Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನವ ನವೀನ ಕವಿಗಳ ಸ್ವರ್ಗ ಈ ಜಾಗ

ಹೊಸಬ್ಬ ನಾ ಈ ಜಾಗಕ್ಕೆ ಕರೆಯೋಲೆ ಇಲ್ಲ ಈ ಸ್ವರ್ಗಕ್ಕೆ ಹುಡುಕುತ್ತಾ ಬಂದೆ ನಾ ಪದಗಳ ಸಿಕ್ಕಿದರು ಕನ್ನಡದ ಕವಿಗಳು ಬೇಕು ನಮ್ಮ ತಾಯಿಗೆ ಇಂತ ಮಕ್ಕಳು ನಿಮಗೆಲ್ಲ ನನ್ನದೊಂದು ನಮನ

- Narasimhamurithy Narasimha

29 Sep 2020, 02:44 am

ನಿನ್ನ ನೆಡೆ ನಿನ್ನ ಗುರಿ

ಅವರಿವರು ಊದುವ
ಪುಂಗಿಗೆ ಮರುಳಾಗಿ ನಿಂತು
. ತಲೆದೂಗಿದರೆ ನೀ ಆಗುವೇ
ಅವರಿವರ ಕೈಗೊಂಬೆ

ಅವರಿವರ ಮಾತಿಗೆ
ಕಿವಿ ಕೊಡದೆ ನೆಡೆ
ನಿನ್ನ ದಾರಿಯ ಕಡೆ
ಸಾಗುವುದು ನಿನ್ನ ನೆಡೆ
ಮುಟ್ಟುವುದು ನಿನ್ನ ಗುರಿ ನಿನ್ನ ಕಡೆ

- ರಾಜು ಹಾಸನ

29 Sep 2020, 01:14 am

ಲೇಖನಿ

ಖಡ್ಗವೆಂಬುದು ನೇತ್ತರು
ಹೀರುವ ಆಯುಧವಾದರೆ
ಬರವಣಿಗೆ ಎಂಬುದು
ಮನಸ್ಸು ತಿದ್ದುವ ಆಯುಧ

ಒಬ್ಬರಿಗೊಬ್ಬರು ಹೇಳಲಾಗದ
ಮನಸ್ಸಿನ ಮೌನ ಮಾತುಗಳನ್ನು
ಮನಮುಟ್ಟುವಂತೆ ತಿಳಿಸುವ
ಮಾದ್ಯಮವೇ ಈ ಬರವಣಿಗೆ

- ರಾಜು ಹಾಸನ

29 Sep 2020, 12:45 am

...

ಭಾವನೆಗಳ ನಡುವೆ ನಿಂತು ಮನಸಿನೊಂದಿಗೆ ಮಾತನಾಡಿದರೇನು?
ಮನಸು ಭಾವನೆಗಳಾಗಬಹುದು ಆದ್ರೆ ಭಾವನೆಗಳು ಮನಸಾಗಲಾರದು... ಹಾಗೆ ಮೌನ ಮಾತಾದರೆ ಚೆನ್ನ ಆದ್ರೆ ಮಾತೆ ಮೌನವಾದರೆ

- Acchu love

28 Sep 2020, 10:22 pm

ಆಗಲು ರಾತ್ರಿ

ಕಷ್ಟ ಸುಖಗಳೆರೆಡು
ಆಗಲು ರಾತ್ರಿ ಇದ್ದಂತೆ
ಕಷ್ಟವೆಂದು ಕುಳಿತರೆ
ನೆಡೆಯಾದು ಜೀವನ
ಸುಖವೊಂದಿದ್ದರೆ
ತಿಳಿಯಾದು ಜನರ ಭಾವನೆ
ಕಷ್ಟ ಸುಖಗಳಿದ್ದರೆ
ಅರ್ಥವಾಗುವುದು ಜೀವನ
ಸಾಗುವ ದಾರಿಯಲ್ಲಿ ಕಲ್ಲು
ಮುಳ್ಳೆಂದು ನಿಂತ್ರೆ ಸಾಗದು ದಾರಿ
ಕಲ್ಲು ಮುಳ್ಳು ದಾಟಿ ನೆಡೆದರೆ
ಸಾಗುವುದು ಜೀವನ

- ರಾಜು ಹಾಸನ

28 Sep 2020, 01:55 pm

ಪ್ರೇಮ ಬಾಂಧವ್ಯ ❤️

ಆ ಹತ್ತು ದಿನ,
ನಿಮ್ಮ ಜೊತೆಗಿನ ಜೀವನ.....
ತುಂಬಾ ರೋಮಾಂಚನ....
ರಾತ್ರಿಯ ವೇಳೆ ಕಣ್ಣಾ ಮುಚ್ಚಾಲೆ...
ಹಗಲಿನಲ್ಲಿ, ಕೈ ನೋವುವಷ್ಟು ಕಡಲೆಕಾಯಿ ಸುಲಿಯುವುದು
ಇದರ ನಡುವೆ ಎಲ್ಲರ ತುಂಟಾಟಗಳು..
ಏನು ಕೊಳ್ಳದಿದ್ದರು... ದಿನವೂ ಮಾಲ್ ಗಳಲ್ಲಿ... ನಮ್ಮ ಸುತ್ತಾಟ....
ಅದರ ನಡುವೆ ಅಣ್ಣ ತಮ್ಮನ ತುಂಟಾಟ....
ಎಲ್ಲಿ ಹುಡುಕಿದರೂ ಸಿಗದು ಈ ಪ್ರೇಮ ಬಾಂಧವ್ಯದ ಸವಿಯೂಟ......
for sweet sissy and bro

- Bhavyashree K.G1

28 Sep 2020, 11:26 am

ನರ ಮನುಷ್ಯ

ಭೂ ಲೋಕದ ನರ ಮಾನವರು
ಸೇವಿಸುವುದು ಸಸ್ಯ ಆಹಾರ
ಮಾಂಸಾಹಾರ ಮಿಶ್ರ ಆಹಾರವಾದರೆ
ದೇವಾ ಲೋಕದ ದೈವಾ ಮಾನವರು
ಸೇವಿಸುವುದ್ದದಾರು ಏನು
ನರ ಮಾನವ ಇರುವನು ನಮ್ಮ
ನಿಮ್ಮೆಲ್ಲರ ಭೂ ಲೋಕದಲ್ಲಿ
ದೇವರು ಇರುವನು ದೇವಾ ಲೋಕದಲ್ಲಿ
ಹಾಗಾದರೆ ದೇವಾ ಲೋಕಕ್ಕೆ
ಹೋಗಿ ಬಂದವನು ಯಾರಯ್ಯಾ
ಯಾವ ದೇವರು ಇಲ್ಲ
ಯಾವ ದೇವಾ ಲೋಕವು ಇಲ್ಲ
ಇರುವುದೊಂದೇ ಲೋಕ
ಅದೇ ಈ ಭೂ ಲೋಕವಯ್ಯಾ
ಈ ಭೂ ಲೋಕದ ಒಡೆಯ
‌ನರ ಮಾನವ ನಾವೇ ಅಲ್ಲವೇ
ದೇವರಿದ್ದಾನೆಂದು
ನಂಬಿಸುವವನು ಬಲು ಕಿಲಾಡಿ
ನಂಬಿ ಮೋಸ ಹೋಗುವವನು
ಹಳ್ಳಕ್ಕೆ ಬಿದ್ದ ಹರಕೆ ಕುರಿಯಾಗುವನಯ್ಯ
ಮನುಷ್ಯ ಜನ್ಮವೆಂಬುದು
ಅತ್ಯಮೂಲ್ಯವಾದದ್ದು ವ್ಯರ್ಥ ಮಾಡಿದಿರಿ
ಮೂಢನಂಬಿಕೆ ಕಟ್ಟು ಕಥೆಗಳನ್ನು
ನಂಬಿ ಹಾಳಾಗಬೇಡಿ

- ರಾಜು ಹಾಸನ

27 Sep 2020, 07:36 pm

ಸುಮಧುರ ಸಂಗೀತ

ಅಳ್ತಾನೊ ನನ್ನ ಗೆಳೆಯ ಬಿಕ್ಕಿ ಬಿಕ್ಕಿ
ಬೈತನೋ ನನ್ನ ಗೆಳೆಯ
ತನಗೆ ತಾನೇ ಬೈದುಕೊಂಡು
ಬೀದಿ ಬೀದಿ ತಿರುಗುತ್ತಾನೋ
ನಗ್ತಾನೊ ನನ್ನ ಗೆಳೆಯ
ಒಬ್ಬ ಒಬ್ಬನೇ ಮಧ್ಯೆ ರಾತ್ರಿ ಎದ್ದು
ಕುಣಿತನೋ ನನ್ನ ಗೆಳೆಯ
ಕುಡಿದು ಕುಣಿತನೊ ಹೇಳಿದ್ರೇ ಕೇಳಲ್ಲ
ಹಿಡ್ಕೊಂಡರೆ ಒದೆಯುತ್ತಾನೆ

ಬಿಟ್ಟುಬಿಟ್ಟೆ ಬಿಟ್ಟು ಹೋಗ್ಬಿಟ ನಮ್ಮೂರು
ಎಲ್ಲವನೋ ಹೇಂಗವನೋ
ಗೋತ್ತಿಲ್ಲ ನನ್ನ ಗೆಳೆಯ
ಬರುತ್ತವನೊ ಮತ್ತೆ ಬಂದು
ಕೇಳುತ್ತಾನೋ ಎಲ್ಲವಳೊ
ಹೇಂಗಾವಳೊ ನಮ್ಮ್ ಹುಡುಗಿ
ಕೂಯುತ್ತಾನೋ ನನ್ನ ಗೆಳೆಯ ಪೀಟಿಲು
ಹಾಡ್ತನೋ ಹಾಳೆ ರಾಗ
ಬಿಟ್ಟು ಹೋದ್ದೆಲೇ ಗೆಳತಿ ನೀ ನನ್ನ ಬಿಟ್ಟು
ಮರೆತು ಹೋದ್ದೆಲೇ ಗೆಳತಿ
ನೀ ನನ್ನ ಪ್ರೀತಿ ಮರೆತು
ಸಾಕಪ್ಪಾ ಸಾಕು ಇವನ ಸಹವಾಸ

- ರಾಜು ಹಾಸನ

26 Sep 2020, 11:11 pm

ಸ್ಮಶಾನದ ಹೂವು

ದುಡಿದು ತಿನ್ನುವ ಬಡವ
ದುಡಿಸಿಕೊಂಡು ತಿನ್ನುವ ಶ್ರೀಮಂತ
ಬಿಟ್ಟು ಹೋಗುವರು
ಒಂದಲ್ಲ ಒಂದು ದಿನ ಸ್ಮಶಾನದ ಹೂವಾಗಿ
ಹುಟ್ಟಿದಾಗ ತಂದಿದ್ದು ಆಸೆ ಅಂತಸ್ತದರೂ
ಸತ್ತಾಗ ಬಿಟ್ಟು ಹೋಗಬೇಕು ಎಲ್ಲವನ್ನೂ
ಶಾಶ್ವತವಲ್ಲದ ಈ ಜೀವಕ್ಕೆ
ಸಿರಿತನವಾದರೇನು ಬಡತನವಾದರೇನು
ಇದಷ್ಟು ದಿನ ಮಾನವನಾಗಿ ಬದುಕಿ
ಸತ್ತ ಮೇಲೆ ಹೇಣವಾಗಿ ಹೋಗಬೇಕು ಅಷ್ಟೇ
ಈ ಮನುಷ್ಯ ಜೀವನ ಇಷ್ಟೇ

- ರಾಜು ಹಾಸನ

25 Sep 2020, 12:20 pm

ಮರಳಿ ಬಾರದು

ಸ್ಮಶಾನದ ಹೆಣವ
ಮಣ್ಣು ನುಂಗಿಕೊಂಡರೆ
ತಟ್ಟೆಗೆ ಬಿದ್ದ ಹಣವನ್ನು
ಪೂಜಾರಿ ನುಂಗಿಕೊಳ್ಳುವನು
ಒಟ್ಟಿನಲ್ಲಿ ಸ್ಮಶಾನಕ್ಕೆ ಹೋದ ಹೇಣ
ಪೂಜಾರಿ ತಟ್ಟೆಗೆ ಬಿದ್ದ ಹಣ
ಎರಡು ಒಂದೇ
ಮತ್ತೆ ಮರಳಿ ಬಾರದು

- ರಾಜು ಹಾಸನ

25 Sep 2020, 10:15 am