Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸಾವು...

ಎಲ್ಲಿ ನೋಡಿದರೂ
ನಂದು ನಿಂದು, ನಂದು ನಿಂದು
ಎಲ್ಲದಕ್ಕೂ ಮೀರಿದ್ದು
ಒಂದೇ ಒಂದು ಅದೇ ಸಾವು...
- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

12 Jun 2020, 05:13 pm

ಭಾವನೆಗಳ ಅಂದದ ವ್ಯಾಪ್ತಿಗೆ..

ಈ ಕಣ್ಣಾ ಸಾಕ್ಷಿಗೆ , ಮುಗುಳುನಗೆಯ ಬೇಟೆಗೆ.
ಕೈಯಾತ್ತಿ ಕಾಲ ಮುಗಿಯುವೆ ಈ ಪ್ರೀತಿಗೆ ...!

ಈ  ಪ್ರೀತಿಯ ಕಿಚ್ಚಿಗೆ , ಸಾಗುತಿದೆ ಬೆಚ್ಚಗೆ.
ಕಾಲನೇ ಕಣ್ಣೆಯಾಗಿದೆ ಈ ಪ್ರೀತಿಗೆ ...!

ಈ ಪ್ರೀತಿ ಗುಣಿಸೂ ಮಗ್ಗಿಗೆ, ನನ್ನವಳು ಮಾಡೋ ಉಗ್ಗಿಗೆ.
ಸಂಕ್ರಾಂತಿಯ ಸುಗ್ಗಿ ಬಂದಿದೆ ಈ ಪ್ರೀತಿಗೆ ...!

ನಿನ್ನ  ಪ್ರೀತಿಯಂಬೊ ಕಡಲಿಗೆ , ನಾ  ನದಿಯಾಗಿ  ಬಂದೆ ನಿನ್ನ ಮಡಿಲಿಗೆ.
ಈ ಕಡಲೆ ಮಡಿಲಾಗಿದೆ ಈ ಪ್ರೀತಿಗೆ ...!

ಕಾಮನೆಗಳ ಶೋಕಿಗೆ, ಭಾವನೆಗಳ ಅಂದದ ವ್ಯಾಪ್ತಿಗೆ .
ಕಾಮನೇ ಅಂಧವಾಗಿದೆ (ಕುರುಡಾಗಿದೆ) ಈ ಪ್ರೀತಿಗೆ...!

- NaveenkumarK

12 Jun 2020, 04:56 pm

ನನ್ನ ಪ್ರೀತಿ

ಮುಂಜಾನೆ ತಂಪಲ್ಲಿ ನಾ ನಿನ್ನ ಕಂಡೆ
ನಿನ್ನ ಅಂದ ನೋಡಿ ಬಲು ಮೋಹಗೊಂಡೆ
ಮನದ ಮಾತು ಹೇಳಲು ನಿನ್ನ ಬಳಿ ಬಂದೆ
ಆದರೆ ನಿನ್ನನು ನೋಡುತ ನಾ ಮಂಜಿನತ್ತೆ ಕರಗಿಹೊದೆ
ನನ್ನ ಮನಸು ನೀನೇ ಬೇಕೆಂದು ಬೇಡುತ್ತಿದೆ
ನಿನ್ನ ಆ ಕಣೋಟ್ಟಕ್ಕೆ ಮತ್ತೆ ಮತ್ತೆ ನನ್ನ ಹೃದಯ ಸೋಲುತ್ತಿದೆ
ನೀನು ನನ್ನ ಪ್ರೀತಿಯ ಎಂದು ಒಪ್ಪುವೆಯೋ ಎಂದು ನನ್ನ ಹೃದಯ ಕಾಯುತ್ತಿದೆ
ಈ ಚಿಂತ್ತೆಯಲ್ಲೆ ನನ್ನ ದಿನಗಳು ಮುಂದೆ ಮುಂದೆ ಸಾಗುತ್ತಿದೆ ..............




✍️ಲಿಖಿತ್.m

- likith

12 Jun 2020, 02:45 pm

ಬೆಂಗಳೂರಿನ ಸದ್ದು

ಘಟನೆಯೊಂದು ಘಟಿಸಿತು ಮಧ್ಯಾನದಂದು
ಕೊರೋನ ಸಂಕಟದಲ್ಲಿ ನರಳುತ್ತಿರುವ ಬೆಂಗಳೂರಿನಲ್ಲಿಂದು
ಕೇಳಿಸಿತು ಭಯಂಕರವಾದ ಸಿಡಿಲಿನ ಸದ್ದು
ಇದರಿಂದ ನಡುಗಿತು ಇಡೀ ಬೆಂಗಳೂರು.

ಹೊಡೆದು ಹೋಯಿತು ಕೆಲವರ ಮನೆಯ ಗಾಜು
ಸೀಳಿ ಹೋಯಿತು ಕೆಲವರ ಮನೆಯ ಗೋಡೆಯು
ನಾನಿರುವ ನಮ್ಮೂರಿನಿಂದ ಹಿಡಿದು ಹೊಸೂರಿನವರೆಗೂ
ಕೇಳಿಸಿತು ೫೦ ಮೈಲಿಯ ವರೆಗೂ

ಕೆಲವರು ಹೇಳುತ್ತಾರೆ ಅದು ವಿಮಾನದ ಸೌಂಡು
ಇನ್ನು ಕೆಲವರು ಅದು ಚೆಂಡಮಾರುತದ ಎಫೆಕ್ಟು
ತಿಳಿಯುತ್ತಿಲ್ಲ ಈ ಭಯಂಕರ ಸದ್ದಿನ ಮೂಲ
ಕೆರಳಿಸಿದೆ ಎಲ್ಲಾ ವಿಜ್ಞಾನಿಗಳ ಬುರುಡೆಗಳ.....

- AbhishekSR

12 Jun 2020, 08:14 am

......ಬಾ ಗೆಳತಿ.....

ಮುದ್ದ ಮನಸ್ಸಿನ ಪುಟಗಳು
ಹೇಳಲ್ಲೂ ಬಯಸುವ ಮುದ್ದಂತೆಯಾ ಮಾತುಗಳು
ತೆರೆ ಮರೆಮಾಡಿದೆ ಮನಸ್ಸಿನ ಭಾವನೆ
ತೆರಿಗೆ ಕೇಳಲು ಬಯಸುತ್ತಿದೆ ನನ್ನ ಪುಟ್ಟ ಮನಸ್ಸು....

ನನ್ನನೇ ನನ್ನ ಮರೆಸುತ್ತಿದೆ ನಿನ್ನ ಕಣ್ಣುಗಳು
ಬಲಿಯಾದನೋ ನಿನ್ನ ಕಣ್ಣಿನ ನೋಟಕೆ ಏನೋ,
ರಂಗರೆಸುತ್ತಿದೆ ನಿನ್ನ ಆ ತುಂಟಿ ಅಂಚಿನ ನಗು
ಬೆಲೆ ತರಬೇಕೇನೋ ನಾ ನಿನ್ನ ನಗುವಿಗೆ ತೆರಿಗೆ.....

ನನ್ನ ಜೀವನ ಹಾದಿಯಲ್ಲಿ
ಇನ್ ತೀರಿಗೆ ನೋಡದೆ ನಾಡಿದೆನು
ಆದರೆ ನಿನ್ನ ನೋಡಿದ ಮರು ಕ್ಷಣ
ಕನಸ್ಸಿನ ಲೋಕದಲ್ಲಿ ಈ ಜಗತ್ತೇನೆ ಮರೆತೇನೋ.......

ಕೈ ಹಿಡಿದು ಸಗೋಣ ಜೊತೆ ಜೊತೆಯಾಗಿ
ಮನಸ್ಸಿಗೆ ಕನಸ್ಸಿಗೆ ನಾವ್ ಸಾಕ್ಷಿಯಾಗಿ
ನನ್ನ ಹೃದಯದ ಮಹಾರಾಣಿಯಾಗಿ
ನಮ್ಮ ಅಮ್ಮನಾ ಸೊಸೆಯಾಗಿ.....
ಏಳು ಜನ್ಮಕೂ ಜೊತೆ ಸಂಗಾತಿಯಾಗಿ... ಬಾ ಗೆಳತಿ.........
.

.................Darling Ajay......

- Ajay

11 Jun 2020, 07:12 pm

ಒಂದಾಗಬೇಕಿದೆ

ಈ ಕೊರೊನ ಸಂಕಟದಲಿ
ಕೆಲಸವಿಲ್ಲದೆ ಹಣವುಇಲ್ಲದೆ
ತಿನ್ನಲು ಅನ್ನವೂ ಸಿಗದೆ
ಹಸಿದ ಹೊಟ್ಟೆ ಹೊತ್ತುಕೊಂಡೇ
ನಡೆಯುತ್ತಿದ್ದಾರೆ ತಮ್ಮೂರಿನಡೆಗೆ....

ನಮ್ಮ ನಿಮ್ಮ ಸೇವೆ ಮಾಡಿದ
ಈ ಬಡ ಕಾರ್ಮಿಕರಿಗಿಂದು
ಬಂದಿದೆ ಎಲ್ಲಿಲ್ಲದ ಸಂಕಟ
ಒದಗಿಬಂದಿದೆ ಕರ್ತವ್ಯವೊಂದು
ಕಯ್ಯಲ್ಲಾದ ಸಹಾಯ ಮಾಡೋಣ ಇವರಿಗಿಂದು....

ಈ ಕಷ್ಟದ ಸಮಯದಲ್ಲಿ
ಜಾತಿ ಧರ್ಮದ ಭೇದವಿಲ್ಲದೆ
ಸಹಾಯ ಮಾಡಿ ಸಂಕೋಚವಿಲ್ಲದೆ
ಈ ಯುದ್ಧ ಗೆಲ್ಲಬೇಕಾದರೆ
ನಾವು ನೀವು ಒಂದಾಗಬೇಕಿದೆ....

― ಅಭಿಷೇಕ್

- AbhishekSR

11 Jun 2020, 02:42 pm

ಸಾಧನೆ

ಈ ಭಮಿಯಲ್ಲಿ ಪ್ರತಿ ನಿಮಿಷಕ್ಕೊಮ್ಮೆ ಹುಟ್ಟುವ ಸಾಯುವ ಜನರು ಸಾವಿರಾರು
ಆ ಸಾವಿರಾರು ಜನರಲ್ಲಿ ಏನಾದರೂ ಸಾಧಿಸ ಬೇಕು ಎಂಬ ಛಲ ಇರ್ವವರೂ ನೂರಾರು
ಅದರಲ್ಲಿ ಬರೋ ಯಲ್ಲ ಅಡೆತಡೆಗಳನ್ನು ಮೆಟ್ಟಿ ಗುರಿ ಮುಟ್ಟು ವವರು ಮಾತ್ರ ಕೆಲವರು
ಆ ಕೆಲವರಲ್ಲಿ ಇರಲಿ ನಮ್ಮ ನಿಮ್ಮೆಲ್ಲರ
ಹೆಸರು.............


✍️ಲಿಖಿತ್.m

- likith

11 Jun 2020, 01:42 pm

ಸಾಲು ಸಾಲು ಸರದಿಯಲಿ...

ಸಾಲು ಸಾಲು ಸರದಿಯಲಿ ನಿನ್ನ ವರದಿಗಾಗಿ ಕಾದಿರುವೆ .
ಮಾನಸ ಪರದೆಯಲಿ ನಿನ್ನ ಹೆಸರ ಬರೆದಿರುವೆ ...!
ನೀ ಅಗಿರುವೆ ನನ್ನ ಮನಸೆಂಬ ಪುಸ್ತಕದ ಅರ್ಥಗರ್ಭಿತವಾದ ಸಾಲು.
ಹೇ ಹುಡುಗಿ ನನಗೆ ಯಾವಾಗಲು ನೀನಾದೆ ಗೀಲು...!

- NaveenkumarK

11 Jun 2020, 11:46 am

ಎನು ಇಲ್ಲದ ಮೇಲೆ...‌‌‌‌‌

ಹುಡುಕಿದಷ್ಟು ದೂರ ಸಿಗಲಿಲ್ಲ
ಪುಟ್ಟದೊಂದು ಗೂಡು
ಬೆಚ್ಚಗೆ ಇದ್ದು ಬಿಡಲು......

ನಡೆದಷ್ಟು ಕಲ್ಲು ಮುಳ್ಳು
ಸಿಗಲೆ ಇಲ್ಲ ಹಸಿರಾದ ನನ್ನದೊಂದು ಊರು.....

ಎಣಿಸಿ ಪೊಣಿಸಿದರು ನನಗಾಗಿ
ಕೂಡಿಟ್ಟಿರಲಿಲ್ಲ ಬಂಗಾರದ ಹೊನಲು....‌.

ನಗುನಗುತ ಹರಸಿ ಬಂದರು
ಬರೆದಿರಲಿಲ್ಲ ನನ್ನ ಹೆಸರು
ಅನ್ನದಗುಳಿನಲ್ಲಿ...........

ದುಖಃದೊಳಗಿನ ಮುತ್ತು ಉದುರಿದರು
ಕೈಯೋಂದು ಇರಲಿಲ್ಲ ನನ್ನದೆಂದು ಮರೆತು ಬಿಡಲು......

ನಿಂತ ನಿಲುವಲ್ಲಿ ಎಲ್ಲವ ತೊರೆದು ಜೊತೆಯಾದರು
ಕೈ ಹಿಡಿದ ಜೀವ ಜೊತೆಯಾಗಲಿಲ್ಲ ಎಂದಿಗು........





ರಾಗ......

- ರಾಗಸಿರಿ....

10 Jun 2020, 11:05 pm

ಹನಿಗವನ

ಜೀವನದ ಹಾದಿಯಲಿ ಪದೆ ಪದೆ ಹಿಂದಿರುಗಿ ನೋಡದೆ ಸಾಗಿದೆ
ಕನಸಿನ ಲೋಕದಲಿ ಪದೆ ಪದೆ
ಅವಳ ಕಾಣದೆ... ನೊಂದೆ

ವಿನೋದ್ ಡಿಸೋಜ

- AAA little star

10 Jun 2020, 08:22 pm