Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಣ್ಣು. ❤️

ದೇಹದ ಅಂಗವಾಗಿ...
ಮನಸಿನ ಸೇತುವೆಯಾಗಿ...
ಕಷ್ಟಕ್ಕೆ ನೀರಾಗಿ ಸುರಿಸಿ ...
ಸಂತಸಕ್ಕೆ ಹೂವಾಗಿ ಅರಳಿಸಿ..
ತೆರೆದಾಗ ಪ್ರಕೃತಿಯ ನೈಜ ಘಟನೆ ತಿಳಿಸಿ..
ಮುಚ್ಚಿದಾಗ ಕನಸುಗಳ ಜೋಕಾಲಿಯಲಿ ತೇಲಿಸಿ ....
ಮಾನವನ ಜತೆ ಸಾಯೋವರೆಗೆ ಇರುವ ನೀನು.....
ಬಿಳಿಯ ಕಡಲಿನ..... ಕತ್ತಲೆಯ ಸೂರ್ಯ...

- ಶಿವ...

- SHIV...

23 Apr 2020, 08:45 pm

ಅಗೋಚರದಲ್ಲಿ ಗೋಚರ

ಒಂದು ಅಗೋಚರ ಕ್ರಿಮಿ ಕರೋನ,
ಇಡೀ ಬ್ರಹ್ಮಾಂಡಲ್ಲಿ ಗೋಚರ,
ಮನುಜ ಕುಲವೇ ಅಲ್ಲೊಲ ಕಲ್ಲೊಲ.

ಅಹಂಕಾರಿ ಮನುಜನಿಗೆ ಬುದ್ಧಿ ಹೇಳಿತು,
ಕುಟುಂಬವಂದೇ ನಿಮ್ಮ ಪ್ರಪಂಚವೆಂದಿತು,
ಹೊಸ ಆವಿಷ್ಕಾರಗಳಿಗೆ ತಳಹದಿ ಆಯಿತು,
ಮಂದಿರ-ಮಸೀದಿ-ಚರ್ಚ ದೂರು ಮಾಡಿತು

ಶುಚಿತ್ವವೇ ಮಡಿಯಂದು ಹೇಳಿತು,
ಮನೆಯ ಊಟವೇ ಒಳಿತೆಂದಿತು,
ಜಗದ ಎಲ್ಲ ಜೀವಿಗಳ ಮಹತ್ವ ಅರುಹಿತು,
ಜಾತಿ-ಮತ ಭೇದವು ಬರಿ ಮಾನವರಿಗಂದಿತು.

#ವಾಜು

- WadirajKulkarni

23 Apr 2020, 02:04 pm

ದೇಶದ ಪರಿಸ್ಥಿತಿ

"ಎಲ್ಲಿರುವನಯ್ಯಾ ಎಲ್ಲಿರುವನು
ಭಕ್ತರ ಕಾಯೋ ದೈವನೆಲ್ಲಿರುವನು?".

ದೇಶಕ್ಕಾದ ನಷ್ಟವ
ಜನರಿಗಾದ ಕಷ್ಟವ
ಜೀವಿಗಳಿಗಾದ ನೋವಿಗೆ
ಪರಿಹಾರವೆಂಬ ಔಷಧಿಯ
ಹಚ್ಚುವವನು ದೈವನಾದೊಡೆ,
"ಎಲ್ಲಿರುವನಯ್ಯಾ ಎಲ್ಲಿರುವನು
ಭಕ್ತರ ಕಾಯೋ ಆ ದೈವನೆಲ್ಲಿರುವನು?.

- Yesukumar

23 Apr 2020, 11:55 am

ಪ್ರೇಯಸಿ ಕೊಟ್ಟ ಉಡುಗೊರೆ

ನಲ್ಲೆ ಅಂದು ನೀನಿಟ್ಟ ಮುತ್ತಿಗೆ
ನಾನಿಂದು ನೋವಿನ ಬಾಡಿಗೆ ಕಟ್ಟುತ್ತಿರುವೆ
ನನ್ನಿಂದ ನಗುವೆಲ್ಲೂ ದೂರಹೋಗಿದೆ
ಕಂಬನಿಯೊಂದೆ ನನಗೆ ಆಸರೆಯಾಗಿದೆ

- lakshman biradar

23 Apr 2020, 11:42 am

ನೆನಪು

ನಯನ ನವಿಲುಗಳ ಹಾಗೆ ನರ್ತಿಸುವಾಗ,
ಮುಂಗುರುಳು ಮೋಡಗಳ ಹಾಗೆ ಮಾತಾಡುವಾಗ,
ನಿನ್ನ ಮಾತೆ ಮುತ್ತಾಗಿ
ನನ್ನ ಮನ ತಣಿಸಿತು.
....✍️.ರಾಮ್

- ರಾಮ್

23 Apr 2020, 11:11 am

ಕುಡಿನೋಟ

ಕಣ್ಣಂಚಿನ ಮಿಂಚು
ನನ್ನೆದೆಯ ಬಡಿತ ನಿಲ್ಲಿಸಿದಾಗ
ನಿನ್ನ ಮುಗುಳುನಗೆ
ಮನ ತಣಿಸಿ ಮಾತನಾಡಿತು...
....✍️.ರಾಮ್

- ರಾಮ್

23 Apr 2020, 11:07 am

ಒಂದು ಮಾತು

ನನ್ನ ಜೀವನವು ಇನ್ನು
ದುಃಖದ ಕಡಲಲಿ ಮುಳುಗಿ
ಮನದ ಕೋಣೆಯಲೀ ತುಂಬ
ನೆನಪೆ ಆವರಿಸಿದೇನೋ
ನಿನ್ನೊಂದಿಗೆ ಕಳೆದಾ
ಆ ಸಮಯ ಇಂದಿಲ್ಲ
ನೋವಿನ ಬಲೆಯಲ್ಲಿ
ಸೀಳುಕಿದೇ ನಾನಲ್ಲಿ.

- azna

22 Apr 2020, 07:25 pm

ಏ ಕೋರೋನಾ ನೀ ಮರೋನಾ

ಎ ಕೋರೋನಾ ನೀ ಮರೋನಾ.

ವಾಹ ಕೋರೋನಾ ಏನು ನಿನ್ನ ಶಕ್ತಿ.
ಕಣ್ಣಿಗೆ ಕಾಣದೆ ಮಾಡುತ್ತಿ ಯುಕ್ತಿ.
ಜಾತಿ ಮತ ನೋಡದೆ ಕಾಡುತ್ತಿ.
ದುಡ್ಡೇ ದೊಡ್ಡದು ಎಂದವರಿಗೆ ಮಾಡಿದೆ ಫಜೀತಿ.

ಎ ಕೋರೋನಾ ನೀ ಮರೋನಾ.

ಭಕ್ತರನ್ನು ವಂಚಿಸಿ ಕಟ್ಟಿದ ಮಠ ಮಂದಿರದಲ್ಲಿ ಕಸ ಗುಡಿಸುವವರಿಲ್ದಂತೆ ಮಾಡಿದೆ.
ಜನರು ಧಾರ್ಮಿಕ ಕೇಂದ್ರ ಗಳಿಗೆ ತಿರುಗಿ ನೋಡದಂತೆ ಮಾಡಿದೆ.
ದೇವರುಗಳನ್ನು ಕತ್ತಲಲ್ಲಿಯೇ ಕೂಡಿಸಿದೆ.
ದೇಶ ದ್ರೋಹಿಗಳ ಮತಾಂದರ ನೀಚ ಬುದ್ಧಿ ಬಯಲಿಗೆಳೆದೆ.

ಎ ಕೋರೋನಾ ನೀ ಮರೋನಾ.
ನೀ ಮರೋನಾ.

ಪ್ರಚಾರವಿಲ್ದೆ ಜಗತ್ತನ್ನು ಆವರಿಸಿದೆ.
ವೈದ್ಯಕೀಯ ಲೋಕಕ್ಕೆ ನೀ ಆಗಂತುಕನಾದೆ.
ಸಿರಿ ಗರ ಬಿಡಿಸಿ ಪಾಪದ ಹಣ ಹೊರಗೆ ಬರುವಂತೆ ಮಾಡಿದೆ.
ಸಂಸ್ಕೃತಿ ಮರೆತವರಿಗೆ ಕೈ ಮುಗಿಯುವಂತೆ ಬೋಧಿಸಿದೆ.

ಎ ಕೋರೋನಾ ನೀ ಮರೋನಾ.
ನೀ ಮರೋನಾ.

ದಿನವೆಲ್ಲ ನಿನ್ನ ಭಯದಲ್ಲಿರುವಂತೆ ಮಾಡಿದೆ.
ನಗರ ವಿದೇಶಕ್ಕೆ ಹೋದವರಿಗೆ ಹುಟ್ಟೂರು ನೆನಪಿಸಿದೆ.
ಜಗತ್ತನ್ನು ಲಾಕ್ ಡೌನ್ ಮಾಡಿಸಿ ಕತ್ತಲು ಕೂಪಕ್ಕೆ ತಳ್ಳಿದೆ.
ಶತಮಾನಗಳ ಇತಿಹಾಸದಲ್ಲಿ ನೀ ಅಜರಾಮರವಾದೆ.

ಎ ಕೋರೋನಾ ನೀ ಮರೋನಾ
ನೀ ಮರೋನಾ.

ಸುಮಾರು ವರ್ಷಗಳಿಂದ ಎರಡು ಕಾಲಿನ ವೈರಸ್‌ಗಳನ್ನು ಎದುರಿಸಿ ಗಟ್ಟಿಯಾಗಿರುವ ಭಾರತೀಯರನ್ನು ತಿಳಿದು ಕೊಳ್ಳದೆ ನೀ ಮೋಸ ಹೋದೆ.
ಭಾರತಾಂಬೆಯ ಪಾದದಡಿಯಲ್ಲಿ ನಿನಗೆ ಜಾಗವಿಲ್ಲವೆಂದು ತಿಳಿಯದೆ ನೀ ಎಡವಿದೆ.
ವೈದ್ಯರು, ಆರೋಗ್ಯ ಸಹಾಯಕರು, ಪೌರ ಕಾರ್ಮಿಕರು,ಪೋಲಿಸ್ ಸಿಬ್ಬಂದಿಗಳು ಕಾಯಕ ನಿಷ್ಠೆ ಮೆರೆಯಲು ನೀ ಕಾರಣನಾದೆ.
ಭಾರತಾಂಬೆಯ ಅಜಾತ ಪುತ್ರನೆದುರು ನಿನ್ನ ಜೀವ ಉಳಿಸಿಕೊಳ್ಳಲು ನೀ ಮಂಡಿಯೂರಿದೆ.

ಎ ಕೋರೋನಾ ನೀ ಮರ್ಗಯಾರೆ.
ತೂ ಮರ್ಗಯಾರೆ.

-ಶಿವಪುತ್ರಪ್ಪ. ಡಿ. ಪಾಟೀಲ.
ಈ. ಕ. ರ. ಸಾ. ಸಂಸ್ಥೆ. ಬೀದರ ವಿಭಾಗ
( ಒಂದು ಸಣ್ಣ ಪ್ರಯತ್ನ )

- Sonakshi P

22 Apr 2020, 03:39 pm

ಹುಡುಕಿ ಕೊಡು ನನ್ನವ್ವನ

ಯಾರೋ ಮಾಡಿದ ತಪ್ಪಿಗೆ
ನಮಗೇಕೆ ಶಿಕ್ಷೆ
ತಿನ್ನಲು ಒಪ್ಪತ್ತಿನ ತುತ್ತಿಗೆ
ಬೇಡುವಂತಾಗಿದೆ ಭಿಕ್ಷೆ

ಅಮ್ಮನ ಕಂಡಿಲ್ಲ
ಅಪ್ಪನ ಭುಜವಿಲ್ಲ
ಅಕ್ಕನ ಅಕ್ಕರೆಯಿಲ್ಲ
ಅಜ್ಜಿಯ ಕಥೆಯಿಲ್ಲ
ಬೇಡಿಕೆಯೊಂದೇ ನಮ್ಮಲ್ಲಿ
ಕರುಣೆಯೇ ಇಲ್ಲವೇ ನಿನ್ನಲ್ಲಿ

ಹಣವಂತರು ಸಮವಿಲ್ಲದೆ
ಹಾಕುವರು ಅಮ್ಮನನ್ನ ಆಶ್ರಮಕ್ಕೆ
ದುಡಿದು ಕೊಡುವೆ ನಿನಗೆ ದೇವರೇ
ಬೇಕಾದಷ್ಟು ಹಣವ
ಹುಡುಕಿ ಕೊಡುವೆಯ ಕಾಣೆಯಾದ
ನನ್ನವ್ವನನ್ನ?

- ಸತೀಶ್ ಕುಮಾರ್ ಕಳುವರಹಳ್ಳಿ

22 Apr 2020, 03:05 pm

ನಮ್ಮ ಧರೆ.

ಧರೆಯೊಳಗಿನ ಸುಂದರತೆ,
ಇದರೊಳಗಿನ ಅಂದ, ಸುಗಂಧ ಮತ್ತು ರೌದ್ರತೆಯ ಗೌಪ್ಯತೆ,
ಇದನ್ನು ಅರ್ಥೈಸಿಕೊಳ್ಳುವ ವೈಚಾರಿಕತೆ,
ಮನುಕುಲಕ್ಕೆಂದು ಅರ್ಥವಾಗದ ಸತ್ಯಾನು ಸತ್ಯತೆ,
ಪರಿಸರ ಉಳಿಸಿದರೆ ಧರೆಯಾಗುವುದು ನಾವೀನ್ಯತೆ,
ಇದನ್ನು ಉಳಿಸಿಕೊಳ್ಳುವುದು ನಮ್ಮ ಆದ್ಯತೆ.

- Guruprasad P

22 Apr 2020, 02:55 pm