ಖಾಲಿ ಬಾನಿನ ಚಂದಿರ ಅವಳು , ನಾ ಕಾದುಕುಲಿತೆನಲ್ಲ .
ಕನಸು ಕಾಣೂ ಕಣ್ಣಿಗೆ ಯಾಕೊ ಕನಸು ಬೀಳಲಿಲ್ಲ .
ಖಾಲಿ ಇರುವ ಮನಸ್ಸಿಗೆ ಯಾಕೊ ಅವಳು ಕಾಲು ಇಡಲಿಲ್ಲ .
ಅಮಾವಾಸ್ಯ ದಿನ ಚಂದ್ರನ ತೋರಿಸುವೆ ಎಂದು ಕೈಯ ಕೊಟ್ಟಳಲ್ಲ ...
ನಿನ್ನ ಪ್ರತಿರೂಪ ಪ್ರತಿಕ್ಷಣವೂ ನನ್ನ ಮನಸ್ಸಿನಲಿ ಒಂದೊಂದು ಪ್ರತಿಯಾಗಿದೆ.
ನಿನ್ನ ಅನುರೂಪ ಅನುಕ್ಷಣವೂ ನನ್ನ ಹೃದಯವ ಹದವಾಗಿ ಅದಗೆಡಿಸಿದೆ...
ಒಬ್ಬ ವ್ಯಕ್ತಿ ಎಷ್ಟು ಕಷ್ಟಪಟ್ಟು ದುಡಿತ ಇರುತ್ತಾನೆ.
ಆದರೆ ಹೊರಗಿನ ಜನಕ್ಕೆ ಅವನ ಕಷ್ಟಗಳ ಅರ್ಥ ಆಗೋದಿಲ್ಲ.
ಆದರೆ ಕಷ್ಟಪಟ್ಟು ಮುಂದೆ ಬಂದಿರುತ್ತಾನೆ.
ಜನರು ಅವರನ್ನು ನೋಡಿ ಹೊಟ್ಟೆ ಉರಿ ಕೊಳ್ಳುತ್ತಾರೆ.
ದೊಡ್ಡವರು ಹೇಳಿದ್ದಾರೆ . ಕೈ ಕೆಸರಾದರೆ ಬಾಯಿ ಮೊಸರು.
ಕಷ್ಟಪಟ್ಟು ದುಡಿ ಮುಂದೆ ಬರುತ್ತೀಯ.
ಇಷ್ಟಪಟ್ಟು ದುಡಿ ಮುಂದೆ ಸಾಧನೆ ಮಾಡುತಿಯ.
ಬದುಕು ಎಷ್ಟು ಕಷ್ಟ.
ನೀವು ದುಡಿಯಿರಿ . ಬೇರೆಯವರನ್ನು ಬದುಕಲು ಬಿಡಿ.
ಬದುಕು .
ಸಾವು ನನ್ನನ್ನು ಕೇಳಿತು
ನಾನು ನಿನ್ನನ್ನು ಆವರಿಸಲೇ ಎಂದು
ಅದಕ್ಕೆ ನಾನು ಹೇಳಿದೆ
ತಾಳು ನನ್ನನ್ನು ನಾನು ಸಾಯಿಸುವವರೆಗೂ ನೀನು ನನ್ನನ್ನು ಆವರಿಸದಿರು
ಸಾರಾಂಶ ಇಷ್ಟೇ....
ನಿನ್ನನ್ನ ನೀನು ಎಲ್ಲಿಯವರೆಗೂ ಪ್ರೀತಿಸುವುದಿಲ್ಲವೋ
ಸಾವು ಯಾವ ದಾರಿಯಿಂದಲಾದ್ರು ಬರ್ಬೋದು
-ಇಂದಿರಾ ಸಾತನೂರ
ಹುಡುಗಿಯ ನೋಡಲೋಗಿದ್ದೆ ಪರ ಊರಿಗೆ
ಮದುವೆ ಮಾಡಿಸಿಕೊಳ್ಳಬೇಕಾಗಿದ್ದು ನನ್ನ ಗೆಳೆಯನಿಗೆ
ಮನೆಯಲ್ಲಿ ಕಡು ಬಡತನವಿದ್ದರೂ
ಮನೆ-ಮನ ನಂದಗೋಕುಲ
ಮಲ್ಲಿಗೆಯ ಮೊಗದಿಂದ ಕರೆದಾದರಿಸಿ ಉಪಚರಿಸಲು
ಆ ವೃದ್ಧ ತಾಯ್ತಂದೆಗಳ ವಿನಃ ಇರಲಿಲ್ಲ ಬೇರಾರು
ಕಾಫಿಯ ಬಟ್ಟಲನಿಡಿದು ಹೂರಬಂದಳು ನಾಚುತ್ತಾ ಹುಡುಗಿ
ರೂಪವತಿಯಾದ ಅವಳ ನೋಟಕ್ಕೆ ಮನಸೋತು
ತಲೆದೂಗಿದ ನನ್ನ ಗೆಳೆಯ
ಸಂಬಂಧ ಬೆಳೆಯಿತೆನ್ನುವಷ್ಟರಲ್ಲಿ ಶಿವಪೂಜೆಗೆ ಹೂಕ್ಕ
ಕರಡಿಯಾಗಿದ್ದು ವರದಕ್ಷಿಣೆ
ಕೂಡಲಷ್ಟು ಸಾಧ್ಯವಾಗದು ನನ್ನಿಂದ ನುಡಿದ
ಆ ವೃದ್ಧ ತತ್ತರಿಸಿ ತೊದಲುತ್ತಾ
ಮಾತನಾಡಲು ಅಲ್ಲಿ ಇರಲಿಲ್ಲ ಅವಕಾಶ
ಸಾವಿರವಿರಲಿ, ಲಕ್ಷದ ಒಳಗೆ!
ಹೊರಟೇಬಿಟ್ಟ ಮಿತ್ರ ಕತ್ತಲೆಯ ಮಡುವಿಗಟ್ಟಿ
ಪಶ್ಚಿಮಾಂಬದಿಯ ಕಡೆಗೆ
ಅವನ ಕಣ್ ಮನಗಳಲಿದ್ದದು ಗುಣವಾಗಿರದೆ ಹಣ! ಹಣ! ಹಣ!
ಆವರೆಗೂ ನಂದಗೋಕುಲವೆನಿಸುತ್ತಿದ್ದ
ಮನೆ-ಮನ ಒಮ್ಮಿಗೆ ಆವರಿಸಿದ್ದು ಮೌನ!
ಕಿಕ್ಕಿರಿದು ಮೋಡಗಳು ಹನಿಯಾದವು
ಅವಳ ಕಣ್ಗಳಲಿ ಆ ತನಕ ಮೌನಿಯಾಗಿದ್ದ ನನ್ನ ಮನ
ಅನ್ಯಾಯವೆಂದು ಸಾರಿ ಸಾರಿ ಹೇಳುತ್ತಿದ್ದರೂ
ವರದಕ್ಷಿಣಾ ನಿರ್ಮೂಲನಾ ದಿನವನ್ನು ಎದುರು ಸ್ವಾಗತಿಸಿ
ಬಲು ಭಾರವಾದ ಮನವಹೊತ್ತು ನಿಸ್ಸಾಹಾಯಕನಾಗಿ
ಹೆಜ್ಜೆಗಳ ಕಿತ್ತೆ ನನ್ನೂರಿನತ್ತಾ