ಸತ್ತ ಹೇಣದ ಮೇಲೆ ರಾಜಕೀಯ
ಮಾಡುವ ದುಷ್ಟ ನಾಯಕರ ಕಣ್ಣಿಗೆ
ಪಾಳು ಭೂಮಿ ಕಂಡರೆ ಸಾಕು
ಬಡಿದು ಬಾಯಿಗೆ ಹಾಕಿಕೊಂಡು
ಬಡ ಜನರ ಬಾಯಿಗೆ ಹಾಕುವರು
ಮೂರಿಡಿ ಮಣ್ಣು ತಲೆ ಮೇಲೆ ಅಕ್ಕಿ ಕಾಳು
ಭೂಮಿಯನ್ನೇ ಕೊಳ್ಳೆ ಹೊಡೆಯುವ
ಜನ ನಾಯಕ ನೀಚ ನಾಯಕ
ಮಂಗ ಮಾನವನಿಗೆ ಸಿಕ್ಕಿಲ್ಲ
ಆಗಸಕ್ಕೆ ಏರುವ ಸೇತುವೆ ಏಣಿ
ಆದರೂ ನಿಂತಿಲ್ಲ ಹಾರಾಟ ತೂರಾಟ
ಮಂಗ ಮನುಷ್ಯನ ಮಂಗನ ಆಟ
ಸಿಕ್ಕಿಬಿಟ್ಟರೆ ಮುಕ್ಕಿಬಿಡುವರು
ಈ ಆಗಸದ ಆಯಸ್ಸು
ಆ ಮಸೂದೆ ಈ ಮಸೂದೆ ಎಂದು
ಬೊಬ್ಬೆ ಹೊಡೆದು ತಿದ್ದುಪಡಿ ಮಾಡುವ
ಮುಟ್ಟಳ ನಾಯಕರು ತರುವುದಿಲ್ಲ
ಒಂದು ಕಾನೂನು ಒಂದು ಮಸೂದೆ
ಬಡ ಜನರ ಸ್ತ್ರೀ ಶೋಷಿತರ ರಕ್ಷಣೆಗೆ
ಬಾಯಿ ಮಾತಿಗೆ ಕೇಳಿದರೆ
ಬಾಯಿ ಬಡುಕ ನಾಯಕರು ಹೇಳುವರು
ಬರಿ ಓಳು ಬರಿ ಓಳು
ಕೊಳದ ನೀರಿನಂತೆ ನಮ್ಮ ಮನಸು..
ಸುಮ್ಮನಿರಲಾರದವರು ಬರುವರು...
ಕೊಳದ ಕಸವನ್ನ ಮೇಲೆ ತೇಲುವಂತೆ ಮಾಡುವರು....
ನಮ್ಮ ಕೋಪ ಅದನ್ನು ಇನ್ನಷ್ಟು ಕಾಲ ಮೇಲೆ ತೇಲುವಂತೆ ಮಾಡುವುದು....
ಅದಕ್ಕಾಗಿ ಸುಮ್ಮನಿದ್ದು ಬಿಡು....
ಅದೇ ತಿಳಿಯಾಗುತದೆ......@Bhavya
ಭ್ರಷ್ಟಾಚಾರಿ ಕಳ್ಳರನ್ನು
ನಾಯಕ ಜನ ನಾಯಕನೆಂದು
ಗೆಲ್ಲಿಸಿ ಆಳಲು ದೇಶ ರಾಜ್ಯ ಕೊಟ್ಟರೆ
ದೇಶ ಮಾರಾಟವಾಗದಿರುವುದೇ
ರಾಜ್ಯ ಲೂಟಿಯಾಗದಿರುವುದೇ
ಜನರೇ ಮಾಡಿಕೊಂಡ ತಪ್ಪಿಗೆ
ಶೀಕ್ಷೆ ಅನುಭವಿಸುವುದು ಒಂದೇ ಬಾಕಿ
ಭ್ರಷ್ಟಾ ಕಳ್ಳರ ಕೈಗೆ ರಾಜ್ಯ ಕೊಟ್ಟು
ರಾಜ್ಯ ಲೂಟಿಯಾಗಿದೆ ಎಂದು
ಬೀದಿಗೆ ಇಳಿದು ಹೋರಾಟ ಮಾಡಿದರೆ
ನಿವು ಆಗುವಿರಿ ಜೈಲು ಪಾಲು
ಮನೆಯವರಾಗುವರು ಬೀದಿ ಪಾಲು
ಎಚ್ಚರ ಎಚ್ಚರಿಕೆ ಇರಲಿ
ಮತ ಹಾಕುವ ಮುನ್ನ ನಿಮಗೆ
ಚುನಾವಣೆ ಬಂತೆಂದರೆ
ಬರುವರು ಭೂತ ಪ್ರೇತಗಳ ರೀತಿ
ಎಲ್ಲಿಯಂದ್ದರಲ್ಲಿಗೆ
ಕರೆಯದಿದ್ದರು ಬರುವರು
ಬಂದು ಬಿದ್ದು ಬೇಡುವರು
ಕೈ ಮುಗಿದು ಅಣ್ಣ ಅಕ್ಕ ತಂಗಿ ತಮ್ಮ
ಅಮ್ಮ ಅಪ್ಪ ಎಂದು ಹಲ್ಲು ಗಿರುಚುತ್ತ
ಬೇಡವೆಂದರು ಬರುವುದು
ಮನೆ ಬಾಗಿಲಿಗೆ ಚಿಲ್ಲರೆ ನೋಟು
ಸುಮ್ಮನಿದ್ದರು ಕರೆದು ತುಂಬುವರು
ಚಡ್ಡಿ ಜೇಬಿಗೆ ಗುಂಡು ತುಂಡು
ಏನಿದು ಗೌರವ ಏನಿದು ಸತ್ಕಾರ
ಹಹ್ ಹಹ್ ಬಾಲೆ ಬಾಲೆ
ಫಲಿತಾಂಶ ಬಂತೆಂದರೆ
ಯಾವ ಭೂತ ಪ್ರೇತಗಳು
ಕಣ್ಣಿಗೆ ಬಿದ್ದಿಲ್ಲ ಎಲ್ಲಿ ಯಾವ ಮರಕ್ಕೆ
ಜೋತು ಬಿದ್ದಿವೆಯೋ ಗೋತ್ತಿಲ್ಲ
ಆದರು ಕೇಡಕು ಮಾಡುತ್ತಿವೆ
ಕಣ್ಣಿಗೆ ಕಾಣದಂತೆ ಭೂತ ಪ್ರೇತಗಳು
ಜನರ ಮತ ಹಣ ತಿಂದು
ತಕ್ಕ ಶಾಸ್ತಿ ಮಾಡಬೇಕಾಗಿದೆ ಎಲ್ಲರೂ
ನಿಮ್ಮ ನಿಮ್ಮ ಮತಗಳ ದಿಗ್ಬಂಧನ ಮಾಡಿ
ಚಡ್ತಾ ಮಾಡುವ ಭೂತ ಪ್ರೇತಗಳಿಗೆ