Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ವಿಷ ಬೀಜ

ಜಾತಿ ಎಂಬುವುದು ರೋಗ
ಮುಟ್ಟಿದರೆ ಅಂಟಿಕೊಳ್ಳುವುದು
ತೊಳೆದರು ಹೋಗದಿರುವುದು
ಉಜ್ಜಿದರು ಮಾಸದಿರುವುದು
ಸುಟ್ಟರು ಬೂದಿಯಾಗದಿರುವುದು
ಬೂದಿ ಮುಚ್ಚಿದ ಕೆಂಡದಂತೆ
ಸುಡುತ್ತಿದೆ ಅಂಟು ರೋಗವೆಂಬ
ವಿಷ ಬೀಜದ ಕಳೆ ಜಾತಿಯ ಕೊಳೆ

- ರಾಜು ಹಾಸನ

12 Oct 2020, 04:35 pm

ಪಂಗನಾಮ

ಚಿಲ್ಲರೆ ಕೊಟ್ಟರೆ ಮುಟ್ಟುವುದಿಲ್ಲ
ನೋಟು ಕೊಟ್ಟರೆ ಬಿಡುವುದಿಲ್ಲ
ನಮ್ಮ ಅಧಿಕಾರಿಗಳು
ಅರ್ಜಿ ಕೊಟ್ಟರೆ ಸ್ವೀಕರಿಸುವುದಿಲ್ಲ
ಅಧಿಕಾರ ಕೊಟ್ಟರೆ ತಿರಸ್ಕಾರಿಸುವುದಿಲ್ಲ
ನಮ್ಮ ಜನ ನಾಯಕರು

ಹಣ್ಣುಕಾಯಿ ಕೊಟ್ಟರೆ ಆರತಿ
ದುಡ್ಡು ಕೊಟ್ಟರೆ ಮಂಗಳಾರತಿ
ಖಾಲಿ ಕೈಗೆ ಚೆಂಡು ಹೂವು
ಹಣೆಗೆ ಪಂಗನಾಮ ಹಾಕಿ
ಪುಂಗಿ ಊದುವರಯ್ಯ
ಡೊಳ್ಳು ಹೊಟ್ಟೆ ಪೂಜಾರಿಗಳು

- ರಾಜು ಹಾಸನ

12 Oct 2020, 09:30 am

ನಡೆ ನುಡಿ ಹಿತ ಮಿತ

ನಾವು ಆಡುವ
ಮಾತು ಬಲು ಚಂದವೆಂದು
ಆಡದಿರಿ ಹಸಿ ಸುಳ್ಳು
ಚುಚ್ಚದಿರಲಿ ಮಾತು ಮುಳ್ಳಾಗಿ
ಕೊಲ್ಲದಿರಲಿ ಮೌನವಾಗಿ
ಮಾತು ಹಿತವಾಗಿರಲಿ
ಮೌನ ಮಿತವಾಗಿರಲಿ
ಇಲ್ಲವಾದಲ್ಲಿ ಮಾತು
ಮುಳ್ಳಾಗುವುದು
ಮೌನ ವಿಷವಾಗುವುದು
ಎಚ್ಚರವಿರಲಿ
ನಾವು ಆಡುವ ಮಾತಿನಲ್ಲಿ
ಹಿಡಿತವಿರಲಿ
ನಮ್ಮ ನಡೆ ನುಡಿಯಲ್ಲಿ

- ರಾಜು ಹಾಸನ

12 Oct 2020, 12:01 am

ದೇವ ಗಂಗೆ ಕಾವೇರಿ

ಭೂಮಿಯ ದಕ್ಷಿಣ ಬಾಗದ ತುದಿಯಲ್ಲಿ
ಜಲ ಕ್ಷಾಮವು ತೋರಲು ಭಾರತದಿ
ನೆಲ ಜಲ ಪ್ರಾಣಿ ಪಕ್ಷಿ ಮರ ಗಿಡ ಒಣಗಿ
ಋಷಿ ಮುನಿಗಳು ಬೇಡಲು ದೇವರಲಿ //

ಕೈಲಾಸದ ಕಡೆ ಪ್ರಯಾಣವ ಬೇಳೆಸುತಲಿ
ಮಹಾದೇವನ ಬೇಡಿಕೊಳ್ಳಲು ಭಕ್ತಿಯಲ್ಲಿ
ಶ್ರೀ ಅಗಸ್ತ್ಯ ಮುನಿಗಳ ಭಕ್ತಿಗೆ ವಲಿಯುತ
ಪರಶಿವನು ಕರುಣಿಸಿದ ದೇವ ಗಂಗೆಯನು //

ಪಯಣದ ಹಾದಿಯ ಸುಸ್ತನು ಕಳೆಯಲು
ಘಟ್ಟದ ಮೆಗಡೆ ತುಸು ವಿಶ್ರಮಿಸಲು
ಗಜಮುಖ ದೇವನು ಕಾಕರಾಜನ ರೂಪದಿ
ಉರುಳಿಸಿದನು ಜಲ ಕಮಂಡಲವ ಕೆಳಗೆ //

ಉಕ್ಕುತಾ ಹರಿದಳು ದೇವ ಗಂಗೆಯೂ
ಕಾವೇರಿ ಎಂಬ ಹೊಸ ನಾಮದಲಿ
ಘಟ್ಟವ ಇಳಿದು ಜಲ ಭವನೆಯ ನೀಗಿ
ರಭಸದಲಿ ಸಾಗಿದಳು ತಾಯ್ ಕಾವೇರಿ //

ಅಂದಿನಿಂದ ಇಂದಿನವರೆಗೂ ಕಾವೇರಿಯು
ಸಕಲ ಜೀವಜಂತು ರೈತರನು ಸಲಹುತಾ
ಕೊಡಿಗಿನ ಕಾವೇರಿ ಎಂಬೇಸರಿನಲಿ ತಾಯಿ
ಪ್ರಖ್ಯಾತಿ ಯ ಪಡೆದಳು ಭಾರತ ಖಂಡದಲಿ //


ಕಲ್ಮೇಶ ಬಡಿಗೇರ
9743539657
.......ಬಾದಾಮಿ.......

- Kalmesh Badiger

11 Oct 2020, 11:39 am

ನನ್ನ ದೇಶ ನಮ್ಮ ಹೆಮ್ಮೆ

ದೇಶ ಕಾಯೊ ಯೋಧನಿಗೆ ಸಿಗೊ ಗೌರವ
ಈ ನಮ್ಮ ದೇಶದಲ್ಲಿ ಒಬ್ಬ ರಾಜಕಾರಣಿಗೂ ಇಲ್ಲ ಒಬ್ಬ ಅಧಿಕಾರಿಗೂ ಇಲ್ಲ
ಯಾಕೆಂದ್ರೆ
ಒಬ್ಬ ತಪ್ಪು ಹೆಜ್ಜೆ ಇಟ್ಟರೆ ಇಡಿ ಖಾಂದನಕ್ಕೆ ಗೆಜ್ಜೆ ಕಟ್ಟತ್ತಾರೆ
ಯಾಕೆ ಸೈನಿಕರೇನು ತಪ್ಪೆ ಮಾಡಲ್ವ ಮಾಡುತಾರೆ
ಆದರೆ ದೇಶ ಸೇವೆ ಮುಗಿದ ಮೇಲೆ ಪ್ರಾಮಾಣಿಕತೆ ಮೆಚ್ಚಿ
ಪಿಂಚಣಿಗೊಸ್ಕರ ಚಪ್ಪಲಿ ಸವೆದು ಹೋಗಿ ಸುಸ್ತ ಆಗೊ ತರ
ಪಿಡಿಸುತ್ತಾರಲ್ವ ರಾಜಕಾರಣಿಗಳು ,ಅಧಿಕಾರಿಗಳು ಅವರಿಗೆ ಲಂಚ ಅಂತ ಭಿಕ್ಷೆ ನೀಡಬೇಕಲ್ವ ಅದೇ ಒಂದು ತಪ್ಪು
ದೇಶದ ಗಡಿಯಾಚೆ ಹುಲಿ ಬಂದ್ರು ಹೊಡೆದು ಉರುಳಿಸೊ ತಾಕತ್ತು ನಮ್ಮ ಸೈನಿಕರದು
ಅದೇ ದೇಶದೊಳಗಿರೊ ಇಲಿಗಳನ್ನ ಹೊಡೆದು ಬಿಸಾಡೊಣ ಅಂದ್ರೆ ಕಾಯ್ದೆ ಕಾನೂನು ಸಂವಿಧಾನ ಅಂತ ಇದೆ ಸಾಕ್ಷ್ಯಾಧಾರವಿಲ್ಲದೆ ಇಲಿಗಳು ಹೆಗ್ಗಣಗಳ ತರ ಆಗಿದಾವೆ
ಬಿಲ ಬಗೆಯೊದೊಂದೆ ಕೆಲಸ
ಸಾಕ್ಷ್ಯಾಧಾರ ಮೂಲಕ ಸಿಕ್ಕರೆ ಕಾನೂನು ಚೌಕಟ್ಟಲ್ಲಿ ಚಟ್ಟ ಕಟ್ಟೊದೆ

@Wishu

- Wishu@

11 Oct 2020, 11:07 am

ಹುಟ್ಟು ಹಬ್ಬ

ಸುಂದರ ಮನಸ್ಸಿನ
ಮುದ್ದು ಹುಡುಗಿ
ಮುದ್ದು ಹೃದಯಾದ
ನನ್ನ ಬಾಳ ಸಂಗಾತಿ
ನಗು ನಗುತ್ತಾ ಇರಲಿ
ಚಿರ ಕಾಲ ಬೆಳ್ಳಿ ಮೋಡಗಳ
ಚುಕ್ಕಿ ತಾರೆಯಂತೆ
ಹರುಷವಿರಲಿ ಸಾದಾ ಕಾಲ
ಆಗಸದ ಹಕ್ಕಿಯಂತೆ
ಬದುಕು ಬಂಗಾರವಾಗಿರಲಿ
ವರುಷಗಳು ಉರುಳಿದರು
ಸಂತೋಷ ತುಂಬಿರಲೆಂದು
ಹೃತ್ಪೂರ್ವಕ ಹುಟ್ಟು ಹಬ್ಬದ
ಶುಭಾಷಯ ಕೋರುವ
ಇಂತಿ ನಿನ್ನ ಗೆಳಯ

- ರಾಜು ಹಾಸನ

10 Oct 2020, 11:24 pm

ಕಿರು ನಗೆಯಲಿ

ನನ್ನದೆ ಜೀವನದಲಿ ನಿನ್ನಯ ಒಡನಾಟ
ನರ್ತಿಸಿ ನಾಚಿಸುವ ನವಿಲಿನ ನಿನ್ನ ಮೈಮಾಟ
ಕಂಡೆ ನಿನ್ನ ಕೀರು ನಗೆಯ ಕಳ್ಳ ನೋಟ
ಕಾಯ್ದಿರಿಸಲಿ ಮಿಡಿಯುವ ನನ್ನ ಹೃದಯಕೆ
ನುಡಿಸು ಬಾ ಹೂ ಬಾಣ ತಂತಿಯ ಮಿಟಿ

- Wishu@

10 Oct 2020, 08:03 pm

ಮಾನವ 2020

ಕಾಡು ಕಡೆದು ನಾಡು ಬೆಳಸಿದೆ
ನಾಡ ನುಡಿಗಳ ದೂರಸರಿಸಿದೆ
ದಾರಿ ದಾರಿಗು ದೀಪ ವಿರಿಸಿದೆ
ನೀನ್ ಕತ್ತಲಲ್ಲಿ ಮುಳುಗಿದಲ್ಲ //

ಬೆಟ್ಟ ಗುಡ್ಡಗಳ ಅಗೆದು ಬಗೆದೆ
ಹಳ್ಳಕೊಳ್ಳಗಳನ್ನ ಮುಚ್ಚಿಬಿಟ್ಟೆ
ಹರಿವ ನದಿಗೆ ಅಡ್ಡ ಗೋಡೆ ಕಟ್ಟಿ
ಮರವ ಕಡಿದು ಕಲ್ಲುಗಳನು ನೆಟ್ಟೆ //

ಕಾಲಯಮನು ಕೆರಳಿದನೆಂದು
ಹೊಸದೊಂದು ಕಥೆಯಕಟ್ಟಿ
ಮಳೆ ಬೆಳೆಯು ಬತ್ತಿ ಹೋಗಲು
ದೇವರೆಡೆಗೆ ಹೊರಳಿ ಉಳನ್ನಿಟ್ಟೆ //

ಕ್ಷಣಿಕ ಸುಖಕ್ಕೆ ಧನಿಕರಿಗೆ ನಿನ್ನ
ಸಂತಸದ ಪಯಣ ಮಾರಿಬಿಟ್ಟೆ
ಅಯ್ಯೋ ನಾನು ತಪ್ಪು ಮಾಡ್ದೆ
ಎಂದು ನರಳಿ ಪ್ರಾಣವ ಬಿಟ್ಟೆ //

ಮಾನವ ಮಾನವ ಎಚ್ಚರ ಎಚ್ಚರ
ಸಾಕುಮಾಡು ಪ್ರಕೃತಿಯ ನಾಶ
ಕೆರಳಿನಿಂತರೆ ನಡೆವುದು ಅವಾಂತರ
ನೀನೆಲ್ಲಿ ಓಡುವೆ ಆಗ ದೇಶಾಂತರ //

ಕಲ್ಮೇಶ ಬಡಿಗೇರ
9743539657
......ಬಾದಾಮಿ......

- Kalmesh Badiger

10 Oct 2020, 05:39 pm

ತಾಯಿ ದೇವರು

ದುಡಿಯುತಲಿ ದುಃಖವನೆಲ್ಲ ನುಂಗಿ
ಹಾಲುಣಿಸಿ ಕರುಳ ಬಳ್ಳಿಯ ಕುಡಿಗೆ
ಸುತ್ತಿಗೆಯಲಿ ಹಿಡಿಗಲ್ಲು ಪುಡಿಮಾಡಿ
ದಣಿದು ಕುಂತಳು ತಾಯಿ ದೇವರಂತೆ //

ಅರೆಹೊಟ್ಟೆ ಅರೆಬಟ್ಟೆ ಬಿರುಬಿಸಿಲು
ಸುಳಿ ಗಾಳಿ ಚಳಿ ಗೆ ಅಂಜದೆ ತಾಯಿ
ಗುಡುಗು ಸಿಡಿಲು ಮಳೆ ಆರ್ಭಟ ಮೆಟ್ಟಿ
ಮಕ್ಕಳಿಗೆ ಸಲುಹಿದಳು ಮಹಾ ತಾಯಿ //

ಪಡಿಕಲ್ಲುಗಳ ಪುಡಿ ಗುಟ್ಟುತಾ ತಾಯಿ
ಹಸಿವ ನೀಗಿಸಿ ಹೊಸ ಜಗವ ಕಟ್ಟಿದೆ
ಹುಸಿ ಮಾತನಾಡದೆ ಹಸಿ ಕೂಸು ಎತ್ತಿ
ಕರುಣೆ ಮಮತೆಯಲಿ ತೇಲಿಸಿದೆ ತಾಯಿ //


ಕಷ್ಟದಲ್ಲು ಕಲ್ಪವಕ್ಷ ವಾದೆ ಜಗದಲ್ಲಿ
ಅಷ್ಟ ದಿಕ್ಕಿನಲ್ಲು ತಾಯಿ ದೇವರಾದೆ
ಸೃಷ್ಠಿಯಲ್ಲಿ ತಾಯಿಗಿಂತ ದೇವರಿಲ್ಲ
ವೆಂದು ಧರೆಗೆ ಸಾರಿ ಸಾರಿ ಹೇಳಿದಲ್ಲ //

ನಿನ್ನ ಒಡಲ ಕರುಳ ಕುಡಿಯ ಕಂದ
ಅಮ್ಮಾ ಎನಲು ಅಂದ ಮಹಾನಂದ
ದಣಿವು ಮರೆಸಿ ದುಃಖ ವನ್ನ ದೂಡಿ
ನಗುವ ತಾಯಿ ನಿನಗೆ ಕೋಟಿ ಶರಣು //

ಕಲ್ಮೇಶ ಬಡಿಗೇರ
9743539657
......ಬಾದಾಮಿ......

- Kalmesh Badiger

10 Oct 2020, 05:16 pm

ಜಂಬವೇಕೆ

ನಾನು ನನ್ನದೆಂದು
ಕಿತ್ತಾಡಿ ಹೊಡೆದಾಡುವ ಜನ
ಮನೆ ಮೇಲೆ ಮನೆ ಕಟ್ಟಿ
ಹಣದ ಮೇಲೆ ಹಣ ಸಂಪಾದಿಸಿ
ಸಂಪತ್ತಿನ ಮೇಲೆ ಸಂಪತ್ತು
ಕೂಡಿಟ್ಟು ಬಚ್ಚಿಟ್ಟರೇನು ಬಂತು
ತಂದೆ ತಾಯಿ ಕೊಟ್ಟ ಜೀವ
ಪ್ರಾಣ ಭಿಕ್ಷೆಯಾಗಿರುವಾಗ
ಪ್ರಕೃತಿ ಕೊಟ್ಟ ಸಿರಿ ಸಂಪತ್ತು
ನಮ್ಮದಲ್ಲದಿರುವಾಗ ಜಂಬವೇಕೆ
ರೈತ ಬೆಳೆದ ಅನ್ನ ತಿಂದು ಬದುಕುವ
ನಾವು ನನ್ನದೆಂದು ನಮ್ಮದೆಂದು
ಹೇಳುವ ಗರ್ವವು ನಮಗಿಲ್ಲ
ಏನೇ ಆದರೂ ಏನೇ ಇದ್ದರೂ
ಮಣ್ಣಲ್ಲಿ ಮಣ್ಣಾಗಿ ಹೋಗುವುದನ್ನ
ಯಾರಿಂದಲೂ ತಪ್ಪಿಸಲಾಗದು

- ರಾಜು ಹಾಸನ

10 Oct 2020, 03:45 pm