Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಆಗಲು ರಾತ್ರಿ

ಕಷ್ಟ ಸುಖಗಳೆರೆಡು
ಆಗಲು ರಾತ್ರಿ ಇದ್ದಂತೆ
ಕಷ್ಟವೆಂದು ಕುಳಿತರೆ
ನೆಡೆಯಾದು ಜೀವನ
ಸುಖವೊಂದಿದ್ದರೆ
ತಿಳಿಯಾದು ಜನರ ಭಾವನೆ
ಕಷ್ಟ ಸುಖಗಳಿದ್ದರೆ
ಅರ್ಥವಾಗುವುದು ಜೀವನ
ಸಾಗುವ ದಾರಿಯಲ್ಲಿ ಕಲ್ಲು
ಮುಳ್ಳೆಂದು ನಿಂತ್ರೆ ಸಾಗದು ದಾರಿ
ಕಲ್ಲು ಮುಳ್ಳು ದಾಟಿ ನೆಡೆದರೆ
ಸಾಗುವುದು ಜೀವನ

- ರಾಜು ಹಾಸನ

28 Sep 2020, 01:55 pm

ಪ್ರೇಮ ಬಾಂಧವ್ಯ ❤️

ಆ ಹತ್ತು ದಿನ,
ನಿಮ್ಮ ಜೊತೆಗಿನ ಜೀವನ.....
ತುಂಬಾ ರೋಮಾಂಚನ....
ರಾತ್ರಿಯ ವೇಳೆ ಕಣ್ಣಾ ಮುಚ್ಚಾಲೆ...
ಹಗಲಿನಲ್ಲಿ, ಕೈ ನೋವುವಷ್ಟು ಕಡಲೆಕಾಯಿ ಸುಲಿಯುವುದು
ಇದರ ನಡುವೆ ಎಲ್ಲರ ತುಂಟಾಟಗಳು..
ಏನು ಕೊಳ್ಳದಿದ್ದರು... ದಿನವೂ ಮಾಲ್ ಗಳಲ್ಲಿ... ನಮ್ಮ ಸುತ್ತಾಟ....
ಅದರ ನಡುವೆ ಅಣ್ಣ ತಮ್ಮನ ತುಂಟಾಟ....
ಎಲ್ಲಿ ಹುಡುಕಿದರೂ ಸಿಗದು ಈ ಪ್ರೇಮ ಬಾಂಧವ್ಯದ ಸವಿಯೂಟ......
for sweet sissy and bro

- Bhavyashree K.G1

28 Sep 2020, 11:26 am

ನರ ಮನುಷ್ಯ

ಭೂ ಲೋಕದ ನರ ಮಾನವರು
ಸೇವಿಸುವುದು ಸಸ್ಯ ಆಹಾರ
ಮಾಂಸಾಹಾರ ಮಿಶ್ರ ಆಹಾರವಾದರೆ
ದೇವಾ ಲೋಕದ ದೈವಾ ಮಾನವರು
ಸೇವಿಸುವುದ್ದದಾರು ಏನು
ನರ ಮಾನವ ಇರುವನು ನಮ್ಮ
ನಿಮ್ಮೆಲ್ಲರ ಭೂ ಲೋಕದಲ್ಲಿ
ದೇವರು ಇರುವನು ದೇವಾ ಲೋಕದಲ್ಲಿ
ಹಾಗಾದರೆ ದೇವಾ ಲೋಕಕ್ಕೆ
ಹೋಗಿ ಬಂದವನು ಯಾರಯ್ಯಾ
ಯಾವ ದೇವರು ಇಲ್ಲ
ಯಾವ ದೇವಾ ಲೋಕವು ಇಲ್ಲ
ಇರುವುದೊಂದೇ ಲೋಕ
ಅದೇ ಈ ಭೂ ಲೋಕವಯ್ಯಾ
ಈ ಭೂ ಲೋಕದ ಒಡೆಯ
‌ನರ ಮಾನವ ನಾವೇ ಅಲ್ಲವೇ
ದೇವರಿದ್ದಾನೆಂದು
ನಂಬಿಸುವವನು ಬಲು ಕಿಲಾಡಿ
ನಂಬಿ ಮೋಸ ಹೋಗುವವನು
ಹಳ್ಳಕ್ಕೆ ಬಿದ್ದ ಹರಕೆ ಕುರಿಯಾಗುವನಯ್ಯ
ಮನುಷ್ಯ ಜನ್ಮವೆಂಬುದು
ಅತ್ಯಮೂಲ್ಯವಾದದ್ದು ವ್ಯರ್ಥ ಮಾಡಿದಿರಿ
ಮೂಢನಂಬಿಕೆ ಕಟ್ಟು ಕಥೆಗಳನ್ನು
ನಂಬಿ ಹಾಳಾಗಬೇಡಿ

- ರಾಜು ಹಾಸನ

27 Sep 2020, 07:36 pm

ಸುಮಧುರ ಸಂಗೀತ

ಅಳ್ತಾನೊ ನನ್ನ ಗೆಳೆಯ ಬಿಕ್ಕಿ ಬಿಕ್ಕಿ
ಬೈತನೋ ನನ್ನ ಗೆಳೆಯ
ತನಗೆ ತಾನೇ ಬೈದುಕೊಂಡು
ಬೀದಿ ಬೀದಿ ತಿರುಗುತ್ತಾನೋ
ನಗ್ತಾನೊ ನನ್ನ ಗೆಳೆಯ
ಒಬ್ಬ ಒಬ್ಬನೇ ಮಧ್ಯೆ ರಾತ್ರಿ ಎದ್ದು
ಕುಣಿತನೋ ನನ್ನ ಗೆಳೆಯ
ಕುಡಿದು ಕುಣಿತನೊ ಹೇಳಿದ್ರೇ ಕೇಳಲ್ಲ
ಹಿಡ್ಕೊಂಡರೆ ಒದೆಯುತ್ತಾನೆ

ಬಿಟ್ಟುಬಿಟ್ಟೆ ಬಿಟ್ಟು ಹೋಗ್ಬಿಟ ನಮ್ಮೂರು
ಎಲ್ಲವನೋ ಹೇಂಗವನೋ
ಗೋತ್ತಿಲ್ಲ ನನ್ನ ಗೆಳೆಯ
ಬರುತ್ತವನೊ ಮತ್ತೆ ಬಂದು
ಕೇಳುತ್ತಾನೋ ಎಲ್ಲವಳೊ
ಹೇಂಗಾವಳೊ ನಮ್ಮ್ ಹುಡುಗಿ
ಕೂಯುತ್ತಾನೋ ನನ್ನ ಗೆಳೆಯ ಪೀಟಿಲು
ಹಾಡ್ತನೋ ಹಾಳೆ ರಾಗ
ಬಿಟ್ಟು ಹೋದ್ದೆಲೇ ಗೆಳತಿ ನೀ ನನ್ನ ಬಿಟ್ಟು
ಮರೆತು ಹೋದ್ದೆಲೇ ಗೆಳತಿ
ನೀ ನನ್ನ ಪ್ರೀತಿ ಮರೆತು
ಸಾಕಪ್ಪಾ ಸಾಕು ಇವನ ಸಹವಾಸ

- ರಾಜು ಹಾಸನ

26 Sep 2020, 11:11 pm

ಸ್ಮಶಾನದ ಹೂವು

ದುಡಿದು ತಿನ್ನುವ ಬಡವ
ದುಡಿಸಿಕೊಂಡು ತಿನ್ನುವ ಶ್ರೀಮಂತ
ಬಿಟ್ಟು ಹೋಗುವರು
ಒಂದಲ್ಲ ಒಂದು ದಿನ ಸ್ಮಶಾನದ ಹೂವಾಗಿ
ಹುಟ್ಟಿದಾಗ ತಂದಿದ್ದು ಆಸೆ ಅಂತಸ್ತದರೂ
ಸತ್ತಾಗ ಬಿಟ್ಟು ಹೋಗಬೇಕು ಎಲ್ಲವನ್ನೂ
ಶಾಶ್ವತವಲ್ಲದ ಈ ಜೀವಕ್ಕೆ
ಸಿರಿತನವಾದರೇನು ಬಡತನವಾದರೇನು
ಇದಷ್ಟು ದಿನ ಮಾನವನಾಗಿ ಬದುಕಿ
ಸತ್ತ ಮೇಲೆ ಹೇಣವಾಗಿ ಹೋಗಬೇಕು ಅಷ್ಟೇ
ಈ ಮನುಷ್ಯ ಜೀವನ ಇಷ್ಟೇ

- ರಾಜು ಹಾಸನ

25 Sep 2020, 12:20 pm

ಮರಳಿ ಬಾರದು

ಸ್ಮಶಾನದ ಹೆಣವ
ಮಣ್ಣು ನುಂಗಿಕೊಂಡರೆ
ತಟ್ಟೆಗೆ ಬಿದ್ದ ಹಣವನ್ನು
ಪೂಜಾರಿ ನುಂಗಿಕೊಳ್ಳುವನು
ಒಟ್ಟಿನಲ್ಲಿ ಸ್ಮಶಾನಕ್ಕೆ ಹೋದ ಹೇಣ
ಪೂಜಾರಿ ತಟ್ಟೆಗೆ ಬಿದ್ದ ಹಣ
ಎರಡು ಒಂದೇ
ಮತ್ತೆ ಮರಳಿ ಬಾರದು

- ರಾಜು ಹಾಸನ

25 Sep 2020, 10:15 am

ನಮ್ಮ ಹಳ್ಳಿ

ನೋಡಲು
ಬಲು ಸೊಗಸು
ಹಚ್ಚ ಹಸಿರಿನ
ಶಾಂತಿಯ ಹೂದೋಟ
ನಮ್ಮ ಹಳ್ಳಿ
ಕಾಯಕವೇ ಕೈಲಾಸವೆಂದು
ಬುದುಕುವ ಜನರ
ಬಂಗಾರದ ಗುಡಿ ನಮ್ಮ ಹಳ್ಳಿ
ಶರಣ ಸಂತರ ನಾಡು
ದಾಸ ಸಾಹಿತಿಗಳ ಬೀಡು ನಮ್ಮ ಹಳ್ಳಿ
ಹಬ್ಬ ಹರಿದಿನ
‌ ಮದುವೆ ಮುಂಜಿಯೆಂದರೆ
ಶೃಂಗಾರವಾಗುವುದು
ಸ್ವರ್ಗದಂತೆ ನಮ್ಮ ಹಳ್ಳಿ

- ರಾಜು ಹಾಸನ

25 Sep 2020, 01:39 am

ಬದಲಾದರೂ ಬದಲಾಗದು

ಬಣ್ಣ ಬದಲಾದರೂ
ಮನಸ್ಸು ಬದಲಾಗದು
ಜನರು ಬದಲಾದರೂ
ಜಗತ್ತು ಬದಲಾಗದು
ದಿನ ಬದಲಾದರೂ
ಕಾಲ ಬದಲಾಗದು
ಪ್ರೀತಿಸೋರು ಬದಲಾದರೂ
ಪ್ರೀತಿ ಬದಲಾಗದು
ಮಾತು ಬದಲಾದರೂ
ನಂಬಿಕೆ ಬದಲಾಗದು
ಎಲ್ಲವು ಬದಲಾದರೆ
ನಾವು ನಿವು ಮನ್ನ

- ರಾಜು ಹಾಸನ

25 Sep 2020, 12:43 am

ಮೂಕ ಪ್ರಾಣಿ

ದೇವರ ಹೆಸರಿನಲ್ಲಿ ಮುಕ್ತಿ ಮೋಕ್ಷಕ್ಕಾಗಿ
ಬಲಿಕೊಟ್ಟು ತಿನ್ನುವರು ಮಾಂಸದ ಎಡೆಯಿಟ್ಟು
ಮಾತು ಬಾರದ ಮೂಕ ಪ್ರಾಣಿಗಳ ಕಡಿದು
ಮುಟ್ಟದಿರುವುದೇ ಮೂಕ ಪ್ರಾಣಿಗಳ ಗೋಳು
ತಟ್ಟದಿರುವುದೇ ಮೂಕ ಪ್ರಾಣಿಗಳ ಶಾಪ

ದೇವರಿಗಾಗಿ ಪ್ರಾಣಿಗಳ ಬಲಿಕೊಡುವ ಬದಲು
ನಿಮ್ಮನ್ನು ನೀವೇ ಬಲಿಕೊಟ್ಟು ನೋಡಿ
ಆಗಲಾದರೂ ತಿಳಿಯುವುದೇನೂ
ನಿಮ್ಮಗೆ ಪ್ರಾಣಿಗಳ ಜೀವದ ಬೆಲೆ
ತಿಳಿದು ಬದುಕೋ ಮನುಜ ಮೂಕ ಪ್ರಾಣಿಗಳ
ಜೀವವು ನಮ್ಮ ಜೀವದ ಹಾಗೆಯೇ

ಯಾವ ದೇವರು ಕೂಡ ಯಾವ ಪುಸ್ತಕದಲ್ಲೂ
ಬರೆದಿಟ್ಟು ಹೋಗಿಲ್ಲ ಮೂಕ ಪ್ರಾಣಿಗಳ
ಕೊಂದು ತಿಂದರೇ ಮೋಕ್ಷ ಫಲಿಸುವುದೆಂದು
ಎಲ್ಲವು ನಮ್ಮ ಭ್ರಮೆಯಾಷ್ಟೆ ತಿಳಿಯೋ ಮನುಜ

ಪ್ರೀತಿಸಿ ಸಂರಕ್ಷಿಸಿ ಮೂಕ ಪ್ರಾಣಿಗಳನ್ನು

- ರಾಜು ಹಾಸನ

24 Sep 2020, 11:27 pm

ಕಲ್ಲು ಬಂಡೆ

ಹುಟ್ಟಿನಿಂದ ಸಾಯುವವರೆಗೂ
ಎಡೆಬಿಡದೆ ಎಡೆಯಿಟ್ಟು ನೆಡೆಸುವರು
ಹಬ್ಬ ಹರಿದಿನಗಳ ಸಡಗರ ಸಂಭ್ರಮಾಚರಣೆ
‌ ಆದರೂ ಒಂದು ದಿನವು ಬಂದು ಹೋಗಲಿಲ್ಲ
ಕಂಡು ಮಾತಡಿಸಲಿಲ್ಲ ಇಲ್ಲಿಯ ತನಕವೂ
ಬಂದು ಕೇಳಲಿಲ್ಲ ದುಃಖ ದುಮ್ಮಾನಗಳನ್ನು
ಆದರೂ ತಪ್ಪಲಿಲ್ಲ ನಾನು ಕಲ್ಲು ಬಂಡೆಯ
ದೇವರೆಂದು ಪೂಜಿಸುವುದು

- ರಾಜು ಹಾಸನ

24 Sep 2020, 01:38 pm