Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮುದ್ದುಮನ...!

ನನ್ನ ಪಿಸುಮಾತು ಕೇಳು ನೀ ಒಮ್ಮೆ..!
ಕೇಳದೆ ಹೋದೆ ನೀ ಎಲ್ಲಿಗೆ..?
ನಾ ಇಲ್ಲಿ ಕುಳಿತಿರುವೆ ಒಬ್ಬಳೇ...!
ಕಾಯುತ ನಿನ್ನ ದಾರಿಯೇ..!

- Chaithra

03 Aug 2020, 09:17 pm

ಕಂದಮ್ಮ ಕೇಳೆ..!

ಕಂದಮ್ಮ ಕೇಳೆ...!

ಮುಗ್ಗುರಿಸಿ ಬಿದ್ದು ಸಾಯಬಾರದೆ
ರೋಧನೆ ಮರೆಯಲ್ಲಿ ಮಣ್ಣಾಗಬಾರದೆ//

ಕಂದಮ್ಮ ಕಳೆ ತರುವನೆಂದು
ಕನಸು ಕಟ್ಟಿದ್ದೆ ಸೃಷ್ಠಿಕರ್ತನೆದುರು
ಬಂಜೆಯೆಂಬ ಬರಸಿಡಿಲು ಬಡಿದಿತೆ
ಸಾವೇ ಬರಬಾರದೆ ಬದುಕಿನ ಎದುರು//

ಬಯಕೆಯಿರದ ಬಸುರಿಯಾಗದ ಜನ್ಮಕ್ಕೆ
ಇದ್ದು ಸತ್ತಂತೆ ಯಾರ ಮುಂದೆ ಹೇಳಲಿ
ಅವ್ವ- ಅಪ್ಪನಿರದ ಪರದೇಶಿ ಬದುಕಲ್ಲಿ
ದೇವರ ಪರೀಕ್ಷೆಯ ನಿರೀಕ್ಷೆಗಳೆ ಅಧಿಕವಿಲ್ಲಿ//

ಕಣ್ಣೀರ ಕಡಲಲ್ಲಿ ಕರುಳು ಬತ್ತಿವೆ
ಮನಸಲಿ-ಕನಸಲಿ ಕಂದಮ್ಮ ಕಾಡುತಿದೆ
ಅತ್ತು- ಅತ್ತು ಕಣ್ಣೀರೇ ಬಸವಳಿದಿದೆ
ಎದೆ ತಬ್ಬಿ ಮುದ್ದಾಡುವೆ ಮಗು ನೆನಪಲ್ಲಿ//

ಒಲವಿಲ್ಲದ ಬದುಕಲ್ಲಿ ಅಸುನಿಗಿದೆ ನಲಿವು
ತಬ್ಬಲಿ ಕೂಗು ಕೇಳುವವರಾರು ಓ ಆತ್ಮವೆ
ಚುಚ್ಚು ಮಾತಿಗೆ ಹೆಚ್ಚಿಗೆ ಬದುಕಲಾರೆ ಮಗುವೆ
ಬಂಜೆಸಲ್ಲ ಅಡಗಲು ಜನ್ಮವೆತ್ತಿ ಬಾರೊ ಮಗುವೆ//

ಸದಾಶಿವ ಎಂ. ಮರಡಿ
ಬಾದಾಮಿ.

- SADASIVAMARADI

02 Aug 2020, 06:34 pm

ಅಸೂಯೆ

ಪರರ ಸುಖ ನೋಡಲಾಗುವುದಿಲ್ಲ..
ತನ್ನ ಸಂತೋಷ ಹಂಚಲಾಗೋದಿಲ್ಲ..
ಇನ್ನೊಬ್ಬರ ಕೆಡುಕಿನೆಡೆಗೆ ಇವರ ಪಯಣ..
ಮನದಲ್ಲಿ ಯಾವಾಗಲೂ ಬೇಡದ ಚಿಂತೆ..
ಕೊಡಲು ಮನಸಾಗದು..
ಕೊಟ್ಟರೆ ಅವರ ಆಳಾಗಬೇಕೆಂಬ ದುರಾಸೆ.‌.
ತಾನೇ ಎಲ್ಲಾ ತನ್ನಿಂದಲೇ ಎಲ್ಲಾ ಎಂಬ ಅಹಂಕಾರ..
ಇನ್ನೊಬ್ಬರ ಕಂಡು ಹಾಸ್ಯವಾಡೊ ಮಾತುಗಳು..
ಮನದ‌ ತುಂಬಾ ಕಲ್ಮಷ..
ಬೇರೆಯವರ ಮಾತ ಕೇಳಲಾಗದು..
ತನ್ನನ್ನೇ ಎಲ್ಲರೂ ಗುರುತಿಸಬೇಕೆಂಬ ಕೆಟ್ಟ ಹಠ..
ಇದೆಲ್ಲಾ ತನ್ನ ಪಾಪದ ಕೊಡ ತುಂಬುವ ತನಕ..
ನಂತರ ಎಲ್ಲನೂ ದೇವರಿಚ್ಛೆ..
ಇವಾಗ ನಿನ್ನಿಚ್ಛ...
@ಮೇಘ ಗಣೇಶ್

- Megha s

02 Aug 2020, 03:31 pm

ಆತ್ಮ ಸಾಕ್ಷಿ

ತಪ್ಪಿಸಿಕೊಳ್ಳಬಹುದು ನಾವು ಮನುಷ್ಯರ ಕಣ್ಗಳಿಂದ
ತಪ್ಪಿಸಿಕೊಳ್ಳಲಾರೆವು ನಮ್ಮ ನಮ್ಮ ಆತ್ಮಸಾಕ್ಷಿಗಳಿಂದ
ಸುಳ್ಳು ನಾಟಕಗಳಿಗೆಲ್ಲ
ಬೇರಾವ ಸಾಕ್ಷಿಯೂ ಬೇಕಿಲ್ಲ
ಆತ್ಮ ಸಾಕ್ಷಿಯೊಂದೆ ಸಾಕಲ್ಲ

- Dima

01 Aug 2020, 09:47 pm

ದಿನಾಲು ಕಾಡುವ ನಿನ್ನ ನೆನಪುಗಳು

ಓ ನನ್ನ ಗೆಳತಿ ..ಎಲ್ಲಿರುವೆ ಹೇಗಿರುವೆ..
ನಿನ್ನ ನೆನಪು ಕಾಡುವ ಹೃದಯದಲ್ಲಿ..
ನನ್ನ ಹೃದಯದ ಬಡಿತವೇ ನಿಂತಹಾಗಿದೆ ಗೆಳತಿ...!

ನೀನು ಬಂದು ನೋಡು ವೊಮ್ಮೆ
ನನ್ನ ಜೀವ ಇದೆ ಇಲ್ಲಾ ಎಂದು..!

- PARAMANANDGALI

01 Aug 2020, 09:37 pm

ಹಾಗೆ ಪ್ರೀತಿಯೂ ಕೂಡ

..ಹಾಗೆ ಪ್ರೀತಿಯೂ ಕೂಡ..

ಆದಿ ಅಂತ್ಯ ಇಲ್ಲದ ನದಿಯಂತೆ
ಎಂದೂ ಅದು ಹುಟ್ಟಿಲ್ಲ
ಹುಟ್ಟಿಲ್ಲ ಅಂದ ಮೇಲೆ ಕೊನೆ ಇರಲು ಹೇಗೆ ಆದೀತು,
ಹರಿಯುತಿದೆ ನದಿ ನೀರು
ಹಾಗೆ ಪ್ರೀತಿಯೂ ಕೂಡ......

ಹಿಡಿದು ನಿಲ್ಲಿಸಕ್ಕಾಗದ ಸಮಯದಂತೆ
ಎಂದೂ ಅದು ಜಡವಾಗಿಲ್ಲ
ಜಡವಾಗಿಲ್ಲ ಅಂದ ಮೇಲೆ ಹಿಡಿದಿರಲು ಹೇಗೆ ಸಾಧ್ಯ ಆದೀತು,
ಬದಲಾಗುತ್ತಿದೆ ಸದಾ ದೇಹ
ಹಾಗೆ ಪ್ರೀತಿಯೂ ಕೂಡ...

ಎಲ್ಲಾ ಇದ್ದು ಏನೂ ಇಲ್ಲದ ಬಯಲಿನಂತೆ
ಎಂದೂ ಅದು ತುಂಬಿಕೊಳ್ಳಲಿಲ್ಲ
ತುಂಬಿಕೊಂಡಿಲ್ಲ ಅಂದ ಮೇಲೆ ಬರಿದಾಗಲೂ ಹೇಗೆ ಸಾಧ್ಯ ಆದೀತು,
ಅದು ಶೂನ್ಯತೆ
ಹಾಗೆ ಪ್ರೀತಿಯೂ ಕೂಡ....

ಕೂಡಿಸಿ ಕಳೆಸಿದ ಗುರುವಿನಂತೆ
ಅದು ಎಂದೂ ಕೂಡಲಿಲ್ಲ
ಕೂಡಲಿಲ್ಲ ಅಂದ ಮೇಲೆ ಕಳೆಯಲು ಹೇಗೆ ಸಾಧ್ಯ ಆದೀತು,
ಅದು ಸೊನ್ನೆ
ಹಾಗೆ ಪ್ರೀತಿಯೂ ಕೂಡ...

-..ಪ್ರವೀಣಸಿಂಗೋನಹಳ್ಳಿ..

- praveens singonahalli

01 Aug 2020, 12:17 pm

ಗಜಲ್..

ಕುಸುಮಕಿದೆ ಇರುಳಿನಲಿ ಉರುಳು ಜೋಕೆ
ಆಸೆಯ ಭೃಂಗದ ಬೆನ್ನೇರುವ ಇಂಗಿತವೇಕೆ?

ಕಣ್ತುಂಬಿದ ಚಂದ್ರಚಾಪ ಗಗನ ತೋರಿ ಮಾಸಿತು
ಕನಸ ಶೃಂಗಕೆ ಏಣಿ ಹಾಕಿ ನಲುಗುವುದೇಕೆ?

ಜೀನಿಲ್ಲದ ಕುದುರೆಯೇರಿ ಊರ ಸೇರಿದವನುಂಟೆ
ಆಸೆಯಲೆಗೆ ಹುಟ್ಟಾಕದೆ ತೀರ ಸೇರೀತೆ ಬಾಳನೌಕೆ?

ಮನದಿಡಿತಕೆ ಸಿಕ್ಕವನ‌ ಬಾಳದಾರಿಯಲಿ ನಟ್ಟಿರುಳು
ಭವಬಂಧನದ ಕತ್ತಲಲಿ ಕುರುಡಾಗಿ ಪಯಣಿಸುವುದೇಕೆ?

ಬಿದ್ದ ಹನಿಯೆಲ್ಲ ಹಿಂಗಲಿಲ್ಲ ಭುವಿಯ ಒಡಲಲಿ
ಏತಕೆ ಕಂಡ ಕನಸಿಗೆಲ್ಲ ಮಡಿಲಾಸರೆಯ ಬಯಕೆ?

ಕುಂಬಳಕೇಕೆ ಬಳ್ಳಿ, ಮರದಲಿ ನೆಲ್ಲಿ ತೂಗಿತು
ಬಂದದ್ದೆಲ್ಲ ಇರಲಿ ಬಾಳಲಿ, ಬೇಕೆ ಹೋಲಿಕೆ?

ಹೂವು ಅರಳಿ ಜಗ ಕಾಣಲು ಮುಳ್ಳಿನ‌ ಕಾವಲು
ಮನ ದಣಿದು ತಣಿದು ಕಾವ್ಯವಾಗದ ಬದುಕೇಕೆ?

- ಶ್ರೀಕಾವ್ಯ

01 Aug 2020, 07:03 am

ಸಾಹಿತ್ಯ ಸಂಜೀವಿನಿ -ಮುಕ್ತ - ವಿಮುಕ್ತ

ಎಂದಿಗಯ್ಯ ಎಂದಿಗೆ ಕಾಲ ಯಮನ ಅಟ್ಟಹಾಸ ಕೊನೆಯಾಗುವುದು ಎಂದಿಗೆ???

ಸಣ್ಣ ಜೀವಿ ಸೂಕ್ಷ್ಮಜೀವಿ ಅಣುವಿನಷ್ಟು ಗಾತ್ರ ನೀನು ನಿನ್ನ ಜನನ ಅದೇ ಚೀನಾ

ಇಂಥ ಶಕ್ತಿ ಉಂಟೆ ಒಂದು ಸಣ್ಣ ಜೀವಿಗೆ?
ದಿನದಿನವು ಸಹಸ್ರ ಸಂಖ್ಯೆ ಸೋಂಕಿಗೆ!

ಪ್ರಾಣ ಹರಣ ಮಾಡಿದ್ದೊಂದೇ ಸಾಲದೆ ನಿನ್ನ ಬಯಕೆ ತೃಪ್ತಿಗೆ?
ಬದುಕಿನಲ್ಲಿ ಬವಣೆ ತಂದು ತಂದೆ ಬಾಳ ಬಂಡಿ ದುಸ್ಥಿತಿಗೆ!


ಮರೆತ ಪಾಠ ಕಲಿವ ಪಾಠ ತಂದೆ ಮನುಜ ಮತಿಗೆ

ಏನು ಹೇಳಬಯಸಿದೆ? ಯಾವ ನೀತಿ ಕಲಿಸಿದೆ?
ಏನು ನಿನ್ನ ಸಿದ್ಧಾಂತ?
ಏನು ನಿನ್ನ ರಾದ್ಧಾಂತ


ಭವ್ಯ ದೇಶ ಕಟ್ಟುವಕನಸನು ನುಚ್ಚುನೂರು ಮಾಡಿದೆ
ಕನಸು ಕಾಣೋ ಕಣ್ಮನಗಳಿಗೆ ತಣ್ಣೀರೆರಚಿದೆ?

ಕುಣಿದು ನಲಿದು ಬೆಳೆದು
ಬರುವ ಮನೆ ಮನಗಳ
ಮುಗ್ಧ ಹೃದಯ ಕುಸುಮಗಳ
ಕುಡಿಯ ಚಿವುಟಿ
ಬೀಗಮುದ್ರೆ ಹಾಕಿದೆ

ಇದು ಕಾಲ ಒಡೆಯನ ಕೋವಿಡ್ ರೂಪ
ಜೀವನ ಏರುಪೇರಿನ ಪ್ರತಿರೂಪ ಈ ಬವಣೆ ಎಲ್ಲಾ ದೇಶಗಳ ಯಥಾರೂಪ

ಲಸಿಕೆಗಾಗಿ ಕಾಯೋಣ
ಅಂತರ ಪಾಲಿಸೋಣ ಸ್ಯಾನಿಟೈಸರ್ ಬಳಸೋಣ ಶುಚಿತ್ವ ಕಾಪಾಡೋಣ
ನಿರ್ಲಕ್ಷ ಬಿಡೋಣ
ಲಕ್ಷ್ಯ ಇಡೋಣ
ಈ ಸಂಕಲ್ಪ ಮಾಡೋಣ

✍️ ನವಿಲೆ ನಾಗರಾಜು
ಕನ್ನಡ ವಿಭಾಗದ ಮುಖ್ಯಸ್ಥರು

- Naga raju

31 Jul 2020, 10:02 pm

ನರಿ

ಕಾಡಿನ ಒಳಗೆ ನರಿಯದು
ಒಂದು ಪುಟ್ಟನೆ ಮನೆಯಿತ್ತು
ಜಿಮ್ಮಿ,ಕಮ್ಮಿ,ನಿಮ್ಮಿ ಅಂತಾ
ಮರಿಗಳ ಜೊತೆ ಗಿತ್ತು

ಆಲೆ- ಮೂಲೆ ಅಲೆದು
ಸವಿಯಲು ಜೆಣನು ತರುತಿತ್ತು
ಹಾಲನು ಉಣಿಸುತಾ ಮಕ್ಕಳ
ಹೊಕ್ಕಳ ನೆಕ್ಕುತ ಲಿರುತಿತ್ತು

ಅಮ್ಮನ ಮೇಲೆ ನಿಮ್ಮಿಯು
ಜಿಗಿದು ನೆಗೆಯುತ ಲಿರು ತಿತ್ತು
ಜಿಮ್ಮಿ,ಕಮ್ಮಿ ಅಮ್ಮನ ಕೆನ್ನೆಗೆ
ಮುತ್ತನು ಕೊಡುತಿದ್ವು

ಸುಮ್ಮನೆ ಮಲಗಲು ಬಿಡದೆ
ಅಮ್ಮನ ಕಾಡುತ ಲಿರುತಿದ್ವು
ಅಮ್ಮನ ಮಾತನು ಮೀರದೆ
ಮಕ್ಕಳು ಸುಮ್ಮನೆ ಇರುತಿದ್ವು

ಜೋಗುಳ ಹಾಡುತ ಮಕ್ಕಳ
ನಿದ್ರೆಗೆ ಕಳಿಸಿಯೆ ಬಿಡುತ್ತಿತ್ತು
ಆಕಳಿಸುತ್ತಲೆ ಅಮ್ಮನೂ
ನಿದ್ರೆಗೆ ಜಾರಿ ಯೇ ಬಿಡುತ್ತಿತ್ತು


ಕಲ್ಮೇಶ ಬಡಿಗೇರ
9743539657
.........ಬಾದಾಮಿ.....

- Kalmesh Badiger

31 Jul 2020, 06:17 pm

ಕೊಲ್ಲುವುದದ್ದಾರೆ ಕೊಂದುಬಿಡು

ಕವಿಗಾರನಲ್ಲದಿದ್ದರು
ನಾ ಬರೆದೆನು ಕವಿತೆಗಳನ್ನ
ನಿನ್ನ ಒಂದೊಂದು ಮಾತಿಗೂ
ನೀ ತಿಳಿದು ತಿಳಿಯಾದೆ ಆಡಿದ ಮಾತಿಗೆ
ಹೋಡೆದೋಯಿತ್ತು ಈ ನನ್ನ ಮನಸ್ಸು
ನೀ ಕೊಲ್ಲುವ ಮನಸಿದ್ದರೆ ಕೊಂದುಬಿಡು
ಖಡ್ಗದಂತ ಮಾತುಗಳು ಏಕೆ ಗೆಳತಿ
ನಾ ಬರೆದ ಕವಿತೆಗಳು ನನಗೆ ಮುಳ್ಳಾದರು
ಹೂವಿಗಲಿ ನೀ ನೆಡೆಯೋ ದಾರಿಗೆ

- ರಾಜು ಹಾಸನ

31 Jul 2020, 10:01 am