Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ದುರಂತ

ಭೂಮಿಗೆ ಇಲ್ಲದ ಅಹಂಕಾರ
ಗಾಳಿಗೆ ಇಲ್ಲದ ಅಂತರ
ನೀರಿಗೆ ಇಲ್ಲದ ವ್ಯತ್ಯಾಸ
ಅನ್ನಕ್ಕೆ ಇಲ್ಲದ ತಾರತಮ್ಯ
ಜನರ ಜನರ ನಡುವೆ
ಇರುವುದು ಅಂತರ ನಿರಂತ
ದುರಂತವೇ ಸರಿ

- ರಾಜು ಹಾಸನ

18 Sep 2020, 11:17 am

ಛಲವಾದಿ

ದುಡಿಯುವ
ಮನಸ್ಸಿಗೆ ವಯಸ್ಸಾದರೂ
ಬದುಕುವ ಛಲವಿದ್ದರೆ
ದುಡಿದು ಸೇರುವುದು
ಜೀವನದ ಧಡ
ಬದುಕುವ ಛಲವಿಲ್ಲದಿದ್ದರೆ
ದುಡಿಯದೇ ಸೇರುವುದು
ಮಸಣದ ಕಾಡಲು

- ರಾಜು ಹಾಸನ

18 Sep 2020, 01:20 am

ದೇವರು ಯಾರು

ದೇವರಿಂದ ನಾವಲ್ಲ
ನಮ್ಮಿಂದ ದೇವರು
ನಮ್ಮ ಸೃಷ್ಟಿಕರ್ತ ದೇವರಲ್ಲ
ದೇವರ ಸೃಷ್ಟಿಕರ್ತರು ನಾವು
ದೇವರು ನಮ್ಮನ್ನು ರಕ್ಷಿಸುವುದಿಲ್ಲ
ನಾವೇ ದೇವರನ್ನು ರಕ್ಷಿಸುವುದು

ಜನರಿಂದ ಹುಟ್ಟಿ
ಜನರಿಂದಲೇ ರಕ್ಷಣೆ ಪಡೆಯುವ
ಹಾದಿ ಬೀದಿಯಲ್ಲಿ ಬಿದ್ದಿರುವ
ಕಲ್ಲಿನ ಚೂರು ದೇವರಾಗುವುದೇ

ದೇವರಿಗಾಗಿ
ಹಬ್ಬ ಹರಿದಿನವೆಂದು
ಅನ್ನ ನೀರು ತಿನ್ನದೆ
ಉಪವಾಸ ಮಾಡುವ ದಡ್ಡ ಜನ
ಒಂದು ಕ್ಷಣ ಗಾಳಿ ಸೇವಿಸದೇ
ಮಾಡಲಿ ಉಪವಾಸ
ಮುರ್ಚೆ ಬಂದು ಬಿದ್ದಾರೆ
ಜನ ವೈದ್ಯರು ಬರುವರೆ ವಿನಃ
ಹಾದಿ ಬೀದಿಯಲ್ಲಿ ಬಿದ್ದರುವ
ಕಲ್ಲು ದೇವರಲ್ಲ

- ರಾಜು ಹಾಸನ

18 Sep 2020, 12:45 am

ನೀಡು ನೀ ಅಂಕಿತ

ತುಟಿಗೆ ತುಟಿಯ ಸೇರಿಸಿ
ಚುಂಬನದ ರಸ ಸವಿಯುತ

ಎರಡೂ ದೇಹ ಒಂದೆನಿಸುವಂತೆ
ಸುಖದ ಶಾಖದಿ ಬೇಯುತ

ಹಿಂದೆಂದೂ ಮಾಡದ ಅಂಗ ಚೇಷ್ಟೆಯ
ಒಮ್ಮೆ ಇಂದು ಮಾಡುತ

ನಾನು ನೀನು ಬೇರೆ ಎನುವ
ಭಾವನೆಯನೇ ಮರೆಯುತ

ಒಮ್ಮೆ ಮೌನದಿ ಮಾತನಾಡುವ
ನೀಡು ನೀನು ಅಂಕಿತ

- DevakumarBK Dev

17 Sep 2020, 10:52 pm

ನನ್ನವಳು ಕಂಡಾಗ

ಹೂ ನಾಚುತಾವ ನೀ ನಕ್ಕಾಗ
ಗಿಳಿ ನಕ್ಕಾವ ನೀ ಅತ್ತಾಗ
ನವಿಲು ನಿಂತ್ತವಾ ನೀ ನಡೆದಾಗ
ಕೋಗಿಲೆ ಹಾಡನೇ ಮರೆತಾವ ನೀ ಹಾಡಿದಾಗ ನಾ ನನ್ನೆ ಮರತೇ ಚಲುವೇ ನಿನ್ನ ನೋಡಿದಾಗ

- Chidanand Koujalagi

17 Sep 2020, 09:11 pm

ಓ ಗೆಳೆಯ

ಓ ಗೆಳೆಯ

ಮಾಮೂಲಿ ಪ್ರೀತಿ ಮಾಡಿ
ನೊಂದು, ಬೆಂದು, ಸೋತು
ನಿಂತಿರುವೆ ನಾನಿಲ್ಲಿ.

ಹರಿಯುತ್ತಿರುವ ನೀರ ಮದ್ಯೆ
ಗಾಡಿ ಚಲಿಸಿದಂತಾಗಿದೆ
ನನ್ನ ಜೀವನ ಇದೀಗಿಲ್ಲಿ.

ಶಾಲೆಯಲ್ಲಿ ಗುರುಗಳು ನನಗೆ ಬೋಧಿಸಿದರೂ,
ರೋಸಿಸಿದರೂ
ವಿದ್ಯೆಯೂ ಎನ್ನ ಬೆನ್ನತ್ತಲಿಲ್ಲ.

ಆದರೆ ಇಂದು ನಿಂತ ನೀರಿನ ಮೇಲೆ
ಎಂಟಾಣಿ ನಾಣ್ಯ ತೇಲಿಸುವಂತಾಗಿದೆ
ನನ್ನ ಈ ಜೀವನ.

ಒಂದೊಳ್ಳೆ ಉಪಾಯವ ನೀ ಹುಡುಕಿ ಎನ್ನ ಉದ್ದಾರ ಮಾಡು ಬಾ ಗೆಳೆಯ
ಓ ನನ್ನ ಜೀವದ ಗೆಳೆಯ.

*-ಪೃಥ್ವಿ ಶಶಾಂಕ್*
*ಬೊಮ್ಮಶೆಟ್ಟಹಳ್ಳಿ*

- pruthvi shashank

17 Sep 2020, 06:03 pm

ಸಾಧಿಸುವುದು ಏನಿದೆ?

ಅಪ್ಪ ಅಮ್ಮನ ಮನಸ್ಸು
ಮಕ್ಕಳ ಮನಸ್ಸಿನಂತೆ
ಅವರನ್ನು ಮಕ್ಕಳಂತೆ
‌‌. ನೋಡಿಕೊಳ್ಳುವುದರಲ್ಲಿ ಸಿಗುವಾ
ಖುಷಿ ಸ್ವರ್ಗಕ್ಕಿಂತ ಮಿಗಿಲು
ಕೊನೆಗಾಲದಲ್ಲಿ
ಅಪ್ಪ ಅಮ್ಮ ಬಯಸುವುದು
ಪ್ರೀತಿಯಿಂದ ನಾವು ಆಡುವ
ನಾಲ್ಕೇ ನಾಲ್ಕು ಮಾತುಗಳು
ತಮ್ಮ ಮಕ್ಕಳು ತಮ್ಮ ಜೊತೆಯಲ್ಲಿ
ಇರಬೇಕೆಂಬುದೇ ಹೊರೆತು
ಅನ್ನ ನೀರಲ್ಲ ಸಿರಿ ಸಂಪತ್ತಲ್ಲ
ನಮ್ಮಿಂದ ಇಷ್ಟು ಆಗದಿದ್ದರೆ
ನಾವು ಬದುಕಿ ಸಾಧಿಸುವುದಾದರೂ ಏನು

- ರಾಜು ಹಾಸನ

17 Sep 2020, 04:19 pm

ಯಶಸ್ಸು

ಬದುಕು ಪಯಣದ ಹಾದಿ
ಕಳೆದ ದಿನಗಳೆಲ್ಲ
ನೆನಪುಗಳ ಅಡಿ ಸಮಾಧಿ...
ಸಾಗುತ್ತಿರಲಿ ಸದಾ ನಿನ್ನ ನಡಿಗೆ
ತಲುಪುವೆ ನೀ ಕೊನೆಗೆ
ಗುರಿಯ ಕಡೆಗೆ....

ಕೃಷ್ಣ ಬಿಲ್ಲಾಡಿ ಮೇಲ್ ಬೈಲು

- krishna Billadi melbailu

17 Sep 2020, 11:07 am

ಹಾಗೊಮ್ಮೆ.. ಹೀಗೊಮ್ಮೆ..

ಹಾಗೊಮ್ಮೆ ಹೀಗೊಮ್ಮೆ ನೆನಪಿನಂತೆ ನನ್ನನೊಮ್ಮೆ ನೋಡಿ ಹೋಗುವೆ ಆಯಾಸವಾಗುವುದಿಲ್ಲವೇನೋ ಹುಡುಗ ನಿನಗೆ! ಬಿಗಿದ ತುಟಿಗಳ ಸಡಲಿಸಿ ಚೇಷ್ಟೆ ಮಾಡಿ ನಗಿಸುವೆ ಸುತ್ತಲಿರುವ ಗೆಳತಿಯರಿಗೆ ಏನೆಂದು ಹೇಳಲಿ ಮಾಯಾವಿ ನೀನು ಮನಸಲ್ಲೇ ಇರುವಾಗ.

ಜಾರು ಯವ್ವನ ಜೀಕಿದ ಜೋಕಾಲಿ ನೀನು ತುಸುವೇ ತಂಪಾಗಿ ಮಲಗುವೆ ಕಮ್ಮನೆಯ ಕನಸಾಗಿ ಕಣ್ಸೇರು ನಿದುರೆಯಲ್ಲೇ ನಿನ್ನವಳಾಗುವೆ ಹಗಲು ಮೂಡವ ಮುನ್ನ ಮಗುವಾಗಿ.

ಸಾವಿರಾರು ಮಾತುಗಳಿವೆ ಹುಡುಗ ಮನಸಲ್ಲಿ ಕೇಳಲು ಸಮಯವೇ ಇಲ್ಲ ನಿನ್ನಲ್ಲಿ ಒಂದೆರಡು ಸಾಲು ಹಾಗೆ ಗೀಚುವೆ ತುಟಿಯಂಚಿನ ನಗುವಿನೊಂದಿಗೆ ಓದಿಬಿಡು ಬಿಡುವು ಮಾಡಿಕೊಂಡು ನಿನ್ನ ಎದೆಗಪ್ಪಿಕೊಂಡಿದ್ದ ಈ ನೀಲಿ ಲೇಖನಿಯ ಜನ್ಮ ಸಾರ್ಥಕವಾದರೂ ಆಗಲಿ ನಾ ಕದ್ದ ಪುಣ್ಯಕೆ.

ಅಕ್ಷರಗಳು ಮೇಲು ಕೀಳು ಆಗಿರಬಹುದು ಕ್ಷಮಿಸಿಬಿಡು ಹುಡುಗ ತಡವರಿಸಿ ಬಂದ ಭಾವಗಳಿಗೆ ನಿನ್ನ ಪರಿಚಯ ಮಾಡುವಲ್ಲಿ ನಿಮಗ್ನಳಾಗಿದ್ದೆ ನಾನು. ಪ್ರೇಮದ ಪರಿಯು ಹೊಸತೇನಿಸಬಹುದು ಆದರೆ ನಮ್ಮ ಪ್ರೀತಿ ಹಳೆಯದಲ್ಲವೇ ಹುಡುಗ ಆ ಬಾನಿನಿಂದೆ ಅಡಗಿರುವ ಚುಕ್ಕಿಗಳ ಆಯಸ್ಸಿನಷ್ಟು.

- ಚುಕ್ಕಿ

17 Sep 2020, 09:49 am

ಜಗತ್ತಿನ ಮಾದಲ ಸುಳ್ಳು

ನಮ್ಮ ನಿಮ್ಮೆಲ್ಲರ ಸೃಷ್ಟಿಕರ್ತ
ಬ್ರಹ್ಮಾಂಡ ಸೃಷ್ಟಿಕರ್ತ ದೇವರೆಂದಾರೆ
ಗಂಡು ಹೆಣ್ಣಿನ ಸೃಷ್ಟಿ ಯಾಕೆ
ಗಂಡು ಹೆಣ್ಣಿಗೆ ಮದುವೆಯಾಕೆ

ಇಡೀ ಬ್ರಹ್ಮಾಂಡವೇ
ದೇವರ ಕೈಯಲ್ಲಿದ್ದರೆ
ಇಡೀ ದೇವಲೋಕವೇ
ಜನರ ಕೈಯಲ್ಲಿದೆ

ದೇವರೆಂಬುಹುದೇ
ಜಗತ್ತಿನ ಮಾದಲ ಸುಳ್ಳು
ದೇವರಿದ್ದಾನೆಂದು
ಹೇಳುವವನೇ ಮಾದಲ ಮೋಸಗಾರ

ದೇವರನ್ನು ಪೂಜಿಸಿದಷ್ಟು
ಬರುವುದು ಬಡತನ
ಖಾಲಿಯಾಗುವುದು ಜೇಬು
ಮೈ ಬಗ್ಗಿಸಿ ದುಡಿದಾರೆ
ಬರುವುದು ಸಿರಿತನ
ತುಂಬುವುದು ಜೇಬು

- ರಾಜು ಹಾಸನ

16 Sep 2020, 11:46 pm