Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ತವರು

ಮನವು ಹಾಯಾಗಿ ತೇಲುತಿಹುದು..
ಈ ತಂಪಾದ ಗಾಳಿಯಲಿ..
ನೆನಪಾಗುವುದು ಕಳೆದೋದ ದಿನಗಳು..
ಮರುಕಳಿಸುವುದು ಅಪ್ಪ ಅಮ್ಮ ನ
ಪ್ರೀತಿಯ ಮಮಕಾರ..
ಅಮ್ಮನೊಂದಿಗಿನ‌ ಪ್ರೇಮ...
ಅಪ್ಪನೊಂದಿಗಿನ ಧೈರ್ಯ
ತಮ್ಮನ ವಾತ್ಸಲ್ಯ...
ಅಣ್ಣ‌ತಂಗಿಯರ‌ ಪ್ರೀತಿ...
ಸಂಬಂಧಿಕರ ಕರುಣೆ..
ಮನವ ಉಲ್ಲಾಸಿಸುವವ ಗಾಳಿಯ ಹಾಗೆ
ಈ ನೆನಪುಗಳು ಹೃದಯಕೆ ತಂಪೆರೆದಂತಿದೆ..
ಅವಾಗವಾಗ ಬಂದು‌‌‌ ಹೋಗುತ್ತಿರು
ಮನವನು‌ ಶಾಂತವಾಗಿರಿಸಲು..
@ಮೇಘ ಗಣೇಶ್

- Megha s

11 Aug 2020, 01:26 pm

ಗುರು

ನಿನಗೆ ನೀನೇ ಗುರು,
ನಿನಗೆ ನೀನೇ ಶಿಷ್ಯ,
ನಿನಗೆ ನೀನೇ ಆತ್ಮಬಲ,
ನಿನ್ನನ್ನು ಅರಿತರೆ ನೀನೇ ಗುರು

- Praveena kumara Nadalmani

10 Aug 2020, 11:52 pm

ಅಗ್ಗದ ಸಂತೆ

ಅಗ್ಗದ ಸಂತೆಗೆ ಹಿಗ್ಗಿಂದಾ ಹೋಗಿ
ಮುದುಕಿ ಮುಗ್ಗರಿಸಿ ಬಿದ್ದಿತ್ತಾ
ಹುಗ್ಗಿಯಂತಾ ಹುದಲಾಗ ಸಿಕ್ಕೊಂಡು
ಮುದುಕಿ ಸುದ್ಯಾಗಿ ಹೋಗಿತ್ತ

ಸರ್ರೆಂದು ಬಂದು ಸುಂಟರ ಗಾಳಿ
ಮುದುಕಿಯ ಸುತಗೊಂಡು ಬಿಟ್ಟಿತ್ತ
ಬರ್ರೆಂದು ಬಂದ ರಪ - ರಪಾ ಮಳೆ
ಬಿಡದ ಹೊಡೆಯುತಾ ನಿಂತಿತ್ತಾ

ಸಂತೆ ಚೀಲವು ನೀರಲಿ ಮುಳುಗಿ
ತೇಲುತ ಮಾಯ ವಾಗಿ ಹೋಗಿತ್ತ
ಜಿಗಟಾದ ಮಣ್ಣು ಬೀಡಲಾರ್ದೆ
ಮುದುಕಿಯ ಕಾಲನು ಹಿಡಿದಿ ತ್ತ

ಕಾಲನು ಕಿಳ ದೆ ಜೀವವ ಉಳಿಸಲು
ಮುದುಕಿ ಒದ್ದಾಡ್ತ ನಿಂತಿತ್ತಾ
ಅಗ್ಗದ ಸಂತೆಗೆ ಚೀ ಥೂ ಅಂತಾ
ಮುದುಕಿ ಉಗಿಯುತ ನಿಂತಿತ್ತಾ

ಪಡ್ಡೆ ಹುಡುಗರ ಸಹಾಯದಿಂದ
ಮುದುಕಿ ಪಾರಾಗಿ ಬಂದಿತ್ತಾ
ಪ್ರಾಣ ಉಳಿಸಿದ್ರಿ ಪರಮಾತ್ಮ
ನಿವೆಂದು ಹೋಗಳುತಾ ಕುಂತಿತ್ತ


ಕಲ್ಮೇಶ ಬಡಿಗೇರ
9743539657
..........ಬಾದಾಮಿ........

- Kalmesh Badiger

10 Aug 2020, 12:04 pm

26/11

ಬಾಂಬೆ ಎಂಬ ಹೆಸರು ನೆನೆದರೆ
ಬಹಳ ಬಯವಾಗುವುದಲ್ಲ
ಮುಗ್ಧ ಜನಗಳ ಪ್ರಾಣವ ಕೀಳುವ
ಮಹಾ ಮುಂಬೈ ಎನುವರಲ್ಲ. //

ಕ್ರೂರ ರಾಕ್ಷಸರು ನೀರಿಂದ ಬಂದು
ಮುಂಬೈ ಊರೊಳಗೆ ಹೊಕ್ಕರಲ್ಲ
ಸಿಕ್ಕವರನ್ನು ಗುಂಡಿಟ್ಟು ಕೊಲ್ಲುತಾ
ಹೆಣಗಳ ರಾಶಿ ಹಾಕಿದರಲ್ಲ. //

ಹೊತ್ತಿ ಉರಿಯಿತು ತಾಜ್ ಹೋಟೆಲ್
ಒತ್ತಿ ಯಾಯಿತೋ ನಾರಿಮನ್ ಹೌಸ್
ಸುಟ್ಟ ಹೆಣಗಳ ಕೆಟ್ಟ ವಾಸನೆಯು
ಹೊರ ಹೊಮ್ಮಿ ಬಂದಿತಲ್ಲಾ. //

ಉಗ್ರರ ಮಣಿಸಲು ದಿಟ್ಟ ಪೊಲೀಸರ
ದಂಡೆ ಸೇರಿತಲ್ಲ, ಹಗಲಿರುಳೆಲ್ಲಾ
ಹೋರಾಡಿ ಉಗ್ರರ ಮೆಟ್ಟಿ ನಿಂತರಲ್ಲ
ಸ್ವತಃ ತಾವೇ ಪ್ರಾಣ ಕೊಟ್ಟರಲ್ಲಾ. //

ಹೇಮಂತ್ ಕರ್ಕರೆ ವಿಜಯ ಸಾಲಸ್ಕರ್
ಹೋರಾಡುತ್ತಾ ಪ್ರಾಣ ಬಿಟ್ಟರಲ್ಲ
ಅಶೋಕ್ ಕಾಮ್ಟೆ ಉನ್ನಿಕೃಷ್ಣ ಕಮಾಂಡರ್
ಹೊರಾಡ್ತ ವೀರ ಮರಣ ಹೊಂದಿದ ರಲ್ಲ. //


ಕಲ್ಮೇಶ ಬಡಿಗೇರ
9743539657
. ......ಬಾದಾಮಿ.....

- Kalmesh Badiger

10 Aug 2020, 11:35 am

ತಣ್ಣನೆಯ ಗಾಳಿಯಲಿ...ತುಂತುರು ಮಳೆ...ಹಕ್ಕಿಗಳ ಚಿಲಿಪಿಲಿ..

ತಣ್ಣನೆಯ ಗಾಳಿಯಲಿ...ತುಂತುರು ಮಳೆ...ಹಕ್ಕಿಗಳ ಚಿಲಿಪಿಲಿ...!!
ಗಾಢವಾದ ರಾತ್ರಿಯೊಂದು...ಕಳೆದು ಹೊಸತೊಂದು...ದಿನದ ಆರಂಭದಲಿ...*
ಬಾರವಾದ ಮನಸು..ಹಗುರವಾದಂತೆನಿಸಿರಲು....*
ಬೆಚ್ಚನೆಯ ಸ್ಪರ್ಶವೊಂದು...ಮೈತಾಗಿ ಕಣ್ತೆರೆದರೆ..ಎದುರಿನಲಿ ನೀನು….!!
ಬೆಚ್ಚಿ ಎದ್ದವನಿಗೆ...ತನ್ನ ಹೆಗಲಾಸರೆ...ನೀಡಿ ಎದೆಗೊರಗಿಸಿಕೊಂಡಿರಲು...*
ನಿನ್ನೆಯ ಬೇಸರವ ನೆನೆದು...ಕಣ್ಣಂಚಿನಲಿ ಜಾರಿದ ನೀರ..ನೋಡಿ...*
ನಿನ್ನ ಕಣ್ಣಲೂ...ಮೂಡಿದ ನೀರು...ನನ್ನ ಕೆನ್ನೆಯ...ಮೇಲೆ ಜಾರಿ ಬಿದ್ದಿರಲು...!
ಬಿಕ್ಕಿ ಬಿಕ್ಕಿ ಅತ್ತವನಾ...ಹಣೆಯ ಮೇಲೊಂದು...ಪ್ರೀತಿಯ ಮುತ್ತನಿತ್ತು...!!
ಕ್ಷಮೆಯಾಚಿಸಿ ಎಲ್ಲಿ..ಮರೆಯಾಗಿರುವೆ...ನನ್ನ....ಗೆಳತೀ...!!
dhanu

- Dinesh hosalli dhanu

09 Aug 2020, 10:26 pm

ವಿಶ್ವಾಸ

ಮನದಲ್ಲಿರುವ ಅಂಜಿಕೆಯನು ಹಿಮ್ಮೆಟ್ಟಿನಿಲ್ಲುವ ಸಮಯವಿದು..
ಛಲದಿಂದ ಸಾಧಿಸುವ ದಾರಿ‌ಯಿದು..
ಮನಸ್ಸಲ್ಲಿ‌ ಗುರಿಯಿರಲಿ..
ಕಣ್ಣಲ್ಲಿ‌ ನಂಬಿಕೆ‌ ಇರಲಿ..
ದೃಷ್ಟಿಗಿಂತ ದೃಷ್ಟಿ ಕೋನ‌ ಸರಿಯಾಗಿರಲಿ..
ಎಲ್ಲರೂ ನಮ್ಮವರೆಂಬ ಭಾವನೆಯಿರಲಿ..
ಎಲ್ಲಾ ಒಳ್ಳೆಯದಾಗುವುದೆಂಬ ವಿಶ್ವಾಸವಿರಲಿ..
ಬಿಡಬೇಡ ಪ್ರಯತ್ನವ ಎಂದಿಗೂ..
ನೆರವಾಗುವುದು ಇವೆಲ್ಲಾ ನಿನ್ನ ಗುರಿ ಸೇರಲು..
ದೇವರ ಮೇಲೆ ಭಕ್ತಿ ಇರಲಿ..
ಬಾಳು ಬಂಗಾರವಾಗುವುದು..
@ಮೇಘ ಗಣೇಶ್

- Megha s

09 Aug 2020, 07:07 pm

ಭಾನು

ಕವಿದ ಅಜ್ಞಾನದ ಮೋಡವ
ಸರಿಸಿ ಮೂಡಿದನಾ ಭಾನು
ಆಗಸದಿ ಮೂಡಿದನಾ ಭಾನು
ಗಗನದಲ್ಲಿ ಮೂಡಿದನಾ ಭಾನು

ಚಿಗುರಿದ ಚಿಗುರೆಲೆಗಳ ಹಿಂದೆ
ಕುರಿಗಳ ಮಂದೆಯ ಮುಂದೆ
ಮೂಡಿದನಾ ಭಾನು ಆಗಸದಿ
ನಗುತಲಿ ಮೂಡಿದನಾ ಭಾನು

ಕರುವಿನ ಅಂಬಾ ಧ್ವನಿಗೆ
ಕೊರಳಿನ ಹಾರವ ಧರಿಸಿ
ಮೂಡಿದನಾ ಭಾನು ಆಗಸದಿ
ನಗುತಲಿ ಮೂಡಿದನಾ ಭಾನು

ಹಕ್ಕಿಯ ಚಿಲಿ - ಪಿಲಿ ಹಾಡಿಗೆ
ಚಂದ್ರನ ತವರಿಗೆ ಕಳಿಸಿ
ಮೂಡಿದನಾ ಭಾನು ಆಗಸದಿ
ನಗುತಲಿ ಮೂಡಿದನಾ ಭಾನು

ಕರಿ ಕಾರ್ಮೊಡದ ಹಿಂದೆ
ಕಡುಗೆಂಪು ಮುಖ ತೋರಿ
ಮೂಡಿದನಾ ಭಾನು ಆಗಸದಿ
ನಗುತಲಿ ಮೂಡಿದನಾ ಭಾನು

ಕಲ್ಮೇಶ ಬಡಿಗೇರ
9743539657
. ......ಬಾದಾಮಿ.......

- Kalmesh Badiger

09 Aug 2020, 02:10 pm

ಭಾರತಾಂಬೆ

ನಮಿಸಿರಿ ಇದೋ ತಾಯಿ
ಭಾರತಾಂಬೆ ಯು ಇವಳು
ತ್ರಿವರ್ಣ ದ ಧ್ವಜವನ್ನವಳು
ಎತ್ತಿ ಹಿಡಿದು ತೊರುತ್ತಿಹಳು //ಪ//

ತಲೆಯಮೇಲೆ ಹಿಮದ ಗಿರಿ
ಅಡಿಗೆ ಮೂರು ಶಾಂತ ಜಲಧಿ
ನಾರುಮಡಿಯ ಉಟ್ಟು ನಿಂತು
ಕಿರು ನಗೆಯ ಬೀರುತಿಹಳು //ಚ// //೧//

ಬೇದ ಭಾವವನ್ನು ಅಳಿದು
ಭಾರತೀಯ ರಾಗಿರೇನುತಾ
ಶಾಂತಿಮಂತ್ರ ಕೈಯ್ಯಲ್ಹಿಡಿದು
ಭರದಿ ಮುಂದೆ ಸಾಗುತಿಹಳು //೨//

ಜಾತಿ _ಬೇದ ವನ್ನು ಮರೆತು
ಜಗಕೆ ದೀಪ ವಾಗಿರೇನುತ
ಜಯದ ಮಾಲೆ ಹಾಕಿಕೊಂಡು
ಜನಕೆ ಅಭಯ ನೀಡುತಿಹಳು //೩//

ಅಂಬೆ ನಿನ್ನ ಕರದ ಕರುಣೆ
ಎಮ್ಮ ಶಿರದ ಮೇಲೆ ಇರಲಿ
ಶಾಂತ ಮೂರ್ತಿ ಭಾರತಾಂಬೆ
ನಿನಗೆ ನಮಿಸುತಿಹೇವು ತಾಯಿ //೪//


ಕಲ್ಮೇಶ ಬಡಿಗೇರ
9743539657
............ಬಾದಾಮಿ........

- Kalmesh Badiger

09 Aug 2020, 01:02 pm

ಸತ್ತ ಪ್ರಜೆಗಳು 

ಕೊಂದರಪ್ಪ ಕೊಂದರು ಧರ್ಮವನ್ನೆ ಕೊಂದರು ಧರ್ಮವಂತರಾದ ಭಾರತೀಯರನ್ನೆ ಕೊಂದರು ಸುಟ್ಟರಪ್ಪ ಸುಟ್ಟರು ಸತ್ಯವನ್ನೇ ಸುಟ್ಟರು ಸತ್ಯವಂತರನ್ನ ಜೀವಂತ ಸುಟ್ಟು ಬಿಟ್ಟರು ಅಧಕಾರವೆಂಬ ಹೆಂಡ ಕುಡಿದು
ಸಿಕ್ಕ ಸಿಕ್ಕವರ ತುಳಿದು ತುಳಿದು
ಜನ್ಮ ಕೊಟ್ಟ ತಾಯಿಯನ್ನೆ ಮಾರಿಬಿಟ್ಟರು 


ಓದು ಬರಹ ಬರೋದಿಲ್ಲ ಕುರ್ಚಿ ಮೇಲೆ ಕೂರೊ ಆಸೆ ಮುಚ್ಚಿಕೊಂಡು ತಿರುಗಬೇಕು ನಾವು ಅವರ ಮೀಸೆ ನಾವು ಎಷ್ಟೇ ಒದ್ದಾಡಿದ್ರು ಸಿಕ್ಕೋದು ಪುಡಿ ಕಾಸೆ ಕಾಲು ಇಟ್ಟ ಕಡೆ ಎಲ್ಲ ಬರಿ ಚುಚ್ಚೋ ಮುಳ್ಳೆ ಸಿಕ್ಕುತೈತೆ ಕಣ್ಣು ಬಿಟ್ರೆ ಸುತ್ತ ಮುತ್ತ ಪಾಪಸ್ಕಳ್ಳಿ ಹೂವೆ ಕಾಣುತೈತೆ ಪಾಪ ಹೆಣ್ಣು ತಾನೆ ಹೆಂಗೆ ಮುಡಿಗೆ ಮುಡ್ಕೋತೈತೆ ಎದ್ದು ನಿಂತು ಪ್ರಶ್ನೆ ಮಾಡೋರ್ಯಾರು ಇಲ್ಲ 
ಕುತ್ಗೆ ಪಟ್ಟಿ ಹಿಡಿದು ಕೇಳೊ ಭೂಪ ಹುಟ್ಟೇ ಇಲ್ಲ
ನಾವು ನೀವು ತೆಪ್ಪಗಿರೋದು ಒಳ್ಳೇದಲ್ವ 
ಥೂ...... ನಮ್ ಜನ್ಮಕೆ 


ಒಳ್ಳೆ ವ್ಯಕ್ತಿ ನೋಡಲಿಲ್ಲ ಮತ ಹಾಕಿ ಬಿಟ್ಟೆವಲ್ಲ 
ದೇಶ ಪೂರ ದೋಚೋಕೆ ಸಿದ್ದರಾಗಿಬಿಟ್ಟರಲ್ಲ
ವಿಷವೃಕ್ಷದಂತೆ ಬ್ರಷ್ಟಚಾರ ಹುಟ್ಟಿ ಕೊಂಡಿತಲ್ಲ 
ಗಾಂಧಿ ಬುದ್ಧ ನೇತಾಜಿಯನ್ನು ನೆನೆಯಲಿಲ್ಲ ಲಂಚವೆಂಬ ಭೂತ ಸಿಕ್ಕ ಸಿಕ್ಕವರ ದೋಚಿಕೊಂಡು ತಾಯ ಬಿಟ್ಟು ಮಲತಾಯ ಆರೈಕೆ ಮಾಡಿಕೊಂಡು ಎಷ್ಟು ಹೊತ್ತು ಕೂರೋದು ಕಣ್ಣು ಮುಚ್ಚಿಕೊಂಡು ಆದ್ರೂ ನಾವು ಎದೆ ತಟ್ಟಿಕೊಂಡು ಹೇಳಬೇಕು 
ಭವ್ಯ ಭಾರತದ ಸತ್ತ ಪ್ರಜೆಗಳು 
ಎಲ್ರೂ ಹೇಳಿ ನಾವು ಸತ್ತ ಪ್ರಜೆಗಳು

- ಜಿ. ಪ್ರಕಾಶ್

09 Aug 2020, 03:36 am

ನರಜನ್ಮ

ದೇಹದ ರಾಜ್ಯಕೆ ಮನಸೆ ಅರಮನೆ 
ಆತ್ಮವೇ ರಾಜಕುಮಾರ 
ಸತ್ಯದ ತೇರಿಗೆ ನ್ಯಾಯವೇ ಕುದುರೆ 
ಜ್ಞಾನವೇ ಕೈಚಾಟಿ 
ಹೊರಡಲಿ ಜೀವನ ಯಾನ

ಪ್ರಕೃತಿ ದೇಗುಲ ದುಡಿಮೆಯೇ ದೇವರು 
ಶ್ರಮವೇ ಆರಾಧನೆ ವಿದ್ಯೆಯು ಶಿಖರ 
ಸಾಧನೆ ಗೋಪುರ ಛಲವೇ ನಿನ್ನಯ ಚಲನೆ

ನಗುವೇ ಮಲ್ಲಿಗೆ ಸ್ನೇಹವೇ ಸೌಗ೦ಧ 
ಆಸೆಗಳೇ ನೆರೆಹೊರೆಯವರು
ಹುಟ್ಟು ಹಗಲು ಸಾವು ಇರುಳು 
ನೆನಪುಗಳೇ ಘಳಿಗೆಗಳು

- ಜಿ. ಪ್ರಕಾಶ್

09 Aug 2020, 03:31 am