ನೋಡಲು
ಬಲು ಸೊಗಸು
ಹಚ್ಚ ಹಸಿರಿನ
ಶಾಂತಿಯ ಹೂದೋಟ
ನಮ್ಮ ಹಳ್ಳಿ
ಕಾಯಕವೇ ಕೈಲಾಸವೆಂದು
ಬುದುಕುವ ಜನರ
ಬಂಗಾರದ ಗುಡಿ ನಮ್ಮ ಹಳ್ಳಿ
ಶರಣ ಸಂತರ ನಾಡು
ದಾಸ ಸಾಹಿತಿಗಳ ಬೀಡು ನಮ್ಮ ಹಳ್ಳಿ
ಹಬ್ಬ ಹರಿದಿನ
ಮದುವೆ ಮುಂಜಿಯೆಂದರೆ
ಶೃಂಗಾರವಾಗುವುದು
ಸ್ವರ್ಗದಂತೆ ನಮ್ಮ ಹಳ್ಳಿ
ಬಣ್ಣ ಬದಲಾದರೂ
ಮನಸ್ಸು ಬದಲಾಗದು
ಜನರು ಬದಲಾದರೂ
ಜಗತ್ತು ಬದಲಾಗದು
ದಿನ ಬದಲಾದರೂ
ಕಾಲ ಬದಲಾಗದು
ಪ್ರೀತಿಸೋರು ಬದಲಾದರೂ
ಪ್ರೀತಿ ಬದಲಾಗದು
ಮಾತು ಬದಲಾದರೂ
ನಂಬಿಕೆ ಬದಲಾಗದು
ಎಲ್ಲವು ಬದಲಾದರೆ
ನಾವು ನಿವು ಮನ್ನ
ದೇವರ ಹೆಸರಿನಲ್ಲಿ ಮುಕ್ತಿ ಮೋಕ್ಷಕ್ಕಾಗಿ
ಬಲಿಕೊಟ್ಟು ತಿನ್ನುವರು ಮಾಂಸದ ಎಡೆಯಿಟ್ಟು
ಮಾತು ಬಾರದ ಮೂಕ ಪ್ರಾಣಿಗಳ ಕಡಿದು
ಮುಟ್ಟದಿರುವುದೇ ಮೂಕ ಪ್ರಾಣಿಗಳ ಗೋಳು
ತಟ್ಟದಿರುವುದೇ ಮೂಕ ಪ್ರಾಣಿಗಳ ಶಾಪ
ದೇವರಿಗಾಗಿ ಪ್ರಾಣಿಗಳ ಬಲಿಕೊಡುವ ಬದಲು
ನಿಮ್ಮನ್ನು ನೀವೇ ಬಲಿಕೊಟ್ಟು ನೋಡಿ
ಆಗಲಾದರೂ ತಿಳಿಯುವುದೇನೂ
ನಿಮ್ಮಗೆ ಪ್ರಾಣಿಗಳ ಜೀವದ ಬೆಲೆ
ತಿಳಿದು ಬದುಕೋ ಮನುಜ ಮೂಕ ಪ್ರಾಣಿಗಳ
ಜೀವವು ನಮ್ಮ ಜೀವದ ಹಾಗೆಯೇ
ಯಾವ ದೇವರು ಕೂಡ ಯಾವ ಪುಸ್ತಕದಲ್ಲೂ
ಬರೆದಿಟ್ಟು ಹೋಗಿಲ್ಲ ಮೂಕ ಪ್ರಾಣಿಗಳ
ಕೊಂದು ತಿಂದರೇ ಮೋಕ್ಷ ಫಲಿಸುವುದೆಂದು
ಎಲ್ಲವು ನಮ್ಮ ಭ್ರಮೆಯಾಷ್ಟೆ ತಿಳಿಯೋ ಮನುಜ
ಹುಟ್ಟಿನಿಂದ ಸಾಯುವವರೆಗೂ
ಎಡೆಬಿಡದೆ ಎಡೆಯಿಟ್ಟು ನೆಡೆಸುವರು
ಹಬ್ಬ ಹರಿದಿನಗಳ ಸಡಗರ ಸಂಭ್ರಮಾಚರಣೆ
ಆದರೂ ಒಂದು ದಿನವು ಬಂದು ಹೋಗಲಿಲ್ಲ
ಕಂಡು ಮಾತಡಿಸಲಿಲ್ಲ ಇಲ್ಲಿಯ ತನಕವೂ
ಬಂದು ಕೇಳಲಿಲ್ಲ ದುಃಖ ದುಮ್ಮಾನಗಳನ್ನು
ಆದರೂ ತಪ್ಪಲಿಲ್ಲ ನಾನು ಕಲ್ಲು ಬಂಡೆಯ
ದೇವರೆಂದು ಪೂಜಿಸುವುದು
ಏ ಚೆಲುವೆಯೇ
ನೀ ಮರೆತು ಬಿಡು ಎಂದಾಕ್ಷಣ
ನಿನ್ನ ಪ್ರೀತಿಯ ನೆನೆದು
ಹಾಗೆ ಸುಮ್ಮನಾಗಲು ಬಿಡುತ್ತಿಲ್ಲ
ಒಂದೊಂದು ಕ್ಷಣಕ್ಕೂ
ನಿನ್ನ ನೆನಪುಗಳು ಬಂದು
ಬಡಿದೆಬ್ಬಿಸಿ ನೆನಪಿಸುವುದು
ನಿನ್ನಲ್ಲಿರುವುದು ನಿನ್ನ ಹೃದಯವಲ್ಲ
ಎಂದಾಕ್ಷಣ ಗಾಬರಿಗೊಂಡು
ಹುಡುಕಿದೆ ಒಂದು ಕ್ಷಣ
ಹುಡುಕಿದರು ಕೈಗೆ ಸಿಗದಂತೆ
ಅಲೆದಾಡುತ್ತಿದ್ದೆ ನಿನ್ನ ಹಿಂದೆ ಹಿಂದೆ
ಬೇಡವೆಂದು ಬೇಡಿಕೊಂಡರು
ಕೇಳುತ್ತಿಲ್ಲ ನನ್ನ ಮಾತು ಈ ಹೃದಯ
ಮುನಿಸುಕೊಂಡು ಓಡುತ್ತಿದೆ
ಅವಳೊಂದಿಗೆ ಅವಳಿರುವಲ್ಲಿಗೆ
ಯಾರಿಗೆ ಹೇಳೋದು
ಈ ಒಂಟಿ ಹೃದಯಾದ ಗೋಳು
ಕಳೆದು ಹೋದೆ ನಾ, ಹಸಿರಿನ ತಾಣದಲಿ.
ಕಳೆದು ಹೋದೆ ನಾ, ಮಳೆ ಹನಿಗಳ ಜೊತೆಯಲಿ.
ಕಳೆದು ಹೋದೆ ನಾ, ಆ ಬೆಟ್ಟ-ಗುಡ್ಡಗಳ ಸುಂದರ ದೃಶ್ಯಗಳಲ್ಲಿ.
ಕಳೆದು ಹೋದೆ ನಾ, ಹಕ್ಕಿಗಳ ಚಿಲಿಪಿಲಿ ಹಾಡಿನಲಿ.
ಕಳೆದು ಹೋದೆ ನಾ, ನಮ್ಮ ಮಲೆನಾಡಿನ ಸುಂದರ ಸೊಬಗನಲಿ.
- ಜ್ಯೋತಿ ಫರ್ನಾಂಡಿಸ್
ಕಳೆದು ಹೋದೆ ನಾ, ಹಸಿರಿನ ತಾಣದಲಿ.
ಕಳೆದು ಹೋದೆ ನಾ, ಮಳೆ ಹನಿಗಳ ಜೊತೆಯಲಿ.
ಕಳೆದು ಹೋದೆ ನಾ, ಆ ಬೆಟ್ಟ-ಗುಡ್ಡಗಳ ಸುಂದರ ದೃಶ್ಯಗಳಲ್ಲಿ.
ಕಳೆದು ಹೋದೆ ನಾ, ಹಕ್ಕಿಗಳ ಚಿಲಿಪಿಲಿ ಹಾಡಿನಲಿ.
ಕಳೆದು ಹೋದೆ ನಾ, ನಮ್ಮ ಮಲೆನಾಡಿನ ಸೊಬಗಿನಲಿ.
- ಜ್ಯೋತಿ ಫರ್ನಾಂಡಿಸ್
ಜನ್ಮ ಕೊಟ್ಟ ತಂದೆ ತಾಯಿ
ಬದುಕಲು ಜಾಗ ಕೊಟ್ಟ ಭೂ ತಾಯಿ
ದಣಿವು ನೀಗಿಸಿದ ಕಾವೇರಿ ತಾಯಿ
ಹಸಿದ ಹೊಟ್ಟೆಗೆ ಅನ್ನ ಹಾಕಿದ ರೈತ
ಜೀವಿಸಲು ಗಾಳಿ ಬೆಳಕು ಕೊಟ್ಟ ಪ್ರಕೃತಿ
ಎಲ್ಲರನ್ನೂ ಕಾಯುವ ಸೈನಿಕ
ಕಣ್ಣಿಗೆ ಕಾಣುವ ನಿಜವಾದ ದೇವರುಗಳು
"ಪದೇ ಪದೇ ಕಾಡುವ ಹುಡುಗಿಯೇ ಹೇಳು ನೀ ಯಾರು? "
ನನ್ನ ಜೀವನದಿ ಬಂದೆ ಖುಷಿಯೆoಬ ಹೆಸರಿನಲ್ಲಿ.
ನನ್ನಲೇ ಕಾಣದಂತ ಹೊಸದಿ ರೂಪವನ್ನು ಬಿತ್ತರಿಸುತ ಹೃದಯದಲ್ಲಿ.
ನೀ ನಗುತಿರುವೆ ಮರುಳುಗಾಡಿನಲ್ಲಿ ನೀರು ಚಿಮ್ಮುವ ಪರಿಯಲ್ಲಿ.
ನನ್ನ ಜೀವನದ ಗೋಡೆಯಲ್ಲಿ ನೀ ಇರುವೆ ಎಂದು ಮಾಸದ ಬಣ್ಣದ ಥರದಲ್ಲಿ.
ನೂರಾರು ಹುಡುಗಿಯರು ಕಣ್ಣು ಮುಂದೇ ಬಂದರು ನಿನ್ನ ಮುದ್ದಾದ ಮುಖ ಮಾತ್ರ ಕಾಡುವುದು ಕನಸಿನಲ್ಲಿ.
ಇರಲು ನೀನ್ಯಾರು, ಉಳಿಸಿಕೊಳ್ಳಲು ನಾನ್ಯಾರು
ಇಷ್ಟೆಲ್ಲ ಕೊಟ್ಟ ನಿನಗೆ ನಾ ಕೇಳುವುದು ಒಂದೇ ಕೊನೆಯಲ್ಲಿ
ಸಾವಿನ ಅಂಚಿನಲ್ಲಿ ಬಿಡುವಿಯ ನೀರು ಬಾಯಲ್ಲಿ?................