Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮಡಿ ಮೈಲಿಗೆ

ಸತ್ತ ವ್ಯಕ್ತಿಯ ಮುಟ್ಟಿದರೆ
ಮಡಿ ಮೈಲಿಗೆ ಎನ್ನುವ ಜನರಿಗೆ
ಸತ್ತ ಪ್ರಾಣಿಯ ಮಾಂಸವೆಂದು
ತಿನ್ನುವಾಗ ಮಡಿ ಮೈಲಿಗೆ
ಆಗುವುದಿಲ್ಲವೇ

ಸತ್ತವರ ಮುಟ್ಟಿದರೆ
ಮಡಿ ಮೈಲಿಗೆಯೆಂದು
ತಲೆ ಮೇಲೆ ತಣ್ಣೀರು
ಸುರಿದುಕೋಳ್ಳುವ ಜನರು
ಸತ್ತ ಪ್ರಾಣಿಯ ತಿಂದಾಗ
ಹೊಟ್ಟೆಗೆ ಬೆಂಕಿ ಸುರಿದುಕೋಳ್ಳುವರೇ

ಮಡಿ ಮೈಲಿಗೆಯೆಂದು
ದೇಹಕ್ಕೆ ಬಟ್ಟೆ ಸುತ್ತಿಕೊಂಡು
ತಲೆ ಮೇಲೆ ತಣ್ಣೀರು
ಸುರಿದುಕೊಂಡರೇನು ಬಂತು
ಮನಸ್ಸಿನಲ್ಲಿ ಒಳ್ಳೆಯ ಯೋಚನೆ
ಆಲೋಚನಗಳು ಇಲ್ಲದಿದ್ದ ಮೇಲೆ

- ರಾಜು ಹಾಸನ

20 Sep 2020, 12:52 am

ಆಸೆ

ಕೊನೆಯಿಲ್ಲದ ಈ ಕವನ
ಗುರಿತಲೂಪದ ಈ ಪಯಣ
ಪರಿಪರಿಯಲ್ಲು ಕೊಲ್ಲುತಿದೆ
ಎಲ್ಲಾ ಆಸೆ ನೆನಪುಗಳ ಜೀವನ.
J.G

- J.G Jyothi Jyothi

19 Sep 2020, 10:09 am

ಎಳ್ಳು ನೀರು

ದೇವರ ಭಾಷೆ
ಬ್ರಹ್ಮ ಲಿಪಿ ಸಂಸ್ಕೃತವಾದರೆ
ನಾವು ಆಡುವ ಭಾಷೆ
ಕನ್ನಡ ಕನ್ನಡ ಭಾಷೆ
ಹಾಗಾದರೆ ಹೇಂಗೆ ತಿಳಿಯುವುದು
ದೇವರಿಗೆ ನಮ್ಮ ಭಾಷೆ
ಅದಕ್ಕಾಗಿಯೇ ಇಟ್ಟುಕೊಂಡಿರಬಹುದೇ
ದೇವರು ದಲ್ಲಾಳಿ ಪೂಜಾರಿನ್ನ

ಸಂಸ್ಕೃತವೇ ತಿಳಿಯಾದ ನಮಗೆ
ಸಂಸ್ಕೃತ ಭಾಷೆಯಲ್ಲಿ
ಪೂಜಾರಿ ಮಂತ್ರ ಪಠಿಸಿ
ದೇವರಿಗೆ ಪೂಜೆ ಸಲ್ಲಿಸಿದರೆ
ಯಾರ ಒಳಿತಿಗಾಗಿ
ಯಾವ ಮಂತ್ರ ಪಠಿಸಿದನೆಂದು
ಹೇಂಗೆ ತಿಳಿಯಲು ಸಾಧ್ಯ
ಹೇಂಗೆ ನಂಬಲು ಸಾಧ್ಯ

ದೇವರ ಪೂಜೆಗೆ ಕೊಡುವೆವು
ಹಣ್ಣು ಕಾಯಿ
ತಿಂದು ತೇಗುವುದು ಪೂಜಾರಿ
ಭಕ್ತರ ಕಿವಿಗೆ ಇಡುವರು
ಚೆಂಡು ಹೂವು
ಭಕ್ತರ ಬಾಯಿಗೆ ಬಿಡುವರು
ಎಳ್ಳು ನೀರು

ದೇವಸ್ಥಾನಕ್ಕೆ ಹೋದರೆ
ತುಂಬಿ ತುಳುಕುವುದು
ಪೂಜಾರಿ ಜೋಳಿಗೆ
ಖಾಲಿಯಾಗುವುದು
ಭಕ್ತರ ತಲೆ ಮತ್ತು ಜೇಬು

- ರಾಜು ಹಾಸನ

19 Sep 2020, 12:13 am

ಎಲ್ಲಿದೆ ನ್ಯಾಯ

ನೆರಳಲ್ಲಿ ಕುಳಿತು
ಅರ್ಥವಾಗದ ಮಂತ್ರ ಪಠಿಸುವ
ಪೂಜಾರಿಗೆ ಕೊಡುವರು ಸಂಬಳ ಗಿಂಬಳ

ಬಿಸಿಲು ಬೆಂಕಿ ಎನ್ನದೆ
ಕೆಚ್ಚೆದೆಯಿಂದ ದುಡಿಯುವ
ರೈತನಿಗಿಲ್ಲ ಸಂಬಳ ಗಿಂಬಳ

- ರಾಜು ಹಾಸನ

18 Sep 2020, 07:49 pm

ದುಷ್ಟರ ಬೇಟೆ

ಕಾಡಿನ ದುಷ್ಟ ಪ್ರಾಣಿಗಳು
ಆಟಹಾಸ ಮೆರೆಯುವುದು
ಸಾಧು ಪ್ರಾಣಿಗಳ ಪ್ರಾಣದೊಂದಿಗೆ
ನಾಡಿನ ದುಷ್ಟರು
ಆಟಹಾಸ ಮೆರೆಯುವುದು
ಮುಗ್ಧ ಜನರ ಜೀವನದೊಂದಿಗೆ
ದುಷ್ಟ ಪ್ರಾಣಿಗಳ
ಬೇಟೆಗೆ ಬರುವನು ಬೇಟೆಗಾರ
ದುಷ್ಟರ ಸಂಹಾರಕ್ಕೆ ಬರುವನು
ಮಹಾನಾಯಕ ಜೈ ಭೀಮ್

- ರಾಜು ಹಾಸನ

18 Sep 2020, 02:05 pm

ಅನ್ನವೇ ದೇವರು

ತಿನ್ನಲು ಇರುವವರು
ಅನ್ನ ನೀರು ತಿನ್ನದೆ
ಉಪವಾಸ ಮಾಡುವರು
ದೇವರಿಗಾಗಿ

ತಿನ್ನಲು ಇಲ್ಲದವರು
ಅಲೆದಾಡುವರು
ಒಂದೋತ್ತಿನ ಅನ್ನಕ್ಕಾಗಿ
ಪರದಾಡುವರು
ಹೊಟ್ಟೆಪಾಡಿಗಾಗಿ

ಮೂಢರು ಪೂಜಿಸುವರು
ಬೀದಿಯ ಕಲ್ಲೆ ದೇವರೆಂದು
ಹಸಿದವರು ಪೂಜಿಸುವರು
ಅನ್ನವೇ ದೇವರೆಂದು

- ರಾಜು ಹಾಸನ

18 Sep 2020, 12:55 pm

ದುರಂತ

ಭೂಮಿಗೆ ಇಲ್ಲದ ಅಹಂಕಾರ
ಗಾಳಿಗೆ ಇಲ್ಲದ ಅಂತರ
ನೀರಿಗೆ ಇಲ್ಲದ ವ್ಯತ್ಯಾಸ
ಅನ್ನಕ್ಕೆ ಇಲ್ಲದ ತಾರತಮ್ಯ
ಜನರ ಜನರ ನಡುವೆ
ಇರುವುದು ಅಂತರ ನಿರಂತ
ದುರಂತವೇ ಸರಿ

- ರಾಜು ಹಾಸನ

18 Sep 2020, 11:17 am

ಛಲವಾದಿ

ದುಡಿಯುವ
ಮನಸ್ಸಿಗೆ ವಯಸ್ಸಾದರೂ
ಬದುಕುವ ಛಲವಿದ್ದರೆ
ದುಡಿದು ಸೇರುವುದು
ಜೀವನದ ಧಡ
ಬದುಕುವ ಛಲವಿಲ್ಲದಿದ್ದರೆ
ದುಡಿಯದೇ ಸೇರುವುದು
ಮಸಣದ ಕಾಡಲು

- ರಾಜು ಹಾಸನ

18 Sep 2020, 01:20 am

ದೇವರು ಯಾರು

ದೇವರಿಂದ ನಾವಲ್ಲ
ನಮ್ಮಿಂದ ದೇವರು
ನಮ್ಮ ಸೃಷ್ಟಿಕರ್ತ ದೇವರಲ್ಲ
ದೇವರ ಸೃಷ್ಟಿಕರ್ತರು ನಾವು
ದೇವರು ನಮ್ಮನ್ನು ರಕ್ಷಿಸುವುದಿಲ್ಲ
ನಾವೇ ದೇವರನ್ನು ರಕ್ಷಿಸುವುದು

ಜನರಿಂದ ಹುಟ್ಟಿ
ಜನರಿಂದಲೇ ರಕ್ಷಣೆ ಪಡೆಯುವ
ಹಾದಿ ಬೀದಿಯಲ್ಲಿ ಬಿದ್ದಿರುವ
ಕಲ್ಲಿನ ಚೂರು ದೇವರಾಗುವುದೇ

ದೇವರಿಗಾಗಿ
ಹಬ್ಬ ಹರಿದಿನವೆಂದು
ಅನ್ನ ನೀರು ತಿನ್ನದೆ
ಉಪವಾಸ ಮಾಡುವ ದಡ್ಡ ಜನ
ಒಂದು ಕ್ಷಣ ಗಾಳಿ ಸೇವಿಸದೇ
ಮಾಡಲಿ ಉಪವಾಸ
ಮುರ್ಚೆ ಬಂದು ಬಿದ್ದಾರೆ
ಜನ ವೈದ್ಯರು ಬರುವರೆ ವಿನಃ
ಹಾದಿ ಬೀದಿಯಲ್ಲಿ ಬಿದ್ದರುವ
ಕಲ್ಲು ದೇವರಲ್ಲ

- ರಾಜು ಹಾಸನ

18 Sep 2020, 12:45 am

ನೀಡು ನೀ ಅಂಕಿತ

ತುಟಿಗೆ ತುಟಿಯ ಸೇರಿಸಿ
ಚುಂಬನದ ರಸ ಸವಿಯುತ

ಎರಡೂ ದೇಹ ಒಂದೆನಿಸುವಂತೆ
ಸುಖದ ಶಾಖದಿ ಬೇಯುತ

ಹಿಂದೆಂದೂ ಮಾಡದ ಅಂಗ ಚೇಷ್ಟೆಯ
ಒಮ್ಮೆ ಇಂದು ಮಾಡುತ

ನಾನು ನೀನು ಬೇರೆ ಎನುವ
ಭಾವನೆಯನೇ ಮರೆಯುತ

ಒಮ್ಮೆ ಮೌನದಿ ಮಾತನಾಡುವ
ನೀಡು ನೀನು ಅಂಕಿತ

- DevakumarBK Dev

17 Sep 2020, 10:52 pm