Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರೀತಿ

ರಂಗೇರಿದ ಬಾನಂಗಳದಲಿ ಚಿಲಿಪಿಲಿ
ಹಾರುವ ಹೂ ಗಳ ಇಂಚರ...
ತಂಪಾದ ಬೀಸುವ ಗಾಳಿಗೆ
ಇಲ್ಲ ಪ್ರೀತಿಗೆ ಅಂತರ...

ಚುಂಬಿತ ಧರಣಿಗೆ
ಮಂಜು ಮುತ್ತಿನ ಚಿತ್ತಾರ...
ವೃಕ್ಷಗಳ ನಡುವಿನಲಿ ಕಿರಣಗಳಿಗೆ
ಪ್ರೇಮಿಗಳ ಮೊಗದಲಿ ಆತುರ...

ಜುಳುಜುಳು ಜಲದ ಸಂಗೀತಕೆ
ನೃತ್ಯ ಮಾಡುವ ಜಲಚರ...
ರಂಗುರಂಗಿನ ಹೂ ಗಳಿಗೆ
ಈ ಪ್ರೀತಿ ನಿರಂತರ ...

ವಿನೋದ್ ಡಿಸೋಜ

- AAA little star

07 Jun 2020, 01:04 pm

ಗೆಳತಿ...

ಸೋತೆ ನ ಅವಳ ಗೆಳೆತನಕೆ
ಮನಸ್ಸು ಮನಸಿನ ಒಡೆತನಕೆ
ನಯನ ನಯನಗಳ ಮಿಲನಕೆ
ಹೃದಯ ಹೃದಯಗಳ ಅಂತರಾಳಕೆ...

ಗೆಳತಿ ಅಂತ ಕರೆಯಲೆ
ಸಂಗಾತಿ ಅಂತ ತಿಳಿಯಲೇ
ಪ್ರೀತಿಗೆ ಹಾತೊರೆಯಲೆ
ಸ್ನೇಹಕೆ ಕೈ ಜೋಡಿಸಲೇ...

ಕೈ ಹಿಡಿದು ಸಾಗೋಣ ಜೊತೆಜೊತೆಯಾಗಿ
ಮನಸಿನ ಕನಸಿಗೆ ಸಾಕ್ಷಿಯಾಗಿ
ಹೃದಯದ ಪ್ರೀತಿಗೆ ಒಡೆತಿಯಾಗಿ
ಏಳು ಜನ್ಮಕು ಬಾ... ಗೆಳತಿಯಾಗಿ..

ವಿನೋದ್ ಡಿಸೋಜ...

- AAA little star

07 Jun 2020, 12:26 pm

ಈ ಹೃದಯದಿ ನಿನ್ನ ಹೆಸರಿದೆ

ಈ ಹೃದಯದಿ ನಿನ್ನ ಹೆಸರಿದೆ-೮

ಅವಳ್ಯಾರು?
ಇಲ್ಲಿ ಇರುವುದಾದರೂ ಯಾಕೆ?
ಅದೇನು ವಿಧಿಯ ನಿರ್ಧಾರ?
ಮತಷ್ಟು ಅವನ ಪ್ರೀತಿಗೆ ಇದು ಪರೀಕ್ಷೆ ಇರಬಹುದು

ಕೀರ್ತಿ ಬರುತ್ತಿದ್ದಂತೆ
ಎದುರಲ್ಲೇ ಓಡಿ ಬಂದಳು ಆ ಪುಟ್ಟ ಪೋರಿ ಸ್ಪಂದನಾ. ಒಂದೊಮ್ಮೆ ಹಿಂದೆ ನೋಡಿ ಮತ್ತೊಮ್ಮೆ ಮುಂದೆ ನೋಡುತ್ತಾ ಓಡಿ ಬರುತ್ತಿದವಳ, ಹಿಡಿಯಲು ತನ್ನ ಮಂಡಿ ನೆಲಕ್ಕೆ ತಾಗಿಸಿ ಕುಳಿತ್ತಾ. ಎರಡು ಕೈಗಳಿಂದ ಬಾಚಿ ತಬ್ಬಿದ ಹಣೆಗೊಂದು ಮುತ್ತಿಟ್ಟು  ಮೇಲೆ ಎದ್ದು ನಿಂತ.

"ಮಾಮ ಬಿಡಿ ಬಿಡಿ"

ಎಂದು ಮುದ್ದು ನುಡಿಯಲ್ಲಿ ಕೆಳಗಿಳಿಸಲು ಕೇಳಿದ್ದಳು. ಬಿಡದೇ ಅವಳ ಚಬ್ಬೀ ಕೆನ್ನೆಗೆ ಮುತ್ತಿಟ್ಟ. ತನ್ನ ಮುದ್ದು ದುಂಡು ಪುಟ್ಟನೆಯ ಕೈಗಳಿಂದ ತನ್ನ ಕೆನ್ನೆ ಸವರಿ ಕೊಂಡು. ಅವನ ಹಣೆಗೆ ಮುತ್ತ ನೀಡಿದ್ದಳು. ಸೌರಭ್ ತನ್ನ ಕೆನ್ನೆ ತೋರಿಸಿದ ಅವುಗಳಿಗೂ ಸಿಹಿ ಮುತ್ತುಗಳು ದೊರಕಿತ್ತು.

ಶ್ರಾವ್ಯಳ ಆಗಮನ. ಸ್ಪಂದನಾಳನ್ನ ಅರಸುತ್ತಾ ಬಂದಳು. ಅವಳ ಮಾತು ಕೇಳಿ, ಬೇರೆ ಅರಿವು ಇಲ್ಲದೆ ಹತ್ತಿರ ಬಂದು ಅವಳ ಕಾಲು ಹಿಡಿದು ಬೇಡ ಎಂದು ಹಠ ಮಾಡಿದ್ದರೂ, ಬಿಡದೇ ಪುಟ್ಟ ಕಾಲುಗಳಿಗೆ ಶೂಸ್ ಹಾಕಿದಳು.

" ಕೃಷ್ಣ,,,, ಎಷ್ಟು ಹಠ ನಿಂದು ಶೂ ಬಿಚ್ಚಿದ್ರೆ ಎರಡು ಕೊಡ್ತೀನಿ"
ಎಂದಳು ನಗುತ್ತಾ.

ಶ್ರಾವ್ಯಳಿಗೆ ಸೌರಭ್ ಗಮನಕ್ಕೆ ಬಾರಲೇ ಇಲ್ಲ. ಸ್ಪಂದನಾಳನ್ನ ಮುದ್ದು ಮಾಡುತ್ತಾ ನಿಂತಳು.
ಆಗಲೂ ಗಮನಿಸದೆ.

ಕ್ಷಣಕ್ಕೆ ಸೌರಭನಿಗೆ ಯಾವುದೋ ಪುಟ್ಟ ಕೋಗಿಲೆ ಮುದ್ದು ಮಾಡುತ್ತಿರುವಂತೆ ಕಂಡಿತು. ಶ್ರಾವ್ಯ ಸ್ವಭಾವ , ಹಠದಲ್ಲಿ ಮಕ್ಕಳಂತೆ ಹೇಗೋ ಅವಳ ಧ್ವನಿ ಕೂಡ ಪುಟ್ಟ ಮಕ್ಕಳಂತೆ. ಒಂದೊಂದು ಪದಕ್ಕೂ ಪೂರ್ಣವಿರಾಮ ನೀಡಿ ಮಾತನಾಡಿದ್ದಾರೆ ಕನ್ನಡ ಪದಕ್ಕೆ ಒಂದು ಅಲಾಂಕರ ಅನಿಸುತ್ತದೆ.

ಇಳಿಸೂರ್ಯನ ಜೊತೆಗೆ
ಸಂಜೆ ಬಾನ ದಿಕ್ಕಲ್ಲೇ ನೋಟ
ಸಾಗರದ ನಡುವೆ ಕೂತು
ಅಲೆಗಳು ಹೇಳೋ ಸಂಗೀತಾ


ಕೇಳಿ ಮನ ಹೇಗೆ ಇರುತ್ತದೆ, ಒಮ್ಮೆ ಕಣ್ಣು ಮುಚ್ಚಿ ಈ ಕ್ಷಣ ಅಲ್ಲಿ ನಾವಿರುವೇವು ಎಂದು ಭಾವಿಸಿ ಆ ಅಲೆಯ ಸಂಗೀತಾ ಆಲಿಸುತ್ತಿರುವೇವು.
ಹೇಗನಿಸಿತ್ತು?
ಇಲ್ಲಿ ಮೂಡಿದ ಭಾವವೇ
ಶ್ರಾವ್ಯಳ ಧ್ವನಿಯಲ್ಲಿ ಅಡಗಿದೆ.


ಮುಂದುವರೆಯುವುದು,,,,,,,,
- ಹಂಸ ಕುಲಾಲ್ ✍️✍️✍️

- ಹಂಸವೇಣಿ

07 Jun 2020, 12:19 pm

ಮೋಸದ ಪ್ರೀತಿ

ತುಂಬ ನೋವಲಿದ್ದ ಮನಕ್ಕೆ
ನಗುವಾಗಿ ಬಂದೆ ನೀನು.
ಕಾಣದ ಪ್ರೀತಿಯ ನೀ
ಕಣ್ಮುಂದೆ ತೋರಿಸಿದವಳು ನೀ.
ಬೇಜಾರಲ್ಲಿ ಕೂತಾಗೆಲ್ಲಾ
ನನ್ನ ಮೊಗದಲ್ಲಿ ನಗುವ ತರಿಸಿದವಳು ನೀ.
ಕಷ್ಟವೆಂದಾಗಲೆಲ್ಲಾ ನನ್ನ
ಕಷ್ಟಕ್ಕೆ ನಾ ಸ್ಪಂದಿಸುವೆ ಎಂದವಳು ನೀ.
ಅಂದು ದುಖ:ದಲ್ಲಿದ್ದಾಗಲೆಲ್ಲಾ ಸಮಾಧಾನಿಸಿದವಳು ನೀ.
ಇಂದು ನಿನ್ನ ನೆನಪಲ್ಲಿ ನಾ
ಕಣ್ಣೀರ ಸುರಿಸುತ್ತಿದ್ದರೂ
ಒಂಟಿಯಾಗಿ ನರಳುತ್ತಿದ್ದರೂ
ನೀ ಏಕೆ ಬರುತ್ತಿಲ್ಲಾ ನನ್ನ ಸನಿಹ.
ನಾ ಏಕೆ ಬೇಡವಾದೆ ನಿನಗೆ.
ಪ್ರತಿ ಬಾರಿ ಮೋಸವಾಗುವುದು
ಏಕೆ ನನಗೆ.
ಈ ಪ್ರೀತಿ ಮಾಯೆಯೋ
ಇಲ್ಲಾ ಪ್ರೀತಿಯ ನಾಟಕ ಮಾಡುವವರು ಮಾಯಯೋ
ತಿಳಿಯದಾಗಿದೆ ಈ ಮನಕೆ.

✍️ಕನಸುಗಾರ.

- varu

07 Jun 2020, 08:03 am

ಅಮ್ಮನ ಪ್ರೀತಿ ಹಾಗೂ ಅಮ್ಮನ ಮಹತ್ವ

ನಮಗೆ ಎಲ್ಲರಿಗಿಂತಲೂ ಅಮ್ಮನೇ ಮಿಗಿಲು
ನಾವು ಎಲ್ಲಾದರೂ ಹೊರಗಡೆ ಹೊರಟರೆ ಅಮ್ಮನಿಗೆ ನಮ್ಮ ಮೇಲೆಯೇ ದಿಗಿಲು
ಆದರೆ ನಾವು ಅಮ್ಮನನ್ನು ಮರೆತರೆ ಮುಂದೆ ಆಗುವುದು ನಾವು ಮೆಂಟಿಲು.

- srinivas hanur

06 Jun 2020, 04:54 pm

ನೆನಪು

ಬುದ್ದಿ, ಮನಸ್ಸು ವಿಚಿತ್ರ ವರ್ತಿಸುತಿತ್ತು
ಆಗ ಪರಿಸ್ಥಿತಿ ತುಂಬಾ ಚೆನ್ನಾಗಿತ್ತು!
ಬುದ್ದಿ ,ಮನಸ್ಸು ಏಕಾಂತದಲ್ಲಿತ್ತು
ಆದರೂ ಪರಿಸ್ಥಿತಿ ತುಂಬಾ ಕೆಟ್ಟಿತ್ತು!
ಕಂಡರೂ ಕಾಣದಂತೆ ಇತ್ತು
ಕಾಣದಿದ್ದರೂ ಬರಿ ನೆನಪಾಗೆ ಕಾಡುತಿತ್ತು
ಮರೆಯಾದ ಕ್ಷಣವೆ ಕತ್ತಲಾಗ ತೊಡಗಿತ್ತು!
ಶಾರೀರಿಕ ಯಾತನೆ ಬುದ್ದಿ ಮನಸ್ಸು ಎಲ್ಲಾವನ್ನು ಹಿಂಸಿಸುತಿತ್ತು!
ಕ್ಷಣ ಕ್ಷಣಕ್ಕೂ ಜೀವನದ ಮೌಲ್ಯಗಳನ್ನ ಪ್ರಶ್ನಿಸುತಿತ್ತು!
ಕಳೆದುಹೋದದ್ದನ್ನೆ ಪ್ರತಿಕ್ಷಣವೂ ಚಿಂತಿಸುತಿತ್ತು!
ದಾರಿನೂರಿದ್ದರೂ ದುಃಖದ ಮಡುವಿನಲ್ಲಿ ಮುಳುಗುತ್ತಿತ್ತು!
ಎಲ್ಲವನ್ನೂ ತಿಳಿಯದೆ ತೇಲಿ ತೆಗಳುತಿತ್ತು!
ಕೊನೆಗೂ ತನನ್ನು ತಾನೆ ತಿಳಿಯದೆ ದೋಣಿ ಮುಳುಗಿತ್ತು!
ಅಂಬಿಗನಿಗೆ ಗುರಿಯೆ ಬಾರದೆ ಹೋಗಿತ್ತು!

- Shivakumara S

05 Jun 2020, 11:04 pm

ಈ ಹೃದಯದಿ ನಿನ್ನ ಹೆಸರಿದೆ

ಈ ಹೃದಯದಿ ನಿನ್ನ ಹೆಸರಿದೆ - ೭

ಅದೇ ಏನು ಎಂಬ ಪ್ರಶ್ನೆ ಅವನಿಗೆ ಕಾಡುತ್ತಿದೆ.

ಆ ಕಣ್ಣು ಅದೇ ಅವನ ಹೃದಯದ ಕಣ್ಣಿಗೆ ಕಾಣುತ್ತಿದೆ. ತನ್ನ ಬಡಿತದ ಮರುಸ್ವರ ಇಲ್ಲೇ ಇದೆ ಎಂಬುದಾ ಹೇಳುತ್ತಿದೆ.' ಕೀರ್ತಿ ನೋಡು ಒಮ್ಮೆ ನಿನ್ನ ಕಣ್ಣಾ ತೆರೆದು' ಎಂದು ಆದರೆ ಅವನಿಗೆ ತಿಳಿಯುತ್ತಿಲ್ಲವೇ. ಒಂದು ಗೊಂದಲದ ಭಾವ ಮನಸ್ಸು ಅಲ್ಲಿಂದ ಮುಂದೆ ಚಲಿಸಲು ಬಿಡುತ್ತಿಲ್ಲ. ಆದರೂ ಒಂದಿಂಚು ಕದಳಿದ್ದ. ಕ್ಷಣಕ್ಕೆ ಕಾಲು ಎಡವಿತ್ತು. ತಕ್ಷಣ ಅಲ್ಲೇ ಇದ್ದ ರೂಮ್ ಬಾಗಿಲು ಅವನಿಗೆ ನೆರವಾಯಿತು. ಅವನು ಜೋರಾಗಿ ಹಿಡಿದಿದ್ದರಿಂದ ಬಾಗಿಲು ಸ್ವಲ್ಪ ತೆರೆಯಿತು. ಇನ್ನೂ ಸ್ವಲ್ಪ,,,,

(ಅವನು ನೋಡಲೇ ಬೇಕು ಅವನ ಜೀವನದ ಅರ್ಥ ಇಲ್ಲೇ ಅಡಗಿದೆ. ಹೋಗು ಕೀರ್ತಿ ನೋಡು ಒಂದು ಸಾರಿ.)

"ಕೀರ್ತಿ ಅಲ್ಲೇ ಏನ್ ಮಾಡ್ತಾ ನಿಂತಿದ್ದೀಯಾ? ಬಾ ಬೇಗ"

ಎಂದು ಅನನ್ಯ ಕೂಗಿದ್ದಳು.

"ಅಕ್ಕ ಅದು,,, ನಾನ್"
ತಡವರಿಸಿದ. ಉತ್ತರ ಹೇಳಲು ಪದ ಸಿಗುತ್ತಿಲ್ಲ. ಅದೇನು ಭಾವ ಅರಿಯದಾದ.

"ಈಗ್ಲೇ ತುಂಬಾ ಲೇಟ್ ಆಗಿದೆ. ಎಲ್ಲಾ ವೇಟ್ ಮಾಡ್ತಾ ಇದ್ದಾರೆ, ಇನ್ನೂ ಲೇಟ್ ಆಗೋದು ಬೇಡ"

"ಒನ್ ಮಿನಿಟ್ ಅಕ್ಕ ಅದು,,,"

" ಈಗೆಲ್ಲಾ ಹೇಳಿದ್ರೆ, ಕೇಳಲ್ಲ ನೀನು"

ಸನಿಹ ಬಂದಾಕೆ ಅವನ ಕೈ ಹಿಡಿದು ಎಳೆದುಕೊಂಡು ನಡೆದಳು.

ಅರಿಯದ ನೋವು ಹೃದಯದ ಮನಕ್ಕೆ.
ಒಂದು ಕೊರಗು ಯಾಕಿಗೇ?
ಅವನ್ನೇ ತನಗೆ ತಾನೇ ಪ್ರಶ್ನಿಸಿಕೊಂಡ.
ಹೃದಯದ ಉಸಿರಿನಿಂದ ದೂರ ಬಂದೆ ಬಿಟ್ಟ.

ಛೇ ಒಂದು ಕ್ಷಣ ತಡವಾಗಿ ಬರಬಾರದಿತ್ತಾ ಈ ಅನನ್ಯ. ಅವನ ಜೀವನದ ಅವಿಭಾಜ್ಯ ಪ್ರಶ್ನೆಗೆ ಉತ್ತರ ಅಲ್ಲೇ ಇರುವಳು. ಹೌದು ಸೌರಭನ ಹೃದಯದ ಹೆಸರು ಅವನ ಸನಿಹವೇ ಇದ್ದಾಳೆ. ಕೊಠಡಿಯ ಒಳಗೆ ಬೆಚ್ಚನೆಯ ನಿದ್ರೆಯಲ್ಲಿ. ಇವನ ಅರಿವೇ ಇಲ್ಲದೆ.


ಮುಂದುವರೆಯುತ್ತದೆ,,,,,

- ಹಂಸ ಕುಲಾಲ್ ✍️✍️✍️

- ಹಂಸವೇಣಿ

05 Jun 2020, 03:41 pm

ಗಂಧರ್ವನ ಮಗಳು...

ತುಸು ನಕ್ಕು ಸುಮನೆ ಇರಳು.
ಆ ಚಂದ್ರನ ಹೋಲುವ ಗಂಧರ್ವನ ಮಗಳು.
ಈ ಮಣ್ಣಿನ ಸಂಸ್ಕೃತಿಯ ನೆಲೆ ಅವಳು.
ಕಲ್ಲನ್ನು ಕರಗಿಸೋ ಕಣ್ಣಿನ ಕಲೆ ಅವಳು.
ಮರುಭೂಮಿಯಲ್ಲಿ ನೀರಿನ ಸೆಲೆ ಅವಳು ...
ಅತಿಯಾಗಿ ಕಾಡುವ ಕಿನ್ನರಿ ಕುಲದವಳು.
ಅವಳು ಯಕ್ಷನ ಮಗಳದರು, ನನಗೆ ಎಂದೆಂದಿಗೂ ಅವಳು ಗಂಧರ್ವನ ಮಗಳು...

- NaveenkumarK

05 Jun 2020, 01:11 pm

ಹೃದಯ ಸೇರೆಹಾಯಿತು...

ದಾರಿಯ ಕವಲಿನಲಿ ನಿಂತು ದೂರ ದೃಷ್ಟಿ ಬಿರಿದಳು ,
ಮನಸಿನ ಮೂಲೆಯಾಲಿ ಕೂಳಿತು ಮಂದಹಾಸ ಚಲ್ಲಿದಳು . 
ಹೃದಯದ ತಾಪಕ್ಕೆ ಪ್ರೀತಿ ಹಣ್ಣಾಯಿತು ,
ಕಣ್ಣಿನ  ಸೇಳೆತಕ್ಕೆ ಹೃದಯ ಸೇರೆಹಾಯಿತು .... !

- NaveenkumarK

05 Jun 2020, 12:54 pm

ಮುಗ್ಧ ಪ್ರಾಣಿಯ ಆಕ್ರಂದನ

ಆತುರ ಆತುರದಿ ಹಸಿವು ನೀಗಿಸಿಕೊಳ್ಳಲು
ಹೋದೆಯಮ್ಮ ಆ ಊರೋಳಕ್ಕೆ,
ತಳ್ಳಿ ಬಿಟ್ಟರಮ್ಮ ನಿನ್ನ ಆ ಕ್ರೂರಿಗಳು ಮೃತ್ತು ಕೂಪಕ್ಕೆ,

ಬೆಳಕಿನ ಲೋಕವ ನೋಡಲು ಆ ಕಂದ
ಕಟ್ಟಿತೋ ಅದೇಷ್ಟೋ ಕನಸುಗಳು,
ತಾಯಿಯ ಗರ್ಭದ ಕತ್ತಲೆ ಲೋಕದಿ ಕಮಾರಿ ಹೋದವು ಆ ಕಂದನ ಆಸೆಗಳು,

ಆ ತಾಯಿಯ ನರಳುವಿಕೆಯ ಶಾಪ ಬಿಡದು ಎಂದಿಗೂ ನಿಮ್ಮನ್ನು,
ತಪ್ಪದೇ ಅನುಭವಿಸುವಿರಿ ಮುಂದೊಂದು ದಿನ ನರಕವನ್ನು,
:-ವೀಣಾ ಲಿಂಗಣ್ಣ
ರಾಯಚೂರು

- Veena

05 Jun 2020, 11:38 am