ಕಷ್ಟ ಸುಖಗಳೆರೆಡು
ಆಗಲು ರಾತ್ರಿ ಇದ್ದಂತೆ
ಕಷ್ಟವೆಂದು ಕುಳಿತರೆ
ನೆಡೆಯಾದು ಜೀವನ
ಸುಖವೊಂದಿದ್ದರೆ
ತಿಳಿಯಾದು ಜನರ ಭಾವನೆ
ಕಷ್ಟ ಸುಖಗಳಿದ್ದರೆ
ಅರ್ಥವಾಗುವುದು ಜೀವನ
ಸಾಗುವ ದಾರಿಯಲ್ಲಿ ಕಲ್ಲು
ಮುಳ್ಳೆಂದು ನಿಂತ್ರೆ ಸಾಗದು ದಾರಿ
ಕಲ್ಲು ಮುಳ್ಳು ದಾಟಿ ನೆಡೆದರೆ
ಸಾಗುವುದು ಜೀವನ
ಆ ಹತ್ತು ದಿನ,
ನಿಮ್ಮ ಜೊತೆಗಿನ ಜೀವನ.....
ತುಂಬಾ ರೋಮಾಂಚನ....
ರಾತ್ರಿಯ ವೇಳೆ ಕಣ್ಣಾ ಮುಚ್ಚಾಲೆ...
ಹಗಲಿನಲ್ಲಿ, ಕೈ ನೋವುವಷ್ಟು ಕಡಲೆಕಾಯಿ ಸುಲಿಯುವುದು
ಇದರ ನಡುವೆ ಎಲ್ಲರ ತುಂಟಾಟಗಳು..
ಏನು ಕೊಳ್ಳದಿದ್ದರು... ದಿನವೂ ಮಾಲ್ ಗಳಲ್ಲಿ... ನಮ್ಮ ಸುತ್ತಾಟ....
ಅದರ ನಡುವೆ ಅಣ್ಣ ತಮ್ಮನ ತುಂಟಾಟ....
ಎಲ್ಲಿ ಹುಡುಕಿದರೂ ಸಿಗದು ಈ ಪ್ರೇಮ ಬಾಂಧವ್ಯದ ಸವಿಯೂಟ......
for sweet sissy and bro
ಭೂ ಲೋಕದ ನರ ಮಾನವರು
ಸೇವಿಸುವುದು ಸಸ್ಯ ಆಹಾರ
ಮಾಂಸಾಹಾರ ಮಿಶ್ರ ಆಹಾರವಾದರೆ
ದೇವಾ ಲೋಕದ ದೈವಾ ಮಾನವರು
ಸೇವಿಸುವುದ್ದದಾರು ಏನು
ನರ ಮಾನವ ಇರುವನು ನಮ್ಮ
ನಿಮ್ಮೆಲ್ಲರ ಭೂ ಲೋಕದಲ್ಲಿ
ದೇವರು ಇರುವನು ದೇವಾ ಲೋಕದಲ್ಲಿ
ಹಾಗಾದರೆ ದೇವಾ ಲೋಕಕ್ಕೆ
ಹೋಗಿ ಬಂದವನು ಯಾರಯ್ಯಾ
ಯಾವ ದೇವರು ಇಲ್ಲ
ಯಾವ ದೇವಾ ಲೋಕವು ಇಲ್ಲ
ಇರುವುದೊಂದೇ ಲೋಕ
ಅದೇ ಈ ಭೂ ಲೋಕವಯ್ಯಾ
ಈ ಭೂ ಲೋಕದ ಒಡೆಯ
ನರ ಮಾನವ ನಾವೇ ಅಲ್ಲವೇ
ದೇವರಿದ್ದಾನೆಂದು
ನಂಬಿಸುವವನು ಬಲು ಕಿಲಾಡಿ
ನಂಬಿ ಮೋಸ ಹೋಗುವವನು
ಹಳ್ಳಕ್ಕೆ ಬಿದ್ದ ಹರಕೆ ಕುರಿಯಾಗುವನಯ್ಯ
ಮನುಷ್ಯ ಜನ್ಮವೆಂಬುದು
ಅತ್ಯಮೂಲ್ಯವಾದದ್ದು ವ್ಯರ್ಥ ಮಾಡಿದಿರಿ
ಮೂಢನಂಬಿಕೆ ಕಟ್ಟು ಕಥೆಗಳನ್ನು
ನಂಬಿ ಹಾಳಾಗಬೇಡಿ
ಅಳ್ತಾನೊ ನನ್ನ ಗೆಳೆಯ ಬಿಕ್ಕಿ ಬಿಕ್ಕಿ
ಬೈತನೋ ನನ್ನ ಗೆಳೆಯ
ತನಗೆ ತಾನೇ ಬೈದುಕೊಂಡು
ಬೀದಿ ಬೀದಿ ತಿರುಗುತ್ತಾನೋ
ನಗ್ತಾನೊ ನನ್ನ ಗೆಳೆಯ
ಒಬ್ಬ ಒಬ್ಬನೇ ಮಧ್ಯೆ ರಾತ್ರಿ ಎದ್ದು
ಕುಣಿತನೋ ನನ್ನ ಗೆಳೆಯ
ಕುಡಿದು ಕುಣಿತನೊ ಹೇಳಿದ್ರೇ ಕೇಳಲ್ಲ
ಹಿಡ್ಕೊಂಡರೆ ಒದೆಯುತ್ತಾನೆ
ಬಿಟ್ಟುಬಿಟ್ಟೆ ಬಿಟ್ಟು ಹೋಗ್ಬಿಟ ನಮ್ಮೂರು
ಎಲ್ಲವನೋ ಹೇಂಗವನೋ
ಗೋತ್ತಿಲ್ಲ ನನ್ನ ಗೆಳೆಯ
ಬರುತ್ತವನೊ ಮತ್ತೆ ಬಂದು
ಕೇಳುತ್ತಾನೋ ಎಲ್ಲವಳೊ
ಹೇಂಗಾವಳೊ ನಮ್ಮ್ ಹುಡುಗಿ
ಕೂಯುತ್ತಾನೋ ನನ್ನ ಗೆಳೆಯ ಪೀಟಿಲು
ಹಾಡ್ತನೋ ಹಾಳೆ ರಾಗ
ಬಿಟ್ಟು ಹೋದ್ದೆಲೇ ಗೆಳತಿ ನೀ ನನ್ನ ಬಿಟ್ಟು
ಮರೆತು ಹೋದ್ದೆಲೇ ಗೆಳತಿ
ನೀ ನನ್ನ ಪ್ರೀತಿ ಮರೆತು
ಸಾಕಪ್ಪಾ ಸಾಕು ಇವನ ಸಹವಾಸ
ದುಡಿದು ತಿನ್ನುವ ಬಡವ
ದುಡಿಸಿಕೊಂಡು ತಿನ್ನುವ ಶ್ರೀಮಂತ
ಬಿಟ್ಟು ಹೋಗುವರು
ಒಂದಲ್ಲ ಒಂದು ದಿನ ಸ್ಮಶಾನದ ಹೂವಾಗಿ
ಹುಟ್ಟಿದಾಗ ತಂದಿದ್ದು ಆಸೆ ಅಂತಸ್ತದರೂ
ಸತ್ತಾಗ ಬಿಟ್ಟು ಹೋಗಬೇಕು ಎಲ್ಲವನ್ನೂ
ಶಾಶ್ವತವಲ್ಲದ ಈ ಜೀವಕ್ಕೆ
ಸಿರಿತನವಾದರೇನು ಬಡತನವಾದರೇನು
ಇದಷ್ಟು ದಿನ ಮಾನವನಾಗಿ ಬದುಕಿ
ಸತ್ತ ಮೇಲೆ ಹೇಣವಾಗಿ ಹೋಗಬೇಕು ಅಷ್ಟೇ
ಈ ಮನುಷ್ಯ ಜೀವನ ಇಷ್ಟೇ
ಸ್ಮಶಾನದ ಹೆಣವ
ಮಣ್ಣು ನುಂಗಿಕೊಂಡರೆ
ತಟ್ಟೆಗೆ ಬಿದ್ದ ಹಣವನ್ನು
ಪೂಜಾರಿ ನುಂಗಿಕೊಳ್ಳುವನು
ಒಟ್ಟಿನಲ್ಲಿ ಸ್ಮಶಾನಕ್ಕೆ ಹೋದ ಹೇಣ
ಪೂಜಾರಿ ತಟ್ಟೆಗೆ ಬಿದ್ದ ಹಣ
ಎರಡು ಒಂದೇ
ಮತ್ತೆ ಮರಳಿ ಬಾರದು