ಮಳೆ ಗಾಳಿಯೇನ್ನದೆ
ಬಿಸಿಲು ಬೆಂಕಿ ಕಾಣದೆ
ಕೂಲಿ ನಾಲಿ ಮಾಡಿ
ತಾನು ಹಸಿದಿದ್ದರೂ
ತನ್ನವರ ಒಡಲು ತುಂಬಿಸಿದ
ಕಣ್ಣಿಗೆ ಕಾಣುವ ದೇವರು ತಾಯಿ
ಕಷ್ಟವೆಂದರೆ ಬರುವಳು ತಾಯಿ
ಕಣ್ಣೀರು ಒರೆಸುವಳು ಜನ್ಮ ದೇವತೆ
ತಾಯಿಗೆ ಇಲ್ಲದ ಸೂರು ನೀರು
ಹಾರ ತೂರಾಯಿ ಮೃಷ್ಟಾನ್ನ ಭೋಜನವಾ
ಕಲ್ಲು ದೇವರುಗಳ ಮುಂದಿಟ್ಟು
ಪೂಜಿಸಿದರೇನು ಫಲವಯ್ಯ
ಮಾತನಾಡಲು ಮಾತು ಬಾರದ
ಮನಸಿನ ಮಾತು ತಿಳಿಯಾದ
ಕಷ್ಟ ಸುಖ ನೋವು ನಲಿವಿನ ಅರಿವಿಲ್ಲದ
ಕಲ್ಲು ಕಂಬದ ಮುಂದೆ
ತಲೆ ಚಚ್ಚಿಕೊಂಡರೇನು ಫಲವಯ್ಯ
ಕನ್ನಡ ತಾಯಿಯ ಸೆರಗಿನ ನೆರಳಲಿ
ನಲಿಯುತ ತಾಯಿಗೆ ನಮಿಸೋಣ ll
ಪದಗಳ ಪದಕವ ತೊಡಿಸುತ ನಗಿಸುತ
ಕವನದ ಕುಸುಮವ ಮುಡಿಸೋಣ ll೧ll
ಚದುರಿದ ಉಡುಗೆಯ ನೆರಿಗೆಯ ಬಿಗಿದು
ಮಾತೆಯ ಮಾನವ ಕಾಯೋಣ ll
ಗುರುವರ ಬಲದಿ ಬರಹ ಸಿಂಧೂರವ
ಮಾತೆಯ ಚೆಲು ಹಣೆಗಿರಿಸೋಣ ll೧ll
ಕನ್ನಡ ತಾಯಿಯ ಹಿರಿಮೆಯ ಸಾರಿದ
ಹಿರಿಕವಿವರ್ಯರ ಸ್ಮರಿಸೋಣ ll
ಚತುರರು ನಾವು ತಾಯಿಯ ಕೀರ್ತಿಯ
ನಾಡಿನ ಎಲ್ಲೆಡೆ ಹರಡೋಣ ll೧ll
ಬೆವರಿನ ಪಸೆಯಲಿ ಅನ್ನವ ನೀಡುವ
ತ್ಯಾಗಿಯ ಕಾಯಕ ಅರಿಯೋಣ ll
ಉಸಿರನು ಕಾಯುವ ಯೋಧರ ಸಾಹಸ
ಪ್ರತಿ ಉಸಿರಲ್ಲೂ ಜಪಿಸೋಣ ll೧ll
ಎಲ್ಲರೂ ಬಯಸುವರು
ಸಂಬಂಧ ಗಟ್ಟಿಯಾಗಿರಬೇಕೆಂದು..
ಆದರೆ ನಾಟಕದ ಬಲೆಯಲ್ಲಿ ಬಿದ್ದು ಬಿಟ್ಟರೇನೋ?
ಬಂಧ ನಿಂತಿರುವುದು
ಸಂ-ಪೂರ್ಣ ನಂಬಿಕೆ,ವಿಶ್ವಾಸದ ಮೇಲೆ..
ಮರೆತೋಗುವುದು ಇವೆಲ್ಲಾ ಸ್ವಾರ್ಥದ ಮುಂದೆ..
ಅವರ ಕಷ್ಟಕ್ಕೆ ಎಲ್ಲರನೂ ನೆನೆವರು
ಆದರೆ ನಮ್ಮ ಕಷ್ಟಕ್ಕೆ ದೂರಾಗುವರು..
ದಾರಿ ಎಲ್ಲರೊಂದಿಗೆ ಸಲೀಸಾಗಿ ಹೋಗವಾಗ
ಬರುತ್ತಿರುತ್ತಾರೆ ಯಾರಾದರೂ ಮನದಲ್ಲಿ ಕಲ್ಮಷ ತುಂಬಲು..
ಸ್ವಂತ ಮನದ ಮಾತ ಕೇಳಿ ಮುನ್ನುಗುತಿರಲಿ
ಹಾಯಾಗಿರುವುದು ಮನವು ಎಂದೆಂದೂ..
ಮನದ ನುಡಿತ ಬೇರೆಯವರ ಹಿತವಾಗಿರಲಿ..
ಎಲ್ಲರ ಒಳಿತು ನಿಮ್ಮ ಮಾತಾಗಿರಲಿ...
@ಮೇಘ ಗಣೇಶ್