ಕಾತರಿಸಿದೆ ಮನ
ಬರುವ ನನ್ನ ಕಂದನಿಗಾಗಿ,
ನನ್ನೊಲುಮೆಯ ಪಟ್ಟದರಸಿಯ
ಹೊಟ್ಟೆಯೊಳಗೆ ಕಳೆದು
ಒಂಬತ್ತು ತಿಂಗಳು,
ತಳೆದು ಮೆದು ಮೈ ಮನಸುಗಳ
ಕಾಲಿಡುವನು ನೆಲಕೆ,
ಕತ್ತಲ ಲೋಕದಿಂದೊಮ್ಮೆ
ಬೆಳಕಿನಂಗಳಕೆ..
ಬರುವ ಕಂದನ ಹೊಗಳಲು
ಸಾಲದು ಪದಗಳ ಹೊಳಲು,
ಕಣ್ತುಂಬಿಕೊಳಲು ಕಾದಿವೆ ಕಂಗಳು,
ಮುಟ್ಟಿದರೆ ಮುನಿವನೋ,
ತಾಯಿ ಎದೆಯೊಳಗೆ ಹುದುಗಿ
ಮೈ ಮುರಿವನೋ..
ಬರಲಿರುವ ಕಂದ
ಅರಸನೋ, ಅರಸಿಯೋ ಅರಿತವರಿಲ್ಲ
ಹೊತ್ತು ತಿರುಗುವೆ ಪುಟ್ಟ ಕೂಸನು
ನಾನೆಂದಿಗೂ ಅವಳ ಕಾಲಾಳುವಾಗಿ..
ಕೆಲ ದಿನಗಳಿಂದ ಕಣ್ಣ ಹನಿಯು ಜಾರಿ ತಾಕುತಿದೆ ಕೆನ್ನೆಯ,
ನಿನ್ನ ನೋಡಲು ಹವಣಿಸುತ್ತಿದೆ ಈ ಹೃದಯ,
ನಿನ್ನ ನೋಡದೆ ಹೇಗಿದೆಯೋ ಈ ನನ್ನ ಮನ,
ಬಂದರೆ ಸಾಕಾಗಿದೆ ಕಣ್ಣ ಮುಂದೆ ಒಂದು ಕ್ಷಣ,
ಮಿಡಿಯುತ್ತಿರುವ ನನ್ನ ಕಂಬನಿಗೆ ಆಗಬಹುದು ನನ್ನ ಕೈ ಸ್ಪಶ೯ವೇ ಪರಿಹಾರ,
ಆದರೆ
ನಿನಗಾಗಿ ಮಿಡಿಯುತ್ತಿರುವ ನನ್ನ ಹೃದಯಕ್ಕೀಗ
ನೀನೆ ಪರಿಹಾರ...!
ಬರೆಯಲಾಗುತ್ತಿಲ್ಲ ಒಂದೆಳ್ಳೆ ಕವಿತೆ..!
ಮನದಲ್ಲಿ ತುಂಬಿರುವುದು ಬರಿ ವ್ಯತೆ...!!
ಕೇಳಿ ಸ್ವಲ್ಪ ನನ್ನ ಕಥೆ..?
ಹುಡುಗಿಯ ನೋಡಲು ಹೋದೆ
ಬ್ರೋಕರ್ ಜೊತೆ..!
ನೋಡಿ ಅವಳಂದಕೆ ನಾ ಸೋತೆ...!!
ಮದುವೆಗೆ ಸೂಚಿಸಿದೆ ನನ ಒಪ್ಪಿಗೆ..
ಬಳಿ ಬಂದರು ಅವರಮ್ಮ ಮೆತ್ತಗೆ..
ವಧುದಕ್ಷಿಣೆ ಎಷ್ಟಿದೆ ಎಂದರು ನನಗೆ..
ತೆಲೆತಿರುಗಿದ ಹಾಗೆ ಆಗಿ ಹಿಡಿದೆ ಮನೆಕಡೆ ಕೊನೆಗೆ.....!!!!!!
ಹಣದ ಮುಂದೆ ನಡೆವುದಿಲ್ಲ ಯಾವ ಬಲ
ಹಣಕೆ ಆಡಿಸುವರು ಎಲ್ಲರು ಬಾಲ........!
ಆದರೆ ನಾನಂತು ಸೇರಿದೆ ಬಿಲ.............!!!!
ಹೃದಯದ ಮರದಲ್ಲಿ ಕುಳಿತ ಗಿಣಿ
ಅಂದಚಂದದ ನಲ್ಮೆಯ ನಾರಿಮಣಿ
ಚಿತ್ತಾರ ಚೆಲುವಿನ ಸುಂದರ ತರುಣಿ
ಮನವ ಕುಲುಕುವ ಚಿಂತಕ ಮೋಹಿಣಿ
ನಿನ್ನೊಂದು ಸೌಂದರ್ಯದ ಗಣಿ
ವರ್ಣಿಸಲು ಸಾಲದು ಪದಗಳ ಸರಣಿ
ನೀಡಿರುವೇ ಮನದಲ್ಲಿ ನಿನಗೆ ಪಹಣಿ
ನೀನು ಒಪ್ಪಿದರೆ ಕೊಡುವೆ ಕರಿಮಣಿ
ನಿನಾಗುವೆ ನನ್ನ ಅರ್ಧಾಂಗಿಣಿ
ನಿಜ ಸುಖಸಂಸಾರದ ಕಣ್ಮಣಿ
ಕಾಯಿಸಬೇಡ ಸಮಯದಾರಿತ್ರಿಣಿ
ಆಗೂ ನನ್ನ ಪ್ರೀತಿಗೆ ನೀನು ಅಣಿ.
ಎಲುಬಿಲ್ಲದ ನಾಲಿಗೆಗೆ ಅರಿವೇ ಇಲ್ಲ
ಮಾಡುವ ಕೆಲಸದಲ್ಲಿ ಪಾಪ ಪ್ರಜ್ಞೆ ಇಲ್ಲ
ಸತ್ಯ, ಧರ್ಮದ ಪರಿವೇ ಇಲ್ಲ
ನ್ಯಾಯ , ನಿಷ್ಟೆಯ ಅಂಕುಶವಿಲ್ಲ
ಆಚಾರ, ವಿಚಾರಗಳ ಸುಳಿವೆ ಇಲ್ಲ
ಭಕ್ತಿ,ಭಾವದ ಪರಿಪಾಲನೆ ಇಲ್ಲ
ಓಂ ಪರಮಾತ್ಮ ನಾನು ಆತ್ಮವಿಲ್ಲದ ಮೂಡತ್ಮ ಭಗವಂತ ಪಾರದರ್ಶಕ ನೀನು ಮಿತ್ಯ ಬಿಂಬ ನಾನು
ಜ್ಯಾನವೆಂಬ ಕಣಗಳ ನಡುವೆ ಅರಿವೆಂಬ ಬೆಳಕ ಚೆಲ್ಲಿ ಯಶಸ್ಸಿನ ಮಿತ್ಯಬಿಂಬ ಚೆಲ್ಲಿ
ಅಜ್ಯಾನದ ಅಂಧಕಾರ ಕಳೆಯೊ ಜಗಮಲ್ಲ.
ಸ್ಥಿರ ಇಲ್ಲ ಮನವು ನನಗೆ
ಶುಚಿ ಇಲ್ಲ ದೇಹ ನನಗೆ
ಭಕ್ತಿ, ಭಾವದ ರಚನೆ ಇಲ್ಲ ನನಗೆ
ಸ್ನೇಹ, ಪ್ರೀತಿ ಬಂಧವಿಲ್ಲ ನನಗೆ
ಸಹಕಾರ, ಸಹನೆಯ ಗುಣ ಇಲ್ಲ ನನಗೆ
ನಾನೇಕೆ ಈಗೆ, ಅರಿವಿಲ್ಲ ನನಗೆ
ಇದು ಸಮಜಂಶವೇ ಕರುಣಾಕರ ನಿನಗೆ.