ಯಾರಿವಳು?ಎಂದೆನಿಸಿಕೋಳ್ಳಬೇಡ
ಯಾರಿವಳು! ಎಂದೆನಿಸಿಕೋ.
ಯಾರಿವಳು!ಎಂದಾಗ
ನೀ ನಡೆದ ದಾರಿ ಹೇಳಬೇಕು.
ಬಾ ನನ್ನ ದಾರಿಯಲ್ಲಿ,ನಿನ್ನ ನೋಡಿ ಬೇರೆಯವರು ಹೇಳುವಂತೆ ಮಾಡುವೆನು ಯಾರಿವಳು! ಎಂದು.
ಹುಟ್ಟಿನ ಗೆಳೆಯನಿವನು,
ಜೀವನದ ಕೋನೆಗೆ ಬರುವನು,
ದೇವರಿಗೂ ಬಿಡದವನು,
ಮತ್ತೆ ಹುಟ್ಟಿನ ಜೋತೆಗೆ ಹುಟ್ಟುವನು.
ಅವನೇ ಸಾವು ಎಂಬ ಹೆಸರುಳ್ಳವನು,
ನಮ್ಮನ್ನು ಬಿಗಿದಪ್ಪಿ ಬರಮಾಡಿಕೋಳ್ಳುವನು.
ಮನದಲ್ಲಿನ ಹೇಳ ತೀರದ ದುಗುಡುಗಳೆಲ್ಲ ಇಂದೆಕೊ ಮಾಯವಾಗಿದೆ... ಸಂತೋಷ ಮನೆ ಮಾಡಿದೆ.. ಈ ಸಂತೋಷ ಇನ್ನೆಷ್ಟು ದಿನ.. ಹಿಂದೆ ಆದ ನೋವುಗಳು ಇಂದು ಮಲಗಿರಬಹುದು. ಅವು ಎದ್ದಾಗ ಮತ್ತದೆ ಹಳೆ ನೆನಪಿನ ಚಿತೆ ಆರಿಸಲು ಕಂಬನಿಯನ್ನು ಕರೆಯಲೇಬೇಕು....
....✍️.ರಾಮ್.
ನನ್ನ ಬದುಕು ಒಂದು ಸುಂದರ ಚರಿತೆ
ನಾನೊಂದು ಅದ್ಭುತ ಪಾಠ ಕಲಿತೆ
ನಗು, ನಲಿವಿಗೆ ಇರಲ್ಲಿಲ್ಲ ಕೊರತೆ
ಆಗು ,ಹೋಗುಗಳಿಗೆ ಇರಲ್ಲಿಲ್ಲ ಚಿಂತೆ
ಇದರ ನಡುವೆ ನಡೆದ ಕತೆ
ಬದುಕಿಗೆ ನೀಡಲು ಆದ್ಯತೆ
ಬಂದಳು ಒಬ್ಬಳು ಪ್ರಾಣ ಕಾಂತೆ
ನಡೆಸಿ ಮನದಲ್ಲಿ ಮಾತುಕತೆ
ಆಗುವೆನೆಂದು ನನ್ನ ಜೊತೆ
ಮೂಡಿಸಿ ಪ್ರೀತಿಯ ಸಕರತೆ
ಹೆಚ್ಚಿಸಿ ಸಂತಸದ ಸೌಮ್ಯತೆ
ಹಾಡಿ ಅನುರಾಗದ ಗೀತೆ
ಹೆಚ್ಚಿಸಿ ಪ್ರೀತಿಯ ಘನತೆ
ಕಟ್ಟಿ ಕನಸಿನ ಕತೆ
ಆಡಿ ಮರೆಯಲಾಗದ ಮಾತುಕತೆ
ಹೆಚ್ಚಿಸಿ ಬಾಳಿನ ಕಾತುರತೆ
ಮೀರಿಸಿ ಪ್ರೀತಿಯ ಅಣತೆ
ಹೇಳಿ ನೆಪಮಾತ್ರದ ಕತೆ
ನಿನ್ನ ಬಿಟ್ಟಿಲಾರದಂತೆ
ಮೂಡಿಸಿ ನನಗೆ ಚಿಂತೆ
ನನ್ನಲ್ಲಿ ನನಗೆ ಪ್ರಜ್ಞೆ ಇಲ್ಲದಂತೆ
ನೀನು ಮಾಡಿದೆ ನನ್ನ ಹುಚ್ಚನಂತೆ
ಬಿಟ್ಟು ಹೋದೆಯಲ್ಲ ಕಾಂತೆ
ಇಲ್ಲ ನೀನು ಇಂದು ನನ್ನ ಜೊತೆ
ಸ್ವಲ್ಪದಿನದನಂತರ ನಾ ನಿನ್ನ ಮರೆತೆ
ಬದುಕಿನ ಪುಟದಲ್ಲಿ ನಿನ್ನೊಂದು ಮರೆಯದ ಕವಿತೆ
ಅಂದಗಾತಿಯರೆಲ್ಲರು ಮೋಸಗಾತಿಯರಲ್ಲ..
ಮೋಸಗಾತಿಯರೆಲ್ಲರೂ ಅಂದಗಾತಿಯರೆ....!!
ಹುಡುಗರ ಮನಸನ್ನ ಕದ್ದು..!
ಸಿಕ್ಕಸಿಕ್ಕಲ್ಲಿ ಮಾಡಿ ಮುದ್ದು..!
ಹುಡುಗರನ್ನು ಮಾಡಿ ಪೆದ್ದು..!
ಸಿರಿವಂತನು ಸಿಕ್ಕಿದಮೇಲೆ..
ಅವನ ಮುಂದೆ ಸಿಗುವದೆ ಬೆಲೆ...
ಚಲುವೆಯರಿಗೆ ಇದೊಂದು ಖಾಯಿಲೆ..
ಖಯಾಲಿಯಾಗಿ ಮಾಡುತ್ತಿದೆ ಅಮಾಯಕರ ಕೊಲೆ..!!!
ನಮ್ಮಂತವರು ಸೇರಿಕೊಳ್ಳುವುದು ಒಳಿತು ಮೂಲೆ.
ಸಿಲುಕಿದರೆ ಪ್ರೀತಿಯ ಬಲೆ ಸತ್ತಂತೆ ನೀನು ಆಗಲೆ..!!