ಬಾನಿಂದ ಬಿದ್ದ ಸ್ವಾತಿ ಹಾನಿಯೂ , ಮುತ್ತಾಗಿ ಹೂಳೆಯುವಹಾಗೆ .
ಬಾನಲ್ಲಿ ಕಾಣುವ ಚಂದ್ರನು ತುಸು ನಕ್ಕು , ನಾಚಿಕೊಂಡ ಹಾಗೆ.
ಮಳೆಯಲಿ ಮಿಂದರು ನೆನೆಯದ ಹಾಗೆ.
ಬಿಸಿಲಲಿ ಬೆಂದರು ಬೆವರದ ಹಾಗೆ .
ಜೋತೆಯಲ್ಲಿ ಬರುವೆ ದಣಿಯದ ಹಾಗೆ .
ಪ್ರೀತಿಯ ಸ್ಪರ್ಶವಾಗಿದೆ ನನ್ನಗೆ ತಿಳಿಯದ ಹಾಗೆ..
ಉಬ್ಬೆರಿಸುವ ನನ್ನ ಕಣ್ಣಗಳು , ನಿನ್ನ ನೋಡಿ ತಾಬಿಬ್ಬು ಗೊಂಡಿದೆ.
ಈ ಅಂಜದ ಎದೆಯಲಿ , ಅಂಜಿಕೆಯೂ ಮನೆ ಮಾಡಿದೆ.
ತಂಗಾಳಿ ಸುಸೂ ತಂಪಲ್ಲಿ ನಿನ್ನ ಮಾತೆ ಕೇಳುತಿದೆ .
ಹೋವು ಸುಸೂ ಕಂಪಲ್ಲಿ ನಿನ್ನ ನೆನಪೆ ಕಾಡುತ್ತಿದೆ..
ನಿನ್ನ ಅನುಸರಿಸಿ ಬಂದ ಅನಾಮಿಕ ನಾನು.
ನಿನ್ನ ಅಪರೂಪದ ಚಲುವಿಗೆ ಅಪರಾಧಿ ಅಗಲೇನು.
ಸೂರ್ಯನ ಕಿರಣಕೆ ಬಾಗಿದೆ ಸೂರ್ಯಕಾಂತಿ.
ನೀ ನನ್ನ ನೋಡುವ ಕ್ಷಣವೆಲ್ಲ ನನಗೆ ಸಂಕ್ರಾಂತಿ ..!
ನಿಯಂತ್ರಣದಲ್ಲಡಬಹುದಿತ್ತು ಕೋರೋನ ವೈರಸ್ ನನ್ನು
ಆದರೆ ಸಡಿಲಿಸಿದರು ಲಾಕ್ ಡೌನ್ ನನ್ನು
ಇದರಿಂದ ಹಸಿರು ಕೂಡ ಕೆಂಪಾಯಿತು
ಮಾಡಿದ ಪ್ರಯತ್ನಗಳು ವಿಫಲವಾಯಿತು.
ಆದಾಯಕ್ಕಾಗಿ ಕಂಡು ಹಿಡಿದರು ಉಪಾಯ
ತೆರೆದರು ಮದ್ಯದಂಗಡಿಯ ಬಾಗಿಲ
ಕರೆತಂದರು ಸಾವಿರಾರು ಪ್ರವಾಸಿ ಕಾರ್ಮಿಕರನ್ನು
ಜೊತೆಯಲ್ಲಿ ತರಿಸಿದರು ಕೋರೋನ ವೈರಸ್ ಅನ್ನು
ಅಗತ್ಯವೇ ಇರಲಿಲ್ಲ ಇಂತಹ ಕಿತಾಪತಿ
ಅನುಷ್ಠಾನ ಗೊಳಿಸಿದ್ದರೆ ಘೋಷಿಸಿದ್ದ ಪರಿಹಾರ ಪೂರ್ತಿ
೨೧ ಲಕ್ಷ ಕೋಟಿ ಅನುದಾನದ ಘೋಷಣೆ ಮಾಡಿದ ಮೋದಿ
ಯೋಚಿಸಲ್ಲಿಲ್ಲ ಹೇಗೆ ಕಾರ್ಯರೂಪಕ್ಕೆ ತರುವುದು ಪೂರ್ತಿ.
ಕಾರ್ಖಾನೆ ತೆರೆಯಲು ಅನುಮತಿ ನೀಡಿದೆ ಸರಕಾರ
ಆದರೆ ಇಲ್ಲಿ ಆಗಿದೆ ಕೆಲಸಗಾರರ ಬರವೋ ಬರ
ಹೇಳುವುದಕ್ಕೆ ಬಲು ಸುಲಭ
ಆತ್ಮ ನಿರ್ಭರ್ ಭಾರತ
ಆದರೆ ಅವರಿಗೇನು ಗೊತ್ತು ಅದರ ಒಳ ಅರ್ಥ.......