Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹದಿನಾರರ ಹುಡುಗಿ ನಾ

ಹದಿನಾರರ ಹುಡುಗಿ ನಾನು
ಭಿನ್ನಾನದ ಬೇಡಗಿಯು ನಾನು
ಬ್ಯಾಸರಕೀ ಮೂಡತಾವ
ನನಗ ಆಸರಕ ಬೇಡತಾವ //

ಎಳೆ ಮನಸಿನ ಆಳದಲಿ
ಮಜ್ಜಿಗೆ ಕಡದಂಗೆ ಆಗಿ
ಗೆಜ್ಜೆ ಕಾಲ್ ಕುಣಿಸತಾವಾ
ಎದೆ ನಡುಗಿ ಹಾಡತಾವ //

ಜೋಡಿ ಗಿಳಿಗಳ ಕಂಡು
ಜೊತೆ ಇರದೆ ನಾ ನೊಂದು
ಕಥೆ ಹೇಣೆಯುತ ಕುತಂಗಾತ
ನನ್ನ ಕನಸೆಲ್ಲ ಬಲಿತಂಗಾತಾ //

ಮಕ್ಕಳ ಮಾತನು ಮುರಿದು
ಅಕ್ಕರೆಯ ಆಟವನ್ನು ಅಳಿಸಿ
ಹುಬ್ಬಿಗೆ ಕೈ ಹಚ್ಚಿ ಹುಡುಕುತಾವ
ಮಬ್ಬಾದ್ರ ಮನಸು ಮುದರತಾವ //

ಕಲ್ಮೇಶ ಬಡಿಗೇರ
9743539657
......ಬಾದಾಮಿ.......

- Kalmesh Badiger

04 Oct 2020, 08:53 am

ಮಂಗನ ಮರಿ

ನಮ್ಮನೆ ಅಂಗಳದಲ್ಲಿ ಒಂದು
ಅಜ್ಜನ ಆಲದ ಮರ ವಿಹುದು
ಮಂಗನ ಮರಿಯು ಕೊಂಬೆಯ
ಮೇಲೆ ನೆಗೆಯುತ ಜಿಗಿಯುವುದು //

ಕೈಯನು ತೋರಲು ಛಂಗನೆ ಹಾರಿ
ಕುಣಿಯುತ ಹಾರುತ ಬರುವುದು
ಕೈಯನು ನೀಡಲು ಕುಲಕುತಾ
ಮುತ್ತನು ಕೊಟ್ಟಂತೆ ಮಾಡುವುದು //

ತಲೆಯನು ಕೆದರುತಾ ಕೂಡಲು
ಬಂದು ಹೇಣನು ನೋಡುವುದು
ಹಣ್ಣನ್ನು ಕೊಡಲು ಹಲ್ಲನು ಕಿರಿದು
ಗಬ ಗಬಾ ತಿನ್ನುತ್ತಾ ಕೂಡುವುದು //

ಅಂಗಿಯ ತೊಡಿಸಲು ಮೈಯ್ಯನು
ಪರಚುತ ಮರವನು ಏರುವುದು
ಆ ಕಡೆ ಈ ಕಡೆ ಜಿಗಿಯುತ್ತಾ ಮಂಗವು
ಜೀಕವ ಹೋಡೆಯುತ ನಲಿಯುವುದು //

ಆಳುವ ಮಕ್ಕಳ ದ್ವನಿಯ ಕೇಳಲು
ಅರಚುತಾ ಓಡೋಡಿ ಬರುವುದು
ಅಮ್ಮನ ಕೈಯಲಿ ರೊಟ್ಟಿಯ ಕಂಡು
ಕಿರಚುತಾ ಮೈ ಪರಚುತ ಕೂಡುವುದು //

ಅಜ್ಜನ ಕೊಲನು ಕೈಯಲಿ ಕೊಟ್ಟರೆ
ನಟನೆಯ ಮಾಡುತ ಲಿರುವುದು
ಕಟ್ಟೆಯ ಮೇಲೆ ಕುಳಿತರೆ ಸಾಕು
ನಮ್ ಜೊತೆ ಆಟವ ಆಡುವುದು //


ಕಲ್ಮೇಶ ಬಡಿಗೇರ
9743539657
.....ಬಾದಾಮಿ.......

- Kalmesh Badiger

04 Oct 2020, 08:38 am

ಜವಾರಿ ಕೊಳಿ

ಜವಾರಿ ತಳಿ ಇದು ನಮ್ಮನೆ ಕೋಳಿ
ಆ ಆ ಎನ್ನಲು ಓಡುತಾ ಬರುವುದು
ಕಾಳನು ಕಾಣಲು ಕೊಕ್ಕರೋಕ್ಕ ಎಂದು
ನೆಲ ಕುಕ್ಕುತಾ ಕೆದರುತಾ ನಿಲ್ಲುವುದು //

ಅಮ್ಮನ ದ್ವನಿಯನು ಕೇಳಲು ಕೋಳಿ
ಕಾಲಲಿ ಗಿರಕಿಯ ಹೊಡೆಯುವುದು
ಚಿಕ್ಕ ಮಕ್ಕಳ ಪರಿವೆ ಇಲ್ಲದೆ ಕೊಳಿಯು
ಕೊಕ್ಕರೊಕ್ಕ ಎನ್ನುತಾ ಹಾರುವುದು //

ತಿಪ್ಪೆಯ ಮೇಲಿನ ತೆಪ್ಪವ ಕೆದರುತಾ
ದಪ್ಪನೆ ಹುಳುಗಳ ಮೇಯುವುದು
ಚಿಂವ್ ಚಿಂವ್ ಎನ್ನುವ ಪುಟಾಣಿ ಮರಿಗೆ
ಕುಕ್ಕುತಾ ಗುಟುಕನು ನೀಡುವುದು //

ಬೆಕ್ಕನು ಕಂಡರೆ ರೆಕ್ಕೆಯ ಬಿಚ್ಚುತಾ
ಕೊಕ್ಕರೋಕ್ ಎನ್ನುತ್ತಾ ಹಾರುವುದು
ಕಣ್ಣಿಗೆ ಕುಕ್ಕಿ ಮೈಯನು ಪರಚುತಾ
ಸೊಕ್ಕನು ಅಡಗಿಸಿ ಕಳಿಸುವುದು //

ಸಜ್ಜೇಯ ಜೋಳದ ಚೀಲವ ಕುಕ್ಕಿ
ಕಚ್ಚಿ _ ಬಿಚ್ಚಿ ಕೆದರಿ ಹಾಕುವುದು
ಅಜ್ಜಿಯ ದಿಂಬು ಕೌದಿಯ ಕೆದರಿ
ಹರಿದು ಮುರಿದು ತಾ ಹಾಕುವುದು //

ಕಲ್ಮೇಶ ಬಡಿಗೇರ
9743539657
........ಬಾದಾಮಿ.......

- Kalmesh Badiger

04 Oct 2020, 08:18 am

ಮುದ್ದು ಗೊಂಬೆ

ಮುದ್ದು ಗೊಂಬೆ ಮುದ್ದು ಗೊಂಬೆ
ನೀ ನನ್ನ ಅಂದದ ಗೊಂಬೆ
ನೋಡಲು ಬಲು ಚಂದ
ನೀ ನನ್ನ ಬಣ್ಣದ ಗೊಂಬೆ
ಸಂಪಿಗೆ ಮೂಗಿನ
ಮಿಣ ಮಿಣ ಮಿಂಚುವ
ಮಿಂಚುಳ್ಳಿ ಕಣ್ಣಿನ
ಬಂಗಾರದ ಗೊಂಬೆ
ಉದ್ದ ಜಡೆಯ ಕೋಮಲಾಂಗಿ
ನಕ್ಕು ನಲಿಯುವ ಮುದ್ದಿನ ಅರಗಿಣಿ
ನೀ ನನ್ನ ಮುದ್ದು ಗೊಂಬೆ

- ರಾಜು ಹಾಸನ

03 Oct 2020, 12:22 am

ದೋಣಿ ಸಾಗಲಿ

ಜೀವನವಿದು ಹುಟ್ಟು-ಸಾವಿನ ಪಯಣ
ಜನಿಸಿ ಬರುವೆವು ಅಳುತ್ತಾ, ಬಂದು ಅಳುವೆವು ಮತ್ತಷ್ಟೂ
ನಮ್ಮ ಮೊದಲ ಅಳುವಿನ ಧನಿಯೇ,ಹೆತ್ತವರ ಒಡಲ ಸಂತೋಷ
ಜೀವನದಿ ಬರುವ ಮತ್ತಷ್ಟು ಕಷ್ಟಗಳಿಗೆ ಹೆತ್ತವರೇ ಆಧಾರ

- Ranjitha

02 Oct 2020, 05:48 pm

ವಿಪರ್ಯಾಸ

ಹಾದಿ ಬೀದಿಯಲ್ಲಿ ಬಿಸಾಡಿದ ಕಲ್ಲು
ಊರ ಮುಂದಿನ ಬೆಟ್ಟದ ಕಲ್ಲು
ಜೀವವಿಲ್ಲದ ನೀರೊಳಗಿನ
ಬಂಡೆಯ ಕಲ್ಲು ದೇವರದಾರೆ
ಮನೆಯೊಳಗಿನ ಖಾರ ಆಡಿಸುವ ಕಲ್ಲು
ಬರಿ ಒಳಕಲ್ಲಾಗುವುದಯ್ಯ

ಜೀವವಿಲ್ಲದ ಕಲ್ಲಿಗೆ
ದೇವರೆಂದು ಹೊಗಳುವ ಜನ
ಜೀವವಿರುವ ಮನುಷ್ಯಗೆ
ದೆವ್ವವೆಂದು ತೆಗಳುವರಯ್ಯ

ಜೀವವಿಲ್ಲದ ಕಿತ್ತೋದ ಧರ
ಕಟ್ಟಿಕೊಂಡು ಶ್ರೇಷ್ಠನಾಗುವ
ಮನುಷ್ಯಗೆ ಫಲಿಸುವುದು
ಮುಕ್ತಿ ಮೋಕ್ಷ ಸ್ವರ್ಗ ನರಕ
ಹುಟ್ಟಿನಿಂದ ಸಾಯುವ ತನಕ
ದೊಡ್ಡ ದೊಡ್ಡ ಹಗ್ಗವ ಕುತ್ತಿಗೆಗೆ
ಸುತ್ತಿಕೊಂಡು ಸಾಯುವ
ಮೂಕ ಪ್ರಾಣಿಗಳಿಗೆ ಇಲ್ಲವೇ
ಮುಕ್ತಿ ಮೋಕ್ಷ ಸ್ವರ್ಗ ನರಕ

- ರಾಜು ಹಾಸನ

02 Oct 2020, 10:25 am

ಜಯ ಭಾರತ

ಕನ್ನಡನಾಡಿನ ಹೆಮ್ಮೆಯ ಪುತ್ರನಾ
ಹೇಳುವೆ ಕನ್ನಡಾಂಬೆಗೆ ಜೈ ಜೈ ಜೈ
ಹಿಂದೂಸ್ತಾನ ವ ಗರ್ವದಿ ಕಾಣುತ
ಭಾರತಾಂಬೆ ಗೆ ಹೇಳುವೆ ಜೈ ಜೈ ಜೈ //

ಗಂಗಾ ಯಮುನಾ ಸಿಂಧು ಸರಸ್ವತಿ
ಬ್ರಹ್ಮಪುತ್ರ ಸರಯೂ ನರ್ಮದಾ
ಗೋದಾವರಿ ಕೃಷ್ಣೆ ಕಾವೇರಿ ತಪತಿ
ಒಡಲೊಳಗಡಗಿದ ನದಿಗಳ ದೇಶ //

ತೇಗ ಶ್ರೀಗಂಧ ಚಂದನ ಅಶ್ವಥ
ಮಾವು ಹಲಸು ಬಾಳೆ ನೇರಳೆ
ಮಲ್ಲಿಗೆ ಸಂಪಿಗೆ ಸೇವಂತಿ ನೈದಿಲೆ
ಕೃಷಿಕ ಸಾಹಿತಿ ಕಲಾವಿದರ ದೇಶ//

ಕಾಶ್ಮೀರದ ತಾಯಿ ಶಾರದೆ ಸುಂದರ
ರಾಮೇಶ್ವರ ಮಹಾದೇವನ ಮಂದಿರ
ಪುರಿಯ ಶ್ರೀ ಜಗನ್ನಾಥನ ವಿಸ್ಮಯದ
ದ್ವಾರಕಾ ದೀಶ ಶ್ರೀ ರಾಧಾಕೃಷ್ಣರ ದೇಶ //

ಹಿಂದೂ ಸನಾತನ ಬೌದ್ಧ ಜೈನರ
ಸಿಖ್ ಧರ್ಮ ಗಳಿಗೆ ಜನ್ಮವ ನೀಡಿದ
ಸಿದ್ಧ ಶರಣ ಗುರು ಪರಂಪರೆಯ
ಸರ್ವಜನಾಂಗವ ಸಲುಹಿದ ದೇಶ //

ಭಾರತಾಂಬೆಯ ಕನ್ನಡದ ಕುವರನಾ
ಕೋಟಿ ಶರಣಾರ್ಥಿಗಳ ಅರ್ಪಿಸುತಾ
ಕನ್ನಡ ಶ್ರೀ ಭುವನೇಶ್ವರಿಗೆ ಜೈ ಜೈ ಜೈ
ಭಾರತ ಮಾತೆಗೆ ಹೇಳುವೆ ಜೈ ಜೈ ಜೈ //


ಕಲ್ಮೇಶ ಬಡಿಗೇರ
9743539657
........ಬಾದಾಮಿ........

- Kalmesh Badiger

01 Oct 2020, 09:46 pm

ಬರಿ ಓಳು ಬರಿ ಓಳು

ಸತ್ತ ಹೇಣದ ಮೇಲೆ ರಾಜಕೀಯ
ಮಾಡುವ ದುಷ್ಟ ನಾಯಕರ ಕಣ್ಣಿಗೆ
ಪಾಳು ಭೂಮಿ ಕಂಡರೆ ಸಾಕು
ಬಡಿದು ಬಾಯಿಗೆ ಹಾಕಿಕೊಂಡು
ಬಡ ಜನರ ಬಾಯಿಗೆ ಹಾಕುವರು
ಮೂರಿಡಿ ಮಣ್ಣು ತಲೆ ಮೇಲೆ ಅಕ್ಕಿ ಕಾಳು

ಭೂಮಿಯನ್ನೇ ಕೊಳ್ಳೆ ಹೊಡೆಯುವ
ಜನ ನಾಯಕ ನೀಚ ನಾಯಕ
ಮಂಗ ಮಾನವನಿಗೆ ಸಿಕ್ಕಿಲ್ಲ
ಆಗಸಕ್ಕೆ ಏರುವ ಸೇತುವೆ ಏಣಿ
ಆದರೂ ನಿಂತಿಲ್ಲ ಹಾರಾಟ ತೂರಾಟ
ಮಂಗ ಮನುಷ್ಯನ ಮಂಗನ ಆಟ
ಸಿಕ್ಕಿಬಿಟ್ಟರೆ ಮುಕ್ಕಿಬಿಡುವರು
ಈ ಆಗಸದ ಆಯಸ್ಸು

ಆ ಮಸೂದೆ ಈ ಮಸೂದೆ ಎಂದು
ಬೊಬ್ಬೆ ಹೊಡೆದು ತಿದ್ದುಪಡಿ ಮಾಡುವ
ಮುಟ್ಟಳ ನಾಯಕರು ತರುವುದಿಲ್ಲ
ಒಂದು ಕಾನೂನು ಒಂದು ಮಸೂದೆ
ಬಡ ಜನರ ಸ್ತ್ರೀ ಶೋಷಿತರ ರಕ್ಷಣೆಗೆ
ಬಾಯಿ ಮಾತಿಗೆ ಕೇಳಿದರೆ
ಬಾಯಿ ಬಡುಕ ನಾಯಕರು ಹೇಳುವರು
ಬರಿ ಓಳು ಬರಿ ಓಳು

- ರಾಜು ಹಾಸನ

01 Oct 2020, 03:37 pm

ಕೊಳದ ನೀರು

ಕೊಳದ ನೀರಿನಂತೆ ನಮ್ಮ ಮನಸು..
ಸುಮ್ಮನಿರಲಾರದವರು ಬರುವರು...
ಕೊಳದ ಕಸವನ್ನ ಮೇಲೆ ತೇಲುವಂತೆ ಮಾಡುವರು....
ನಮ್ಮ ಕೋಪ ಅದನ್ನು ಇನ್ನಷ್ಟು ಕಾಲ ಮೇಲೆ ತೇಲುವಂತೆ ಮಾಡುವುದು....
ಅದಕ್ಕಾಗಿ ಸುಮ್ಮನಿದ್ದು ಬಿಡು....
ಅದೇ ತಿಳಿಯಾಗುತದೆ......@Bhavya

- Bhavyashree K.G1

01 Oct 2020, 01:56 pm

ಬಂಗಾರು

ಮುದ್ದು ಬಂಗಾರು
ನಿನಗೆ ನಾನಾ ಹೆಸರು...
ನನ್ನ ಜೀವನದ ಜೀವದ ಉಸಿರು ನೀನು...
ನಿನ್ನ ಆ ಪ್ರೀತಿಗೆ ಸದಾ ಚಿರಋಣಿ ನಾನು....
i love u appuu

- Bhavyashree K.G1

01 Oct 2020, 01:55 pm