Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಗುರು

ಜೀವನದಲ್ಲಿ‌ ಪ್ರತಿಯೊಬ್ಬರಿಗೂ ಅವರದೇ ಆದ ಕಲೆ,ಹವ್ಯಾಸ,ಮುನ್ನುಗುವ ಛಲ ಇದ್ದೇ ಇರುವುದು...
ಅವರನ್ನು ಮತ್ತಷ್ಟು ಎತ್ತರಕ್ಕೆ ಮುನ್ನುಗ್ಗಿಸುವವರು ಬೇಕಾಗುವರು...
ನನ್ನ ಜೀವನದಲ್ಲೂ ಒಬ್ಬರು ಪ್ರೇರೇಪಣೆಯಾಗಿ ಬಂದರು..
ನಮ್ಮೆಲ್ಲರ ಒಳಿತಿಗಾಗಿ‌ ಕಷ್ಟ ಪಟ್ಟರು..
ನಮ್ಮ ಸಣ್ಣ ಒಂದು ಒಳ್ಳೆ ಕೆಲಸ,ಅಂಕ ನೋಡಿ ಹುರಿದುಂಬಿಸಿದರು..
ಪಾಠವನ್ನು ಓದಿ,ಅರ್ಥೈಸಿ,ಆನಂದಿಸಿ ಕಲಿಯಲು ತಿಳಿಸಿದರು..
ಭೇದ- ಭಾವವಿಲ್ಲದೆ ಪ್ರತಿಯೊಬ್ಬರಿಗೂ ಬುದ್ದಿ ಪಾಠ ವಿದ್ಯಾದಾನ‌ ಮಾಡಿದರು..
ಕನಸ ಕಂಡೆ ನನ್ನ ಜೀವನವು ಅವರಂತೆ ಆಗಬೇಕೆಂದು..
ಕೊನೆಗೂ ನನಸಾಯಿತು ಆ‌ ನನ್ನ ಕನಸು..
ಓ ಗುರುವೇ
ನನ್ನ ನಮಸ್ಕಾರಗಳು ನಿಮ್ಮ ಚರಣಗಳಿಗೆ..

@ಮೇಘ ಗಣೇಶ್

- Megha s

06 Sep 2020, 10:24 am

ಶಿಕ್ಷಕರು ನೀವು

ಶಿಕ್ಷಕರು ನೀವು
ಜ್ಞಾನದ ರಕ್ಷಕರು
ಮೂಲಾಕ್ಷರ ಕಲಿಸಿ
ಮಕ್ಕಳಿಗೆ ವ್ಯಕ್ತಿಯ
ರೂಪ ಕೊಟ್ಟವರು ನೀವು

ಅಜ್ಞಾನದ ಕತ್ತಲೆಯ ಹೋಗಲಾಡಿಸಿ
ಸುಜ್ಞಾನದ ದೀಪ ಬೆಳಗಿಸಿ ದವರು ನೀವು
ತಿದ್ದಿತೀಡಿ ವಿದ್ಯಾರ್ಥಿಯ ಜೀವನ
ರೂಪಿಸಿದವರು ನೀವು

ಮಕ್ಕಳು ಎಡವಿದಾಗ
ದಿಗ್ದರ್ಶನ ತೋರಿದವರು ನೀವು
ಮಕ್ಕಳ ಸಾಧನೆಯ ಹಾದಿಗೆ
ದಾರಿದೀಪವಾದವರು ನೀವು

ಮಕ್ಕಳಿಗೆ ಮಾರ್ಗದರ್ಶನ ನೀಡುತ
ದೇಶದ ಒಳಿತಿಗೆ ಶ್ರಮಿಸುತ
ಭವ್ಯ ಭಾರತ ಕಟ್ಟಿದವರು ನೀವು

ನೋವನ್ನು ನುಂಗಿ
ಕಷ್ಟಗಳನ್ನು ಸಹಿಸಿಕೊಂಡು
ಮಕ್ಕಳ ಡಗೆ ಮುಗುಳ್ನಗೆ ಬೀರಿ
ಮಕ್ಕಳ ಭವಿಷ್ಯ ರೂಪಿಸಿದವರು ನೀವು

- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)

05 Sep 2020, 07:46 pm

ಹೆಣ್ಣಿನ ಶೋಷಣೆ

ಮಗಳಿಗೆ ಕೊಡುವರು ಆಭರಣವಾ
ಕರುಳು ಬಳ್ಳಿಯ ಪ್ರೀತಿಗಾಗಿ
ವರನಿಗೆ ಕೊಡವರು ಉಡುಗೊರೆಯ
ಮಗಳು ಚೆನ್ನಾಗಿರಲೆಂದು

ತಾಯಿಯೋಬ್ಬಳು ಮನೆಯಲ್ಲಿದ್ದರೆ
ಗುಡಿಸಿಲು ಇರುವುದು ಅರಮನೆಯಂತೆ
ಕುಡುಕ ಗಂಡನಿದ್ದರೆ
ಅರಮನೆಯು ತಿಪ್ಪೇ ಗುಂಡಿಯಾಗುವುದು

ಸೆರಗು ಕಟ್ಟಿ ಸಾಕುವಳು
ಮನೆ ಮಂದಿಯ ತಾಯಿಯಾಗಿ
ಕುಡಿದು ಕಳೆಯುವನು ಮನೆ ಮಂದಿಯ
ಕುಡುಕ ಗಂಡನಾಗಿ

ದುಡಿದು ಸಾಕುವುದು ಹೆಂಡತಿ
ಕುಡಿದು ವಾಲಾಡುವುದು ಗಂಡಸು
ಬಾಳುವುದು ಸಂಗಾತಿಯ ನೆರಳಲ್ಲಿ
ಆದರೂ ಬೇಕು ವರದಕ್ಷಿಣೆ ತಿಂದು ತೇಕಲು

ಮಗಳು ಸುಖವಾಗಿರಲೆಂದು ಕೊಡುವರು
ಕೂಡಿಟ್ಟ ದುಡ್ಡು ವರದಕ್ಷಿಣೆಯಾಗಿ
ಆದರೂ ತಪ್ಪಿಲ್ಲ ಹೆಣ್ಣಿನ ಗೋಳು
ವರನು ಸುಖವಾಗಿರಲೆಂದು ಕೊಡುವುದಿಲ್ಲ
ವಧು ದಕ್ಷಿಣೆಯ
‌ ಆದರೂ ನಿಂತಿಲ್ಲ ಹೆಣ್ಣಿನ ಶೋಷಣೆ

- ರಾಜು ಹಾಸನ

05 Sep 2020, 12:51 am

ಗುರುದೇವ

ಶಿಸ್ತು ಕ್ಷಮೆ ಕರುಣೆಗೆ ಹೆಸರಾದ ಗುರುದೇವ ಪ್ರೀತಿಲೇ ತೆರೆಸುವ
ಮುಗ್ಧ ಮನಗಳ ತೊದಲನುಡಿ ಯ ಮೊದಲ ಪುಟವ
ಸರ್ವ ಮಕ್ಕಳ ಸಹಾನುಭೂತಿ ತಾನಾಗಿ ಸೃಷ್ಟಿಸುವ ಸಮನ್ವಯತೆಯ ಲ್ಲಿ ಹೊಳೆಯುವ ಸುಂದರ ಸ್ನೇಹ ತಾರೆಗಳ ಹಕ್ಕಿಗಳ ಕೂಟವ
ನಿರ್ಮಲ ಹೃದಯದಿ ಅಕ್ಷರ ಬೀಜವ ಬಿತ್ತಿ ಸದಾ ಸಕಲ ಮೌಲ್ಯಗಳ ಸಂಸ್ಕಾರವ ನೀಡುವ ಗುರುದೇವ
ಮಕ್ಕಳ ಸಾಧನೆಯ ಸಫಲತೆಯ ಹಾದಿಯಲ್ಲಿ ಸನ್ನಡತೆಯ ಸಹಬಾಳ್ವೆಯನ್ನು ಬಯಸುವ
ವಿದ್ಯಾರ್ಥಿಗಳ ಭವ್ಯ ಭವಿಷ್ಯದ ಉಜ್ವಲತೆಗೆ ಉಸಿರಾಗಿ
ಖಾಲಿ ಶಿಲೆಗಳ ಮನದೊಳಗೆ ದಿವ್ಯ ಜ್ಞಾನ ಜ್ಯೋತಿಯ ಬೆಳಗಿಸುವ ಶಿಲ್ಪ ಕಲೆಯಾಗಿ ಮಕ್ಕಳ ಗುರಿ ಸಾಧನೆಯ ಯಶಸ್ವಿಗೆ ಸ್ಪೂರ್ತಿಯಾಗಿ
ಜಗದೊಳಗೆ ಜನ ಸ್ಮರಿ ಸೋ ಸಾಧಕರ ಪಟ್ಟಿಯಲ್ಲಿ ತನ್ನ ಶಿಷ್ಯರ ಹೆಸರ ಹುಡುಕುವ
ಗುರುದೇವ ಮಿಂಚುಹುಳ ವಾಗಿ

- nagamani Kanaka

04 Sep 2020, 08:56 pm

ಪ್ರೇಮಿಗಳ ಜಗಳ

ಪ್ರೀತಿಸುವಾಗ ಹೇಳುವರು
ಕಾಮನಬಿಲ್ಲಿನಂತೆ ನಿನ್ನ ಕಣ್ಣ್ ನೋಟ
ಮುತ್ತಿನಂತೆ ನಿನ್ನ ಮಾತುಗಳು
ಸವಿ ಜೇನಿನಂತೆ ನಿನ್ನ ನಗು
ಬಣ್ಣಿಸಲು ಸಾಧ್ಯವಿಲ್ಲ
ನಿನ್ನ ಸೌಂದರ್ಯವಾ
ಎಷ್ಟೇ ನೋಡಿದರೂ ಸಾಲದು
ಮತ್ತೆ ಮತ್ತೆ ನೋಡುವಾಸೆ ಎನ್ನುವರು

ಚೂರಾದ ಪ್ರೀತಿಯಲ್ಲಿ ಹೇಳುವರು
ನಿನ್ನ ಕಣ್ಣ್ ನೋಟವೇ ಚುಚ್ಚುವುದು
ನನಗೆ ಚುಚ್ಚುಮದ್ದಿನಂತೆ
ಸಾಕೆನಗೆ ನಿನ್ನ ಕಾಟವೂ
ಬೇಡ ನನಗೆ ನಿನ್ನ ಮಾತುಗಳು
ಬಣ್ಣಿಸಲು ನಿನ್ ಯಾರು
ನಾನ್ ಯಾರೆಂದು ಕಿತ್ತಾಡುವರು
ಹೊತ್ತು ಗೊತ್ತಿಲ್ಲದೆ
ಮತ್ತೆ ಮತ್ತೆ ಹೇಳುವರು
ನಿನೇ ನನ್ನ ಜೀವಾ ಪ್ರಾಣವೆಂದು
ಮುತ್ತಿಟ್ಟು ಮುದ್ದಾಡುವರು
ಪ್ರೀತಿ ಗೆದ್ದ ಪ್ರೇಮಿಗಳು

- ರಾಜು ಹಾಸನ

04 Sep 2020, 06:45 pm

ಪಾಠ ಪಾಠ

ತಾರುಣ್ಯದಲ್ಲಿ ಮನಸು ಬಯಸುವುದು ಖುಷಿಯನ್ನ
ದೇಹ ಬಯಸುವುದು ಶಯನವನ್ನ
ಆಳು ಮಾಡುವುದು ನೆಮ್ಮದಿಯನ್ನ

ಬಿಸಿಲಿನಲ್ಲಿ ಬಯಸುವುದು ನೆರಳನ್ನ
ಅತಿ ನೆರಳು ಆಲೋಚಿಸುವುದು ಬಿಸಿಲನ್ನ
ಅತಿ ಸುಖಿಯಾದರೆ ಎದುರಿಸಬೇಕು ದುಃಖವನ್ನ
ದುಃಖದ ನಡುವೆಯೂ ಕಾಣಬೇಕು ಸುಖವನ್ನ

ಅನುಭವ ಕಲಿಸುವುದು ಅತ್ಯುತ್ತಮ ಪಾಠವನ್ನ
ಸರಳತೆಯಲ್ಲಿ ನಡೆಸು ಜೀವನವೆಲ್ಲವನ್ನ
ಸರ್ವ ಧರ್ಮದ ಸ್ವಾರಸ್ಯ ಇದೆ ಚಿನ್ನ

- Shivakumara S

04 Sep 2020, 11:18 am

ಪ್ರೇಮಿ ನೀನು ಹಣವು ಪ್ರೇಯಸಿ ನಿನಗೆ

ಹಣ ತುಂಬಿದ ಜೇಬು ಭೂಮಿ ನೋಡಲಾರರು,
ಹಣ ಇಲ್ಲದ ಜೇಬು ತಲೆ ಎತ್ತಲಾರದು.

ಸಕಲ ಕೆಲಸದ ಮೂಲ ಹಣ,
ಬಾವನೆಗಳನೆಲ್ಲ ಹಣಕ್ಕಾಗಿ ಇಟ್ವಿ ಪಣ.

ಜೀವನದುದ್ದಕ್ಕೂ ನಡೆಸಿದ ಹೋರಾಟದ ಪಯಣ,
ಅದರ ಸ್ವಾರಸ್ಯದ ರೂಪವೆಲ್ಲ ಹಣ.

ಕನಸ್ಸುಗಳು ಇದ್ವು ನೂರು ಮಣ,
ಹಣದ ಮುಂದೆ ಕನಸುಗಳು ಆದವು ಹೆಣ.

ಹಣ ಸಂಪಾದಿಸಿದರೆ ತರುಣ,
ಹಣ ಸುಖಿಯಾಗಿ ಇಡುವುದು ಬರುವವರೆಗೂ ಮರಣ
ಇದನ್ನು ಅರಿತು ಎಲ್ಲಾ ಬಾಳಿರಣ್ಣ

- Shivakumara S

04 Sep 2020, 10:49 am

ಓ ನನ್ನ ನಲ್ಲೆ

ಮುದ್ದಾದ ಗೊಂಬೆಗೆ
‌ ಮಿಂಚುಳ್ಳಿಯ ನಗುವೇ
ಅಂದ ಚಂದ
ಗಿಳಿ ಮೂಗಿಗೆ ಕೋಪವೇಕೆ
ಓ ನನ್ನ ನಲ್ಲೆ
ಕೋಪದಲ್ಲೂ ನೀ
ಬಂಗಾರದ ಜಿಂಕೆ
ಮುನಿಸು ಏಕೆ ಬಾ ನನ್ನ ನಲ್ಲೆ

- ರಾಜು ಹಾಸನ

03 Sep 2020, 11:52 pm

ಹಾಸ್ಯ ಚಟಾಕಿ

ಮದುವೆಗು ಮುನ್ನ
ಹುಡುಗರು ಸುತ್ತುವರು
ಬೀದಿ ಬೀದಿಗಳಲ್ಲಿ
ಬೀದಿ ಬಸವನಂತೆ
ಮದುವೆಯ ನಂತರ ಆಗುವರು
ಗುಡಿ ಬಸವನಂತೆ

ಸೇರಗು ಹಿಡಿದು
ಅಮ್ಮ ಅಮ್ಮ ಎಂದು
ಹಿಂದೆ ಹಿಂದೆ ಸುತ್ತಿದ್ದರು ಅಂದು
ಇಂದು ಸುತ್ತುವರು
ಚಿನ್ನ ಬಂಗಾರವೆಂದು
ಹೆಂಡತಿ ಹಿಂದೆ ಹಿಂದೆ

ತಾಯಿ ಹೇಳಿದ ಮಾತು
ತಲೆಗೆ ಹೋಗುವುದಿಲ್ಲ
ಹೆಂಡತಿ ಹೇಳಿದ ಮಾತು
ಚುಚ್ಚುವುದು ಮಾತ್ರ ಮನಸ್ಸಿಗೆ

- ರಾಜು ಹಾಸನ

03 Sep 2020, 07:24 pm

ಬೇಸಿಗೆ ರಜೆ

ಬೇಸಿಗೆ ರಜೆ ಬಂದಿತು ಅಂದ್ರೆ
ನಾವೆಲ್ಲಾ ಖುಷಿ ಯಾಗಿರ್ತಿವಿ
ಶಾಲೆಯ ಗುರುಗಳ ಕಾಟವ
ಕಳಕೊಂಡು ಹಾಯಾಗಿರತಿವಿ //

ಅಪ್ಪ ಅಮ್ಮನ ಕಟ ಕಟ ತಾಳದೆ
ಅಜ್ಜಿಯ ಊರಿಗೆ ಒಡ್ತೀವಿ
ಅಜ್ಜ ಅಜ್ಜಿಯರ ಜೊತೆಯಲಿ
ಆಟವ ಆಡುತಾ ಇರುತಿವಿ //

ಗೆಜ್ಜೆಯ ಕಟಗೊಂದು ಎತ್ತನು
ಹೂಡಿ ತೋಟಕೆ ಹೋಗ್ತೀವಿ
ಹೆಜ್ಜೆಯ ಎಣಿಸುತ್ತಾ ತೆಂಗಿನ
ಮರಗಳ ಸುತ್ತುತ ಲಿರತಿವಿ //

ಶೇಂಗಾ ಜೋಳವ ಸುಟಗೊಂದು
ಬೇಳಸಿಯ ತಿನ್ನುತ ಲಿರತಿವಿ
ಅನ್ನದ ಉಟವ ಮರೆತು
ಗಿಣ್ಣವ ಉನ್ನುತ ಲಿರತಿವಿ //

ಬೇಸಿಗೆ ಮುಗಿಯಲು ನಮ್ಮಯ
ಊರಿನ ಮನೆಗೆ ಬರುತೆವೇ
ಶಾಲೆಯ ಸೇರಿ ಪಾಠ ವ ಕೇಳುತ
ಓದುತ ಜಾಣರು ಅಗ್ತಿವಿ //

ಕಲ್ಮೇಶ ಬಡಿಗೇರ
9743539657
.........ಬಾದಾಮಿ......

- Kalmesh Badiger

03 Sep 2020, 05:53 pm