದ ಅರಿವಿಲ್ಲದೆ
ಅಂಧಕಾರದ ದಾರಿಯಲ್ಲಿ
ನಂಬಿದವರ ಮಣ್ಣಾಗಿಸಿ
ಮಸಣದಲ್ಲಿ ಮಲಗಿಹೆ ಇಂದು




ಶಾರದ

- ಶಕುಂತಲಾ

10 Oct 2020, 06:40 am

ಚಿರ ಋಣಿ

ಸುಖವೆಂದರೆ ಓಡಿ ಬರುವ ಮಾನವ
ಕಷ್ಟವೆಂದರೆ ಓಡಿ ಹೋಗುವ ಮನುಜ
ಕಷ್ಟ ಸುಖ ನೋವು ನಲಿವು
ಏನೇ ಬಂದರೂ ಓಡಿಹೋಗದೆ
ಧೈರ್ಯದಿಂದ ಓಡಿ ಬಂದು
ಹೆಗಲಿಗೆ ಹೆಗಲು ಕೊಟ್ಟು ಕಾಯುವ
ಕರುಣಮಹಿ ತಂದೆ ತಾಯಿಗೆ
ಸಾದಾ ಕಾಲ ನಾ ಚಿರ ಋಣಿ

- ರಾಜು ಹಾಸನ

09 Oct 2020, 11:33 pm

ಓಡುವರಯ್ಯ

ಆ ದೇವರಿಗೆ ಈ ದೇವರಿಗೆ
ಆ ಹರಕೆ ಈ ಹರಕೆಯೆಂದು
ಮಾಡಿಡುವರಯ್ಯ ಎಡೆಯೂಟ
ಕುರಿ ಕೋಳಿ ಕತ್ತರಿಸಿ
ತನ್ನನ್ನು ತಾನು ಕತ್ತರಿಸಿ
ಎಡೆಯೂಟ ಮಾಡಿರಿ ಎಂದರೆ
ಓಡುವರಯ್ಯ ಬಿದ್ದ್ನೋ ಎದ್ದ್ನೋ
ಎಂದು ಕೈಗೆ ಸಿಗದಂತೆ
ಪ್ರಾಣಿ ಮಾಂಸ ಕಂಡರೆ
ಜೊಲ್ಲು ಸುರಿಸುವ ಮಾನವ
ತನ್ನ ಬೆರಳು ತಾನೇ ಕತ್ತರಿಸಿ
ತಿನ್ನೆಂದರೆ ಮಾತು ಬಾರದ
ಮೂಕನಾಗುವನಯ್ಯ

- ರಾಜು ಹಾಸನ

09 Oct 2020, 06:22 pm