ಎಲುಬಿಲ್ಲದ ನಾಲಿಗೆಗೆ ಅರಿವೇ ಇಲ್ಲ
ಮಾಡುವ ಕೆಲಸದಲ್ಲಿ ಪಾಪ ಪ್ರಜ್ಞೆ ಇಲ್ಲ
ಸತ್ಯ, ಧರ್ಮದ ಪರಿವೇ ಇಲ್ಲ
ನ್ಯಾಯ , ನಿಷ್ಟೆಯ ಅಂಕುಶವಿಲ್ಲ
ಆಚಾರ, ವಿಚಾರಗಳ ಸುಳಿವೆ ಇಲ್ಲ
ಭಕ್ತಿ,ಭಾವದ ಪರಿಪಾಲನೆ ಇಲ್ಲ
ಓಂ ಪರಮಾತ್ಮ ನಾನು ಆತ್ಮವಿಲ್ಲದ ಮೂಡತ್ಮ ಭಗವಂತ ಪಾರದರ್ಶಕ ನೀನು ಮಿತ್ಯ ಬಿಂಬ ನಾನು
ಜ್ಯಾನವೆಂಬ ಕಣಗಳ ನಡುವೆ ಅರಿವೆಂಬ ಬೆಳಕ ಚೆಲ್ಲಿ ಯಶಸ್ಸಿನ ಮಿತ್ಯಬಿಂಬ ಚೆಲ್ಲಿ
ಅಜ್ಯಾನದ ಅಂಧಕಾರ ಕಳೆಯೊ ಜಗಮಲ್ಲ.
ಸ್ಥಿರ ಇಲ್ಲ ಮನವು ನನಗೆ
ಶುಚಿ ಇಲ್ಲ ದೇಹ ನನಗೆ
ಭಕ್ತಿ, ಭಾವದ ರಚನೆ ಇಲ್ಲ ನನಗೆ
ಸ್ನೇಹ, ಪ್ರೀತಿ ಬಂಧವಿಲ್ಲ ನನಗೆ
ಸಹಕಾರ, ಸಹನೆಯ ಗುಣ ಇಲ್ಲ ನನಗೆ
ನಾನೇಕೆ ಈಗೆ, ಅರಿವಿಲ್ಲ ನನಗೆ
ಇದು ಸಮಜಂಶವೇ ಕರುಣಾಕರ ನಿನಗೆ.
ಒಂದು ದಿನದ ಕೆಲಸವನ್ನು ಬದಿಗೊತ್ತಿ ಆಟಗಾರರಿಗೆ ಬೆಂಬಲಿಸುವುದು ನಮ್ಮ ಕರ್ತವ್ಯ
ಅದಕ್ಕೆಂದೇ ಬರೆಯುತ್ತಿರುವುದು ಈ ಒಂದು ಕಾವ್ಯ
ಆಟಗಾರರಿಗೆ ಆಟವಾಡುವುದೇ ಅವರ ನರನಾಡಿಯಲ್ಲಿ ಇರುವ ಚೈತನ್ಯ
ಅದನ್ನು ಸಂಪೂರ್ಣವಾಗಿ ನೋಡಿ ಬೆಂಬಲಿಸುವುದು ನಮ್ಮ ನಿಮ್ಮ ಚಪ್ಪಾಳೆ ಅವರ ಬಾಳಿಗೆ ಸನ್ಮಾನ
ಆಡುವ ಆಟಗಾರರಿಗೆ ಪ್ರೋತ್ಸಾಹ ನೀಡದೆ ಸುಮ್ಮನೆ ಕುಳಿತಿರುವುದು ನಮಗೆ ಅವಮಾನ
ನಮ್ಮ ಬದುಕಿನಲ್ಲಿ ಪ್ರತಿಯೊಂದಕ್ಕೂ ಗೆಲುವನ್ನು ಕಾಣಬೇಕೆಂದು ನಾವು ಹೇಗೆ ಬಯಸುತ್ತೇವೋ ಅದೇ ರೀತಿ ಒಬ್ಬ ಆಟಗಾರನಿಗೆ ಬೆಂಬಲವನ್ನು ಸೂಚಿಸಿ ಬೆಂಬಲಿಸಿ ಬದುಕುವುದು ನಮ್ಮ ಅಧಿಕಾರ ಹಾಗೂ ಅವರಿಗೆ ಕೊಡುವ ಪ್ರೋತ್ಸಾಹ
ಆಟ ಯಾವುದಾದರೇನು ಚಪ್ಪಾಳೆ ತಟ್ಟಿ ಅವರಿಗೆ ಬೆಂಬಲಿಸುವುದೇ ನಮ್ಮದೊಂದು ಸಂಸ್ಕೃತಿ
ಅವರು ನಮ್ಮವರು ಇವರು ನಮ್ಮವರು ಎನ್ನದೇ ಆಡುವ ಆಟಗಾರರೆಲ್ಲರೂ ನಮ್ಮವರೆಂದು ತಿಳಿದುಕೊಂಡು ಚಪ್ಪಾಳೆ ತಟ್ಟಿ ಸಂತೋಷದಿಂದ ಕಿರುಚಾಡಿ ಅವರಿಗೆ ಹೆಚ್ಚಿನ ಗೆಲುವನ್ನು ನೀಡುವುದೇ ನಮ್ಮ ಬೆಂಬಲದ ಕೀರ್ತಿ
ಬನ್ನಿ ಎಲ್ಲರೂ ಸೇರಿ ಆಟಗಾರರಿಗೆ ಪ್ರೋತ್ಸಾಹಿಸೋಣ ಬೆಂಬಲ ನೀಡೋಣ ಚಪ್ಪಾಳೆ ತಟ್ಟಿ ಅವರನ್ನು ಹುರಿದುಂಬಿಸೋಣ
ಕೋರೊನಾ ವಿರುದ್ಧ ಹೋರಾಡೋಣ
ಮನೆಯಲ್ಲಿ ಇರೋಣ
ಪೊಲೀಸ್ ಸೈನಿಕರು ಮತ್ತು ಡಾಕ್ಟರ್ ಗಳಿಗೆ ಒಂದನೇ ಸಲ್ಲಿಸೋಣ
ಎಲ್ಲಿಂದಲೋ ಬಂದ ಕಾಣದಾ ಸೂಕ್ಷ್ಮಾಣುವೊಂದು
ಮನುಜ ದೇಹವ ಸದ್ದಿಲ್ಲದೆ ಹೊಕ್ಕು ರೋಗವ ತಂದು
ಅಬ್ಬರದಾರ್ಭಟಕೆ ವಿಶ್ವದೆಲ್ಲರು ಸೊರಗಿಹರಿಂದು ನೊಂದು
ಆವರಿಸಿಹ ಕತ್ತಲು ಕಮರಿ ಬೆಳಕು ಬೀರುವುದು ಇನ್ನೆಂದು|
ನೀತಿ ನಿಯಮ ಗಾಳಿಗೆ ತೂರಿದ ಅಜ್ಞಾನ ಅಹಮಿಕೆ
ಮತಿಗೆಟ್ಟ ಮನದ ಓಟಕೆ ಅಂಕುಶದ ಅಂಕೆಯ ಕುಣಿಕೆ
ರೋಗ ರುಜಿನಕೆ ಅಂಜದೆ ತಿರುಗಿ ಸಾವಿನ ಬಳಿಗೆ ಸಾರಿ
ವಿನಮ್ರದಿ ನನ್ನದೊಂದು ಮನವಿ ಇಂದು ಒಳಗಿರೆಂದು ಕೋರಿ||
ನೇಹಿ ಬಂಧು ಬಾಂಧವರ ಕಂಡು ತಬ್ಬಿ ಮುತ್ತಿಕ್ಕಿ ಕೈಕುಲುಕುವ ಅನ್ಯರ ಸಂಸ್ಕೃತಿ
ಈಗಲಾದರೂ ಕರಮುಗಿದು ಉಪಚರಿಸಿ ಮೆರೆವ ಧನ್ಯ ನನ್ನಮ್ಮ ಭಾರತಿ
ಭವ್ಯತೆಗೆ ಮೆರಗಿಟ್ಟು ನವ್ಯತೆಯ ಸೋಗನಳಿಸಿ ಬೆಳಗಿಸಿ ಸಂಸ್ಕೃತಿಯ ಆರತಿ||
ಎತ್ತ ಸಾಗಿದೆ ಅವಿವೇಕದಿ ಅಜ್ಞಾನದಿ ವರ್ತಿಸುತಿಹ ಜನ
ರಣಕೇಕೆ ಹಾಕಿ ಬರೆದಾಗಿದೆ ಮರಣ ಮೃದಂಗ ಶಾಸನ
ಗುರಿಯಿಲ್ಲದ ಅತಿಯಾಸೆಯ ವೇಗಕೆ ಬೇಕಿಂದು ಕಡಿವಾಣ
ಪ್ರಕೃತಿಯ ಮುನಿಸನಳಿಸಿ ತಣಿಸಲು ಎಲ್ಲರೊಟ್ಟಿಗೆ ಬದುಕಿ ಬಾಳೋಣ||
ಎಲ್ಲಿ ನೋಡಿದಲ್ಲಿ ಶವಗಳ ರಾಶಿ ಬೇಕು ಬೇಡಗಳ ಗೊಡವೆ
ಸಾಮಾಜಿಕ ಅಂತರವಿರಲಿ ಒಳಿತಿಗಾಗಿ ನಮ್ಮೆಲ್ಲರ ನಡುವೆ
ಗೊತ್ತಿಲ್ಲದೆ ದೂರದೂರಿಂದ ತಂದು ಮಹಾ ಮಾರಿಯ ಹೊತ್ತು
ನಿರ್ಲಕ್ಷದಿ ಬೀದಿಯೆಲ್ಲವ ಸುತ್ತಿ ತಂದರು ಅಮಾಯಕರ ಪ್ರಾಣಕ್ಕೆ ಕುತ್ತು||
ಕಾಲನ ಕರೆಯನುಡುಕಿ ಹೊರಟಂತಿದೆ ಮೇರೆ ಮೀರಿದ ದುರಾಸೆ
ನಿಸರ್ಗ ಕಲಿಸಿ ತೋರಿಸಿ ಮೆರೆಯುತಿದೆ ತನ್ನದೇ ಆದ ವರಸೆ
ನಶ್ವರವೀ ಬದುಕು ಒಳಿತು ಮಾಡಿ ನಡೆ ಅಂತ್ಯ ಶಾಶ್ವತ
ಮರೆತು ಬೀಗಿ ನೋವನುಳಿಸಿ ಬಿಕ್ಕಿ ಆಗದಿರು ನೀನು ಅನಾಥ||
ಅನ್ಯಾಯ ಅಕ್ರಮಗಳ ಸುಳಿಗೆ ಸಿಲುಕಿ ತುಂಬಿದೆ ಪಾಪ ಕರ್ಮಗಳ ಜೋಳಿಗೆ
ಅಹಂಕಾರ ಅಜ್ಞಾನ ಅಂದಕಾರದ ಸ್ವಾರ್ಥದ ಕಲೆಯ ಗುರುತು ಬಾಳಿಗೆ
ನಿರ್ಗತಿಕರ ಬದುಕ ಕಿತ್ತು ನಡುಬೀದಿಗೆ ತಂದಿದೆ ರಕ್ತಪಿಪಾಸು ದಾಳಿಗೆ
ದಿಕ್ಕುಗಾಣದೆ ಎತ್ತೆತ್ತಲೋ ಸುತ್ತುತ್ತಿದೆ ದಿಕ್ಕಿಲ್ಲದೆ
ಸಿಲುಕಿ ಸುಳಿಗಾಳಿಗೆ||
ಮಾಲಿನ್ಯಕೆ ಮುನ್ನುಡಿ ಬರೆದು ಪ್ರಕೃತಿ ನಾಶಕೆ ಭ್ರಮೆಯ ಬೆನ್ನೇರಿ
ದಾರ್ಶನಿಕರ ನುಡಿಸಾರ ಅತಿಯಾಸೆ ಸಲ್ಲದೆಂದು ಅಂದೇ ಸಾರಿ
ಕೇಳಲೊಲ್ಲ ಕೆಡುಕು ಮತಿಗೆಟ್ಟ ಮೂಢ ಮಾನವ ಎಲ್ಲ ಗಾಳಿಗೆ ತೂರಿ
ಕೆಣಕಿ ಕಾಡುತಿದೆ ಇಂದು ಪ್ರಕೃತಿ ಇಣುಕಿ ಅಣಕದ ನಗುವ ಬೀರಿ||
ಸ್ವಾರ್ಥದಾಸೆಗೆ ಕಟ್ಟಿದಾ ಅಂತಸ್ತಿನ ಕೋಟೆಯ ಕನಸು
ದಿಕ್ಕೆಟ್ಟು ಓಡುತಿದೆ ಒಂದೆಡೆ ನಿಲ್ಲದಾ ಹುಚ್ಚು ಮನಸು
ಕಟ್ಟಿ ಹಾಕು ದುರಂತಕೆ ಮುನ್ನ ಹಿಡಿದು ಈಗಲೇ ನಿಲ್ಲಿಸು
ನಿಸರ್ಗದ ಮುನಿಸು ಅದು ನಮ್ಮದೇ ಪಾಪಕರ್ಮ ತಾಳಿ ಸಹಿಸು||
ಜೀವದುಸಿರ ಉಳಿಸಲೊಸುಗ ಒಳಗಿರೆಂದು ನನ್ನ ಮನವಿ
ಮಡದಿ ಮಕ್ಕಳ ತಂದೆ ತಾಯ್ಗಳೊಟ್ಟಿಗೆ ಇರಿ ನವಿರಾಗಿ ಮೈದಡವಿ
ಬದುಕ ಧಾವಂತದ ಭ್ರಮೆಯಲಿ ಕಳೆದುಳಿದ ಮಮತೆಯ ಪ್ರೇಮಾಂಕುರ
ಮೌಲ್ಯಗಳುದಿಸಿ ಸಂಬಂಧಗಳ ಬೆಸುಗೆಯ ಚಿಲುಮೆ ಹತ್ತಿರ||
ನಮಿಸುವೆನು ನಾನು ಹಗಲಿರುಳು ಕಾಯ್ವ ರಕ್ಷಕರಿಗಿಂದು
ಜೀವ ಪಣವಿಟ್ಟು ಶ್ರಮಿಸುವ ವೈದ್ಯರಿಗೆ ಮುಂದೆ ಎಂದೆಂದು
ಬಿರುಬೇಸಗೆಯ ತಾಳಲಾರದ ಸೆಕೆ ಅಬ್ಬರಿಸುತಿದೆ ಸಾವಿನ ರಣಕೇಕೆ
ಮಡಿಲ ಕುಡಿಯ ಸತಿಯ ಒಲವ ಗಳಿಸಿ ಮೆರೆಸಲು ಒಳಗಿರಬಾರದೇಕೆ ....??!!