Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಶೃಂಗೇರಿಯ ಸಿರಿ

ಬೆಳಕು ಹರಿಯಿತು ಗುಡಿಯು ತೆರೆಯಿತು
ಭಕ್ತಿ ಸಾಗರ ಸೇರಿತು
ದೀಪ ಬೆಳಗಿಸಿ ಪಾಪ ಕಳೆಯಲು
ಶಾರದೆ ಸನಿಹಕೆ ಬಾರೆಯಾ

ತಾಯೇ ತುಂಗೆಯು ಶಾಂತಿ ತೋರಿ
ಸಕಲ ಜಲಚರ ಬದುಕಿಸಿ
ಅಳುವ ಕಂದಗೆ ಹಾಲನುಣಿಸುವ
ತಾಯಿ ನಲಿವಳು ಮುದ್ದಿಸಿ

ಮಂದಹಾಸದಿ ಭಕ್ತರ ಹರಸುವ
ಕಠಿಣ ತಪಸ್ಸಿನ ಸದ್ಗುರು
ಮಿನುಗು ತಾರೆಯ ನಡುವೆ ಶಶಿಯು
ಹೊಳೆವ ಹೊಳಪಿನ ಹಂದರು

ತಾಯೇ ಶಾರದೆ ಲೋಕಪೂಜ್ಯಳೇ
ನಿನ್ನ ಶಿಷ್ಯರ ವೇದ ಪಠಣವು
ಉದಯ ಕಾಲದಿ ರವಿಯ ಕಿರಣವು
ಭುವಿಯ ಮುಟ್ಟುವ ತವಕವು

ತುಂಗಾ ತಟವು ಹಸಿರು ವನವು
ಸುತ್ತ ಮುತ್ತಲು ಸುಂದರ
ವಿದ್ಯಾಮಾತೆಯ ಸನಿಹ ಕಳೆದ
ಶಾಂತ ಸಮಯ ಪಾವನ

- ಕುಂತೂರು ತ ಸುಬ್ರಹ್ಮಣ್ಯ
ಶೃಂಗೇರಿ
9482119447

- Subramanya K T

13 Jun 2020, 08:34 pm

ಹುಣ್ಣಿಮೆಯ ಚಂದ್ರ ನಂತೆ

ಮುದ್ದು ಮೊಗದ ನನ್ನರಸಿ
ಹುಣ್ಣಿಮೆಯ ಚಂದ್ರನಂತಾ
ಮುತ್ತತಂದಿರುವೆ ನನ್ನರಸಿ
ನೋಡು ನಿ ಮೊಗವರಳಿಸಿ
ಹುಣ್ಣಿಮೆ ಚಂದ್ರಮನೆ ಮುಗುತಿಯಾದ
ನಿನ್ನರಿಸಿ
ಬಾ ಬಾಳ ಗೆಳತಿ ಹುಣ್ಣಿಮೆಯ ಚಂದ್ರನಂತೆ

- ಸುಬ್ರಹ್ಮಣ್ಯ ಶಾಸ್ತ್ರಿ

13 Jun 2020, 07:00 pm

ಜೊತೆಗಾತಿ

ಜೀವನದ ಪಯಣದಲ್ಲಿ
ಜೊತೆಯಾದ ಜೊತೆಗಾತಿ
ಪ್ರೀತಿಯ ಪಯಣದಲಿ
ಪ್ರೀತಿಯ ಜೊತೆಗಾತಿ
ಕೋನೆಯಾಗದ ಬಾಳ ಪಯಣದಲಿ
ಪ್ರೀತಿಯಿಂದಿರು ಬಾ ನನ್ನ ಜೀವನದ ಜೊತೆಗಾತಿ............

- ಸುಬ್ರಹ್ಮಣ್ಯ ಶಾಸ್ತ್ರಿ

13 Jun 2020, 10:25 am

ಪಾರಿಜಾತ

ನನ್ನ ಮನಸಿನ ಭಾವನೆಯನ್ನೆನೋ ಇಂದು ನೀ ಕಾಲಡಿಯಲ್ಲಿಟ್ಟು ನಗುತ್ತಿರಬಹುದು....ಆ ದೇವರಲ್ಲಿ ಬೇಡುವೆ ನನ್ನ ಸ್ಥಿತಿ ಮುಂದೊಂದು ದಿನ ನಿನಗೆ ಬರದಿರಲಿ ಎಂದು...
....✍️ ರಾಮ್.

- ರಾಮ್

13 Jun 2020, 12:02 am

ಸರಕಾರದ ಎಡವಟ್ಟು

ನಿಯಂತ್ರಣದಲ್ಲಡಬಹುದಿತ್ತು ಕೋರೋನ ವೈರಸ್ ನನ್ನು
ಆದರೆ ಸಡಿಲಿಸಿದರು ಲಾಕ್ ಡೌನ್ ನನ್ನು
ಇದರಿಂದ ಹಸಿರು ಕೂಡ ಕೆಂಪಾಯಿತು
ಮಾಡಿದ ಪ್ರಯತ್ನಗಳು ವಿಫಲವಾಯಿತು.
ಆದಾಯಕ್ಕಾಗಿ ಕಂಡು ಹಿಡಿದರು ಉಪಾಯ
ತೆರೆದರು ಮದ್ಯದಂಗಡಿಯ ಬಾಗಿಲ

ಕರೆತಂದರು ಸಾವಿರಾರು ಪ್ರವಾಸಿ ಕಾರ್ಮಿಕರನ್ನು
ಜೊತೆಯಲ್ಲಿ ತರಿಸಿದರು ಕೋರೋನ ವೈರಸ್ ಅನ್ನು
ಅಗತ್ಯವೇ ಇರಲಿಲ್ಲ ಇಂತಹ ಕಿತಾಪತಿ
ಅನುಷ್ಠಾನ ಗೊಳಿಸಿದ್ದರೆ ಘೋಷಿಸಿದ್ದ ಪರಿಹಾರ ಪೂರ್ತಿ
೨೧ ಲಕ್ಷ ಕೋಟಿ ಅನುದಾನದ ಘೋಷಣೆ ಮಾಡಿದ ಮೋದಿ
ಯೋಚಿಸಲ್ಲಿಲ್ಲ‌ ಹೇಗೆ ಕಾರ್ಯರೂಪಕ್ಕೆ ತರುವುದು ಪೂರ್ತಿ.

ಕಾರ್ಖಾನೆ ತೆರೆಯಲು ಅನುಮತಿ ನೀಡಿದೆ ಸರಕಾರ
ಆದರೆ ಇಲ್ಲಿ ಆಗಿದೆ ಕೆಲಸಗಾರರ ಬರವೋ ಬರ
ಹೇಳುವುದಕ್ಕೆ ಬಲು ಸುಲಭ
ಆತ್ಮ ನಿರ್ಭರ್ ಭಾರತ
ಆದರೆ ಅವರಿಗೇನು ಗೊತ್ತು ಅದರ ಒಳ ಅರ್ಥ.......

- AbhishekSR

12 Jun 2020, 07:33 pm

ನನ್ನವಳು

ಕನ್ನಡತಿ..

ಗಣಿನಾಡ ಗರತಿ
ಚಂದನದ ಸುರತಿ
ಅಪ್ಪಟ ಕನ್ನಡತಿ
ನನ್ನ ಮನದೊಡತಿ..!
- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

12 Jun 2020, 05:14 pm

ನಗುತಿರು..

ನಗುತಿರುವೆ ನಾನು
ಮರೆಯಲು ನನ್ನ ನೋವನ್ನು..
ಹಾಗೇ ನಗಿಸುತಲಿರುವೆ ಜನ
ಮರೆದಿರಲೆಂದು ನನ್ನಯ ಸಾವನ್ನು..
- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

12 Jun 2020, 05:14 pm

ಸಾವು...

ಎಲ್ಲಿ ನೋಡಿದರೂ
ನಂದು ನಿಂದು, ನಂದು ನಿಂದು
ಎಲ್ಲದಕ್ಕೂ ಮೀರಿದ್ದು
ಒಂದೇ ಒಂದು ಅದೇ ಸಾವು...
- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

12 Jun 2020, 05:13 pm

ಭಾವನೆಗಳ ಅಂದದ ವ್ಯಾಪ್ತಿಗೆ..

ಈ ಕಣ್ಣಾ ಸಾಕ್ಷಿಗೆ , ಮುಗುಳುನಗೆಯ ಬೇಟೆಗೆ.
ಕೈಯಾತ್ತಿ ಕಾಲ ಮುಗಿಯುವೆ ಈ ಪ್ರೀತಿಗೆ ...!

ಈ  ಪ್ರೀತಿಯ ಕಿಚ್ಚಿಗೆ , ಸಾಗುತಿದೆ ಬೆಚ್ಚಗೆ.
ಕಾಲನೇ ಕಣ್ಣೆಯಾಗಿದೆ ಈ ಪ್ರೀತಿಗೆ ...!

ಈ ಪ್ರೀತಿ ಗುಣಿಸೂ ಮಗ್ಗಿಗೆ, ನನ್ನವಳು ಮಾಡೋ ಉಗ್ಗಿಗೆ.
ಸಂಕ್ರಾಂತಿಯ ಸುಗ್ಗಿ ಬಂದಿದೆ ಈ ಪ್ರೀತಿಗೆ ...!

ನಿನ್ನ  ಪ್ರೀತಿಯಂಬೊ ಕಡಲಿಗೆ , ನಾ  ನದಿಯಾಗಿ  ಬಂದೆ ನಿನ್ನ ಮಡಿಲಿಗೆ.
ಈ ಕಡಲೆ ಮಡಿಲಾಗಿದೆ ಈ ಪ್ರೀತಿಗೆ ...!

ಕಾಮನೆಗಳ ಶೋಕಿಗೆ, ಭಾವನೆಗಳ ಅಂದದ ವ್ಯಾಪ್ತಿಗೆ .
ಕಾಮನೇ ಅಂಧವಾಗಿದೆ (ಕುರುಡಾಗಿದೆ) ಈ ಪ್ರೀತಿಗೆ...!

- NaveenkumarK

12 Jun 2020, 04:56 pm

ನನ್ನ ಪ್ರೀತಿ

ಮುಂಜಾನೆ ತಂಪಲ್ಲಿ ನಾ ನಿನ್ನ ಕಂಡೆ
ನಿನ್ನ ಅಂದ ನೋಡಿ ಬಲು ಮೋಹಗೊಂಡೆ
ಮನದ ಮಾತು ಹೇಳಲು ನಿನ್ನ ಬಳಿ ಬಂದೆ
ಆದರೆ ನಿನ್ನನು ನೋಡುತ ನಾ ಮಂಜಿನತ್ತೆ ಕರಗಿಹೊದೆ
ನನ್ನ ಮನಸು ನೀನೇ ಬೇಕೆಂದು ಬೇಡುತ್ತಿದೆ
ನಿನ್ನ ಆ ಕಣೋಟ್ಟಕ್ಕೆ ಮತ್ತೆ ಮತ್ತೆ ನನ್ನ ಹೃದಯ ಸೋಲುತ್ತಿದೆ
ನೀನು ನನ್ನ ಪ್ರೀತಿಯ ಎಂದು ಒಪ್ಪುವೆಯೋ ಎಂದು ನನ್ನ ಹೃದಯ ಕಾಯುತ್ತಿದೆ
ಈ ಚಿಂತ್ತೆಯಲ್ಲೆ ನನ್ನ ದಿನಗಳು ಮುಂದೆ ಮುಂದೆ ಸಾಗುತ್ತಿದೆ ..............




✍️ಲಿಖಿತ್.m

- likith

12 Jun 2020, 02:45 pm