ಅ ಚಂದ್ರನ ಹೋಲಿಕೆ.
ಬೆಳದಿಂಗಳೇ ಶೀರ್ಷಿಕೆ .
ಹೃದಯದ ಬಯಕೆ ಸಾವಿರ.
ಕನಸು ಕಾಣುವೆ ನಿರಂತರ .
ನೋಡುತಲಿ ನಿನ್ನ ಸೂಗಸು.
ಹದಗೆಟ್ಟಿದೆ ನನ್ನ ಮನಸ್ಸು....!
ಬಾರೆ ಬೆಳದಿಂಗಳಾಗಿ.
ನಾ ಬರುವೆ ನಿನ್ನ ನೆರಳಾಗಿ .
ನೀ ಬಂದೆ ನನ್ನ ಬೆಳಕಾಗಿ.
ನಾ ನಗುವೆ ನಿನ್ನ ಬದಲಾಗಿ .
ನೀನಿಲ್ಲದ ಜಗವೆಕೆ.
ಮಾತು ತಿರುಗಿದೆ ಮೌನಕ್ಕೆ.
ನೀರಿಲದ ಕಡಲಲ್ಲಿ ಸಾಗುತಿದೆ ನೌಕೆ.
ನಿನ್ನ ನೋಡಿ ಮನಸ್ಸು ಹಾಕುತಿದೆ ಕೇಕೆ..!
ಮಧ್ಯಮ ವರ್ಗದ ಹೆಣ್ಣುಮಕ್ಕಳಿಗೆ ಅವರ ಕನಸುಗಳು ಕಣ್ಣಲ್ಲೇ ಉಳಿದು ಕಣ್ಣೀರಾಗಿ ಹೋಗಬೇಕೆ ಹೊರೆತು ನನಸಾಗಿ ಆಗಸದಲ್ಲಿ ರೆಕ್ಕೆ ಬಿಚ್ಚಿ ಹಕ್ಕಿಯಂತೆ ಹಾರಲು ಯಾವ ತಂದೆ ತಾಯಿಯೂ ಬಿಡುವುದಿಲ್ಲ ಕಾರಣ ಸಮಾಜ, ವಯಸ್ಸು, ಆರ್ಥಿಕ ಬಿಕ್ಕಟ್ಟು, ಬಂಧುಗಳು ಮತ್ತು ಸ್ನೇಹಿತರು.
ಈ ಮಧ್ಯಮ ವರ್ಗದ ಜನರಿಗೆ ತಮ್ಮ ನೋವು ನಲಿವುಗಳಿಗಿಂತ ಸಮಾಜದಲ್ಲಿ ತಮ್ಮ ಗೌರವ ಮರ್ಯಾದೆ ಹೆಚ್ಚು ತಮ್ಮ ಮಕ್ಕಳ ಆಸೆ ಕನಸುಗಳಿಗಿಂತ ಇತರರ ಬಾಯಲ್ಲಿ ಒಂದು ಮಾತು ಕೇಳದೆ ಬದುಕಿಬಿಟ್ಟರೆ ಸಾಕು ಜೀವನ ಧನ್ಯ.
ಅದರಲ್ಲೂ ಹೆಣ್ಣು ಎಂದರೆ ಋಣಾತ್ಮಕ ಗಂಡು ಎಂದರೆ ಧನಾತ್ಮಕ ಭಾವನೆ ಇವರಲ್ಲಿ ಹೆಣ್ಣನ್ನು ಹೆಚ್ಚಿಗೆ ಓಡಿಸಿದರೆ ನಮಗೇನು ಸಿಗುತ್ತದೆ ಅವಳ ಅತ್ತೆ ಮನೆಯವರಿಗೆ ದುಡಿದು ಹಾಕುತ್ತಾಳೆ ಹೋಗುವುದು ನಮ್ಮ ದುಡ್ಡು ಅದೇ ಮಗನನ್ನು ಓದಿಸಿದರೆ ಜೀವನ ಪೂರ್ತಿ ನಮಗೆ ಉಳಿಯುತ್ತದೆ ಎನ್ನುವ ಆಲೋಚನೆಯೇ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ನಿಲ್ಲಿಸಲು ಮೊದಲ ಕಾರಣ.
ನೀವು ಹೇಳಿದಂತೆ ಅತ್ಯಾಚಾರ ಅನಾಹುತಗಳು ಬರಿ ಹೆಣ್ಣಿಗೆ ಸೀಮಿತ ಮಾಡಿರುವುದು ನಮ್ಮ ಸಮಾಜವೇ ಅಲ್ಲವೇ ಅದೇ ಸಮಾಜ ಒಂದೆಜ್ಜೆ ಮುಂದಾಕಿ ಇವನ್ನೆಲ್ಲಾ ನಿಲ್ಲಿಸಲು ಪ್ರಯತ್ನ ಮಾಡಿದರೆ ನಿಲ್ಲುವುದಿಲ್ಲವೇ?
ಪುರುಷ ಪ್ರಧಾನ ಪ್ರಪಂಚದಲ್ಲಿ ಹೆಣ್ಣಿಗೆ ಹೆಣ್ಣೇ ಶತ್ರು ಎಂಬುದು ನನ್ನ ನಂಬಿಕೆ ಏಕೆಂತದರೆ ತನಗೆ ಆದದ್ದು ತನ್ನ ಮಗಳಿಗೆ ಆಗಬಾರದೆಂದು ಅವಳು ಸ್ವತಂತ್ರಳಾಗಬೇಕೆಂದು ಒಂದು ತಾಯಿ ಅಂದುಕೊಳ್ಳದ ಹೊರೆತು ಯಾವ ಹೆಣ್ಣು ಸ್ವತಂತ್ರಳಲ್ಲ.
ಅವಿನಾಭಾವ ಸಂಬಂಧ
ಆತ್ಮಕ್ಕೂ ಅನಿಲಕ್ಕೂ
ಕೈಗಳಿಗೂ ನಿಲುಕದೇ
ಕಣ್ಣುಗಳಿಗೂ ಕಾಣಿಸದು
ಮೈಮನಕಷ್ಟೇ ಸೀಮಿತ
ಪ್ರೀತಿಯೋ ಅನಿವಾರ್ಯವೋ
ಶರೀರವು ಆತ್ಮದ ನಂಟು
ಧರಣಿಯು ದೇಹದ ಬೆಸುಗೆ
ಶರೀರ ರಹಿತ ಆತ್ಮವು
ವಾಯುವಲ್ಲಿ ಲೀನವು
ಜೀವ ರಹಿತ ದೇಹವು
ಧರಿತ್ರಿಲೀ ವಿಲೀನವಯ್ಯ....!
ಮಲೆನಾಡಿನ ಹುಡುಗಿ ನನವಳು.
ಮಲೆನಾಡಿನ ಚಲುವನು ಪಡೆದವಳು .
ಕಾವೇರಿ ತಾಯಿಯ ಮಡಿಲಲ್ಲಿ ಬೆಳೆದವಳು .
ನನ್ನ ಹುಡುಗಿ ಹಾಡೂ ಮಾತು ಮಗುವಿನ ತರಹ.
ನುಡಿ ಮುತ್ತು ಪೂಣಿಸಿದಂತೆ ನನ್ನ ನಲ್ಲೆಯ ಬರಹ ....!
ಅತಿಯಾಗಿ ಹುಚ್ಚನಗುವ ಬಯಕೆ.
ನಿನ್ನ ನಗುಮುಖವ ನೋಡಿದ ಕ್ಷಣಕೆ.
ನನ್ನ ನಲ್ಲೆಯ ಮುಖದಲ್ಲಿ ಯಾವಗಲು ನಗುವಿರಲಿ ,
ಆ ನಗುವಿನಲ್ಲಿ ನನ್ನ ನೆನಪಿರಲಿ .....!
ಕಣ್ಣಾ ಕಡಲಲ್ಲಿ ಕನಸಿನ ಸೇಳೆತ.
ಮನಸ್ಸ ಮುಗಿಲಲಿ ಪ್ರೀತಿಯ ಮೀಡಿತ.
ಕಣ್ಣಾಲ್ಲಿ ಪ್ರೀತಿ ಕರಗಿ ನೀರಾಗುತೆ.
ಮನಸಲ್ಲಿ ಪ್ರೀತಿ ಕೂಡಿ ಜೇನಗುತೆ.
ಕಣ್ಣಾ ಮುಚ್ಚಲು ನೀನದೆ ಯೋಚನೆ.
ಮನಸ್ಸು ನೀಡಿದೆ ಪ್ರೀತಿಯ ಸೂಚನೆ ...!
ಭಾವದೊಳಗಿನ ಗಮ್ಮತ್ತು ನೀ ,ಸಡಗರದ ಸಿರಿಯು ನೀ.. ನಾ ಹುಟ್ಟುವ ಮೊದಲೇ ಕನಸುಗಳ ಹೊತ್ತು ನನಗೆ ಈ ಜಗತ್ತನ್ನು ಪರಿಚಯಿಸಿದೆ ನೀ. ನವ ಮಾಸ ಹೊತ್ತು -ಎತ್ತು ತನ್ನ ಪ್ರಾಣವನ್ನು ಲೆಕ್ಕಿಸದೆ ಎನಗೆ ಜೀವಧಾನ ಮಾಡಿದವಳು ನೀ ...ನೀ ಕೊಟ್ಟ ಪ್ರಾಣ ಭಿಕ್ಷೆಗೆ ನಾ ಏನೆಂದು ಹೇಳಲ್ಲಮ್ಮ....ನಿನ್ನ ಮಾತೃ ವಾತ್ಸಲ್ಯಕೆ ನಾ ಸದಾ ಚಿರರುಣಿ ತಾಯಿ