Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಮ್ಮ ಹಳ್ಳಿ

ನೋಡಲು
ಬಲು ಸೊಗಸು
ಹಚ್ಚ ಹಸಿರಿನ
ಶಾಂತಿಯ ಹೂದೋಟ
ನಮ್ಮ ಹಳ್ಳಿ
ಕಾಯಕವೇ ಕೈಲಾಸವೆಂದು
ಬುದುಕುವ ಜನರ
ಬಂಗಾರದ ಗುಡಿ ನಮ್ಮ ಹಳ್ಳಿ
ಶರಣ ಸಂತರ ನಾಡು
ದಾಸ ಸಾಹಿತಿಗಳ ಬೀಡು ನಮ್ಮ ಹಳ್ಳಿ
ಹಬ್ಬ ಹರಿದಿನ
‌ ಮದುವೆ ಮುಂಜಿಯೆಂದರೆ
ಶೃಂಗಾರವಾಗುವುದು
ಸ್ವರ್ಗದಂತೆ ನಮ್ಮ ಹಳ್ಳಿ

- ರಾಜು ಹಾಸನ

25 Sep 2020, 01:39 am

ಬದಲಾದರೂ ಬದಲಾಗದು

ಬಣ್ಣ ಬದಲಾದರೂ
ಮನಸ್ಸು ಬದಲಾಗದು
ಜನರು ಬದಲಾದರೂ
ಜಗತ್ತು ಬದಲಾಗದು
ದಿನ ಬದಲಾದರೂ
ಕಾಲ ಬದಲಾಗದು
ಪ್ರೀತಿಸೋರು ಬದಲಾದರೂ
ಪ್ರೀತಿ ಬದಲಾಗದು
ಮಾತು ಬದಲಾದರೂ
ನಂಬಿಕೆ ಬದಲಾಗದು
ಎಲ್ಲವು ಬದಲಾದರೆ
ನಾವು ನಿವು ಮನ್ನ

- ರಾಜು ಹಾಸನ

25 Sep 2020, 12:43 am

ಮೂಕ ಪ್ರಾಣಿ

ದೇವರ ಹೆಸರಿನಲ್ಲಿ ಮುಕ್ತಿ ಮೋಕ್ಷಕ್ಕಾಗಿ
ಬಲಿಕೊಟ್ಟು ತಿನ್ನುವರು ಮಾಂಸದ ಎಡೆಯಿಟ್ಟು
ಮಾತು ಬಾರದ ಮೂಕ ಪ್ರಾಣಿಗಳ ಕಡಿದು
ಮುಟ್ಟದಿರುವುದೇ ಮೂಕ ಪ್ರಾಣಿಗಳ ಗೋಳು
ತಟ್ಟದಿರುವುದೇ ಮೂಕ ಪ್ರಾಣಿಗಳ ಶಾಪ

ದೇವರಿಗಾಗಿ ಪ್ರಾಣಿಗಳ ಬಲಿಕೊಡುವ ಬದಲು
ನಿಮ್ಮನ್ನು ನೀವೇ ಬಲಿಕೊಟ್ಟು ನೋಡಿ
ಆಗಲಾದರೂ ತಿಳಿಯುವುದೇನೂ
ನಿಮ್ಮಗೆ ಪ್ರಾಣಿಗಳ ಜೀವದ ಬೆಲೆ
ತಿಳಿದು ಬದುಕೋ ಮನುಜ ಮೂಕ ಪ್ರಾಣಿಗಳ
ಜೀವವು ನಮ್ಮ ಜೀವದ ಹಾಗೆಯೇ

ಯಾವ ದೇವರು ಕೂಡ ಯಾವ ಪುಸ್ತಕದಲ್ಲೂ
ಬರೆದಿಟ್ಟು ಹೋಗಿಲ್ಲ ಮೂಕ ಪ್ರಾಣಿಗಳ
ಕೊಂದು ತಿಂದರೇ ಮೋಕ್ಷ ಫಲಿಸುವುದೆಂದು
ಎಲ್ಲವು ನಮ್ಮ ಭ್ರಮೆಯಾಷ್ಟೆ ತಿಳಿಯೋ ಮನುಜ

ಪ್ರೀತಿಸಿ ಸಂರಕ್ಷಿಸಿ ಮೂಕ ಪ್ರಾಣಿಗಳನ್ನು

- ರಾಜು ಹಾಸನ

24 Sep 2020, 11:27 pm

ಕಲ್ಲು ಬಂಡೆ

ಹುಟ್ಟಿನಿಂದ ಸಾಯುವವರೆಗೂ
ಎಡೆಬಿಡದೆ ಎಡೆಯಿಟ್ಟು ನೆಡೆಸುವರು
ಹಬ್ಬ ಹರಿದಿನಗಳ ಸಡಗರ ಸಂಭ್ರಮಾಚರಣೆ
‌ ಆದರೂ ಒಂದು ದಿನವು ಬಂದು ಹೋಗಲಿಲ್ಲ
ಕಂಡು ಮಾತಡಿಸಲಿಲ್ಲ ಇಲ್ಲಿಯ ತನಕವೂ
ಬಂದು ಕೇಳಲಿಲ್ಲ ದುಃಖ ದುಮ್ಮಾನಗಳನ್ನು
ಆದರೂ ತಪ್ಪಲಿಲ್ಲ ನಾನು ಕಲ್ಲು ಬಂಡೆಯ
ದೇವರೆಂದು ಪೂಜಿಸುವುದು

- ರಾಜು ಹಾಸನ

24 Sep 2020, 01:38 pm

ನನ್ನವಳ ನೆನಪು

ಏ ಚೆಲುವೆಯೇ
ನೀ ಮರೆತು ಬಿಡು ಎಂದಾಕ್ಷಣ
ನಿನ್ನ ಪ್ರೀತಿಯ ನೆನೆದು
ಹಾಗೆ ಸುಮ್ಮನಾಗಲು ಬಿಡುತ್ತಿಲ್ಲ
ಒಂದೊಂದು ಕ್ಷಣಕ್ಕೂ
ನಿನ್ನ ನೆನಪುಗಳು ಬಂದು
ಬಡಿದೆಬ್ಬಿಸಿ ನೆನಪಿಸುವುದು
ನಿನ್ನಲ್ಲಿರುವುದು ನಿನ್ನ ಹೃದಯವಲ್ಲ
ಎಂದಾಕ್ಷಣ ಗಾಬರಿಗೊಂಡು
ಹುಡುಕಿದೆ ಒಂದು ಕ್ಷಣ
ಹುಡುಕಿದರು ಕೈಗೆ ಸಿಗದಂತೆ
ಅಲೆದಾಡುತ್ತಿದ್ದೆ ನಿನ್ನ ಹಿಂದೆ ಹಿಂದೆ
ಬೇಡವೆಂದು ಬೇಡಿಕೊಂಡರು
ಕೇಳುತ್ತಿಲ್ಲ ನನ್ನ ಮಾತು ಈ ಹೃದಯ
ಮುನಿಸುಕೊಂಡು ಓಡುತ್ತಿದೆ
ಅವಳೊಂದಿಗೆ ಅವಳಿರುವಲ್ಲಿಗೆ
ಯಾರಿಗೆ ಹೇಳೋದು
ಈ ಒಂಟಿ ಹೃದಯಾದ ಗೋಳು

- ರಾಜು ಹಾಸನ

24 Sep 2020, 11:43 am

ಕಳೆದು ಹೋದೆ ನಾ,

ಕಳೆದು ಹೋದೆ ನಾ, ಹಸಿರಿನ ತಾಣದಲಿ.
ಕಳೆದು ಹೋದೆ ನಾ, ಮಳೆ ಹನಿಗಳ ಜೊತೆಯಲಿ.
ಕಳೆದು ಹೋದೆ ನಾ, ಆ ಬೆಟ್ಟ-ಗುಡ್ಡಗಳ ಸುಂದರ ದೃಶ್ಯಗಳಲ್ಲಿ.
ಕಳೆದು ಹೋದೆ ನಾ, ಹಕ್ಕಿಗಳ ಚಿಲಿಪಿಲಿ ಹಾಡಿನಲಿ.
ಕಳೆದು ಹೋದೆ ನಾ, ನಮ್ಮ ಮಲೆನಾಡಿನ ಸುಂದರ ಸೊಬಗನಲಿ.
- ಜ್ಯೋತಿ ಫರ್ನಾಂಡಿಸ್

- ಜ್ಯೋತಿಫರ್ನಾಂಡಿಸ್

24 Sep 2020, 10:09 am

ಕಳೆದು ಹೋದೆ ನಾ,

ಕಳೆದು ಹೋದೆ ನಾ, ಹಸಿರಿನ ತಾಣದಲಿ.
ಕಳೆದು ಹೋದೆ ನಾ, ಮಳೆ ಹನಿಗಳ ಜೊತೆಯಲಿ.
ಕಳೆದು ಹೋದೆ ನಾ, ಆ ಬೆಟ್ಟ-ಗುಡ್ಡಗಳ ಸುಂದರ ದೃಶ್ಯಗಳಲ್ಲಿ.
ಕಳೆದು ಹೋದೆ ನಾ, ಹಕ್ಕಿಗಳ ಚಿಲಿಪಿಲಿ ಹಾಡಿನಲಿ.
ಕಳೆದು ಹೋದೆ ನಾ, ನಮ್ಮ ಮಲೆನಾಡಿನ ಸೊಬಗಿನಲಿ.
- ಜ್ಯೋತಿ ಫರ್ನಾಂಡಿಸ್

- ಜ್ಯೋತಿಫರ್ನಾಂಡಿಸ್

24 Sep 2020, 10:03 am

ಹಾಗೆ ಸುಮ್ಮನೆ

ಯಾರು ಬಲ್ಲವರು ಇಲ್ಲ
ಯಾರು ಹೋಗಿ ಬಂದವರು ಇಲ್ಲ
ಯಾರು ನೋಡಿ ಬಂದವರು ಇಲ್ಲ
ಕಣ್ಣಿಗೆ ಕಾಣದ ಸ್ವರ್ಗ ನರಕಕ್ಕೆ

ಯಾವ ದೇವಾ ಲೋಕವು ಇಲ್ಲ
ಯಾವ ಪಾತಾಳ ಲೋಕವು ಇಲ್ಲ
ಸದ್ಯಕ್ಕೆ ಇರುವುದು ಒಂದೇ ಲೋಕ
ಅದೇ ನಮ್ಮ ನಿಮ್ಮೆಲ್ಲರ ಭೂ ಲೋಕ

ಸ್ವರ್ಗ ನರಕ ಎಲ್ಲಿಯು ಇಲ್ಲ
ಇಲ್ಲಿಯೇ ಇರುವುದು ಎಲ್ಲ
ನಾವು ಇಲ್ಲಿರುವುದು ಸುಮ್ಮನೆ
ಹೋಗಬೇಕು ಎಲ್ಲ ಬಿಟ್ಟು
ಕಾಲ ಬಂದಾಗ ಹಾಗೆ ಸುಮ್ಮನೆ

- ರಾಜು ಹಾಸನ

24 Sep 2020, 02:14 am

ಪ್ರಶ್ನೆಗೆ ಸಾಕ್ಷಿಯೇ ಉತ್ತರ

ಜನ್ಮ ಕೊಟ್ಟ ತಂದೆ ತಾಯಿ
ಬದುಕಲು ಜಾಗ ಕೊಟ್ಟ ಭೂ ತಾಯಿ
ದಣಿವು ನೀಗಿಸಿದ ಕಾವೇರಿ ತಾಯಿ
ಹಸಿದ ಹೊಟ್ಟೆಗೆ ಅನ್ನ ಹಾಕಿದ ರೈತ
ಜೀವಿಸಲು ಗಾಳಿ ಬೆಳಕು ಕೊಟ್ಟ ಪ್ರಕೃತಿ
ಎಲ್ಲರನ್ನೂ ಕಾಯುವ ಸೈನಿಕ
ಕಣ್ಣಿಗೆ ಕಾಣುವ ನಿಜವಾದ ದೇವರುಗಳು

- ರಾಜು ಹಾಸನ

24 Sep 2020, 01:30 am

ಕಾಡುವ ಹುಡುಗಿಯೇ

"ಪದೇ ಪದೇ ಕಾಡುವ ಹುಡುಗಿಯೇ ಹೇಳು ನೀ ಯಾರು? "
ನನ್ನ ಜೀವನದಿ ಬಂದೆ ಖುಷಿಯೆoಬ ಹೆಸರಿನಲ್ಲಿ.
ನನ್ನಲೇ ಕಾಣದಂತ ಹೊಸದಿ ರೂಪವನ್ನು ಬಿತ್ತರಿಸುತ ಹೃದಯದಲ್ಲಿ.
ನೀ ನಗುತಿರುವೆ ಮರುಳುಗಾಡಿನಲ್ಲಿ ನೀರು ಚಿಮ್ಮುವ ಪರಿಯಲ್ಲಿ.
ನನ್ನ ಜೀವನದ ಗೋಡೆಯಲ್ಲಿ ನೀ ಇರುವೆ ಎಂದು ಮಾಸದ ಬಣ್ಣದ ಥರದಲ್ಲಿ.
ನೂರಾರು ಹುಡುಗಿಯರು ಕಣ್ಣು ಮುಂದೇ ಬಂದರು ನಿನ್ನ ಮುದ್ದಾದ ಮುಖ ಮಾತ್ರ ಕಾಡುವುದು ಕನಸಿನಲ್ಲಿ.
ಇರಲು ನೀನ್ಯಾರು, ಉಳಿಸಿಕೊಳ್ಳಲು ನಾನ್ಯಾರು
ಇಷ್ಟೆಲ್ಲ ಕೊಟ್ಟ ನಿನಗೆ ನಾ ಕೇಳುವುದು ಒಂದೇ ಕೊನೆಯಲ್ಲಿ
ಸಾವಿನ ಅಂಚಿನಲ್ಲಿ ಬಿಡುವಿಯ ನೀರು ಬಾಯಲ್ಲಿ?................

- MadhumalaH

23 Sep 2020, 11:22 pm