ಹೇ " ಪ್ರಕೃತಿ ಮಾತೇ " ನೀ ಎಷ್ಟು ಸುಂದರ,
ನಿನ್ನ ನೋಡಲು ಎರಡು ಕಣ್ಣು ಸಾಲದು...
ನಿನ್ನ ಅಂದ ಎಷ್ಟು ವರ್ಣಿಸಿದರು ಕಡಿಮೆ..
ಈ ಮೂಡಜನರ ಮೇಲೆ ನಿನಗೆ ಕೋಪ ಬಂದಿದೆ, ನಿನ್ನ ಮಕ್ಕಳಲ್ಲವೇ, ನಾವು ಶಾಂತಳಾಗು ತಾಯೇ ನಮ್ಮನ್ನು ಕ್ಷಮಿಸು..
ನಿನ್ನ ಕ್ಷಮೆಗಾಗಿ ಕಾದಿರುವೆವು...
✍️ಸಾವಿತ್ರಿ...
ದೇವರ ಪೂಜೆ ಮಾಡುವುದರಿಂದ
ಕಷ್ಟ ಗಳು ಕಡಿಮೆಯಾಗುವುದಿಲ್ಲ
ಅಭಿಷೇಕ ಮಾಡುವುದರಿಂದ
ಜನರ ಹೊಟ್ಟೆ ತುಂಬುವುದಿಲ್ಲ
ದೇವರ ಭಜನೆ ಮಾಡುವುದರಿಂದ
ಬಡತನ ಹೋಗುವುದಿಲ್ಲ
ದೇವಸ್ಥಾನ ಕಟ್ಟುವುದರಿಂದ
ಸಾಧನೆ ಮಾಡಲು ಸಾಧ್ಯವಿಲ್ಲ
ಹಬ್ಬ ಹರಿದಿನ ಮಾಡುವುದರಿಂದ
ಜೇಬು ತುಂಬುವುದಿಲ್ಲ
ದೇವಸ್ಥಾನದಲ್ಲಿ ಕೊಡುವ ಅನ್ನ
ಪ್ರಸಾದವಾದರೆ
ಅಮ್ಮ ಕೊಡುವಾ ಕೈತುತ್ತು
ಮೃಷ್ಟಾನ್ನವಾಗುವುದು
ಹಸಿದಾಗ ಸಿಗುವ ಅನ್ನ
ಅಮೃತವಾಗುವುದು
ದೇವಸ್ಥಾನದಲ್ಲಿ ಕೊಡುವ
ನೀರಿನ ಹನಿ ತೀರ್ಥವಾದರೆ
ದಣಿದಾಗ ಸಿಗುವ
ಅಳ್ಳದ ಕೊಳ್ಳಾದ ನೀರು
ಪಂಚಾಮೃತವಾಗುದು
ಹುಟ್ಟಿದಾಗ ಮಾಡುವರು ಹುಟ್ಟು ಹಬ್ಬ
ಸತ್ತಾಗ ಮಾಡುವರು ಪುಣ್ಯ ತಿಥಿ
ಇದ್ದಾಗ ಒಗೆಯುವರು ಬಟ್ಟೆಯಂತೆ
ಸತ್ತಾಗ ಹಾಕುವರು ಹಾರ ತುರಾಯಿ
ತಿಂಡಿ ತಿನಿಸು ಮಾಡಿಡುವರು
ಗೊಡೆಯಲ್ಲಿನ ಫೋಟೋಕ್ಕೆ
ತಂದಿಟ್ಟು ತಮಾಷೆ ಮಾಡುವರು
ತಿನ್ನು ತಿನ್ನೆಯೆಂದು ಹೇಂಗೆ ತಿನ್ನಲಿ ಹೇಳಿ
ನಾ ಇರುವುದು ಗೊಡೆಯ ಫೋಟೋದಲ್ಲಿ
ತಿನ್ನುವುದು ಮಾತ್ರ ಅವರು
ಹೇಳುವುದು ಮಾತ್ರ ನನ್ನ ಹೆಸರು
ಏಕೆಂದರೆ ತಿಥಿ ಊಟ ನನ್ನದು ಅಲ್ಲವೇ
ನಮ್ಮ ಉತ್ತರ ಕರ್ನಾಟಕ ಬಯಲು ಸೀಮೆ ಎಂದೇ ಪ್ರಸಿದ್ಧಿಯನ್ನ ಪಡೆದ ನಾಡು...
ಬಾದಾಮಿ ಚಾಲುಕ್ಯರ, ಜಕಣಾಚಾರ್ಯರರ ವಾಸ್ತು ಶಿಲ್ಪಿಯ ನಾಡು....
ಕಲೆ ಸಂಸ್ಕೃತಿಯ ದೇವಾಲಯಗಳ ತಾಯಿನಾಡು ಇದು....
ನವ ದಾನ್ಯಗಳ ನಾಡು ಜೋಳದ ಖಡಕ್ ರೋಟಿಗೆ , ಪ್ರಸಿದ್ಧಿಯನ್ನ ಪಡೆದ ನಾಡು...
ಮಾತು ಒರಟು , ಮನಸ್ಸು ಮೃದು..
ನಮ್ಮ ಕನ್ನಡ ಭಾಷೆ ರೀ ಎಂದೇ ಪ್ರಸಿದ್ಧಿ .. ಬರ್ರೀ, ಆರಾಮ ರೀ ಬೇರೆಯವರ ಮನಸ್ಸಲ್ಲಿ ಅಚ್ಚು ಹೊಳೆದ ಭಾಷೆ ನಮ್ಮದು...
ಬಯಲು ಸೀಮೆ ಗಂಡು ಮೆಟ್ಟಿದ ನಾಡು ನಮ್ಮದು....
✍️ಸಾವಿತ್ರಿ.....