ನನ್ನ ಮನದ ಅರಮನೆಯ ಸೂರ್ಯ ಕಣ್ಮರೆಯಲ್ಲಿ ಇರುವಾಗ
ಹೃದಯದ ಒಲವಿ ನ ಬಯಕೆ ಸಾಗಿ ಬೇಸತ್ತು ಕಂಬನಿ ಯೂ ಪುತಿದಾಗ ಹಬ್ಬಿದ ಹನಿಗಳ ನೋವ ನಾ ಯಾರಿಗೆ ಹೇಳಲಿ ಈಗ ಮಮತೆಯ ಮುದ್ದಿನ ಯೋಗ ನನಗೆ ಇಲ್ಲದಿರುವಾಗ ಅಣ್ಣ ನಿಮ್ಮ ನೋಡಬೇಕೆಂಬ ತವಕ ಪ್ರತಿದಿನವೂ ನನ್ನೊಳಗೆ ಸೃಷ್ಟಿಸುತ್ತಿದೆ ಮರೆಯಲಾಗದ ದುಃಖದ ಕಂದಕ ನಿಮ್ಮ ತಂಗಿಯ ಹೃದಯದ ಭಾರ
ನಿಮ್ಮ ಕರುಳ ಶಾಖ ದೀ ಕರಗಿ ನಿಶ್ಚಿಂತೆಯ ನಿದ್ರೆಯಲ್ಲಿ ದುಗುಡ ದ್ರವ್ಯ ರೂಪದಿ ಶ್ರವಿಸಿ
ನಿಮ್ಮ ಕೊರಳೊಳಗೆ ನಗುತಿರಲು ಆಹಾ ನನ್ನ ಮನವೆಲ್ಲ ಹಗುರ ಕಣ್ಮುಚ್ಚಿ ಕಣ್ ತೆರೆಯೇ ಎದುರಲ್ಲಿ ನೀವಿದ್ದರೆ ಆಗ ಹಸಿವು ಚಿಂತೆಯ ನೋವು ನನಗಿಲ್ಲ ನಿಮ್ಮ ನೋಡುವ ಸಂಭ್ರಮದ ಸಡಗರ ಶೀಘ್ರದಲ್ಲಿ ಸಿಗಲೆಂದು ನನಗೆ ಹಾರೈಸಿ ರಿ ಇಂದು
ಮತ್ತೆ ನಾಳೆ ಬಾ
ಆ ಬಿಂಕ ಬಿನ್ನಾಣಗಳ ನಡುವೆ
ಕಳೆದು ಹೋಗಬೇಡಾ
ಕಣ್ಣೀರಿನ ಪನ್ನಿರೀನಲ್ಲಿ
ಮೈತೊಳೆದು ಮಲಗಬೇಡ
ಮತ್ತೆ ನಾಳೆ ಬಾ
ನಿನಗಾಗಿ ಕಾಯುತ್ತಿರುವೆ
ಕ್ಷಣಕ್ಷಣಕ್ಕೂ ಸಾಯುತ್ತಿರುವೆ
ನಿನ್ನ ನೆನಪಿನಲ್ಲಿಯೇ ಆದರೆ
ಬಂದು ಹೀಗೆ ಕಾಡಬೇಡಾ.
ನಿನ್ನ ಕಣ್ಗಳ ಕಾಂತಿಯಲ್ಲಿ
ನನ್ನ ಹೃದಯ ಬೆಳಗುತ್ತಿದೆ
ಬೆಳಗಿನ ಈ ದೃಶ್ಯಕಾವ್ಯ ನನ್ನನ್ನು
ತನ್ನ ತೆಕ್ಕೆಯಲ್ಲಿ ಸೆಳೆಯುತ್ತಿದೆ
ನಿನ್ನ ಹೆಜ್ಜೆಯೂ ಗೆಜ್ಜೆಯ ನಾದಕ್ಕೆ
ಲಜ್ಜೆ ಕಳೆದು ಮುಂಜಾವು ಮುಗುಳ್ನಗೆ
ಬೀರುತ್ತಿದೆ
ಮಟಮಟ ಮಧ್ಯಾಹ್ನ
ಚಟಪಟ ವೆಂದು ಸುಡುತಲಿತ್ತು ಬಿಸಿಲು
ಬಿಸಿಲಿನ ಧಗೆ ತಾಳಲಾರದೇ
ಮತ್ತೆ ಮತ್ತೆ ಸುರಿಯುತಲಿತ್ತು ಬೆವರು
ಮಟಮಟ ಮಧ್ಯಾಹ್ನ
ಅದೆಲ್ಲಿಂದಲೋ ಓಡೋಡಿ ಬಂತು
ಮೋಡ ಕ್ಷಣದೊಳಗೆ
ಚಿಟಪಟ ವೆಂದು ಸುರಿಯುತ್ತಲಿತ್ತು
ಮಳೆ
ನಿನ್ನಯ ಬೆಡಗಿಗೆ
ಮನವು ಕಳೆದು ಹೋಯಿತು ಮೆಲ್ಲಗೆ
ನಿನ್ನ ನಡಿಗೆಗೆ
ಮನದಲ್ಲಿ ಸುರುವಾಯ್ತು ಗುಡುಗೆ
ನಿನ್ನ ಚೆಲುವಿಗೆ
ಮರೆತು ಹೋಯ್ತು ನನ್ನ ಮೆರುಗೆ
ನಿನ್ನ ನುಡಿಗೆ
ಸ್ವರವೆ ಇಲ್ಲ ನನ್ನ ಮಾತಿಗೆ
ನಿನ್ನ ಕಾಣದ ಗಳಿಗೆ
ನಿಷ್ಕ್ರಿಯವಾದಂತೆ ಮೆದುಳಿಗೆ
ನೀನು ಇಲ್ಲದೆ ನನ್ನ ಜೊತೆಗೆ
ನಿಶಕ್ತಿ ಆದಂತೆ ನನಗೆ
ಹೇಗೊ ಇದ್ದೆ ನನ್ನ ಪಾಡಿಗೆ
ನೋವುಂಟು ಮಾಡಿದೆ ನನ್ನ ಮನಸ್ಸಿಗೆ
ನಿಸರ್ಗ ಸೃಷ್ಟಿ ಮಾಡಿದ ದೇವರು. ಉಳಿಸಲು ಬಿಡುತ್ತೀಲ್ಲ ನಮ್ಮ ಈ ಮಾನವರು. ಗಿಡ ಕಡಿದು ಆಗುತ್ತಿರುವರು ಅಸುರರು. ಭೂಮಿ ತಾಯಿಯನ್ನು ಸಿಳುತ್ತಿರುವವರು ಗಿಡ ನೆಟ್ಟು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ನಮ್ಮ ನಾಡಿನ ಯುವಕರು