ಏ ಚೆಲುವೆಯೇ
ನೀ ಮರೆತು ಬಿಡು ಎಂದಾಕ್ಷಣ
ನಿನ್ನ ಪ್ರೀತಿಯ ನೆನೆದು
ಹಾಗೆ ಸುಮ್ಮನಾಗಲು ಬಿಡುತ್ತಿಲ್ಲ
ಒಂದೊಂದು ಕ್ಷಣಕ್ಕೂ
ನಿನ್ನ ನೆನಪುಗಳು ಬಂದು
ಬಡಿದೆಬ್ಬಿಸಿ ನೆನಪಿಸುವುದು
ನಿನ್ನಲ್ಲಿರುವುದು ನಿನ್ನ ಹೃದಯವಲ್ಲ
ಎಂದಾಕ್ಷಣ ಗಾಬರಿಗೊಂಡು
ಹುಡುಕಿದೆ ಒಂದು ಕ್ಷಣ
ಹುಡುಕಿದರು ಕೈಗೆ ಸಿಗದಂತೆ
ಅಲೆದಾಡುತ್ತಿದ್ದೆ ನಿನ್ನ ಹಿಂದೆ ಹಿಂದೆ
ಬೇಡವೆಂದು ಬೇಡಿಕೊಂಡರು
ಕೇಳುತ್ತಿಲ್ಲ ನನ್ನ ಮಾತು ಈ ಹೃದಯ
ಮುನಿಸುಕೊಂಡು ಓಡುತ್ತಿದೆ
ಅವಳೊಂದಿಗೆ ಅವಳಿರುವಲ್ಲಿಗೆ
ಯಾರಿಗೆ ಹೇಳೋದು
ಈ ಒಂಟಿ ಹೃದಯಾದ ಗೋಳು
ಕಳೆದು ಹೋದೆ ನಾ, ಹಸಿರಿನ ತಾಣದಲಿ.
ಕಳೆದು ಹೋದೆ ನಾ, ಮಳೆ ಹನಿಗಳ ಜೊತೆಯಲಿ.
ಕಳೆದು ಹೋದೆ ನಾ, ಆ ಬೆಟ್ಟ-ಗುಡ್ಡಗಳ ಸುಂದರ ದೃಶ್ಯಗಳಲ್ಲಿ.
ಕಳೆದು ಹೋದೆ ನಾ, ಹಕ್ಕಿಗಳ ಚಿಲಿಪಿಲಿ ಹಾಡಿನಲಿ.
ಕಳೆದು ಹೋದೆ ನಾ, ನಮ್ಮ ಮಲೆನಾಡಿನ ಸುಂದರ ಸೊಬಗನಲಿ.
- ಜ್ಯೋತಿ ಫರ್ನಾಂಡಿಸ್
ಕಳೆದು ಹೋದೆ ನಾ, ಹಸಿರಿನ ತಾಣದಲಿ.
ಕಳೆದು ಹೋದೆ ನಾ, ಮಳೆ ಹನಿಗಳ ಜೊತೆಯಲಿ.
ಕಳೆದು ಹೋದೆ ನಾ, ಆ ಬೆಟ್ಟ-ಗುಡ್ಡಗಳ ಸುಂದರ ದೃಶ್ಯಗಳಲ್ಲಿ.
ಕಳೆದು ಹೋದೆ ನಾ, ಹಕ್ಕಿಗಳ ಚಿಲಿಪಿಲಿ ಹಾಡಿನಲಿ.
ಕಳೆದು ಹೋದೆ ನಾ, ನಮ್ಮ ಮಲೆನಾಡಿನ ಸೊಬಗಿನಲಿ.
- ಜ್ಯೋತಿ ಫರ್ನಾಂಡಿಸ್
ಜನ್ಮ ಕೊಟ್ಟ ತಂದೆ ತಾಯಿ
ಬದುಕಲು ಜಾಗ ಕೊಟ್ಟ ಭೂ ತಾಯಿ
ದಣಿವು ನೀಗಿಸಿದ ಕಾವೇರಿ ತಾಯಿ
ಹಸಿದ ಹೊಟ್ಟೆಗೆ ಅನ್ನ ಹಾಕಿದ ರೈತ
ಜೀವಿಸಲು ಗಾಳಿ ಬೆಳಕು ಕೊಟ್ಟ ಪ್ರಕೃತಿ
ಎಲ್ಲರನ್ನೂ ಕಾಯುವ ಸೈನಿಕ
ಕಣ್ಣಿಗೆ ಕಾಣುವ ನಿಜವಾದ ದೇವರುಗಳು
"ಪದೇ ಪದೇ ಕಾಡುವ ಹುಡುಗಿಯೇ ಹೇಳು ನೀ ಯಾರು? "
ನನ್ನ ಜೀವನದಿ ಬಂದೆ ಖುಷಿಯೆoಬ ಹೆಸರಿನಲ್ಲಿ.
ನನ್ನಲೇ ಕಾಣದಂತ ಹೊಸದಿ ರೂಪವನ್ನು ಬಿತ್ತರಿಸುತ ಹೃದಯದಲ್ಲಿ.
ನೀ ನಗುತಿರುವೆ ಮರುಳುಗಾಡಿನಲ್ಲಿ ನೀರು ಚಿಮ್ಮುವ ಪರಿಯಲ್ಲಿ.
ನನ್ನ ಜೀವನದ ಗೋಡೆಯಲ್ಲಿ ನೀ ಇರುವೆ ಎಂದು ಮಾಸದ ಬಣ್ಣದ ಥರದಲ್ಲಿ.
ನೂರಾರು ಹುಡುಗಿಯರು ಕಣ್ಣು ಮುಂದೇ ಬಂದರು ನಿನ್ನ ಮುದ್ದಾದ ಮುಖ ಮಾತ್ರ ಕಾಡುವುದು ಕನಸಿನಲ್ಲಿ.
ಇರಲು ನೀನ್ಯಾರು, ಉಳಿಸಿಕೊಳ್ಳಲು ನಾನ್ಯಾರು
ಇಷ್ಟೆಲ್ಲ ಕೊಟ್ಟ ನಿನಗೆ ನಾ ಕೇಳುವುದು ಒಂದೇ ಕೊನೆಯಲ್ಲಿ
ಸಾವಿನ ಅಂಚಿನಲ್ಲಿ ಬಿಡುವಿಯ ನೀರು ಬಾಯಲ್ಲಿ?................
ಬೇಡ ಮಗ ಬೇಡ
ಈ ಎಣ್ಣೆ ಸಿಗರೇಟು ಸಹವಾಸ
ಬಿಟ್ಟು ಬಿಡು ಮಗ ಬಿಟ್ಟು ಬಿಡು
ಈ ಹೆಂಡ ಸಾರಾಯಿ ಕುಡಿಯೋದು
ಅವಳ ನೆನಪು ಮರೆತು
ಒಮ್ಮೆಲೇ ಅತ್ತು ಬಿಡು ನೀ
ಜೋರಾಗಿ ನಕ್ಕು ಬಿಡು ನೀ
ಹೋಗ್ಬೇಡ ಮಗ ಹೋಗ್ಬೇಡ
ನೀ ಅವಳ ಹಿಂದೆ ಹಿಂದೆ
ಹೋಗಿ ಸಾಯಬೇಡ
ಅಳಬೇಡ ಮಗ ಅಳಬೇಡ
ನೀ ಅತ್ತು ಅತ್ತು ಆಳಾಗಬೇಡ
ಸತ್ತು ಸಮಾಧಿಯಾಗಬೇಡ
ನಗು ನಗುತ್ತಾ ಬಾಳು
ಪ್ರೀತಿಸಿ ಹೋದವಳ ನೆನಪಲ್ಲಿ
ಆಸೆಯನ್ನು ಹೊತ್ತು ತಂದ ಮನುಷ್ಯ
ಹೊತ್ತು ತರಲಿಲ್ಲ ಆಯಸ್ಸನ್ನು
ಮನುಷ್ಯ ಆಯಸ್ಸನ್ನು
ಹೊತ್ತು ತಂದಿದ್ದರೆ ಕಾದಿರುತ್ತಿತ್ತು
ಭೂಮಿಗೆ ದೊಡ್ಡ ಗಂಡಾಂತರ
ಅಂತು ಇಂತು ತಪ್ಪಿತು ಬಾರಿ ಆವಾಂತರ
ಇದು ಯಾಂತ ಲೋಕವಯ್ಯಾ
ಯಾರು ಬಲ್ಲವರಿಲ್ಲ ಯಾರು ಕಂಡಿಯಾರಿಲ್ಲ
ಈ ಭೂ ಲೋಕದ ನಾಟಕವ
ಮನುಜನ ಗೊಂಬೆಯಾಟವಾ
ಒಬ್ಬರ ಕಂಡರೆ ಒಬ್ಬರಿಗೆ ಆಗುವುದಿಲ್ಲ
ಕಂಡಾಗ ನಗು ನಗುತ್ತಾ ನುಡಿಯುವರು
ಬೆಲ್ಲ ತುಪ್ಪದ ಮಾತು
ಮನದಲ್ಲಿ ಹಾಗೆಯ ತುಂಬಿಕೊಂಡು
ಕಾಲಕ್ಕೆ ತಕ್ಕಂತೆ ನಟಿಸಿ ನರ್ತನ ಮಾಡುವರು
ಬಣ್ಣ ಬಣ್ಣದ ಮುಖವಾಡ ಧರಿಸಿ
ಇಲ್ಲಿ ಯಾರೂ ಯಾರ ಕೈ ಗೊಂಬೆಯಲ್ಲ
ಯಾಲ್ಲರು ಕಾಲದ ಕೈ ಗೊಂಬೆಯಾಗಿರುವರಯ್ಯ