ಕಲಿ ಕನ್ನಡ
ನುಡಿ ಕನ್ನಡ
ಬರೆ ಕನ್ನಡ
ಸದಾ ಮೊಳಗು
ನೀ ಕನ್ನಡದ ಕಹಳೆ
ಇದರಿಂದಲೇ ಪಡೆ
ನೀ ಸದ್ಗತಿ.
ಹಿಡಿ ನೀ ಕನ್ನಡದ ಕನ್ನಡಿ
ಕಾಣುವೆ ನೀ ವಿಶ್ವದ ಗಡಿ
ಮೇರೆಯಿಲ್ಲದ ಗಡಿ ಯಾಗಲಿ ಕನ್ನಡದ ಗಡಿ
ಪ್ರತಿ ಮನೆದಲ್ಲಿ ಚಿಗುರಿದ ಕುಡಿಯ
ಎಲ್ಲೆಡೆ ಮಾತನಾಡುವ ಭಾಷೆ ಯಾಗಲಿ
ನನ್ನೀ ಕನ್ನಡ ಭಾಷೆ.
ಸೊಗಸುಂಟು ಕನ್ನಡ ನುಡಿಯಲ್ಲಿ
ಪರಭಾಷೆಗಳೆಲ್ಲಾ ಇದರಡಿಯಲ್ಲಿ.
ಬರೆಯುವ ಕೈಗಳು
ಕನ್ನಡದ ಕಳಸ ಹೊತ್ತ ಕರಗಳಾಗಲಿ.
ಕನ್ನಡ ಕಲಿಯುವ ನಾಲಿಗೆ
ಸದಾ ಪಾವನ,
ಕನ್ನಡ ನುಡಿಯುವ ನಾಲಿಗೆ
ಸದಾ ಚಂದನ.
ಕನ್ನಡಕ್ಕೆ ಕೊನೆಯಿಲ್ಲ,
ಕನ್ನಡಿಗರಿಗೆ ಭಯವಿಲ್ಲ.
ಕನ್ನಡದ ಕೋಗಿಲೆಗಳು ನಾವೆಲ್ಲ.
ಹಾಡುವೆವು ಸದಾ ಆನಂದದಿ
ಪರಮಕನ್ನಡದ ಮಡಿಲಲ್ಲಿ.
ಗಂಧದ ನಾಡಲ್ಲಿ, ಶಿಲ್ಪಿಗಳ ಬೀಡಲ್ಲಿ
ಕಣಿಯುತ, ನಲಿಯುತಾ,
ಕನ್ನಡದ ಕಂಪಿನ ಕುಸುಮಗಳು ನಾವಿಲ್ಲಿ.
ಸಾಗಿಹುದು ಭರವಸೆಯ ಬೆಳಕಲಿ,
ನಮ್ಮೀ ಜೀವನ ಕನ್ನಡದ ಮಡಿಲಲಿ.
ಕನ್ನಡದ ಕವಿಗಳು ಹಾಡಿಹೊಗಳಿದ
ಭಾಷೆ ನನ್ನವ್ವನ ನುಡಿ.
ಅನವರತ ಆಹ್ವಾನ ಕನ್ನಡದ ಕಲಿಕೆಗೆ.
ಅನವರತ ಗುಣಗಾನದ ನುಡಿ ಕನ್ನಡ.
ಕನ್ನಡ ಸಾಹಿತ್ಯ ಸಂಪದರ ಸುಮಧುರ ನುಡಿ.
ಷಟ್ಪದಿಯ ಬ್ರಹ್ಮ ರಾಘವಾಂಕನ ಬೀಡು.
ವಚನಶಾಸ್ತ್ರ ಪಿತಾಮಹ ಹಳಕಟ್ಟಿ ಯ ನಾಡು.
ರಗಳೆಗಳ ಜನಕ ಹರಿಹರ ಜನಿಸಿದಾ ನೆಲೆವೀಡು.
ಕನ್ನಡ ಕಬೀರ್ ಶಿಶುನಾಳ ಶರೀಫರ ನಾಡು.
ತ್ರಿಪದಿ ಜನಕ ಸವ೯ಜ್ಞನ ಬೀಡು.
ಕವಿಚಕ್ರವರ್ತಿ ರನ್ನನ ಸಾಹಿತ್ಯದ ಕನ್ನಡ ನುಡಿ.
ಆದಿಕವಿ ಪಂಪನ ಮರುಜನ್ಮ ಬೇಡಿದ ನಾಡು.
ಉಭಯಕವಿಚಕ್ರವತಿ೯ ಪೊನ್ನನ ಕನಸಿನ ನುಡಿ.
ವರಕವಿ ಬೇಂದ್ರೆಯವರ ಹುಟ್ಟಿದ ನಾಡು.
ಪ್ರೇಮಕವಿ ಕೆ. ಎಸ್. ನರಸಿಂಹಸ್ವಾಮಿಯ ನುಡಿ.
ಚಲಿಸುವ ವಿಶ್ವಕೋಶ ಶಿವರಾಮ ಕಾರಂತರ ನುಡಿ.
ಚಲಿಸುವ ನಿಘಂಟು ಡಿ. ಎಲ್ ನರಸಿಂಹಾಚಾರ್ ನುಡಿ.
ದಲಿತಕವಿ ಯ ಸಿದ್ದಲಿಂಗಯ್ಯರ ಭಾಷೆಯ ನುಡಿ.
ಕನ್ನಡ ಸಾಹಿತ್ಯದ ವಿಲಿಯಮ್ ವಡ೯ಸ್ವತ್ ಕುವೆಂಪು
ಮಾತನಾಡಿದ ಕನ್ನಡ ನುಡಿ.
ಕನ್ನಡ ಸಾಹಿತ್ಯ ಸದಾ ತುಂಬಿದ ಕೊಡ.
ನನ್ನವ್ವನ ನುಡಿ ವಿಶ್ವ ನುಡಿ ಯಾಗುವ ಕನಸು.
ಭೂಪಟದಲ್ಲಿ ಮಿನುಗಲಿ ಕನ್ನಡ ನಾಡು
ಎಲ್ಲರ ಮನೆಯನು ಬೆಳಗಲಿ ಕನ್ನಡ ನುಡಿ.
ಎಲ್ಲರ ನಾಲಿಗೆ ಮೇಲೆ ಕುಣಿಯಲಿ ಕನ್ನಡ ನುಡಿ.
ನೀವು ಹೇಳುತ್ತಿರುವುದು ನಿಜಾನೆ
ನಾನು ಬದಲಾಗಿದ್ದೇನೆ.
ಅದ್ಯಾರೋ ತೀರಿಹೋದರು ಮರಗುತ್ತಿದ್ದೆ
ಹೀಗೀಗಾ ಹೆಚ್ಚು ಮರಿಯುತ್ತಿದ್ದೇನೆ,
ಎಲ್ಲಾ ನಮ್ಮದು, ನಮ್ಮವರು ಎಂಬ ಭ್ರಮೇಲಿ ಬದುತ್ತಿದ್ದೆ..
ಹೀಗಿಗಾ ಎಲ್ಲವೂ ಕ್ಷಣಿಕ ಅನ್ನೋ ಸತ್ತ್ಯವನ್ನು ಅರಿತಿದ್ದೇನೆ..
ನಾನು ಬದಲಾಗಿರೋದೂ ನೀಜಾನೆ!
ಹಾಗಾಗ ಮೂಡುತ್ತಿದ್ದ ನೋವಿನ ಕಂಬನಿಯನ್ನ..
ಮುಗುಳುನಗೆಯೊಂದಿಗೆ ಮರೆಮಾಚಿರುವೆ..
ನೋವನ್ಯಾರು ಕೇಳುವರು ಹೇಳಿ! ನಗುವಿದ್ದರೆ ಮುಖದಲ್ಲಿ ..
ಪರಿಚಿತವಾದರು ಅಪರಿಚಿತ
ನನ್ನದೇ ಇದ್ದರೂ ನನ್ನದಲ್ಲದ ಭಾವ..
ದಾರಿ ಗೊತ್ತಿದ್ದರೂ ನಕ್ಷೆಯ ಹುಡುಕಾಟ
ನನ್ನದೇ ಬದುಕು ನನ್ನದಲ್ಲದ ಪಯಣ
ಗುರಿಯಿದ್ದರೆ ಗುರು ಹುಡುಕುವ ಯತ್ನ
ಗುರು ಸಿಕ್ಕರೂ ಗುರಿಯನ್ನೆ ಬದಲಾಯಿಸುವ ಆತುರ
ಬದುಕಿನ ದಾಹಕ್ಕೆ ಮನಸ್ಸಿನ ಕುಣಿತಕ್ಕೆ
ಬೇಕೇನಿಸುವುದು ಬೇಡಗಳೆಲ್ಲವೂ
ಮರುಭೂಮಿಯಲ್ಲಿ ನೀರು ಇದ್ದಂತೆ/ಸಿಕ್ಕಂತೆ..
ಕಾಲಾ ಎಲ್ಲವನ್ನೂ ಎಲ್ಲರಿಗೂ ಕಲಿಸುತ್ತದೆ
ಕಾಯಬೇಕಷ್ಟೇ...
ಏನೇ ಹೇಳಿ
ನಾ ಬದಲಾಗಿರುವುದು ನಿಜಾನೆ!
ಇದು ನಿಮಗೂ ಗೊತ್ತು
ಯಾಕಂದ್ರೆ ಬದಲಾವಣೆಗೆ
ಕಾರಣ ನೀವೇ ತಾನೇ!..
ಯಾರಿಗೆ ಯರು ಸಿಗ್ತಾರೇ ಅಂತ ಗೊತ್ತಿರೋ ಆ ಬ್ರಹ್ಮ... ಅವರಿಬ್ಬರ ಮಧ್ಯೆ ನೇ ಯಾಕೆ ಪ್ರೀತಿ ಹೂಟ್ಟೀಸೊಲ್ಲ, ಅವರಿಗೆ ಅವರ ಜೊತೆ ಪ್ರೀತಿ ಹುಟ್ಟಿಸಿದ್ದರೆ,ಪ್ರೀತಿಯು ಸೋಲುತ್ತೀರಲಿಲ್ಲಾ, ಪ್ರೇಮಿಯು ಸಾಯುತ್ತೀರಲಿಲ್ಲಾ...
✍️.ಸಂಜು