Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅಗಲಿಕೆ

ಒಂದೇ ಪ್ರಾನದಂತಿದ್ದೇವು
ನಾನು ನೀನು
ಒಡೆದ ಚೂರು ಗಳಾದೇವು
ನೀನು ನಾನು//

ಒಂದಾಗಿ ಬಾಳ ಲೆಂದೇವು
ನಾನು ನೀನು
ಒಬ್ಬಂಟಿ ಯಾಗಿರಬೇಕಾಯಿತು
ನೀನು ನಾನು//

ಒಮ್ಮೆಲೆ ಚಿಗುರ ಬೇಕೆಂದೆವು
ನಾನು ನೀನು
ಚಿವುಟಿದ ಚಿಗುರೆಲೆ ಯಾದೇವು
ನೀನು ನಾನು//

ಬೆಳದಿಂಗಳು ಆಗ ಬೇಕೆಂದೇವು
ನಾನು ನೀನು
ಬಾಡಿದ ಎಲೆ ಗಳಾದೆವು
ನೀನು ನಾನು//

ಬೀದಿಗೆ ಬೆಲ್ಲ ವಾಗ ಬೇಕೆಂದೇ ವು
ನಾನು ನೀನು
ಸಾಗರದ ಎರಡು ದಡಗಳಾದೆವು
ನೀನು ನಾನು//

ಕಲ್ಮೇಶ ಬಡಿಗೇರ
9743539657
.........ಬಾದಾಮಿ.....

- Kalmesh Badiger

24 Aug 2020, 09:58 pm

ನನ್ನವಳು

ನನ್ನವಳು ಸಣ್ಣಾಕಿ
ಸಿಹಿಬೆಲ್ಲ ತಿನ್ನಾಕಿ
ಮನಬಿಚ್ಚಿ ಮಾತಾಡಿ
ಮೃದು ಮನಸ ಕದ್ದಾಕಿ//

ಸುಮ್ಮ ಸುಮ್ಮನೆ ನಕ್ಕಾಕಿ
ನಕ್ಕೆನ್ನ ಸೇಳೆದಾಕಿ
ಮರೆಯಲ್ಲಿ ನಿತ್ಕೊಂಡು
ವಾರಿನೋಟ ಬಿರ್ದಾಕಿ//

ಸೇವಂತಿ ಮುಡ್ಕೊಂದು
ಸರ ಸರನೆ ನಡೆಯೋಕೆ
ಮಲ್ಲಿಗೆ ಹೂ ಮೋಗ್ಗಂತೆ
ಮುಗುಳ್ನಕ್ಕು ಹೋದಾಕಿ//

ಹಾಡಂದ್ರೆ ಬಲು ಇಷ್ಟ
ಹಾಡೋದು ಬಾಳ ಕಷ್ಟ
ಒಮ್ಮಿಷ್ಟ ಆದ್ಮೇಲೆ
ಬಿಟ್ಟಕೊಡಲ್ಲಂತ ಹೇಳ್ದಾಕಿ//

ನೀವ್ ಬಂದ್ರಿ ಕನಿಸ್ನ್ಯಾಗ
ನಾವ್ ನಿಮ್ಮ ಮನಿಸ್ನ್ಯಾಗ
ಕುಂತ್ರ್ಯಾಕ ಸುಮ್ಕ ಅಂತಾ
ಚಿಂತಿನ ಮರ್ಸಿದ್ಯಾಕಿ//

ಕಲ್ಮೇಶ ಬಡಿಗೇರ
9743539657
....... ..ಬಾದಾಮಿ...........

- Kalmesh Badiger

24 Aug 2020, 09:38 pm

ತೂಗುಯ್ಯಾಲೆ

ಜೀವನವೊಂದು ತೂಗುಯ್ಯಾಲೆ,
ಎಲ್ಲವೂ ಆ ಸಷ್ಟಿಕತ೯ನ ಲೀಲೆ,
ದಾರಿಗಳುಂಟು ಸಾಧನೆಯ ಹಾದಿಯಲ್ಲೆ,
ಅರಸುವುದೇತಕೆ ಎಲ್ಲೆಡೆ..?
ಸುಖವುಂಟು ಮುಂದೊಂದು ದಿನ,
ತಾಳ್ಮೆ ಬೇಕು ಆ ಒಂದು ಕ್ಷಣ,

ದು:ಖವು ಒಂದು ಮರೀಚಿಕೆ,
ಮರೆಮಾಚುವುದು ಒಂದಲ್ಲ ಒಂದು ದಿನ, ಚಿಂತಿಸುವುದೇತಕೆ..?
ಜೀವನವೊಂದು ತೂಗುಯ್ಯಾಲೆ..!

- Megha

24 Aug 2020, 08:36 pm

ಮನಸ್ಸು ಮೆಚ್ಚಿದೆ..

ನನ್ನ ಅಂಗೈಯಲಿ ನಿನ್ನ ಹೆಸರನ್ನು ಬರೆದು ಕೂಗಿರುವೆ ಕೇಳು.
ನಿನ್ನ ಅಂಗಾಲಿನಲಿ ನನ್ನ ಮನಸ್ಸನ್ನು ತುಳಿದು ನೀ ಎಲ್ಲಿ  ಹೊರಟಿರುವೆ ಹೇಳು.
ನಿನ್ನ ಕಾದು ಕಾದು ಕಾಲನೆ ಕಳೆದುಹೋಗಿದೆ.
ಕ್ಷಮಿಸಿ ಓಪ್ಪಿಕೊಳದಂತ ತಪ್ಪು ನಾ ಏನು ಮಾಡಿದೆ.
ನನ್ನ ಕಾಡೊ ನಿನ್ನ ಕಣ್ಣಿಗು ಕೂಡ ನಾನು  ಕಾಣದಗಿದೆ.
ಸಾರಿ ಸಾರಿ ಕೂಗಿದರು ಕೇಳದಷ್ಟು ದೂರ ನೀನು ಸಾಗಿದೆ.
ಕಣ್ಣಾ ಕಾಯೋ ರೆಪ್ಪೆಕೂಡ ತನ್ನ ಕಣ್ಣ ತಾನೇ ಚುಚ್ಚಿದೆ.
ನನ್ನ ಮನಸ್ಸಿಗೇನು ತಿಳಿಯುತ್ತಿಲ್ಲ , ನಿನ್ನ ಮರ್ಮ ಏನಿದೆ.
ಬೇಡಿ ಬೇಡಿ ಕೇಳಿದರೆ, ಅದರಲ್ಲಿ ಪ್ರೀತಿ ಎಲ್ಲಿದೆ.
ಬೇಡ ಎಂದು ಹೇಳಿ  ಹೊರಟವಳನ್ನೇ ಮನಸ್ಸು ಮೆಚ್ಚಿದೆ.

- NaveenkumarK

24 Aug 2020, 12:32 pm

ಇದೇ ನಿಜ

ಪರರನ್ನು ನಂಬಿ
ಬದುಕುತ್ತಿರುವ
ಏಲೇ ಮಾನವ....

ಪ್ರಯಾಣದ
ದಾರಿಯಲ್ಲಿ
ದಿಕ್ಕು ತಪ್ಪಿಸುವವರು
ಅವರು

ಉತ್ತಮ ಧ್ಯೇಯ
ಒಂದು ಇರಲಿ ನಿನ್ನ ಬಳಿ

ಹಸನಾಗುವುದು ನಿನ್ನ ಬದುಕು
ಅಸೂಯೆ ಪಡುವವರ ಮುಂದ..!

- Mahesh Rk

24 Aug 2020, 12:02 am

ಕಾಲ...

ಕಾಲ ಸದಾ ಓಡುವವನು
ಜೊತೆಗಿರುವ ಘಳಿಗೆ ಶಾಶ್ವತವೇನು?
ಇಂದು ಮುಂದಿನ ಘಳಿಗೆಗಳಲಿ
ಸ್ಥಿರಸ್ಮಿತವಿರಲಿ ವದನದಲಿ

- ಶ್ರೀಕಾವ್ಯ

23 Aug 2020, 10:09 pm

ದಿಗಂತದಂಚಿಗೆ

ಮರೆಯದೆ ಬಂದು ಬಿಡು
ಊರ ಕೊನೆಯ ಎಡ ತಿರುವಿಗಿರುವ
ದಿಗಂತದಂಚಿನತ್ತ...

ಕಾಯುತ್ತಿರುತ್ತೇವೆ ನಿನಗಾಗಿ,
ಭೂಮಿ, ಬಾನು ಮತ್ತು ನಾನು...

- ಶ್ರೀಕಾವ್ಯ

23 Aug 2020, 01:01 pm

ಶೃಂಗಾರ ಕಾವ್ಯ

ಬಳುಕುವ ಬಳ್ಳಿಗೆ
ಹೂಗಳೆ ಸಿಂಗಾರ
ನಗು ತುಂಬಿದ
ನಿನ್ನ ಮುದ್ದು ಮುಖಕ್ಕೆ
ಮೂಗುತಿಯೇ ಸಿಂಗಾರ
ಕುಣಿಯುವ ನವಿಲಿಗೆ
ಗರಿಗಳ ಅಲಂಕಾರ
ಒಲವು ತುಂಬಿದ
ನಿನ್ನ ಮುದ್ದು ಹೃದಯಕ್ಕೆ
ಪ್ರೀತಿಯ ಅಲಂಕಾರ

- ರಾಜು ಹಾಸನ

23 Aug 2020, 10:48 am

ನಾವು

ನಾನು ನಾನೆಂದು ಮೆರೆಯದಿರು ಮನುಜ
ಜೀವನ ಕ್ಷಣಿಕ ಮಾತುಗಳು ಮಾಣಿಕ್ಯ
ಸಹೋದರರ ಮಧ್ಯ ಬಿರುಕು ಸಹಜ
ಬಿರುಕಿನಿಂದ ಸಂಬಂಧ ಕೂಡಿಸುವುದೇ ಚಾಣಕ್ಯ

ಸಂಸಾರದ ಸಾಗರದಲ್ಲಿ ಜಲಚರಗಳಂತೆ ನಾವುದೊಡ್ಡದೂ ಚಿಕ್ಕದೂ ಸಮಸ್ಯೆಗೆ ಪರಿಹಾರವು
ಪ್ರಹಾರವಲ್ಲ ಉತ್ತರಿಸುವ ಪ್ರಕಾರವು
ನಡವಳಿಕೆಯೇ ಮನುಜನ ಭೂಷಣ ಪ್ರೀತಿ ಪ್ರೇಮದ ಜೀವನ ಬೆಲ್ಲದ ಊರಣ

ಸರಳ ಬದುಕಿನ ಮೆಟ್ಟಿಲು ಮುಂದಿನ ಸಾಧನೆಯ ಮಾರ್ಗದರ್ಶನಗಳು ತಿಳಿದು ಕೊಂಡರೆ ಬದುಕಿನ ಬಾವಾರ್ಥ ನಾನೆಂಬುದು ಬರಿ ವ್ಯರ್ಥ ನಾವೆಂಬುವುದೇ ಜೀವನದ ನಿಜವಾದ ಅರ್ಥ

- RoopaGowtham

23 Aug 2020, 07:43 am

ಬರಿಯ ಹೆಣ್ಣಲ್ಲ ನಾನು..

ಬರಿಯ ಹೆಣ್ಣೆಂದು ಕರಿಯಬೇಡ ನನ್ನನು
ಶಕ್ತಿ ನಾನು ಧೈರ್ಯ ನಾನು ಉಸಿರು ನಾನು
ಜೀವನಾಡಿ ನಾನು.

ಆತ್ಮಸ್ಥೈರ್ಯವ ಕುಂದಿಸಬೇಡ
ಉಸಿರಲ್ಲಿ ಛಲದ ಅಗ್ನಿಯ ಆರಿಸಬೇಡ,
ಹೆಣ್ಣೆಂಬ ಕೀಳಿರಿಮೆ ತೊಟ್ಟ ಅಪ್ಪನ ಮನಸು ನೀನಾಗಬೇಡ, ಅಶಕ್ತಳೆಂಬ ಭಾವನೆಯೊತ್ತ
ಅಮ್ಮನ ಮೌನ ನೀನಾಗಬೇಡ.

ನಾನೇನು ಮಾಡಬಲ್ಲೆನೆಂಬುದು ಕೇಳದೆ
ಏನನ್ನೂ ಮಾಡಲಾರೆನೆಂಬ ಊಹೆಯೊತ್ತ
ಸಮಾಜದ ಜೊತೆಗೆ ನೀ ಸಾಗಬೇಡ,
ಕನ್ನೆಂಜಲು ಉಪ್ಪೆಂದು ಸಿಹಿ ನಗೆಯ
ಸವಿ ನೀ ಮರಿಯಬೇಡ.

ನೊಂದ ಮನವೊತ್ತು ನಾ ತಿರುಗಲಾರೆ
ನೋವ ಕಳೆದುಹಾಕು ದೇವರೇ ನಲಿವಿನ
ರಂಗವಳ್ಳಿಯಲ್ಲಿ ಬಣ್ಣ ನಾನಾಗಬೇಕಿದೆ,
ಜೀವ ಹರುಷ ನೋಡಬೇಕಿದೆ ಬದುಕು
ಹಸಿರಾಗಬೇಕಿದೆ ನಾನಿರುವ ಸ್ಥಳವು ನಿನ್ನ ಮನೆಯಾಗಬೇಕಿದೆ ಗರ್ಭ ಗುಡಿಯಾಗಬೇಕಿದೆ.

- ಚುಕ್ಕಿ

21 Aug 2020, 07:47 am