Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕೈ ಮೇಲೆ ಕೈ ‌ಹಾಕಿ

ಪಿಸು ಮಾತು ನೀ ಹೇಳಿ ಹೋಗು
ತುಸು ಲಜ್ಜೆ ಮೂಡೊ ಮುನ್ನ..
ಬಿಸಿ ಉಸಿರು ಆಲಂಗಿಸಿ ನೋಡು,
ಎಳೆ ಮನಸು ಮಾಗೊ ಮುನ್ನ..
ಓ...ಏಳೆಳು ಜನುಮ
ನೀ ನನ್ನಾಸಂಗ
ಇರುವೆ ಎಂದು ಭಾಷೆ ನೀಡು ಬಾ
ಕೈ ಮೇಲೆ ಕೈ ಹಾಕಿ.......
ಕೈ ಮೇಲೆ ಕೈ ಹಾಕಿ.......


✒️ ಅನಿಲ

- ANIL.R.C

19 Aug 2025, 12:04 pm

- Shivanand Jadi

13 Aug 2025, 12:17 pm

ಮಿತಿ ಮೀರಿದ ಮನಸಿನ ಭಾವನೆಗಳು
ಕಣ್ಣಲ್ಲೆ ನನಸಾಗದೆ ಉಳಿದಿರುವ ಅದೆಷ್ಟು ಕನಸುಗಳು
ಕೈಗೆಟುಕದೆ ಕೈಲಾಸದೆತ್ತರಕೆ ಕೈ ಚಾಚಿಸುವ ಧನ ಧಾನ್ಯಗಳು
ಇತ್ತ ಮನೆಯ ಜವಾಬ್ದಾರಿ ಅತ್ತ ಪ್ರೀತಿಯ ರಾಯಭಾರಿ ನೂರೆಂಟು ದಾರಿಗಳು



ಕಲ್ಪನೆಯ ಕನಸುಗಾರ ?✒️

- Shivanand Jadi

13 Aug 2025, 12:16 pm

- Bharani T N

13 Aug 2025, 07:29 am

ಕಲಿ ಕಲಿಕೆಯ ಕಲಿಯಲಿ

ಕಲಿ ಕಲಿಕೆಯ ಕಲಿಯಲಿ
ಕಲಿಕೆಯ ಅತಿಮೋಹನವು ಅಂಧಕಾರದಾಳಾಗಿ...
ಕಲಿಕೆಯ ಕಲಿಭಾವತ್ವನರಿಯದೆ
ಸ್ವಾರ್ಥದೊಳು ನಶ್ವರ ಕರ್ಮದಾರಿಯಲಿ
ಧರ್ಮದರಿವಿನ ಜೀವದಸಿರ ಕೊಲ್ಲುತ್ತಿರುವೆಯೋ ಮನುಜ...

ಕಲಿಕೆಯ ಕಲಿಯೊಳು
ಬಾಳು ಹಗಲೂ ಇರುಳೊ ಎಂಬುದರಿಯದೆ... ಅಂಧಕಾರದೊಳು ತನ್ನನ್ನೇ ತಾನೂ
ತನ್ನೊಳಗೆ ಸಿಲುಕಿಸಿರುವೆಯೋ ಮನುಜ...

ಮನ ಮನದರಿವಿನ ಆನಂದನದಲಿ
ಮನಃಶಾಂತಿಯ ಕಲಿಕೆಯೇ ಆತ್ಮಾನಂದವೋ...
ಮನ ಮನದಿತ ಭಾವತ್ವದರಿವಿನ ಜೀವನದಾನಂದಲಿ
ಮನ ಮನದಂತರಾಳದ ಮಹ ಕಲಿಕೆಯೇ ಪರಮಾತ್ಮನಾ ಪರಮಾನಂದವೋ...


_ಜೀವ ಕಪ್ಪುಚುಕ್ಕಿ


- ಜೀವ ಕಪ್ಪುಚುಕ್ಕಿ

12 Aug 2025, 07:18 pm

Tangi

ಕನ್ನಡ ಕಣ್ಮಣಿ ಪ್ರೀತಿ ಮುದ್ದಿನ ಮನಿ ನನ್ನ ತಂಗಿ ?
ಅಕ್ಕರೆಯಲ್ಲಿ ಸಾಟಿ ಇಲ್ಲ ಪ್ರೀತಿಯಲ್ಲಿ ನನ್ನ ತಂಗಿಯಷ್ಟು ಬಂದು ಇಲ್ಲ
ಕಾಳಜಿ ತೋರುವಲ್ಲಿ ನಿನ್ನ ಹಾಗೆ ಯಾರು ಇಲ್ಲ ??
ಕೊನೆವರೆಗೂ ಕಾಪಾಡಿಕೊಳ್ಳುವೆ ನನ್ನ ಮುದ್ದಿನ ತಂಗಿಯನ್ನು ?
ಮಮತೆಯ ಮಾತಿನಲ್ಲಿ ಪ್ರೀತಿ ಹಂಚುವ ಸಂಬಂಧದಲ್ಲಿ ನನ್ನ ತಂಗಿಯ ಮೇಲುಗೈ
ಈ ಸಂಬಂಧ ಕಲ್ಪಿಸಿಕೊಟ್ಟ ನನ್ನ ತಂಗಿಗೆ ಹುಟ್ಟು ಹಬ್ಬದ ಶುಭಾಶಯಗಳು ನಿನ್ನ ಜೀವನದಲ್ಲಿ ಯಾವಾಗಲೂ ಸುಖ ಶಾಂತಿ ನೆಮ್ಮದಿ ಇರಲಿ ಎಂದು ನಾ ಆಶಿಸುತ್ತೇನೆ ಒಳ್ಳೆಯ ಜ್ಞಾನ ಉಳ್ಳ ನನ್ನ ತಂಗಿ ಉನ್ನತಕ್ಕೆ ಬೆಳೆಯಲಿ,??

- Sanjay Hattikal

11 Aug 2025, 11:29 pm

ಹಸಿರುಸಿರ ಗಿರಿಯಲಿ ಜೀವಮಯ

ಹಸಿರುಸಿರ ಗಿರಿಯಲಿ
ಜೀವಮಯದ ಬಂಧನವೋ
ಜೀವ ಜೀವನದಡಿಯಲಿ
ಸದಾ ಜೀವಿಸೋ ಹಸಿರುಸಿರೇ ಜೀವವೋ

ಒಲವಿನ ಜೀವಾನಂದದಲಿ
ನಲಿವ ಜೀವದಸಿರುಸಿರ ರಾಗವೋ
ಜೀವ ಜೀವಾತ್ಮದಾನಂದಲಿ
ಹೃದಯಾತ್ಮ ನುಡಿಸೋ ಪ್ರೇಮಾನಂದದನುರಾಗವೋ

ಭಾವದಿತ ನುಡಿನಾಡಿಯಲಿ
ಹರಿವ ಪದಾತ್ಮದಾನಂದವೇ ಜೀವನವೋ
ಜೀವ ಜೀವನದೊಳು ಜೀವಿಸೋ
ಹಸಿರುಸಿರ ಗಿರಿಯೇ ಪ್ರೇಮಾನಂದಮಯವೋ...




- ಜೀವ ಕಪ್ಪುಚುಕ್ಕಿ

11 Aug 2025, 07:44 pm

ಕವನದ ಶೀರ್ಷಿಕೆ ಇಂಟರ್ನ್ಯಾಷನಲ್ ಪರ್ಪಲ್ ಫಸ್ಟ್..


ಅಂತರರಾಷ್ಟ್ರೀಯ ಪರ್ಪಲ್ ಫಸ್ಟ್ ಗೋವಾದಲ್ಲಿ,
ನಾವು ಕಳೆದ ಸಮಯವನ್ನು ವರ್ಣಿಸಲಾಗದು ಪದಗಳಲ್ಲಿ.

ತಂತ್ರಜ್ಞಾನದ ಪಕ್ಷಿ ನೋಟ ಅಡಗಿತ್ತು ನಾವು ಸ್ಪರ್ಶಿಸಿದ ಅಪ್ಸೇಸೇಬಲ್ ಡಿವೈಸ್ಗಳಲ್ಲಿ,
ನಮ್ಮ ಸ್ವಾಭಿಮಾನದ ಕಣ್ಣಾಗಬಲ್ಲ ಸಾವಿ ರಾರು ವಸ್ತುಗಳು ಮಿಂಚುತ್ತಿದ್ದವು ಕೈಗೆತಕದ ರೇಟಿನಲ್ಲಿ.

ಪರ್ಪಲ್ ಬಣ್ಣದ ಬ್ಯಾನರ್ಗಳ ಹಂದರಗಳಲ್ಲಿ,
ಪ್ರಾಯೋಗಿಕ ಪ್ರದರ್ಶನದ ಮಾಹಿತಿಯ ಚಿತ್ತಾರ ಚಿಮ್ಮುತ್ತಿತ್ತು ಅನುಭವಸ್ಥರ ಮಾತುಗಳಲ್ಲಿ.

ಆರ್. ಪಿ. ಡಬ್ಲ್ಯೂ. ಡಿ. ಕಾಯಿದೆ ಕಲ್ಪಿಸಿದೆ ಸರ್ವರಿಗೂ ಸಮಾನ ಶಿಕ್ಷಣ,
ಅದರಂತೆ ವಿವಿಧ ತಂತ್ರಗಳ ಅಳವಡಿಸಿ ನಾವು ಬೋಧಿಸಿ ಮಾಡಬೇಕಿದೆ ಮಕ್ಕಳ ಭವಿಷ್ಯ ನಿರ್ಮಾಣ.

ಹಲವು ಹಂತದ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರದ ಮಾರ್ಗಗಳಾದವು ತಜ್ಞರು ಮಂಡಿಸಿದ ವಿಷಯಗಳು,
ಸುಗಮ್ಯತೆ ಸೃಷ್ಟಿಸುವ ಮನಗಳಿಗೆ ಮುನ್ನುಡಿಯಾದವು ಅಲ್ಲಿ ಕೇಳಿದ ಉಪನ್ಯಾಸಗಳು.

ವೀಕ್ಷಕರ ಆಹ್ವಾನಿಸುತ್ತಿದ್ದವು ಮನರಂಜಿಸುವ ಸಾಂಸ್ಕೃತಿಕ ಚಟುವಟಿಕೆಗಳು,
ಸ್ವಯಂ ಸಂತಸ ಪಡೆಯಲು ಸಿದ್ಧವಾಗಿದ್ದವು ವಿಭಿನ್ನ ಕ್ರೀಡೆಗಳು.

ದಣಿದವರಿಗೆ ಪರಿಮಳ ಸೂಸಿ ಸ್ವಾಗತಿಸುತ್ತಿದ್ದವು ಚಾಟ್ಸ್ ಮಳಿಗೆಗಳು,
ಸ್ತ್ರೀಯರ ಸುಂದರ ನೋಟಕ್ಕೆ ಮಣಿಯುತ್ತಿದ್ದವು ಅಲಂಕಾರದ ಆಭರಣಗಳು.

ಅರಸಿ ಬಂದವರಿಗೆ ಹಸಿವು ಮಾಯವಾಗಿತ್ತು,
ಬಯಸಿ ಬಂದ ಕಲಾತ್ಮಕ ಶಿಲೆಗಳಿಗೆ ಜ್ಞಾನದ ವರಹ ದಾನವಾಗಿತ್ತು.

ಸಡಗರದ ಸಮೃದ್ಧಿ ಸಾಧಕರ ಪ್ರೇರೇಪಿಸುತ್ತಿತ್ತು,
ಸಂಸ್ಥೆಗಳ ಪರಿಚಯ ಸುಗಮ್ಯತೆಗೆ ಸಂಪರ್ಕದ ಮಾಧ್ಯಮವಾಗಿತ್ತು.

ನವ ಸಾಧನಗಳ ಸೃಷ್ಟಿ, ವಿಕಲಚೇತನರ ಸ್ವತಂತ್ರ ಬದುಕಿಗೆ ದಿವ್ಯದೃಷ್ಟಿ.

ಪವಿತ್ರ ಯಾತ್ರೆಗು ಶ್ರೇಷ್ಠ ಪರ್ಪಲ್ ಫಸ್ಟ್ ಸಂಭ್ರಮ,
ಇದು ವಿವಿಧ ಆಯಾಮಗಳಲ್ಲಿ ಸಜ್ಜುಗೊಳ್ಳುವ ಕಲಾವಿದರ ಸಮಾಗಮ.

ಒಮ್ಮೆಯಾದರೂ ಹೋಗಬೇಕು ಈ ಸಮಾವೇಶಕ್ಕೆ,
ವಿಶ್ವ ಸಂಸ್ಥೆ ಸಾರಥಿಯಾಗಿದೆ ನಮ್ಮ ವಿಜಯಕ್ಕೆ.


ರಚನೆ ಶ್ರೀಮತಿ ನಾಗಮಣಿ h b
GHPS Dharmapur.

- nagamani Kanaka

09 Aug 2025, 06:32 am

ತಾಯಿ

ಯಾವ ಧರ್ಮದವರಾದರೇನು?
ಹೆತ್ತವಳು ತಾಯಿಯಲ್ಲವೇ!

ಯಾವ ದೇಶದವರಾದರೇನು?
ಹಡೆದವಳು ಹೆಣ್ಣಲ್ಲವೇ!

ಬಡವ ಶ್ರೀಮಂತ ಯಾರಾದರೇನು?
ಜೀವ ನೀಡುವವಳು ತಾಯಿಯಲ್ಲವೇ!

ಯಾವ ಊರಿನವರಾದರೇನು?
ಹುಣಬಡಿಸುವವಳು ಮಾತೆಯಲ್ಲವೇ!

ಯಾವ ಜಾತಿ ಜನಾಂಗವಾದರೇನು?
ಸುಖ ನೀಡುವವಳು ಸಖಿಯಲ್ಲವೇ!

ಗಡಿರೇಖೆಗಳನ್ನು ಮೀರಿದಾಕೆ
ನೀತಿನಿಯಮಗಳ ದಾಟಿದಾಕೆ
ಸರ್ವಕಾಲಕ್ಕೂ ಸರ್ವ ಜನಾಂಗಕ್ಕೂ
ನಿತ್ಯ ಅನ್ನ ನೀಡಿ ಪೊರೆವವಳು
ನನ್ನ ಹೆತ್ತವಳು ನೀನಲ್ಲವೇ ತಾಯಿ......

ಡಾ. ನಾಗೇಶ್ ಮೌರ್ಯ

- ಡಾ ನಾಗೇಶ ಮೌರ್ಯ

07 Aug 2025, 10:40 am

ಹೇಳಿ ಹೋಗು ಕಾರಣ

ಪ್ರೀತಿ ಪ್ರೇಮದ
ಕಿಚ್ಚ ಹೆಚ್ಚು ಮಾಡಿ
ಮನದ ಭಾವಗಳು ಉಕ್ಕುವಂತೆ
ಮಾಡಿ ಈಗೇಕೆ ದೂರಾದೆ.

ಹಗಲು ರಾತ್ರಿಗಳು
ನಿನ್ನ ಕಲ್ಪನೆಯಲ್ಲಿ ಮೂಡಿತ್ತು.
ನಕ್ಷತ್ರಗಳ ಸಾಲಲ್ಲಿ,ಮೋಡಗಳ ಮರೆಯ,ಲ್ಲಿ ಪ್ರೀತಿಯ ಹೊಂಬಿಸಲು, ಈಗ ನೀನೆಲ್ಲಿ?

ನಿನ್ನ ಪುಟ್ಟ ಹೃದಯದಲ್ಲಿ
ನಾನೇ ರಾಣಿಯಾಗಿರುವೆ ಎಂದ ಅರಿತಿದ್ದೆ.
ಹಗಲು ಕನಸುಗಳು ತೇಲಿ ಹೋದವು
ಕಾರಣಗಳೇ ತಿಳಿಯಲಿಲ್ಲ.

ನನ್ನ ದೂರ ತಳ್ಳಿ ಪ್ರೀತಿಯನ್ನು ಅವಮಾನಿಸಿ
ಅಂತ್ಯದಲ್ಲಿ ನೀ ನನಗೆ ಉಳಿಸಿದ್ದು ಕಾಳ್ಗಿಚ್ಚಿನಂತ ನೋವು.
ಕಾರಣ ತಿಳಿಸದೆ ದೂರಾದೇಕೆ? ಹೇಳಿ ಹೋಗು ಕಾರಣ.

- ಮೇಘಾ ಬೆಳಧಡಿ

02 Aug 2025, 09:39 am