Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ರೈಲಿನ ಆಟ

ರೆಲ್ವೆಯ ಆಟ ಮನೆಯಲಿ ಕಾಟ
ಹೋಗುವ ನಾವು ಹೊರಗಕ್ಕಾ
ಒಬ್ಬರಿಗೊಬ್ಬರು ಅಂಗಿಯ ಹಿಡಿದು
ಆಡುವ ರೈಲಿನ ಆಟವ ಬಾ ಅಕ್ಕ //

ಅಕ್ಕಾ ಅಕ್ಕಾ ಇದೋ ನೋಡು
ನಾ ಚಿಕು ಬುಕು ಎನ್ನುತ ಓಡುವೇನು
ಅಂಗಿಯ ಹಿಡಿದು ಸಾಲಾಗಿ ಬಣ್ರಿ
ಒಬ್ಬರ ಹಿಂದೆ ಮತ್ತೊಬ್ರು //

ಸಂದಿ ಗೊಂದಿಯಲಿ ಹಾಯದೆ ನಾವು
ಗೋಧಿಯ ಹೋಲದಲಿ ಓಡೋಣ
ಅಣ್ಣನ ಕರೆದುಕೊ ಬೇಕಾದಾಗ
ಬಣ್ಣದ ಕೊಲ್ ಮುರಿದು ತರೋಣ //

ಸಣ್ಣ ತಮ್ಮನ ಸುಣ್ಣದ ಕಟ್ಟೆಯ
ಮೇಗಡೆ ಕೂಡ್ರಿಸಿ ಸುತ್ತೋಣ
ಹರುಷ ವಾಗಲು ಕೈ ಕೈ ಕುಲುಕಿ
ಕೇಕೆಯ ಹಾಕುತ ನಲಿಯೋಣ //

ಅಮ್ಮನು ಕೂಗಲು ಸರಪಳಿ ಹರಿದು
ರೈಲಿನ ಆಟವಾ ಮುರಿಯೋಣ
ಕೈಯ್ಯನ್ನು ತೊಳೆದು ತಟ್ಟೆಯ ಹಿಡಿದು
ಊಟವ ಮಾಡಲು ಕುಡೋಣ //

. ಕಲ್ಮೇಶ ಬಡಿಗೇರ
9743539657
.......ಬಾದಾಮಿ........

- Kalmesh Badiger

28 Aug 2020, 07:36 pm

ಬಯಕೆ

ಚಿನ್ನದ ಗೂಡಲ್ಲಿರುವ ನನ್ನ
ಸಣ್ಣ ಮುದ್ದಿನ ಬಣ್ಣದ ಗಿಳಿಯೆ
ಹಣ್ಣನ್ನು ತಿನ್ನದೆ ಗಿನ್ನವ ಕುಡಿಯದೆ
ಏತಕೆ ಹೀಗೆ ಸೊರಗಿರುವೆ //

ಬಿಟ್ಟರೆ ನೀನು ಬಾಗಿಲು ತೆರೆದು
ಬಾನೆತ್ತರಕ್ಕೆ ಹಾರುವೇನು
ಚಂದ್ರನಲ್ಲಿ ಗೆ ಹೋಗಿ ನಿನಗೆ
ಚಿನ್ನದ ಚಂಡು ತರುವೆನು //

ಬಂದರೆ ನೀನು ಎನ್ನಯ ಜೊತೆಗೆ
ಬಣ್ಣದ ಬಿಲ್ಲು ತೋರಿಸುವೆ
ಚಿನ್ನ ರನ್ನ ಎನ್ನುತಾ ನಲಿವಾ
ಚುಕ್ಕೆಗಳಾಚೆ ತೆಲಿಸುವೆ //

ಅನ್ಯ ಗ್ರಹಗಳಿಂದಾಚೆಗೆ ಸಾಗಿ
ಚಿಣ್ಣರ ಲೋಕಕೆ ಹೋಗೋಣ
ಜೇನನು ಸವಿದು ಜಿಗಿದು ಕುಣಿದು
ನಮ್ಮಯ ಊರಿಗೆ ಮರಳುವ //

ಪಯಣದ ಬೇಸರ ಕಳೆಯಲು
ತಂಪಾದ ವನದಲಿ ಇಳಿಯೋಣ
ಹಣ್ಣನು ತಿಂದು ಹರುಷದಿ ನಾವು
ನಿದ್ರೇಯಲಿ ಮೈ ಮರೆಯೋಣ //


ಕಲ್ಮೇಶ ಬಡಿಗೇರ
9743539657
...........ಬಾದಾಮಿ........

- Kalmesh Badiger

28 Aug 2020, 07:04 pm

ಕರು

ಅಮ್ಮಾ ಅಮ್ಮಾ ಬಂದೇನಮ್ಮಾ
ಎಲ್ಲಿಗೆ ಹೋಗಿದ್ದೆ ಇಷ್ಟೋತ್ತು
ಕಟ್ಟಿಹಾಕಿ ದ ಕೊಟ್ಟಿಗೆಯನ್ನೆ
ನೋಡುತಲಿರಲಿ ನಾ ಎಷ್ಟೊಟ್ಟು //

ಹೊಟ್ಟೆಯ ಹಸಿವನು ತಾಳದೆ
ನೋಡು ಸೊಪ್ಪನ್ನು ತಿನ್ನದೆ ಒದ್ದಾಡ್ಡೆ
ದಡ್ಡಿಯ ಬಾಗಿಲು ಮುರಿದು ಓಡಿದೆ
ಕಟ್ಟಿರೋ ಹಗ್ಗದಿ ಗುದ್ದಾಡಿ //

ಅತ್ತಿತ್ತೆಲ್ಲಾ ಜನಗಳ ಜಂಗುಳಿ
ಹಿಡಿಯಲು ಬಂದರು ಸುತ್ತಾಗಿ
ಕಟ್ಟೆಯ ಒಡೆದೆ ,ಬಟ್ಟೆಯ ಹರಿದೆ
ಕೆರೆಯಲಿ ಹಾರಿದೆ ಹೌಹಾರಿ //

ಅಂಬಾ ಅಮ್ಮಾ ಎಂದರು ನಿನಗೆ
ಕೆಳಿಸಲೆ ಇಲ್ಲವೆ ನನ್ನಮ್ಮಾ
ಹಾಲುಣಿಸೇನಗೆ ಕಣ್ಣನ್ನು ಮುಚ್ಚಿ
ಅಮೃತ ಹಿರುವೆ ಅಮ್ಮಾಮ್ಮಾ//

ಬಾಲವ ನಿಮಿರಿಸಿ ಕಾಲನು ಕೆದರಿ
ಛಂಗನೆ ಹಾರುವೆ ನಾನಾಗಮ್ಮ
ನಿನ್ನಯ ಪ್ರೀತಿಗೆ ಸಮನಾರಿಲ್ಲ
ಜೊತೆಯಲಿ ಇರು ನೀ ಹೀಗಮ್ಮ //

ಕಲ್ಮೇಶ ಬಡಿಗೇರ
9743539657
. .....ಬಾದಾಮಿ......

- Kalmesh Badiger

28 Aug 2020, 06:19 pm

ಆನೆ

ಅಪ್ಪ ಚಿಕ್ಕಪ್ಪ ನೋಡ ಬಾರಪ್ಪ
ಆನೆ ಬಂದೈತಪ್ಪ
ಪುಸ್ತಕದಲ್ಲಿ ನೋಡಿದ್ದಕಿಂತ
ಎಷ್ಟು ದೊಡ್ಡದು ಐತೆಪ್ಪ !

ಕಾಲುಗಳೆಲ್ಲ ನಮ್ಮನೆ ಮುಂದಿನ
ಮರದಂತಿಹುದಪ್ಪಾ!
ಖ್ವಾರಿಯ ಮೇಲೆ ಏರಿ ಕುಳಿತರೆ
ಮುರಿಯುತ್ತವೇನಪ್ಪ ?

ಹೆಜ್ಜೆಯ ನಿಟ್ಟರೆ ನೆಲವೆಲ್ಲ
ಗಡ ಗಡ ನಡುಗುತ ಲಿಹುದಪ್ಪಾ
ಗಲ್ಲದ ಕೆಳಗೆ ಸಣ್ಣನೆ ಬಾಯಿಯು
ಕಾಣುತ ಲಿಹುದಪ್ಪ

ಸೊಂಡೆಯ ನೇಕೆ ಮೇಲಕ್ಕೆ
ಕೆಳಕ್ಕೆ ಮಾಡುತಲಿಹುದಪ್ಪಾ !
ಕೈಗೆ ಸಿಕ್ಕರೆ ನಮ್ಮನ್ನೆಲ್ಲಾ
ತಿನ್ನಬಹುದಾ ಹೆಳಪ್ಪಾ ?

ಆನೆ ಎಂದರೆ ಹಿಗಿರುತ್ತಂತಾ
ಇವತ್ತು ತಿಳಿತಪ್ಪಾ
ಚಿತ್ರಕ್ಕಿಂತ ನೋಡಲು
ಈ ತರ ಆನೆ ಸಾಕಪ್ಪಾ

ಕಲ್ಮೇಶ ಬಡಿಗೇರ
9743539657
........ಬಾದಾಮಿ......

- Kalmesh Badiger

28 Aug 2020, 06:03 pm

ಖಡಕ್ ಮಾತು

ಮುಂದೆ ಸಿಕ್ಕರೆ
ಮಾತನಾಡುವರು ಗೋವಿನಂತೆ
ಹಿಂದೆ ಹೋಗಿ ತಳ್ಳುವರು
ಗೋಮುಖ ವ್ಯಾಘ್ರನಂತೆ

ಸ್ನೇಹದಲ್ಲಿ ತಿಳಿಯಾದು ಮಾತಿನ ಬಣ್ಣ
ಪ್ರೀತಿಯಲ್ಲಿ ತಿಳಿಯಾದು ಮನಸ್ಸಿನ ಬಣ್ಣ
ಕೊಳದಲ್ಲಿ ತಿಳಿಯಾದು ನೀರಿನ ಬಣ್ಣ
ಬದುಕಿನಲ್ಲಿ ತಿಳಿಯಾದು ಮುಖವಾಡದ ಬಣ್ಣ

- ರಾಜು ಹಾಸನ

28 Aug 2020, 10:40 am

ನಂಬರ್ ಒನ್

ಬಯಸಿದ್ದನ್ನು
ದೇವರು ಕೊಡುವನೆಂದು
ಭಜನೆ ಮಾಡುತ್ತಾ ಕುಳಿತರೆ
ಆಗುವುದು ವಯಸ್ಸು
ಮುಗಿಯುವುದು ಯೌವನ
ಬರುವುದು ಮುಪ್ಪು
ನೆಡೆಯುವುದು ವೈಕುಂಠ ಸಮಾರಾಧನೆ

- ರಾಜು ಹಾಸನ

28 Aug 2020, 10:17 am

ಸ್ವಗತ

ನೀನು ನಗುತಿದ್ದರೆ ಹೊಳೆ ಬೋರ್ಗರೆತ ಎದೆಯಲ್ಲಿ ಕಾಮನೆಗಳ ಕಾನನಸುತ್ತಿ
ಬಯಕೆ ಬೆಟ್ಟದೆಗಲ ಮೇಲೆ ಕೈ ಚಾಚಿ
ಮುಖ ವಾಲಿದಾಗೊಮ್ಮೆ ಜಾರಿದ ಜೋಗದಂತಾ ಝಳಪು.
ಅಲ್ಲಿ.... ಬಿರುಬಿಸಿಲು ಮಳೆಗೆ ಮೂಡಿದ ಕಾಮನಬಿಲ್ಲು
ಕುಳಿತ ಹುಡುಗ ಚಿತ್ರ ಅಳಿಸಿ ರಬ್ಬರನಿಂದ....ಎಳೆದು ಹೊಸ ಮುಖ ರೇಖೆ
ಮಾಗಿದ ಬದುಕಿಗೆ ಒಡಲಾಳ ಒರತೆ ನೀರು ನಿನ್ನದು .....ನನಗೇನಿದ್ದರೂ ಬೊಗಸೆ ತುಂಬ ಅಲ್ಲದಿದ್ದರೂ ಮುಷ್ಟಿ ತುಂಬ ....ಇರಲಿ ಬಿಡು .....
ಹಾದ್ಯಾಗಿನ ಅವರೆಹೂ ಯಾರ ಮುಡಿಗೇರಿದೆ ಹೇಳು?
ಯಾರಾದರೂ ಮುಟ್ಟಿದ್ದಾರೆಯೇ ಹೇಳು?
ಯಾರಾದರೂ ದಿಟ್ಟಿಸಿದ್ದಾರೆಯೇ ಹೇಳು
ಪಾಡುಗಳು ಅವರವರಿಗೆ ಅವರದೇ ದೊಡ್ಡವು.
ಹಾಡುಗಳು ಅವರವರಿಗೆ ಅವರದೇ ನಾದಗಳು.
ನಾದ ಲಯ ಸ್ವರದೇರು ತೇರು ಭಂಗಿ ನಾನು-"ಭಾವ ನೀನು".

- prakaveri

28 Aug 2020, 07:28 am

ಹೀಗೊಂದು ಆಸೆ

ತೇಲುವ ಅಲೆಗಳ ರಭಸಕ್ಕೆ ಸಿಕ್ಕಿ ಮುಳುಗುವಾಸೆ ;
ಆ ಅಲೆಗಳ ಆಂತರ್ಯದಲ್ಲಿ ಅಲೆಯುವ ಅಲೆಮಾರಿ( ಜಲಚರ) ನೀನಾದರೆ.....

ನೆನಪಿನ ದೋಣಿಯಲಿ ತೀರದ ತೀರವ ಸೇರುವಾಸೆ;
ಆ ನೆನಪಿನ ನಾಲೆಯ ನೆನಪುಗಳ ನಾವಿಕ ನೀನಾದರೆ....

ತಾರಾಗಣದಲ್ಲಿ ಹೊಳೆಯುವ ತಾರಕೆ ನಾನಾಗುವಾಸೆ;
ಆ ತಾರಕೆಯ ಪರಿವೀಕ್ಷಕ ಕೇವಲ ನೀನಾದರೆ....

ಬಡಿಯುವ ಹೃದಯದ ಬಡಿತವು ನಾನಾಗುವಾಸೆ;
ಆ ಹೃದಯವಂತ ಕೇವಲ ನೀನಾದರೆ.....

ನಿಷ್ಕಲ್ಮಶ ಪ್ರೀತಿಯ ಒಲವಿನ ನಾಯಕಿ ರಾಧೆ ನಾನಾಗುವಾಸೆ;
ಆ ಒಲವಿನ ಕೊಳಲನೂದುವ ನೀಲಶ್ಯಾಮ ಕೇವಲ ನೀನಾದರೆ.......

- tejavathikn

27 Aug 2020, 09:39 pm

ಕೈಗನ್ನಡಿ

ಇರುವಾಗ ಓಡಿ ಬರುವರು
ಹತ್ತಿರ ಹತ್ತಿರ
ಇಲ್ಲದಿದ್ದರೆ ಓಡಿ ಹೋಗುವರು
ದೂರ ದೂರ

ಇದ್ದಾಗ ಕೊಡುವುದಿಲ್ಲ
ಒಂದೊಂತ್ತಿನ ಅನ್ನ
ಸತ್ತಾಗ ಮಾಡಿ ತಿನ್ನುವರು
ಪಿಂಡದ ಅನ್ನ

ಇದ್ದಾಗ ದೂರ ತಳ್ಳುವರು
ಸತ್ತಾಗ ಮುತ್ತಿಕೊಳ್ಳುವರು
ಬಿಟ್ಟು ಹೋದದ್ದನ್ನು
ಬಾಚ್ಚಿಕೊಳ್ಳುವರು

- ರಾಜು ಹಾಸನ

27 Aug 2020, 06:09 pm

ಗೆಳಯ-ಗೆಳತಿಯರಿಗಾಗಿ

ಪ್ರೀತಿಯೆಂಬುದು
ಬಳ್ಳಿಯ ಹೂವಿನಂತೆ
ನೋಡಲು ಬಲು ಚಂದವೆಂದು
ನೋಡಬೇಕೆ ಹೋರೆತು
ಮುಟ್ಟಿದರೆ ಚುಚ್ಚುವುದು
ಬಳ್ಳಿಯ ಮುಳ್ಳಿನಂತೆ
ಸುರಿಯುವುದು ರಕ್ತ
ಹರಿಯುವುದು ಕಣ್ಣೀರು
ಪ್ರೀತಿಯಲ್ಲಿ ಬಿದ್ದರೆ
ಪ್ರೇಮಿಯಾಗುವರು
ಪ್ರೀತಿಯಲ್ಲಿ ಸೋತರೆ
ಹುಚ್ಚರಾಗುವರು
ಕೈ ಕೊಟ್ಟು ಹೋದ ಪ್ರೀತಿ
ಕಲಿಸುವುದು ಜೀವನದ ಪಾಠ

- ರಾಜು ಹಾಸನ

27 Aug 2020, 12:15 am