Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅಂಗವಿಕಲ

ದೇವರೇ ಜನರ ಜೀವ
ಕಿತ್ತುಕೊಳ್ಳುವ ದುಷ್ಟನಗಿರುವಾಗ
ಜನರು ದುಷ್ಟರಂತೆ
ವರ್ತಿಸುವುದರಲ್ಲಿ ತಪ್ಪೇನಿದೆ
ಅಂಗವಿಕಲರೆಂದು
ಹಿಯಾಳಿಸಿ ಜರಿಯ ಬೇಡ
ನೀ ದೇವರೆಂದು ಪೂಜಿಸುವ
ದೇವರು ಕೂಡ ಅಂಗವಿಕಲನಯ್ಯ
ಅಂಗವಿಕಲರ ಜರಿದರೆ
ನೀ ದೇವರನ್ನ ಜರಿದಂತೆ ಮನುಜ

ಒಂದೇ ದೇಹಕ್ಕೆ
ಹತ್ತಾರು ತಲೆ ಕೈಗಳು ಮಾತ್ರ
ಇರುವುದಯ್ಯ ದೇವರಿಗೆ
ಹತ್ತಾರು ಕಾಲು ಕಣ್ಣುಗಳು
ಇಲ್ಲದ ಅಂಗವಿಕಲನಯ್ಯ
ಈ ನಿಮ್ಮ ದೇವರಯ್ಯ
ದೇವರಿಗೆ ಯಾಕೆ ಬೇಕಯ್ಯ
ಹತ್ತಾರು ತಲೆ ಕೈ ಕಾಲುಗಳು
ತಲೆ ಕೈ ಕಾಲು ಇಲ್ಲದವರಿಗೆ
ತನ್ನ ತಲೆ ಕೈ ಕಾಲು ಕಣ್ಣು ಕೊಟ್ಟು
ಕಾಯಲಾರದಷ್ಟು ಸ್ವಾರ್ಥಿಯೇ
ನಿಮ್ಮ ಅಂಗವಿಕಲ ದೇವರಯ್ಯ

- ರಾಜು ಹಾಸನ

02 Nov 2020, 01:33 am

ಕನ್ನಡ ನಾಡು

ಚಂದವೋ ಚಂದವೋ ನನ್ನೆಯ ನಾಡು
ನಾ ಹುಟ್ಟಿ ಬೆಳೆದ ನನ್ನ ತಾಯಿ ನಾಡು
ಜನರ ಜೀವ ನದಿ ಹುಟ್ಟಿ ಹರಿಯುವ
ಕಾವೇರಿ ತಾಯಿಯ ತವರೂರು
ಅಣ್ಣ ಬಸವಣ್ಣ ಅಕ್ಕ ಮಹಾದೇವಿ
ಮಡಿವಾಳ ಮಾಚಯ್ಯ ಮದಿಗಾರ ಚೆನ್ನಯ
ಅಂಬಿಗರ ಚೌಡಯ್ಯ ಕನಕದಾಸರು
ಪುರಂದರದಾಸರು ಶರಣ ಸಂತರ ಕರುನಾಡು
ರಾಜ ಮಹಾರಾಜರ ಬೀಡು
ಕೃಷ್ಣರಾಜ ಒಡೆಯರ ಬಂಗಾರದ ನಾಡು
ಟಿಪ್ಪು ಸುಲ್ತಾನ್ ವೀರ ಮದಕರಿ
ಶೂರ ಧೀರರ ಕೆಚ್ಚೆದೆಯ ಗಂಡುಗಲಿಗಳ ನಾಡು
ಒನಕೆ ಓಬವ್ವ ಕಿತ್ತೂರ ರಾಣಿ ಚನ್ನಮ್ಮ
ರಾಣಿ ಅಬ್ಬಕ್ಕ ವೀರ ವನಿತೆಯರ ತವರೂರು
ಗಾನ ಕೋಗಿಲೆಗಳ ಸಂಗೀತದ ಸೂರು
ಚೆಲುವು ತುಂಬಿದ ಶ್ರೀಗಂಧದ ನಾಡು
ನಮ್ಮ ಚೆಲುವ ಕನ್ನಡ ನಾಡು
ನಮ್ಮ ನಾಡು ನುಡಿ ನಮ್ಮ ಕರುನಾಡು ಕನ್ನಡ
ನಮ್ಮ ನೆಲ ಜಲ ಜನ ಭಾಷೆ
ನಮ್ಮ ಉಸಿರು ನಮ್ಮ ಜೀವನ ನಮ್ಮ ಬದುಕು
ಚಂದವೋ ಚಂದವೋ ನನ್ನೆಯ ನಾಡು

- ರಾಜು ಹಾಸನ

02 Nov 2020, 12:27 am

ಸತ್ಯದ ತೂಕ ಬಾರ

ಮನುಷ್ಯನ
ರುಂಡ ಮುಂಡವ ಕತ್ತರಿಸಿ ತಂದು
ಸತ್ತವನ ಹೆಣಕ್ಕೆ ಇಟ್ಟರು
ಮತ್ತೆ ಮರಳಿ ಬಾರದಯ್ಯಾ
ಬಡಪಾಯಿ ಜೀವಾ
ಆನೆಯ ರುಂಡವ ಕತ್ತರಿಸಿ ತಂದು
ಮನುಷ್ಯನ ದೇಹಕ್ಕೆ ಇಟ್ಟು
ಹೋದ ಜೀವವ ಮತ್ತೆ ತುಂಬಿದನಂತೆ
ಇವನ್ಯಾರೋ ಇವನ್ಯಾರೋ
ಚಂಡ ಪ್ರಚಂಡನೇ ಇರಬೇಕು

ನಾಯಿ ತಲೆಯ ಕತ್ತರಿಸಿ
ಕೋಳಿ ಮುಂಡಕ್ಕೆ ಇಟ್ಟರೇ
ಬದುಕುಳಿಯುವುದೇ
ಸತ್ತ ಕೋಳಿ ಬದುಕಿ ಕೂಗುವುದೇ
ಕೋಕೋ ಕೋಳಿ
ದೇವರು ಇರುವನೆಂದು ಕಟ್ಟು ಕಥೆ
ಬರೆದವನು ನಿಜವಾಗಿಯೂ
ಚಂಡರಿಗೆ ಚಂಡ ಪ್ರಚಂಡ ಮಹಾ
ಪ್ರಚಂಡನೇ ಆಗಿರಬೇಕಯ್ಯ
ಅರ್ಥ ಮಾಡಿಕೊಂಡವರಿಗೆ
ಅರ್ಥವಾಗುವುದಯ್ಯ
ಸುಳ್ಳಿನ ಗುಟ್ಟು ಸತ್ಯದ ಬೆಲೆ
********ರಾಜು ಹಾಸನ*********

- ರಾಜು ಹಾಸನ

01 Nov 2020, 12:13 am

ಮುಗ್ದ ಜನ

ನನ್ನ ಜನ ಒಳ್ಳೆ ಜನ
ತಳುಕು ಬಳುಕು ಇಲ್ಲದ ಮುಗ್ದ ಜನ
ಕಲ್ಲು ಕಂಡರೆ ಕೈ ಮುಗಿಯುವರು
ಖಾವಿ ಕಂಡರೆ ಕಾಲಿಗೆ ಬೀಳುವರು
ಕಲ್ಲ ನಾಗರ ಕಂಡರೆ ಹೇದರುವುದಿಲ್ಲ
ನಿಜ ನಗರ ಕಂಡರೆ ಬೆಚ್ಚಬೀಳುವರು
ನನ್ನ ಜನ ಒಳ್ಳೆ ಜನ
ತಳುಕು ಬಳುಕು ಇಲ್ಲದ ಮುಗ್ದ ಜನ
ದುಡ್ಡು ಕಂಡರೆ ಬಿಡುವುದಿಲ್ಲ
ಹೆಂಡ ಕಂಡರೆ ಹಿಗ್ಗಿಬಿಡುವರು
ಸಿಹಿ ಕಂಡರೆ ಮುತ್ತುಕೋಳ್ಳುವರು
ಖಂಡ ತುಂಡು ಕಂಡರೆ ನುಂಗಿಕೊಳ್ಳುವರು
ನನ್ನ ಜನ ಒಳ್ಳೆ ಜನ
ತಳುಕು ಬಳುಕು ಇಲ್ಲದ ಮುಗ್ದ ಜನ

- ರಾಜು ಹಾಸನ

31 Oct 2020, 02:42 pm

ಕನಸುಗಾರ

ಕಾಣದ ಗೆಳತಿಯೇ ಕೇಳೆ
ನಾ ನಿನಗಾಗಿ ಬರೆದಿರುವೆ
ಒಂದು ಓಲೆ
ಕಾಣೆ ಎಂಬ ಕಾರಣಕ್ಕೆ
ನೀ ಮರೆಯದಿರು ನನ್ನ
ಪ್ರತಿ ಉಸಿರಲು ನಾ ನಿನ್ನ
ನೆನೆಯುವೆ
ಈ ಕಾಲಿ ಹೃದಯದಲಿ ನಿನಗಾಗಿ
ಕಟ್ಟಿರುವೆ ಒಂದು ಚಿಕ್ಕ ಮನೆಯ
ದಯಮಾಡಿ ನೀ ಬಂದು ಸೇರು
ನನ್ನ ಈ ಮನದ ಮನೆಯ.

..................arts by kiru

- Kiran kumar

31 Oct 2020, 01:56 pm

ನಲ್ಲೆ ನಲ್ಲೆ

ಓ ನನ್ನ ನಲ್ಲೆ
ನೀ ನಗಬೇಡವೇ
ಮೆಲ್ಲ ಮೆಲ್ಲಗೆ
ಆಗುವುದು ಪ್ರೀತಿ
ನಿನ್ನ ಮೇಲೆ ಮೇಲೆ
ನೀ ಹಾಂಗೇ ತಿರು
ತಿರುಗಿ ನೋಡಿ
ನೆಡೆಯಬೇಡವೇ
ನಾ ತಿರು ತಿರುಗಿ
ಬೀಳುವೆನು ಇಲ್ಲೆ ಇಲ್ಲೆ

- ರಾಜು ಹಾಸನ

31 Oct 2020, 12:29 am

....

ನಗುವ ಮೊಗವು ಒಂದಾದರೆ ಅದರೊಳಗಿನ ಅರ್ಥವೇ ಇನೊಂದಾಗಿರುವುದು. ಮೌನಕ್ಕೆ ಸಾವಿರಾರು ಅರ್ಥಗಳಿಹುವುದು ಆದ್ರೂ ಮೌನದ ಮಾತನ್ನು ಅರಿತವರಿಗಷ್ಟೇ ಅದರ ಅರ್ಥ ತಿಳಿಯುವುದು ಅಲ್ವಾ? ಮಾತನಾಡುವ ನಾಲಿಗೆಗೆ ಇರೋ ಬೆಲೆ ಮನುಷ್ಯನ ಮನಸಿಗಿಲ್ಲ..

- Acchu love

30 Oct 2020, 11:51 pm

ನಾ ಎಲ್ಲೂ ಕಾಣೆ ಎಲ್ಲೂ ಕಾಣೆನು

ಸುಮ್ಮನೆ ಕುಂತಿದ್ದರು
ಬಿಡಲಿಲ್ಲ ಎಳೆದು ತಂದು
ಕುಕ್ಕುರು ಬಡಿಸಿ
ಗುಡಿಯ ಮೇಲೆ ಗುಡಿ ಕಟ್ಟಿ
ಪೂಜಿಸಿದರಯ್ಯ
ಈ ಮೂರ್ಖ ಜನರು
ನಾ ಎಲ್ಲೂ ಕಾಣೆ
ಎಲ್ಲೂ ಕಾಣೆನು

ನಾ ಕರೆದು ಹೇಳಲು ಇಲ್ಲ
ನಾ ಹೋಗಿ ಕೇಳಲು ಇಲ್ಲ
ತಮಗೆ ತಾವೆ ಬಂದು
ಬಾಯಿ ತುಂಬಾ ಹೊಗಳಿ
ಬಾಯಿಗೆ ಬಂದಂತೆ
ಸುಮ್ಮ ಸುಮ್ಮನೇ
ಬೈಯುವರಯ್ಯ
ಈ ಬಾಯಿ ಬಡುಕ ಜನರು
ಇದು ಯಾವ ಧರ್ಮವೂ
ನನಗೆ ಒದಗಿದ ಕರ್ಮವೋ
ನಾ ಎಲ್ಲೂ ಕಾಣೆ
ಎಲ್ಲೂ ಕಾಣೆನು

ಕೇಳಿದ್ದನ್ನು ಕೊಡಲು
ನಾನೇನು ಜಾದೂಗಾರನಲ್ಲ
ನಾನೊಂದು ಜೀವವಿಲ್ಲದ
ಮರದ ಕಲ್ಲಿನ ಗೊಂಬೆ
ಮಣ್ಣಿನ ಮುದ್ದೆ ನಾನಯ್ಯ
ನನ್ನನ್ನೆ ದೇವರೆಂದು
ಪೂಜಿಸುವರಯ್ಯ
ಈ ದಂಡ ಪಿಂಡ ಜನರು
ನಾ ಎಲ್ಲೂ ಕಾಣೆ
ಎಲ್ಲೂ ಕಾಣೆನು

- ರಾಜು ಹಾಸನ

30 Oct 2020, 10:34 pm

ಜಾಣ ಕುರುಡು

ನೋಡಲು ಕಣ್ಣಿಲ್ಲ
ತಿನ್ನಲು ಬಾಯಿಲ್ಲ
ಕೇಳಲು ಕಿವಿ ಇಲ್ಲದ
ಕಲ್ಲ ಸುತ್ತ ಸುತ್ತುವೆಕ್ಕೆ
ಸುತ್ತವ ಮನಸಿದ್ದರೆ
ಸುತ್ತು ನೆಗಿಲ ಹಿಂದೆ
ತುಂಬಿಕೊಳ್ಳುವುದು
ನಿನ್ನ ಹಸಿದ ಜೋಳಿಗೆ

ಜೀವವಿಲ್ಲದ ಕಲ್ಲಿನ ಮೇಲೆ
ಹಾಲು ತುಪ್ಪವ ಸುರಿದು
ಕಲ್ಲಿನ ಮುಂದೆ
ಅನ್ನದ ಎಡೆಯಿಟ್ಟು
ಸುಮ್ಮನೆ ವ್ಯರ್ಥ
ಮಾಡುವ ಬದಲು
ಹಸಿದವನಿಗೆ ಕೊಟ್ಟರೆ
ದೊರಕುವುದಯ್ಯ ಮುಕುತಿ

ಪ್ರಾಣಿ ಪಕ್ಷಿಗಳಿಗೆ
ಇಲ್ಲ ಒಂದು ಹೆಸರು
ಕಾಡು ಕಲ್ಲಿಗೆ ಇರುವುದು
ನೂರೆಂಟು ಹೆಸರು
ನಮಗೆ ಹೆಸರಿಡುವುದಿಲ್ಲ
ನಾವೇ ಹೆಸರಿಡುವೆವು
ತರ ತರವಾದ ಹೆಸರು
ಬಂಡೆ ಕಲ್ಲಿನ ಮೂರ್ತಿಗೆ

ಜಾಣನಿಗೆ ಜಾಣನಲ್ಲ
ದಡ್ಡನಿಗೆ ದಡ್ಡನಲ್ಲ
ಮೂಢರಲ್ಲಿ ಮೂಢನಯ್ಯ
ಈ ಮೂರ್ಖ ಮನುಜ

- ರಾಜು ಹಾಸನ

30 Oct 2020, 05:55 pm

ಗೆಳತಿಯ ಹುಟ್ಟು ಹಬ್ಬ

ಗೊಂಬೆ ಗೊಂಬೆ
ಮುದ್ದು ಗೊಂಬೆ
ನಡೆದಾಡುವ
ದಂತದ ಗೊಂಬೆ
ಬಳುಕುವ
ವೈಯ್ಯಾರದ ಗೊಂಬೆ
ಝಳ್ ಝಳ್
ಕಾಲ್ಗೆಜ್ಜೆಯ ಕಟ್ಟಿ
ಕಳ್ಳಿ ಮಳ್ಳಿ
ಹೆಜ್ಜೆಯನ್ನು ಇಡುವ
ನನ್ನ ಜನುಮ
ಜನುಮದ ಗೆಳತಿ
ಅನುಬಂಧದ ಒಡತಿ
ನನ್ನ ಕನಸಿನ ರಾಣಿ
ಮನಸಿನ ಮಹಾರಾಣಿ
ನಾ ಹಾರೈಸುವೆನು ನಿನಗೆ
ತುಂಬು ಹೃದಯಾದಿ
ಜನ್ಮ ದಿನದ ಹಾರ್ದಿಕ
ಶುಭಾಶಯಗಳು
ಇಂತಿ ನಿನ್ನ ನಲ್ಲ ಮಲ್ಲ

- ರಾಜು ಹಾಸನ

30 Oct 2020, 02:21 pm