ನಿನ್ನ ಕಾಲ್ಗೆಜ್ಜೆ ನಾದಕ್ಕೆ
ಮರೆಯಾಗಿದೆ ನನ್ನೆದೆಯ ಬಡಿತ
ನೀ ನಗುವ ನೋಟಕ್ಕೆ
ಮಾಯವಾಗಿದೆ ಮನಸು
ನನ್ನೆದೆಯಲ್ಲಿ ಗುಡಿಯಲ್ಲಿ
ಬಿಡಿಸಿದೆ ನೀ ಬಣ್ಣ ಬಣ್ಣದ ಚಿತ್ತಾರವ
ನಿನ್ನ ಒಲವಿನ ಪ್ರೀತಿಗೆ
ಸೋತಿರುವುದು ನನ್ನ ಹೃದಯ
ನನ್ನ ಪ್ರೀತಿಯ ಚಿಟ್ಟೆ ನೀ
ಕನಸಿನ ಅರಮನೆಯಲ್ಲಿ
ತೇಲಾಡುತ ಇರುವೆನು ನಾನು..
ನೂರಾರು ಕನಸ ಹೊತ್ತ ಈ ಮನವು
ಕಾಯುತ್ತಿದೆ ಕನಸು ನನಸಾಗಲೆಂದು..
ಪ್ರತಿ ದಿನ ಪ್ರತಿ ಕ್ಷಣ ಹೋರಾಡುತಿರುವೆ
ಕಂಡಿಲ್ಲದ ಪ್ರೀತಿಯ
ಸಿಗಬಯಸಿದೇ ಈ ಮನ..
ಕಾಯುತಿರುವೆನು ಭವಿಷ್ಯದ ದಾರಿಯನು..
ಬಂದುಬಿಡು ಒಮ್ಮೆ
ಧನ್ಯನಾಗುವೆ ನಾ...
ಮನಸ್ಸು-ಕನಸು,ಮಾಗ೯-ಗುರಿಯು,
ಸಾಗರ ಕಡಲ ಸೇರಿಸೊದೋಣಿ ಹಾಗೆ ಯೆ,
ತಾಣದತೀರ ತಲುಪಿಸೋ ಸೂಪತಿ೯ ಸೂತ್ರವಾಗಿವೆ,
ಮನಸ್ಸು ಮೆಘದಂತೆ ಕರಿ-ಬಿಳುಪಿನ ಬಣ್ಣ-ಗುಣ ಹೊಂದಿದೆ,
ಮೆಘ ಮಳೆ ಸುರಿದು ನಿರಾಗಿ, ಭೂಮಿ ಸೇರಿ
ಉಸಿರಾಗಿದೆ,
ಮನಸ್ಸಿನ ಭಾವನೆ ಹರಿದು ನಿರ್ಧಾರವಾಗಿ, ಮೆದುಳು
ತಲುಪಿ ಉತ್ತರ ವಾಗಿದೆವಾಗಿದೆ,
ಮನಸ್ಸೊಂದು ಸರಿ-ತಪ್ಪಿನ ನ್ಯಾಯ ಲಯ
ಅಂತರಾತ್ಮ 'ನ್ಯಾಯ ಲಯದ' ''ನ್ಯಾಯ ಧಿಶ".
"Rajkumar".
ಸಾಗುತಿದೆ ದಾರಿಯು
ಭವಿಷ್ಯದ ಹಾದಿಯಲಿ..
ಸಂತೋಷವು ದೂರವಾಯಿತೇ
ದುಃಖವು ಮರುಕಳಿಸಿತೇ..
ದಿಕ್ಕಿಲ್ಲದೇ ಸಾಗುತಿದೆ
ಈ ಮನವು..
ಅನಾವಶ್ಯವಾದುದು ದೊರಕಿತೂ
ಅವಶ್ಯವಾದುದು ದೂರಾಯಿತು..
ಗುರಿ ಇಲ್ಲ ಗತಿ ಇಲ್ಲ
ಹೋಗುತಿದೆ ಜೀವನವು
ಸರಾಗವಾಗಿ..