Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರೇಮಿ ನೀನು ಹಣವು ಪ್ರೇಯಸಿ ನಿನಗೆ

ಹಣ ತುಂಬಿದ ಜೇಬು ಭೂಮಿ ನೋಡಲಾರರು,
ಹಣ ಇಲ್ಲದ ಜೇಬು ತಲೆ ಎತ್ತಲಾರದು.

ಸಕಲ ಕೆಲಸದ ಮೂಲ ಹಣ,
ಬಾವನೆಗಳನೆಲ್ಲ ಹಣಕ್ಕಾಗಿ ಇಟ್ವಿ ಪಣ.

ಜೀವನದುದ್ದಕ್ಕೂ ನಡೆಸಿದ ಹೋರಾಟದ ಪಯಣ,
ಅದರ ಸ್ವಾರಸ್ಯದ ರೂಪವೆಲ್ಲ ಹಣ.

ಕನಸ್ಸುಗಳು ಇದ್ವು ನೂರು ಮಣ,
ಹಣದ ಮುಂದೆ ಕನಸುಗಳು ಆದವು ಹೆಣ.

ಹಣ ಸಂಪಾದಿಸಿದರೆ ತರುಣ,
ಹಣ ಸುಖಿಯಾಗಿ ಇಡುವುದು ಬರುವವರೆಗೂ ಮರಣ
ಇದನ್ನು ಅರಿತು ಎಲ್ಲಾ ಬಾಳಿರಣ್ಣ

- Shivakumara S

04 Sep 2020, 10:49 am

ಓ ನನ್ನ ನಲ್ಲೆ

ಮುದ್ದಾದ ಗೊಂಬೆಗೆ
‌ ಮಿಂಚುಳ್ಳಿಯ ನಗುವೇ
ಅಂದ ಚಂದ
ಗಿಳಿ ಮೂಗಿಗೆ ಕೋಪವೇಕೆ
ಓ ನನ್ನ ನಲ್ಲೆ
ಕೋಪದಲ್ಲೂ ನೀ
ಬಂಗಾರದ ಜಿಂಕೆ
ಮುನಿಸು ಏಕೆ ಬಾ ನನ್ನ ನಲ್ಲೆ

- ರಾಜು ಹಾಸನ

03 Sep 2020, 11:52 pm

ಹಾಸ್ಯ ಚಟಾಕಿ

ಮದುವೆಗು ಮುನ್ನ
ಹುಡುಗರು ಸುತ್ತುವರು
ಬೀದಿ ಬೀದಿಗಳಲ್ಲಿ
ಬೀದಿ ಬಸವನಂತೆ
ಮದುವೆಯ ನಂತರ ಆಗುವರು
ಗುಡಿ ಬಸವನಂತೆ

ಸೇರಗು ಹಿಡಿದು
ಅಮ್ಮ ಅಮ್ಮ ಎಂದು
ಹಿಂದೆ ಹಿಂದೆ ಸುತ್ತಿದ್ದರು ಅಂದು
ಇಂದು ಸುತ್ತುವರು
ಚಿನ್ನ ಬಂಗಾರವೆಂದು
ಹೆಂಡತಿ ಹಿಂದೆ ಹಿಂದೆ

ತಾಯಿ ಹೇಳಿದ ಮಾತು
ತಲೆಗೆ ಹೋಗುವುದಿಲ್ಲ
ಹೆಂಡತಿ ಹೇಳಿದ ಮಾತು
ಚುಚ್ಚುವುದು ಮಾತ್ರ ಮನಸ್ಸಿಗೆ

- ರಾಜು ಹಾಸನ

03 Sep 2020, 07:24 pm

ಬೇಸಿಗೆ ರಜೆ

ಬೇಸಿಗೆ ರಜೆ ಬಂದಿತು ಅಂದ್ರೆ
ನಾವೆಲ್ಲಾ ಖುಷಿ ಯಾಗಿರ್ತಿವಿ
ಶಾಲೆಯ ಗುರುಗಳ ಕಾಟವ
ಕಳಕೊಂಡು ಹಾಯಾಗಿರತಿವಿ //

ಅಪ್ಪ ಅಮ್ಮನ ಕಟ ಕಟ ತಾಳದೆ
ಅಜ್ಜಿಯ ಊರಿಗೆ ಒಡ್ತೀವಿ
ಅಜ್ಜ ಅಜ್ಜಿಯರ ಜೊತೆಯಲಿ
ಆಟವ ಆಡುತಾ ಇರುತಿವಿ //

ಗೆಜ್ಜೆಯ ಕಟಗೊಂದು ಎತ್ತನು
ಹೂಡಿ ತೋಟಕೆ ಹೋಗ್ತೀವಿ
ಹೆಜ್ಜೆಯ ಎಣಿಸುತ್ತಾ ತೆಂಗಿನ
ಮರಗಳ ಸುತ್ತುತ ಲಿರತಿವಿ //

ಶೇಂಗಾ ಜೋಳವ ಸುಟಗೊಂದು
ಬೇಳಸಿಯ ತಿನ್ನುತ ಲಿರತಿವಿ
ಅನ್ನದ ಉಟವ ಮರೆತು
ಗಿಣ್ಣವ ಉನ್ನುತ ಲಿರತಿವಿ //

ಬೇಸಿಗೆ ಮುಗಿಯಲು ನಮ್ಮಯ
ಊರಿನ ಮನೆಗೆ ಬರುತೆವೇ
ಶಾಲೆಯ ಸೇರಿ ಪಾಠ ವ ಕೇಳುತ
ಓದುತ ಜಾಣರು ಅಗ್ತಿವಿ //

ಕಲ್ಮೇಶ ಬಡಿಗೇರ
9743539657
.........ಬಾದಾಮಿ......

- Kalmesh Badiger

03 Sep 2020, 05:53 pm

ಸಂದೇಶ

ಮನದ ಕೋಗಿಲೆ ಒಮ್ಮೆ
ಹಾಡಲೊಲ್ಲದು ಏಕೋ
ನಿನ್ನಿಂದಾ ದೂರಾಗಿ ಬೇರಾದರೇನೋ
ಕನಸಿಂದಾ ಜಾರಿ ಮರೆಯಾದರೆನೋ //

ಅದೋ ನೋಡು ಮೂಡಿಹನು
ಆ ಬಾಲ ಚಂದ್ರಮನು
ಹೊತ್ತು ತಂದಿಹನೇಳು ನಿನಗೆ
ಅವ ಸಪ್ತ ಸಂದೇಶಗಳ //

ಹಾಡು ಕೋಗಿಲೆ ನೀನು
ಮತ್ತೆ ಮೊದಲಿನ ಹಾಗೆ
ಜನ ಮೆಚ್ಚಿ ನಲಿವಂತೆ
ಮನನೆಚ್ಚಿ ಮಿಡಿವಂತೆ //

ಸರಿದ ಕನಸನು ನೆನೆದು
ಕೊರಗಿ ಸೊರಗುವೆ ಏಕೆ
ಕಲೆಯಿಂದಾ ಬಲೆ ಹೆಣೆದು
ಬೇಳಕಾಗು ಜಗಕೆಲ್ಲಾ //

ಹಾರಿ ಹೋದರೆ ನೀನು
ಯಾರು ಕೆಳುವರಿಲ್ಲ
ಹಾಡಿದರೆ ಏಳುವರು
ಬಿದ್ದು ಕೊಂಡವರೆಲ್ಲ //

ಕಲ್ಮೇಶ ಬಡಿಗೇರ
9743539657
.......ಬಾದಾಮಿ......

- Kalmesh Badiger

03 Sep 2020, 05:34 pm

ಬೆಳದಿಂಗಳು

ತಿಂಗಳಿನ ರಾತ್ರಿಯಲಿ
ಬಂಗಾರದ ಬೆಳದಿಂಗಳು
ಕೆಂದಾವರೆ ಕೆರೆಮೇಲೆ
ತಾ ಮೂಡಿ ಬಂದಾ //

ಅಂದ ಚೆಂದದ ತೇರ
ಹಂದರ ಹಾಕದೆ ತಂದು
ಮೊಗ್ಗುಗಳು ಮೆಲಾಯ್ಸಿ
ಮಲ್ಲಿಗೆ ರಾಶಿ ಸುರಿಸ್ಯಾನ //

ಬೆಟ್ಟ ಗುಡ್ಡಗಳ ಸೀಳಿ
ದಟ್ಟ ಅಡವಿಯ ಮೆಟ್ಟಿ
ಪುಟ್ಟಿಯರ ಮನಗೆದ್ದು
ಬೆಳ್ಳಿಹಾಂಗ ಹೊಳದಾಣ //

ಅಕ್ಕರೆಯ ಮಕ್ಕಳಿಗೆ
ಅಕ್ಷಯ ಪಾತ್ರೆಯ ಹಾಗೆ
ಚುಕ್ಕಿ ಜೊತೆಗೂಡಿ ಬಂದಾನ
ಚಿಣ್ಣರ ಚೆಂಡಾಗಿ ಬಲಿದಾನ //


ಕಲ್ಮೇಶ ಬಡಿಗೇರ
9743539657
...........ಬಾದಾಮಿ.........

- Kalmesh Badiger

03 Sep 2020, 05:23 pm

ಮಾಣಿಕ್ಯ

ಮಳೆ ಗಾಳಿಯೇನ್ನದೆ
‌ ಬಿಸಿಲು ಬೆಂಕಿ ಕಾಣದೆ
ಕೂಲಿ ನಾಲಿ ಮಾಡಿ
ತಾನು ಹಸಿದಿದ್ದರೂ
ತನ್ನವರ ಒಡಲು ತುಂಬಿಸಿದ
ಕಣ್ಣಿಗೆ ಕಾಣುವ ದೇವರು ತಾಯಿ
ಕಷ್ಟವೆಂದರೆ ಬರುವಳು ತಾಯಿ
ಕಣ್ಣೀರು ಒರೆಸುವಳು ಜನ್ಮ ದೇವತೆ
ತಾಯಿಗೆ ಇಲ್ಲದ ಸೂರು ನೀರು
ಹಾರ ತೂರಾಯಿ ಮೃಷ್ಟಾನ್ನ ಭೋಜನವಾ
ಕಲ್ಲು ದೇವರುಗಳ ಮುಂದಿಟ್ಟು
ಪೂಜಿಸಿದರೇನು ಫಲವಯ್ಯ
ಮಾತನಾಡಲು ಮಾತು ಬಾರದ
ಮನಸಿನ ಮಾತು ತಿಳಿಯಾದ
ಕಷ್ಟ ಸುಖ ನೋವು ನಲಿವಿನ ಅರಿವಿಲ್ಲದ
ಕಲ್ಲು ಕಂಬದ ಮುಂದೆ
ತಲೆ ಚಚ್ಚಿಕೊಂಡರೇನು ಫಲವಯ್ಯ

- ರಾಜು ಹಾಸನ

03 Sep 2020, 04:29 pm

ಕನ್ನಡ ಮಾತೆ

ಕನ್ನಡ ತಾಯಿಯ ಸೆರಗಿನ ನೆರಳಲಿ
ನಲಿಯುತ ತಾಯಿಗೆ ನಮಿಸೋಣ ll
ಪದಗಳ ಪದಕವ ತೊಡಿಸುತ ನಗಿಸುತ
ಕವನದ ಕುಸುಮವ ಮುಡಿಸೋಣ ll೧ll
ಚದುರಿದ ಉಡುಗೆಯ ನೆರಿಗೆಯ ಬಿಗಿದು
ಮಾತೆಯ ಮಾನವ ಕಾಯೋಣ ll
ಗುರುವರ ಬಲದಿ ಬರಹ ಸಿಂಧೂರವ
ಮಾತೆಯ ಚೆಲು ಹಣೆಗಿರಿಸೋಣ ll೧ll
ಕನ್ನಡ ತಾಯಿಯ ಹಿರಿಮೆಯ ಸಾರಿದ
ಹಿರಿಕವಿವರ್ಯರ ಸ್ಮರಿಸೋಣ ll
ಚತುರರು ನಾವು ತಾಯಿಯ ಕೀರ್ತಿಯ
ನಾಡಿನ ಎಲ್ಲೆಡೆ ಹರಡೋಣ ll೧ll
ಬೆವರಿನ ಪಸೆಯಲಿ ಅನ್ನವ ನೀಡುವ
ತ್ಯಾಗಿಯ ಕಾಯಕ ಅರಿಯೋಣ ll
ಉಸಿರನು ಕಾಯುವ ಯೋಧರ ಸಾಹಸ
ಪ್ರತಿ ಉಸಿರಲ್ಲೂ ಜಪಿಸೋಣ ll೧ll

- R.D

03 Sep 2020, 02:44 pm

ಸಂಬಂಧ

ಎಲ್ಲರೂ ಬಯಸುವರು
ಸಂಬಂಧ ಗಟ್ಟಿಯಾಗಿರಬೇಕೆಂದು..
ಆದರೆ‌ ನಾಟಕದ‌ ಬಲೆಯಲ್ಲಿ ಬಿದ್ದು ಬಿಟ್ಟರೇನೋ?
ಬಂಧ ನಿಂತಿರುವುದು
ಸಂ-ಪೂರ್ಣ ನಂಬಿಕೆ,ವಿಶ್ವಾಸದ ಮೇಲೆ..
ಮರೆತೋಗುವುದು ಇವೆಲ್ಲಾ ಸ್ವಾರ್ಥದ ಮುಂದೆ..
ಅವರ ಕಷ್ಟಕ್ಕೆ ಎಲ್ಲರ‌ನೂ ನೆನೆವರು
ಆದರೆ ನಮ್ಮ ಕಷ್ಟಕ್ಕೆ ದೂರಾಗುವರು..
ದಾರಿ ಎಲ್ಲರೊಂದಿಗೆ‌ ಸಲೀಸಾಗಿ‌ ಹೋಗವಾಗ
ಬರುತ್ತಿರುತ್ತಾರೆ ಯಾರಾದರೂ ಮನದಲ್ಲಿ ಕಲ್ಮಷ ತುಂಬಲು..
ಸ್ವಂತ ಮನದ ಮಾತ ಕೇಳಿ ಮುನ್ನುಗುತಿರಲಿ
ಹಾಯಾಗಿರುವುದು ಮನವು ಎಂದೆಂದೂ..
ಮನದ‌‌ ನುಡಿತ ಬೇರೆಯವರ ಹಿತವಾಗಿರಲಿ..
ಎಲ್ಲರ ಒಳಿತು‌ ನಿಮ್ಮ ಮಾತಾಗಿರಲಿ...
@ಮೇಘ ಗಣೇಶ್

- Megha s

03 Sep 2020, 11:00 am

ಅರಳುವ ಹೂವುಗಳು

ಸಾವಿರ ಗುಡುಗು ಬರಲಿ
ಸಾವಿರ ಮಿಂಚು ಬರಲಿ
ಕಾರ್ಮೋಡ ಕವಿಯಲಿ
ಅರಳುವ ಹೂವುಗಳು
ಅರಳಿ ಯೇ ತೀರುವವು

- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)

03 Sep 2020, 09:44 am