ನೀನು ಕಾಣದೆ
ಏಕೆ ಮರೆಯಾದೆ
ಸದ್ದಿಲ್ಲದೆ ನಾನು ಮೌನವಾದೆ
ನೋವಿನ ಅಂಚಿನಲ್ಲಿ ಸೆರೆಯಾದೆ
ಪ್ರತಿ ಕಾರ್ಯದಲ್ಲೂ ನಿಶಕ್ತನಾದೆ
ಪ್ರತಿನಿತ್ಯವೂ ಚಂಚಲಾನಾದೆ
ಏಕೆ ಹೀಗೆ ಆದೆ
ನಿಜಕ್ಕೂ ನಾನು ಇದ್ದು ಕಾಣೆಯಾದೆ
ಬದುಕಲ್ಲಿ ನಿಷ್ಕ್ರಿಯವಾದೆ
ಅಪ್ಪ ನೀನೆಷ್ಟು ತ್ಯಾಗಮಯಿ..
ಆದರೂ ಬರೆದಿಲ್ಲ ಯಾರು ನಿನ್ನ ಕಥೆಯ
ರಚಿಸಲಿಲ್ಲ ನಿನ್ನ ಬಗ್ಗೆ ಕವಿತೆಯ..
ಭಾರವೆಲ್ಲಾ ಹೆಗಲಮೇಲುಹೊತ್ತು
ಒತ್ತಡ ಕಷ್ಟಗಳ ನುಂಗಿ
ಮುಖದಲ್ಲಿ ಮಂದಸವಿರಿಸಿ
ತನ್ನ ತನ್ನವರಿಗೆ ಮೀಸಲಿರಿಸಿ
ತೇಯುತ್ತಿರುವ ಶ್ರೀಗಂಧ ಅಪ್ಪ..
ಮಮತೆಯ ಮೂರ್ತಿ
ಪ್ರೀತಿಯ ಸಾಗರ..
ನಾಮಾಂಕಿತ ಬಿರುದ
ತಾಯಿಗೆ ದಕ್ಕಿಸಿದ ಸಾಧಕ.
. ಅಪ್ಪಕಂಡಿಯೇ ಇಂದು
ಬೈಕ್ ಕಾರ್ ಆಟೋಗಳ ಮೇಲೆ
ತಾಯಿಯ ಆಶೀರ್ವಾದ..
ಅಮ್ಮನ ಪ್ರೀತಿ
ಮೊದಲಾದ ಸುಂದರ ಬರಹ
ಎಲ್ಲೂ ಕಾಣೆನು ತೆಗಿಸಿಕೊಟ್ಟ
ಅಪ್ಪನ ಹೆಸರನ್ನ..
ದುಡಿಮೆಯ ದಣಿವ ಬದಿಗಿರಿಸಿ
ಮಡದಿ ಮಕ್ಕಳ ನಗುವಿನಲ್ಲಿ
ತನ್ನಯ ಖುಷಿ ಕಂಡ...
ಆದರೂ ಮನೆಯಲ್ಲಿ ಬೈಗಳ ತಿಂದ.. ಅಪ್ಪ
ಅಪ್ಪ ನೀನು ಅಮ್ಮನ ಪ್ರೀತಿಯ
ಹಿಂದಿನ ಅಗೋಚರ ಶಕ್ತಿ. ..
ಪ್ರಥಮ ಅಳುವಿನ ನಿನ್ನ ಆ ದಿನ
ಎನ್ನ ಜೀವನದ ಸುವರ್ಣ ದಿನ
ತೊದಲು ಮಾತು ಅಂಬೆಗಾಲಿಡುತ್ತಾ
ನೀ ಬೆಳೆದೆ ಎನ್ನಲ್ಲಿ ಹೊಸ ಹುರುಪು ತುಂಬುತ್ತಾ
ನಿನ್ನ ಆಟ ತುಂಟಾಟಗಳ ನೋಡುತ್ತಾ
ಮರೆತೆ ನಾನು ದುಃಖ ದುಮ್ಮಾನಗಳ
ದೀಪಾವಳಿ ಇರಲಿ ಯುಗಾದಿಯೇ ಬರಲಿ
ಎಲ್ಲಕ್ಕಿಂತ ಮಿಗಿಲು ನನಗೆ ಈ ದಿನ
ಸೂರ್ಯಚಂದ್ರರ ಮರೆಮಾಚಿ
ಎನ್ನ ಮನದ ಮನೆಯ ಬೆಳಕಾದೆ ನೀ
ಎಷ್ಟು ಕೊಂಡಾಡಿದರು ಮುದ್ದಾಡಿದರು
ಸಾಲದು ಓ ಎನ್ನ ಮುದ್ದು ಮಗಳೇ
ಇದೋ ನಿನಗೆ ಜನುಮದಿನದ ಶುಭಾಶಯಗಳು
ಬಾಳು ನೀನು ನೂರಾರು ವರ್ಷ
ನಕ್ಕು ನಲಿಯುತ ಪ್ರೀತಿಯ ಹಂಚುತ
ದಿನಕ್ಕೆಷ್ಟೋ ಜನನ
ದಿನಕ್ಕೆಷ್ಟೋ ಮರಣ
ಅರೆ ಕ್ಷಣವೂ ನಿನಗಿಲ್ಲ ಸೂಟಿಯು..
ಸ್ನೇಹ ಕೊಟ್ಟೆ ಪ್ರೀತಿ ಕೊಟ್ಟೆ
ಬದುಕುವ ಆಕಾಂಕ್ಷೆ ಕೊಟ್ಟೆ
ರೀತಿ ಕೊಟ್ಟೆ ನೀತಿ ಕೊಟ್ಟೆ
ಕಟ್ಟಕಡೆಗೆ ಸಾವನಿಟ್ಟೆ..
ಓ ಭಗವಂತ ನಿನಗೆ ನೀನೆ ಸಾಟಿಯು..
- ಸಿದ್ದು ಕನ್ನಡಿಗ