ಬರಡು ಜೀವನದಲ್ಲಿ ಜ್ಞಾನ ಎಂಬ
ಬೀಜ ಬಿತ್ತಿ ಚಿಗುರು ಹೊಡೆಯುವಂತೆ ಮಾಡಿ, ಸಮಾಜಕ್ಕೆ ಹೂ,ಹಣ್ಣು, ನೆರಳು
ನೀಡುವಂತೆ ಮಾಡಿ ನಮ್ಮ ಜೀವನವನ್ನು ಸುಂದರವಾಗಿ ರೂಪಿಸಿದ
ಏಲ್ಲಾ ಗುರುಗಳಿಗೆ ಗುರುಪೂರ್ಣಿಮೆಯ ಶುಭಾಶಯಗಳು.
ದೀಪಾ.. ಕತ್ತಲೆಯಲ್ಲಿ ಬಿಕ್ಕಳಿಸಿ ಅಳುತ್ತಿತ್ತು.
ಇನ್ನು ಕತ್ತಲೆ... ದೀಪದ ಸುತ್ತ ವಿಕೃತ ನಗೆ ಬೀರಿ ಕುಣಿಯುತ್ತಿತ್ತು.
ಮಾತುಗಳು... ಮೌನದ ಸಂಧೂಕದ ಸಂಧಿಯಲ್ಲಿ ಬಿಕ್ಕಳಿಸುತ್ತಿದ್ದವು.
ಮೌನದ ಕುಹಕದ ಮಾತುಗಳು ಗಂಟಲನ್ನು ಹಿಚಕುತ್ತಿದ್ದವು.
ದು:ಖವು.. ಸಂತೋಷದ ಒಡಲು ಬಗೆದು ದುಃಖದ ಘೋರಿ ಕಟ್ಟುತ್ತಿತ್ತು.
ಸಂತೋಷವು ತೀರ ತಲುಪಲು ಆಗದೇ ಕೈ ಸೋತು ದುಃಖದ ಸುಳಿವಿನಲಿ ಸಿಲುಕಿ ಒದ್ದಾಡುತ್ತಿತ್ತು.
ನಿಜ ಮತ್ತು ಸುಳ್ಳುಗಳ ಹೋರಾಟದಲ್ಲಿ ಸುಳ್ಳು ತನ್ನ ಬಗ್ಗೆ ಎದೆ ಎದೆ ಬಡೆದುಕೊಂಡು ಕರಪತ್ರ ಹಂಚುತ್ತಿತ್ತು.
ಸುಳ್ಳು.. ನಿಜದ ನೆತ್ತಿಯ ಮೇಲೆ ಕುಳಿತು ಸುಳ್ಳೆಂಬ ಸುತ್ತಿಗೆಯಿಂದು ಹೊಡೆಯುತ್ತಿತ್ತು.
ಇಂತಿಪ್ಪ ಗದ್ದಲದಲ್ಲಿ.....
ಬೆಟ್ಟ-ಗುಡ್ಡ ಗಳ ಮೌನದ ರಾಗ ಕೇಳುವವರಾರ?
ಜುಳು- ಜುಳು ಹರಿಯುವ ನದಿಗಳ ನೀನಾದ ಕೇಳುವವರಾರು?
ಗಿಡ-ಗಂಟೆ, ಟೊಂಗೆ- ಎಲೆಗಳ, ಹೂ-ಬಳ್ಳಿಗಳ ಪಿಸುಮಾತು ಕೇಳುವವರಾರು?
ಹಕ್ಕಿ-ಪಿಕ್ಕಿಗಳ ಗುಜು ಗುಜು ಮಾತಗಳ ಕೇಳುವವರಾರು?
ಕತ್ತಲು- ಬೆಳಕಿನ ಜೊತೆ ಲಗೋರಿ ಆಟ ಆಡುವವರಾರು?.
ಒಲವೇ ಜೀವನ ಒತ್ತುಅಕ್ಷರ
ಗೆಲುವು ಬಾಳಿನ ದೀರ್ಘ ಅಕ್ಷರ
ಸುಖದುಖಃಗಳು ಯೋಗವಾಹಕಗಳು
ನೆಮ್ಮದಿಗೂಂದೆ ಅನುನಾಸಿಕವದು
ಕಖಗಘಙ ಜೀವನದಲ್ಲಿನ ಕಯ್ಯಪಿಯ್ಯ
ಸಾಕು ಸಾಕಯ್ಯ
ಚಛಜಜಞ ಹೊಂದವಣಿಕೆಯೇ ನೆಮ್ಮದಿಯ ಬಾಳಿಗೆ ಇದು ನ್ಯಾಯವಯ್ಯ
ಟಠಡಢಣ ಝಣಝಣ ಕಾಂಚಣ ಬದಲಿಸಿದೆ ಮನುಜನ ಬಣ್ಣ
ತಥದಧನ ಧನಗಕಾಗಿಯೇ ಕದನ ಓ ಮನುಜ ಅದರಿಂದಲೇ ಮರಣ
ಪಫಬಭಮ ಮನಸ್ಸಿಗೆ ಬೇಕು ಪ್ರೀತಿಯ ಅನಾವರಣ
ಯರಲವಶ ಸುತ್ತುವ ಜೀವನ ಪರಿಧಿಯಲ್ಲಿ ಪರಿಚಿತ ಶರ ವೇಗದಿ ಆಗುವ ಅಪರಿಚಿತ
ಷಸಹಳ ನರ ನಾರಿ ಮಣಿಯರ ಸರಪಳಿಯ ಸಲ್ಲಾಪ ಈ ಜೀವನ.....
ಖಾಲಿ ಬಾನಿನ ಚಂದಿರ ಅವಳು , ನಾ ಕಾದುಕುಲಿತೆನಲ್ಲ .
ಕನಸು ಕಾಣೂ ಕಣ್ಣಿಗೆ ಯಾಕೊ ಕನಸು ಬೀಳಲಿಲ್ಲ .
ಖಾಲಿ ಇರುವ ಮನಸ್ಸಿಗೆ ಯಾಕೊ ಅವಳು ಕಾಲು ಇಡಲಿಲ್ಲ .
ಅಮಾವಾಸ್ಯ ದಿನ ಚಂದ್ರನ ತೋರಿಸುವೆ ಎಂದು ಕೈಯ ಕೊಟ್ಟಳಲ್ಲ ...
ನಿನ್ನ ಪ್ರತಿರೂಪ ಪ್ರತಿಕ್ಷಣವೂ ನನ್ನ ಮನಸ್ಸಿನಲಿ ಒಂದೊಂದು ಪ್ರತಿಯಾಗಿದೆ.
ನಿನ್ನ ಅನುರೂಪ ಅನುಕ್ಷಣವೂ ನನ್ನ ಹೃದಯವ ಹದವಾಗಿ ಅದಗೆಡಿಸಿದೆ...