Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಧ್ಯೇಯವಿಲ್ಲದ ಅಧ್ಯಾಯದಲ್ಲಿ

ಅಲೆದಾಡುತಿದೆ ಮನ
ಕಾಣದ ಬಿಂದುವಿನ ಹಿಂದೆ
ತಲುಪುವ ದಾರಿ ತಿಳಿಯದೆ
ಕಳೆದುಕೊಂಡು ಬಹಳ
ದೂರ ಬಹುದೂರ ಸಾಗಿದೆ
ಮರೆಯಾಗಿ ಮರೆಮಾಚಿ
ಸುಮ್ಮನೆ ಓಡಿದೆ ನಿಲ್ದಾಣವಿಲ್ಲದೆ


ತಿರುಗಿದರೂ... ಮರುಗಿದರೂ...
ದೊರಕದು ಸಾಕ್ಷಾತ್ಕಾರ
ಅರ್ಥವಾಗದೆ ಗರಬಡಿದು
ಕಾಲ ಕಳೆದಿದೆ ಸಿಗದೆ ನೆರಳು
ದುರುಪಯೋಗವಾದ ಬಲಹೀನತೆ
ಎಡ,ಬಲ ಮೇಲೆ, ಕೆಳಗೆ
ಸುತ್ತಮುತ್ತಲೂ...ಬಾಚಲಿಲ್ಲ; ಕೈ ಚಾಚಲಿಲ್ಲ
ಧ್ಯೇಯವಿಲ್ಲದ ಅಧ್ಯಾಯದಲ್ಲಿ ಜೀವ, ಬಡಜೀವ

- mahadeva kc

26 Apr 2020, 10:07 pm

ಜೀವನ

ಬಾಳು ಹೂಸದಾಗಿ ಶುರುವಾದಾಗ ಬಾಳಿನೂಂದಗೆ ಸಹಪಾಠಿವಾಗುವ ಸಣ್ಣ ಸಣ್ಣ ಆಸೆಗಳೆ
ಆಸೆ ಈಡೇರಿ ನನಸಾದರೆ ಹೂಮಳೆ
ಆಸೆ ಕನಸಾದರೆ ಕಂಬನಿಯ ಹೊಳೆ

ಹೂಸಬಾಳಿನ ಹೂಸಿಲಲಿ ನಿಂತ ನನ್ನ ಗೆಳತಿಗೆ
ತಲೆ ತಿರುಗಿ ಬರುವಂತೆ ಹೂತ್ತದಳು ಹೆಗಲಿಗೆ ಮೆತ್ತಗೆ ತಿಳಿದಿತ್ತು ಅಷ್ಟೂತ್ತಿಗೆ ಆ ಬಾಲೆಗೆ
ನಾ ಬಂದು ಬಿದ್ದಿರುವೆ ಸಂಸಾರವೆಂಬ ಬಲೆಗೆ
ಅದರೂಡೆಯರು ಅತ್ತೆ ಮಾವ ಎಂಬ ಮೆಚ್ಚುಗೆ
ಅವರ ಕಠೋರ ನುಡಿಗಳೇ ಆದವು ಮುಳ್ಳಿನ ಹಾದುಗೆ...

ದಾರಿಯೆ ಕಾಣದಂತಾಗಿದೆ ನಾ ಏನ ಮಾಡಲಿ ನನ್ನ ಗೆಳತಿ ಅಪ್ಪಿದ ಮೆಚ್ಚಿದ ಗೆಳತಿಗೆ ನಾ ಮಾಡಲಾರನೇ ಹೂಳಿತನ್ನ ಕರೆತಂದು ಅವಳನ್ನ ಹೇಳಿಸಿದೆ ನೀತಿ ಪಾಠವನ್ನ ಅದನೂಪ್ಪಿದ ಅವಳು ವಿದಾಯ ಹೇಳುತ್ತ ಸೇರಿದಳು ಅತ್ತೆ ಮನೆ
ಕುಹ ನೋಟ ಬೀರುತ್ತ ನುಡಿದಳು ನೀನೇಕೆ ಬಯಸುವೆ ನಿನ್ನಂತೆ ಇರಲು ನನ್ನನು
ನಾ ಮೌನಿಯಾದೆ
ಏ ಮಹಿಳ ಮಣಿಗಳ ಎಲ್ಲರ ಮೌನದ ಹಿಂದೆ ಕಥೆಯೇ ಇದೆಯಲ್ಲವೇ.....

- RoopaGowtham

25 Apr 2020, 11:29 pm

ನನ್ನವಳು.

ನನ್ನವಳು ಶಾಂತಲಾ
ನಗ್ತಾಳೆ ಕಿಲಕಿಲ
ಕೊಪಿಸಿಕೊಂಡ್ರೆ ರುದ್ರ ಕಲಾ
ಆಕೆ ಅತ್ರೆ ನನ್ನೆದೆಯಲ್ಲಿ ಕೋಲಾಹಲ
ಆಕೆ ನಗುವುದನ್ನು ನೋಡುವುದೇ ನನ್ನ ಹಂಬಲ

ಮನಸಿನಲ್ಲಿ ನೂರಾರು ನೋವುಗಳು ನರ್ತಿಸಿದಾಗ
ನಗುವುದನ್ನ ಕಲಿಸಿದವಳು ನನ್ನವಳು....
ಸಹನೆ ನಿನ್ನದಾದರೆ ಸಕಲವು ನಿನ್ನದು
ವಿನಯ ನಿನ್ನದಾದರೆ ವಿಜಯವು ನಿನ್ನದು
ಎಂದು ಉಪದೇಶಿಸಿದಳು ನನ್ನವಳು

ಸೋಲೇ ಗೆಲುವಿನ ಮೆಟ್ಟಿಲು
ನಗುವೇ ಜೀವನದ ತೊಟ್ಟಿಲು
ಜೀವನದಲ್ಲಿ ಸಾಧನೆ ಮುಖ್ಯ ವಾಗಲಿ
ಸಾಧಿಸುವ ಅಟ ನಿನ್ನದಾಗಲಿ
ಎಂದು ತಿಳಿಸಿದಳು ನನ್ನವಳು.....
Written By:-MS ಯಾದವ್.

- M S Yadav

25 Apr 2020, 03:20 pm

...................?

ಕನಸಿನಲ್ಲಿ ನೀನು ಬಂದಂತೆ
ಕಣ್ಣಿನಲ್ಲೇ ನೀನು ಕರೆದಂತೆ
ಕಿವಿಯಲ್ಲೇನೋ ಪಿಸು ನುಡಿದಂತೆ
ನಗುವೇ ಯಾಕೆ ಏನು ತಿಳಿಯದಂತೆ

ನಿನ್ನ ಕೈ ಹಿಡಿದು
ಒಂದೆರಡು ಕವನ ನುಡಿದು
ಅಪ್ಪುಗೆಯ ಬಯಸುವೆನು
ನೀನು ಒಪ್ಪಿದರೆ..
ನಿನ್ನ ಕೈ ಹಿಡಿದು
ಬರೆಯುವೆನು ಕಾಗದದ ಮೇಲೆ
ನನ್ನ ಎಲ್ಲಾ ಭಾವನೆಗಳ ಸುರಿದು
ತಿದ್ದಿ ಬಿಡು ನಾ ತಪ್ಪಿದರೆ
ಅಪ್ಪಿ ಬಿಡು ನೀ ಒಪ್ಪಿದರೆ

ಹೃದಯ ಬರೆದ ಕವನ ಸಂಕಲನಕ್ಕೆ
ನಿನ್ನ ಮೌನವೇ ಮುನ್ನುಡಿ...
ನಿನ್ನ ನೆನಪುಗಳೇ ಪರಿವಿಡಿ
ನಿನ್ನ ಕನಸುಗಳೆ ಪುಟವಿಡಿ
Written By:-MS ಯಾದವ್.

- M S Yadav

25 Apr 2020, 03:02 pm

ಕನ್ನಡ..‌.

ಹಾಯ್, ಹಲೋ ಪರದೇಶಿ ವ್ಯಾಮೋಹ ಬಿಡಿ.
ಯಾವ್ ಭಾಷೆಗೂ ಕಮ್ಮಿ ಇಲ್ಲ ನಮ್ಮ ಕನ್ನಡ ನುಡಿ.
ಕನ್ನಡ ನಾಡು ಎಂದಿಗೂ ಮರೆಯಲಾಗದ ಗಂಧದ ಗುಡಿ.
ಏನೇ ಬಂದರೂ ನೀ ಕನ್ನಡಕ್ಕಾಗಿಯೇ ಮಡಿ.
ಕನ್ನಡವ ಎಂದಿಗೂ ಹೃದಯದಲ್ಲಿಯೇ ಸೇರೆ ಹಿಡಿ.
ಕಾವೇರಿಯನ್ನು ಕಣ್ಣೀಗೋತ್ತಿ ಕೈ ಮುಗಿದು ಕುಡಿ.
ಕನ್ನಡತಾಯಿಯ ತಲೆ ಮೇಲೆ ಹೋತ್ತು ನಡಿ.
ಕನಸು ಕಾಣುವಾಗಲು ಕನ್ನಡವನ್ನೇ ಮಿಡಿ.
ಉಸಿರೋದರು ಕಾಯಿ ನೀ ಕನ್ನಡದ ಗಡಿ.
ಅರಿಶಿಣ-ಕುಂಕುಮ ಎಷ್ಟು ಚೆಂದ ಕನ್ನಡಕ್ಕೆ ನೋಡಿ.
ಮಾಡಿಹುದು ಕನ್ನಡಿಗರ ಮನಸ ಮೋಡಿ.
ಕನ್ನಡಕ್ಕೆ ಅವಮಾನವಾದರೆ ಎದ್ದು ನಿಲ್ಲವುದು ಹೃದಯದ ನಾಡಿ.
ಕನ್ನಡ ಯಾವಾಗಲೂ ಬೆಂಕಿಯ ಕಿಡಿ.
ಕರ ಮುಗಿದು ಹೇಳುವೆ ನಾನೆಂದಿಗೂ ಕನ್ನಡದ ಕುಡಿ....

- Chaitra Kulkarni

25 Apr 2020, 12:41 pm

ನನ್ನ ಮುದ್ದು ಕಂದ

ಓ ಮುದ್ದು ಕಂದ ನೀ ಬಂದೆ ಸಡಗರ ಸಂಭ್ರಮ ತಂದೆ
ತಂದೆ ತಾಯಿ ಎಣಿಸುವ ಭಾಗ್ಯ ತಂದೆ
ಅಪ್ಪ ಅಮ್ಮ ಎಂದು ನೀನೆಂದೆ ತೊದಲು ದನಿಯಲ್ಲಿ

- ರಘು

25 Apr 2020, 05:05 am

ಕಣ್ಣೀರು...

ನೀನೊಂದು ಬಾರಿ
ಮನಸಾರೆ ಅತ್ತುಬಿಡು
ನನ್ನೊಲವ ನೆನೆದು,
ನಿನ್ನ ಕಣ್ಣೀರು
ಹೊಳೆಯಾಗಿ ನನ್ನ ಕೊಚ್ಚಲಿ..!
ಇಲ್ಲವೇ, ಅದರಲ್ಲೇ
ನೆನಪುಗಳೆಲ್ಲವೂ ನೆಲ ಕಚ್ಚಲಿ..!

~ ಸಿದ್ದು ಗುಂಡ

- - ಸಿದ್ದು ಕನ್ನಡಿಗ

24 Apr 2020, 11:03 pm

ಕೊರೋನ

ಜಗತ್ತು ಕಂಡಿರದ ರೋಗಕ್ಕೆ
ಔಷಧಿಯ ನೀಡುವರು ಯಾರು?
ಜನರು ಮಾಡಿರದ ಪಾಪಕ್ಕೆ
ಕ್ಷಮಯ ನೀಡುವರು ಯಾರು?

ಯಾರಯ್ಯ ಯಾರು ಇದಕ್ಕೆ
ಪರಿಹಾರ ನೀಡುವರು ಯಾರು?

- Yesukumar

24 Apr 2020, 07:03 pm

ಕನ್ನಡಿಗನ ಕಿರು ಮಾತು

ದೈವನ ಕಂಡವರು ಯಾರು
ಅಂದ್ರೆ
ಆ ದೈವನ ಪರಮಭಕ್ತನಾಗಿರುತ್ತಾನೆ.
ಲೋಕವ ಗೆದ್ದವರು ಯಾರು
ಅಂದ್ರೆ
ಆ ಲೋಕದ ವೀರವಿಜಯನಾಗಿರುತ್ತಾನೆ.
ರಕ್ತವ ನೀಡುವರು ಯಾರು
ಅಂದ್ರೆ
ಈ ಅಪ್ಪಟ ಕನ್ನಡಿಗನಾಗಿರುತ್ತಾನೆ.
ಏಕೆಂದರೆ,
ಕನ್ನಡಿಗನ ರಕ್ತದ ಕಣ-ಕಣಗಳಲ್ಲೂ ತಾಯಿಯ
"ಸತ್ಯ ಪ್ರೀತಿ ತ್ಯಾಗ" ಎನ್ನುವ ಗುಣಗಳು ಇರುತ್ತದೆ.

- Yesukumar

24 Apr 2020, 06:47 pm

ನೀನು-ಬೆಳಕು

ನಾನು ತಿಳಿದಿದ್ದದ್ದು
ನೀನು ನಿಲುಕದ
ಆಗಸ ನಕ್ಷತ್ರದ
ಬೆಳಕೆಂದಷ್ಟೆ ..?

ನೀನು ಅಂಗೈಯೊಳಗೆ
ದೀವಟಿಗೆಯಾಗಿ
ದಾರಿ ತೋರಿ
ನಕ್ಕು ಬಿಟ್ಟೆ...!

- ಶ್ರೀಕಾವ್ಯ

23 Apr 2020, 09:48 pm