Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನಲ್ಲಿ ನಾನಾದಾಗ

ನನ್ನ ನೋವು ನಲಿವುಗಳ
ಕಾರಣ ನನ್ನ ಅಂತರಂಗದಲ್ಲಿ
ಕಾಣುವುದು ನನ್ನಲ್ಲಿ ನಾನಾದಾಗ.

ನನ್ನ ಸಾಧನೆಯ ಹಾದಿ
ಏನೆಂಬುದು ನನ್ನ ಅಂತರಂಗದಲ್ಲಿ
ಕಾಣುವುದು ನನ್ನಲ್ಲಿ ನಾನಾದಾಗ.

ಹುಟ್ಟು - ಸಾವು ಎಂಬ ಮಮ೯ಗಳ
ಮೂಲ ನನ್ನ ಅಂತರಂಗದಲ್ಲಿ
ತಿಳಿಯುವುದು ನನ್ನಲ್ಲಿ ನಾನಾದಾಗ.

ಜನರ ನಡುವಿನ ವಾದ ವಿವಾದಗಳ
ನೆಲೆ ನನ್ನ ಅಂತರಂಗದಲ್ಲಿ
ಕಾಣುವುದು ನನ್ನಲ್ಲಿ ನಾನಾದಾಗ.

ಅಧಿಕಾರ ಸಿಕ್ಕಾಗ ಅಂಧಕಾರದ
ಹರಿವು ನನ್ನ ಅಂತರಂಗದಲ್ಲಿ
ಕಾಣುವುದು ನನ್ನಲ್ಲಿ ನಾನಾದಾಗ.

ಜಾತಿ ಮತ ಪಂತ ಗಳ
ಮೀರಿದ ಜೀವನ ನನ್ನ ಅಂತರಂಗದಲ್ಲಿ
ಕಾಣುವುದು ನನ್ನಲ್ಲಿ ನಾನಾದಾಗ.

ಎಲ್ಲ ಧಮ೯ ತತ್ವಗಳ
ಸಿದ್ದಾಂತ ನನ್ನ ಅಂತರಂಗದಲ್ಲಿ
ಅರಿಯುವೆನು ನನ್ನಲ್ಲಿ ನಾನಾದಾಗ.

ಎಲ್ಲರ ಮನಸುಗಳ
ಆಳ ನನ್ನ ಅಂತರಂಗದಲ್ಲಿ
ಅಳೆಯುವೆನು ನನ್ನಲ್ಲಿ ನಾನಾದಾಗ.

ನನ್ನಲ್ಲಿ ನಾನಾಗುವ ಪರಿ
ತಿಳಿಯುವ ಮನ ನನ್ನಲ್ಲಿ ಇಲ್ಲದಾಗ,
"ಅರಿವೇ ಗುರು" ಕಾಣುವುದೆಲ್ಲಿ?

ಯಾರನ್ನು ದೂಷಿಸಲಿ
ನನ್ನ ಅಂತರಂಗದ ಪರಿ
ನಾನೇ ಅರಿಯಲಾರೆ.
-------ಖಾಜಾ.

- ಖಾಜಾ

30 Sep 2020, 10:18 am

ಕುರುಡು ಕಾಂಚಾಣ

ಹಳ್ಳಿ ಹಳ್ಳಿಯಲ್ಲೂ ಹುಳಿ ಹೆಂಡ ತುಂಬಿ
ಬಂಗಾರದ ಭೂಮಿ ಬಾಯ್ತೆರೆದು ಅಳಲು
ಅನ್ನದ ನಾಡಲ್ಲೆಲ್ಲ ಅಕಟಕಟಾ ಎದ್ದಿರಿಲು
ಕುರುಡು ಕಾಂಚಾಣ ಅಲ್ಲಿ ಕುಣಿಯುತ್ತಿತ್ತು //

ಓಟು ನೋಟಿನ ನಡುವ ಮದ್ಯದಂತರದಲ್ಲಿ
ಕೋರ್ಟು ಕಟ್ಟೆಲೆಗಳ ಸುಳ್ಳು ಸತ್ಯಗಳ ಮದ್ಯ
ಸಾಹಿತ್ಯ ಸಂಗೀತ ಪುರಸ್ಕಾರಗಳ ಒಳಗೊಮ್ಮೆ
ಕುರುಡು ಕಾಂಚಾಣ ಅಲ್ಲಿ ಕುಣಿಯುತ್ತಿತ್ತು //

ಸಿರಿವಂತರ ಸೋಕ್ಕಿನಲಿ ಬಡವನ ರಟ್ಟೆಯಲಿ
ಅಧಿಕಾರಿಗಳ ಧರ್ಪದಲಿ ಆಳುಗಳ ಕೊಕ್ಕಿನಲ್ಲಿ
ರಾಜಕಾರಣಿಗಳ ಬೊಕ್ಕಸದಲ್ಲಿ ನಲಿನಲಿದು
ಕುರುಡು ಕಾಂಚಾಣ ಅಲ್ಲಿ ಕುಣಿಯುತ್ತಿತ್ತು //

ಸತ್ತ ಹೆಣಗಳ ಸುಟ್ಟ ಸುಡುಗಾಡು ಬೂದಿಯಲಿ
ಬಚ್ಚಿಟ್ಟ ಬದುಕ ಕದ್ದವರ ಕೈಗಳಲಿ ತೆಲಾಡುತ
ಎಂದೆಂದಿಗೂ ನಾನ್ಯಾರಿಗು ಸೇರಲ್ಲ ಎಂದೇನುತ
ಕುರುಡು ಕಾಂಚಾಣ ಅಲ್ಲಿ ಕುಣಿಯುತ್ತಿತ್ತು //

ಕಾಸಿಂದೆ ಬಿದ್ದೋರು ಕಣ್ಮುಂದೆ ಇದ್ದೋರು
ಸದ್ಗುರುವಿನ ಚರಣದಲಿ ಶಾರಣಾದರೋ
ಇಟ್ಗೊಂಡು ಕಟಗೊಂಡು ಕುಪ್ಪಳಿಸಿ ಕುಣಿದು
ಕಾಂಚಾಣದ ಜೊತೆಗೂಡಿ ಮಣ್ಣಾದರೋ //



ಕಲ್ಮೇಶ ಬಡಿಗೇರ
೯೭೪೩೫೩೯೬೫೭
............ಬಾದಾಮಿ........

- Kalmesh Badiger

29 Sep 2020, 07:36 pm

ನಾ ಇರುವುದೇ ಹಿಂಗೆ

ಆದು ಹಾಂಗೆ ಇದು ಹಿಂಗೆ
ಅವರು ಹಾಗೆ ಇವರು ಹೀಗೆ
ಅವರು ಅವರೇ ಇವರು ಇವರೇ
ಅವರು ಕೂಡ ಇವರ ಹಾಗೆ
ಇವರು ಕೂಡ ಅವರ ಹಾಗೆ
ಯಾರು ಯಾರ ಹಾಗೆಯು ಅಲ್ಲ
ಎಲ್ಲರೂ ಅವರವರ ಹಾಗೆ

ಹಾಗೆ ಹೀಗೆ ಎಂದು
ನನ್ನ ಸುತ್ತ ಮುತ್ತ ನೂರಾರು
ಸಾವಿರಾರು ಪ್ರಶ್ನೆಗಳಿದ್ದರು
ನನ್ನ ಉತ್ತರ ಒಂದೇ ಒಂದೇ
ನಾ ಇರುವುದು ಹಿಂಗೆ ಹಿಂಗೆ

- ರಾಜು ಹಾಸನ

29 Sep 2020, 04:36 pm

ಸರಳತೆ

ಅಪ್ಪ ಅಮ್ಮ
ನಮ್ಮಗೆ ಏನು ಕೊಟ್ಟ್ರೂ
‌ ‌ ಅನ್ನೊದು ಮುಖ್ಯ ಅಲ್ಲ
ಅಪ್ಪ ಅಮ್ಮನಿಗೆ ನಾವು
ಏನು ಕೊಟ್ವೀ ಅನ್ನೊದು ಮುಖ್ಯ

ಅಪ್ಪ ಅಮ್ಮನನ್ನು ನಾವು
ಪ್ರಶ್ನಿಸುವ ಮುನ್ನ ನಮಗೆ ನಾವೇ
ಹಾಕಿಕೊಳ್ಳಬೇಕು ಒಂದು ಪ್ರಶ್ನೆ
ಆಗ ಸಿಗುವುದು ಉತ್ತರವಲ್ಲ
ನಮಗೆ ಆಗುವ ಜ್ಞಾನೋದಯ

- ರಾಜು ಹಾಸನ

29 Sep 2020, 10:10 am

ಉಸರವಳ್ಳಿ

ದಿನಕ್ಕೊಂದು ಬಣ್ಣ
ಕ್ಷಣಕ್ಕೊಂದು ಬಣ್ಣ
ಬದಲಿಸುವ ಮರದ ಮೇಲಿನ
ನಾಲ್ಕು ಕಾಲಿನ ಪ್ರಾಣಿ
ಉಸರವಳ್ಳಿಯಾದರೆ

ದಿನ ಜನ ಬದಲಾದಂತೆ
ದಿನಕ್ಕೊಂದು ಕ್ಷಣಕ್ಕೊಂದು
ಮಾತಿಗೊಂದು ಬಣ್ಣ ಬದಲಿಸುವ
ಮಣ್ಣಿನ ಮೇಲೆ ನೆಡೆದಾಡುವ
ಎರಡು ಕಾಲಿನ ಪ್ರಾಣಿ
ಉಸರವಳ್ಳಿ ಮನುಷ್ಯನಲ್ಲವೇ

ಕಾಲ ಬದಲಾಗದಿದ್ದರು
ಜನ ಬದಲಾದಂತೆ ಎಲ್ಲಾರು
ಬದಲಾಗುವುದು ಸಹಜ ಆದರೆ
ತಮ್ಮ ಮನಃಸಾಕ್ಷಿಯನ್ನೆ ಕೊಂದು
ಬದಲಾಗುವುದು ಆತ್ಮವಂಚನೆ
ತಮ್ಮಗೆ ತಾವೇ ಮಾಡಿಕೊಂಡ ದ್ರೋಹ

- ರಾಜು ಹಾಸನ

29 Sep 2020, 09:53 am

ನವ ನವೀನ ಕವಿಗಳ ಸ್ವರ್ಗ ಈ ಜಾಗ

ಹೊಸಬ್ಬ ನಾ ಈ ಜಾಗಕ್ಕೆ ಕರೆಯೋಲೆ ಇಲ್ಲ ಈ ಸ್ವರ್ಗಕ್ಕೆ ಹುಡುಕುತ್ತಾ ಬಂದೆ ನಾ ಪದಗಳ ಸಿಕ್ಕಿದರು ಕನ್ನಡದ ಕವಿಗಳು ಬೇಕು ನಮ್ಮ ತಾಯಿಗೆ ಇಂತ ಮಕ್ಕಳು ನಿಮಗೆಲ್ಲ ನನ್ನದೊಂದು ನಮನ

- Narasimhamurithy Narasimha

29 Sep 2020, 02:44 am

ನಿನ್ನ ನೆಡೆ ನಿನ್ನ ಗುರಿ

ಅವರಿವರು ಊದುವ
ಪುಂಗಿಗೆ ಮರುಳಾಗಿ ನಿಂತು
. ತಲೆದೂಗಿದರೆ ನೀ ಆಗುವೇ
ಅವರಿವರ ಕೈಗೊಂಬೆ

ಅವರಿವರ ಮಾತಿಗೆ
ಕಿವಿ ಕೊಡದೆ ನೆಡೆ
ನಿನ್ನ ದಾರಿಯ ಕಡೆ
ಸಾಗುವುದು ನಿನ್ನ ನೆಡೆ
ಮುಟ್ಟುವುದು ನಿನ್ನ ಗುರಿ ನಿನ್ನ ಕಡೆ

- ರಾಜು ಹಾಸನ

29 Sep 2020, 01:14 am

ಲೇಖನಿ

ಖಡ್ಗವೆಂಬುದು ನೇತ್ತರು
ಹೀರುವ ಆಯುಧವಾದರೆ
ಬರವಣಿಗೆ ಎಂಬುದು
ಮನಸ್ಸು ತಿದ್ದುವ ಆಯುಧ

ಒಬ್ಬರಿಗೊಬ್ಬರು ಹೇಳಲಾಗದ
ಮನಸ್ಸಿನ ಮೌನ ಮಾತುಗಳನ್ನು
ಮನಮುಟ್ಟುವಂತೆ ತಿಳಿಸುವ
ಮಾದ್ಯಮವೇ ಈ ಬರವಣಿಗೆ

- ರಾಜು ಹಾಸನ

29 Sep 2020, 12:45 am

...

ಭಾವನೆಗಳ ನಡುವೆ ನಿಂತು ಮನಸಿನೊಂದಿಗೆ ಮಾತನಾಡಿದರೇನು?
ಮನಸು ಭಾವನೆಗಳಾಗಬಹುದು ಆದ್ರೆ ಭಾವನೆಗಳು ಮನಸಾಗಲಾರದು... ಹಾಗೆ ಮೌನ ಮಾತಾದರೆ ಚೆನ್ನ ಆದ್ರೆ ಮಾತೆ ಮೌನವಾದರೆ

- Acchu love

28 Sep 2020, 10:22 pm

ಆಗಲು ರಾತ್ರಿ

ಕಷ್ಟ ಸುಖಗಳೆರೆಡು
ಆಗಲು ರಾತ್ರಿ ಇದ್ದಂತೆ
ಕಷ್ಟವೆಂದು ಕುಳಿತರೆ
ನೆಡೆಯಾದು ಜೀವನ
ಸುಖವೊಂದಿದ್ದರೆ
ತಿಳಿಯಾದು ಜನರ ಭಾವನೆ
ಕಷ್ಟ ಸುಖಗಳಿದ್ದರೆ
ಅರ್ಥವಾಗುವುದು ಜೀವನ
ಸಾಗುವ ದಾರಿಯಲ್ಲಿ ಕಲ್ಲು
ಮುಳ್ಳೆಂದು ನಿಂತ್ರೆ ಸಾಗದು ದಾರಿ
ಕಲ್ಲು ಮುಳ್ಳು ದಾಟಿ ನೆಡೆದರೆ
ಸಾಗುವುದು ಜೀವನ

- ರಾಜು ಹಾಸನ

28 Sep 2020, 01:55 pm