ಸುಮಧುರ ಸುಂದರ
ಮನಸ್ಸುಗಳ ಸಂಗಮ
ಹೃದಯ ಹೃದಯಗಳ
ಮಿಲನ ಸಂಮಿಲನ
ಪ್ರೀತಿ ಪ್ರೇಮದ
ಬೆಳ್ಳಕ್ಕಿ ಜೋಡಿ
ಜನುಮ ಜನುಮದ
ಅನುಬಂಧದ ಜೋಡಿ
ನವ ನವೀನ
ಮದುಮಕ್ಕಳ ನವ ಜೋಡಿ
ನಗು ನಗುತಾ
ಸುಖವಾಗಿ ಬಾಳಲಿ
ನೂರಾರು ಕಾಲ
ಸುಖವೆಂದರೆ ಓಡಿ ಬರುವ ಮಾನವ
ಕಷ್ಟವೆಂದರೆ ಓಡಿ ಹೋಗುವ ಮನುಜ
ಕಷ್ಟ ಸುಖ ನೋವು ನಲಿವು
ಏನೇ ಬಂದರೂ ಓಡಿಹೋಗದೆ
ಧೈರ್ಯದಿಂದ ಓಡಿ ಬಂದು
ಹೆಗಲಿಗೆ ಹೆಗಲು ಕೊಟ್ಟು ಕಾಯುವ
ಕರುಣಮಹಿ ತಂದೆ ತಾಯಿಗೆ
ಸಾದಾ ಕಾಲ ನಾ ಚಿರ ಋಣಿ
ಆ ದೇವರಿಗೆ ಈ ದೇವರಿಗೆ
ಆ ಹರಕೆ ಈ ಹರಕೆಯೆಂದು
ಮಾಡಿಡುವರಯ್ಯ ಎಡೆಯೂಟ
ಕುರಿ ಕೋಳಿ ಕತ್ತರಿಸಿ
ತನ್ನನ್ನು ತಾನು ಕತ್ತರಿಸಿ
ಎಡೆಯೂಟ ಮಾಡಿರಿ ಎಂದರೆ
ಓಡುವರಯ್ಯ ಬಿದ್ದ್ನೋ ಎದ್ದ್ನೋ
ಎಂದು ಕೈಗೆ ಸಿಗದಂತೆ
ಪ್ರಾಣಿ ಮಾಂಸ ಕಂಡರೆ
ಜೊಲ್ಲು ಸುರಿಸುವ ಮಾನವ
ತನ್ನ ಬೆರಳು ತಾನೇ ಕತ್ತರಿಸಿ
ತಿನ್ನೆಂದರೆ ಮಾತು ಬಾರದ
ಮೂಕನಾಗುವನಯ್ಯ
ಹಸಿರು ಗರಿಕೆಯ ಹುಲ್ಲು ತಿಂದು
ಹಾಲು ಕೊಡುವ ಹಸುವಿನಲ್ಲಿ
ಮುಕ್ಕೋಟಿ ದೇವರು ಇರುವುದಾದರೆ
ಆದೇ ಹಸಿರು ಗರಿಕೆ ಹುಲ್ಲು ತಿಂದು
ಹಾಲು ಕೊಡುವ ಎಮ್ಮೆಯಲ್ಲಿ
ಯಾಕಿಲ್ಲ ಮುಕ್ಕೋಟಿ ದೇವರುಗಳು
ಹಸುವಿನ ವಿಭೂತಿ ಶ್ರೇಷ್ಠವೆಂದು
ಹಣೆಗೆ ಮೈ ಕೈಗೆ ತಿಕ್ಕಿಕೊಳ್ಳುವ
ಜನರು ತಿಂದು ರುಚಿ ಕಂಡಿರುವರೇ
ಇದು ಹಸುವಿನ ಸಗಣಿ ಇಲ್ಲ
ಇದು ಎಮ್ಮೆಯ ಸಗಣಿಯೆಂದು
ಯಾರಿಗೆ ಗೊತ್ತು ಯಾರು
ಯಾವ ಸಗಣಿ ತಿಂದಿದ್ದಾರೋ ಏನು
ಅವರೇ ಬಲ್ಲವರು ಅವರೇ ನಿಪುಣರು
ಪೂಜೆ ಪುನಸ್ಕಾರ
ಹಬ್ಬ ಹರಿದಿನ ಜಪ ತಪ ಮಾಡೆಂದು
ಯಾವ ದೇವರು ಯಾವ ಪುಸ್ತಕದಲ್ಲಿ
ಬರೆದಿಟ್ಟು ಎಲ್ಲಿಗೆ ಓಡಿ
ಹೋಗಿದ್ದಾನೋ ನಾ ಕಾಣೆನು
ತಿಥಿ ಪುಣ್ಯ ತಿಥಿ ಮಾಡೆಂದು
ಯಾವ ವ್ಯಕ್ತಿ ಯಾವ ಘಳಿಗೆಯಲ್ಲಿ
ಯಾರಿಗೆ ಹೇಳಿ ಸತ್ತಿರುವನೋ
ನಾ ಕಂಡಿಲ್ಲ ನಾ ಕೇಳಿಲ್ಲ
ಯಾವುದು ದೇವರಿಗಾಗಿಯು ಅಲ್ಲ
ಸತ್ತವರಿಗಾಗಿಯು ಅಲ್ಲ
ಯಾಲ್ಲವು ನಮಗಾಗಿ
ನಮ್ಮ ಹೊಟ್ಟೆ ಪಾಡಿಗಾಗಿ ಅಷ್ಟೇ
ಸತ್ತ ಪ್ರಾಣಿಯ
ಮಾಂಸವೆಂದು ತಿನ್ನುವ ಜನ
ಸತ್ತ ವ್ಯಕ್ತಿಯ
ಹೆಣವೆಂದು ಸುಡುವ ಜನ
ಸತ್ತವನ ಸುಟ್ಟು ಬರಿ
ಬೂದಿ ಬಿಡುವರಯ್ಯ ನೀರಿಗೆ
ಸತ್ತವನು ಬಿಟ್ಟು ಹೋದ
ಆಸ್ತಿ ಅಂತಸ್ತು ಸಿರಿ ಸಂಪತ್ತನ್ನು
ಸುಡದೆ ಬಿಡದೆ ಎಡಬಿಡದೆ
ಮುಕ್ಕಿಬಿಡುವರಯ್ಯ ಈ ಜನ
ಮಾತಿನಲ್ಲಿ ಮುತ್ತು
ಮನಸ್ಸಿನಲ್ಲಿ ಹೊಲಸು
ತುಂಬಿಕೊಂಡು
ದೇವಾಲಯದ ಸುತ್ತ ಸುತ್ತಿ
ಜಪ ತಪವೆಂದು
ಕಲ್ಲು ಮುಂದೆ ಮೌನವಾಗಿ
ಕುಳಿತರೇನು ಬಂತಯ್ಯ
ಮುಕ್ತಿ ಮೋಕ್ಷಕ್ಕಾಗಿ
ಜಪ ತಪವೆಂದು
ದೇವರ ಭಜನೆ ಮಾಡುತ್ತ ಕುಳಿತರೆ
ವ್ಯರ್ಥವಾಗುವುದು ಸಮಯ
ತುಂಬದಿರುವುದು ಹಸಿದ ಹೊಟ್ಟೆ
ಆದರೂ ನಿಲ್ಲದಿರುವುದು
ದೇವರ ಹಿಂದೆ ಓಡುವ ಜನರ ಆಟ