ನೀನು ನಗುತಿದ್ದರೆ ಹೊಳೆ ಬೋರ್ಗರೆತ ಎದೆಯಲ್ಲಿ ಕಾಮನೆಗಳ ಕಾನನಸುತ್ತಿ
ಬಯಕೆ ಬೆಟ್ಟದೆಗಲ ಮೇಲೆ ಕೈ ಚಾಚಿ
ಮುಖ ವಾಲಿದಾಗೊಮ್ಮೆ ಜಾರಿದ ಜೋಗದಂತಾ ಝಳಪು.
ಅಲ್ಲಿ.... ಬಿರುಬಿಸಿಲು ಮಳೆಗೆ ಮೂಡಿದ ಕಾಮನಬಿಲ್ಲು
ಕುಳಿತ ಹುಡುಗ ಚಿತ್ರ ಅಳಿಸಿ ರಬ್ಬರನಿಂದ....ಎಳೆದು ಹೊಸ ಮುಖ ರೇಖೆ
ಮಾಗಿದ ಬದುಕಿಗೆ ಒಡಲಾಳ ಒರತೆ ನೀರು ನಿನ್ನದು .....ನನಗೇನಿದ್ದರೂ ಬೊಗಸೆ ತುಂಬ ಅಲ್ಲದಿದ್ದರೂ ಮುಷ್ಟಿ ತುಂಬ ....ಇರಲಿ ಬಿಡು .....
ಹಾದ್ಯಾಗಿನ ಅವರೆಹೂ ಯಾರ ಮುಡಿಗೇರಿದೆ ಹೇಳು?
ಯಾರಾದರೂ ಮುಟ್ಟಿದ್ದಾರೆಯೇ ಹೇಳು?
ಯಾರಾದರೂ ದಿಟ್ಟಿಸಿದ್ದಾರೆಯೇ ಹೇಳು
ಪಾಡುಗಳು ಅವರವರಿಗೆ ಅವರದೇ ದೊಡ್ಡವು.
ಹಾಡುಗಳು ಅವರವರಿಗೆ ಅವರದೇ ನಾದಗಳು.
ನಾದ ಲಯ ಸ್ವರದೇರು ತೇರು ಭಂಗಿ ನಾನು-"ಭಾವ ನೀನು".
ಪ್ರೀತಿಯೆಂಬುದು
ಬಳ್ಳಿಯ ಹೂವಿನಂತೆ
ನೋಡಲು ಬಲು ಚಂದವೆಂದು
ನೋಡಬೇಕೆ ಹೋರೆತು
ಮುಟ್ಟಿದರೆ ಚುಚ್ಚುವುದು
ಬಳ್ಳಿಯ ಮುಳ್ಳಿನಂತೆ
ಸುರಿಯುವುದು ರಕ್ತ
ಹರಿಯುವುದು ಕಣ್ಣೀರು
ಪ್ರೀತಿಯಲ್ಲಿ ಬಿದ್ದರೆ
ಪ್ರೇಮಿಯಾಗುವರು
ಪ್ರೀತಿಯಲ್ಲಿ ಸೋತರೆ
ಹುಚ್ಚರಾಗುವರು
ಕೈ ಕೊಟ್ಟು ಹೋದ ಪ್ರೀತಿ
ಕಲಿಸುವುದು ಜೀವನದ ಪಾಠ
ನನ್ನೋಳಗಿನ ಪ್ರೀತಿಯ ಸಂದೇಶ ತಿಳಿಸಲು ಬಂದೆ
ಒಪ್ಪಿಕೋ ನನ್ನ ಪ್ರೀತಿಯ ರಾಜಕುಮಾರಿ ...
ನಿನ್ನ ಭಾವನೆಗಳಿಗೆ ಸ್ಪಂದಿಸಿ
ನೀರೆರೆದು ಪೋಷಿಸಿ ಬೆಳಸಿ
ಪಾರಿವಾಳದಂತೆ ನಿನ್ನ ಕನಸುಗಳ
ನನಸು ಮಾಡಿ ರೆಕ್ಕೆಗಳ ಕಟ್ಟಿ
ಆಗಸದೀ ಹಾರಾಡಿಸುವೆ.....
ನನ್ನಿ ಪ್ರೀತಿಯ ಒಲಮೆಯ ತೋರು ಬಾ ಗೆಳತಿ
ನಿನ್ನ ಸೌಂದರ್ಯಕ್ಕೆ ಮಾರುವ ಹೋದ
ಮನ್ಮಥನು ನಾನು
ನನ್ನ ಹೃದಯದ ಅಂತರಾಳದಲಿ ರತಿಯಂತೆಯೇ
ಕಾಣುವೆ ನೀನು...
ನೀ ನನ್ನಿಂದ ದೂರವಾಗಿ ಪ್ರೀತಿಯ ಬೇಗೆಯಲ್ಲಿ
ಸುಟ್ಟು ಬಿಡಬೇಡ..
ಬಂದು ಸೇರು ನನ್ನ ಪ್ರೀತಿಯ ಆಹ್ವಾನಕೆ
ನನ್ನ ಎದೆಯ ಗೂಡಿನೊಳಗೆ..
ಸೀತೆಯ ಅಂದವಾದ ಸೌಂದರ್ಯಕೆ
ರಾವಣನಂತವನೇ ಮಾರುಹೋದ
ಭಗವದ್ಗೀತೆಯನ್ನೇ ಬೋಧಿಸಿದ ಶ್ರೀ ಕೃಷ್ಣ
ರಾಧೆಯ ಮನಸ್ಸನ್ನೆ ಕಳ್ಳನಂತೆ ಕದ್ದ..
ಶಿವನ ಕೋಪಕ್ಕೆ ಸುಟ್ಟು ಹೋದ
ರತಿ- ಮನ್ಮಥರು ಪ್ರೀತಿಯಲ್ಲೆ ಹೊಂದಾದರು.
ನನ್ನ ನಿಶ್ಕಲ್ಮಶ ಪ್ರೀತಿಯ ಒಪ್ಪಿಕೊ..
ಜೋತೆಯಾಗಿ ಸೇರಿ....