Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮುನಿಸು

ಯಾವ ಕೆಲಸ ಮಾಡಲು ಇಲ್ಲ ಮನಸ್ಸು
ಕಾರಣ ನಿನ್ನ ಮೇಲೆ ಮುನಿಸು
ಚುಚ್ಚಿ ಮಾತನಾಡುವ ಮುನ್ನ ಒಮ್ಮೆ ಯೋಚಿಸು

- Bhavyashree K.G1

01 Oct 2020, 11:08 am

ಬೇಜಾರು

ಭ್ರಷ್ಟಾಚಾರಿ ಕಳ್ಳರನ್ನು
ನಾಯಕ ಜನ ನಾಯಕನೆಂದು
ಗೆಲ್ಲಿಸಿ ಆಳಲು ದೇಶ ರಾಜ್ಯ ಕೊಟ್ಟರೆ
ದೇಶ ಮಾರಾಟವಾಗದಿರುವುದೇ
ರಾಜ್ಯ ಲೂಟಿಯಾಗದಿರುವುದೇ
ಜನರೇ ಮಾಡಿಕೊಂಡ ತಪ್ಪಿಗೆ
ಶೀಕ್ಷೆ ಅನುಭವಿಸುವುದು ಒಂದೇ ಬಾಕಿ
ಭ್ರಷ್ಟಾ ಕಳ್ಳರ ಕೈಗೆ ರಾಜ್ಯ ಕೊಟ್ಟು
ರಾಜ್ಯ ಲೂಟಿಯಾಗಿದೆ ಎಂದು
ಬೀದಿಗೆ ಇಳಿದು ಹೋರಾಟ ಮಾಡಿದರೆ
ನಿವು ಆಗುವಿರಿ ಜೈಲು ಪಾಲು
ಮನೆಯವರಾಗುವರು ಬೀದಿ ಪಾಲು
ಎಚ್ಚರ ಎಚ್ಚರಿಕೆ ಇರಲಿ
ಮತ ಹಾಕುವ ಮುನ್ನ ನಿಮಗೆ

- ರಾಜು ಹಾಸನ

01 Oct 2020, 12:30 am

ರಕ್ಷಿಸಿ ಗೌರವಿಸಿ

ಪ್ರಕೃತಿಯನ್ನೇ ದೇವರೆಂದು
ಪೂಜಿಸುತ್ತಿದ್ದ ದ್ರಾವಿಡರಿಗೆ
ವಿಷ ಸರ್ಪದಂತೆ ಸುತ್ತಿಕೊಂಡಿದೆ
ಧರ ಸಂಸ್ಕೃತಿ ಆರ್ಯಸಂಸ್ಕೃತಿ

ಮನುಸ್ಮೃತಿಯೆಂಬ
ಮಹಾಮಾರಿ ಪಿಡುಗನ್ನು
ಮೈ ತುಂಬಿಕೊಂಡು
ಹುಚ್ಚಾಟ ಆಡುವ ದುಷ್ಟ
ನೀಚಾರನ್ನು ಸಂಹಾರಿಸಿ
ಹೆಣ್ಣನ್ನು ರಕ್ಷಿಸಿ ಗೌರವಿಸಿ

- ರಾಜು ಹಾಸನ

30 Sep 2020, 07:33 pm

ದಿಗ್ಬಂಧನ

ಚುನಾವಣೆ ಬಂತೆಂದರೆ
ಬರುವರು ಭೂತ ಪ್ರೇತಗಳ ರೀತಿ
ಎಲ್ಲಿಯಂದ್ದರಲ್ಲಿಗೆ
ಕರೆಯದಿದ್ದರು ಬರುವರು
ಬಂದು ಬಿದ್ದು ಬೇಡುವರು
ಕೈ ಮುಗಿದು ಅಣ್ಣ ಅಕ್ಕ ತಂಗಿ ತಮ್ಮ
ಅಮ್ಮ ಅಪ್ಪ ಎಂದು ಹಲ್ಲು ಗಿರುಚುತ್ತ
ಬೇಡವೆಂದರು ಬರುವುದು
ಮನೆ ಬಾಗಿಲಿಗೆ ಚಿಲ್ಲರೆ ನೋಟು
ಸುಮ್ಮನಿದ್ದರು ಕರೆದು ತುಂಬುವರು
ಚಡ್ಡಿ ಜೇಬಿಗೆ ಗುಂಡು ತುಂಡು
ಏನಿದು ಗೌರವ ಏನಿದು ಸತ್ಕಾರ
ಹಹ್ ಹಹ್ ಬಾಲೆ ಬಾಲೆ
ಫಲಿತಾಂಶ ಬಂತೆಂದರೆ
ಯಾವ ಭೂತ ಪ್ರೇತಗಳು
ಕಣ್ಣಿಗೆ ಬಿದ್ದಿಲ್ಲ ಎಲ್ಲಿ ಯಾವ ಮರಕ್ಕೆ
ಜೋತು ಬಿದ್ದಿವೆಯೋ ಗೋತ್ತಿಲ್ಲ
ಆದರು ಕೇಡಕು ಮಾಡುತ್ತಿವೆ
ಕಣ್ಣಿಗೆ ಕಾಣದಂತೆ ಭೂತ ಪ್ರೇತಗಳು
ಜನರ ಮತ ಹಣ ತಿಂದು
ತಕ್ಕ ಶಾಸ್ತಿ ಮಾಡಬೇಕಾಗಿದೆ ಎಲ್ಲರೂ
ನಿಮ್ಮ ನಿಮ್ಮ ಮತಗಳ ದಿಗ್ಬಂಧನ ಮಾಡಿ
ಚಡ್ತಾ ಮಾಡುವ ಭೂತ ಪ್ರೇತಗಳಿಗೆ

- ರಾಜು ಹಾಸನ

30 Sep 2020, 02:54 pm

ಕನಸಿನ ಲೋಕ

ಕನಸಿನ ಲೋಕ
-------_---_-------
ನಾನೇ ಹೀರೋ .............
ನನ್ನ ಲೋಕದಾಗ,
ಬೇರೆ ಹೀರೋಗಳ ಗೋಜು ಬೇಕಿಲ್ಲ.

ನನ್ನ ಕನಸಿನ ಲೋಕದ ಹೀರೋ...
ಯಾವಾಗಲೂ ನಾನಾದಾಗ,
ಬೇರೆ ಹೀರೋಗಳ ಫೋಟೊ ಬೇಕಿಲ್ಲ.

ನಾ ಕಾಣುವ ಕನಸು
ಯಾವಾಗಲೂ ಹಸಿರಾದಾಗ,
ಬೇರೆಯವರ ಕನಸಿನ ಕಥೆ ಬೇಕಿಲ್ಲ.

ನನ್ನ ಕನಸಿನ ಕಥೆಗಾರ
ಯಾವಾಗಲೂ ನಾನಾದಾಗ
ಬೇರೆ ಕಥೆಗಾರನ ಕಥೆ ಬೇಕಿಲ್ಲ.

ನನ್ನ ಲೋಕದ ಕನಸು
ಸಾವಿರಾರು ವಷ೯ಗಳ ಕಥೆಯಾದಾಗ
ನನ್ನ ಕನಸು ನನಸಾಗ ಬೇಕೆಂಬುದಿಲ್ಲ.

ಸಂಸಾರದಲ್ಲಿ ಕಾಣದ ಸುಖ
ಕನಸಿನಲ್ಲಿ ಕಂಡಾಗ
ಸಂಸಾರ ಸುಖಕ್ಕೆ ಬೆಲೆಯಿಲ್ಲ.

ಮಾಗಿಯ ಕನಸು
ಕನಸುಗಾರನ ಕನಸಾದಾಗ
ಮಾಗಿಯ ಕಾಲಕ್ಕೆ ಬೆಲೆಯಿಲ್ಲ..

ಮೊಗ್ಗಿನ ಮನಸು
ಕಂಡ ಕನಸು ನನಸಾದಾಗ
ಅರಳುವ ಮೊಗ್ಗಿನ ಬೆಲೆಯಿಲ್ಲ......

ಕನಸಿನಲ್ಲಿ ತೇಲುವ ಮನಸು
ಜೀವನದಲ್ಲಿ ನೆಲೆ ಕಂಡಾಗ
ಕನಸಿನ ಲೋಕಕ್ಕೆ ನೆಲೆಯಿಲ್ಲ.

--------ಖಾಜಾ

- ಖಾಜಾ

30 Sep 2020, 10:22 am

ನನ್ನಲ್ಲಿ ನಾನಾದಾಗ

ನನ್ನ ನೋವು ನಲಿವುಗಳ
ಕಾರಣ ನನ್ನ ಅಂತರಂಗದಲ್ಲಿ
ಕಾಣುವುದು ನನ್ನಲ್ಲಿ ನಾನಾದಾಗ.

ನನ್ನ ಸಾಧನೆಯ ಹಾದಿ
ಏನೆಂಬುದು ನನ್ನ ಅಂತರಂಗದಲ್ಲಿ
ಕಾಣುವುದು ನನ್ನಲ್ಲಿ ನಾನಾದಾಗ.

ಹುಟ್ಟು - ಸಾವು ಎಂಬ ಮಮ೯ಗಳ
ಮೂಲ ನನ್ನ ಅಂತರಂಗದಲ್ಲಿ
ತಿಳಿಯುವುದು ನನ್ನಲ್ಲಿ ನಾನಾದಾಗ.

ಜನರ ನಡುವಿನ ವಾದ ವಿವಾದಗಳ
ನೆಲೆ ನನ್ನ ಅಂತರಂಗದಲ್ಲಿ
ಕಾಣುವುದು ನನ್ನಲ್ಲಿ ನಾನಾದಾಗ.

ಅಧಿಕಾರ ಸಿಕ್ಕಾಗ ಅಂಧಕಾರದ
ಹರಿವು ನನ್ನ ಅಂತರಂಗದಲ್ಲಿ
ಕಾಣುವುದು ನನ್ನಲ್ಲಿ ನಾನಾದಾಗ.

ಜಾತಿ ಮತ ಪಂತ ಗಳ
ಮೀರಿದ ಜೀವನ ನನ್ನ ಅಂತರಂಗದಲ್ಲಿ
ಕಾಣುವುದು ನನ್ನಲ್ಲಿ ನಾನಾದಾಗ.

ಎಲ್ಲ ಧಮ೯ ತತ್ವಗಳ
ಸಿದ್ದಾಂತ ನನ್ನ ಅಂತರಂಗದಲ್ಲಿ
ಅರಿಯುವೆನು ನನ್ನಲ್ಲಿ ನಾನಾದಾಗ.

ಎಲ್ಲರ ಮನಸುಗಳ
ಆಳ ನನ್ನ ಅಂತರಂಗದಲ್ಲಿ
ಅಳೆಯುವೆನು ನನ್ನಲ್ಲಿ ನಾನಾದಾಗ.

ನನ್ನಲ್ಲಿ ನಾನಾಗುವ ಪರಿ
ತಿಳಿಯುವ ಮನ ನನ್ನಲ್ಲಿ ಇಲ್ಲದಾಗ,
"ಅರಿವೇ ಗುರು" ಕಾಣುವುದೆಲ್ಲಿ?

ಯಾರನ್ನು ದೂಷಿಸಲಿ
ನನ್ನ ಅಂತರಂಗದ ಪರಿ
ನಾನೇ ಅರಿಯಲಾರೆ.
-------ಖಾಜಾ.

- ಖಾಜಾ

30 Sep 2020, 10:18 am

ಕುರುಡು ಕಾಂಚಾಣ

ಹಳ್ಳಿ ಹಳ್ಳಿಯಲ್ಲೂ ಹುಳಿ ಹೆಂಡ ತುಂಬಿ
ಬಂಗಾರದ ಭೂಮಿ ಬಾಯ್ತೆರೆದು ಅಳಲು
ಅನ್ನದ ನಾಡಲ್ಲೆಲ್ಲ ಅಕಟಕಟಾ ಎದ್ದಿರಿಲು
ಕುರುಡು ಕಾಂಚಾಣ ಅಲ್ಲಿ ಕುಣಿಯುತ್ತಿತ್ತು //

ಓಟು ನೋಟಿನ ನಡುವ ಮದ್ಯದಂತರದಲ್ಲಿ
ಕೋರ್ಟು ಕಟ್ಟೆಲೆಗಳ ಸುಳ್ಳು ಸತ್ಯಗಳ ಮದ್ಯ
ಸಾಹಿತ್ಯ ಸಂಗೀತ ಪುರಸ್ಕಾರಗಳ ಒಳಗೊಮ್ಮೆ
ಕುರುಡು ಕಾಂಚಾಣ ಅಲ್ಲಿ ಕುಣಿಯುತ್ತಿತ್ತು //

ಸಿರಿವಂತರ ಸೋಕ್ಕಿನಲಿ ಬಡವನ ರಟ್ಟೆಯಲಿ
ಅಧಿಕಾರಿಗಳ ಧರ್ಪದಲಿ ಆಳುಗಳ ಕೊಕ್ಕಿನಲ್ಲಿ
ರಾಜಕಾರಣಿಗಳ ಬೊಕ್ಕಸದಲ್ಲಿ ನಲಿನಲಿದು
ಕುರುಡು ಕಾಂಚಾಣ ಅಲ್ಲಿ ಕುಣಿಯುತ್ತಿತ್ತು //

ಸತ್ತ ಹೆಣಗಳ ಸುಟ್ಟ ಸುಡುಗಾಡು ಬೂದಿಯಲಿ
ಬಚ್ಚಿಟ್ಟ ಬದುಕ ಕದ್ದವರ ಕೈಗಳಲಿ ತೆಲಾಡುತ
ಎಂದೆಂದಿಗೂ ನಾನ್ಯಾರಿಗು ಸೇರಲ್ಲ ಎಂದೇನುತ
ಕುರುಡು ಕಾಂಚಾಣ ಅಲ್ಲಿ ಕುಣಿಯುತ್ತಿತ್ತು //

ಕಾಸಿಂದೆ ಬಿದ್ದೋರು ಕಣ್ಮುಂದೆ ಇದ್ದೋರು
ಸದ್ಗುರುವಿನ ಚರಣದಲಿ ಶಾರಣಾದರೋ
ಇಟ್ಗೊಂಡು ಕಟಗೊಂಡು ಕುಪ್ಪಳಿಸಿ ಕುಣಿದು
ಕಾಂಚಾಣದ ಜೊತೆಗೂಡಿ ಮಣ್ಣಾದರೋ //



ಕಲ್ಮೇಶ ಬಡಿಗೇರ
೯೭೪೩೫೩೯೬೫೭
............ಬಾದಾಮಿ........

- Kalmesh Badiger

29 Sep 2020, 07:36 pm

ನಾ ಇರುವುದೇ ಹಿಂಗೆ

ಆದು ಹಾಂಗೆ ಇದು ಹಿಂಗೆ
ಅವರು ಹಾಗೆ ಇವರು ಹೀಗೆ
ಅವರು ಅವರೇ ಇವರು ಇವರೇ
ಅವರು ಕೂಡ ಇವರ ಹಾಗೆ
ಇವರು ಕೂಡ ಅವರ ಹಾಗೆ
ಯಾರು ಯಾರ ಹಾಗೆಯು ಅಲ್ಲ
ಎಲ್ಲರೂ ಅವರವರ ಹಾಗೆ

ಹಾಗೆ ಹೀಗೆ ಎಂದು
ನನ್ನ ಸುತ್ತ ಮುತ್ತ ನೂರಾರು
ಸಾವಿರಾರು ಪ್ರಶ್ನೆಗಳಿದ್ದರು
ನನ್ನ ಉತ್ತರ ಒಂದೇ ಒಂದೇ
ನಾ ಇರುವುದು ಹಿಂಗೆ ಹಿಂಗೆ

- ರಾಜು ಹಾಸನ

29 Sep 2020, 04:36 pm

ಸರಳತೆ

ಅಪ್ಪ ಅಮ್ಮ
ನಮ್ಮಗೆ ಏನು ಕೊಟ್ಟ್ರೂ
‌ ‌ ಅನ್ನೊದು ಮುಖ್ಯ ಅಲ್ಲ
ಅಪ್ಪ ಅಮ್ಮನಿಗೆ ನಾವು
ಏನು ಕೊಟ್ವೀ ಅನ್ನೊದು ಮುಖ್ಯ

ಅಪ್ಪ ಅಮ್ಮನನ್ನು ನಾವು
ಪ್ರಶ್ನಿಸುವ ಮುನ್ನ ನಮಗೆ ನಾವೇ
ಹಾಕಿಕೊಳ್ಳಬೇಕು ಒಂದು ಪ್ರಶ್ನೆ
ಆಗ ಸಿಗುವುದು ಉತ್ತರವಲ್ಲ
ನಮಗೆ ಆಗುವ ಜ್ಞಾನೋದಯ

- ರಾಜು ಹಾಸನ

29 Sep 2020, 10:10 am

ಉಸರವಳ್ಳಿ

ದಿನಕ್ಕೊಂದು ಬಣ್ಣ
ಕ್ಷಣಕ್ಕೊಂದು ಬಣ್ಣ
ಬದಲಿಸುವ ಮರದ ಮೇಲಿನ
ನಾಲ್ಕು ಕಾಲಿನ ಪ್ರಾಣಿ
ಉಸರವಳ್ಳಿಯಾದರೆ

ದಿನ ಜನ ಬದಲಾದಂತೆ
ದಿನಕ್ಕೊಂದು ಕ್ಷಣಕ್ಕೊಂದು
ಮಾತಿಗೊಂದು ಬಣ್ಣ ಬದಲಿಸುವ
ಮಣ್ಣಿನ ಮೇಲೆ ನೆಡೆದಾಡುವ
ಎರಡು ಕಾಲಿನ ಪ್ರಾಣಿ
ಉಸರವಳ್ಳಿ ಮನುಷ್ಯನಲ್ಲವೇ

ಕಾಲ ಬದಲಾಗದಿದ್ದರು
ಜನ ಬದಲಾದಂತೆ ಎಲ್ಲಾರು
ಬದಲಾಗುವುದು ಸಹಜ ಆದರೆ
ತಮ್ಮ ಮನಃಸಾಕ್ಷಿಯನ್ನೆ ಕೊಂದು
ಬದಲಾಗುವುದು ಆತ್ಮವಂಚನೆ
ತಮ್ಮಗೆ ತಾವೇ ಮಾಡಿಕೊಂಡ ದ್ರೋಹ

- ರಾಜು ಹಾಸನ

29 Sep 2020, 09:53 am