Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅಳುತ್ತಿರುವೆ ಏಕೆ?

ನನ್ನ ಭಾವನೆಗಳನ್ನು
ನೋಡುತ್ತಿರುವೆ ಏಕೆ ಕೆಣಕಿ,
ಆ ಭಾವಗಳಡಿಲ್ಲಿ ಒಮ್ಮೆಯಾದರೂ
ನೋಡು ಇಣುಕಿ,
ಹಾಳು ನಿನ್ನತನದಲ್ಲಿ ನನ್ನ
ಪ್ರೀತಿಯನ್ನು ಹಾಕಿದೆ ಹೊಸಕಿ.
ಎಲ್ಲಾ ಮುಗಿದ ಮೇಲೆ ಈಗಾ
ಅಳುತ್ತಿರುವೆ ಏಕೆ ಬಿಕ್ಕಿಬಿಕ್ಕಿ.

- VijaypratapRana

21 May 2020, 08:31 am

ಹಸಿವಿನ ರುಚಿ

ಹಸಿಯದಲ್ಲವನಿಗೇನು ಇತ್ತರೆ ತುಪ್ಪವ
ಬಾಯಿ ಚಪ್ಪರಿಸಿ ಇನ್ನುವನೇನು.....
ಹಸಿದವನಿಗಿತ್ತರೆ ಸಾಕು ಹಲಸಿದನ್ನವ
ಸೊಲ್ಲೆತ್ತದೆ ತಿನ್ನುವನಲ್ಲವೇ
ರುಚಿ ರುಚಿ ಎಂದು........ಮರಕುಟಿಗ!

ದಿನಕ್ಕೆ ಮೂರೋತ್ತು ಮೃಷ್ಟಾನ್ನ
ತಿನ್ನುವ ಜಮೀನ್ದಾರನಿಗೇನು ಗೊತ್ತು.
ಹಬ್ಬ ಹರಿದಿನಗಳಿಗೊಮ್ಮೆ ಮಾಡುವ.
ಬಡವನ ಮನೆಯ ಹೋಳಿಗೆಯ
ರುಚಿಯ ಸ್ವಾದ.............ಮರಕುಟಿಗ!

ಬಂಗಾರದ ತೂಗುಯ್ಯಾಲೆಯಲ್ಲಿ...
ಬೆಳ್ಳಿ ತಟ್ಟೆ ಹಿಡಿದು ಬೇರೊಬ್ಬರು
ತಿನ್ನಿಸುವ ಅನ್ನದ ರುಚಿಗಿಂತ.......
ಗುಡಿಸಲ ಮನೆಯಲ್ಲಿ ಚಂದಿರನ
ತೋರಿಸಿ ತಾಯಿ ತಿನ್ನಿಸುವ ಗಂಜಿಯ
ರುಚಿ ಮೇಲಲ್ಲವೇ.......ಮರಕುಟಿಗ!

ಒಂಟಿಯಾಗಿ ದೂರದ ಪರದೇಶದಲ್ಲಿ
ದುಡಿದು ಕುಂತು ತಿನ್ನುವ ತಿನಿಸಿನ
ರುಚಿಗಿಂತ ತನ್ನದೇ ಹೊಲದಲ್ಲಿ ದುಡಿದು ಸಂಸಾರದೊಟ್ಟಿಗೆ ಕುಳಿತು ತಿನ್ನುವ
ಕೂಳಿನ ರುಚಿ ಮೇಲು..... ಮರಕುಟಿಗ!

ಹಸಿವಿಲ್ಲದವನು ಅದ್ದು ಮೀರಿ ತಿನ್ನುವುದಕ್ಕಿಂತ
ಸ್ವಲ್ಪವಾದರೂ ಇಲ್ಲದವನಿಗಿತ್ತರೆ
ಅದೇ ಮಾನವ ಧರ್ಮ ..... ಮಾರಕುಟಿಗ!!

✍️ ಮಂಜು

- ಮಂಜು

20 May 2020, 08:31 pm

ಮುದ್ದು ಮನಸ್ಸು ..

ಓ ನನ್ನ ಪ್ರೀತಿಯ ಹುಡುಗಿ...
ನೀ ಕಾಣುವೆ ನನ್ನ ಕನಸಲ್ಲಿ .
ನೀ..ಪ್ರಿತಿಸುವೆಯೋ ದ್ವೇಷಿಸುವೆಯೋ.
ನನಗೆ ತಿಳಿಯದು ,
ನಾ ಕಂಡ ಕನಸಿನಲಿ ,
ನನ್ನವಳ ಕಾಲ್ಗೆಜ್ಜೆ ಸಪ್ಪಳ ಕೇಳಿಬಂತು ಆದರೆ ಆಗ ಮತ್ತೆ ಮಳೆ ಬಂದರೆ ಅಲ್ಲಿ ಅವಳ ದರ್ಬಾರು ,.,

- Krishnamurthy. A.P. Ajjampura

20 May 2020, 08:16 pm

ಪ್ರೀತಿ

ಮೊದಲ ದಿನವೇ ಕದ್ದಳಲ್ಲ ಮನಸ್ಸು
ದಿನಾಲು ಕಂಡೆನಲ್ಲ ಅವಳದೇ ಕನಸ್ಸು
ಅನ್ಕೊಂಡೆ ನಾ ಅವ್ಳು ಸಿಗಬೇಕಂದ್ರೆ ಬೇಕು ಯಶಸ್ಸು
ಯಶಸ್ಸೇನೋ ಸಿಕ್ತು ಆದ್ರೆ ಅಷ್ಟರಲ್ಲಿ ಅವಳಾದ್ಲು ಮಿಸ್
ರುದ್ರಮುನಿ.ಕೆ

- Rudramuni khandgadippi

19 May 2020, 08:13 pm

ಕತ್ತಲೆ ಕಾಡು

ಕತ್ತಲೆಯ ದಟ್ಟಡವಿಯಲ್ಲಿ
ಒಬ್ಬಂಟಿಯಾಗಿ ನಿಂತಿರುವೆ ನಾನಾ
ಬಂದು ನೀನು ದಾರಿ ತೋರುವಿಯಾ
ಜೀವದ ಗೆಳತಿ ನನ್ನಹೃದಯದ ಒಡತಿ

- santhu

19 May 2020, 03:00 pm

ಅಚಲ ಪ್ರೀತಿ ನೆನಪು

ಮನದಲ್ಲಿ ಮೂಡಿರುವ ಗೀತೆ,
ಸ್ವರದಿಂದ ಹೊಮ್ಮಲು ಸಾಧ್ಯವೇ ಆ ಗಂಭಿರ್ಯತೆ!
ಮೌನದಲ್ಲಿ ಸಿಲುಕಿರುವ ನನ್ನ ಚಿಂತೆ,
ಬಿಡಿಸಿ ಹೇಳಲಾಗುತಿಲ್ಲ ಆ ವ್ಯಥೆ!
ಮರೆಯಲು ಆಗುತ್ತಿಲ್ಲ ನಿನ್ನ ಮಾತಿನ ಕಂತೆ
ಮಾಸುತ್ತಿಲ್ಲ ನೆನಪಿನ ಬೊಂತೆ
ಸೇರಿಸುವೆ ನನ್ನ ಹೇಸರ ನಿನ್ನ ಜೊತೆ
ಮಾತುಗಳೆಲ್ಲ ನಿನ್ನಂತೆಯೇ ಕಲಿತೆ
ಬರಹಗಳೆಲ್ಲ ನುಡಿದವು ಕವಿತೆ
ಸ್ಮರಿಸದ ಕ್ಷಣವಿಲ್ಲ ನಿನ್ನ ಓ ವನಿತೆ
ಯಾಕೆ ಕಾಡುವೆ ನನ್ನ ಪ್ರಾಣಕಾಂತೆ
ಮನದಲ್ಲಿ ಸ್ಥಿರವಾಗಿ ಉಳಿದ ಓ ನನ್ನ ದೇವತೆ!

- Shivakumara S

18 May 2020, 10:24 pm

ಪ್ರಕೃತಿ ಮಾತೆಗೆ

ಓಂ ಪ್ರಕೃತಿ ನೀನೇಕೆ ಮೌನ?
ತಾಳಲಾದೀತೆ ನಿನ್ನಿಂದ ಈ ಸಹಜವ
ತಲೆಗೂದಲನೇ ಬೋಳಿಸಿ
ಸುಡುವ ಸೂರ್ಯನ ಉರಿ ಬಿಸಿಲಿಗೆ
ಕಬ್ಬಿಣದ ಸಲಾಕೆ ಹೇರಿದರೂ
ನೀನೇಕೆ ಮೌನ?ತಾಳಲಾದೀತೇ ನಿನ್ನಿಂದ!

ಹರಿವ ನೆತ್ತರನು ತಡೆದು
ಅಭಿಧಮನಿಯಲ್ಲಿ ಸೇರಿಸದೆ
ಬೇರೆಲ್ಲೋ ಹರಿಸಿದರೂ
ನೀನೇಕೆ ಮೌನ?ತಾಳಲಾದೀತೇ ನಿನ್ನಿಂದ!

ಎದೆಗೂಡಿನ ಮಧ್ಯದಲ್ಲಿ ಸಿಡಿಮದ್ದನ್ನಿರಿಸಿ
ಅತ್ಯಧಿಕ ಶಬ್ದದೊಂದಿಗೆ
ಎರಡಾಗುವಂತೆ ಸಿಡಿಸಿದರೂ
ನೀನೇಕೆ ಮೌನ?ತಾಳಲಾದೀತೇ ನಿನ್ನಿಂದ!

ಗರ್ಭಕೋಶವ ಕೂರೆದು
ಬೆಳೆವ ಭ್ರೂಣವ ತೆಗೆದು
ಬಂಜೆಯ ಮಾಡಿದರೂ
ನೀನೇಕೆ ಮೌನ?ತಾಳಲಾದೀತೇ ನಿನ್ನಿಂದ!

ಅಂಜದಿರು - ಹೆದರದಿರು
ಮರಳಿ ಶಪಥವ ಮಾಡು
ಇಂದಲ್ಲ ನಾಳೆ ಮಂದಹಾಸವ ಬೀರಿ
ಹಚ್ಚಹಸುರಿನ ಮೈಬಣ್ಣ ತೋರುವೆನೆಂದು!

- ಕುಂತೂರು ತ ಸುಬ್ರಹ್ಮಣ್ಯ
9482119447

- KT Subramanya

18 May 2020, 02:48 pm

ಗೆಳತಿ ನೀ ಸೋತೆ

ಗೆಳತಿ ನನ್ನ ಭಾವನೆಗಳನ್ನ ತುಂಬಿ
ಮನದಾಸೆಗಳನ್ನ ಮನಬಿಚ್ಚಿ
ಬರೆದೆ ನಿನಗಾಗಿ ಕವಿತೆ.
ನೀ ಅದನ್ನ ಅರ್ಥ ಮಾಡಿಕೊಳ್ಳುವುದರಲ್ಲಿ ಸೋತೆ.
ಅದೇ ಹತಾಶೆಯಲ್ಲಿ ನಾ ಸತ್ತೆ.
ಇಂದು ಪ್ರತಿ ಸಾಲುಗಳನ್ನ ಪದೇ ಪದೇ ಓದುತ್ತಿರುವೆ
ನಿನಗೆ ಅರ್ಥವಾದರೂ ನಾ
ಪ್ರಪಂಚವೇ ಬಿಟ್ಟು ಹೋಗಿರುವೆ.
ನಿನ್ನ ಮನದಾಸೆಗಳನ್ನ ಅಂದು ಬಚ್ಚಿಟ್ಟು
ಇಂದು ರೋಧಿಸುತ್ತಿರುವೆ.
ಮುಗಿದು ಹೋದ ಸಮಯದ
ಬಗ್ಗೆ ಚಿಂತಿಸಿ ಫಲವೇನು ಗೆಳತಿ.
ಅಂದೂ ನೀ ಸೋತೆ.
ಇಂದೂ ನೀ ಬದುಕಿದ್ದು ಸತ್ತೆ.

✍️ಕನಸುಗಾರ

- varu

18 May 2020, 01:05 pm

ನನ್ನ ಗೆಳೆಯ

ನೀನು ಆಗಿರುವೆ ನನ್ನ ಪ್ರೀತಿಯ ಗೆಳೆಯ. ನನ್ನ ಮನದಂಗಳದಲ್ಲಿ ಕೀರ್ತಿ‌ಯ ಒಡೆಯ. ನೀನು ಕಬ್ಬಡ್ಡಿ ಯಲ್ಲಿ ಉಪಯೋಗಿಸಿವೆ ಚಾಣಕ್ಯನ ಪ್ರಮಯ. ನೀನು ಮಾಡುತ್ತಿಯ ಎಲ್ಲರನ್ನೂ ಮಾಯ. ಮಾಯೆಯನ್ನು ನೋಡಿ ಆಯಿತು ಹುಡುಗಿಯರಿಗೆ ಪ್ರೆಮದ ಗಾಯ. ನನ್ನೋಳಗಿನ ನೋವನು ಹೇಳಲು ನನಗೆ ಸ್ಪೂರ್ತಿಯ ಪ್ರಿಯ.
ಇದು ನನ್ನ ಗೆಳೆಯ ವಿಶ್ವನಾಥನ ಬಗ್ಗೆ ಇರುವ ಕಿರು ಸಾಲಿನ ಕವನದ ಚಾಯ...........

- Raju Baireddy

18 May 2020, 09:28 am

ಮೋಸದ ಪ್ರೀತಿ

ಕನಸಿಗೆ ರೆಕ್ಕೆ ಕಟ್ಟಿ
ಹಾರಲು ಕಲಿಸಿದ ಪ್ರೇಮ
ಹಾರುವ ಬರದಲ್ಲಿ ಕಣ್ಣಿಗೆ ಸಿಕ್ಕ
ಕಸದಲ್ಲಿ ಪ್ರೇಮದ ದಾರವು
ಹರಿದು ಕಣ್ಣಿಗೆ ಗಾಯ ಮಾಡಿ
ಹೊಯ್ತು....
.....✍️.ರಾಮ್.

- ರಾಮ್

17 May 2020, 09:35 pm