Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಬೆಳಕಿನಲ್ಲಿ ಬೆಳಕಿಗೆ ಬೆಲೆ ಇಲ್ಲ ಭಯಂಕರ ಕತ್ತಲೆಯಲ್ಲಿ ಕಿರು ದೀಪದ ಬೆಳಕಿಗೂ ಬೆಲೆಯುಂಟು ನೂರಾರು ಸುಳ್ಳಿನ ಪ್ರೀತಿಗಿಂತ ಒಂದು ಸತ್ಯವಾದ ಪ್ರೀತಿಗೆ ಬೆಲೆ ಉಂಟು
- Muttu Ganeshi
28 Apr 2020, 08:28 pm
ಇರು ಗೆಳತಿ ಸುಖ-ಸಂತೋಷದಿಂದ,
ಅರಸುವೇನು ನನ್ನಿ ಪುಟ್ಟ ಮನಸ್ಸಿನಿಂದ,
ಬೇಡಾ ಗೆಳತಿ ಮನಸ್ತಾಪ,
ನಂತರ ಪಡಬೇಡ ನೀ ಪಾಶ್ಚಾತಾಪ.
:-ವೀಣಾ ಲಿಂಗಣ್ಣ
- Veena
28 Apr 2020, 08:27 pm
ಮೌನವೆಂಬುದು ಪ್ರಾಬಲ್ಯ ಶಕ್ತಿ
ಮೌನ ಸ್ತಬ್ಧವಾದರೇ ಅದು ಜೀವನದ ಯುಕ್ತಿ
ಏನೋ ಮನಸ್ಸೆಂಬ ಜಾದೂಗಾರ ಕೇಳದೆ
ಒಳ ಕದವ ತಟ್ಟಿ ಮನವ ಮುಟ್ಟಿ ನಾ ಹೇಳಿದೆ.
ಮನದ ಮಾತುಗಳ ವಿಸ್ತರಿಸಿದೆ
ಒಳಗಿನ ಭಾವಗಳು ಉತ್ತರಿಸಿದೆ
ಎಲ್ಲವನ್ನೂ ಏಕೋ ಮೌನವಾಗಿಸಿದೆ .
ಮೌನಸರೋವರದಿ ಹದುಗಿಟ್ಟ ಎಷ್ಟೋ ಭಾವ
ಮನದೊಳಗಿನ ಅಂತರಾಳದಿ ನಲುಗಿದೆ
ತಿಂಗಳ ಬೆಳಕಿಗೆ ಬಾರದೇ, ತುಸು ದೂರ ಸಾಗಿದೆ
ಇಳೆಯ ಪರಿವಿಲ್ಲದ ಮನದಿ ಮಾತು ಮೌನವಾಗುತಿದೆ .
ಅದೇನೋ ಹೃದಯ ಇದನು ಬಯಸುತಿಲ್ಲ
ಅಂತರಾಳದ ಮೌನ ಸರಿ ಕೇಳುತಿಲ್ಲ
ಮತ್ತೆ ಅದೇ ಮಾತು ಮರುಕಳಿಸಿದೆಯಲ್ಲ
ಪುನಃ ಮನವು ಬಾಗಿಲ ತೆರೆದಿದೆಯಲ್ಲ
ಮೌನ ಮಾತಾಗಿ ಬದಲಾಗುತಿದೆಯಲ್ಲ.
ಸರ್ವಸ್ವವು ಖುಷಿಯಿಂದ ತೇಲಿದಾಗ
ತನುವು ಬಿಚ್ಚಿ ಹೇಳಿದಾಗ
ಮತ್ತೆ ಮೌನ ಮಾತಾದಾಗ .......
- Pranam Pranam
28 Apr 2020, 09:19 am
ಎದೆಯಲಿ ಚಿಗುರಿದ
ನೂರು ಭಾವಗಳಿಗೇನು
ಗೊತ್ತು...?
ಅವುಗಳು ಉದುರಿ
ಕಾಲ ಧೂಳಾಗುವ
ಹೊತ್ತು...!
- ಶ್ರೀಕಾವ್ಯ
27 Apr 2020, 11:28 pm
ಹೇ ಹೃದಯದರಸಿ,
ಬರುವೆ ನಿನ್ನ ಪ್ರೀತಿಯ ಬಯಸಿ,
ಯಾಕೆ ಹೀಗೆ ಕಾಡುತ್ತಿರುವೆ ನನ್ನ ಕಾಯಿಸಿ,
ಬರುವೆಯಾ ಒಂದು ಬಾರಿ ಕಣ್ಣ ಮುಂದೆ ನಗು ಎಂಬ ಹೂವನ್ನು ಹಾಸಿ..!
ತಿಳಿಯದು ನನಗೆ ಎಲ್ಲಿಹುದು ನನ್ನ ಗಮನ,
ನಾನಾಡುವ ಮಾತೇ ನೀನಾ?
ಆ ಮಾತಿನಲ್ಲಿರುವ ಮೌನವೇ ನೀನಾ?
ನಾ ನೆನಪಿಸಿಕೊಳ್ಳುವ ನೆನಪುಗಳೇ ನೀನಾ?
ಆ ನೆನಪಿನಲ್ಲೆ ನೀನಾ?
ಏನೆಂದು ಕರೆಯಲಿ ಈ ಅನುಭವಕೆ,
ಆಕರ್ಷಣೆನಾ? ಆರಾಧನೆ ನಾ?
ಬಂದು ಬಿಡು ಕಣ್ಣೆದುರಿಗೊಂದು ಬಾರಿ,
ಹೃದಯ ದಿಂದ ಹೇಳಿ ಬಿಡುವೆನು ಪ್ರೀತಿಯ ಲಹರಿ,
ನೀ ಸಿಕ್ಕರೆ ನಾನಾಗುವೆನು ನಿನ್ನ ಪತಿ,
ನೀ ಸಿಕ್ಕ ದಿದ್ದರೆ ಜನ್ಮ ಪೂತಿ೯ ನಿನ್ನ ನೆನಪೇ ನನಗೆ
ಆಹುತಿ...!
- Megha
27 Apr 2020, 08:35 pm
ಎಳೆಯ ಗರುಕೆಯು ಸುತ್ತ ಮುತ್ತ ನೋಡುತ್ತಿದೆ....
ರವಿಯು ಮೆಲ್ಲಗೆ ಬಂದುಅದಕ್ಕೆ ಮುತ್ತಿಟ್ಟು ಆಲಂಗಿಸುತ್ತಿರುವನು ....
ಮೋಡವು ಬೆಳಕು ಹರಿಸಿದಾಗ,ಗರುಕೆಯು ನಾಚಿ ತಲೆ ತಗ್ಗಿಸಿದೆ....
ರವಿಯು ಸಂಜೆ ಬಂದು ಮುತ್ತಿಟ್ಟು ಹೋಗುತ್ತೇನೆಂದು ಗರುಕೆಗೆ ಪ್ರಮಾಣ ಮಾಡಿ ಮೇಲೇರುತ್ತಿರುವನು......
Shiv..
- SHIV...
27 Apr 2020, 11:26 am
ಮನದಾಳದಲ್ಲಿ ಅಡಗಿ ಕುಳಿತಿದ್ದ ಪ್ರೀತಿಯು ಚಿಗುರೊಡೆದಾಗ ಹರಳಿದ ಓ ನನ್ನ ಕುಸುಮಮೇ
ನಿನ್ನ ಪರಿಮಳವು ಸೆಳೆಯಿತು ನನ್ನ ಗಮನ
ಮುದ ನೀಡಿತು ನಿನ್ನಯ ಆಗಮನ. .
ನನ್ನ ಆತ್ಮಸ್ಥೈರ್ಯಲವ ಬಲಪಡಿಸಿದ ನೀನು
ನನ್ನ ಅಸ್ಥಿತ್ವವಕ್ಕೆ ಮಂದಾರವೇ ನೀನು
ನೀನಿದ್ದರೆ ನನ್ನ ಜೂತೆಗೆ ವಿಶ್ವವನ್ನೆ ಸುತ್ತಿ ಬರೋಣ ಒಟ್ಟಿಗೆ ಎಂದಿಗೂ ಜೊತೆಜೊತೆಗಿರೋಣ.....
- RoopaGowtham
27 Apr 2020, 08:27 am
"ನೀನು ಮೌನವಾಗೋ
ಮುನ್ನ
ನನ್ನನ್ನೊಮ್ಮೆ ಕೇಳಬೇಕಿತ್ತು.?
ನೀ ದೂರ ಸರಿಯೋ
ಮುನ್ನ
ದಾರಿಯುದ್ದಕ್ಕೂ ನಡೆದ
ಹೆಜ್ಜೆಗಳ ಲೆಕ್ಕ ಕೊಡಬೇಕಿತ್ತು .?
ಇಂತಿ ನಿಮ್ಮ........"
- LokiLokesh
26 Apr 2020, 11:59 pm
"ಕಾದು ಕುಳಿತಿರುವೆ ಗೆಳತಿ
ನಾನು ನಿನ್ನ ನೋಡಲು ಅಲ್ಲ
ಸಿಗದ ನಿನ್ನ ಪ್ರೀತಿಯ
ತಸು ಮಾತಿಗೆ
ಹುಚ್ಚು ಪ್ರೀತಿಯ
ಪೆದ್ದು ಮನಸ್ಸು....."
- LokiLokesh
26 Apr 2020, 11:57 pm
ಕಾಯಕವೇ ಕೈಲಾಸವೆಂದು ಪ್ರತಿಪಾದಿಸಿದ ಕಾಯಕ ಯೋಗಿ
ಜಾತಿಮತ ಧರ್ಮದ ಮೌಢ್ಯವೆಂಬ ತಮವ
ಅಳಿಸಲು ಹೋರಾಡಿದ ಭೈರಾಗಿ !
ಮನದಲಿ ದೇವರನರಸಿ ಎಂದು ಬೆಳಕು ತೋರಿದೆ
ಕ್ರಾಂತಿಯ ಹರಿಕಾರನಾಗಿ
ವಿಶ್ವಮಾನವ ನೀ ನಿಂತೆಲ್ಲರ ಮನದೆ ಜಗಜ್ಯೋತಿ
ಬಸವೇಶ್ವರನೆಂದು ಅಜರಾಮರವಾಗಿ !
ಮಾನವತೆಯ ಸೆಲೆಯಲಿ ಧರ್ಮವ ಅರಿತ ಬೆರಗು
ಅನುಭವ ಮಂಟಪದಲಿ ವಚನಗಳ ಸೊಬಗು
ಜಗದ ಮೌಢ್ಯತೆಯ ಬದಲಾಯಿಸಲು ಅನವರತ
ಗುಡುಗು
ದಯವೆ ಧರ್ಮದ ಮೂಲವಯ್ಯ ಎಂದು ಸಾರಿದ
ನಿಮ್ಮಿಂದ ಮಾನವತಾವಾದಿಯೆಂಬ ಹೆಸರಿಗೆ
ಮೆರಗು !!!
ಶಕುಂತಲಾಮೂರ್ತಿ
""""""""""""""""""""""""""
- Shaku Thanks Amma Shaku
26 Apr 2020, 10:24 pm