Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬದುಕು

ಬದುಕು

ಭ್ರಮೆಯಲಿ ಬದುಕುವ ಬದುಕದು ಬಾಡುವ ಸುಮದಂತಲ್ಲವೇ ಬುವಿಯಲ್ಲಿ?
ಬಂಧನ ಬೇಡವು ಬೇಸರ ಬರದಿರೆ ಭಯವದು ಬರಬಾರದು ಬದುಕಿನಲಿ..

ಬಾಡದೆ ಇರಲಿ ಹೂವಿನ ಹಾಗೆ ಭವಿತವ್ಯದ ಭಂಡಾರ ಕನಸುಗಳು
ಭೋರ್ಗರೆಯುವ ಜಲಧಿಯ ತೆರದಿ ಬೊಬ್ಬಿರಿಯುತಲಿವೆ ಭಾವಗಳು!

ಬೇರಿನ ತುದಿಯದು ನೀರಾಹಾರವ ಹೀರುವ ಹಾಗಿದೆ ಜೀವನ ಕ್ಷಣವು
ಬೇಗೆಯು ನಿತ್ಯವೂ ಬೆಂಬಿಡದೆ ಕಾಡಿದೆ ಬಾಳಿಲಿ ಬೇಕದು ಸಂಯಮವು..

ಬೀಜವ ಹಾಕಿ ಗಿಡವನು ನೆಟ್ಟೊಡೆ ಹಣ್ಣನು ಸೇವಿಪರುಂಟೇನು ಜಗದಲಿ?
ಬೇರಿನ ಮೇಲೆ, ಕೆಳಗಡೆ ಕೂಡ, ಗೊಬ್ಬರ ನೀರನು ಹಾಕುವುದಲ್ಲದೆ ಪಾಲನೆ ಪೋಷಣೆ ಕಲಿ ರೈತನಲಿ!

ಬವಣೆಯು ಇರದೆ ಬದಲಾವಣೆ ಇರದು ಭವದ ಭಾಗ್ಯದ ಬಲೆಯಲ್ಲಿ
ಬೂರುಗ ಹೂವಿನ ಹಾಗೆಯೇ ಪರಿಮಳ ಸಮಾಜ ಸೇವೆಯ ಕೈಯಲ್ಲಿ..

ಬೊಗಳೆಯ ಬಿಡುತಲಿ ಬೇಡುವ ಜನರದು ಬಳಗವೇ ಇಹುದು ನಾಡಿನಲಿ
ಬೇಸರಗೊಳ್ಳದೆ ಪ್ರೀತಿಯ ಮನದಲಿ ಬಾಳಲು ಕಲಿ ನೀ ಬದುಕಿನಲಿ..
@ಪ್ರೇಮ್@
14.09.2020

- PremUdayKumar

15 Sep 2020, 11:13 pm

ಶಿಶುಗೀತೆ

ಶಿಶುಗೀತೆ

ವರ್ಣ ಮಾಲೆ

ಅರಸನ ಹಾಗೆ
ಆಟಕೆ ಹೋಗೋ
ಇಲಿಯನು ಕಂಡು
ಈಟಿಯ ತಾರೋ

ಉದ್ದದ ಈಟಿಯ
ಊರುತ ಬಾರೋ
ಋಷಿಯಂತೆ ಕುಳಿತು
ಎಲೆಗಳ ಮರೆಯಲಿ

ಏರು ತಗ್ಗಿನಲಿ
ಐದಾರು ದಿಕ್ಕಿನಲಿ
ಒಲವಲಿ ಬದುಕುತ
ಓಡಲು ಬಿಡದೆ

ಔಷಧ ಹಾಕಿ
ಅಂಗಳದಿ ಹುಡುಕಿ
ಅಃ ಇಲಿಯ ಹಿಡಿದೇ ಬಿಟ್ಟೆ!
@ಪ್ರೇಮ್@
10.09.2020

- PremUdayKumar

15 Sep 2020, 11:12 pm

ಗೆಳಯ

ನಗು ನಗುತಾ ಹೋದಳು
ಮರೆತು ಬಿಟ್ಟು ಹೋದಳು
ನೋಡಿ ಅಳೋದು ಯಾಕಲೇ

ಹೋದೊಳ್ ಹೋದೊಳ್ ಹೋಗಲಿ
ಬಂದೊಳ್ ಬಂದೊಳ್ ಬರಲ್ಲಿ
ಕುಡಿದು ಸಾಯೋದು ಯಾಕಲೇ

ಬಿಟ್ಟು ಹೋದೊಳ ನೆನೆದು
ಕುಡಿದು ಕುಣಿಯೋದು ಯಾಕಲೇ
ಕುಡಿದು ಗೋರಿಯಾಗಬೇಡಲೇ

- ರಾಜು ಹಾಸನ

15 Sep 2020, 07:01 pm

ಮುದ್ದಾದ ರಂಗು ಬಂದಿದೆ..

ನಿನ್ನ ಅಂಗೈಯ ತಾಕಿ ಮದರಂಗಿಗೂ, ಮುದ್ದಾದ ರಂಗು ಬಂದಿದೆ.
ನಿನ್ನ ಅಂಗಾಲ ಪಾದ ಪದ್ಮ ತಾಕಲೆಂದೇ ಈ ಧರಣಿ, ಧರಣಿ ಕುತ್ತಿದೆ.
ನೀನು ಅಂಗಳದಲ್ಲಿ , ತಿಂಗಳ ಬೆಳಕಿನಲಿ ಆಡುತ್ತಿದ್ದಾರೆ ಇಂಗೆ.
ಒಟ್ಟೊಟ್ಟಿಗೆ ಎರಡೆರಡು ಚಂದ್ರನ್ನ  ನೋಡದಂಗೆ ಅಗೋಯ್ತು ನಂಗೆ.
ನಿನ್ನ ಕಾಡುವ ಕಣ್ಣುಗಳು ಅವಳದು ಹರಳುಗಳು.
ನಿನ್ನ ತೂಗುವ ಉಬ್ಬುಗಳು ಕಮನಬಿಲ್ಲುಗಳು.
ನಿನಾಡುವ ಮಾತುಗಳು ಸಿಹಿ ಜೇನಿನ ಬಿಂಧುಗಳು.
ಕಣ್ಣಿನ ನೋಟಗಳು ತಲೆ ತಿರುಗಿಸೋ ರಾಟೆಗಳು.
ನಿನ್ನ ನೋಡಿ ಬಾಗುತೈತೆ ಅ  ಸೂರ್ಯಕಾಂತಿ.
ನಿನ್ನ ನೋಡುವ ಕ್ಷಣವೆಲ್ಲ, ನನಗೆ ಸಂಕ್ರಾಂತಿ.

- NaveenkumarK

15 Sep 2020, 10:37 am

ಆಸೆ

ಮರುಜನ್ಮ ಒಂದಿದ್ದರೆ
ಮತ್ತೆ ಹುಟ್ಟಿ ಬಾ ಹುಡುಗಿ
ನನಗಾಗಿ..
ಬತ್ತಿ ಹೋದ ಹೃದಯ ದಲ್ಲಿ
ಮತ್ತೆ ಪ್ರೀತಿಯ ಹನಿ
ಮಳೆಯಾಗಿ...

ಕೃಷ್ಣ ಬಿಲ್ಲಾಡಿ ಮೇಲ್ ಬೈಲು

- krishna Billadi melbailu

15 Sep 2020, 10:15 am

ಅನಿಸಿಕೆ

ಪ್ರೀತಿ ಮಾಡಿದರೆ
ಬದುಕು ಬಂಗಾರ
ಸ್ನೇಹ ಮಾಡಿದರೆ
ಬದುಕು ಬಲು ಸುಂದರ
ಮದ್ಯಪಾನ ಮಾಡಿದರೆ
ಆರಾಡಿ ಮೂರಾಡಿ ಗ್ಯಾರಂಟಿ

- ರಾಜು ಹಾಸನ

15 Sep 2020, 10:13 am

ಹೆಣ್ಣಿನು ಅಂದ್ರೆ ಬಗ್ಗೆ

- Nagana Gowda

15 Sep 2020, 01:20 am

ನನ್ನ ನಾ ಮರೆತೇ...

ಜೂಲಿಯ ಕಟ್ಟಿ ನಿನಗೆ, ಲಾಲಿಯ ಹಾಡಲೇನು.
ನೂರಾರು ಕಥೆಯ ಕಟ್ಟಿ, ನಿನ್ನ ನಾ ಕೊಂಡದಲೇನು.
ಕನಸ್ಸಿನ ಕೋಟೆಯಲ್ಲಿ, ನಿನ್ನ ನಾ ಮೆರಸಲೇನು.
ನಿನ್ನನ್ನು ಮೆರಸಿ ಮೇರಸಿ, ನನ್ನ ನಾ ಮರೆತೇ ನಾನು.
ಕಣ್ಣಿನ ಹಂಚ್ಚಿನಲೇ , ಚುಚ್ಚಿ ಚುಚ್ಚಿ ಕೊಲ್ಲುವೆ ನೀನು.
ಹೃದಯದ ಆಳಕ್ಕೆ ಇಳಿದು, ಪ್ರೀತಿ ಸಸಿಯ ನೆಟ್ಟೆ ನೀನು.
ನೀ ಕೊಟ್ಟಂತ ಮುತ್ತಾನೆಲ್ಲ ಬಚ್ಚಿಟ್ಟು ಕೊಂಡೆ ನಾನು.
ನಿನ್ನ ಈ ಮಾಡಿಲಿನಲೇ ಜೀವವ ಬಿಡಲೇ ನಾನು..

- NaveenkumarK

14 Sep 2020, 10:54 pm

ಎಚ್ಚರಿಕೆ

ಕುಡುಕ ಕುಡುಕ
ನಾ ಕುಡಿಯುವುದು
ಒಂದು ನೈಂಟಿ
ವಾಲಾಡುವುದು ಜಾಸ್ತಿ

ನೈಂಟಿ ಕುಡಿದರೆ
ಪಲ್ಟಿ ಹೋಡೆಯುವೆ
ಆದರೂ ಹೇಳುವೆ ಸತ್ಯ

ನೀ ಇಲ್ಲದಿದ್ದರೆ ಬರುವುದು
ಹಾಳೆ ಲವ್ವರ್ ನೆನಪು
ಹಾಗಾಗಿ ಬಿಟ್ಟುಕೋಳ್ಳುವೆ
ಒಂದೊಂದು ನೈಂಟಿ

ದಿನ ಕುಡಿಯುತ್ತಿದ್ದೆ
ಒಂದೊಂದು ನೈಂಟಿ
ನೈಂಟಿ ಹೋಗಿ ಕ್ವಾಟ್ರು ಬಂದು
ಚಟ್ಟವೆರಿಸಿತು ಸ್ಮಶಾನದ ಕಡೆಗೆ

ಸಮಸ್ಯೆಗಳು ಸಾವಿರ ಇದ್ದರೂ
ಇಂದು ಬಂದು ನಾಳೆ ಹೋಗುತ್ತೆ
ಯಾವುದಕ್ಕೂ ಅಂಜದೆ ಅಳುಕದೆ
ಧೈರ್ಯದಿಂದ ಎದುರಿಸಿ
‌. ದುಶ್ಚಟಗಳಿಗೆ ಬಲಿಯಾಗಬೇಡಿ

- ರಾಜು ಹಾಸನ

14 Sep 2020, 10:36 pm

ಅಮ್ಮ

ಸಿಹಿ ಮುತ್ತನ್ನ
ಜೊತೆಗೆ ಕೈ, ತುತ್ತನ್ನ...
ಪ್ರೀತಿ,ಮಮತೆ, ಮಾನವೀಯತೆ
ಧಾರೆ ಏರೆವ ದೇವತೆ..


ಕೃಷ್ಣ ಬಿಲ್ಲಾಡಿ ಮೇಲ್ ಬೈಲು

- krishna Billadi melbailu

14 Sep 2020, 01:18 pm