Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮುತ್ತಿನ ಹನಿ

ನಿನ್ನ ಮುದ್ದು ಮನಸ್ಸಿನ
ಪುಟ ಹೃದಯಕ್ಕೆ ಕೊಡಲೇ
ಈ ನನ್ನ ಹೃದಯವ


ಆಗಸದ ಚಂದ್ರನಂತ
ನಿನ್ನ ಮುದ್ದು ಮನಸ್ಸಿಗೆ
ಕೊಡಲೇ ಮುತ್ತೂಂದನ್ನ


ಇಬ್ಬನಿಯ ಹನಿಯಂತಹ
ನಿನ್ನ ಮುತ್ತಿನ ನಗುವಿಗೆ
ಮುತ್ತಿಡಲೇ ನನ್ನ ಚೆಲುವೆ

- ರಾಜು ಹಾಸನ

20 Aug 2020, 12:37 am

ಮಳೆರಾಯ

ಕೇಳಿರಣ್ಣಾ ಇದ ಕೇಳಿರಣ್ಣಾ
ಮಳೆಯೊಂದು ಬಂದು ಬಿತ್ತಾ
ಹಳ್ಳ - ಕೊಳ್ಳ ನದಿಯೆಲ್ಲ ತುಂಬಿ
ಊರೊಳಗೆ ಹೊಕ್ಕು ನಿಂತಾ. //

ಸುತ್ತ ಸುಡುಗಾಡು ಬಟ್ಟ ಬಯಲು
ಹೊಲಗದ್ದೆ ಮುಳುಗಿ ಹೋತಾ
ತತ್ತರಿಸಿ ಹೋದ ಜನವೆಲ್ಲ ಓಡಿ
ಏರಿ - ಮ್ಯಾರಿ ಹತ್ತಿ ಕುಂತಾ. //

ಕಟ್ಟಿದ ಹಗ್ಗ ಬಿಚ್ಚ ಲಾಗದೆ
ದನ - ಕರುವು ಒದರುತಿತ್ತಾ
ಬಿಚ್ಚಿ ಬಿಟ್ಟರು ದಿಕ್ಕು ಕಾಣದೆ
ನೀರೊಳಗೆ ಲಿನವಾಯ್ತಾ .//

ಮನೆಯ ಬಾಗಿಲಿಗೆ ಬಂದ ನೀರು
ಮಾಳಿಗೆಯ ವರೆಗೆ ಬಂತ
ಕಾಳು - ಕಡಿ ಕರಿ ಮಣ್ಣು ಕರಗಿ
ಕಣ್ಮುಂದೆ ತೇಲಿ ಹೋಯ್ತಾ.//

ಹಸಿವ ನೀಗಿಸಲು ಹಸುಳೆಗಳಿಗೆ
ಮೊಲೆ ಹಾಲು ಬತ್ತಿ ಹೋಯ್ತಾ
ಹೆತ್ತ ತಾಯಿ ಕಣ್ಣೀರ ಸೊರಗಿ
ಕರೆಯೊಂದು ಮಾತ್ರ ಇತ್ತಾ .//

ಎತ್ತ ನೋಡಿದರೂ ಸುತ್ತ ನೀರು
ಹೆಡೆ ಎತ್ತಿ ಆಡುತಿತ್ತ - ಸಾಗುತಿತ್ತ
ಸತ್ತ ಹೆಣವು ಕಣ್ಮುಂದೆ ತೇಲಿ
ಉರುಳುರಿಳಿ ಹೊಗುತ್ತಲಿತ್ತ .//

ಕಲ್ಮೇಶ ಬಡಿಗೇರ
9743539657
......ಬಾದಾಮಿ....
ಕೃಷ್ಣೆ ,ಘಟಪ್ರಭಾ,ಮಲಪ್ರಭಾ ನದಿ ತೀರದಲ್ಲಿ ನೆರೆ ಹಾವಳಿಗೆ ತುತ್ತಾಗಿ ಕಣ್ಣೀರ ಕೋಡಿ ಯಲ್ಲಿ ಮುಳುಗಿರುವ ಜನತೆಗೆ ಅರ್ಪಿಸುತ್ತೇನೆ

- Kalmesh Badiger

19 Aug 2020, 05:54 pm

ಒಲುಮೆ

ಸಾಗರದ ಅಲೆ ಮೇಲೆ
ಸುಳಿದಾಡೋ ತಂಗಾಳಿ
ಸುಮಧುರ ಸಖಿ ನೆನಪ
ತಾ ತೇಲಿ ತರಲಿ

ಬೆಟ್ಟದ ಮಲ್ಲಿಗೆ ಕಂಪು
ಕೆಂದಾವರೆ ಮನ ದಿಂಪು
ಅಂದ ಚೆಂದದ ನೆನಪು
ತಾ ಹೊತ್ತು ಬರಲಿ

ಚಲಿಸೋ ಮೊಡದಡಿಗೆ
ಗರಿಗೆದರಿ ನಲಿವಂತ
ನವಿಲ ನಾಟ್ಯದ ನೆನಪು
ನಲಿ ದೊಲಿದು ತರಲಿ

ಹೃದಯ ಅಂಗಳ ದೊಳಗೆ
ಅರಳೋ ಮಲ್ಲಿಗೆ ಮೋಗ್ಗಿಗೆ
ಮೃದು ಮಾತಿನ ಮುತ್ತೊಂದ
ತಾ ಹೊತ್ತು ಬರಲಿ

ಸುರಿಯೋ ಮಳೆ ಗಾಳಿಗೆ
ಸ್ವರ ನಿನಾದವ ಬೆರೆಸಿ
ಸಂಗೀತದ ಸರಸ್ವತಿಯ
ಜೊತೆ ಕರೆದು ತರಲಿ

ಕಲ್ಮೇಶ ಬಡಿಗೇರ
9743539657
..........ಬಾದಾಮಿ.......

- Kalmesh Badiger

19 Aug 2020, 05:04 pm

ಕಿಲಾರಿ ಚಿಣ್ಣರು

ಎತ್ತಿನ ಗಾಡಿಯ ಹತ್ತಿದರೋಡುತ
ಚಿಣ್ಣರು ಎಲ್ಲರು ಒಟ್ಟಾಗಿ
ಎತ್ತನು ಹೂಡಿ ಜತ್ತಗಿ ಕಟ್ಟಿ
ಬಿಟ್ಟರು ಬಂಡಿಯ ಜೊತೆಗೂಡಿ //

ಕಿಲಾರಿ ಹೋರಿಯು ಓಡಲು ಹಾರಿ
ಹಾದಿಯೇ ನಡುಗಿತು ಹೌಹಾರಿ
ಸರಿಯಿತು ದಂಡು ಹಾರಿತು ಹಿಂಡು
ಸೇರಲು ಜನವೇಲ್ಲಾ ದುಂಡು - ದುಂಡು //

ನೋಡಲು ಮಂದಿ ಓಡಿತು ಬಂಡಿ
ಮಾಡುತ ಕಸ ಕಡ್ಡಿ ಚಿಂದಿ - ಚಿಂದಿ
ದೂರದ ನಾಯಿ ಧೈರ್ಯವ ಗುಂದಿ
ಬೋಗಳುತ ಓಡಿತು ಸಂದಿ - ಸಂದಿ //

ಗರ - ಗರ ಸುತ್ತಿ ಗುರಿಯನ್ನು ಮುಟ್ಟಿ
ಮರಳಿತು ಚಿಣ್ಣರ ಬಣ್ಣದ ಬಂಡಿ
ತುತ್ತುರಿ ಬಾರಿಸಿ ಕಿಲಾರಿ ಹೋರಿಗೆ
ಊರೆಲ್ಲಾ ಮೆರವಣಿಗೆ ಮಾಡಿದರು //

ಬಂಡಿಯನೇರಿದ ಚಿಣ್ಣರ ಬಾಯಿಗೆ
ಸಿಹಿತಿಂಡಿ ಊಟವ ಬಡಿಸಿದರು
ನೆಕ್ಕಲು ಉಪ್ಪಿನ ಕಾಯಿಯ ನಿಟ್ಟು
ಬಾಯಿ ಚಪ್ಪರಿಸಿ ಚಿಣ್ಣರ ನಲಿಸಿದರು //


ಕಲ್ಮೇಶ ಬಡಿಗೇರ
9743539657
.........ಬಾದಾಮಿ........

- Kalmesh Badiger

19 Aug 2020, 04:45 pm

ನನ್ನ ಝಿವಾ

ಕನಸಿನ ಚಿತ್ತಾರದಿಂದ ಮೂಡಿತು ಬೆಳ ಕೊಂದರಂತೆ ಸ್ನೇಹವೋ ಪ್ರೇಮವೋ ಪ್ರೀತಿಯೋ ಅದು ಗೊತ್ತಿಲ್ಲ
ಆದರೆ ಅದು ಅರಿವಾಗುವ ಮುನ್ನವೇ
ನಾ ಮುಳುಗಿ ಹೋದೆ...

ಅವಳ ಕಿರುನಗೆಗೆ, ಅವಳ ಕಣ್ಣೋಟಕ್ಕೆ, ಅವಳ ಮಧುರ ಮಾತುಗಳಿಗೆ, ಅವಳ ಸ್ನೇಹಕ್ಕೆ,,,

ಅವಳ ನಿಷ್ಕಲ್ಮಶವಾದ ಸ್ನೇಹದಿಂದಲೇ ನಾ ಶರಣಾದೇನು ಆಕೆಯ ಪ್ರೀತಿಗೆ...
ಅವಳ ಪ್ರೀತಿ ಪವಿತ್ರ, ಪರಿಪೂರ್ಣ, ಪರಮ್ಯ,,,
ಅದು ನನಗೆ ದೊರಕಿದ್ದು ಪೂರ್ವ ಜನ್ಮದ ಪುಣ್ಯವೋ ಇಲ್ಲ........ ಅದೇನೋ ಗೊತ್ತಿಲ್ಲ...

ಆ ಪ್ರೀತಿ ನನ್ನೆಲ್ಲ ದುಃಖಗಳ ಮರೆಮಾಡಿ
ಸಂತೋಷದಿಂದಿರಿಸಿದ ಪ್ರೇಮವದು
ಅವಳು ಸಿಗಲಿ ಬಿಡಲಿ,,,
ಆ ಪ್ರೀತಿ ಅದೆಂದಿಗೂ ನನಗೆ ಮಾತ್ರ
ನನ್ನವಳ ಪ್ರೀತಿಯು ನನಗೆ ಮಾತ್ರ‌...

ಅವಳ ನವಿರಾದ ಪ್ರೀತಿಗೆ ನನ್ನೆಲ್ಲಾ ನೋವುಗಳ ಮೆಲುಕುಹಾಕುತ್ತಾ ಅವಳೊಂದಿಗೆ ಆಗೆ ಇರುವೆ
ನಾ ಮರಳಿ ಮಣ್ಣಾಗುವವರೆಗೆ...


✍️SanjayZivaa

- sanjays

17 Aug 2020, 10:38 pm

ಮುಗ್ಧಮನಸಿನ ಪ್ರೀತಿ

ಜೀವನದ ಸೋಲುಗಳೆ ಗೆಲುವಿನ ಮಜಲುಗಳು
ಭಾವನೆಯ ನೋವುಗಳೆ ನಗುವಿನ ಭರವಸೆಯು
ನಿನ್ನ ನೋವಿಗೆ ಇಲ್ಲಿ ಬೆಲೆಯೇನಿಲ್ಲ
ನಿನ್ನ ಪ್ರೀತಿಗು ಇಲ್ಲಿ ಬೆಲೆಯೇ ಇಲ್ಲ
ಪ್ರೀತಿ ಸ್ವಾರ್ಥಕೆ ಈಗ ಬಲಿಯಾಯಿತು
ಹುಚ್ಚು ಪ್ರೀತಿಗೆ ಕಣ್ಣು ಕುರುಡಾಯಿತು
ನಿನ್ನ ಛಲವೇ ನಿನಗೆ ನಂಬಿಕೆಯು
ಪ್ರೀತಿ-ಒಲವು ನಾಳಿನ ಬದುಕಿಗೆ ನಿನಗೆ ನೆರಳು||

ಕನಸುಕಾಣೊ ಕಂಗಳಲಿ ಆಸೆ ಉಂಟು ನೂರಾರು
ಮನಸು ಎಂಬ ಮಂದಿರದಿ ನೋವಿಗಿಲ್ಲ ತಕರಾರು
ಪ್ರೀತಿ ಎಂಬ ಭಾವನೆಗೆ ಆಸೆಗಳು ಹಲವಾರು
ಮೋಸವಿದ್ದ ನಿನ್ನಲ್ಲಿ ‌ಸ್ವಾರ್ಥಬಿಟ್ಟು ಜೊತೆಯಾರು
ನಿನ್ನ ನಂಬಿದ ಈ ಜೀವಕೆ ಸಾವೊಂದೆ ಉತ್ತರವು
ನಿಷ್ಕಲ್ಮಷ ಈ ಪ್ರೀತಿಗೆ ನಿನ್ನ ಮೋಸದ ಉಡುಗೊರೆಯು
ಒಳ್ಳೇಕಾಲ ನಿನಗೆ ಬರಬೇಕು
ಅಲ್ಲಿವರೆಗು ಪ್ರೀತಿಯ ಹೆಸರಲಿ ಬದುಕಿರಬೇಕು||

- ಸಾಹಿತ್ಯಶ್ರೀ

17 Aug 2020, 08:33 pm

ದಾರಿಯ ಕಾಯುವಂತೆ

ನನ್ನ ಕನಸಿನ ಬೀದಿಯಲ್ಲಿ
ಜಾಹೀರಾತಿನಂತೆ ನೀ ಕಂಡೆ,
ನನ್ನ ಒಬ್ಬಂಟಿಯ ಪಯಣದಲ್ಲಿ
ನನ್ನ ಜೊತೆಯಾಗಿ ನೀ ನಿಂತೆ,
ಅಂದೊಮ್ಮೆ ಅನಿಸಿತು ನೀ ಯಾರೋ
ದಾರಿಹೋಕನಂತೆ,
ಆದರೆ ಇಂದು ನಿನ್ನ ಪ್ರೀತಿಯಲ್ಲಿ,
ನನ್ನ ಹೃದಯವೇ ನಿನ್ನ ದಾರಿಯ ಕಾಯುವಂತೆ...!

- Megha

17 Aug 2020, 08:22 pm

ಮೊದಲ ಕವನ

ಭಾವ ಪ್ರಾಸ ಎಲ್ಲ ಹಾಕಿ
ರಸಗಳೆಲ್ಲ ಒಳ್ಳೆ ಬಳಸಿ
ನನ್ನ ದನಿಯಲ್ ನಾದ ಕೊಟ್ಟು
ಬರೆದೆನೊಂದು ಕವನವ.

ಹೋಗಿ ಅಮ್ಮನೆದುರು ನಿಂತು,
ಚಂದ ಮಾಡಿ ಹಾಡಲ್ ನಾನು
ಅಮ್ಮ, ಬೆನ್ನು ತಟ್ಟಿ ಹೆಮ್ಮೆ ಪಟ್ಟು
ಮುದ್ದು ಮಾಡಿ ಕಳಿಸಿತು.

ಬೆಳಗೆ ಬೇಗ ಎದ್ದು ಓಡಿ ಬೇಗ
ಶಾಲೆಗ ಹೋಗಿ ಎಲ್ಲರೆದುರು ಓದಿದೆ.
ರಂಗ ಮಂಗ ಚೆಂಗರೆಲ್ಲ ಕೇಳಿ
ಖುಶಿಯ ಪಟ್ಟು ತೆರೆದ ಬಾಯ್ ಮುಚ್ಚವು!

ಬರೆದ ಹಾಳೆ ದಿಂಬಿನಡಿಗೆ ತುರುಕಿ
ತೆಗೆದು ನೂರು ಸಲವು, ಮತ್ತೆ ಅದನೆ ಓದಿದೆ
ಹೀಗೆ ಬಂತು, ಭಾವ ಹಲವು
ಬರೆದೆ ಮತ್ತೆ ಕವನ ಕೆಲವು.

ಹುಡುಕು ನೀನು ಎಲ್ಲ ಕಡೆಗೆ
ಮೊದಲ ಕವನ ಪ್ರಥಮ ಪ್ರೇಮ
ಕೊಡುವ ಖುಶಿಯು ಮರಳಿ ಸಿಗಲು ಸಾಧ್ಯವೇ?

- aniruddh

17 Aug 2020, 08:21 pm

ಮನಃಶಾಂತಿ

ಮನದಿ ಮೂಡಿದೆ ಕವನ ಬರೆಯುವಾಸೆ..
ಬರೆದಿಹೆನು ಮನದಲ್ಲಿರೊ ಭಾವನೆಯ..
ಹಗುರವಾಗಿರಿಸಿದೆ ನನ್ನೀ‌ ಮನವನು..
ಇನ್ನಷ್ಟು ಬರೆಯುವಾಸೆ ಮೂಡುತಿಹುದು..
ಅದೇಕೋ ಬೇರೆಯವರ ಮಾತ ಕೇಳಿ ಮನವು ಹಿಂಜರಿಯುತಿಹುದು..
ಪಯಣ ಯಾವ ಕಡೆ ಎಂದು ತಿಳಿಯದಾಗಿದೆ..
ನನ್ನ ಮನ ಶಾಂತವಾಗಿರುವುದು ನನ್ನಿಷ್ಟದ ಕಡೆಗೆ ಹೋದರೆ..
ಇನ್ನೊಂದು ಕಡೆ ಕಡೆಗಣಿಸುವುದು ಅನಿವಾರ್ಯತೆಯಾಗಿದೆ..
ಮನವು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದೆ..
ಮತ್ತೆ ಮನಃಶಾಂತಿಗಾಗಿ ಬರೆದಿಹೆನು ಈ ಕವನವನು..
@ಮೇಘ ಗಣೇಶ್

- Megha s

17 Aug 2020, 11:42 am

ಭಾವನೆ

ಬಳಿ ಬಂದು ಸಹಾಯ
ಬೇಡಿದರು ಏನೂ
ಮಾಡಲಾಗದ ಅಸಹಾಯಕ ನಾನು
ನಿನ್ನ ಪ್ರೀತಿ ಸಿಕ್ಕ ಮೇಲೆ
ಕೈ ಕಟ್ಟಿ ಕುಳಿತಿರುವ ಅಸಹಾಯಕ ನಾನು
ಕಣ್ಣೀರು ಕಾರುಸಿತಿರು ನೀ.....ಕೊನೆವರೆಗೂ
ಕಾಣದೆ ಮಾಯಾವಾಗಿರುವೇನು ಮಣ್ಣಿನ ಕಣ ಕಣದಲ್ಲಿ ನಾನು.....

- Mahesh Rk

16 Aug 2020, 11:56 pm