ಅಪ್ಪ ನೀನೆಷ್ಟು ತ್ಯಾಗಮಯಿ..
ಆದರೂ ಬರೆದಿಲ್ಲ ಯಾರು ನಿನ್ನ ಕಥೆಯ
ರಚಿಸಲಿಲ್ಲ ನಿನ್ನ ಬಗ್ಗೆ ಕವಿತೆಯ..
ಭಾರವೆಲ್ಲಾ ಹೆಗಲಮೇಲುಹೊತ್ತು
ಒತ್ತಡ ಕಷ್ಟಗಳ ನುಂಗಿ
ಮುಖದಲ್ಲಿ ಮಂದಸವಿರಿಸಿ
ತನ್ನ ತನ್ನವರಿಗೆ ಮೀಸಲಿರಿಸಿ
ತೇಯುತ್ತಿರುವ ಶ್ರೀಗಂಧ ಅಪ್ಪ..
ಮಮತೆಯ ಮೂರ್ತಿ
ಪ್ರೀತಿಯ ಸಾಗರ..
ನಾಮಾಂಕಿತ ಬಿರುದ
ತಾಯಿಗೆ ದಕ್ಕಿಸಿದ ಸಾಧಕ.
. ಅಪ್ಪಕಂಡಿಯೇ ಇಂದು
ಬೈಕ್ ಕಾರ್ ಆಟೋಗಳ ಮೇಲೆ
ತಾಯಿಯ ಆಶೀರ್ವಾದ..
ಅಮ್ಮನ ಪ್ರೀತಿ
ಮೊದಲಾದ ಸುಂದರ ಬರಹ
ಎಲ್ಲೂ ಕಾಣೆನು ತೆಗಿಸಿಕೊಟ್ಟ
ಅಪ್ಪನ ಹೆಸರನ್ನ..
ದುಡಿಮೆಯ ದಣಿವ ಬದಿಗಿರಿಸಿ
ಮಡದಿ ಮಕ್ಕಳ ನಗುವಿನಲ್ಲಿ
ತನ್ನಯ ಖುಷಿ ಕಂಡ...
ಆದರೂ ಮನೆಯಲ್ಲಿ ಬೈಗಳ ತಿಂದ.. ಅಪ್ಪ
ಅಪ್ಪ ನೀನು ಅಮ್ಮನ ಪ್ರೀತಿಯ
ಹಿಂದಿನ ಅಗೋಚರ ಶಕ್ತಿ. ..
ಪ್ರಥಮ ಅಳುವಿನ ನಿನ್ನ ಆ ದಿನ
ಎನ್ನ ಜೀವನದ ಸುವರ್ಣ ದಿನ
ತೊದಲು ಮಾತು ಅಂಬೆಗಾಲಿಡುತ್ತಾ
ನೀ ಬೆಳೆದೆ ಎನ್ನಲ್ಲಿ ಹೊಸ ಹುರುಪು ತುಂಬುತ್ತಾ
ನಿನ್ನ ಆಟ ತುಂಟಾಟಗಳ ನೋಡುತ್ತಾ
ಮರೆತೆ ನಾನು ದುಃಖ ದುಮ್ಮಾನಗಳ
ದೀಪಾವಳಿ ಇರಲಿ ಯುಗಾದಿಯೇ ಬರಲಿ
ಎಲ್ಲಕ್ಕಿಂತ ಮಿಗಿಲು ನನಗೆ ಈ ದಿನ
ಸೂರ್ಯಚಂದ್ರರ ಮರೆಮಾಚಿ
ಎನ್ನ ಮನದ ಮನೆಯ ಬೆಳಕಾದೆ ನೀ
ಎಷ್ಟು ಕೊಂಡಾಡಿದರು ಮುದ್ದಾಡಿದರು
ಸಾಲದು ಓ ಎನ್ನ ಮುದ್ದು ಮಗಳೇ
ಇದೋ ನಿನಗೆ ಜನುಮದಿನದ ಶುಭಾಶಯಗಳು
ಬಾಳು ನೀನು ನೂರಾರು ವರ್ಷ
ನಕ್ಕು ನಲಿಯುತ ಪ್ರೀತಿಯ ಹಂಚುತ
ದಿನಕ್ಕೆಷ್ಟೋ ಜನನ
ದಿನಕ್ಕೆಷ್ಟೋ ಮರಣ
ಅರೆ ಕ್ಷಣವೂ ನಿನಗಿಲ್ಲ ಸೂಟಿಯು..
ಸ್ನೇಹ ಕೊಟ್ಟೆ ಪ್ರೀತಿ ಕೊಟ್ಟೆ
ಬದುಕುವ ಆಕಾಂಕ್ಷೆ ಕೊಟ್ಟೆ
ರೀತಿ ಕೊಟ್ಟೆ ನೀತಿ ಕೊಟ್ಟೆ
ಕಟ್ಟಕಡೆಗೆ ಸಾವನಿಟ್ಟೆ..
ಓ ಭಗವಂತ ನಿನಗೆ ನೀನೆ ಸಾಟಿಯು..
- ಸಿದ್ದು ಕನ್ನಡಿಗ
ಅ ಚಂದ್ರನ ಹೋಲಿಕೆ.
ಬೆಳದಿಂಗಳೇ ಶೀರ್ಷಿಕೆ .
ಹೃದಯದ ಬಯಕೆ ಸಾವಿರ.
ಕನಸು ಕಾಣುವೆ ನಿರಂತರ .
ನೋಡುತಲಿ ನಿನ್ನ ಸೂಗಸು.
ಹದಗೆಟ್ಟಿದೆ ನನ್ನ ಮನಸ್ಸು....!
ಬಾರೆ ಬೆಳದಿಂಗಳಾಗಿ.
ನಾ ಬರುವೆ ನಿನ್ನ ನೆರಳಾಗಿ .
ನೀ ಬಂದೆ ನನ್ನ ಬೆಳಕಾಗಿ.
ನಾ ನಗುವೆ ನಿನ್ನ ಬದಲಾಗಿ .
ನೀನಿಲ್ಲದ ಜಗವೆಕೆ.
ಮಾತು ತಿರುಗಿದೆ ಮೌನಕ್ಕೆ.
ನೀರಿಲದ ಕಡಲಲ್ಲಿ ಸಾಗುತಿದೆ ನೌಕೆ.
ನಿನ್ನ ನೋಡಿ ಮನಸ್ಸು ಹಾಕುತಿದೆ ಕೇಕೆ..!
ಮಧ್ಯಮ ವರ್ಗದ ಹೆಣ್ಣುಮಕ್ಕಳಿಗೆ ಅವರ ಕನಸುಗಳು ಕಣ್ಣಲ್ಲೇ ಉಳಿದು ಕಣ್ಣೀರಾಗಿ ಹೋಗಬೇಕೆ ಹೊರೆತು ನನಸಾಗಿ ಆಗಸದಲ್ಲಿ ರೆಕ್ಕೆ ಬಿಚ್ಚಿ ಹಕ್ಕಿಯಂತೆ ಹಾರಲು ಯಾವ ತಂದೆ ತಾಯಿಯೂ ಬಿಡುವುದಿಲ್ಲ ಕಾರಣ ಸಮಾಜ, ವಯಸ್ಸು, ಆರ್ಥಿಕ ಬಿಕ್ಕಟ್ಟು, ಬಂಧುಗಳು ಮತ್ತು ಸ್ನೇಹಿತರು.
ಈ ಮಧ್ಯಮ ವರ್ಗದ ಜನರಿಗೆ ತಮ್ಮ ನೋವು ನಲಿವುಗಳಿಗಿಂತ ಸಮಾಜದಲ್ಲಿ ತಮ್ಮ ಗೌರವ ಮರ್ಯಾದೆ ಹೆಚ್ಚು ತಮ್ಮ ಮಕ್ಕಳ ಆಸೆ ಕನಸುಗಳಿಗಿಂತ ಇತರರ ಬಾಯಲ್ಲಿ ಒಂದು ಮಾತು ಕೇಳದೆ ಬದುಕಿಬಿಟ್ಟರೆ ಸಾಕು ಜೀವನ ಧನ್ಯ.
ಅದರಲ್ಲೂ ಹೆಣ್ಣು ಎಂದರೆ ಋಣಾತ್ಮಕ ಗಂಡು ಎಂದರೆ ಧನಾತ್ಮಕ ಭಾವನೆ ಇವರಲ್ಲಿ ಹೆಣ್ಣನ್ನು ಹೆಚ್ಚಿಗೆ ಓಡಿಸಿದರೆ ನಮಗೇನು ಸಿಗುತ್ತದೆ ಅವಳ ಅತ್ತೆ ಮನೆಯವರಿಗೆ ದುಡಿದು ಹಾಕುತ್ತಾಳೆ ಹೋಗುವುದು ನಮ್ಮ ದುಡ್ಡು ಅದೇ ಮಗನನ್ನು ಓದಿಸಿದರೆ ಜೀವನ ಪೂರ್ತಿ ನಮಗೆ ಉಳಿಯುತ್ತದೆ ಎನ್ನುವ ಆಲೋಚನೆಯೇ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ನಿಲ್ಲಿಸಲು ಮೊದಲ ಕಾರಣ.
ನೀವು ಹೇಳಿದಂತೆ ಅತ್ಯಾಚಾರ ಅನಾಹುತಗಳು ಬರಿ ಹೆಣ್ಣಿಗೆ ಸೀಮಿತ ಮಾಡಿರುವುದು ನಮ್ಮ ಸಮಾಜವೇ ಅಲ್ಲವೇ ಅದೇ ಸಮಾಜ ಒಂದೆಜ್ಜೆ ಮುಂದಾಕಿ ಇವನ್ನೆಲ್ಲಾ ನಿಲ್ಲಿಸಲು ಪ್ರಯತ್ನ ಮಾಡಿದರೆ ನಿಲ್ಲುವುದಿಲ್ಲವೇ?
ಪುರುಷ ಪ್ರಧಾನ ಪ್ರಪಂಚದಲ್ಲಿ ಹೆಣ್ಣಿಗೆ ಹೆಣ್ಣೇ ಶತ್ರು ಎಂಬುದು ನನ್ನ ನಂಬಿಕೆ ಏಕೆಂತದರೆ ತನಗೆ ಆದದ್ದು ತನ್ನ ಮಗಳಿಗೆ ಆಗಬಾರದೆಂದು ಅವಳು ಸ್ವತಂತ್ರಳಾಗಬೇಕೆಂದು ಒಂದು ತಾಯಿ ಅಂದುಕೊಳ್ಳದ ಹೊರೆತು ಯಾವ ಹೆಣ್ಣು ಸ್ವತಂತ್ರಳಲ್ಲ.
ಅವಿನಾಭಾವ ಸಂಬಂಧ
ಆತ್ಮಕ್ಕೂ ಅನಿಲಕ್ಕೂ
ಕೈಗಳಿಗೂ ನಿಲುಕದೇ
ಕಣ್ಣುಗಳಿಗೂ ಕಾಣಿಸದು
ಮೈಮನಕಷ್ಟೇ ಸೀಮಿತ
ಪ್ರೀತಿಯೋ ಅನಿವಾರ್ಯವೋ
ಶರೀರವು ಆತ್ಮದ ನಂಟು
ಧರಣಿಯು ದೇಹದ ಬೆಸುಗೆ
ಶರೀರ ರಹಿತ ಆತ್ಮವು
ವಾಯುವಲ್ಲಿ ಲೀನವು
ಜೀವ ರಹಿತ ದೇಹವು
ಧರಿತ್ರಿಲೀ ವಿಲೀನವಯ್ಯ....!