Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಾಮಕರಣ

ಕಿಲಕಿಲನೆ ನಗುವ
ಹಾಲುಗೆನ್ನೆ ಚಂದಿರನ
ಹವಳದ ತುಟಿಗೆ
ಬೆಣ್ಣೆ ತುಪ್ಪವ ಸವರಿ
ಬೆಳ್ಳಿ ಬಟ್ಟಲ
ನೊರೆ ಹಾಲುಣಿಸಿ
ಮುದ್ದಿಸಿ ಮುತ್ತಿಟ್ಟು
ಹಾರೈಸಿ ಬನ್ನಿರಿ
ನನ್ನ ಮುದ್ದು ಕಂದಮ್ಮನ
ನನ್ನ ಬಂಧು ಮಿತ್ರರೇ
*******ರಾಜು ಹಾಸನ******

- ರಾಜು ಹಾಸನ

30 Oct 2020, 01:21 pm

ದಾಸ

ಜೀವವಿಲ್ಲದ
ಮಾತು ಬಾರದ ನಾನು
ನನ್ನ ಪಾಡಿಗೆ ನಾ ಬಿದ್ದಿದೆ
ಚಳಿ ಗಾಳಿ ಮಳೆ ಎನ್ನದೇ
ಬಿಸಿಲು ಬೆಂಕಿ ಕಾಯುತ್ತಾ
ಹೋತು ಕೊಂಡು ಬಂದರೆ
ನಾನೇನು ಮಾಡಲ್ಲಯ್ಯ
ದಾಸ ಓ ದಾಸ

ದಬದಬನೆ ತಣ್ಣೀರು ಸುರಿದು
ಹಾಲು ತುಪ್ಪದ ಹೋಳಿಗೆ ಇಟ್ಟು
ಬಣ್ಣ ಬಣ್ಣದ ಬೊಟ್ಟಿಟು
ತುಂಡು ಬಟ್ಟೆಯ ಸುತ್ತಿ
ಹೊವಿನ ಎಸಳು ಎರಚಿ
ಗುಡಿಯಲ್ಲಿಟ್ಟು ಪೂಜಿಸಿದರೆ
ನಾನೇನು ಹೇಳಲ್ಲಯ್ಯ
ದಾಸ ಓ ದಾಸ

ದಿನ ಬೆಳಗಾದರೆ
ಬರುವರಯ್ಯ ಮೂರ್ಖರು
ಘರನೆ ಘರಘರನೇ
ಸುತ್ತುವರಯ್ಯ ನನ್ನ ಗುಡಿಯ
ಘಂಟೆ ನಗಾರಿ ಬಾರಿಸಿ
ಬಿದ್ದು ಬೇಡುವರಯ್ಯ ವರವಾ
ನಾ ಹೇಂಗೆ ಕೊಡಲಯ್ಯ
ದಾಸ ಓ ದಾಸ
********ರಾಜು ಹಾಸನ********

- ರಾಜು ಹಾಸನ

29 Oct 2020, 05:16 pm

ಬೂಟಾಟಿಕೆ

ದೇವರು ಬರುವುದಯ್ಯ
ಮೈ ಮೇಲೆ ಬಂದು
ಕೇಳುವುದಯ್ಯ
ಬಾಲಕ ನಿನ್ನ ಸಮಸ್ಯೆ ಏನೆಂದು
ಭಕ್ತ ಹೇಳುವನಯ್ಯ
ಈ ಭಕ್ತನ ಕೂಗು ಇಷ್ಟು ದಿನ
ನಿನಗೆ ಕೇಳಿಸಲಿಲ್ಲವೇ
ನೀ ಎಲ್ಲಿ ಹೋಗಿದೆ ನನ್ನಪ್ಪ
ನಾ ಊರು ಊರು
ಸುತ್ತಲು ಹೋಗಿದೆ
ನಿನಗೇನು ಕಷ್ಟ
ಏನು ಹೇಳು ಬಾಲಕ
ನನ್ನ ಕಷ್ಟಗಳು ನಿನಗೆ
ತಿಳಿಯದೆ ನನ್ನ ತಂದೆ ನೀನಪ್ಪ
ಊರು ಊರು ಸುತ್ತವ
ನನಗೆ ಮನೆ ಮನೆಗೆ ಭಕ್ತರಿರುವರು
ನಿನ್ನ ಕಷ್ಟ ನನಗೆ ತಿಳಿದಿಲ್ಲ
ಈಗ ಹೇಳು ನನ್ನ ಮಗನೇ
ನನ್ನ ಕಷ್ಟವ ನಾನೇ
ನಿನಗೆ ಹೇಳುವುದಾದರೆ
ನೀನೇಕೆ ಬೇಕಪ್ಪ
ನೀ ಸುಮ್ಮನೆ ಹೋಗಿಬಿಡಪ್ಪ
ನೀನು ಯಾವ ಎಂತಾ
ಬೂಟಾಟಿಕೆ ದೇವರಪ್ಪ
*******ರಾಜು ಹಾಸನ********

- ರಾಜು ಹಾಸನ

28 Oct 2020, 11:44 pm

ಮಂಗ ಮಾಯ

ದೇವರೆಂದರೆ
ಇರಬೇಕು ಹಸುವಿನ ತರ
ಬಾ ಎಂದರೆ ಬರಬೇಕು
ಹೋಗು ಎಂದರೆ ಹೋಗಬೇಕು
ತಂದು ಮುಂದಿಟ್ಟರುವ
ಹಣ್ಣು ಕಾಯಿ ತಿನ್ನೆಂದರೆ ತಿನ್ನಬೇಕು
ಇಲ್ಲದಿದ್ದರೆ ಸುಮ್ಮನೆ
ಬಿದ್ದಿರಬೇಕು ಬೀದಿಯ ಕಲ್ಲಗಿ

ಕರೆದರು ಬರುವುದಿಲ್ಲ
ತಿನ್ನಲು ಕೊಟ್ಟರು ತಿನ್ನುವುದಿಲ್ಲ
ಇದ್ಯಾವ ಸೀಮೆಯ ದೇವರಯ್ಯ
ಇದೆಂತಹ ಮೂಕ ದೇವರಯ್ಯ

ಜನರು ಕಷ್ಟವೆಂದರೆ
ಓಡಿ ಓಡಿ ಹೋಗುವುದಯ್ಯ
ಈ ಬಂಡೆ ದೇವರು
ಪೊದೆಯ ನೆರಳ ಮರೆಗೆ

ಹಬ್ಬವೆಂದರೆ
ಓಡಿ ಓಡಿ ಬರುವುದಯ್ಯ
ಹಾದಿ ಬೀದಿಗೆ
ತಮ್ಮಟೆ ಪೀಪಿ ಸದ್ದಿಗೆ
ಸಂಧಿ ಗುಂಧಿಯಲ್ಲಿ
ತಿಪ್ಪೆ ಗುಂಡಿಯಲ್ಲಿ ಬಿದ್ದಿರುವ ಕಲ್ಲು

ನಾನು ಆ ದೇವರು
ನಾನು ಈ ದೇವರು ಎನ್ನುವುದಯ್ಯ
ಹಬ್ಬ ಮುಗಿದ ಮೇಲೆ
ಯಾವ ದೇವರು ಇಲ್ಲವಲ್ಲಯ್ಯ
ಎಲ್ಲವೂ ಮಂಗ ಮಾಯಾವಯ್ಯ
*********ರಾಜು ಹಾಸನ*********

- ರಾಜು ಹಾಸನ

28 Oct 2020, 03:08 pm

ಪ್ರೀತಿ ಪ್ರೇಮ

ಕಳ್ಳಿ ಮಳ್ಳಿ ಮಿಂಚುಳ್ಳಿ
ಮನಸು ಕದ್ದ ಚೆಂದುಳ್ಳಿ
ಕಾಡಿಸಬೇಡ ನೋಯಿಸಬೇಡ
ಕನಸಿನಲ್ಲಿ ಬಂದು ಕೊಲ್ಲಬೇಡ
ಮಿಂಚಿ ಮಾಯವಾಗಬೇಡ
ಕಂಡು ಮರೆಯಾಗಬೇಡ
ಮನಸು ಕದ್ದು ಓಡಬೇಡ
ಸೋತು ಸುಣ್ಣವಾಗಿರುವೇ
ಕಣ್ಣಾಮುಚ್ಚಾಲೆ ಆಟವೇಕೆ
ನನ್ನ ಕನಸು ಮನಸ್ಸು
ನೀನೇ ಆಗಿರುವಾಗ
ನಾಚಿಕೆಯಾಕೆ ಭಯವೇಕೆ
ಪ್ರೀತಿಯ ಮಾತು ನುಡಿಯಲು
ನನ್ನ ಪ್ರೀತಿಯ ಮಿಂಚುಳ್ಳಿ

- ರಾಜು ಹಾಸನ

28 Oct 2020, 12:33 pm

ಸ್ವಾರ್ಥವಿಲ್ಲದ ಮಾತೃಹೃದಯ

ಕಲ್ಮಶವಿಲ್ಲದ ಪ್ರೀತಿ ನಿನ್ನದು
ಸ್ವಾರ್ಥವಿಲ್ಲದ ಬದುಕು ನಿನ್ನದು
ಆಡಂಬರವಿಲ್ಲದ ಜೀವನ ನಿನ್ನದು

ಕಷ್ಟವನ್ನು ಮೆಟ್ಟಿ ನಿಂತು ಮಕ್ಕಳನು ಸಲಹಿದೆ
ಅಪಾರಾಧ ಇಲ್ಲದೆ ಶಿಕ್ಷೆ ಪಡೆದೆ
ಕಲ್ಲು ಜೀವದ ಜೊತೆ ಬದುಕಿದೆ

ದೇವರ ಕೃಪೆಇದೆ ಎಂದು ನಂಬಿದೆ
ಮಕ್ಕಳ ಶಿಕ್ಷಣಕ್ಕೆ ಶ್ರಮೀಸಿದೆ
ಬಾಂಧವ್ಯವಿಲ್ಲದ ಸಂಬಂಧಗಳೂಂದಿಗೆ ಜೀವನ

ಮಕ್ಕಳಿಗಾಗಿ ಜೀವ ಸವೆಸಿದೆ
ಧೈರ್ಯದಿಂದ ಜೀವಿಸಿದ
ಮಾತೃ ಹೃದಯ..

- Akshatha Shetty

26 Oct 2020, 08:48 pm

ವಿನಾಶದ ‌ಜಂಗಮವಾಣಿ

ವಿನಾಶದ ‌ಜಂಗಮವಾಣಿ


ಪದಗಳಲ್ಲಿ ವರ್ಣಿಸಲು ಅಸಾಧ್ಯವೇ ನೀನು
ಯುವ ಪೀಳಿಗೆಯನ್ನು ಬಳಿ ಪಡೆಯುವ ಮಾಯೆ
ಬದುಕುತಿದೆ ಸಮಾಜ ನಿನ್ನ ಗುಂಗಿನಲ್ಲಿ
ಮೌನವಾಗಿ ಮುಳುಗಿದೆ ನಿನ್ನ ನಶೆಯಲ್ಲಿ.


ಸಂಬಂಧಗಳು ಜಂಗಮವಾಣಿಗೆ ಸೀಮಿತವಾಗಿ
ಸೂರ್ಯನ ಬೆಳಕನ್ನು ಕಾಣದೆ ಶುಭೋದಯ
ನಿನ್ನ ಜಾಲವಿಲ್ಲದ ಮನೆ ಎಲ್ಲಿದೆ
ನಿನ್ನೂಂದಿಗಿರುವಷ್ಟು ಬಾಂಧವ್ಯ , ಸಂಬಂಧಗಳಲ್ಲಿ.


ಸಮಾಜದ ಸ್ವಾಸ್ಥ್ಯ ಹಾಳು ಮಾಡಿ
ಮಕ್ಕಳ ಮನಸ್ಸಿನಲ್ಲಿ ವಿಷಬೀಜ ಬಿತ್ತುವ ಕೆಲಸವನ್ನು ಬಿಟ್ಟು ಬಿಡದೆ ನಡೆಸುತ್ತಿರುವೇ
ಜೀವವಿಲ್ಲದ ನೀನು ಹಲವು ಜೀವ ಕಸಿದೆ.

- Akshatha Shetty

26 Oct 2020, 02:53 pm

ನಮ್ಮ ಅರಿವು

ನಮ್ಮತನವ ನಾವು ಮರೆತು
ಪುಂಗಿ ಉದೊ ದಾಸಯ್ಯ ಹಿಂದೆ
ಅಲೆಯುವಂತಾಗಿದೆ ಬದುಕು...
ಯಾಕೆಂದರೆ ನಮ್ಮೊಳಗಿನ ಅಂತರಾಳದ ಶಕ್ತಿ
ನಾವು ಅರಿತುಕೊಳ್ಳದೆ ......
ಬೇರೆವರು ಅರಿವರೇನಯ್ಯ....?
ಅರಿತು ನಡೆಯದೆ ಭಯದಿಂದ ಮೂಲೆಗುಂಪಾಗಿ
ಉಜ್ವಲ ಭವಿಷ್ಯದ ಆತ್ಮಸ್ಥೈರ್ಯವನ್ನ
ಕಳೆದುಕೊಳ್ಳುವಂತಹ ಮನೋಸ್ಥಿತಿ ಎದುರಾಗಿದೆ...!
ಇಂತಹ ಪರಿಸ್ಥಿತಿಯಲ್ಲಿ ಬಂಧುಗಳು ,ಸ್ನೇಹ ಸಂಬಂಧಿಗಳು,
ನೆರೆಹೊರೆಯವರು ,ಮನೋಸ್ಥಿಯನ್ನರಿತು ಬೆಲೆ ಕಟ್ಟಲಾಗದ ಮಾನವಿಯ ಮೌಲ್ಯಗಳನ್ನ ಉಣಬಡಿಸಿ ....ಆತ್ಮಸ್ಥೈರ್ಯವನ್ನ ತುಂಬುವಂತಹ ಮನಸ್ಸು ಮಾನವಿಯತೆಯ... ಸದೃಢರ ಸಂಕಲ್ಪ ನಮ್ಮದಾಗಬೇಕು .
ಅಂದಾಗ , ಮಾತ್ರ ಸಮಾಜದಲ್ಲಿ ನಮ್ಮಿಂದ ನೂರಾರು ....ಸಾವಿರಾರುಕ್ಕಿಂತ ಒಬ್ಬರು ತಮ್ಮ ಜೀವನದ ಶೈಲಿ ರೂಪಿಸಿಕೊಂಡು ಯಶಸ್ಸನ್ನ ಕಂಡರೆ ! ಅದೇ ಒಬ್ಬರಿಂದ ಇನ್ನೊಬ್ಬರ ಬದುಕಿಗೆ ದಾರಿದೀಪ.....

@ವಿಶು

- Wishu@

26 Oct 2020, 12:21 pm

ಕನ್ನಡ

ಕಣ ಕಣದಲ್ಲೂ ಕನ್ನಡ

ದೇಶವ ಸುತ್ತುತ್ತಾ ,
ಘೋಷವ ಕೂಗುವೆ.
ಕನ್ನಡಕ್ಕಾಗಿ ಜನನ.
ಕನ್ನಡಕ್ಕಾಗಿ ಮರಣ,
ಭಾರತಾಂಬೆಯ
ಸೆರಗಿನಾಸರೆಯಲ್ಲಿ
ನಮ್ಮೆಲ್ಲರ ಜೀವನ.
ಕಾವೇರಿ ನೀರನ್ನು
ಸವಿದರೆ ನಮ್ಮಯ
ಜೀವನ ಪಾವನ.
ಕನ್ನಡ ತಾಯಿಗೆ
ದ್ರೋಹವ ಬಗೆದರೆ
ವೈರಿಗಳಿಗೆ ಸಿದ್ಧವಿದೆ
ನಮ್ಮ ರಾಮಬಾಣ
ಕ್ಷಣಮಾತ್ರದಲ್ಲಿ ಉರುಳಲಿ
ದ್ರೋಹಿಗಳ ಪ್ರಾಣ.
ನಾಡುನುಡಿಗೆಂದೆ ಬರೆದೆ
ನನ್ನ ಅಭಿಮಾನದ ಕವನ
ಕೇಳುಗರ ಕಿವಿಗಳಿಗಿಂಪು
ಬದುಕಾಗಲೀ ಪಾವನ
ಕನ್ನಡಾಂಬೆಯ ಪಾದಕ್ಕೆ
ಈ ಕೆಚ್ಚೆದೆಯ ಕನ್ನಡಿಗನ ನಮನ.
ಜೀತು

- ಸಂತೋಷ್//ಜೀತು

22 Oct 2020, 09:10 am

*ಅಗಲಿಕೆಯ ನೋವು*

*ಅಗಲಿಕೆಯ ನೋವು*
~~~~~~~~~~~~~
ತನುವೆರಡು ಮನ ಒಂದಾಗಿದ್ದೆವು
ನಾನು ನೀನು
ಹೃದಯಗಳು ಒಡೆದು ಚೂರುಗಳಾದೆವು
ನೀನು ನಾನು

ಒಂದಾಗಿ ಬಾಳಬೇಕೆಂದು ಒಂದಾದೆವು
ನಾನು ನೀನು
ವಿಧಿಯಾಟದಲ್ಲಿ ಒಬ್ಬಂಟಿಯಾಗಿರಬೇಕಾಯಿತ್ತು
ನೀನು ನಾನು...

ಮರವಾಗಿ ಬೆಳೆದು ಬೇರೆಯವರಿಗೆ ನೆರಳಾಗಬೇಕೆಂದಿದ್ದೆವು
ನಾನು ನೀನು...
ಮೊಳಕೆಯಲ್ಲೆ ಮೊಟಕಾದೆವು
ನೀನು ನಾನು…..

ಬಾಳ ಬೆಳದಿಂಗಳಾಗಬೇಕು ಎಂದಿದ್ದೆವು
ನಾನು ನೀನು...
ಅಮಾವಾಸ್ಯೆ ಕತ್ತಲಾಗಿಬಿಟ್ಟೆವು
ನೀನು ನಾನು……

ಸದಾ ಹರಿಯುವ ನದಿಗಳಾಗಬೇಕೆಂದಿದ್ದೆವು
ನಾನು ನೀನು...
ಎಂದೂ ಸೇರದ ಸಾಗರದ ತೀರಗಳಾದೆವು
ನೀನು ನಾನು.....

ಈ ನಾನು ಆ ನೀನು ನಮ್ಮೊಳಗೆ ಸೇರಿಕೊಂಡು
ನೀನು ನೀನಾದೆ.... ನಾನು ನಾನಾದೆ...
ಬದುಕೆಲ್ಲ ಬಸವಳಿದು ಬೆಂಡಾದೆ....

✍️ *ಶಿವಣ್ಣ ಕೆ ಕೆರೆಕೋಡಿ….*
~~~~~~~~~~~~~~

- Shivanna K

21 Oct 2020, 09:28 am