Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮನದಾಳದ ನೋವು ಮುಚ್ಚಿ

ನಕ್ಕುಬಿಡು ಅಕ್ಕಯ್ಯ ಚಿಕ್ಕ ನಾ ಕೇಳುವೆ
ನನ್ನಕ್ಕ ನನ್ತಂಗಿ ನಮ್ಮಣ್ಣರು ನಗುವರು
ಸುಸ್ತಾದ ಕೈಗಳಲ್ಲಿ ಸೈಕಲ್ ಹಿಡಿದು
ಮತ್ತೆತ್ತ ಪಯಣ ತಾಯೆ ನಕ್ಕು ಬಿಡಮ್ಮ //

ಅಪ್ಪ ಕೂಡಿಡಲಿಲ್ಲ ಅಮ್ಮನು ಉಳಿಸಿಲ್ಲ
ಒಂದೊತ್ತಿನ ತುತ್ತಿಗಾಗಿ ಪರದಾಡುತ
ಬದುಕನ್ನು ತಲೆಮೇಲೆ ಹೊತ್ತು ತಿರುಗುತ
ಒಡಲಾಳದ ನೋವು ಮರೆತು ನಕ್ಕುಬಿಡು //

ಹಾದಿ ಗುಂಟೆಲ್ಲ ಹರಿದಾಡ್ವ ಮುಳ್ಳುಗಳು
ಹಾಲ್ಗೆನ್ನೆ ಹಿಮ್ಮಡಕೆ ಚುಚ್ಚಿದನ ಮರೆತು
ಬೀದಿನಾಯಿಗಳು ಬೋಗಳುವುದ ಸಹಿಸಿ
ಮನಬಿಚ್ಚಿ ಒಮ್ಮೆ ನಕ್ಕು ಬಿಡು ನನ್ನಕ್ಕ //

ಅಕ್ಕರೆಯಿಂದಲಿ ಮುದ್ದು ಮಕ್ಕಳು ಎಲ್ಲ
ನಿನ್ನ ನೋವನು ಕಂಡು ಕೊರಗುತಲಿಹವು
ಸಕ್ಕರೆಯ ಮಾತ್ನಾಡಿ ಮುದ್ದಿಕ್ಕುತಾ ತಾಯೆ
ನಕ್ಕು ಬಿಡು ಅಕ್ಕಾ ನೀನೊಮ್ಮೆ ನಕ್ಕುಬಿಡು //

ಸಣ್ಣವ್ವನು ನುಡಿದ ಕಹಿಮಾತು ಕಡೆಗಣಿಸಿ
ಸುಣ್ಣದ ಕಲ್ಮೇಲೆ ಒಮ್ಮೆ ತಣ್ಣೀರು ಬಿದ್ದಾಗ
ಮಲ್ಲಿಗೆಯ ಹೂವುಗಳು ಅರಳಿ ನಗುವಂತೆ
ಚಿಕ್ಕ ನಾ ಕೇಳುವೆ ಅಕ್ಕಯ್ಯ ನಕ್ಕುಬಿಡು //


ಕಲ್ಮೇಶ ಬಡಿಗೇರ
9743539657
.......ಬಾದಾಮಿ........

- Kalmesh Badiger

05 Oct 2020, 07:49 pm

ಬದಲಾಗಿರೋದು ನಿಜಾನೇ...!

ನೀವು ಹೇಳುತ್ತಿರುವುದು ನಿಜಾನೆ
ನಾನು ಬದಲಾಗಿದ್ದೇನೆ.
ಅದ್ಯಾರೋ ತೀರಿಹೋದರು ಮರಗುತ್ತಿದ್ದೆ
ಹೀಗೀಗಾ ಹೆಚ್ಚು ಮರಿಯುತ್ತಿದ್ದೇನೆ,
ಎಲ್ಲಾ ನಮ್ಮದು, ನಮ್ಮವರು ಎಂಬ ಭ್ರಮೇಲಿ ಬದುತ್ತಿದ್ದೆ..
ಹೀಗಿಗಾ ಎಲ್ಲವೂ ಕ್ಷಣಿಕ ಅನ್ನೋ ಸತ್ತ್ಯವನ್ನು ಅರಿತಿದ್ದೇನೆ..

ನಾನು ಬದಲಾಗಿರೋದೂ ನೀಜಾನೆ!
ಹಾಗಾಗ ಮೂಡುತ್ತಿದ್ದ ನೋವಿನ ಕಂಬನಿಯನ್ನ..
ಮುಗುಳುನಗೆಯೊಂದಿಗೆ ಮರೆಮಾಚಿರುವೆ..
ನೋವನ್ಯಾರು ಕೇಳುವರು ಹೇಳಿ! ನಗುವಿದ್ದರೆ ಮುಖದಲ್ಲಿ ..

ಪರಿಚಿತವಾದರು ಅಪರಿಚಿತ
ನನ್ನದೇ ಇದ್ದರೂ ನನ್ನದಲ್ಲದ ಭಾವ..
ದಾರಿ ಗೊತ್ತಿದ್ದರೂ ನಕ್ಷೆಯ ಹುಡುಕಾಟ
ನನ್ನದೇ ಬದುಕು ನನ್ನದಲ್ಲದ ಪಯಣ
ಗುರಿಯಿದ್ದರೆ ಗುರು ಹುಡುಕುವ ಯತ್ನ
ಗುರು ಸಿಕ್ಕರೂ ಗುರಿಯನ್ನೆ ಬದಲಾಯಿಸುವ ಆತುರ
ಬದುಕಿನ ದಾಹಕ್ಕೆ ಮನಸ್ಸಿನ ಕುಣಿತಕ್ಕೆ
ಬೇಕೇನಿಸುವುದು ಬೇಡಗಳೆಲ್ಲವೂ
ಮರುಭೂಮಿಯಲ್ಲಿ ನೀರು ಇದ್ದಂತೆ/ಸಿಕ್ಕಂತೆ..
ಕಾಲಾ ಎಲ್ಲವನ್ನೂ ಎಲ್ಲರಿಗೂ ಕಲಿಸುತ್ತದೆ
ಕಾಯಬೇಕಷ್ಟೇ...

ಏನೇ ಹೇಳಿ
ನಾ ಬದಲಾಗಿರುವುದು ನಿಜಾನೆ!
ಇದು ನಿಮಗೂ ಗೊತ್ತು
ಯಾಕಂದ್ರೆ ಬದಲಾವಣೆಗೆ
ಕಾರಣ ನೀವೇ ತಾನೇ!..

- saahithi

05 Oct 2020, 02:10 am

ವಿಫಲ ಪ್ರೇಮ

ಯಾರಿಗೆ ಯರು ಸಿಗ್ತಾರೇ ಅಂತ ಗೊತ್ತಿರೋ ಆ ಬ್ರಹ್ಮ... ಅವರಿಬ್ಬರ ಮಧ್ಯೆ ನೇ ಯಾಕೆ ಪ್ರೀತಿ ಹೂಟ್ಟೀಸೊಲ್ಲ, ಅವರಿಗೆ ಅವರ ಜೊತೆ ಪ್ರೀತಿ ಹುಟ್ಟಿಸಿದ್ದರೆ,ಪ್ರೀತಿಯು ಸೋಲುತ್ತೀರಲಿಲ್ಲಾ, ಪ್ರೇಮಿಯು ಸಾಯುತ್ತೀರಲಿಲ್ಲಾ...
✍️.ಸಂಜು

- ಸಂಜು

05 Oct 2020, 12:11 am

ನೊಂದ ಮನಸ್ಸು

ಕಣ್ಣಲ್ಲಿ ನೋಡಿ ಆಸೆ ಪಡೋದು ಕಣ್ಣು ನೋಡುವ ತನಕ ಅಷ್ಟೇ... ಆದರೆ ಒಂದು ಸಾರಿ ನಮ್ಮ ಮನಸ್ಸಿಗೆ ಇಷ್ಟ ವಾದರೆ ಮತ್ತೇ ಮರಿಯೂದಕ್ಕೇ ತುಂಬಾ ಕಷ್ಟ
✍️. ಸಂಜು

- ಸಂಜು

04 Oct 2020, 11:52 pm

ರಾಕ್ಷಸರಿಹರು ಎಚ್ಚರ

ಕ್ರೂರ ರಾಕ್ಷಸರಿಹರು ಎಚ್ಚರ
ಇವರ ಮಾತಿಗೆ ಮರುಳಾದ್ರೆ
ಮನೆ ಭೂದಿ ಮಾಡುವರೋ
ಎಚ್ಚರ ತಂಗೆಮ್ಮರ ಎಚ್ಚರ //

ಇವರು ಹಾಕಿಕೊಳ್ಳು ವಂತಹ
ಅತ್ತಾರ ಚಿತ್ತಾರ ಬಟ್ಟೆಗಳ ಕಂಡು
ಸೇಂಟ್ ಸೋಕಿಗಳ ವಾಸನಿಗೆ
ಮಾರುಹೋದರೆ ತಂಗಿ ಎಚ್ಚರ //

ತಂಗಿ ಯೆಂದೇನುತ್ತಲೆ ಬಂದು
ತಾಯಿ ಮಾಡಿ ಹೋಗುವರು
ದಾರಿಯ ತಪ್ಪಿಸಿ ದೂರ ಮಾಡಿ
ನರಕ ತೋರಿಸುತ್ತಾರೆ ಎಚ್ಚರ //

ಹಸುಗೂಸು ಬಸುರಿ ಹೆಣ್ಮಗಳು
ಹಸು ಎಮ್ಮೆ ದನ ಕರವ ಬಿಡದ
ಹೊಲಸು ಮಾನವರೆ ತುಂಬಿಹರು
ತಾಯಿ ಹೊರಹೋದರೆ ಎಚ್ಚರ //

ಸಹಾಯದ ನೆಪದಲ್ಲಿ ಸಾಲ ಕೊಟ್ಟು
ಸಹವಾಸ ಮಾಡಿ ಕೆಡಿಸುವರು
ಸುಡಲು ಹೇಸದ ವಿಕೃತಿ ಮೆರೆವ
ಮೆತ್ತನೆಯ ಜನರಿಹರು ಎಚ್ಚರ ಎಚ್ಚರ //

ಕಲ್ಮೇಶ ಬಡಿಗೇರ
9743539657
.....ಬಾದಾಮಿ.......

- Kalmesh Badiger

04 Oct 2020, 09:24 pm

ಭೂರಮೆ

ನಮ್ಮ ಪೋರೇವ ನಮ್ಮ ತಾಯಿ
ಭೂಮಿ ತಾಯಿ ನಿನಗೆ ಶರಣು
ಹಸಿರು ಹೊದ್ದು ಉಸಿರು ನೀಡ್ವ
ಭೂರಮೆ ಮಾತೆ ನಿನಗೆ ನಮೋ //

ಬಿರು ಬಿಸಿಲು ತಡೆದು ಜಗಕೆ
ತಂಪು ಗಾಳಿ ಬೀಸುವ ವೃಕ್ಷಗಳೆ
ಹಸಿರು ಹುಲ್ಲು ಹೊಸತು ಮಾತು
ಜೀವದಾರೆಯಾದ ಮರಗಳೆ //

ಸಕಲ ಜೀವಿಗಳಿಗೆ ಸಲುಹಿದ
ಮನುಜ ಕುಲವ ಬೇಳೆಸಿದಂತಾ
ಸದಾ ನಗುತಾ ಉಲ್ಲಾಸದಿಂದ
ನಿಂತ ತಾಯೆ ಭೂರಮೆಗೆ ಜೈ //

ನೀರು ನೆರಳು ಹಸಿರು ಉಸಿರು
ನಿಂದಾ ಭೂಮಿಯೋಂದು ಸುಂದರ
ಪ್ರಕೃತಿಯ ಮಡಿಲಿನಲ್ಲಿ ವೃಕ್ಷಮಾತೆ
ಎಷ್ಟು ಸುಂದರ ಅತಿ ಸುಂದರ //

ಕಾಲಿ ಕಾಲಿ ಬೆಂಚು ಕಾಡಿನಲ್ಲಿ
ಕೊರೆವ ಬಿಸಿಲು ನೆತ್ತಿಮೇಲೆ
ಮುತ್ತನಿಯುತ ಮದ್ಯದಲ್ಲಿ ನಿಂತ
ಮುದ್ದು ಮರಗಿಡಗಳೆ ಸುಂದರ //


ಕಲ್ಮೇಶ ಬಡಿಗೇರ
9743539657
........ಬಾದಾಮಿ......

- Kalmesh Badiger

04 Oct 2020, 08:10 pm

ಹೆಣ್ಣು ನಮ್ಮ ದೇಶದ ಕಣ್ಣು

ಬೆದರಿ ಹೆದರಿ ಬದುಕಿಯದು ಸಾಕು ಹೆಣ್ಣೆ... ಆತ್ಮವಿಶ್ವಾಸದ ಧೈರ್ಯದಿಂದ ಮುಂದೆ ಬಾ... ಮುಗ್ದ ಮಗುವಿನ ಹಾಗೆ ಪ್ರತಿ ಹೆಣ್ಣಿನ ಮನಸು... ಆತ್ಮೀಯರಿಗೆ ಸೇವೆ ಮಾಡುವದೇ ಇವರ ಕನಸ್ಸು.. ಪ್ರೀತಿಸಿವುದೇ ಹೆಣ್ಣಿನ ಗುಣ...... ಮನೆತನ ಕಾಪಾಡುವದೇ ಇವರ ಋಣ.... ತಾಳ್ಮೆಯಿಂದ ಇದ್ದರೆ ತಂಗಾಳಿ... ಕೋಪದಿಂದ ಇದ್ದರೆ ಸುಂಟರಗಾಳಿ.. ಪ್ರತಿಯೊಂದು ಪ್ರಯತ್ನವನ್ನು ನಂಬಿಕೆಯಿಂದ ಇಡು. ಸಾವಿರಾರು ದಾರಿಗಳು ಕಾಣುತ್ತದೆ. ನಿಮ್ಮ ಅಹಂಕಾರ ಕೋಪವನ್ನು ಸ್ವಲ್ಪ ಕಡಿಮೆಗೊಳಿಸಿದರೆ ಎಲ್ಲರ ಪ್ರೀತಿ ಒಲವು ಸಿಗುತ್ತದೆ... ನಿಮ್ಮ ಕಣ್ಣೀರಿನ ಚಿಂತೆಗಳನ್ನು ಮರೆತು ನಗು ನಗುತ ಇದ್ದರೆ ಬದುಕು ಸಂತೋಷವಾಗುತ್ತದೆ.. ಎಲ್ಲ ನನ್ನ ಹಣೆಬರಹ ಎಂದು ಕೊರಗುವುದಕ್ಕಿಂತ ನನ್ನ ಬಾಳೋ ಜೀವನವೇ ಸ್ವರ್ಗವೆಂದು ಸ್ವೀಕರಿಸು.. ಧೈರ್ಯದಿಂದ ಎಲ್ಲ ಸಂಕಟಗಳನ್ನು ಎದುರಿಸಿ ಗೆಲುವನ್ನು ಸ್ವಾಗತಿಸು... ಹೆಣ್ಣು ಎಂದಿಗೂ ಹೊನ್ನು... ಹೆಣ್ಣು ದೇಶದ ಕಣ್ಣು

- mahendran h

04 Oct 2020, 03:55 pm

ಒಂಟೆ

ಒಂಟೆ ಬಂದೈತಣ್ಣ ಊರಲ್ಲಿ
ಡುರುಕಿಯ ಹೊಡೆಯುತ್ತಾ
ದುಬ್ಬದ ಮೇಲೆ ಗುಬ್ಬಿಯ
ಗೂಡನು ಹೊತ್ತು ಬಂದೈತಣ್ಣ //

ಉದ್ದನೆ ಕಾಲು ಗಿಡ್ಡನೆ ಬಾಲ
ಎಷ್ಟುದ್ದ ಇರುವುದು ನೋಡಣ್ಣ
ಕತ್ತನು ಎತ್ತಿ ಹಾವಿನ ಹಾಗೆ
ಅತ್ತಿತ್ತ ನೋಡುತಲಿಹುದು ಬಾ ಅಣ್ಣ //

ಒಂಟೆಯ ನೋಡಲು ಊರಿನ
ಭಂಟರ ದಂಡೆ ಸೇರಿತು ನೋಡಣ್ಣ
ಕೊರಳಿನ ಗಂಟೆಯ ಸದ್ದಿಗೆ ಚಿಣ್ಣರು
ಕುಣಿಯುತ ಬಂದರು ಬಾ ಅಣ್ಣ //

ಹೆಜ್ಜೆಯ ಎಣಿಸಲು ಹುಚ್ಚೆದ್ದು ಹೋಗಿ
ಪೆಚ್ಚು ಮೊಗದಲಿ ಮರಳಿದರು ನೋಡಣ್ಣ
ಮಕ್ಕಳ ಮುಂದೆ ಗಂಟೆ ಗಟ್ಟಲೆ ಕೂತು
ಒಂಟೆಯ ಮಾತು ಕಟೆದರು ಕೇಳಣ್ಣ //


ಕಲ್ಮೇಶ ಬಡಿಗೇರ
9743539657
. ........ಬಾದಾಮಿ....

- Kalmesh Badiger

04 Oct 2020, 01:54 pm

ಕಾಣದ ಕಡಲು

ಕಾಣದ ಕಡಲಲಿ ಏನಿದೆಯೋ ನಾ ಕಾಣೆ
ನೀ ಕಂಡಿದ್ದರೆ ಹೇಳುಬಾ ಓ ಜಾಣೆ
ಕಾಣಬೇಕೆಂಬ ಹಂಬಲ ಕಾಣದ ಕಡಲನು
ಸೇರಬೇಕೆಂದು ಕಾತುರ ಕಾಣದ ಕಡಲಿಗೆ

- kannadatiyabhavanegalu

04 Oct 2020, 12:59 pm

ಪ್ರೇಮಿ

ಬಣ್ಣದ ಲೋಕದ ಬುಗುರಿಯಲಿ
ತಿರುಗುತ ಲಿರುವೇನು ನಾನಿಲ್ಲಿ
ಭೂತ ಭವಿಷ್ಯದ ಪರಿವೆ ಇಲ್ಲದೆ
ಕುಳಿತಿರುವೆ ನೋಡು ಮರೆತಿಲ್ಲಿ //

ಚಿನ್ನದ ಮಾತುಗಳು ಇನ್ನೆಲ್ಲಿ
ಕಣ್ಣಿಗೆ ಕಾಣದೆ ನೀ ಇಲ್ಲೇಲ್ಲು
ಬಡ ಬಡಿಸುತಿರುವೆ ನಾನಿಲ್ಲಿ
ಕೆಳಿಸದೇನೋ ನೀನಗಲ್ಲಿ //

ಪ್ರೇಮಿಗಳ ದಿನ ಇನ್ನೆಲ್ಲಿ
ಮಧುರ ಮಾತು ಮರೆತಿಲ್ಲ
ನೆನಪಿಸುತ್ತಿರುವೆ ನಾನಿಲ್ಲಿ
ಕನವರಿಸುತಿರುವೆ ಕೇಳಿಲ್ಲಿ //

ನೆನಪಿನ ಕಾಣಿಕೆ ಕಾಣದಾಯ್ತೆ
ಕುಣಿಯುವ ಕಾಲು ನಿಂತೊಯ್ತು
ಕಣ್ಣಿಗೆ ಕತ್ತಲೆಯು ಕಾವಿದಾಯ್ತು
ನೀ ಬರದೆನ್ಮನ ಬರಿದಾಯ್ತು //

ಬಂತೆ ಬಂತು ನೋಡು ಆದಿನ
ಗುಲಾಬಿ ಕೊಟ್ಟ ಕ್ಷಣದ ದಿನ
ಪ್ರೀತಿಸುವ ಆಸೆಯೂ ಚಿಗಿತ
ಆ ಮಧುರ ಗಳಿಗೆಯ ದಿನ //

ಕಲ್ಮೇಶ ಬಡಿಗೇರ
9743539657
........ಬಾದಾಮಿ.......

- Kalmesh Badiger

04 Oct 2020, 09:09 am