Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೇಳಿ ಹೊರಟ್ಟವಳೇ..

ಭಾವನೆಗಳ ಹುಡುಕಾಟದಲ್ಲಿ, ಭಾರದ ಭಾಗವಾಗಿ ಉಳಿದವಳೇ.
ವರಿಸಲು ಬಂದಾಗ , ಹೃದಯದ ಬಾಗಿಲು ಮುಚ್ಚಿದವಳೇ.
ನಿ ನನಗೆ ಎಲ್ಲಾ ಎಂದರು, ನೀ ನನ್ನವನಲ್ಲ ಎಂದು ಹೇಳಿ
ಹೊರಟ್ಟವಳೇ..

ಬೇಡಿ ಬೇಡಿ ಕೇಳಿದರೆ, ಅದರಲ್ಲಿ ಪ್ರೀತಿ ಎಲ್ಲಿದೆ.
ಬೇಡ ಎಂದು ಹೇಳಿ ಹೊರಟ್ಟವಳನ್ನೇ ಮನಸ್ಸು ಮೆಚ್ಚಿದೆ.

- NaveenkumarK

23 Sep 2020, 11:13 am

ಮನ ಮಿಡಿಯುವ ಕಥೆ

ಇಂದು ಮುಳುಗಿ ನಾಳೆ ಉದಯಿಸುವ
ಸೂರ್ಯ ಚಂದ್ರರನ್ನ ನೋಡ್ತಿವೋ ಗೋತ್ತಿಲ್ಲ
ಜೀವನವೆಂಬುದು ಕ್ಷಣಿಕ
ಯಾವಾಗ ಹೇಂಗೆ ಎಲ್ಲಿ ಯಾಕ್
ಹೋಗುತ್ತೆ ಅಂತ ಯಾರಿಗು ಏನು ಗೋತ್ತಿಲ್ಲ
ಆದರೂ ನಾವು ನಮ್ಮವರಿಂದ ದೂರಾಗಿ
ಮಣ್ಣಲ್ಲಿ ಮಣ್ಣಾಗಿ ಎದೆಯ ಮೇಲೆ
ಮಣ್ಣಿನ ಗೋರಿ ಕಟ್ಟಿಕೊಂಡು ಮಲಗಿದ್ದರೂ
ಆಗಾಗ ಬಂದು ಕೂಗಿ ಕರೆಯುವಳು
ಕರುಳು ಬಳ್ಳಿಯ ಕಂದನ ನೆನೆದು
ಒರೆಸುವಳು ಕಂದನ ಗೋರಿಯ
ತನ್ನ ಕಣ್ಣೀರ ಮಳೆಯ ಸುರಿಸಿ
ಹೊವಿನ ಮಾಲೆಯ ಶೃಂಗಾರ ಮಾಡಿ
ತಿಂಡಿ ತಿನಿಸುಗಳನ್ನು ತನ್ನ ಸೇರಗಲ್ಲಿ
ಕಟ್ಟಿ ತಂದು ಗೋಳಾಡುವಳು
ಮನ ಮಿಡಿಯುವಂತೆ ಕೂಗಿ ಕರೆಯುತ್ತಾ
ಇದೆ ಅಲ್ಲವೇ ಕರುಳ ಬಳ್ಳಿಯ ಸಂಬಂಧ
ಅದಕ್ಕೆ ಹೇಳುವುದು ತಾಯಿಯೇ ದೇವರೆಂದು

- ರಾಜು ಹಾಸನ

23 Sep 2020, 12:12 am

ಪ್ರೀತಿಯ ಬಂದ

ಪ್ರೀತಿಸುವೆ ನಿನ್ನ ಮನದಣತಿಯಂತೆ
ಕಲ್ಮಶವಿಲ್ಲದೆ
ಆರಾಧಿಸುವೆ ನಿನ್ನ ಭಾವನೆಗಳ ತುಸು ಲೋಪ ಬಾರದಂತೆ
ನಿನ್ನವರನ್ನು ಕಾಣುವೆ ನನ್ನವರಂತೆ
ನಿನ್ನಲ್ಲಿ ಬೆಸೆಯುವ ನಿನ್ನುಸಿರಿನಂತೆ
ನಿನ್ನ ಸುಖ-ದುಃಖಗಳಲ್ಲಿ ಜೊತೆಯಿರುವೆ ನೆರಳಿನಂತೆ
ನೀ ಇರುವ ತನಕ ನಾ ಜೊತೆಗಿರುವೆ
ನೀನಿಲ್ಲದಿರೆ ನಾ ನಿಂಬಾಲಿಸುವೆ ನಿನ್ನ ಆತ್ಮದಂತೆ
ನಾವಿಬ್ಬರೂ ಒಂದೇ ಆತ್ಮ ಎರಡು ದೇಹವಿದ್ದಂತೆ

- HarishKumarm

22 Sep 2020, 08:53 pm

ಸುಂದರ ಕ್ಷಣ

ತಂಪಾದ ಗಾಳಿಗೆ ಮೈಯೊಡ್ಡಿ
ಮಧುರ ಸ್ಪರ್ಶವ ಆನಂದಿಸುತ್ತಾ
ಹಾಗೇ ಸುಮ್ಮನೆ ನೆಡೆದಾಡುವಾಸೆ
ಬಲು ಹಿಂಪದ
ಹಕ್ಕಿಗಳ ಗಾನ ಆಲಿಸುತ್ತಾ
ಹಾಗೇ ಮೈ ಮರೆಯುವಾಸೆ
ಬಳುಕುತ್ತಾ ಓಡುವ
ನದಿಯ ಜೋತೆ ಓಡಾಡುವಾಸೆ
ಹಚ್ಚ ಹಸಿರಿನ ವನಸಿರಿಯ
ಕಣ್ಣು ತುಂಬಿಕೊಳ್ಳುವಾಸೆ
ಗರಿ ಬಿಚ್ಚಿ ಕುಣಿಯುವ
ನವಿಲಿನ ಜೋತೆ ಹೆಜ್ಜೆ ಹಾಕುವಾಸೆ
ಖುಷಿ ಮಂದಹಾಸದ
ತೊಟ್ಟಿಲು ಪ್ರಕೃತಿ ವನಸಿರಿಯಲ್ಲಿ
ಬಿದ್ದು ಒದ್ದಾಡುವಾಸೆ

ಪ್ರಕೃತಿ ರಕ್ಷಿಸಿದರೆ ನಾಡು ಸುರಕ್ಷಿತ

- ರಾಜು ಹಾಸನ

22 Sep 2020, 08:00 pm

ಕನಸು

ಒಮ್ಮೆ ಬಂದರೆ ಸಿಗಲಾರದ ಮರೀಚಿಕೆ
ಕ್ಷಣ ಕ್ಷಣ ಹುಟ್ಟಿಸುವ ನಿರೀಕ್ಷೆಗಳು
ನೀ ಬಿಟ್ಟು ಹೋದರು ಬೆನ್ನು ಬಿಡದ ಮಾಯೆ
ನೀನೆಂಬ ಕುತೂಹಲಕ್ಕೆ ತೆರೆ ಎಲ್ಲಿದೆ
ನಿದ್ದೆಯಲ್ಲಿ ಜಾರಿದಾಗ ಬರುವು ಮುನ್ನ ಹೇಳಿ ಬರಬಾರದೆ ಓ ನನ್ನ ಕನಸೇ !!

- ಎ ಜಿ ಶರಣ್

22 Sep 2020, 06:21 pm

ಹಾನಿಕಾರಕ

ಬಿಟ್ಟೊದಳ ನೆನೆದು
ಬಿಟ್ಟುಕೊಂಡೆ ಕ್ವಾಟ್ರೂ
ಕುಡ್ಕೊಂಡೆ ನೈಂಟಿ
ಬಿಟ್ಟುಕೊಳ್ಳದಿದ್ದರೇ
ಬರುವುದು ಅವಳ ನೆನಪು
ಕೋಲ್ಲುವುದು ಕನಸಾಗಿ
ಕಚ್ಚುವುದು ತಿಗಣೆಯಾಗಿ
ಬಿಟ್ಟುಕೊಂಡ ಕ್ವಾಟ್ರೂ
ಸುಡುವುದು ಬೆಂಕಿಯಾಗಿ
ತಿರುಗಿಸುವುದು ಹುಚ್ಚನಾಗಿ
ಬಿಟ್ಟು ಹೋದವಳ ಪ್ರೀತಿ
ಕಿತ್ತುಕೊಂಡಿತ್ತು ಹೃದಯ
ಬಿಟ್ಟುಕೊಂಡ ಕ್ವಾಟ್ರೂ
ಕಿತ್ತುಕೊಂಡಿತ್ತು ಪ್ರಾಣ
ಬಿಟ್ಟೊದವಳ ಪ್ರೀತಿ
ಬಿಟ್ಟುಕೊಂಡ ಕ್ವಾಟ್ರೂ
ಜೀವನಕ್ಕೆ ಹಾನಿಕಾರಕ

- ರಾಜು ಹಾಸನ

22 Sep 2020, 08:56 am

ಮಂಕುತಿಮ್ಮ

ಅಪ್ಪ ಅಮ್ಮನ ದರ್ಶನವೇ
ದೇವರ ದಿವ್ಯದರ್ಶನ
ಅಪ್ಪ ಅಮ್ಮನ ಆಶೀರ್ವಾದವೇ
ದೇವರ ಆಶೀರ್ವಾದ
ಅಪ್ಪ ಅಮ್ಮನ
ಸೇವಯೇ ದೇವರ ಸೇವೆ
ತಿಳಿಯೋ ಮಂಕುತಿಮ್ಮ

- ರಾಜು ಹಾಸನ

22 Sep 2020, 07:36 am

ನನ್ನ ದೇವರು

ಮರೆಯೋದುಂಟೆ ಮರೆತು
ಬದುಕೊದುಂಟೆ ಕೈ ತುತ್ತು ತಿನ್ನಿಸಿ
ಲಾಲನೆ ಪಾಲನೆ ಮಾಡಿ
ತನ್ನ ಕಷ್ಟಾ ಸುಖವ ಪಕ್ಕಕ್ಕಿಟ್ಟು
ಸಾಕಿದ ತಾಯಿಯ ತಾಯಿ ಪ್ರೀತಿಯ

ನಾ ರಾಜನಲ್ಲದಿದ್ದರೂ
ರಾಜ ಮಹಾರಾಜನಂತೆ ಸಾಕಿದಳು
ಅವಳಿಗೆ ನಾನೇ ರಾಜ ಮಹಾರಾಜ
ಅವಳೆ ನನಗೆ ದೇವತೆ ಜಗದ್ಮಾತೆ
ಅವಳ ತ್ಯಾಗ ಪ್ರೀತಿಯ ಮುಂದೆ
ನಾ ಸಣ್ಣವ ನಾ ಚಿಕ್ಕವ

ಕೈ ತುತ್ತು ತಿನ್ನಿಸಿ ಸಾಕಿ ಸಲಹಿದ
ತಾಯಿಯ ಸೇವೆ ಮಾಡದ ಕೈಗಳು
ಇದ್ದರೇನು ಹೋದರೇನು
ತಾಯಿಯ ಸುಖ ದುಃಖ ಆಲಿಸಿದ
ಕಿವಿಗಳು ಕೇಳಿಸಿದರೇನು ಕೀವುಡಾದರೇನು

ಕಟ್ಟಿಕೊಂಡವಳ ಮುಂದೆ
ಕೋಲ್ಲದಿರಿ ಚುಚ್ಚು ಮಾತುಗಳಿಂದ
ಕಾಲ ಕಸವಾಗಿ ಕಾಣದಿರಿ
ಕೊರಗುವುದು ತಾಯಿ ಜೀವಾ
ಗೋಳಾಡುವುದು ತಾಯಿ ಹೃದಯ
ಮರೆಯದಿರಿ ಅವಳಿಂದಲೇ ನಮ್ಮ ಜನ್ಮ
ಅವಳೆ ನನ್ನ ಜೀವಾ ಅವಳೆ ನನ್ನ ದೇವರು

- ರಾಜು ಹಾಸನ

21 Sep 2020, 11:50 pm

ಸಮಯದ ಸಮರ

ಅಂದೊಮ್ಮೆ ವಿಸ್ಮಯ... ಇಂದೆಲ್ಲ ಅಯೋಮಯ... ಎಲ್ಲವನ್ನು ಬದಲಾಯಿಸಿ....ಎಲ್ಲರನ್ನೂ ಮೂಕವಾಗಿಸಿದೆ....ಈ ಸಮಯ...

- Parvati VH

21 Sep 2020, 08:20 pm

ಕಲ್ಪನೆ

ನೀ ನನ್ನ ಒಪ್ಪಲು, ಮೆಲ್ಲನೆ ಪ್ರೀತಿ ತೋರಲು
ಎಂಥಹ ಸಿಹಿ ಕಲ್ಪನೆ, ಬರೀ ನಿನ್ನದೆ ಯೋಚನೆ .....

- Parvati VH

21 Sep 2020, 08:18 pm