Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅವಳು ನೇನಪು

ದಿನವೂ ನನ್ನ ಕಾಡುವ ನಿನ್ನ ನೆನಪನ್ನ ಒಮ್ಮೆ ಜೋಡಿಸಿಟ್ಟೆ,ಅವುಗಳ ಎತ್ತರ ಬಾನಿಗೇ
ತಾಕಿತ್ತು,ನೆನಪುಗಳ ಗೋಪುರ ಬೀಳದಿರಲೆಂದು,ನನ್ನೆಲ್ಲ ಕನಸುಗಳನ್ನ ಆದಾರವಾಗಿಟ್ಟೆ,ಅವುಗಳಂತೂ ಬಾನ ಚುಕ್ಕಿ ಗೇ ಕೈ ಚಾಚಿತ್ತು...!

ಇಂತಿ ನನ್ನ ಪ್ರೀತಿಯ...

- pavanganu

18 Jun 2020, 03:52 pm

ಮನಸ್ಸಿನ ಮಾತು

ಮನಸ್ಸಿನ ಮಾತು..✒️
ನನ್ನ ಕಣ್ ಅಂಚಿನಲ್ಲಿ ನೀ ಕಟ್ಟಿದ ಕನಸೂಗಳ ಗೋಪುರವೇ ನಿಂತಿದೆ, ಗೋಪುರದ ತಳಹದಿಯಾಗಿ ಕಣ್ಣಿರ ನದಿ ಹರಿಯುತಲ್ಲಿದೇ ಸಖಿ.ಕನಸುಗಳ ಗೋಪುರ ಕುಸಿದು ಬೀಳುವ ಹಂತಕ್ಕೆ ತಲುಪಲು ‌ಬಿಡದಿರು,ನನ್ನಲ್ಲಿಗೇ ಮರಳಿ ಬಂದು ಕಣ್ಣಿರ ನದಿಯ ಹರಿವು ನಿಲ್ಲಿಸಿಬಿಡು...!

ಇಂತಿ ನಿನ್ನ ಪ್ರೀತಿಯ..!

- pavanganu

18 Jun 2020, 03:51 pm

ಪ್ರೀತಿ

ಪ್ರೀತಿ
ಮೊದಲ ದಿನವೇ ಕದ್ದಳಲ್ಲ ನನ್ನ ಮನಸ್ಸು .ದಿನಾಲು ನಾ ಕಂಡೆನಲ್ಲ ಅವಳದೇ ಕನಸು, ಅನ್ಕೊಂಡೆ ನಾ ಅವ್ಳು ಸಿಗಬೇಕಂದ್ರೆ ಬೇಕು ಯಶಸ್ಸು, ಯಶಸ್ಸೇನೋ ಸಿಕ್ತು ಆದ್ರೆ ಅಷ್ಟರಲ್ಲಿ ಅವಳಾದ್ಲು ಬೇರೆಯವರ ಮಿಸಸ್

- pavanganu

18 Jun 2020, 03:48 pm

ಹತ್ತರಲ್ಲಿ ಒಂದು ಹನ್ನೊಂದು

ಹತ್ತರಲ್ಲಿ ಒಂದು ಹನ್ನೊಂದು
ನೀಡಬೇಕು ನಿಂಗೆ ಮುತ್ತೊಂದು,
ಮತ್ತೆ ಮತ್ತೆ ಕಾಡುವ ಮಾತೊಂದು
ಕೈಹಿಡಿದು ಪಕ್ಕದಲ್ಲಿ ಕೂಡಿಸಿ
ಹೇಳಿದೆ ತನ್ನ ಕಣ್ಣೀರು ಕಥೆವೊಂದು.

ಹತ್ತರಲ್ಲಿ ಒಂದು ಹನ್ನೊಂದು
ನೀ ಮಾತಾಡಬೇಡ ನೊಂದು,
ಕಚ್ಚಾಡಬೇಡ ನಂದು ನಿಂದು ಎಂದು
ಮತ್ತೊಮ್ಮೆ ಮಗದೊಮ್ಮೆ ನಿನ್ನ
ನೆನಪು ಕಾಡಿತಂದು,
ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು ಒಮ್ಮೆ
ನೆನಪಾಗುವುದು ಹಾಡೊಂದು.

- VijaypratapRana

18 Jun 2020, 01:53 pm

ಈ ಹೃದಯದಿ ನಿನ್ನ ಹೆಸರಿದೆ

ಈ ಹೃದಯದಿ ನಿನ್ನ ಹೆಸರಿದೆ-೧೦

ಕೀರ್ತಿ ಬರುತ್ತಿದ್ದಂತೆ ಎಲ್ಲಾ ತಯಾರಿ ಮಾಡಿದ್ದರಿಂದ ಪುಟ್ಟ ಸ್ಪಂದು ಕೇಕ್ ಕಟ್ ಮಾಡಿದಳು. ಆಸ್ಪತ್ರೆ ಸಿಬ್ಬಂದಿ ಎಲ್ಲಾ ಚಪ್ಪಾಳೆ ತಟ್ಟಿ  ಅವಳನ್ನ ಮತಷ್ಟೂ ಸಂತಸ ಪಡಿಸಿದರು.

ಅದೆಷ್ಟು ಸಂತಸದಲ್ಲಿ ಆ ದಿನ ಕಳೆದರೂ ಬಹು ದಿನಗಳ ನಂತರ ಸೌರಭ್ ಅಂತಹ  ಸಂಭ್ರಮದ ಒಂದು ಭಾಗವಾದ.

ಅದೇ ಸಿಹಿ ಕ್ಷಣಗಳ ಜೊತೆಯಲ್ಲಿ ಸಾಗಿದರು.
ಕೊನೆಗೂ ಸೌರಭ್ ತನ್ನ ಮನದ ಅರಸಿಯ ಕಾಣುವಲ್ಲಿ ವಿಫಲನಾದ.

ತನ್ನ ಹೃದಯದ ಗ್ರಂಥಾಲಯದಲ್ಲಿ ಅದೆಷ್ಟೋ ವರ್ಷದ ಹಿಂದೆ ಮುಚ್ಚಿಟಿರುವ ಪುಸ್ತಕ ಅವಳು. ಈ ನೆನಪು ಮತೆಂದು ತೆರೆದು ತನ್ನ ಇರುವಿಕೆಯ ತೋರುತ್ತದೆ ಎಂಬಾ ಒಂದು ಊಹೆಯೂ ಸಹ ಇಲ್ಲ. ಪುಸ್ತಕ ಮುಚ್ಚಿ ಬಹಳ ವರ್ಷಗಳು ಕಳೆದು ಹೋಗಿದೆ.


ಏ ದೇವನೇ ನಾ ಎಣಿಸಿದಂತೆ
ಈ ಜೀವನದ ಅಲೆಗೆ ದಡ ದೊರೆತಿದ್ದೆ
ಆದರೆ ನಿನ್ನ ನಾ ನೆನೆಯುತಿರಲಿಲ್ಲ
ಅದಕ್ಕಾಗಿಯೇ ನನಗೆ ಈ ಹುಡುಕಾಟ

ಸೌರಭ್ ಹೃದಯ ನುಡಿದ ನುಡಿ.

ಮುಂದುವರೆಯುತ್ತದೆ,,,,,

- ಹಂಸ ಕುಲಾಲ್ ✍️✍️✍️

- ಹಂಸವೇಣಿ

18 Jun 2020, 09:55 am

ಕಾದಿರುವೆ

ಕಣ್ಣಿಗೆ ಅಂದ ಸೌಂದರ್ಯವ ನೋಡಲು
ಸುವಾಸನೆ ಸವಿಯುವುದು ನಾಸಿಕಾನಂದ
ಆಡಿಕೂಳ್ಳುವುದನ್ನು ಕೇಳಿದ ಕಿವಿಗಳು
ಅದನರಿಸಲು ಮನಸ್ಸಿಗೆ ಆಗುವುದು ಆಕ್ರಂದನ

ಎಷ್ಟೆಂದು ಸಹಿಸುವುದು ಮನ ಚುಚ್ಚು ನುಡಿಯನು
ಅದಕೆ ನಾ ಬರೆದನು ಈ ಓಲೆಯನು
ಬಾ ನನ್ನ ಬಿಡಿಸು ಈ ಬಂಧನದಿಂದ ಅದುವೆ ನನಗೆ ನಿನ್ನ ಬಿಡಿಸಲಾರದ ಅನುಬಂಧ

ಬಾ ನನ್ನ ಗೆಳೆಯ ನಿನಗಾಗಿ ಮಿಡಿದಿದೆ ಈ ಹೃದಯ

- RoopaGowtham

18 Jun 2020, 08:26 am

ಈ ಹೃದಯದಿ ನಿನ್ನ ಹೆಸರಿದೆ

ಈ ಹೃದಯದಿ ನಿನ್ನ ಹೆಸರಿದೆ-೯

ಅಷ್ಟರಲ್ಲೇ ಆಕಾಶ್, ಸ್ಪಂದನಾ ಅಳು ಕಂಡು ಅಲ್ಲಿಗೆ ಬಂದ.

"ಏನಾಯ್ತು ನನ್ ಸ್ವಿಟಿ ಗೆ?"
ಎನುತ್ತಾ ಅವಳನ್ನ ಎತ್ತಿ ಮುದ್ದಿಸಿದ.

"ಈ ಶೂ ಬೇಡ ಪಪ್ಪಾ ಹು,,, ಹು,,, "
ಎಂದು ರಾಗವಾಗಿ ಅಳಲು ಶುರುವಿಟ್ಟಳು.

"ಬೇಡ ಅಂದ್ರೆ ಬೇಡ"
ಎಂದು ತೆಗೆಯಲು ನೋಡಿದ. ಶ್ರಾವ್ಯ,

"ಅಣ್ಣಾ ನಾನೇ ಹಾಕಿದ್ದು. ಅವ್ಳು ಬೇಡ ಅಂದ್ರೂ ಅಷ್ಟೆ. ಬೇಕು ಅಂದ್ರೂ ಅಷ್ಟೆ"

ಎಂದು ಹುಬ್ಬು ಮೇಲೇರಿಸಿದ್ದಳು.

"ನಿನ್ನ ಬೇಕಾದ್ರೆ ನಾನ್ ಸಮಾಧಾನ ಮಾಡ್ತೀನಿ ನಿನ್ ಅತ್ತೆನಾ ನನ್ ಕೈಲಿ ಆಗಲ್ಲ ಇವತೊಂದಿನ ಸ್ವಿಟಿ "

"ಹಾ,,, "
ಮತ್ತೆ ಅದೇ ರಾಗ. ಆಗ ಶ್ರಾವ್ಯ,

"ಅಣ್ಣಾ ಟೈಮ್ ಆಗ್ತಾ ಇದೆ, ಅವ್ಳು ಹೀಗೆ ಅಳ್ತಾ ಇರ್ಲಿ. ನಾವೇ ಕೇಕ್ ಕಟ್ ಮಾಡಿ ತಿನೋದು ಅಷ್ಟೆ"

ಎಂದಾಗ ಮೂತಿ ಉಬ್ಬಿಸಿದಳು. ಅವಳ ರೀತಿ ನೋಡಿ ಸೌರಭ್ ಗೆ ನಗೆ ಬಂತು ಜೋರಾಗಿ ನಕ್ಕ. ಆಗಲೇ ಇಲ್ಲಿ ಇರುವ ಗುರುತು ದೊರಕಿದ್ದು ಶ್ರಾವ್ಯಳಿಗೆ . ಆಕಾಶ್ ನೆನಪಿಸಿಕೊಂಡು,

"ಹೇಳೋದೇ ಮರೆತೇ ಶ್ರಾವ್ಯ, ಹೀ ಇಸ್ ಮೈ ಫ್ರೆಂಡ್ ಕೀರ್ತಿ.
ಕೀರ್ತಿ ಮೈ ಸಿಸ್ಟರ್ ಶ್ರಾವ್ಯ she is also law student"

ಎಂದಾಗ
ಇಬ್ಬರು ಒಮ್ಮೆಲೇ 'ಹಾಯ್'
ಎಂದರಷ್ಟೆ ಬೇರೆ ಮಾತಿಲ್ಲ.

ಶ್ರಾವ್ಯ, ಸೌರಭ್ ಒಂದು ಬಾರಿಯೂ ಮುಖ ಮುಖಿ ಭೇಟಿ ಆಗಿರಲಿಲ್ಲ. ಮನೆಯವರೆಲ್ಲಾ ಇವನ ಬಗ್ಗೆ ಮಾತನಾಡುವಾಗ ಹೆಸರಷ್ಟೇ ನೆನಪು .ಅವನನ್ನ ನೋಡುವ ಕಾತುರ ಏನು ಇರಲಿಲ್ಲ. ಮೊದಲ ಬಾರಿ ನಗುವಿನ ನಡುವಿನಲ್ಲಿ ಇಂದು ಕಂಡಳು. ಅದೇಕೋ ಕಣ್ಣುಗಳು ಮಾತ್ರ ಕೊಂಚ ಗಮನಿಸಿದ್ದವು. ಜೊತೆಗೆ ಒಮ್ಮೆಯೂ ಸಹ ತನ್ನನ್ನ ಗಮನಿಸಲಿಲ್ಲ ಎಂಬ ಕೋಪ. ಅದೇಕೆ?

ಅವನ ರೀತಿಗೆ ಮನಸಲ್ಲೇ

" ತುಂಬಾ attitude ಇದ್ದಾನೆ"

ಎನುತ್ತಾ ಮುಂದೆ ನಡೆದಳು.

ಮುಂದುವರೆಯುತ್ತದೆ,,,,,

- ಹಂಸ ಕುಲಾಲ್✍️✍️✍️

- ಹಂಸವೇಣಿ

17 Jun 2020, 10:12 am

ಭೂಮಾತಾ ಉವಾಚ

ಮಳೆಯು ಸುರಿಯಿತು ಇತ್ತ ಬಾರದೆ
ಎತ್ತ ಹೋದೆಯೋ ರೈತನೆ?
ಸುತ್ತ ಮುತ್ತಲು ನೀರು ಹರಿದಿದೆ
ಬಂದು ಉಳುವೋ ಬೇಗನೇ

ಮುನ್ನ ಮಳೆಯೇ ಇಲ್ಲ ಎಂದು
ನಿನ್ನ ಕಾಯಕ ಮರೆತೆಯಾ
ತನ್ನ ಮನವ ಮುದವಗೊಳಿಸಲು
ಪೇಟೆಯೊಳು ನೀ ನಡೆದೆಯಾ

ಹತ್ತು ಹಲವು ದಿನವು ಕಳೆದು
ನೆಲವು ನಯ-ಹದವಾಗಿದೆ
ಕಳೆದ ಸಮಯ ಮತ್ತೆ ಸಿಗದು
ಬೀಜ ಬಿತ್ತೋ ಬೇಗನೆ

ಬೀಜ ಬಿತ್ತಿ ನೀರ ಹಾಯಿಸಿ
ಹಸಿರು ಸೀರೆಯನುಡಿಸೆಯಾ
ಕಳೆಯ ತೆಗೆದು ಬೆಳೆಯ ಬೆಳೆದು
ನನ್ನ ಒಡಲು ತುಂಬೆಯಾ

ಬೆಳೆಯು ಬಲಿಯಿತು
ಕಟಾವು ಮುಗಿಯಿತು
ನಾ ಬಂಜೆಯಾದೆನು ರೈತನೆ!
ಬಿಸಿಲತಾಪಕೆ ನೀರು ಇಂಗದೆ
ಮತ್ತೆ ಕಾಯುವೆ ಮಳೆಯನೆ

- ಕುಂತೂರು ತ ಸುಬ್ರಹ್ಮಣ್ಯ
ಶೃಂಗೇರಿ
9482119447

- Subramanya K T

17 Jun 2020, 08:39 am

ನಾನು ನನ್ನ ಕನಸು

ಚುಕ್ಕಿ ತಾರೆ ನಾನಲ್ಲ,
ಚುಕ್ಕಿಗಳ ಎಣಿಸುವ ಪ್ರಯತ್ನಪಟ್ಟಿಲ್ಲ

ಅತಿಲೋಕ ಸುಂದರಿ ನಾನಲ್ಲ,
ಸುಂದರವಾಗಿ ಕಾಣಬೇಕೆಂಬ
ಹಂಬಲವೂ ನನಗಿಲ್ಲ,

ಹಾಡಿ ಕೊಳ್ಳುವವರು ಹಾಡಿ ಕೊಳ್ಳಲಿ,
ನನ್ನ ಪಯಣವು ಯಶಸ್ಸಿನತ್ತ ಸಾಗುತಿರಲಿ.

:-ವೀಣಾ ಲಿಂಗಣ್ಣ
ರಾಯಚೂರು

- Veena

15 Jun 2020, 08:49 pm

ಮೌನದ ಮಾತು

ಸುಳ್ಳು ಸತ್ಯವಾಗುವುದು
ಸಂದಭ೯ಕ್ಕೆ ತಕ್ಕ oತೆ
ಅದೇ ಸತ್ಯ ಸುಳ್ಳಾಗುವುದು
ಸಂಬಂಧಗಳಿಗೆ ತಕ್ಕಂತೆ
ಸುಳ್ಳಾದ ಸತ್ಯವನ್ನು ಒಪ್ಪದೆ
ಸತ್ಯವಾದ ಸುಳ್ಳನ್ನೂ ಒಪ್ಪದೆ
ಕಂಗಾಲಾದ ಮನಸು
ಮೌನವಾದರೂ
ಮತ್ತೆದೇ ಮೌನವನ್ನು
ಹುಡುಕುತ್ತಿದೆ...

- dvja

15 Jun 2020, 07:00 pm