ಬಳುಕುವ ಬಳ್ಳಿಗೆ
ಹೂಗಳೆ ಸಿಂಗಾರ
ನಗು ತುಂಬಿದ
ನಿನ್ನ ಮುದ್ದು ಮುಖಕ್ಕೆ
ಮೂಗುತಿಯೇ ಸಿಂಗಾರ
ಕುಣಿಯುವ ನವಿಲಿಗೆ
ಗರಿಗಳ ಅಲಂಕಾರ
ಒಲವು ತುಂಬಿದ
ನಿನ್ನ ಮುದ್ದು ಹೃದಯಕ್ಕೆ
ಪ್ರೀತಿಯ ಅಲಂಕಾರ
ನಾನೇನು ಮಾಡಬಲ್ಲೆನೆಂಬುದು ಕೇಳದೆ
ಏನನ್ನೂ ಮಾಡಲಾರೆನೆಂಬ ಊಹೆಯೊತ್ತ
ಸಮಾಜದ ಜೊತೆಗೆ ನೀ ಸಾಗಬೇಡ,
ಕನ್ನೆಂಜಲು ಉಪ್ಪೆಂದು ಸಿಹಿ ನಗೆಯ
ಸವಿ ನೀ ಮರಿಯಬೇಡ.
ನೊಂದ ಮನವೊತ್ತು ನಾ ತಿರುಗಲಾರೆ
ನೋವ ಕಳೆದುಹಾಕು ದೇವರೇ ನಲಿವಿನ
ರಂಗವಳ್ಳಿಯಲ್ಲಿ ಬಣ್ಣ ನಾನಾಗಬೇಕಿದೆ,
ಜೀವ ಹರುಷ ನೋಡಬೇಕಿದೆ ಬದುಕು
ಹಸಿರಾಗಬೇಕಿದೆ ನಾನಿರುವ ಸ್ಥಳವು ನಿನ್ನ ಮನೆಯಾಗಬೇಕಿದೆ ಗರ್ಭ ಗುಡಿಯಾಗಬೇಕಿದೆ.
ಪರಕಿಯರ ಕಪ್ಪಿ ಮುಷ್ಟಿ ವಿರುದ್ಧ
ಜನ ಸಾಮಾನ್ಯರ ರಕ್ಷಣೆ
ಬಡವ ಬಲ್ಲಿದರ ಸಮಾನತೆ
ಮುಗ್ಧ ಸ್ತ್ರೀಯರ ಏಳಿಗೆ
ಶೋಷಿತರ ಶೋಷಣೆಯ ದಮನ
ವರ್ಣ ಬೇಧದ ನಿವಾರಣೆ
ತಾಯಿನಾಡಿನ ಜನರಿಗಾಗಿ ನಡೆದ ಹೋರಾಟ
ಇಂದು ಬಡವರ ರಕ್ಷಣೆಗೆ ನಿಲ್ಲದ
ಡೋಂಗಿ ಜನ ನಾಯಕರ ಪ್ರತಿಷ್ಠೆಗಾಗಿ
ಅಂಧ ನಾಯಕರ ಅಸ್ತಿತ್ವಕ್ಕಾಗಿ
ಅಂಧ ಭಕ್ತರ ಕೆಸರೆರಚುವಾಟ
ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ
ಜನ ಸಾಮಾನ್ಯರನ್ನು ಅತ್ತೀಕ್ಕುವ
ಭ್ರಷ್ಟಾಚಾರಿಗಳ ಭ್ರಷ್ಟಾಚಾರದ ರಕ್ಷಣೆಗಾಗಿ
ನಡೆಯುವ ಹೋರಾಟವಾಗಿದೆ
ಉಳ್ಳವರು ಇಲ್ಲದವರ ನಡುವಿನ
ತಾರತಮ್ಯ ನಿಲ್ಲುವ ತನಕ
ದೀನ ದಲಿತರು,ಸ್ತ್ರೀ ಶೋಷಿತರನ್ನು
ಕಿತ್ತು ತಿನ್ನುವ ಸಮಾಜದ ವಿರುದ್ಧ
ನಿಲ್ಲದಿರಲ್ಲಿ ನಿರಂತರ ಹೋರಾಟ
ಸಮ ಸಮಾಜ ನಿರ್ಮಾಣದ ತನಕ
ಪರಕಿಯರ ಕಪ್ಪಿ ಮುಷ್ಟಿ ವಿರುದ್ಧ
ಜನ ಸಾಮಾನ್ಯರ ರಕ್ಷಣೆ
ಬಡವ ಬಲ್ಲಿದರ ಸಮಾನತೆ
ಮುಗ್ಧ ಸ್ತ್ರೀಯರ ಏಳಿಗೆ
ಶೋಷಿತರ ಶೋಷಣೆಯ ದಮನ
ವರ್ಣ ಬೇಧದ ನಿವಾರಣೆ
ತಾಯಿನಾಡು ತಾಯಿ ನಾಡಿನ
ಜನರಿಗಾಗಿ ನಡೆದ ಹೋರಾಟ
ಇಂದು ಬಡ ಜನರ ರಕ್ಷಣೆಗೆ ನಿಲ್ಲದ
ಡೋಂಗಿ ಜನ ನಾಯಕರ ಪ್ರತಿಷ್ಠೆಗಾಗಿ
ಅಂಧ ನಾಯಕರ ಅಸ್ತಿತ್ವಕ್ಕಾಗಿ ಗುದ್ದಡುವಾ
ಅಂಧ ಭಕ್ತರ ಕೆಸರೆರಚುವಾಟ
ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ
ಜನ ಸಾಮಾನ್ಯರನ್ನು ಅತ್ತೀಕ್ಕುವ
ಭ್ರಷ್ಟಾಚಾರಿಗಳ ಭ್ರಷ್ಟಾಚಾರದ ರಕ್ಷಣೆಗಾಗಿ
ನಡೆಯುವ ಹೋರಾಟವಾಗಿದೆ
ಉಳ್ಳವರು ಇಲ್ಲದವರ ನಡುವಿನ
ತಾರತಮ್ಯ ನಿಲ್ಲುವ ತನಕ
ದೀನ ದಲಿತರು,ಸ್ತ್ರೀ ಶೋಷಿತರನ್ನು
ಕಿತ್ತು ತಿನ್ನುವ ಸಮಾಜದ ವಿರುದ್ಧ
ನಿಲ್ಲದಿರಲ್ಲಿ ನಿರಂತರ ಹೋರಾಟ
ಸಮ ಸಮಾಜ ನಿರ್ಮಾಣದ ತನಕ