Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೋಡಿ ಹೃದಯ ಕಂಗಾಲು..

ಅವಳನ್ನು ನೋಡಿ ಯಾರು ಕೆಮ್ಮಾಗಿಲ್ಲ.
ಅವಳು ಯಾರಿಗೂ ಕಮ್ಮಿಯಿಲ್ಲ.
ಬಟ್ಟಲ ಕಣ್ಣವಳು, ನೋಡಿ ಇಟ್ಟೇನು ಬಲಗಾಲು.
ತಾವರೆ ಮೊಗದವಳು, ನೋಡಿ ಹೃದಯ ಕಂಗಾಲು..

ಸೂರೆಯಾದೆನು ನಿನ್ನ ನೋಡಿದ ದಿವಸ.
ನಿನ್ನ ನೋಡೋದು ಬಿಟ್ಟು ನನಗೆ ಬೇರೇನೂ ಕೆಲಸ.
ನನ್ನ ಪ್ರೀತಿ ನಿನಗೆ ಕಣ್ನಗಾವಲು, ನನ್ನಗೆ ನೀ ಮೀಸಲು.
ನನ್ನ ಎದೆಯ ಬಾಗಿಲು ತೆರೆದಿದೆ ನಿನಗೆ ಯಾವಾಗಲು.
ನನ್ನ ಮನಸ್ಸಿನ ಪುಸ್ತಕಕ್ಕೆ ಇಟ್ಟಿಹಯ್ತು ನಿನ್ನ ಶ್ರೀಷಿಕೇ.
ನನ್ನ ಕನಸಲು ಕೂಡ ನಿನ್ನದೇನೆ ಕನವರಿಕ್ಕೆ...

- NaveenkumarK

06 Jul 2020, 11:56 am

ಫೀಲ್ ಮೈ ಲವ್...

ನನ್ನ ಪ್ರೀತಿ  ಸಾಯೋದಿಲ್ಲ ,
ಪ್ರೀತಿಗೆ ಸಾವೇ ಇಲ್ಲ
ಹೇ ಹುಡುಗಿ ನನ್ನ ಪ್ರೀತಿ ನೀನು ಒಪ್ಪಲ್ವ..
ಫೀಲ್ ಮೈ ಲವ್..

ನನ್ನ ಪ್ರೀತಿ ಮೋಸವಲ್ಲ.
ಮೋಸಮಾಡೋದು ಪ್ರೀತಿ ಅಲ್ಲ.
ಹೇ ಹುಡುಗಿ ನನ್ನ ಮನಸ್ಸಿನ ದಾರಿ ನಿನಗೆ ಕಾಣ್ತಿಲ್ವ.
ಫೀಲ್ ಮೈ ಲವ್..

ನನ್ನ ಪ್ರೀತಿ ಸೋಲೊದಿಲ್ಲ.
ಪ್ರೀತಿಗೆ ಸೋಲೇ ಇಲ್ಲ.
ಸೋಲನ್ನು ಸೋಲಿಸೋದು ಪ್ರೀತಿನೇಅಲ್ಲ್ವಾ.
ಫೀಲ್ ಮೈ ಲವ್..

ಏನೋ ಒಂದು ರಾಗವು ಮೂಡಿದೆ ನನ್ನ ಬಾಳಲ್ಲಿ.
ನಿನ್ನ ಅನುರಾಗಕೆ ಕಾಯುತ್ತಿದೆ ನನ್ನ ಮನಸ್ಸಿಲ್ಲಿ.
ಓ ಪ್ರೇಮ , ಓ ಪ್ರೇಮ ಶಾಶ್ವತವಿಪ್ರೇಮ..

ನಿನಂದ್ರೆ ನನಗೆ ತುಂಬಾ ಇಷ್ಟ.
ನೀನಿದಾಗ ನನಗೆ ಬಂದರು ಕಷ್ಟ.
ಆ  ಕಷ್ಟವ ಕೂಡ ಇಷ್ಟವಾಗಿಸುವ ಗುಣವೇ ಈ ಪ್ರೇಮ.

- NaveenkumarK

06 Jul 2020, 11:07 am

ಗುರುಗಳು

ಗುರುವಿನ ಆರಾಧನೆ ನೀಡುವುದು ಮನಸಿಗಾನಂದ
ಗುರುವಿನ ಬೋಧನೆ ತಿಳಿಸುವುದು ಜೀವನದ ಅರ್ಥವನ್ನು
ಅವರ ಆರ್ಶೀವಾದ ವಚನಗಳು ಬಾಳಿಗೆ ದಾರಿ ದೀಪಗಳು
ಆ ದೀಪದ ಬೆಳಗಿನಿಂದಲೇ ಬೆಳಗಬೇಕು ಮನುಕುಲದ ಜೀವನ...

ಅಮ್ಮನೇ ಮೊದಲ ಗುರು ಮೊದಲ ದೈವ
ಶಿಕ್ಷಕರು ಬುನಾದಿ ಹಾಕುವರು ನಮಗೆ
ಆದರ್ಶ ವ್ಯಕ್ತಿಯಿಂದ ನಮಗೆ ಅಡಿಪಾಯಗಳು
ಗುರುವೇ ನಮ್ಮ ಪಾಲಿನ ಆಸ್ತಿ

- RoopaGowtham

05 Jul 2020, 03:26 pm

ಗುರುವಂದನೆ

ಬರಡು ಜೀವನದಲ್ಲಿ ಜ್ಞಾನ ಎಂಬ
ಬೀಜ ಬಿತ್ತಿ ಚಿಗುರು ಹೊಡೆಯುವಂತೆ ಮಾಡಿ, ಸಮಾಜಕ್ಕೆ ಹೂ,ಹಣ್ಣು, ನೆರಳು
ನೀಡುವಂತೆ ಮಾಡಿ ನಮ್ಮ ಜೀವನವನ್ನು ಸುಂದರವಾಗಿ ರೂಪಿಸಿದ
ಏಲ್ಲಾ ಗುರುಗಳಿಗೆ ಗುರುಪೂರ್ಣಿಮೆಯ ಶುಭಾಶಯಗಳು.

- Mahesh Rk

05 Jul 2020, 08:50 am

ರದ್ದಾಗಿದೆ ನನ್ನಯ ದಿನಚರಿ...

ರದ್ದಾಗಿದೆ ನನ್ನಯ ದಿನಚರಿ.
ನೀ ಖುದ್ದಾಗಿ ಕೊಟ್ಟೆ ನನ್ನ ಹೃದಯಕೆ ಹಾಜರಿ.
ಬದಲಾಯಿತು ನನ್ನಯ ವೈಖರಿ.
ತಿಳಿಯಲಾಗುತಿಲ್ಲ ಏನಿದು ಅಚ್ಚರಿ...

ನನ್ನ ಮನಸ್ಸು ಅಧಿಸೂಚನೆ ಕೊಟ್ಟಯ್ತು. 
ನೀ ನನ್ನವಳು ಎಂದು ಈ ಹೃದಯ ಒಪ್ಪಯ್ತು.
ನಿನ್ನ ನೋಡಲು ನನ್ನ ಕಣ್ಣು ನೆಪ ಹುಡುಕಿತು.
ನಿನ್ನ ಮೆರಸಲು ಮನಸ್ಸು ತನ್ನ ತಾನೇ ಮರೆಯಿತು...

- NaveenkumarK

04 Jul 2020, 10:43 pm

ಇಂತಿಪ್ಪ ಗದ್ದಲದಲ್ಲಿ...

ದೀಪಾ.. ಕತ್ತಲೆಯಲ್ಲಿ ಬಿಕ್ಕಳಿಸಿ ಅಳುತ್ತಿತ್ತು.
ಇನ್ನು ಕತ್ತಲೆ... ದೀಪದ ಸುತ್ತ ವಿಕೃತ ನಗೆ ಬೀರಿ ಕುಣಿಯುತ್ತಿತ್ತು.
ಮಾತುಗಳು... ಮೌನದ ಸಂಧೂಕದ ಸಂಧಿಯಲ್ಲಿ ಬಿಕ್ಕಳಿಸುತ್ತಿದ್ದವು.
ಮೌನದ ಕುಹಕದ ಮಾತುಗಳು ಗಂಟಲನ್ನು ಹಿಚಕುತ್ತಿದ್ದವು.
ದು:ಖವು.. ಸಂತೋಷದ ಒಡಲು ಬಗೆದು ದುಃಖದ ಘೋರಿ ಕಟ್ಟುತ್ತಿತ್ತು.
ಸಂತೋಷವು ತೀರ ತಲುಪಲು ಆಗದೇ ಕೈ ಸೋತು ದುಃಖದ ಸುಳಿವಿನಲಿ ಸಿಲುಕಿ ಒದ್ದಾಡುತ್ತಿತ್ತು.
ನಿಜ ಮತ್ತು ಸುಳ್ಳುಗಳ ಹೋರಾಟದಲ್ಲಿ ಸುಳ್ಳು ತನ್ನ ಬಗ್ಗೆ ಎದೆ ಎದೆ ಬಡೆದುಕೊಂಡು ಕರಪತ್ರ ಹಂಚುತ್ತಿತ್ತು‌.
ಸುಳ್ಳು.. ನಿಜದ ನೆತ್ತಿಯ ಮೇಲೆ ಕುಳಿತು ಸುಳ್ಳೆಂಬ ಸುತ್ತಿಗೆಯಿಂದು ಹೊಡೆಯುತ್ತಿತ್ತು.
ಇಂತಿಪ್ಪ ಗದ್ದಲದಲ್ಲಿ.....
ಬೆಟ್ಟ-ಗುಡ್ಡ ಗಳ ಮೌನದ ರಾಗ ಕೇಳುವವರಾರ?
ಜುಳು- ಜುಳು ಹರಿಯುವ ನದಿಗಳ ನೀನಾದ ಕೇಳುವವರಾರು?
ಗಿಡ-ಗಂಟೆ, ಟೊಂಗೆ- ಎಲೆಗಳ, ಹೂ-ಬಳ್ಳಿಗಳ ಪಿಸುಮಾತು ಕೇಳುವವರಾರು?
ಹಕ್ಕಿ-ಪಿಕ್ಕಿಗಳ ಗುಜು ಗುಜು ಮಾತಗಳ ಕೇಳುವವರಾರು?
ಕತ್ತಲು- ಬೆಳಕಿನ ಜೊತೆ ಲಗೋರಿ ಆಟ ಆಡುವವರಾರು?.

- Siddugouda

04 Jul 2020, 09:02 pm

ಸುಂದರ ಮಸ್ಸಂಜೆ..

ಕಾಲದ ಹಿಂದೆ ಓಡಿತು ಮುಗಿಲು
ಸುಂದರ ಮುಸ್ಸಂಜೆ ವೇಳೆಯಲಿ|
ಅಲೆಗಳ ಚೆಲ್ಲುತ ಸ್ಪಂದಿಸಿತು ಕಡಲು
ಇಂತಹ ಗೋಧೂಳಿಯ ಸಮಯದಲಿ||

ಹಕ್ಕಿಯು ಹಾರಿತು ಗೂಡಿನ ಬಳಿಯೇ
ಒಲವಿನ ಗುಟುಕನು ನೀಡಲು|
ಕೋಗಿಲೆ ಬೆರೆಸಿತು ಇಂಪಾದ ಧ್ವನಿಯ
ಮನುಜರ ಒತ್ತಡ ತಣಿಸಲು||

ಹರಡಿತು ಸುತ್ತಲು ದೀಪದ ಕಾಂತಿ
ಅಷ್ಟಲಕ್ಷ್ಮಿಯರ ಬರಮಾಡಲು|
ಉಳಿಯಿತು ಸಂಸ್ಕೃತಿ, ನೆಲೆಸಿತು ಶಾಂತಿ
ಭಾರತೀಯರ ರಕ್ಷಣೆ ಮಾಡಲು||

- AnanyaHegde

03 Jul 2020, 05:36 pm

ರೋಮಾಂಚನ.

ಹೊಸದೊಂದು ಸುರು ಮಾಡಿದೆ ಕವನ.
ಬರೆಯಲು ಕುಳಿತಿರುವೆ ಈ ಕ್ಷಣ.
ಪದಗಳೆಲ್ಲವು ರೋಮಾಂಚನ...
‌‌‌‌
ಶ್ರೀ ಕಿರಣ್

- KIRAN SIDDANATH

03 Jul 2020, 12:17 pm

ವರ್ಣಮಾಲೆ ಜೀವನ

ಒಲವೇ ಜೀವನ ಒತ್ತುಅಕ್ಷರ
ಗೆಲುವು ಬಾಳಿನ ದೀರ್ಘ ಅಕ್ಷರ
ಸುಖದುಖಃಗಳು ಯೋಗವಾಹಕಗಳು
ನೆಮ್ಮದಿಗೂಂದೆ ಅನುನಾಸಿಕವದು

ಕಖಗಘಙ ಜೀವನದಲ್ಲಿನ ಕಯ್ಯಪಿಯ್ಯ
ಸಾಕು ಸಾಕಯ್ಯ
ಚಛಜಜಞ ಹೊಂದವಣಿಕೆಯೇ ನೆಮ್ಮದಿಯ ಬಾಳಿಗೆ ಇದು ನ್ಯಾಯವಯ್ಯ
ಟಠಡಢಣ ಝಣಝಣ ಕಾಂಚಣ ಬದಲಿಸಿದೆ ಮನುಜನ ಬಣ್ಣ
ತಥದಧನ ಧನಗಕಾಗಿಯೇ ಕದನ ಓ ಮನುಜ ಅದರಿಂದಲೇ ಮರಣ
ಪಫಬಭಮ ಮನಸ್ಸಿಗೆ ಬೇಕು ಪ್ರೀತಿಯ ಅನಾವರಣ
ಯರಲವಶ ಸುತ್ತುವ ಜೀವನ ಪರಿಧಿಯಲ್ಲಿ ಪರಿಚಿತ ಶರ ವೇಗದಿ ಆಗುವ ಅಪರಿಚಿತ
ಷಸಹಳ ನರ ನಾರಿ ಮಣಿಯರ ಸರಪಳಿಯ ಸಲ್ಲಾಪ ಈ ಜೀವನ.....

- RoopaGowtham

02 Jul 2020, 11:08 pm

ಮನಸ್ಸಿನ ಕರೆ....

ನನಗರಿಯದೇ, ನಾ ನಿನ್ನ ಅರಿತೆನು.
ನನ್ನಗೆ ತಿಳಿಯದೆ, ನನ್ನ ನಾನೇ ಮರೆತನು.
ನನ್ನ ಮನಸ್ಸಿಗೆ ಕರೆ ತಂದೆನು.
ನಿನ್ನ ಕಣ್ಣಲೇ ನಾ ಸೆರೆಯಾದೆನು...!

ಬರಲೇನು  ನಾ ನಿನ್ನ ಜೋತೆಗೆ.
ಕೊಡುತ್ತಿಯ ನಿನ್ನ ಕೈ ಹಿಡಿಯುವ ಸಲಿಗೆ.
ನನ್ನ ಕಣ್ಣಾಲ್ಲಿ ನಿನ್ನ ಕಣ್ಣಿಡು ಒಂದು ಘಳಿಗೆ.
ಸಮಯ ಕೈ ಜಾರಿಹೊಗುವದ್ರೋಳಗೆ ...!

- NaveenkumarK

02 Jul 2020, 07:04 pm