Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನಾ ಕವಿಗಾರನಲ್ಲದಿದ್ದರು
ನಾ ಬರೆದೆನು ಕವಿತೆಗಳನ್ನ
ನಿನ್ನ ಒಂದೊಂದು ಮಾತಿಗೂ
ನೀ ತಿಳಿದು ತಿಳಿಯಾದೆ ಆಡಿದ ಮಾತಿಗೆ
ಹೋಡೆದೋಯಿತ್ತು ಈ ನನ್ನ ಮನಸ್ಸು
ನೀ ಕೊಲ್ಲುವ ಮನಸಿದ್ದರೆ ಕೊಂದುಬಿಡು
ಖಡ್ಗದಂತ ಮಾತುಗಳು ಏಕೆ ಗೆಳತಿ
ನಾ ಬರೆದ ಕವಿತೆಗಳು ನನಗೆ ಮುಳ್ಳಾದರು
ಹೂವಿಗಲಿ ನೀ ನೆಡೆಯೋ ದಾರಿಗೆ
ಇಂತಿ ನಿನ್ನ ಗೆಳಯ
- ರಾಜು ಹಾಸನ
31 Jul 2020, 01:10 am
ಮಾತಾಡೋ ಸಮಯದಿ..
ಮೌನಿಯಾದೆ..
ಮನದ ಮಾತು ಹೇಳೊ ಸಮಯದಿ ದೂರವಾದೆ..
ಕಾಣದ ಪ್ರೀತಿ ಮನದಲ್ಲೇ ಉಳಿದಿದೆ..
ಮರು ಮಾತಾಡುವಾಗ ಹಾದಿ ಬೇರೆಯಾಗಿದೆ..
ಕೊನೆಗೂ ಮನದ ಮಾತು ಹೇಳಿಕೊಂಡೆವು ಗೆಳೆಯರಾಗಿ..
ಇರಲಿ ನಿನ್ನ ಜೀವನ ಸುಖವಾಗಿ..
ಇದೇ ನನ್ನ ಹಾರೈಕೆ ಕೊನೆಯದಾಗಿ..
@ಮೇಘ ಗಣೇಶ್
- Megha s
30 Jul 2020, 03:31 pm
ನಿತ್ಯ ನಿಯಮ ಮೀರದೆ
ಬೆಳಕು ನೀಡುವ ಅರುಣ
ಏಳೇಳು ಜನ್ನ ತಳೆದು ಬಂದರೂ
ತೀರಿಸಲಾರೆವು ನಿನ್ನ ಋಣ...!
- Sanganabasayya Hampasagaramath
29 Jul 2020, 06:03 pm
ನಿಸರ್ಗ ದ ಸೌಂದರ್ಯವ
ವಿವರಿಸಲು ಅಸಾಧ್ಯ..
ಹೊಲ ಗದ್ದೆ ನೋಡಿದಾಗ
ನೆನಪಾಗುವುದು ಬಾಲ್ಯ..
ಉಗಿ ಬಂಡಿಯಂತೆ ಹತ್ತಾರು ಪುಟಾಣಿ ಮಕ್ಕಳು..
ಹೊರಟ ಬಂಡಿ ನಿಲ್ಲುವುದು ಶಾಲೆಯ ಸಮೀಪ..
ಸ್ವರ್ಗಕ್ಕಿಂತ ಮಿಗಿಲು ಈ ಬಾಲ್ಯದ ಸುಖ
ಮನಸೋತೋದೆ ನಾನು
ಈ ದೃಶ್ಯವ ಕಂಡು..
ಪುನಃ ಆವರಿಸಿಕೊಂಡಿದೆ ಮನಸಿನ ಬುತ್ತಿಯಲ್ಲಿ
ಈ ಸುಂದರ ಸುಮಧುರ ನೆನಪುಗಳು...
@ಮೇಘ ಗಣೇಶ್
- Megha s
29 Jul 2020, 12:55 pm
ಹೇಳಲು ಕೇಳಲು
ಬಲು ಅಂದ ಚೆಂದ
ಪ್ರೀತಿಯ ಪಿಸುಮಾತು
ಸಹಿಸಲು ಬಲುಕಷ್ಟ
ದೂರವಾದ ಮನಸುಗಳ
ಚುಚ್ಚುಮಾತು
ನೋಡಲಾಗದು
ಕಣ್ಣೀರು ತುಂಬಿದ
ಒಂಟಿ ಹೃದಯಾದ
ಮನಸ್ಸಿನ ಗೋಳಾಟ
- ರಾಜು ಹಾಸನ
29 Jul 2020, 01:23 am
ಭಾರತಕೆ ಜೈ....
ಕರ್ನಾಟಕಕೆ ಜೈ....
ನಾವು ಭಾರತೀಯರು....
ಕನ್ನಡಮ್ಮನ ಪುತ್ರರು....
ಮುಗಿದದಿನದ ಮೆಲುಕು ಹಾಕಿ....
ಬರುವದಿನದ ಭರವಸೆಯಲಿ....
ತ್ಯಾಗಸಹಿತ ಸ್ವಾರ್ಥರಹಿತ....
ಹೊಸ ನಾಡನು ಕಟ್ಟುವ....
ಸಫಲತೆಯ ಪಡೆಯುವ....
ಭಾರತೀಯರೆನ್ನುವ....
ಒಂದುಗೂಡಿ ಹಾಡುವ....
ದೇಶಕಾಗಿ ದುಡಿಯುವ....
ನಾವು ಒಂದೇ ಅನ್ನುವ....
ಭಾರತೀಯರೆನ್ನುವ....
- ಸಾಹಿತ್ಯಶ್ರೀ
28 Jul 2020, 10:54 pm
ಕಾಯುವಿಕೆಗಿಲ್ಲದಾಯ್ತು ಕೊನೆ ಮೊದಲು
ನಿನ್ನದೋ ಅದೇ ಭರವಸೆಯ ಸಾಲು
ಒಂದೇ ದಿನದಲ್ಲಿ ತೋರಿಸಿಬಿಡುವೇ ಚುಕ್ಕಿ ಚಂದ್ರಮರ
ಮರುದಿನವೇ ನಾನಾಗಿ ಬಿಡುವೆ ಒಂಟಿ ಮರ
ನಿನಗೆ ನನ್ನ ಅವಶ್ಯಕತೆ ಮುಗಿಯಿತು ಎನಿಸಿದರೂ
ನನ್ನ ಮನದ ಮೂಲೆಯಲ್ಲೆಲ್ಲೊ ಆಸೆಯ ಚಿಗುರು
ಕಾಯುತ್ತಲೇ ಇರುವೇ ನೀ ತಿರುಗಿ ಬರುವವರೆಗೂ
ನಿನ್ನ ನೆನಪುಗಳು ಮನದಲ್ಲಿ ಸದಾ ಹಸಿರು!!
- Dima
28 Jul 2020, 12:02 am
ನಲ್ಲ ನಲ್ಲೆಯ ಮಿಲನ
ನಡು ರಾತ್ರಿಯಲಿ ಇತ್ತು
ಬೆಳದಿಂಗಳ ಕಾರ್ಮೋಡ
ಕವಿದು ಕಂಗೆಡಿಸಿತ್ತು.
ಏನಾದ್ರೂ ಸರಿಯೇ
ಎಂತಾದರು ಸರಿಯೇ
ಸರ್ಹೊತ್ತಿನ್ಯಾಗ್ ಸರ್ರಂತ
ಸೇರ್ಬೇಕಿತ್ತವಳು ಅವನಲ್ಲಿ.
ಮುಸುಕಾಕಿ ಸಾಗಿದರ
ಮೆತ್ತಂಗ ಆಡುವ ಜನರು
ಮತ್ತ ಹ್ಯಾಂಗ ಸುಮ್ಮನಿರತಾರ
ದುಡ್ಡಿರದ ಡಂಗುರ ಸಾರ್ತಾರ.
ಉಟ್ಟ ಸೀರೆಯ ಬಿಚ್ಚಿ
ಪಂಚೆ ತೊಟ್ಟಳು ಆಕೆ
ಸುತ್ತಿದಳು ತಲೆಗೊಂದು
ರೇಶಿಮೆಯ ರುಮಾಲು.
ಅಂತೂ ಸೇರಿದಳು ಅವಳು
ಅರಮನೆಯ ಸರದಾರನ
ನಗು ಮುಖದ ಚಲುವೆ
ಚಲುವಾಂಬ ಕುವರ ನನ್ನ.
ಹಾಲು ಹರಿಯುತ್ತಿತ್ತು
ಜೇನು ಸುರಿಯುತ್ತಿತ್ತು
ಬೆಳದಿಂಗಳ ಕಾರ್ಮೋಡ ಅದು
ಸರಿಯುತ್ತಿತ್ತು ಕರಗುತ್ತಿತ್ತು.
ಕೆನ್ನೆಗಳು ಕೆಂಪೇರಿತ್ತು
ತುಟಿಯು ರಂಗಾಗಿತ್ತು
ಕಣ್ಣ ಕಾಡಿಗೆ ಕರಗಿ ನೀರಾಗಿತ್ತು
ಸಣ್ಣ ಪಿಸು ಮಾತಿನ್ನು ನಡೆದೇ ಇತ್ತು.
ಕಲ್ಮೇಶ ಬಡಿಗೇರ
9743539657
........ಬಾದಾಮಿ......
- Kalmesh Badiger
27 Jul 2020, 07:30 pm
ಗರ್ದಿ ಗಮ್ಮತ್ತು ಬಂದಿತ್ತೊಮ್ಮೆ
ನಮ್ಮಯ ಊರಿನ ಜಾತ್ರೆಯಲಿ
ಚಿಲ್ಲಂಗ - ಚಿಚ್ಚಂಗ ತಾಳದ ದ್ವನಿಯು
ಮೊಡಿಯ ಮಾಡಿತ್ತು ಜನರಲ್ಲಿ. "ಪ"
ಚೆಂದದ ಡಬ್ಬೆಯ ಮೆಗಡೆ ಒಂದು
ಚಿನ್ನದ ಗೊಂಬಿಯು ಕುಣಿತಿತ್ತು
ಕಣ್ಣು ಮಿಟುಕಿಸಿ ಕೈಯ್ಯನು ಬೀಸಿ
ಜನರನು ತನ್ನೆಡೆ ಕರಿತಿತ್ತು. "ಚ"೧
ಕೆಳಗಡೆ ತಗಡಿನ ಡಬ್ಬಿಯ ಒಳಗಡೆ
ಬಣ್ಣದ ಸಿನೆಮಾ ನಡೆದಿತ್ತು
ನೋಡಲು ಮುಂದೆ ಸಾಗಿದರಲ್ಲಿ
ನಾಲ್ಕಾಣೆ - ಎಂಟಾಣೆ ದರವಿತ್ತು. ೨
ಮಂಡಿಯ ಊರಿ ನೋಡಲು ಅಲ್ಲಿ
ಚಿಣ್ಣರ ದಂಡೆ ನೆರೆದಿತ್ತು
ಅಬ್ಬಬ್ಬಾ ರಾಜ ಮಹಲ್ಲು
ಮುತ್ತಿನ ಬಂಡಿಯು ಜೊತೆಗಿತ್ತು. ೩
ಹಲ್ಲನು ತಿಕ್ಕುವಾತನ ಜೊಲ್ಲು
ಚಿಣ್ಣರ ನಗೆ ಗೀಡು ಮಾಡಿತ್ತು
ಹೊಟ್ಟೆ ಹಿಡಿದು ಕೊಂಡು ದಂಡು
ಎಂಟಾಣೆ ಮುಟ್ಟಿತು ಎಂದು ನಡೆದಿತ್ತು. ೪
ಕಲ್ಮೇಶ ಬಡಿಗೇರ
9743539657
......ಬಾದಾಮಿ........
- Kalmesh Badiger
27 Jul 2020, 06:51 pm
ಮನದ ನೋವಲ್ಲೇ ಖುಷಿಯಕಂಡೆ
ನಿನ್ನ ನೆನಪಲ್ಲೇ ನಾನು ಕಾದುಕುಳಿತುಕೊಂಡೆ
ಇಲ್ಲದ ನಿನ್ನನ್ನು ನೆನೆದು ನೆನೆದು
ಸೋತು ಹೋಗಿರುವೆ ನಿನಗಾಗಿ ಕಾದು
ಅತ್ತು ಸೊರಗಿಹೋಗಿವೆ ನನ್ನ ಕಂಗಳು
ಮೌನದಲ್ಲಿ ಕಳೆದುಹೋದವು ಹಲವು ದಿನಗಳು
ಹಗಲೆಲ್ಲಾ ರಾತ್ರಿಯಾಗಿದೆ
ರಾತ್ರಿಯೆಲ್ಲಾ ಮಲಗದೆ ನನ್ನ ಕಂಗಳು ನಿನಗಾಗಿ ಕಾದಿದೆ
ನಿನ್ನ ಆ ಮಧುರ ಮಾತುಗಳು ಯಾಕೋ
ತುಂಬಾ ನೆನಪಾಗಿವೆ,ಒಮ್ಮೆ ನನ್ನ ಕೇಳಿಸಿಕೋ
ತುಂಬಾ ಭಯವಾಗುತ್ತಿದೆ ನನಗೆ
ನಿನ್ನೊಂದಿಗೆ ಹೊರಟುಹೋಗಿದೆ ನನ್ನ ಕಿರುನಗೆ
ಮೊದಲ ಪ್ರೀತಿ ನೀನೇ ತಾನೇ
ಕೊನೆಯ ಪ್ರೀತಿ ಆಗು ನೀನೇ
ಬೇಕಿಲ್ಲ ಬೇರೆಯಾರೊಂದಿಗೂ ಜೀವನ
ನಿನ್ನ ನೆನಪಲ್ಲೇ ಕಳೆಯುವೆ ನನ್ನ ಪ್ರತೀ ದಿನ.
- RoshniDsouza
27 Jul 2020, 11:42 am