ಆ ಬೆಳದಿಂಗಳ ಪಸರಿಸುತ್ತಿದೆ, ನಿನ್ನ ರೂಪಸಿಯ
ಪ್ರತಿಬಿಂಬ ನನ್ನಂತಿದೆಯೆಂದು
ಆಕಾಶದ ನಕ್ಷತ್ರಗಳು ಕಣ್ಸನ್ನೆ ಮಾಡುತ್ತೀವೆ, ನಿನ್ನ
ಅಪ್ಸರೆಯ ಕಣ್ಣುಗಳು ನಮ್ಮಂತತಿವೆಂದು
ಮೇಘಗಳು ಸಾಲಾಗಿ ಅನುರಣನ ಮಾಡುತ್ತಿವೆ
ನಿನೆಷ್ಟು ಆಕರ್ಷಕಳೆಂದು.....
ಸೊಂಪಾದ ಗಾಳಿಯು ತಂದಿವೆ ನಿನ್ನ
ಹೃದಯಮಿಡಿತದ ನಾದವನ್ನು
ನನ್ನಮನ ಮಿಡಿದಿದೆ ಕನಸಿನ ಯುವರಾಣಿಯನ್ನು
ನೋಡಲೆಂದು......
ಅವಳ ಹೆಜ್ಜೆಯೊಂದಿಗೆ ಹೆಜ್ಜೆಯನ್ನು ಹಾಕುವ ಆಸೆ
ಕಾಡುತ್ತಿದೆ ನನ್ನ ಮನದಲ್ಲಿಂದು.....
ಬಯಸುತಿದೆ ನನ್ನ ಮನ ಅವಳೊಂದಿಗೆ
ಯಾವಾಗಲೂ ಜೊತೆಗಿರಲೆಂದು....
Written by :- M S ಯಾದವ್.
ಓ ದೇವರೆ... !
ನನ್ನದೊಂದು ಮೊರೆ
ಅಹಂಕಾರದಿ ನಿನ್ನನೇ ಮರೆತ
ಸ್ವಾರ್ಥ, ಸ್ವಾಭಿಮಾನ
ಪ್ರತಿಷ್ಠೆಯಿಂದ ತುಂಬಿ ತುಳುಕುತ
ಮೆರೆಯುತ್ತಿದ್ದ ಈ ಮಾನವನನ್ನು
ಕೊನೆಗೂ ಏಕೆ ಕ್ಷಮಿಸಿದ್ದೀಯಾ?
ನೀ ಮನಸು ಮಾಡಿದರೆ
ಏನೆಲ್ಲಾ ಮಾಡಬಹುದು... !
ಇಡೀ ಭ್ರಹ್ಮಾಂಡವನ್ನೇ ಮಾಡಬಹುದು ಸೂರೆ
ಆದರೂ...
ನೀ ನೀಡಿರುವೆ ನಮಗೆಲ್ಲಾ ಆಸರೆ.
ನಾನೊಬ್ಬ ಕನಸುಗಾರ ಅಂದರೆ ಕನಸು ಕಾಣುವವ,
ನಾನೊಬ್ಬ ಅಲೆಮಾರಿಯೂ ಸಹ, ನನ್ನ ಮನಸ್ಸು ಕೂಡ
ನನ್ನ ಒಂದೊಂದೆ ಕನಸುಗಳನ್ನು ಕೂಡಿಟ್ಟು ಅವುಗಳಿಗೆ
ಸಿದ್ಧರೂಪ ಕೊಟ್ಟು, ಜೀವಶಕ್ತಿ ತುಂಬಿ ಅವುಗಳ
ಕಾಯ೯ಸಾಧ್ಯತೆಗಳ ಬಗ್ಗೆ ಅತ್ಯಂತ ಆಕಷ೯ಕ ಮಾತುಗಳಿಂದ ಕೊಳ್ಳುಗನಿಗೆ ಮನವರಿಕೆ ಮಾಡಿ ಕನಸುಗಳನ್ನು ಮಾರುತ್ತಿದ್ದೆ
ಒಮ್ಮೆ ಹೀಗೆ ಗ್ರಾಹಕರನ್ನು ಹುಡುಕಿಕೊಂಡು ದಿಕ್ಕು ದೆಸೆಯಿಲ್ಲದೆ ಎಲ್ಲೆಂದರಲ್ಲಿ ಅಲೆದು ಅಲೆದು ಸುಸ್ತಾಗಿ ಯಾವೂದೋ ನಾಡಿನ ದಟ್ಟ ಕಾನನದಲ್ಲಿ ಸಿಲುಕಿಕೊಂಡೆ
ಬಿಟ್ಟು ಬಿಡದೆ ಸುರಿವ ಧಾರಾಕಾರ ಮಳೆ ,ವರುಷಧಾರೆ, ಹರುಷದ ಧಾರೆ ಇಳೆಯ ಮನ ತಣಿಸುವOತ್ತಿತ್ತು
ಮಳೆಗಾಳಿ, ಗಾಳಿಯ ಜೊತೆ ಮಳೆ ಕ್ಷಣಕೊಮ್ಮೆ ದಿಕ್ಕುಬದಲಿಸುತ್ತಿತ್ತು ಪಾರಾಗಲೆಂದು ಮರವೊಂದರ ಆಸರೆಯಲ್ಲಿದ್ದೆ
ಅದೊಂದು ಅಪರೂಪದ ದೃಶ್ಯ ಆ ಗಿರಿಗಳ ಸಾಲುಗಳಲ್ಲಿ,
ಆ ಕಾಡಿನಲ್ಲಿ ,ಆ ಕಾಲುದಾರಿಯಲ್ಲಿ ಆ ಮಳೆಯಲ್ಲಿ
ಅವಳು ಒಬ್ಬಳೆ ಕೊಡೆ ಹಿಡಿದು ನಡೆದು ಬರುತ್ತಿದ್ದಳು
ಆಗೋಚರತೆಯಿಂದ ಗೋಚರತೆಯೆಡೆಗೆ
ಆಸ್ವಷ್ಟತೆಯಿಂದ ಸ್ವಷ್ಟತೆಯಡೆಗೆ ನಡೆದOತೆ
ಕೊಡೆಯಲ್ಲಾದ ರಂದ್ರಗಳು ಜಲಪಾತಗಳನ್ನೇ
ಮರುಸೃಷ್ಠಿ ಮಾಡಿದ್ದವು
ಪ್ರಕೃತಿ ತನ್ನದೇ ರಾಗ ಸಂಯೋಜನೆಯ ಸಂಗೀತ ಕಛೇರಿಯೊOದನ್ನು ಏಪ೯ಡಿಸಿತ್ತು ಗಿಡಮರ, ಎಲೆ,ಬಳ್ಳಿ
ಹಕ್ಕಿ ,ಪ್ರಾಣಿ, ಪಕ್ಷಿಗಳು, ಕ್ರಿಮಿ, ಕೀಟಗಳು ತಮ್ಮದೇ
ಆದ ರೀತಿಯಲ್ಲಿ ಶಬ್ದ ನಿಶ್ಯಬ್ದಗಳ ಜೊತೆ ದನಿಗೂಡಿಸಿದ್ದವು
ಕೆಲವೊಮ್ಮೆ ಇಂಚರದ ಇಂಪಿನoತೆ
ಕೆಲವೊಮ್ಮೆ ಭೀಕರತೆಯನ್ನು ಪಡೆದುಕೊಳ್ಳುತ್ತಿತ್ತು
ಅವಳು ನನ್ನ ಮುಂದೆ ಹಾಯ್ದು ಹೊಗುತ್ತಿರವಾಗ ಕೂಗಿ ಕರೆದು ನಾನು ಇಲ್ಲಿಗೆ ಅಪರಚಿತ ನಿಮ್ಮ ಜೊತೆ ಬರಬಹುದೆ ಎಂದು ಕೇಳಿದೆ ಸ್ವಲ್ಪ ದೂರ ಹೋಗಿ ತಿರುಗಿನೋಡಿ ಅಮಾಯಕನಂತೆ ನಿರಪಾಯಕಾರಿಯಂತೆ ಕಂಡಿದ್ದರಿಂದಲೋ ಏನೋ ಸಮ್ಮತಿಸಿದಳು
ಸ್ವಲ್ಪ ದೂರ ಹೊಗುತ್ತಿದ್ದಂತೆ ಮಳೆಯ ಆಭ೯ಟ ಕಡಿಮೆಯಾಯಿತು ಹಾಗೆ ಸಂಗೀತದ ಕಲರವ ಕೂಡ
ಮೋಡಗಳು ಚದುರಿ ಆಕಾಶ ತಿಳಿಯಾಯಿತು ನಾನು ನನ್ನ
ವೃತ್ತಿಜೀವನ, ಬದುಕು, ವ್ಯಾಪಾರದ ಸರಕು, ಉತ್ಪನ್ನಗಳು,
ಮಾರುವ ಬಗೆ, ಅವುಗಳನ್ನು ವಾಸ್ತವಕ್ಕಿಳಿಸಿ ಯಶಸ್ಸು ಗಳಿಸುವುದು ಹೇಗೆಂದು ಎಳೆ ಎಳೆಯಾಗಿ ವಿವರಿಸಿದೆ
ನನ್ನ ಮುಖ ನೋಡಿ ನಸುನಕ್ಕು ಎತ್ತಲೋ ನೋಡಿದಳು
ಅವಳು ತಾನು ಈ ಕಾಡಿನ ಮಗಳು ಇದರ ಆಳ ,ಆಗಲ, ವಿಸ್ತಾರ,ವಿಸ್ತೀಣ೯,ಖುತು ಋತುವಿಗೂ ಬದಲಾಗುವ ಈ ಕಾಡಿನ ಬಣ್ಣ ಇಲ್ಲಿನ ಜೀವ ಸಂಕುಲ,ಈ ಮಣ್ಣು, ಹೂವುಗಳು , ಈ ಪರಿಸರ ಇಲ್ಲಿನ ಅಪಾಯಗಳು
ತನ್ನ ಕಣ ಕಣಗಳಲ್ಲಿ ಬೆರೆತು ಹೋಗಿವೆ
"ಇದು ನನ್ನ ಜೀವನಕ್ರಮ, ಇದುವೇ ನನ್ನ ಜೀವನದ ಅಥ೯" ಬೇರೆಲ್ಲಿಯೂ ಹೊಂದಿಕೊಳ್ಳಲಾರೆನೆಂದೆನಿಸುತ್ತದೆ ಎಂದು ಹೇಳಿದಳು
ಆದುನಿಕತೆ ತರುವ ಸವಲತ್ತುಗಳು,ಸುಖ, ನೆಮ್ಮದಿ, ಸುರಕ್ಷತೆ ಮತ್ತು ಅದು ಒಡ್ಡುವ ಸವಾಲುಗಳು , ಕೆಡುಕುಗಳನ್ನು ಮೀರಿ ಬೆಳೆವ ಮಾನವ ಶ್ರೇಷ್ಠತೆ
ಹಾಗೆಯೇ ಪ್ರಕೃತಿ ವಿಕೋಪಗಳು ಅವನನ್ನು ವಿಧೇಯನನ್ನಾಗಿಸಿ ಕುಬ್ಜನ್ನನ್ನಾಗಿಸುವ ಪರಿ ಇತ್ಯಾದಿ ವಿಷಯಗಳ ಬಗ್ಗೆ ಸವಿವರವಾಗಿ ಹರಟುತ್ತ ಸಾಗಿದೆವು
.....................................
ಸಂಜೆ ಕವಿದು ಕತ್ತಲಾವರಿಸಲಾರಂಭಿಸಿತು..........
ಅದೊಂದು ಚಿಕ್ಕ ಹಳ್ಳಿ ಸುಮಾರು ಇಪ್ಪತ್ತರಿಂದ
ಮೂವತ್ತು ಮನೆಗಳು ಅಲ್ಲಿರುವವರೆಲ್ಲ ಅವಳ ಸಂಬಂದಿಗಳೆ ಆಗಿದ್ದರು ಮನೆಯಲ್ಲಿ ಇಳಿ ವಯಸ್ಸಿನ ರೋಗಗ್ರಸ್ಥ ಅಪ್ಪ,ಅಮ್ಮ,ಚಿಕ್ಕ ತಮ್ಮ ಮತ್ತುತಂಗಿ
ಮನೆಯ ಜವಾಬ್ದಾರಿ ಇವಳದೇ ಇರಬಹುದೆನಿಸಿತು ಊಟವಾದ ನಂತರ ಅಲ್ಲಿಯೇ ಜಗುಲಿಯ ಮೇಲೆ ಮಲಗಿದೆ
ಸೂರ್ಯ ಹುಟ್ಟಿ ಏಷ್ಟೋ ಹೊತ್ತಾದ ನಂತರ ಬೆಳಕಾಗುವ
ಸೂರ್ಯ ಮುಳುಗುವ ಏಷ್ಟೋ ಹೊತ್ತಿಗೆ ಮುಂಚೆಯೇ ಕತ್ತಾಲಾಗುವ ಇಲ್ಲಿ ನನ್ನ ಕನಸುಗಳಿಗೆ ಸರಿಯಾದ ಮಾರುಕಟ್ಟೆ ಸಿಗಲಾರದು ಎನಿಸಿತು .
ಮತ್ತೆ ನನ್ನ ಭವಿಷ್ಯತ್ತಿಗೆ ನನ್ನ ವಿಚಾರಗಳು ,ಆಲೋಚನೆಗಳು ಮುಖಾ-ಮುಖಿಯಾಗಲಾರಂಬಿಸಿದವು ಬಾವನೆಗಳ ತಾಕಲಾಟ ,ಉದ್ವೇಗಗಳು, ಮುಂದಿನ ಬದುಕು
ನಿದ್ರೆಯನ್ನು ದೂರ ಮಾಡಿದವು
ಚದುರಿ ಹೋದ ಮೋಡಗಳ ತಿಳಿ ಆಕಾಶದಲ್ಲಿಯ ಪರಿಚಿತ ನಕ್ಷತ್ರಗಳನ್ನು ಹುಡುಕ ತೊಡಗಿದೆ........ .........