ನೀ ಬಂದೆ ಗೆಳತಿ ಚಿತ್ತ ಮಳೆಯಂತೆ
ಪ್ರತಿ ಹನಿಯಲ್ಲಿ ಸಿಹಿ ಮುತ್ತಿನಂತೆ
ನಾ ಸವಿಯುತ್ತಿದೆ ಹುಚ್ಚನಂತೆ
ಚಿತ್ತ ಮಳೆ ಬಂದಾಗಲೆಲ್ಲ ನಿನ್ನ ಚಿಂತೆ
ಈಗ ಪ್ರತಿ ಹನಿ ಸವಿಯುತ್ತಿರಲು
ಕಂಡದೆಲ್ಲಾ ಹಾಲು ಎನ್ನಬೇಡ ಹುಚ್ಚಎಂದು
ದಬದಬನೇ ಸುರಿಯುತ್ತಿವೆ ಹನಿಗಳು ಹಾಸ್ಯಮಯವಾಗಿ......
ಬರಿ ಸವಿ ನೆನಪು ಮಾತ್ರ ಗೆಳತಿ
ನನ್ನ ಮೌನವು ಮಾತನಾಡಿದೆ ಇಂದು ನಿನ್ನ ಕಂಡು
ಮನವಿಂದು ತಂಪಾದ ಗಾಳಿಯ ಸಿಹಿಯ ಉಂಡು
ಬರೆಯಲು ಪದಗಳು ಸಾಲದು ನಿನ್ನ ಕಂಡು
ಬರೆಯಬೇಕೆನಿಸಿದೆ ನಿನ್ನ ಸೌಂದರ್ಯ ಕಂಡು
ಈ ಪ್ರಕೃತಿ ಸೌಂದರ್ಯದ ಗಣಿ
ರೆಕ್ಕೆ ಪುಕ್ಕವಿಲ್ಲದ ಬಂಗಾರದ ಗಿಣಿ
ನೋಡಲು ಸಾಲದು ಎರಡು ನಯನ
ಓ ವಸುಂದರೆ ನಿನ್ನ ನೋಡಲು ಶಾಂತವಾಗುವುದು ಮನ
ಜಾರಿಬಿದ್ದ ಕೂಡಲೆ ಹಾರಿಹೋಗುವ ಹಕ್ಕಿಗಳು
ಹಚ್ಚಹಸಿರಾಗಿ ತೂಗಾಡುತ್ತಿರುವ ಗಿಡಮರಗಳು
ರೆಕ್ಕೆ ಬಿಚ್ಚಿ ಕುಣಿಯುವ ನವಿಲುಗಳು
ನಾದಸ್ವರದಿ ಹಿತನೀಡುವ ಕೋಗಿಲೆಗಳು
ಓ ಮನುಕುಲವೇ ನಾಶವಾಗುತ್ತಿದೆ ಪ್ರಕೃತಿ ನಿನ್ನ
ಹುಚ್ಚಾಟತನದಿಂದ
ಮುರುಕಲು ಮನಸ್ಸಿನ ಹರಕು ಮಾನವರೆ
ಉಸಿರು ಕೊಡುವ ಹಸಿರಿಗೆ ಕೊಡಲಿ ಏಟು ಹಾಕುವಿರಿ
ಜೀವಜಲಕ್ಕೆ ವಿಷವ ಬೆರಿಸಿ ಸಾಧನೆಯೆಂದು ಮೆರೆವಿರಿ
ಸಹನಾಮೂರ್ತಿ ವಸುಂದರೆ ವಿಷವನುಂಡು ಅಮೃತ ನೀಡುವಳು ತಿಳಿಯಿರಿ
ಸಮೀಪಿಸುತ್ತಿದೆ ಕೇಡುಗಾಲ ಇದನ್ನರಿತು ನಡೆಯಿರಿ
Written By :- M.S Yadav
ನನ್ನತ್ತ ನಾ ಹೊರಟಾಗ
ಗುಲಾಬಿ ಹೂ ಒಂದಕಂಡೆ
ಗುಲಾಬಿ ಸುತ್ತಲೂ ಮುಳ್ಳುಗಳಿರುವದನ್ನ ಲೆಕ್ಕಿಸದೆ
ಮೈ ಮರೆತು ಮಂಕಾದೆ
ಗುಲಾಬಿ ಮುಳ್ಳು ಚುಚ್ಚಿ ಚುಚ್ಚಿದಾಗಲೊಮ್ಮೆ
ರಕ್ತದ ಕಣಗಳು ಪ್ರಶ್ನಿಸುತ್ತಿವೆ
ಉತ್ತರಿಸದೇ ಮೂಖನಾಗಿ ಸುಮ್ಮನೆ ಕೂಳಿತಿರುವೆ
ನಕ್ಕಾಗ ನೋಡಿ ಖುಷಿ
ಪಡುವ ಮನಸೊಂದಿದ್ದರೆನೆ ಚೆಂದ
ಅತ್ತಾಗ ನೊಂದು ತಬ್ಬಿ ಸಾಂತ್ವನ ಹೇಳುವ ಮನಸೊಂದಿದ್ದರೆನೆ ಚೆಂದ
ಅಸಿವಾದಗ ಮುದ್ದಿಸಿ
ತಿನ್ನಿಸುವ ಕೈಗಳಿದ್ದರೇನೆ ಅಂದ
ಯಾರು ಬೇಡವೆನಿಸಿದಾಗ ನಾನಿರುವೆ ಹೆದರದಿರು ಎಂದು ನಿನಗಾಗಿ ಎಂದು ಹೇಳುವ ಒಂದು ಪ್ರೀತಿ ಇದ್ದರೇನೆ
ಈಡಿ ಜೀವನಕ್ಕೆ ಬಲು ಚೆಂದ......
ಕಣ್ಣ ಮುಚ್ಚಿದರು ನಿಮ್ಮ ಕಾಣುವೆ
ಕಾದಿರುವೆ ನಿಮಗಾಗಿ ಎಂದು ಬರುವಿರಿ?
ನವಮಾಸ ಸಾಗುವುದೆಂತೋ..
ನಿಮ್ಮ ತೋಳಲಿ ಪಡೆಯುವೆನೆಂತೋ..
ಇಬ್ಬರ ಪ್ರೀತಿಯ ಪ್ರತೀಕ
ಮನೆಯವರೆಲ್ಲರ ಸಂತಸದ ದ್ಯೋತಕ