Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪಿತೃ ಪಕ್ಷ

ಇದ್ದಾಗ ಹೊಟ್ಟೆಗೆ ಊಟ
ಮೈ ತುಂಬಾ ಬಟ್ಟೆ ಕೊಡದೇ
ವರ್ಷಕ್ಕೊಮ್ಮೆ ಬರುವ
ಪಿತೃ ಪಕ್ಷಕ್ಕೆ ಗುಂಡು ತುಂಡು
ಬಟ್ಟೆ ಬರಿ ತಂದಿಟ್ಟು ಪೂಜಿಸಿದರೆ
ಸತ್ತವರು ಮತ್ತೆ ಎದ್ದು ಬರುವರೇ
ಬಂದು ತಿನ್ನುವರೇ ಗುಂಡು ತುಂಡು

ಗುಂಡು ತುಂಡು ತಿಂದು ತೆಗುತ್ತಾ
ಬಟ್ಟೆ ಬರಿ ತೊಟ್ಟು ಸಂಭ್ರಮಿಸುತ್ತಾ
ಬಂಧು ಬಾಂಧವರ ಕರೆದು
ಪಿತೃ ಪಕ್ಷವಾ ಮಾಡುವರು ಸತ್ತವರಿಗಾಗಿ
ಪಿತೃ ಪಕ್ಷ ಸತ್ತವರಿಗಾಗಿ
ಗುಂಡು ತುಂಡು ನಮ್ಮಗಾಗಿ
ಮೌನಾಚರಣೆ ಬದಲು
ಸಂಭ್ರಮಾಚರಣೆ ಮಾಡುವರಯ್ಯ

- ರಾಜು ಹಾಸನ

14 Sep 2020, 12:11 am

ಸೂಜಿ ಮಲ್ಲಿಗೆ

ಓ ನನ್ನ ನಲ್ಲೆ‌ ಓಡುವೇ ಎಲ್ಲಿಗೆ
ನೀ ನಿಲ್ಲೆ ಇಲ್ಲೇ ನಾ ಇರುವೇ ಇಲ್ಲೇ
ನಾಚುವೆ ಏಕೆ ನಾನೇ ನಿನ್ನ
ಪ್ರೀತಿಯ ನಲ್ಲ ಮಾತಿನ ಮಲ್ಲ
ನೀನೇ ನನ್ನ ಪ್ರೀತಿಯ ನಲ್ಲೆ ಮಾತಿನ ಮಲ್ಲಿ
ಬಾ ನನ್ನ ನವಿಲೇ ನೀ ಮೆಲ್ಲ ಮೆಲ್ಲಗೆ
ನೀನೇ ನನ್ನ ದುಂಡು ಮಲ್ಲಿಗೆ ಸೂಜಿ ಮಲ್ಲಿಗೆ

- ರಾಜು ಹಾಸನ

13 Sep 2020, 10:21 pm

ಒಂಟಿ ಹಕ್ಕಿಯ ಹಾಡು

ನಾ ಬರೆವ ಕವನವಿದು
ಬರಿಯ ಸಾಲುಗಳಲ್ಲ
ಅಂತರಾಳದ ನೋವಿದು ಗೆಳತಿ
ಇಂದು ನಿನ್ನೆಯದಲ್ಲ....

ಕಳೆದ ದಿನಗಳೆಲ್ಲಾ
ಬರಿಯ ನೆನಪುಗಳಲ್ಲ
ಸಿಹಿ-ಕಹಿಯ ಅನುಭವವದು
ಹುಡುಗಿ ನಾ ನಿನ್ನ ಮರೆತಿಲ್ಲ...

ಹಾರುತ್ತಿದ್ದ ಮನಸದು
ಹರೆಯದ ಕನಸದು
ಹುಚ್ಚು ಕುದುರೆಯಬೆನ್ನೇರಿಹೋದ
ಮರೆಯಲಾಗದ ಕ್ಷಣವದು...

ಎಲ್ಲಾ ನೆನಪಿದೆ ನನಗೆ
ನಿನ್ನೆ ಮೊನ್ನೆಯವರೆಗೆ
ಒಂಟಿ ಹಕ್ಕಿಯ ಬದುಕು
ಈ ಪ್ರೀತಿಯ ಗೂಡಿನೊಳಗೆ....

ಕೃಷ್ಣ ಬಿಲ್ಲಾಡಿ ಮೇಲ್ ಬೈಲು

- krishna Billadi melbailu

13 Sep 2020, 09:30 pm

ನುಡಿ ಮುತ್ತು

ತಾಯಿ ಸಾಕುವಳು
ತನ್ನ ಒಡಲು ಹೊತ್ತು
ತಂದೆ ಸಾಕುವನು
ಹೆಗಲ ಮೇಲೆ ಹೊತ್ತು
ನಾ ಪೂಜಿಸುವೇನು
ನಿಮ್ಮಿಬ್ಬರನ್ನು ಸಾದಾ ಕಾಲ
ನನ್ನೆದೆಯ ಗುಡಿಯಲ್ಲಿಟ್ಟು

- ರಾಜು ಹಾಸನ

13 Sep 2020, 07:51 pm

ಸುಪ್ರಭಾತ

ಕುಡಿದು ಬಂದಾಗ
ಬಂದರು ಶತೃಗಳು ರಣರಂಗಕ್ಕೆ
ಸೌಟು ಪೊರಕೆ ಹಿಡಿದು
ನೆಡೆಸಿದ್ದರು ಚರ್ಚಾ ಭಾಷಣ
ಭಾಗವಹಿಸಿದರು ಊರ ಜನ
ಸುರು ಮಾಡಿದರು ಮಂಗಳಾರತಿ
ಜಾಗರಣೆ ಮಾಡಿದರು ರಾತ್ರಿಯೆಲ್ಲಾ
ಬೆಳಗ್ಗೆದು ನೋಡಿದರೆ
ಮತ್ತೆ ಹಾಡಿತು ಕೋಗಿಲೆಯಂತೆ
ಮತ್ತೆ ಸುರುವಾಯಿತು ಸುಪ್ರಭಾತ

- ರಾಜು ಹಾಸನ

13 Sep 2020, 07:13 pm

ಜ್ಞಾನೋದಯ

ತಲೆ ಕೆಡಿಸಿಕೊಂಡು
ಯೋಚಿಸುತ್ತಾ ಕುಡಿದೆ
ಒಂದು ಬಾಟಲ್ ಎಣ್ಣೆ
ಹುಟ್ಟು ಸಾವು ಏಕೆಯೆಂದು

ಎಷ್ಟೇ ಕುಡಿದು ಯೋಚಿಸಿದರೂ
ಅರ್ಥವಾಗಲಿಲ್ಲ ಕೊನೆಯತನಕ
ಖಾಲಿಯಾಗಿದ್ದು ಮಾತ್ರ
ಎಣ್ಣೆ ಬಾಟಲ್ ಗಳು
ಒಂದರ ನಂತರ ಮತ್ತೊಂದರಂತೆ

ಆಗ ಅರ್ಥವಾಯಿತು
ಒಂದು ಖಾಲಿಯಾದರೆ
ಮತ್ತೊಂದು ಬರುವುದು
ಹುಟ್ಟು ಸಾವು ಹೀಗೆ ಎಂದು
ಆದರೂ ತಿಳಿಯಾದು
ಹುಟ್ಟು ಸಾವಿನ ಅಂತರ

- ರಾಜು ಹಾಸನ

13 Sep 2020, 06:57 pm

ಕನಸು....❤️

ತುಂಬಾ ಕನಸನ್ನು ಒತ್ತು
ನಿನ್ನ ಜೀವನದ ಸಂಗತಿಯಾಗಿ ಬರುವೆ
ತುಂಬಾ ಆಸೆ ಇದೆ ,
ಮದುವೆಯಂಬ ಮಿಲನದಲ್ಲಿ...
ನಿನ್ನೆದುರು ನಿಂತು ನಿನ್ನ ಕೈ ಇಂದ
ನನ್ನ ಹಣೆಗೆ ಅರಿಶಿನ ಕುಂಕುಮವನ್ನು ಇಡಿಸ್ಕೊಳಲ್ಲು...
ಆ ನಿನ್ನ ಕೈ ಇಂದ
ತಾಳಿ ಕಟ್ಟಿಸಿಕೊಳಲ್ಲು...
ನೀ ಮುಂದೆ, ನಾ ನಿನ್ನ ಇಂದೆ
ಬರುತ ಆ ಸಪ್ತಪದಿಯನು ತುಳಿಯಲು
ಮತ್ತೆ ಕಾಣದ ಆ
ಅರುಂಧತಿ ನಕ್ಷತ್ರವನು ನೋಡಲು......❤️
.....

- Bhavyashree K.G1

13 Sep 2020, 07:08 am

ಸೋಲು - ಗೆಲುವು

ಗೆಲುವೆಂಬುದೊಂದು ತುಂಬಾ ಸಿಹಿಯಾದ ಅನುಭವ
ಇದು ನಮ್ಮೊಡನೆ ಇದ್ದರೆ ಬೇಗ ಮರೆಯುವೆವು ನೋವ

ಸೋಲೆಂಬುದೊಂದು ನಿಜವಾಗಿ ಕಹಿಯಾದ ಅನುಭವ
ಇದು ಮಸ್ತಕವನು ಹೊಕ್ಕಿದರೆ ನಡುಗುವುದು ಜೀವ

ಸೋಲೆಂಬುದೆ ಗೆಲುವಿಗಾದರೆ ಮೆಟ್ಟಿಲು
ಗೆಲುವೇ ಮನಸ್ಸೆಂಬ ಮಗುವಿಗೆ ಆಗುವುದಂತೆ ನಗು ತುಂಬಿದ ತೊಟ್ಟಿಲು

- DevakumarBK Dev

12 Sep 2020, 06:05 pm

ದಿನಕ್ಕೊಂದು ಕವನ

ದಿನಕ್ಕೊಂದು ಕವನ
ಅದಕ್ಕೆ ನೀನೇ ಕಾರಣ....
ಪ್ರೀತಿಸುವೆ ನಿನ್ನನ್ನ...
ಮುಚ್ಚುವವರೆಗು ನನ್ನ ನಯನ....@©

- Bhavyashree K.G1

12 Sep 2020, 03:34 pm

ಜಡೆಕವನ

ನೋಟ

ನಗರವ ನೋಡಲು ಹೊರಟನು ಹಳ್ಳಿಯ ಗಮಾರ
ಗಮಾರಗೆ ತಿಳಿಯದು ನಗರದ ನೋಟ

ನೋಟವ ನೋಡುತ ದಿಕ್ಕೆಟ್ಟು ನಿಂತ
ನಿಂತನು ಸುತ್ತಲು ಓಡುವ ಗಾಡಿಯು

ಗಾಡಿಯ ಶಬ್ದದಿ ಕಿವಿ ಮುಚ್ಚಿಕೊಂಡನು
ಮುಚ್ಚಿಕೊಂಡನು ತನ್ನ ಮೂಗನೂ ಧೂಳಿಗೆ

ಧೂಳ ಹತ್ತಿ ಕುಳಿತಿದ್ದವು ಗಿಡಮರ ಎಲ್ಲವೂ
ಎಲ್ಲವೂ ಹೊಸದು ನೋಟವು ಸಾಲದು

ಸಾಲದು ಜೇಬಲಿ ಕುಳಿತಿಹ ದುಡ್ಡದು!
ದುಡ್ಡೆ ದೊಡ್ಡಪ್ಪ ನಗರದ ಜೀವನ

ಜೀವನ ಹಳ್ಳಿಯಲಿ ಬಲು ಸುಂದರ
ಸುಂದರ ಪರಿಸರ ಪರಿಶುದ್ಧ ಜಲವು

ಜಲಮಾಲಿನ್ಯವು ನಗರದ ಕೊಳೆ ಹೊಳೆಯು
ಹೊಳೆಯುತಲಿಹುದು ಕಟ್ಟಡದ ಬಣ್ಣದ ಬೆಳಕು

ಬೆಳಕು ಬೇಕೇ ಬದುಕಲಿ ನಗರಕೆ ನುಗ್ಗು
ನುಗ್ಗುತ ಕತ್ತೆಯ ತರದಲಿ ದುಡಿಯುತ

ದುಡಿಯುತ ದುಡ್ಡನು ತಾ ಕೂಡಿಡುತ
ಕೂಡಿಟ್ಟ ದುಡ್ಡಲಿ ತನ್ನೂರಿಗೆ ಬಂದು
ಬಂಧು ಬಳಗವ ಸೇರಿ ಸಂತಸದಿ ಜೀವಿಸು..
@ಪ್ರೇಮ್@
12.09.2020

- PremUdayKumar

12 Sep 2020, 02:11 pm