Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಜಾಗೃತಿ

ಸಾರಾಯಿ ಕುಡಿದರೆ
ಕುಡುಕ ಎನ್ನುವ ಜನರು
ಸುರಪಾನ ಕುಡಿದು
ವಾಲಾಡಿ ತೇಲಾಡುವ
ದೇವಾ ಲೋಕದ
ದೊಡ್ಡ ಸಾರಾಯಿ ಕುಡುಕರನ್ನ
ದೇವರೆಂದು ಪೂಜಿಸುವರು

ಈಗ ಹೇಳಿ ನಿವು
ಯಾರನ್ನು ಬೈಯುವರೆಂದು
ಕುಡುಕರನ್ನು ಬೈದರೆ
ದೇವರನ್ನು ಬೈದಂತೆ
ಕುಡುಕರು ಸತ್ಯ ಹೇಳುವ
ಸತ್ಯವಂತರು
ಆದರೂ ಕುಡಿಬೇಡಿ ಸಾರಾಯಿ
ಆರೋಗ್ಯಕ್ಕೆ ಹಾನಿಕಾರಕ

- ರಾಜು ಹಾಸನ

10 Sep 2020, 09:04 am

ದೇವರ ಕೆರೆ

ಊರಲ್ಲಿ ತೊಟ್ಟು ನೀರಿಲ್ಲಾ
ಕೆರೆ ಬಾವಿ ಗಳೆಲ್ಲ ಬತ್ತೊಯ್ತು
ಎತ್ತ ನೋಡಿದರತ್ತ ಆಕ್ರಂದನ
ಸುತ್ತೆಲ್ಲ ಸುಡುಗಾಡು ಮೌನ //

ಗುಳೆ ಹೋಯ್ತು ಜನವೇಲ್ಲ
ಹೂಳೆತ್ತುವವರಾರೂ ಇಲ್ಲ
ಹಳೆ ಗುಡಿಸಲ ಒಳಗೆಲ್ಲಾ
ಹಸುಳೆಗಳ ಆಹ್ಹಾಕಾರ //

ಊರ ಕಲ್ಲಪ್ಪ ಸಾಹುಕಾರ
ಕಲ್ಲುಗಳನ್ನೆಲ್ಲಿಂದ ತರಲೆಂದ
ಕೆರೆ ಬಾವಿ ಗಳ ಕಟ್ಟಿಸಲು
ತಲೆ ಕೂದಲೆಲ್ಲ ಕೆರೆದುಕೊಂಡು //

ಊರಾಗಿರೋ ವೆಂಕಟೇಶ
ಉರ್ಹೊರಗಿರೋ ಹನಮಂತ
ಎಲ್ಲಾ ದೇವರ ಕಲ್ಲು ಕಿತ್ತು ತಂದ
ಅಂದ ಚೆಂದದ ಕೆರಗೆ ಮೂರ್ತವಿಟ್ಟ //

ದೇವರ ಕೇರೆಯಂದು ಅದಕ್ಕೆ
ನಾಮಕರಣ ಮಾಡಿ ಬಿಟ್ಟಾ
ದೇವರ ಮನೆಗಳನ್ನೇಲ್ಲ ಒಡೆದು
ದೇವರ ಕೆರೆಯೊಂದು ಕಟ್ಟಿಬಿಟ್ಟ //

ದೇವರ ದು ಎಂತಾ ಪಾಪ
ಅನ್ಯರಿಗೆ ಕಲ್ಲು ಕೊಟ್ಟು
ಅಂದಿನಿಂದ ಇಂದಿನ ತನಕ
ಬಿಸಿಲಲ್ಲಿ ಮಲಗಿ ಬಿಟ್ಟಾ //

.. ಕಲ್ಮೇಶ ಬಡಿಗೇರ
9743539657
..,..ಬಾದಾಮಿ......

- Kalmesh Badiger

09 Sep 2020, 10:23 am

ಬರ

ಇದು ಅಂತಿಂತ ಬರವಲ್ಲಾ
ಹಿಂದೆಂದೂ ಕಂಡಿಲ್ಲಾ
ಮುಂದೆಂದೂ ಕಾಣಲ್ಲ
ಈ ಧರೆಯ ಮೇಲೊಂದು ಬರ//

ಹದಿಮೂರನೇ ಶತಮಾನದ
ದುರ್ಗೆಯ ಬರವಲ್ಲಾ
ಹದಿನೇಳನೆಯ ಶತಮಾನದ
ಡೋಗಿಯ ಬರವಲ್ಲಾ //

ಸಜ್ಜೆಯ ಬರವಲ್ಲವೋ
ರಾಗಿಯ ಬರವಲ್ಲವೋ
ಸಾಲು ಮರಗಳ ಕಡಿದು
ಮಳೆ ಬಾರದ ಬರವಲ್ಲ//

ಕೋರೋಣ ದಿಂದಾಗಿ
ಇದು ಜಾಗತಿಕ ಹಣಕಾಸು
ಕುಸಿದ ಬರವಣ್ಣಾ
ನೀವಿದನು ಅರಿಯರಣ್ಣ //

ಉದ್ಯೋಗ ಕಳೆದ ಬರ
ಅನ್ನವ ಕಿತ್ಕೊಂಡ ಬರ
ಉದ್ದಿಮೆ ಮುಚ್ಚಿದ ಬರ
ಬಣ್ಣ ಬಯಲಾದ ಬರ//

ಕಲ್ಮೇಶ ಬಡಿಗೇರ
9743539657
......ಬಾದಾಮಿ........

- Kalmesh Badiger

09 Sep 2020, 09:22 am

ಊಟ

ಬದಲಾಯ್ತು ಜಗವೆಲ್ಲಾ
ಮರುಳ ಆಯ್ತು ಜಗವೆಲ್ಲಾ
ಮೊದಲಿದ್ದ ಅಡುಗೆಮನೆ
ಇನ್ನೇಲ್ಲಿ ಕಾಣುವುದು //

ಸಜ್ಜೆ ಜೋಳದ ರೊಟ್ಟಿ
ಕುಟ್ಟಿ ಮಾಡಿದ ಹುಗ್ಗಿ
ಕರಿದ ಕರಿಗಡಬು ಹೋಳಿಗೆ
ಇನ್ನೇಲ್ಲಿ ದೊರೆಯುವುದು //

ನಾಜೂಕದ ಲೋಕದಲಿ
ನಾಸ್ಟಾ ಎಂಬುದೇ ಊಟ
ನಾಲ್ಕು ತುತ್ತಿಂದರೆ ಆಯ್ತು
ಮುಂದೇನು ಮಾಡುವುದು //

ರಾಗಿ ಮುದ್ದೆ ಯು ಇಲ್ಲಾ
ಗಸ ಗಸೆ ಪಾಯಸ ವಿಲ್ಲ
ಮಣೆಮೇಲೆ ಕುತ್ಗೊಂಡು
ಊಟ ಮಾಡಿದ ಕಾಣೆ //

ಇಲ್ಲಿರುವುದು ಒಂದೇ
ಹಲ್ಲಿರದವರು ತಿನ್ನುವ
ಅಣ್ಣದಲಿ ಮಾಡಿರುವ
ಬಣ್ಣ ಬಣ್ಣದ ಊಟ //

ಕಲ್ಮೇಶ ಬಡಿಗೇರ
9743539657
....ಬಾದಾಮಿ.......

- Kalmesh Badiger

09 Sep 2020, 09:06 am

ನನ್ನ ಬಸ್ಸು

ಅಮ್ಮಾ ಅಮ್ಮಾ ನೊಡಬಾರಮ್ಮ
ನಮ್ಮೂರಿಗೆ ಬಸ್ಸು ಬಂದೈತಮ್ಮ
ಗುಡಿಸಲ ಊರಿಗೆ ಡುರಕಿಯ
ಹೊಡೆಯುತ ಬಂದು ನಿಂತೈತಮ್ಮಾ //

ಕಾಕಿಯ ಅಂಗಿ ಕೈಯಲಿ ಟಿಕೆಟ್
ಹಿಡಿದು ಕೂಗುತ ಲಿಹನಮ್ಮಾ
ಚರ್ಮದ ಬ್ಯಾಗಲಿ ಚಿಲ್ಲರೆ ಹಾಕುವ
ಬಸ್ ಕಂಡಕ್ಟರ್ ಇವನಮ್ಮ //

ಚಕ್ರವು ಮುರಿದಿಹ ಅಜ್ಜನ
ಸೈಕಲ್ ನನಗೆ ಬೇಡವಮ್ಮ
ಶಾಲೆಗೆ ಹೋಗಲು ಬರಲು
ನನಗೆ ಈ ಬಸ್ಸೇ ಸಾಕಮ್ಮ //

ರಾಜ್ಯ ಸಾರಿಗೆ ಬಸ್ಸಂತಂದ್ರೆ
ನಮಗೆ ತುಂಬಾ ಇಷ್ಟವಮ್ಮ
ಗುಡಿಸಿಲಿನಲ್ಲಿ ಅರಳುವ
ಗುಲಾಬಿಗೆ ನೆರಳನಿಯುವುದಮ್ಮ //

ಕಲ್ಮೇಶ ಬಡಿಗೇರ
9743539657
.....ಬಾದಾಮಿ....

- Kalmesh Badiger

09 Sep 2020, 08:50 am

ನೀ ಎಲ್ಲಿರುವೆ

ಮಧುರ ಪ್ರೀತಿಯ ತೊರೆದು
ಮರೆಯಲ್ಲಿ ಇರುವೆ ನಿಹ್ನೇಗೆ
ಮೃಧು ಮಾತಿನ ಸಂದೇಶ
ನೀಡದೆ ನೀ ಎಲ್ಲಿರುವೆ //

ಪ್ರೀತಿಯ ಅಮೃತ ನೀಡಿದೆ
ಪ್ರೇಮದ ಪಲ್ಲವಿ ನುಡಿಸಿದೆ
ಪ್ರಣಯ ರಾಗವ ಹಾಡಿ
ಹಾರಿ ಹೋಗಿ ನೀ ಎಲ್ಲಿರುವೆ //

ಹಸಿರು ಕಾನನ ವೆನಗೆ
ಮುಸುಕು ಹಾಕಿದ ಮಾಯೆ
ನುಸುಳಿ ಹೋದರು ಒಳಗೆ
ಬರೀ ಮೊಸಳೆ ಕಣ್ಣೀರು //

ಸರಿಯಲಾರದ ಹೊತ್ತು
ಸುರಿಸ ದಾಗಿದೆ ಮುತ್ತು
ತನುವಿನೊಳಗಿನ ತವಕ
ತೆಯುತ್ತೀರುವುದು ಮನವ //

ಅಂದನ ಬಾಳಿನೊಳು
ಆನಂದದ ಅಲೆ ಬಂದಂತೆ
ಬಂದು ಬಿಡು ನನ್ನೇದುರೆಂದು
ಕೊರಗುತಲಿರುವೆ ನೀ ಎಲ್ಲಿರುವೆ //

ಕಲ್ಮೇಶ ಬಡಿಗೇರ
9743539657
.....ಬಾದಾಮಿ.......

- Kalmesh Badiger

09 Sep 2020, 08:34 am

ಕವಿತೆ

ಕವಿತೆ ಒಂದು ಬರೆದೆ ನಾನು
ನಿನ್ನ ಚೆಲುವ ನಗುವಿಗೆ
ಕತೆಯ ಒಂದು ಬರೆದೆ ನೀನು
ನನ್ನ ಮಧುರ ಬದುಕಿಗೆ //

ಮೊದಲ ಪ್ರೇಮದ ಪತ್ರ
ಮೊದಲ ಪ್ರೀತಿಯ ಚಿತ್ರ
ಅದಲು ಬದಲು ಆಗಲಿಲ್ಲ
ತೊದಲು ಮಾತು ನುಡಿಯಲಿಲ್ಲ //

ವಲಿದು ಬಂದು ನಿಲ್ಲಲಿಲ್ಲ
ಮನದಿ ಬಂದು ಇಣುಕಲಿಲ್ಲ
ಒಲವಿನಿಂದ ನಲಿಯಲಿಲ್ಲ
ಬಿಡುವು ನುಡಿಯಲಿಲ್ಲ //

ಪ್ರಣಯ ರಾಗ ಹಾಡಲಿಲ್ಲ
ನಯನ ದಿಂದ ಸೆಳೆಯಲಿಲ್ಲ
ಆದರೂ ಮನದಾಳದಲ್ಲಿ
ಮಧುರ ವಾಗಿ ಮೂಡಲಿಲ್ಲ //

ಎನಗೆ ನೀನು ಕವಿತೆಯಾದೆ
ನಿನಗೆ ನಾನು ಕಥೆಯೇ ಆದೆ
ಕವಿತೆ ಕಥೆಯ ಮಿಲನ ನೆನೆದು
ಮನದಿ ನೆನೆದು ಕೊರಗಿದೆ //

ಕಲ್ಮೇಶ ಬಡಿಗೇರ
9743539657
.......ಬಾದಾಮಿ......

- Kalmesh Badiger

09 Sep 2020, 08:21 am

ಸುಪ್ರಭಾತ

ಕುಡಿದು ಬಂದಾಗ
ಬಂದರು ಶತೃಗಳು ರಣರಂಗಕ್ಕೆ
ಸೌಟು ಪೊರಕೆ ಹಿಡಿದು
ನೆಡೆಸಿದ್ದರು ಚರ್ಚಾ ಭಾಷಣ
ಭಾಗವಹಿಸಿದರು ಊರ ಜನ
ಸುರು ಮಾಡಿದರು ಮಂಗಳಾರತಿ
ಜಾಗರಣೆ ಮಾಡಿದರು ರಾತ್ರಿಯೆಲ್ಲಾ
ಬೆಳಗ್ಗೆದು ನೋಡಿದರೆ
ಮತ್ತೆ ಹಾಡಿತು ಕೋಗಿಲೆಯಂತೆ
ಮತ್ತೆ ಸುರುವಾಯಿತು ಸುಪ್ರಭಾತ

- ರಾಜು ಹಾಸನ

09 Sep 2020, 01:32 am

ಜ್ಞಾನೋದಯ

ತಲೆ ಕೆಡಿಸಿಕೊಂಡು
ಯೋಚಿಸುತ್ತಾ ಕುಡಿದೆ
ಒಂದು ಬಾಟಲ್ ಎಣ್ಣೆ
ಹುಟ್ಟು ಸಾವು ಏಕೆಯೆಂದು

ಎಷ್ಟೇ ಕುಡಿದು ಯೋಚಿಸಿದರೂ
ಅರ್ಥವಾಗಲಿಲ್ಲ ಕೊನೆಯತನಕ
ಖಾಲಿಯಾಗಿದ್ದು ಮಾತ್ರ
ಎಣ್ಣೆ ಬಾಟಲ್ ಗಳು
ಒಂದರ ನಂತರ ಮತ್ತೊಂದರಂತೆ

ಆಗ ಅರ್ಥವಾಯಿತು
ಒಂದು ಖಾಲಿಯಾದರೆ
ಮತ್ತೊಂದು ಬರುವುದು
ಹುಟ್ಟು ಸಾವು ಹೀಗೆ ಎಂದು
ಆದರೂ ತಿಳಿಯಾದು
ಹುಟ್ಟು ಸಾವಿನ ಅಂತರ

- ರಾಜು ಹಾಸನ

08 Sep 2020, 11:25 pm

ಸಾವಿನಲ್ಲೂ ಸಮಾನತೆ

ಕೆಲವರು ಹಸಿದು ಸಾಯುವರು
ಕೆಲವರು ತಿಂದರು ಸಾಯುವರು
ಇನ್ನೂ ಕೆಲವರು ತಾನು ತಿನ್ನದೆ
‌ ತಿನ್ನಲು ಬಿಡದೆ ಸಾಯುವರು
ಬಡವ ಶ್ರೀಮಂತನೆನದೇ
ಬಿಟ್ಟು ಹೋಗುವುದು ಜೀವಾ
ಗಾಳಿಯ ಅಲೆ ಅಲೆಯಾಗಿ
ಸಾಯುವುದು ದೇಹ
ಸೇರುವುದು ಮಣ್ಣಲ್ಲಿ ಮಣ್ಣಾಗಿ
ನೆನಪುಗಳು ಮಾತ್ರ ಅಮರ ಮಧುರ

- ರಾಜು ಹಾಸನ

08 Sep 2020, 12:40 am