Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪಾರಿಜಾತ ಪುಷ್ಪ ನೀನು..

ಪಾರಿಜಾತ ಪುಷ್ಪ ನೀನು, ಈಗ  ಹೊರಟೆ ಎಲ್ಲಿಗೆ.
ಅಪಾರವಾದ ಪ್ರೀತಿ ಆಯ್ತು ಹೃದಯ ಒಡೆಯೋ ಮಟ್ಟಿಗೆ.
ನೀನು ಬರುವ ದಿಕ್ಕಿನಲ್ಲಿ ಕಾದು ಕುಳಿತಿತ್ತು ಗಾಳಿ ಕೂಡ ಅಲ್ಲೇ ಮೆಲ್ಲಗೆ.
ನಿನ್ನ ನಡಿಗೆ ನೋಡಿ ನೋಡಿ,ನವಿಲು ಕೂಡ ನಾಟ್ಯ ಕಲಿಯಿತು ತಕ್ಕಮಟ್ಟಿಗೆ...

ಬೆಳ್ಳಕ್ಕಿಗಳು ಸಾಲುಕಟ್ಟಿ ನಿನ್ನ ನೋಡಲು ಬರುತಿರಲು.
ಆ ಮೋಡದ ಮರೆಯಲ್ಲಿ ಚಂದ್ರ ಕೂಡ ನಿನಗಾಗಿ ಕಾದಿರಲು.
ಹೂವು ಕೂಡ ಕಾಯುತವೇ ನಿನ್ನ ನೋಟ ತಾಕಿ ಅರಳಲು.
ಚುಕ್ಕಿ ಕೂಡ ಕಾಯುತವೇ ನಿನ್ನ ನಗು ನೋಡಿ ಮಿನುಗಲು...

- NaveenkumarK

16 Aug 2020, 08:19 pm

ಪ್ರೀತಿ

ನನ್ನ ಹೃದಯದ ಅರಮನೆ ಇದು
ಇಂದು ಬಿಟ್ಟು ಎಂದು ಬರದಿರುವೆ
ಕಲ್ತೊಳೆದು ಬಿಳ್ಕೊಡುವೆ ದಯವಿಟ್ಟು ಹೋಗದಿರು ನೆನಪಿನ ಬುದ್ದಿ ನಾ ಸುಡುವೆ ನನ್ನನ್ನು ಮರೆಯದಿರು
ನನ್ನ ಹೃದಯ ತುಕ್ಕು ಹಿಡಿದಿದೆ
ಬದಲಿ ಹೃದಯ ನಿನದು ಕೊಡು
ನನ್ನ ಪ್ರೀತಿ ಸಾವಿನ ಗೋರಿಗೆ ನಿನ್ನ ಹೆಸರಿಡುವೆ ಅನುಮತಿ ಕೊಡು .....

- NagarajV

16 Aug 2020, 07:56 pm

ಹಸುಗುಸು ಮನಸ್ಸಿದು..

ನಿನ್ನ ಪ್ರತಿರೂಪ ಪ್ರತಿಕ್ಷಣವೂ ನನ್ನ ಮನಸ್ಸಿನಲಿ ಒಂದೊಂದು ಪ್ರತಿಯಾಗಿದೆ.
ನಿನ್ನ ಅನುರೂಪ ಅನುಕ್ಷಣವೂ ನನ್ನ ಹೃದಯವ ಹದವಾಗಿ ಅದಗೆಡಿಸಿದೆ.

ಹಸುಗುಸು ಮನಸ್ಸಿದು, ಅಪವಾದ ಹೊತ್ತಿದೆ.
ಅಹವಾಲು ಕೇಳದೆ, ಅಪರಾಧಿಯಾಂದು ತೀರ್ಪು ನೀಡಿದೆ.
ನಿನ್ನ ಕಣ್ಣಸನೆಯ ತೀರ್ಪಿಗೆ, ನನ್ನ ಕಣ್ಣು ಎಡಬಿಡದೇ ಕಾದಿದೆ.
ನಿನ್ನ ಹೃದಯದ ಠಾಣೆಗೆ, ನನ್ನ ಮನಸ್ಸು ತನಗೆಯೇ  ಹೊರಟು ಕೂತ್ತಿದೇ.

ನಿನಗೆ ಬಂಧಿಯಗಲು ನಾ ಬಂದೆ ಬರುವೆನು.
ಈ ಬಂಧದಿಂದ ಮುಕ್ತವಾಗದಂತ ಸಾಕ್ಷಿ ತಂದೆನು.

- NaveenkumarK

15 Aug 2020, 07:46 pm

ಆಗೊಮ್ಮೆ ಈಗೊಮ್ಮೆ..

ಹಾಗೊಮ್ಮೆ ಹೀಗೊಮ್ಮೆ ನೆನಪಿನಂತೆ ನನ್ನನೊಮ್ಮೆ ನೋಡಿ ಹೋಗುವೆ ಆಯಾಸವಾಗುವುದಿಲ್ಲವೇನೋ ಹುಡುಗ ನಿನಗೆ! ಬಿಗಿದ ತುಟಿಗಳ ಸಡಲಿಸಿ ಚೇಷ್ಟೆ ಮಾಡಿ ನಗಿಸುವೆ ಸುತ್ತಲಿರುವ ಗೆಳತಿಯರಿಗೆ ಏನೆಂದು ಹೇಳಲಿ ಮಾಯಾವಿ ನೀನು ಮನಸಲ್ಲೇ ಇರುವಾಗ.

ಜಾರು ಯವ್ವನ ಜೀಕಿದ ಜೋಕಾಲಿ ನೀನು ತುಸುವೇ ತಂಪಾಗಿ ಮಲಗುವೆ ಕಮ್ಮನೆಯ ಕನಸಾಗಿ ಕಣ್ಸೇರು ನಿದುರೆಯಲ್ಲೇ ನಿನ್ನವಳಾಗುವೆ ಹಗಲು ಮೂಡವ ಮುನ್ನ ಮಗುವಾಗಿ.

ಸಾವಿರಾರು ಮಾತುಗಳಿವೆ ಹುಡುಗ ಮನಸಲ್ಲಿ ಕೇಳಲು ಸಮಯವೇ ಇಲ್ಲ ನಿನ್ನಲ್ಲಿ ಒಂದೆರಡು ಸಾಲು ಹಾಗೆ ಗೀಚುವೆ ತುಟಿಯಂಚಿನ ನಗುವಿನೊಂದಿಗೆ ಓದಿಬಿಡು ಬಿಡುವು ಮಾಡಿಕೊಂಡು ನಿನ್ನ ಎದೆಗಪ್ಪಿಕೊಂಡಿದ್ದ ಈ ನೀಲಿ ಲೇಖನಿ ಜನ್ಮ ಸಾರ್ಥಕವಾದರೂ ಆಗಲಿ ನಾ ಕದ್ದ ಪುಣ್ಯಕೆ.

ಅಕ್ಷರಗಳು ಮೇಲು ಕೀಳು ಆಗಿರಬಹುದು ಕ್ಷಮಿಸಿಬಿಡು ಹುಡುಗ ತಡವರಿಸಿ ಬಂದ ಭಾವಗಳಿಗೆ ನಿನ್ನ ಪರಿಚಯ ಮಾಡುವಲ್ಲಿ ನಿಮಗ್ನಳಾಗಿದ್ದೆ ನಾನು. ಪ್ರೇಮದ ಪರಿಯು ಹೊಸತೇನಿಸಬಹುದು ಆದರೆ ನಮ್ಮ ಪ್ರೀತಿ ಹಳೆಯದಲ್ಲವೇ ಹುಡುಗ ಆ ಬಾನಿನಿಂದೆ ಅಡಗಿರುವ ಚುಕ್ಕಿಗಳ ಆಯಸ್ಸಿನಷ್ಟು.

- ಚುಕ್ಕಿ

15 Aug 2020, 07:38 pm

ಸ್ವಾತಂತ್ರ್ಯ

ಆಗಸದಿ ಹಾರಾಡುತಿಹ ನಮ್ಮ ರಾಷ್ಟ್ರಧ್ವಜಕ್ಕೂ ಹೃದಯಲಿ ಹರಿಯುತಿಹ ದೇಶಭಕುತಿ ಎಂಬ ರುಧಿರಕ್ಕೂ ಇರುವ ನಂಟು ಸ್ವಾತಂತ್ರ್ಯ.

ಹೆಮ್ಮೆಯಿಂದ ತಲೆಯೆತ್ತಿ ವಂದಿಸೋಣ ನಮ್ಮ ಉಸಿರು ಕಾಯಲು ತಮ್ಮ ಉಸಿರು ನೀಡುತ್ತಿರುವ ಪ್ರತಿಯೊಬ್ಬ ಯೋಧನಿಗೂ ನಮ್ಮ ಉಸಿರು ಇರುವವರೆಗೂ.

ವೈದ್ಯರಾಗಿಲಿ ಇಂದು ಗಡಿ ಕಾಯುವ ಸೈನಿಕನಾಗಲಿ, ಮನೆಯ ಮಾಲಿನ್ಯ ತೆಗೆದು
ಊರ ಕಾಯುವ ಉದ್ಯೋಗಿಗಳಾಗಲಿ, ಪ್ರಪಂಚಕೆ ಅನ್ನವಿಡುವ ರೈತನಾಗಲಿ.

ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು ತಿಳಿಸೋಣ ಮೇಲೆಂಬ ಅಹಂಕಾರವಿಲ್ಲದೆ ಕೀಳೆಂಬ ತಿರಸ್ಕಾರ ತೋರದೆ, ಒಗ್ಗೂಡಿ ಬಾಳೋಣ ಒಂದಾಗಿ ನಡೆಯೋಣ.

ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

- ಚುಕ್ಕಿ

15 Aug 2020, 02:04 pm

ಭಗ್ನಪ್ರೇಮಿ

ಪ್ರೀತಿಸಲು
ನೂರಾರು ಮಾತುಗಳು ಬೇಕು
ದೂರಾಗಲು ಒಂದೇ ಮಾತು ಸಾಕು
ಪ್ರೀತಿಸುವಾಗ ಮಾತುಗಳೆ ಮುತ್ತಾಗುವುದು
ದೂರವಾದರೆ ಮಾತುಗಳೆ ಮುಳ್ಳಗುವುದು
ನೂರಾರು ಕನಸುಗಳು ಸಾವಿರರು ಆಸೆಗಳಿದ್ದರು
ಮೂಕನಾಗಿರುವೆ ಕೊಟ್ಟ ಮಾತು ಇಟ್ಟ ನಂಬಿಕೆ
ಸುಳ್ಳಗಾದಿರಲ್ಲಿ ಎಂದು ಈ ನನ್ನ ಪ್ರೀತಿಯಲ್ಲಿ

- ರಾಜು ಹಾಸನ

12 Aug 2020, 11:15 pm

ತವರು

ಮನವು ಹಾಯಾಗಿ ತೇಲುತಿಹುದು..
ಈ ತಂಪಾದ ಗಾಳಿಯಲಿ..
ನೆನಪಾಗುವುದು ಕಳೆದೋದ ದಿನಗಳು..
ಮರುಕಳಿಸುವುದು ಅಪ್ಪ ಅಮ್ಮ ನ
ಪ್ರೀತಿಯ ಮಮಕಾರ..
ಅಮ್ಮನೊಂದಿಗಿನ‌ ಪ್ರೇಮ...
ಅಪ್ಪನೊಂದಿಗಿನ ಧೈರ್ಯ
ತಮ್ಮನ ವಾತ್ಸಲ್ಯ...
ಅಣ್ಣ‌ತಂಗಿಯರ‌ ಪ್ರೀತಿ...
ಸಂಬಂಧಿಕರ ಕರುಣೆ..
ಮನವ ಉಲ್ಲಾಸಿಸುವವ ಗಾಳಿಯ ಹಾಗೆ
ಈ ನೆನಪುಗಳು ಹೃದಯಕೆ ತಂಪೆರೆದಂತಿದೆ..
ಅವಾಗವಾಗ ಬಂದು‌‌‌ ಹೋಗುತ್ತಿರು
ಮನವನು‌ ಶಾಂತವಾಗಿರಿಸಲು..
@ಮೇಘ ಗಣೇಶ್

- Megha s

11 Aug 2020, 01:26 pm

ಗುರು

ನಿನಗೆ ನೀನೇ ಗುರು,
ನಿನಗೆ ನೀನೇ ಶಿಷ್ಯ,
ನಿನಗೆ ನೀನೇ ಆತ್ಮಬಲ,
ನಿನ್ನನ್ನು ಅರಿತರೆ ನೀನೇ ಗುರು

- Praveena kumara Nadalmani

10 Aug 2020, 11:52 pm

ಅಗ್ಗದ ಸಂತೆ

ಅಗ್ಗದ ಸಂತೆಗೆ ಹಿಗ್ಗಿಂದಾ ಹೋಗಿ
ಮುದುಕಿ ಮುಗ್ಗರಿಸಿ ಬಿದ್ದಿತ್ತಾ
ಹುಗ್ಗಿಯಂತಾ ಹುದಲಾಗ ಸಿಕ್ಕೊಂಡು
ಮುದುಕಿ ಸುದ್ಯಾಗಿ ಹೋಗಿತ್ತ

ಸರ್ರೆಂದು ಬಂದು ಸುಂಟರ ಗಾಳಿ
ಮುದುಕಿಯ ಸುತಗೊಂಡು ಬಿಟ್ಟಿತ್ತ
ಬರ್ರೆಂದು ಬಂದ ರಪ - ರಪಾ ಮಳೆ
ಬಿಡದ ಹೊಡೆಯುತಾ ನಿಂತಿತ್ತಾ

ಸಂತೆ ಚೀಲವು ನೀರಲಿ ಮುಳುಗಿ
ತೇಲುತ ಮಾಯ ವಾಗಿ ಹೋಗಿತ್ತ
ಜಿಗಟಾದ ಮಣ್ಣು ಬೀಡಲಾರ್ದೆ
ಮುದುಕಿಯ ಕಾಲನು ಹಿಡಿದಿ ತ್ತ

ಕಾಲನು ಕಿಳ ದೆ ಜೀವವ ಉಳಿಸಲು
ಮುದುಕಿ ಒದ್ದಾಡ್ತ ನಿಂತಿತ್ತಾ
ಅಗ್ಗದ ಸಂತೆಗೆ ಚೀ ಥೂ ಅಂತಾ
ಮುದುಕಿ ಉಗಿಯುತ ನಿಂತಿತ್ತಾ

ಪಡ್ಡೆ ಹುಡುಗರ ಸಹಾಯದಿಂದ
ಮುದುಕಿ ಪಾರಾಗಿ ಬಂದಿತ್ತಾ
ಪ್ರಾಣ ಉಳಿಸಿದ್ರಿ ಪರಮಾತ್ಮ
ನಿವೆಂದು ಹೋಗಳುತಾ ಕುಂತಿತ್ತ


ಕಲ್ಮೇಶ ಬಡಿಗೇರ
9743539657
..........ಬಾದಾಮಿ........

- Kalmesh Badiger

10 Aug 2020, 12:04 pm

26/11

ಬಾಂಬೆ ಎಂಬ ಹೆಸರು ನೆನೆದರೆ
ಬಹಳ ಬಯವಾಗುವುದಲ್ಲ
ಮುಗ್ಧ ಜನಗಳ ಪ್ರಾಣವ ಕೀಳುವ
ಮಹಾ ಮುಂಬೈ ಎನುವರಲ್ಲ. //

ಕ್ರೂರ ರಾಕ್ಷಸರು ನೀರಿಂದ ಬಂದು
ಮುಂಬೈ ಊರೊಳಗೆ ಹೊಕ್ಕರಲ್ಲ
ಸಿಕ್ಕವರನ್ನು ಗುಂಡಿಟ್ಟು ಕೊಲ್ಲುತಾ
ಹೆಣಗಳ ರಾಶಿ ಹಾಕಿದರಲ್ಲ. //

ಹೊತ್ತಿ ಉರಿಯಿತು ತಾಜ್ ಹೋಟೆಲ್
ಒತ್ತಿ ಯಾಯಿತೋ ನಾರಿಮನ್ ಹೌಸ್
ಸುಟ್ಟ ಹೆಣಗಳ ಕೆಟ್ಟ ವಾಸನೆಯು
ಹೊರ ಹೊಮ್ಮಿ ಬಂದಿತಲ್ಲಾ. //

ಉಗ್ರರ ಮಣಿಸಲು ದಿಟ್ಟ ಪೊಲೀಸರ
ದಂಡೆ ಸೇರಿತಲ್ಲ, ಹಗಲಿರುಳೆಲ್ಲಾ
ಹೋರಾಡಿ ಉಗ್ರರ ಮೆಟ್ಟಿ ನಿಂತರಲ್ಲ
ಸ್ವತಃ ತಾವೇ ಪ್ರಾಣ ಕೊಟ್ಟರಲ್ಲಾ. //

ಹೇಮಂತ್ ಕರ್ಕರೆ ವಿಜಯ ಸಾಲಸ್ಕರ್
ಹೋರಾಡುತ್ತಾ ಪ್ರಾಣ ಬಿಟ್ಟರಲ್ಲ
ಅಶೋಕ್ ಕಾಮ್ಟೆ ಉನ್ನಿಕೃಷ್ಣ ಕಮಾಂಡರ್
ಹೊರಾಡ್ತ ವೀರ ಮರಣ ಹೊಂದಿದ ರಲ್ಲ. //


ಕಲ್ಮೇಶ ಬಡಿಗೇರ
9743539657
. ......ಬಾದಾಮಿ.....

- Kalmesh Badiger

10 Aug 2020, 11:35 am