ಅಮ್ಮ ಎಂದರೆ ಎಂತ ಆನಂದ ಮನಸ್ಸಿಗೆ
ಕೊನೆಯಾಗುವುದು ಹಲವಾರು ನೋವುಗಳಿಗೆ
ನಾ ಕಂಡಿಲ್ಲ ನಿಜವಾದ ದೇವರನ್ನು
ಇವಳಂತೆ ಇರಬಹುದು ಅವನು
ನಾವು ನೋಡಿದ ಮೊದಲ ಪದ ಇವಳು
ನಮ್ಮನ್ನು ಹೆತ್ತು ಹೊತ್ತು ಸಲುವವಳು
ನಮ್ಮ ನಗುವಿನಲ್ಲಿ ನಗುವಾಗುವಳು
ನಮ್ಮ ಕಣ್ಣೀರಿನಲ್ಲಿ ಕಣ್ಣೀರಾಗುವಳು
ನನ್ನವ್ವ ಅಂಬಾನಿಯ ಮಗಳಲ್ಲ
ನನ್ನವ್ವ ಟಾಟಾರ ಸಂಬಂದಿಯೂ ಅಲ್ಲ
ನಾವು ಕೇಳಿದ್ದು ಎಂದಿಗೂ ಇಲ್ಲ ಎಂದವಳಲ್ಲ
ಅವಾ ನಿನ್ನ ಪ್ರೀತಿಗೆ ಸರಿಸಾಟಿ ಯಾವುದಿಲ್ಲ
ತನ್ನ ಕಷ್ಟವನ್ನು ನಮ್ಮ ನಗುವಿನಲ್ಲಿ ಮರೆತಳು
ನಮ್ಮ ಮೇಲೆ ನೂರಾರು ಕನಸು ಕಟ್ಟಿ ಇಟ್ಟಳು
ನಾವು ಗೆದ್ದಾಗ ಖುಷಿಯಾಗುವಳು ಸೋತಾಗ
ಬೆನ್ನುತಟ್ಟುವಳು,,,,,
ಜನ್ಮದಾತೆ ನನ್ನ ಪಾಲಿನ ದೇವರಿವಳು.
Written By :- MS ಯಾದವ್.
ಮೊದಲು ತಾಯಿ ಅಳ್ತಾಇದ್ದಳು. ಯಾಕೆ ಗೊತ್ತಾ ತನ್ನ ಮಗು. ಊಟ ಮಾಡ್ತಾ ಇಲ್ಲ ಅಂತ. ಇವಾಗಲು ತಾಯಿ ಅಳ್ತಾನೆ ಇದ್ದಾಳೆ ಯಾಕೆ ಗೊತ್ತಾ ತಾನು ಸಾಕಿದ ಮಗ. ಊಟ ಕೂಡ್ತಾ ಇಲ್ಲ ಅಂತ.
ಮತ್ತೆ ನಾಳೆ ಬಾ
ಆ ಬಿಂಕ ಬಿನ್ನಾಣಗಳ
ನಡುವೆ ಕಳೆದು ಹೋಗಬೇಡ
ಕಣ್ಣೀರಿನ ಪನೀರಿನಲ್ಲಿ
ಮೈತೊಳೆದು ಮಲಗಬೇಡಾ
ಮತ್ತೆ ನಾಳೆ ಬಾ
ನಿನಗಾಗಿ ಕಾಯುತ್ತಿರುವೆ
ಕ್ಷಣಕ್ಷಣಕ್ಕೂ ಸಾಯುತ್ತಿರುವೆ
ನಿನ್ನ ನೆನಪಿನಲ್ಲಿಯೇ
ಆದರೆ ಬಂದು ಹೀಗೆ
ಕಾಡಬೇಡ.
ಜಗತ್ತಿನಲ್ಲಿ ಪ್ರೀತಿ ಪ್ರೇಮ ಸಹಜ
ಆಕರ್ಷಣೆಎಂಬುದು ಪ್ರಕೃತಿ ಬಿತ್ತಿದ ಬೀಜ!
ಸೌಂದರ್ಯವೆಂಬುದು ಕಣಜ
ವರ್ಣಿಸಲು ಸಾಲದು ಪದ ಪುಂಜ!
ಬಣ್ಣಿಸಲು ಆಗುತ್ತಿಲ್ಲ ಸತ್ಯ ಅಸತ್ಯದ ನಿಜ
ಪ್ರೀತಿ ಪ್ರೇಮ ಎನ್ನುವುದು ಕೆಲವರಿಗೆ ಮಜ
ಪ್ರೀತಿ ಪ್ರೇಮ ಎನ್ನುವುದು ಕೆಲವರಿಗೆ ಸಜಾ
ಪ್ರೀತಿ ಪ್ರೇಮ ಎನ್ನುವುದು ಕೆಲವರಿಗೆ ನೈಜ
ನಾ ಕಾಣೆ ಇದರ ಸತ್ಯಂಸದ ನಿಜ!
ಇವುಗಳಿಗೆ ನೀಡಿದರೆ ನೀನು ರಜಾ
ನಿನ್ನ ಸುಂದರ ಬದುಕಿಗೆ ನೀನು ರಾಜ!
ನಿನಗೆ ಬಹಳ ಕಡು ಕೋಪ
ಆ ಕೋಪದಲ್ಲು ನೀನು ಮಿನುಗುವ ದೀಪ
ಚಂದ ನಿನ್ನ ಲಾವಣ್ಯ,ರೂಪ
ಈ ಚೆಲುವು ಬಹಳ ಅಪರೂಪ
ಗುಣದಲ್ಲಿ ನೀನು ಅಚ್ಚರಿಯ ದ್ವೀಪ
ಆ ಗುಣವೆಂಬ ದ್ವೀಪ ಕಂಡು ಬೆರಗಾದ ಈ ಭೂಪ
ನೀನು ಗಂಧರ್ವ ಕನ್ಯೆ ಸ್ವರೂಪ
ನೀನು ಇಲ್ಲದೆ ಇಂದು ನನ್ನ ಸಮೀಪ
ಪ್ರತಿ ಕ್ಷಣವು ನನ್ನೆದೆಯಲ್ಲಿ ಭೂಕಂಪ.
ನಮ್ಮದೇಶದ ಬೆನ್ನೆಲುಬು ಇತ. ಸಕಲ ಜೀವ ರಾಶಿಗಳಿಗೆ ಅನ್ನ ನೀಡುತ. ಕೋಟಿ ಕೋಟಿ ಕೈ ಇಡಿದ ಯೋಗಿ ಇತ.
ಹಗಲಿರುಳು ಎನ್ನದೆ ದುಡಿಯುವಾತ. ಪ್ರೀತಿಯಿಂದ ಎಲ್ಲರ ಹೂಟ್ಟೆ ತುಂಬಿಸುವಾತ ಅವನೇ ನಮ್ಮ ನಿಮ್ಮೆಲ್ಲರ ಪ್ರೀತಿಯ ಅನ್ನದಾತ ರೈತ.......,.
ನಾವು ನಕ್ಕೆವು ಅವಳು ನಕ್ಕಳು
ನಾವು ಅತ್ತೆವು ಅವಳು ಅತ್ತಳು
ಹಸಿವಾದಾಗ ಹಾಲುಣಿಸುತ್ತಿದ್ದಳು
ತನ್ನ ಕೈಯ ತುತ್ತ ತಿನಿಸುತ್ತಿದ್ದಳು..!
ಅವಳೇನು ಯಕ್ಷಿಣಿಯಲ್ಲ
ಅವಳೇನು ಸಂಗೀತ ಕಲಿತಿಲ್ಲ
ಸ್ವರ ಸಂಗತಿಗಳಂತೂ ಗೊತ್ತಿಲ್ಲ
ಆದರೂ ಹಾಡುತ್ತಿದ್ದಳು..!
ನಮಗಾಗಿ ಹಾಡುತ್ತಿದ್ದಳು, ಲಾಲಿಸಿ
ಚಂದಮಾಮನ ತೋರಿಸಿದಳು..!
ಹಾಗೇ ತಲೆಯ ನೆವರಿಸಿ ಹುಚ್ಚಿಯಂತೆ
ತಾರೆಗಳೊಂದಿಗೆ ಮಾತಾಡುತ್ತಿದ್ದಳು..!
ನಮಗಾಗಿ ಕೇವಲ ನಮಗಾಗಿ..!
ಅವಳು ಅಂಬಾನಿಯ ಮಗಳಲ್ಲ
ಟಾಟಾರ ಸಂಬಂಧಿಯೂ ಅಲ್ಲ
ಬಡತನದಲ್ಲೇ ಮಿಂದೆದ್ದವಳು
ಆದರೂ.. ನಾವು ಕೇಳಿದ್ದು
ಎಂದಿಗೂ ಇಲ್ಲ ಎನ್ನುತ್ತಿದ್ದಿಲ್ಲ
ಕಾಸಿಗೆ ಕಾಸು ಕೂಡಿಡುತ್ತಿದ್ದಳು
ತನಗಾಗಿ ಅಲ್ಲ ನಮ್ಮೆಳಿಗೆಗಾಗಿ
ನಮಗಾಗಿ ಕೇವಲ ನಮಗಾಗಿ..!
ಅವಳು ಯಾವ ವಿದ್ಯಾಲಯದಲ್ಲೂ
ಓದಿಲ್ಲ ಹಾಗೇ ಪಧವಿಯೂ ಪಡೆದಿಲ್ಲ
ಆದರೆ ಅಕ್ಷರಭ್ಯಾಸ ಮಾಡಿಸುತ್ತಿದ್ದಳು
ನಮಗೆ ಬೇಕು ಬೇಡ ಹೇಳುತ್ತಿದ್ದಳು
ಪ್ರೀತಿಯ ಮೌಲ್ಯವನು ಹೇಳುತ್ತಿದ್ದಳು
ಮೊದಲ ಗುರುವಾಗಿ ನಿಂತಿದ್ದಳು
ನಮಗಾಗಿ ಕೇವಲ ನಮಗಾಗಿ..!
ಅವಳೇ ಇಡೀ ಜಗದ ಉಸಿರು
ಅವಳಿಗೆ ಅಮ್ಮ ಎಂದು ಹೆಸರು..!
~ ಸಿದ್ದು ಗುಂಡ