Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಗಂಧರ್ವನ ಮಗಳು...

ತುಸು ನಕ್ಕು ಸುಮನೆ ಇರಳು.
ಆ ಚಂದ್ರನ ಹೋಲುವ ಗಂಧರ್ವನ ಮಗಳು.
ಈ ಮಣ್ಣಿನ ಸಂಸ್ಕೃತಿಯ ನೆಲೆ ಅವಳು.
ಕಲ್ಲನ್ನು ಕರಗಿಸೋ ಕಣ್ಣಿನ ಕಲೆ ಅವಳು.
ಮರುಭೂಮಿಯಲ್ಲಿ ನೀರಿನ ಸೆಲೆ ಅವಳು ...
ಅತಿಯಾಗಿ ಕಾಡುವ ಕಿನ್ನರಿ ಕುಲದವಳು.
ಅವಳು ಯಕ್ಷನ ಮಗಳದರು, ನನಗೆ ಎಂದೆಂದಿಗೂ ಅವಳು ಗಂಧರ್ವನ ಮಗಳು...

- NaveenkumarK

05 Jun 2020, 01:11 pm

ಹೃದಯ ಸೇರೆಹಾಯಿತು...

ದಾರಿಯ ಕವಲಿನಲಿ ನಿಂತು ದೂರ ದೃಷ್ಟಿ ಬಿರಿದಳು ,
ಮನಸಿನ ಮೂಲೆಯಾಲಿ ಕೂಳಿತು ಮಂದಹಾಸ ಚಲ್ಲಿದಳು . 
ಹೃದಯದ ತಾಪಕ್ಕೆ ಪ್ರೀತಿ ಹಣ್ಣಾಯಿತು ,
ಕಣ್ಣಿನ  ಸೇಳೆತಕ್ಕೆ ಹೃದಯ ಸೇರೆಹಾಯಿತು .... !

- NaveenkumarK

05 Jun 2020, 12:54 pm

ಮುಗ್ಧ ಪ್ರಾಣಿಯ ಆಕ್ರಂದನ

ಆತುರ ಆತುರದಿ ಹಸಿವು ನೀಗಿಸಿಕೊಳ್ಳಲು
ಹೋದೆಯಮ್ಮ ಆ ಊರೋಳಕ್ಕೆ,
ತಳ್ಳಿ ಬಿಟ್ಟರಮ್ಮ ನಿನ್ನ ಆ ಕ್ರೂರಿಗಳು ಮೃತ್ತು ಕೂಪಕ್ಕೆ,

ಬೆಳಕಿನ ಲೋಕವ ನೋಡಲು ಆ ಕಂದ
ಕಟ್ಟಿತೋ ಅದೇಷ್ಟೋ ಕನಸುಗಳು,
ತಾಯಿಯ ಗರ್ಭದ ಕತ್ತಲೆ ಲೋಕದಿ ಕಮಾರಿ ಹೋದವು ಆ ಕಂದನ ಆಸೆಗಳು,

ಆ ತಾಯಿಯ ನರಳುವಿಕೆಯ ಶಾಪ ಬಿಡದು ಎಂದಿಗೂ ನಿಮ್ಮನ್ನು,
ತಪ್ಪದೇ ಅನುಭವಿಸುವಿರಿ ಮುಂದೊಂದು ದಿನ ನರಕವನ್ನು,
:-ವೀಣಾ ಲಿಂಗಣ್ಣ
ರಾಯಚೂರು

- Veena

05 Jun 2020, 11:38 am

ಗೆಳೆತನ

ನಾ ಹೇಗೆ ಇರಲಿ ಗೆಳತಿ ನಿನ್ನ ಮರೆತು
ನೀ ನನ್ನ ಜೀವಾ. ನೀ ನನ್ನ ಜೀವನ
ನೀ ಮರೆತರೂ ನಾನೆಂದೂ ಮರೆಯಲಾರೆ ನನ್ನ ಕಣ್ಣ ರೆಪ್ಪೆ ಗಳಂತೆ ಕಾಯುಟ್ಟಿನಿ
ನನ್ನ ಹೃದಯದಲ್ಲಿ ನಿನ್ನ ಬಚ್ಚಿಟ್ಟು ಕಾಪಡುತ್ತಿನಿ.
ದೇವರು ನನಗೆ ಅಂತ ಕೊಟ್ಟಿರೋ ವರಕಣೆ ನೀನು
ನನ್ ಮುದ್ದು

- Nandini Nandini

05 Jun 2020, 11:05 am

ಹವಣಿಸಿದೆ ಹಂಬಲವು

ಕನಸುಗಳ ಕಾವಲಲಿ
ಅಪೇಕ್ಷೆಗಳ ಅನುಮತಿಯಲಿ
ಹವಣಿಸಿದೆ ಹಂಬಲವು
ಹಸಿಯಾಗಿ ಹಸಿರಾಗಿ
ಚಿಗುರೊಡೆದು ಚಿಮ್ಮಲು
ಬೆಳದಿಂಗಳು ಬೆರಗಾಗುವಂತೆ ಮಾಡಲು
ಹವಣಿಸಿದೆ ಈ... ಹಂಬಲವು
ಕಂಡುಕೊಳ್ಳಲು ಬರಿ ನಿನ್ನ ಒಲವು...

- dvja

05 Jun 2020, 09:21 am

ಮನಸಾರೆ ಅತ್ತು ಬಿಟ್ಟೆ...

ಗಟ್ಟಿಯಾಗಿ ಅತ್ತುಬಿಟ್ಟೆ
ನನ್ನದೆಯಲಿ ಇರುವ ನೋವಿಗೆ...!
ಕಂಬನಿ ಕೆನ್ನೆ ಮುಟ್ಟೋ ಮುಂಚೆ
ಮಾಯವಾಯ್ತು ಒಡಲಾಳದ ಕಾವಿಗೆ..!
- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

04 Jun 2020, 11:03 pm

ಈ ಹೃದಯದಿ ನಿನ್ನ ಹೆಸರಿದೆ

ಈ ಹೃದಯದಿ ನಿನ್ನ ಹೆಸರಿದೆ-೭

"ಎಲ್ಲಾ ಮರಿತ್ತೀರ ಆದ್ರೆ ಕೋರ್ಟ್ ನಲ್ಲಿ ಮಾತ್ರ ಎಲ್ಲಾ ನೆನಪಲ್ಲೇ ಇರುತ್ತೆ ಅಲ್ವಾ? (ಎಂದು ನಕ್ಕು ಕೀರ್ತಿ ಕಡೆ ತಿರುಗಿ)
ಕೀರ್ತಿ ನಾನ್ ಎಕ್ಸಿಪ್ಟ್ ಕೂಡ ಮಾಡಿರ್ಲಿಲ್ಲ, ಐಎಂ ಸೋ ಹ್ಯಾಪಿ"

ಮತ್ತೆ ಮುಗುಳು ನಗೆ ಅಷ್ಟೇ ಸೌರಭ್ ಉತ್ತರ.

"ಕೀರ್ತಿ ಇವತ್ತೇನಾದ್ರು ಸೂರ್ಯ ಪಶ್ಚಿಮದಲ್ಲಿ ಉದಾಯಿಸಿರಬಹುದಾ?"
ಅನನ್ಯ ಪ್ರಶ್ನಿಸಿದಳು. ಅರ್ಥವಾಗದ ನೋಟದಲ್ಲಿ ಸೌರಭ್,

"ಅಕ್ಕ,,,"
ಎಂದು ಅವರನ್ನೇ ನೋಡಿದ.

"ಇಷ್ಟು ದಿನಕ್ಕೆ ಇವತ್ತು ಬರ್ಬೇಕು ಅಂತಾ ಮೂಡ್ ಬಂದಿದಿಯಲ್ಲ ನಿಂಗೆ"
ನಕ್ಕಳು. ಅವನು ಜೊತೆಯಾದ.

ಅನನ್ಯ ಕೀರ್ತಿ ವೃತ್ತಿ ಜೀವನದಿಂದ ಸ್ವಲ್ಪ ಹತ್ತಿರ. ಆಗಾಗಿ ಪ್ರೀತಿಯಿಂದ ಅಕ್ಕ ಎಂದು ಕರೆಯುವ. ಆಕಾಶ್ ಆಗೊಮ್ಮೆ ಈಗೊಮ್ಮೆ ನೋಡಿ ಅಷ್ಟೇ ಆತ್ಮೀಯರಾದರು. ಅದೆಷ್ಟೋ ಬಾರಿ ಸೌರಭ್ ಗೆ ಆಹ್ವಾನ ನೀಡಿದರೂ ಒಮ್ಮೆಯೂ ಹಾಜರಿ ನೀಡಲಿಲ್ಲ. ಯಾವುದೇ ಫಂಕ್ಷನ್ ಗಳಿಗೂ ಸಹ. ಆಗಾಗಿ ಇವನ ಸ್ವಭಾವ ಅರಿವಿದ್ದರಿಂದ ಸುಮ್ಮನಾಗಿದ್ದರು.

"ಅಕ್ಕ ಸ್ಪಂದನಾ ಎಲ್ಲಿ"
ಕಾತುರದಿಂದ ಕೇಳಿದ. ಪ್ರತಿಯಾಗಿ ಆಕಾಶ್,

"ಅವ್ಳು ಕೇಕ್ ಕಟ್ ಮಾಡೋಕ್ಕೆ ಕಾಯ್ತಾ ಇದ್ದಾಳೆ, ನಿನ್ ಬರ್ತೀನಿ ಅಂತ ಮೆಸೇಜ್ ಮಾಡಿದ್ದು ನೋಡಿ ವೇಟ್ ಮಾಡ್ತಾ ಇದ್ದೀವಿ. ಎಲ್ಲಾ ಹೊರಡೋದೆ ಈಗ"

ಎಂದು ಮುಂದೆ ನಡೆದ. ಹಿಂಬಾಲಿಸಿ ಎಲ್ಲಾ ನಡೆದರು.
ಸೌರಭ್ ಮನಸ್ಸೇಕ್ಕೊ ಅವನಿಗೆ ತಿಳಿಯದೆ ಹರುಷ ನೀಡುತ್ತಿದೆ, ಯಾಕಾಗಿ? ಅದೇಕೋ ಅವನ ಹೃದಯ ಬಡಿತದ ಏರಿಳಿತ ಹೆಚ್ಚಾಗುತ್ತಿದೆ. ಅದ್ಯಾವುದೋ ಸೂಚನೆ ನೀಡುತ್ತಲಿದೆ. ಅದೇ ಏನು ಎಂಬ ಪ್ರಶ್ನೆ ಅವನಿಗೆ ಕಾಡುತ್ತಿದೆ.


ಮುಂದುವರೆಯುವುದು,,,,,
- ಹಂಸ ಕುಲಾಲ್ ✍️✍️✍️

- ಹಂಸವೇಣಿ

04 Jun 2020, 03:21 pm

ಈ ಹೃದಯದಿ ನಿನ್ನ ಹೆಸರಿದೆ

ಈ ಹೃದಯದಿ ನಿನ್ನ ಹೆಸರಿದೆ - ೬

ಕೀರ್ತಿ ಸೌರಭ್ ಕೈಯಲ್ಲೊಂದು ಮುದ್ದಾದ ಬಾರ್ಬಿ ಗೊಂಬೆ ಹಿಡಿದು ಆಸ್ಪತ್ರೆ ಎದುರು ನಿಂತ. ಕಣ್ಣಿಗೆ ಕಂಡದ್ದು ನೀಲಾಂಜನ್ ಅವರು. ಅದೇ ಸಮಯಕ್ಕೆ ಅವರ ನೋಟ ಸಹ ಇವನ ಮೇಲೆ, ಕಂಡೊಡನೆ ನಗುತ್ತಾ ಇಬ್ಬರೂ ಸನಿಹಿಸಿದ್ದರು

"ಸರ್ಪ್ರೈಸ್ ಕೀರ್ತಿ ವೆಲ್ಕಂ ಮೈ ಬಾಯ್ ವೆಲ್ಕಂ"

ಎಂದಾಗ ಆತ್ಮೀಯವಾಗಿ ನಗೆ ಬೀರಿದರು. ಅವನ ಹೆಗಲ ಬಳಸಿ ಜೊತೆಗೆ ಕರೆದಕೊಂಡು ನಡೆದರು. ಆಸ್ಪತ್ರೆ ಒಳ ನಡೆಯುತ್ತಿದ್ದಂತೆ, ಎಲ್ಲರನ್ನ ಕಂಡು ಅವರೆಡೆಗೆ ಕರೆದು ಬಂದರು.

"ಇವ್ನೇ ನನ್ ಫ್ರೆಂಡ್ ಸಂಪತ್ ಸೌರಭ್ ಮಗ
ಕೀರ್ತಿ ಸೌರಭ್. ನೋಡೋ ಆಕಾಶ್ ಇವ್ನು ಅವರಪ್ಪ ಮಾತ್ ಕೇಳಿ  ಲಾಯರ್ ಆದ. ಅದು ನನ್ನನೇ ಮಿರಿಸೋ ಮಟ್ಟಿಗೆ ಬಂದಿದ್ದಾನೆ. ಐಎಂ ಸೋ ಪ್ರ್ವೌಡ್ ಆಫ್ ಯು ಮೈ ಬಾಯ್"

ಎಂದು ಬೆನ್ನು ತಟ್ಟಿದರು.

"ಮತ್ತೆ ಕೀರ್ತಿ ಇದು ನನ್ ಫ್ಯಾಮಿಲಿ ಇವ್,,,

ಮಾತು ಪೂರ್ಣಗೊಳ್ಳುವ ಮುನ್ನವೇ ಆಕಾಶ್,

"ಡ್ಯಾಡಿ ಡ್ಯಾಡಿ ಸ್ವಲ್ಪ ಸ್ಟಾಪ್ ಮಾಡ್ತೀರಾ. ಮಾ,,, ನಮ್ ಹಾಸ್ಪಿಟಲ್ಗೆ ಹೊಸ ಪೇಶೆಂಟ್ ಸಿಕಿದ್ರು, ಯಾರ್ ಗೊತ್ತಾ? ನಮ್ ಡ್ಯಾಡಿನೇ"

" ನಿಜ ಆಕಾಶ್ ಟ್ರೀಟ್ಮೆಂಟ್ ಶುರು ಮಾಡೋದೇ"
ಎಂದು ರೂಪ ಅವರು ನಕ್ಕರು.

" ಯಾಕೆ ಮಿಸಸ್ಸ್ ನೀಲಾಂಜನ್ ಅವರೇ? ನಿಮ್ಗೆ ಪೇಶೆಂಟ್  ಸಿಗ್ತಾ ಇಲ್ವಾ?"

ಎಂದು ಕೇಳಿದಾಗ, ಮತಷ್ಟು ನಕ್ಕ ಆಕಾಶ್,

"ಡ್ಯಾಡಿ ಕೀರ್ತಿ ಪರಿಚಯ ಮೊದ್ಲೇ ಇದೆ. ನೀವೇ ಮಾಡ್ಸಿದ್ದೀರಾ"

"ಹೋ ಮರ್ತೆ ಬಿಟ್ಟಿದೆ ನಾನು"
ಎಂದು ತಲೆ ಕೆರೆದುಕೊಂಡರು.

ಮುಂದುವರೆಯುತ್ತದೆ,,,,,

- ಹಂಸ ಕುಲಾಲ್ ✍️✍️✍️

- ಹಂಸವೇಣಿ

04 Jun 2020, 03:17 pm

ಭಾವನೆಗಳ ಮರಣಮೃದಂಗ ...!

ಪ್ರೀತಿ ಇರುವ ಮನಸ್ಸಿನಲಿ  ಕತ್ತಲೆಯಿಲ್ಲ ,
ದ್ವೇಷ ತುಂಬಿರೂ ಮನಸ್ಸಿನಲಿ ಕತ್ತಲೆಯಾಲ್ಲಾ ......!

ಭಾವನೆಗಳಿಗೆ ಬಾಗಿಲು ಮುಚ್ಚಿದೆ  ಭಾವನ್ಥರಂಗ ,
ಮನಸ್ಸಿನ ಮಾಳಿಗೆಯಲ್ಲಿ ನುಡಿದಿದೆ ಭಾವನೆಗಳ ಮರಣಮೃದಂಗ ...!

- NaveenkumarK

04 Jun 2020, 11:21 am

ನೀನು!!!

ನಿನ್ನ ಹೆಸರೊಂದೇ ಸಾಕು
ಮತ್ತಿನ್ನೇನು ಬೇಕು
ನೆನಪುಗಳು ಸಾಕು
ಸಾನಿಧ್ಯವೇಕೆ ಬೇಕು
ನಿನ್ನ ಹೆಸರಿನಲ್ಲೇ ನಿನ್ನ ಕಾಣಬಲ್ಲೆ
ನೆನಪುಗಳಲ್ಲೇ ನಿನ್ನೊಡನೆ ಬದುಕಬಲ್ಲೆ

- Dima

04 Jun 2020, 09:54 am