Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಎಲ್ಲಾ ಮಾಯಾ

ಈಡಿ ಜಗತ್ತನ್ನೆ ಸೃಷ್ಟಿಸಬಲ್ಲ
ನರ ಮಾನವ ಕಾಯುವನು ನಿಮ್ಮ ತಲೆ
ಒಂದು ಕಡ್ಡಿಯನ್ನು ಸೃಷ್ಟಿಸಲಾಗದ
ಕಲ್ಲ ಕಂಬ ಕಾಯುವುದೇ ನಿಮ್ಮ ತಲೆಯ

ಹೋಗದಿರಿ ಗುಡಿ ಗುಂಡತರಗಳಿಗೆ
ಸುತ್ತದಿರಿ ಕಲ್ಲು ಕಂಬವ
ಸುತ್ತಿದಷ್ಟ ಸವೆಯುವುದು ನಿಮ್ಮ ಪಾದ
ಆಳಾಗುವುದು ನಿಮ್ಮ ಮನಸ್ಸು
ಖರ್ಚಾಗುವುದು ನಿಮ್ಮ ಸಮಯ
ಕರಗದೆ ಇರುವುದು ಕಲ್ಲು ಕಂಬ

ಸರ್ವಾಂತರ್ಯಾಮಿ
ದೇವರು ಬರುವನು ನಿಮ್ಮಲ್ಲಿಗೆ
ತರುವನು ಲೇಖನಿ ಪುಸ್ತಕ
ಬರೆದುಕೊಳ್ಳುವನು ನಿಮ್ಮ ಗೋಳು
ನೀಡುವನು ಪರಿಹಾರ
ಕೇಳಲು ನಿವು ಇರುವುದಿಲ್ಲ
ಹೇಳಲು ಅವನೇ ಇರುವುದಿಲ್ಲ
ನಿವು ಮಾಯಾ ಅವನು ಮಾಯಾ
ಎಲ್ಲವೂ ಮಾಯಾ ಮಾಯಾ

- ರಾಜು ಹಾಸನ

21 Sep 2020, 12:24 am

ಬೆಂಕಿ ಕಡ್ಡಿ

ಬೆಂಕಿ ಪೊಟ್ಟಣದೊಳಗಿನ ಮದ್ದು ಜಪ್ಪಿಸಿ ಕುಳಿತಿದೆ.
ಅದರ ಮನ ಮರ್ಕಟ
ಮಂಕಿನೊಂದಿಗೆ, ಕಡ್ಡಿ ಮೈ ತಿಕ್ಕಿ ಗೀರಿಬಿಡುವಾಶೆ.
ಗೀರಿಕೊಂಡ ಕಡ್ಡಿ ಸ್ವಯಂ ಭಸ್ಮಾಸೂರ
ಹಣತೆಯಾದರೇನು? ಬನವೆಯಾದರೇನು?

- Siddugouda

20 Sep 2020, 02:13 pm

ಪ್ರೀತಿಯ ವೇದಾಂತ

ಪ್ರೀತಿ ಗೀತಿ ಅಂತ ಸುಂದರ ಹುಡುರ್ಗಿಂದೆ ನೀನು ಹೋಗಬೇಡ ಮಗ
ನೀನ್ ಹೋಗ್ ಹೋಗ್ ಹೋಗಾಬೇಡಾ ಸುಂದರ ಹುಡುಗೀರ್ಗೆ ಇರ್ತಾವೆ ಆಯ್ಕೆ ನೂರೆಂಟು
ಅದರಲ್ಲಿ ಕೆಲ ಹುಡುಗೀರ್ಗೆ ಕಾಗೆ ಹಾರ್ಸೋ ಚಾಳಿಯಂಟೂ ಉಷಾರು
ಉಷ್ ಉಷ್ ಉಷಾರು
ಇಲ್ಲಾಂದ್ರೆ ಜೀವನ ಬರೀ ಬೇಜಾರು

ಅವಳ ಪ್ರೀತಿಗಾಗಿ ಬಿದ್ದು ಸಾಯೋ ಹುಡುಗರು ಹಲವಾರು
ಅದರಲ್ಲಿ ನೀನು ಒಬ್ಬ
ತಿಳ್ಕೋ ಮೊದಲು ತಿಳ್ಕೊ ಗುರು
ಇಲ್ಲಾಂದ್ರೆ ಆಮೇಲೆ ಜೀವ್ನ ಬರೀ ಬೇಜಾರು ಬರ್ ಬರ್
ಬರೀ ಬೇಜಾರು

ಅವಳು ನಿನ್ನ ಕಡೆ ನೋಡಿ ಅವಳು ನಿನ್ನ ಕಡೆ ನೋಡಿ ನಕ್ಕಳು ಅಂತಾ
ನೀನು ಕ್ಲಾಸಿಗೆ ಚಕ್ಕರಾಕಿ ಅವಳಿಂದೇ
ಸುತ್ತ ಬೇಡ ಮಗ
ಸುತ್ ಸುತ್ ಸುತ್ತಾ ಬೇಡಾ ಮಗ

ನಿನ್ನ ಮನಸ್ಸಲಿ ಅವಳ ಬಿಂಬಾನ
ಹಚ್ಛೆ ಹಾಕಿ
ನಿನ್ನ ಹೃದಯಕೆ ಅವಳ ಹೆಸರನ
ಹೇಳೋದನ್ನ ಜಪಿಸೋದನ್ನ
ಕಲಿಸ್ಬೇಡ ಮಗ
ಕಲ್ ಕಲ್ ಕಲಿಸ್ಬೇಡಾ ಮಗ

ಅವಳನ್ನು ಮೆಚ್ಚಿದ ತಪ್ಪಿಗೆ
ನೆನಪುಗಳು
ಚುಚ್ಚೀ ಚುಚ್ಚಿ ಹುಚ್ಚ ನಾಗೋತ್ತೀಯಾ ಮಗ
ಹುಚ್ಚ್ ಹುಚ್ಚ್ ನಾಗೋತ್ತೀಯಾ

ಮನಸ್ಸು ಯುದ್ಧರಣರಂಗವಾಗಿ
ಅವಳ ನೆನಪಿನ ದಾಳಿಯ ನೀನು ಎದುರಿಸದೆ ಸೋತೋಗ್ತಿಯ
ದುಶ್ಚಟಗಳಿಗೆ ದಾಸನಾಗೋಗ್ತಿಯ

ಅಳೋದಕೂ ಆಗಲ್ಲ
ನಗೋದಕೂ ಮನಸ್ಸಿಲ್ಲ ಅನ್ನೊಂಗಾಗಿ
ಸತ್ತೋಗ್ತಿಯಾ ಮಗ
ನೀ ಸತ್ ಸತ್ ಸತ್ತೋಗ್ತೀಯ

ನಿನ್ನನು ಮರೆತು ಬಿಟ್ಟು ಇನ್ನೊಬ್ಬನ ಮದುವೆಯಾಗಿ
ಸಂಸಾರ ಮಾಡ್ತಾಳೆ
ಮಕ್ಕಳನ್ನ ಹೆತ್ತು ಸುಖ್ವಾಗಿರ್ತಾಳೆ
ಅಪ್ಪಿತಪ್ಪಿ ನಿನ್ನೆದುರು ಅವಳು ಬಂದರೆ
ಅವಳನ್ನ ತಲೆ ಎತ್ತಿ ನೋಡಿದೆ ಬೇಗ ಜಾಗ ಖಾಲಿ ಮಾಡು
ಇಲ್ಲಾಂದ್ರೆ ಇಲ್ಲ್ ಇಲ್ಲ್ ಇಲ್ಲಾಂದ್ರೆ
ನೀನು ನನ್ನನ್ನ ಮರೆತೂ ಬಿಟ್ಟು
ಬೇರೆ ಹುಡುಗೀನ ಮದುವೆಯಾಗಿ
ಸುಖ್ವಾಗಿರು ಅಂತಾಳೆ
ಸುಂಸುಮ್ನೆ ಹೃದಯಕ್ಕೆ ಕಷ್ಟ ಕೊಡುತ್ತಾಳೆ

"ಯಾಕೆ ಬೇಕು ಮಗ ನಿಂಗೆ ಇಂಥ ಪ್ರೀತಿಯಿಂದ ಹೋಗೋ ಆಳು ಜೀವ್ನ"

ನಿನ್ನನ್ನು ಪ್ರೀತಿ ಮಾಡೋ ಹುಡುಗಿಯನ್ನ
ನೀನು ಮರೆಯಬೇಡ
ಮರೆತು ಕೊರಗಬೇಡ
ಮೊದಲು ನಿನ್ನಿಂದೆ ಬರುವ
ಹುಡುಗೀನ ಇಷ್ಟಪಡು
ತುಂಬಾ ಪ್ರೀತಿ ಮಾಡು
ನೀನು ಚೆನ್ನಾಗಿರ್ತಿಯಾ
ನೀನು ಚೆನ್ ಚನ್ ಚನ್ನಾಗಿರ್ತಿಯಾ

ಅವಳಿಗೆ ನೀನೇ ರಾಜ ಆಗ್ತೀಯಾ
ಅವಳಿಗೆ ನೀನೆ ಎಲ್ಲ ಅಂದಮೇಲೆ
ನೀನು ಪ್ರೀತಿಯಲ್ಲಿ ಸೋಲೆ ಮಾತೇ ಬರಲ್ಲ
ನೀನು ಇನ್ ಸೋಲೋ ಮಾತೆ ಇಲ್ಲ
ಮಗ ನಿಂಗೆ ಉಳಿಯೋದೊಂದೆ ಈಗ
ಧರೆಯಲಿ ಸ್ವರ್ಗ ಅನ್ನೋ
ಮಾತು ಎಂದಿಗೂ ಸುಳ್ಳಾಗಲ್ಲ
ಸುಖ್ ಸುಖ್ ಸುಖ್ ವಾಗಿರು ಮಗ

- HarishKumarm

20 Sep 2020, 01:51 pm

ಅ-ವಿದ್ಯಾವಂತ

ಓದು ಬರಹ ಕಲಿತು
ಮೂಢನಂಬಿಕೆಗಳನ್ನು ಧಿಕ್ಕರಿಸಿ
ಜನರನ್ನು ತಿದ್ದುವ
ಗೌರವಿಸುವ ಪ್ರೀತಿಸುವ
ಮನುಷ್ಯತ್ವ ಗುಣವುಳ್ಳವನೇ
ನಿಜವಾದ ವಿದ್ಯಾವಂತ
ಇಲ್ಲದಿದ್ದರೆ ಆತ
ಅನಾಗರಿಕ ಅವಿದ್ಯಾವಂತ

- ರಾಜು ಹಾಸನ

20 Sep 2020, 09:07 am

ಮಡಿ ಮೈಲಿಗೆ

ಸತ್ತ ವ್ಯಕ್ತಿಯ ಮುಟ್ಟಿದರೆ
ಮಡಿ ಮೈಲಿಗೆ ಎನ್ನುವ ಜನರಿಗೆ
ಸತ್ತ ಪ್ರಾಣಿಯ ಮಾಂಸವೆಂದು
ತಿನ್ನುವಾಗ ಮಡಿ ಮೈಲಿಗೆ
ಆಗುವುದಿಲ್ಲವೇ

ಸತ್ತವರ ಮುಟ್ಟಿದರೆ
ಮಡಿ ಮೈಲಿಗೆಯೆಂದು
ತಲೆ ಮೇಲೆ ತಣ್ಣೀರು
ಸುರಿದುಕೋಳ್ಳುವ ಜನರು
ಸತ್ತ ಪ್ರಾಣಿಯ ತಿಂದಾಗ
ಹೊಟ್ಟೆಗೆ ಬೆಂಕಿ ಸುರಿದುಕೋಳ್ಳುವರೇ

ಮಡಿ ಮೈಲಿಗೆಯೆಂದು
ದೇಹಕ್ಕೆ ಬಟ್ಟೆ ಸುತ್ತಿಕೊಂಡು
ತಲೆ ಮೇಲೆ ತಣ್ಣೀರು
ಸುರಿದುಕೊಂಡರೇನು ಬಂತು
ಮನಸ್ಸಿನಲ್ಲಿ ಒಳ್ಳೆಯ ಯೋಚನೆ
ಆಲೋಚನಗಳು ಇಲ್ಲದಿದ್ದ ಮೇಲೆ

- ರಾಜು ಹಾಸನ

20 Sep 2020, 12:52 am

ಆಸೆ

ಕೊನೆಯಿಲ್ಲದ ಈ ಕವನ
ಗುರಿತಲೂಪದ ಈ ಪಯಣ
ಪರಿಪರಿಯಲ್ಲು ಕೊಲ್ಲುತಿದೆ
ಎಲ್ಲಾ ಆಸೆ ನೆನಪುಗಳ ಜೀವನ.
J.G

- J.G Jyothi Jyothi

19 Sep 2020, 10:09 am

ಎಳ್ಳು ನೀರು

ದೇವರ ಭಾಷೆ
ಬ್ರಹ್ಮ ಲಿಪಿ ಸಂಸ್ಕೃತವಾದರೆ
ನಾವು ಆಡುವ ಭಾಷೆ
ಕನ್ನಡ ಕನ್ನಡ ಭಾಷೆ
ಹಾಗಾದರೆ ಹೇಂಗೆ ತಿಳಿಯುವುದು
ದೇವರಿಗೆ ನಮ್ಮ ಭಾಷೆ
ಅದಕ್ಕಾಗಿಯೇ ಇಟ್ಟುಕೊಂಡಿರಬಹುದೇ
ದೇವರು ದಲ್ಲಾಳಿ ಪೂಜಾರಿನ್ನ

ಸಂಸ್ಕೃತವೇ ತಿಳಿಯಾದ ನಮಗೆ
ಸಂಸ್ಕೃತ ಭಾಷೆಯಲ್ಲಿ
ಪೂಜಾರಿ ಮಂತ್ರ ಪಠಿಸಿ
ದೇವರಿಗೆ ಪೂಜೆ ಸಲ್ಲಿಸಿದರೆ
ಯಾರ ಒಳಿತಿಗಾಗಿ
ಯಾವ ಮಂತ್ರ ಪಠಿಸಿದನೆಂದು
ಹೇಂಗೆ ತಿಳಿಯಲು ಸಾಧ್ಯ
ಹೇಂಗೆ ನಂಬಲು ಸಾಧ್ಯ

ದೇವರ ಪೂಜೆಗೆ ಕೊಡುವೆವು
ಹಣ್ಣು ಕಾಯಿ
ತಿಂದು ತೇಗುವುದು ಪೂಜಾರಿ
ಭಕ್ತರ ಕಿವಿಗೆ ಇಡುವರು
ಚೆಂಡು ಹೂವು
ಭಕ್ತರ ಬಾಯಿಗೆ ಬಿಡುವರು
ಎಳ್ಳು ನೀರು

ದೇವಸ್ಥಾನಕ್ಕೆ ಹೋದರೆ
ತುಂಬಿ ತುಳುಕುವುದು
ಪೂಜಾರಿ ಜೋಳಿಗೆ
ಖಾಲಿಯಾಗುವುದು
ಭಕ್ತರ ತಲೆ ಮತ್ತು ಜೇಬು

- ರಾಜು ಹಾಸನ

19 Sep 2020, 12:13 am

ಎಲ್ಲಿದೆ ನ್ಯಾಯ

ನೆರಳಲ್ಲಿ ಕುಳಿತು
ಅರ್ಥವಾಗದ ಮಂತ್ರ ಪಠಿಸುವ
ಪೂಜಾರಿಗೆ ಕೊಡುವರು ಸಂಬಳ ಗಿಂಬಳ

ಬಿಸಿಲು ಬೆಂಕಿ ಎನ್ನದೆ
ಕೆಚ್ಚೆದೆಯಿಂದ ದುಡಿಯುವ
ರೈತನಿಗಿಲ್ಲ ಸಂಬಳ ಗಿಂಬಳ

- ರಾಜು ಹಾಸನ

18 Sep 2020, 07:49 pm

ದುಷ್ಟರ ಬೇಟೆ

ಕಾಡಿನ ದುಷ್ಟ ಪ್ರಾಣಿಗಳು
ಆಟಹಾಸ ಮೆರೆಯುವುದು
ಸಾಧು ಪ್ರಾಣಿಗಳ ಪ್ರಾಣದೊಂದಿಗೆ
ನಾಡಿನ ದುಷ್ಟರು
ಆಟಹಾಸ ಮೆರೆಯುವುದು
ಮುಗ್ಧ ಜನರ ಜೀವನದೊಂದಿಗೆ
ದುಷ್ಟ ಪ್ರಾಣಿಗಳ
ಬೇಟೆಗೆ ಬರುವನು ಬೇಟೆಗಾರ
ದುಷ್ಟರ ಸಂಹಾರಕ್ಕೆ ಬರುವನು
ಮಹಾನಾಯಕ ಜೈ ಭೀಮ್

- ರಾಜು ಹಾಸನ

18 Sep 2020, 02:05 pm

ಅನ್ನವೇ ದೇವರು

ತಿನ್ನಲು ಇರುವವರು
ಅನ್ನ ನೀರು ತಿನ್ನದೆ
ಉಪವಾಸ ಮಾಡುವರು
ದೇವರಿಗಾಗಿ

ತಿನ್ನಲು ಇಲ್ಲದವರು
ಅಲೆದಾಡುವರು
ಒಂದೋತ್ತಿನ ಅನ್ನಕ್ಕಾಗಿ
ಪರದಾಡುವರು
ಹೊಟ್ಟೆಪಾಡಿಗಾಗಿ

ಮೂಢರು ಪೂಜಿಸುವರು
ಬೀದಿಯ ಕಲ್ಲೆ ದೇವರೆಂದು
ಹಸಿದವರು ಪೂಜಿಸುವರು
ಅನ್ನವೇ ದೇವರೆಂದು

- ರಾಜು ಹಾಸನ

18 Sep 2020, 12:55 pm