Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕ್ಷಮೆ

ಹೇ " ಪ್ರಕೃತಿ ಮಾತೇ " ನೀ ಎಷ್ಟು ಸುಂದರ,
ನಿನ್ನ ನೋಡಲು ಎರಡು ಕಣ್ಣು ಸಾಲದು...
ನಿನ್ನ ಅಂದ ಎಷ್ಟು ವರ್ಣಿಸಿದರು ಕಡಿಮೆ..
ಈ ಮೂಡಜನರ ಮೇಲೆ ನಿನಗೆ ಕೋಪ ಬಂದಿದೆ, ನಿನ್ನ ಮಕ್ಕಳಲ್ಲವೇ, ನಾವು ಶಾಂತಳಾಗು ತಾಯೇ ನಮ್ಮನ್ನು ಕ್ಷಮಿಸು..
ನಿನ್ನ ಕ್ಷಮೆಗಾಗಿ ಕಾದಿರುವೆವು...
✍️ಸಾವಿತ್ರಿ...

- ಸವಿ

01 Sep 2020, 08:55 pm

ನೀನಾಗು

ಅರಿಯಲೊಲ್ಲದವನ
ತೋಳೆಳೆದು ಕರೆದು ಕಲಿಸಿ ಗುರುವಾಗು
ಜ್ಞಾನದ ಬೆಳಕಲ್ಲಿ ಹೃದಯ ಕಣ್ಣು ತೆರೆದು ಕೊಳ್ಳಲೂ ಬಹುದು

ಅರಿಯ ಬೇಕೆಂಬವನ
ಓಲೈಸಿ ಕರೆದು ಕಲಿಸಿ ಗುರುವಾಗು
ಮುಷ್ಟಿ ಜ್ಞಾನದಲ್ಲೇ ಸೃಷ್ಟಿಗೆ ಹಿತನಾಗಬಹುದು

ಅರಿತವನ ನುಡಿಗೆ ನೀ ತಲೆತೂಗು
ಬೆಚ್ಚಗಿನೆದೆ ಗೂಡಿನಲ್ಲಿ ನೀ
ಗುರುವಿಗೇ ಗುರುವೆಂದೆನಿಸಿಕೊಳ್ಳಲೂ ಬಹುದು

- R.D

01 Sep 2020, 05:48 pm

ಪ್ರೀತಿ♥♥

"ಪ್ರೀತಿ" ಎನ್ನುವುದು ಒಂದು ಸುಂದರ ಸಂಗೀತ
ಹೃದಯವೇ ಅದರ ಸಾಹಿತ್ಯ,
ಮನಸ್ಸೆ ಅದರ ಸಾಂಗತ್ಯ,
ಕನಸುಗಳೇ ಅದರ ಆದಿತ್ಯ,
ಭಾವನೆಗಳೇ ತುಂಬಿರುವದು ದಿನನಿತ್ಯ...!

- Megha

01 Sep 2020, 03:49 pm

ಯೌವನ

ಬಯಸಿದ್ದನ್ನು
ದೇವರು ಕೊಡುವನೆಂದು
ಭಜನೆ ಮಾಡುತ್ತಾ ಕುಳಿತರೆ
ಆಗುವುದು ವಯಸ್ಸು
ಮುಗಿಯುವುದು ಯೌವನ
ಬರುವುದು ಮುಪ್ಪು
ನೆಡೆಯುವುದು ವೈಕುಂಠ ಸಮಾರಾಧನೆ

- ರಾಜು ಹಾಸನ

01 Sep 2020, 12:59 pm

ನಿಜವಾ ನುಡಿಯಲು ಭಯವೇಕೆ

ದೇವರ ಪೂಜೆ ಮಾಡುವುದರಿಂದ
ಕಷ್ಟ ಗಳು ಕಡಿಮೆಯಾಗುವುದಿಲ್ಲ
ಅಭಿಷೇಕ ಮಾಡುವುದರಿಂದ
ಜನರ ಹೊಟ್ಟೆ ತುಂಬುವುದಿಲ್ಲ
ದೇವರ ಭಜನೆ ಮಾಡುವುದರಿಂದ
ಬಡತನ ಹೋಗುವುದಿಲ್ಲ
ದೇವಸ್ಥಾನ ಕಟ್ಟುವುದರಿಂದ
ಸಾಧನೆ ಮಾಡಲು ಸಾಧ್ಯವಿಲ್ಲ
ಹಬ್ಬ ಹರಿದಿನ ಮಾಡುವುದರಿಂದ
ಜೇಬು ತುಂಬುವುದಿಲ್ಲ

- ರಾಜು ಹಾಸನ

01 Sep 2020, 12:56 pm

ಅಮೃತ.... ಪಂಚಾಮೃತ

ದೇವಸ್ಥಾನದಲ್ಲಿ ಕೊಡುವ ಅನ್ನ
ಪ್ರಸಾದವಾದರೆ
ಅಮ್ಮ ಕೊಡುವಾ ಕೈತುತ್ತು
ಮೃಷ್ಟಾನ್ನವಾಗುವುದು
ಹಸಿದಾಗ ಸಿಗುವ ಅನ್ನ
ಅಮೃತವಾಗುವುದು
ದೇವಸ್ಥಾನದಲ್ಲಿ ಕೊಡುವ
ನೀರಿನ ಹನಿ ತೀರ್ಥವಾದರೆ
ದಣಿದಾಗ ಸಿಗುವ
ಅಳ್ಳದ ಕೊಳ್ಳಾದ ನೀರು
ಪಂಚಾಮೃತವಾಗುದು

- ರಾಜು ಹಾಸನ

01 Sep 2020, 01:56 am

ಜೀವನದ ತಿರುವು

ಜೀವನದಲ್ಲಿ ಎಲ್ಲವೂ ಚೆನ್ನಾಗಿರಬೇಕು ಅಂದರೆ, ಒಂದು ಎಲ್ಲಾನೂ ಪಡಕೊಂಡ ಬಂದಿರಬೇಕು,
ಇಲ್ಲಾ,
ಜೀವನ ಬಂದ ಹಾಗೆ ಸಂತೋಷವಾಗಿ
ಸ್ವೀಕರಿಸಬೇಕು...!

- Megha

31 Aug 2020, 11:08 am

ತಿಥಿ ಊಟ

ಹುಟ್ಟಿದಾಗ ಮಾಡುವರು ಹುಟ್ಟು ಹಬ್ಬ
ಸತ್ತಾಗ ಮಾಡುವರು ಪುಣ್ಯ ತಿಥಿ
ಇದ್ದಾಗ ಒಗೆಯುವರು ಬಟ್ಟೆಯಂತೆ
ಸತ್ತಾಗ ಹಾಕುವರು ಹಾರ ತುರಾಯಿ
ತಿಂಡಿ ತಿನಿಸು ಮಾಡಿಡುವರು
ಗೊಡೆಯಲ್ಲಿನ ಫೋಟೋಕ್ಕೆ
ತಂದಿಟ್ಟು ತಮಾಷೆ ಮಾಡುವರು
ತಿನ್ನು ತಿನ್ನೆಯೆಂದು ಹೇಂಗೆ ತಿನ್ನಲಿ ಹೇಳಿ
ನಾ ಇರುವುದು ಗೊಡೆಯ ಫೋಟೋದಲ್ಲಿ
ತಿನ್ನುವುದು ಮಾತ್ರ ಅವರು
ಹೇಳುವುದು ಮಾತ್ರ ನನ್ನ ಹೆಸರು
ಏಕೆಂದರೆ ತಿಥಿ ಊಟ ನನ್ನದು ಅಲ್ಲವೇ

- ರಾಜು ಹಾಸನ

31 Aug 2020, 12:14 am

ಉತ್ತರ ಕರ್ನಾಟಕ

ನಮ್ಮ ಉತ್ತರ ಕರ್ನಾಟಕ ಬಯಲು ಸೀಮೆ ಎಂದೇ ಪ್ರಸಿದ್ಧಿಯನ್ನ ಪಡೆದ ನಾಡು...
ಬಾದಾಮಿ ಚಾಲುಕ್ಯರ, ಜಕಣಾಚಾರ್ಯರರ ವಾಸ್ತು ಶಿಲ್ಪಿಯ ನಾಡು....
ಕಲೆ ಸಂಸ್ಕೃತಿಯ ದೇವಾಲಯಗಳ ತಾಯಿನಾಡು ಇದು....
ನವ ದಾನ್ಯಗಳ ನಾಡು ಜೋಳದ ಖಡಕ್ ರೋಟಿಗೆ , ಪ್ರಸಿದ್ಧಿಯನ್ನ ಪಡೆದ ನಾಡು...
ಮಾತು ಒರಟು , ಮನಸ್ಸು ಮೃದು..
ನಮ್ಮ ಕನ್ನಡ ಭಾಷೆ ರೀ ಎಂದೇ ಪ್ರಸಿದ್ಧಿ .. ಬರ್ರೀ, ಆರಾಮ ರೀ ಬೇರೆಯವರ ಮನಸ್ಸಲ್ಲಿ ಅಚ್ಚು ಹೊಳೆದ ಭಾಷೆ ನಮ್ಮದು...
ಬಯಲು ಸೀಮೆ ಗಂಡು ಮೆಟ್ಟಿದ ನಾಡು ನಮ್ಮದು....
✍️ಸಾವಿತ್ರಿ.....

- ಸವಿ

30 Aug 2020, 05:50 pm

ಕುಡುಕರ ಗಮ್ಮತ್ತು

ಸಾರಾಯಿ ಕುಡಿದಾಗ ಆಡುವರು
ಶುರರು ಧೀರರಂತೆ
ಸಾರಾಯಿ ಕುಡಿಯದೆ ಇರುವಾಗ ಇರುವರು
ಸನ್ಯಾಸಿಯಂತೆ

ಸಾರಾಯಿ ಕುಡಿದರೆ ಮನೆಯಾಳು
ಸಾರಾಯಿ ಕುಡಿಯದಿದ್ದರೆ ತಲೆಯಾಳು
ಕುಡಿದರು ಹಾಳು ಕುಡಿಯದಿದ್ದರು ಹಾಳು
ಒಟ್ಟಿನಲ್ಲಿ ಜೀವನವೇ ಹಾಳು ಹಾಳು

ಸಾರಾಯಿ ಕುಡಿಯುವ ಮುನ್ನಾ
ಹೇಳುವರು ಸುಳ್ಳು ಸುಳ್ಳು
ಸಾರಾಯಿ ಕುಡಿದ ನಂತರ
ಹೇಳುವರು ಸತ್ಯ ಸತ್ಯ

ಸಾರಾಯಿ ಕುಡಿಯದೆ ಇರುವಾಗ
ಬರುವುದು ಸಿದಾ ಸದಾ ಮಾತು
ಸಾರಾಯಿ ಕುಡಿದಾಗ ಬರುವುದು
ಸಂಸ್ಕೃತ ತೊದಲು ಮಾತು

ಸಾರಾಯಿ ಕುಡಿಯದೆ ಇರುವಾಗ
ನೆಡೆಯುವರು ಸಿದಾ ಸದಾ ನೆಡೆ
ಕುಡಿದಾಗ ನಡೆಯುವರು
ಅಂತಿಂಥ ನೆಡೆಯಲ್ಲ ಭರತ ನಾಟ್ಯ ನೆಡೆ

- ರಾಜು ಹಾಸನ

30 Aug 2020, 01:59 am