ದೇಹದ ಅಂಗವಾಗಿ...
ಮನಸಿನ ಸೇತುವೆಯಾಗಿ...
ಕಷ್ಟಕ್ಕೆ ನೀರಾಗಿ ಸುರಿಸಿ ...
ಸಂತಸಕ್ಕೆ ಹೂವಾಗಿ ಅರಳಿಸಿ..
ತೆರೆದಾಗ ಪ್ರಕೃತಿಯ ನೈಜ ಘಟನೆ ತಿಳಿಸಿ..
ಮುಚ್ಚಿದಾಗ ಕನಸುಗಳ ಜೋಕಾಲಿಯಲಿ ತೇಲಿಸಿ ....
ಮಾನವನ ಜತೆ ಸಾಯೋವರೆಗೆ ಇರುವ ನೀನು.....
ಬಿಳಿಯ ಕಡಲಿನ..... ಕತ್ತಲೆಯ ಸೂರ್ಯ...
ವಾಹ ಕೋರೋನಾ ಏನು ನಿನ್ನ ಶಕ್ತಿ.
ಕಣ್ಣಿಗೆ ಕಾಣದೆ ಮಾಡುತ್ತಿ ಯುಕ್ತಿ.
ಜಾತಿ ಮತ ನೋಡದೆ ಕಾಡುತ್ತಿ.
ದುಡ್ಡೇ ದೊಡ್ಡದು ಎಂದವರಿಗೆ ಮಾಡಿದೆ ಫಜೀತಿ.
ಎ ಕೋರೋನಾ ನೀ ಮರೋನಾ.
ಭಕ್ತರನ್ನು ವಂಚಿಸಿ ಕಟ್ಟಿದ ಮಠ ಮಂದಿರದಲ್ಲಿ ಕಸ ಗುಡಿಸುವವರಿಲ್ದಂತೆ ಮಾಡಿದೆ.
ಜನರು ಧಾರ್ಮಿಕ ಕೇಂದ್ರ ಗಳಿಗೆ ತಿರುಗಿ ನೋಡದಂತೆ ಮಾಡಿದೆ.
ದೇವರುಗಳನ್ನು ಕತ್ತಲಲ್ಲಿಯೇ ಕೂಡಿಸಿದೆ.
ದೇಶ ದ್ರೋಹಿಗಳ ಮತಾಂದರ ನೀಚ ಬುದ್ಧಿ ಬಯಲಿಗೆಳೆದೆ.
ಎ ಕೋರೋನಾ ನೀ ಮರೋನಾ.
ನೀ ಮರೋನಾ.
ಪ್ರಚಾರವಿಲ್ದೆ ಜಗತ್ತನ್ನು ಆವರಿಸಿದೆ.
ವೈದ್ಯಕೀಯ ಲೋಕಕ್ಕೆ ನೀ ಆಗಂತುಕನಾದೆ.
ಸಿರಿ ಗರ ಬಿಡಿಸಿ ಪಾಪದ ಹಣ ಹೊರಗೆ ಬರುವಂತೆ ಮಾಡಿದೆ.
ಸಂಸ್ಕೃತಿ ಮರೆತವರಿಗೆ ಕೈ ಮುಗಿಯುವಂತೆ ಬೋಧಿಸಿದೆ.
ಎ ಕೋರೋನಾ ನೀ ಮರೋನಾ.
ನೀ ಮರೋನಾ.
ದಿನವೆಲ್ಲ ನಿನ್ನ ಭಯದಲ್ಲಿರುವಂತೆ ಮಾಡಿದೆ.
ನಗರ ವಿದೇಶಕ್ಕೆ ಹೋದವರಿಗೆ ಹುಟ್ಟೂರು ನೆನಪಿಸಿದೆ.
ಜಗತ್ತನ್ನು ಲಾಕ್ ಡೌನ್ ಮಾಡಿಸಿ ಕತ್ತಲು ಕೂಪಕ್ಕೆ ತಳ್ಳಿದೆ.
ಶತಮಾನಗಳ ಇತಿಹಾಸದಲ್ಲಿ ನೀ ಅಜರಾಮರವಾದೆ.
ಎ ಕೋರೋನಾ ನೀ ಮರೋನಾ
ನೀ ಮರೋನಾ.
ಸುಮಾರು ವರ್ಷಗಳಿಂದ ಎರಡು ಕಾಲಿನ ವೈರಸ್ಗಳನ್ನು ಎದುರಿಸಿ ಗಟ್ಟಿಯಾಗಿರುವ ಭಾರತೀಯರನ್ನು ತಿಳಿದು ಕೊಳ್ಳದೆ ನೀ ಮೋಸ ಹೋದೆ.
ಭಾರತಾಂಬೆಯ ಪಾದದಡಿಯಲ್ಲಿ ನಿನಗೆ ಜಾಗವಿಲ್ಲವೆಂದು ತಿಳಿಯದೆ ನೀ ಎಡವಿದೆ.
ವೈದ್ಯರು, ಆರೋಗ್ಯ ಸಹಾಯಕರು, ಪೌರ ಕಾರ್ಮಿಕರು,ಪೋಲಿಸ್ ಸಿಬ್ಬಂದಿಗಳು ಕಾಯಕ ನಿಷ್ಠೆ ಮೆರೆಯಲು ನೀ ಕಾರಣನಾದೆ.
ಭಾರತಾಂಬೆಯ ಅಜಾತ ಪುತ್ರನೆದುರು ನಿನ್ನ ಜೀವ ಉಳಿಸಿಕೊಳ್ಳಲು ನೀ ಮಂಡಿಯೂರಿದೆ.
ಎ ಕೋರೋನಾ ನೀ ಮರ್ಗಯಾರೆ.
ತೂ ಮರ್ಗಯಾರೆ.
-ಶಿವಪುತ್ರಪ್ಪ. ಡಿ. ಪಾಟೀಲ.
ಈ. ಕ. ರ. ಸಾ. ಸಂಸ್ಥೆ. ಬೀದರ ವಿಭಾಗ
( ಒಂದು ಸಣ್ಣ ಪ್ರಯತ್ನ )
ಧರೆಯೊಳಗಿನ ಸುಂದರತೆ,
ಇದರೊಳಗಿನ ಅಂದ, ಸುಗಂಧ ಮತ್ತು ರೌದ್ರತೆಯ ಗೌಪ್ಯತೆ,
ಇದನ್ನು ಅರ್ಥೈಸಿಕೊಳ್ಳುವ ವೈಚಾರಿಕತೆ,
ಮನುಕುಲಕ್ಕೆಂದು ಅರ್ಥವಾಗದ ಸತ್ಯಾನು ಸತ್ಯತೆ,
ಪರಿಸರ ಉಳಿಸಿದರೆ ಧರೆಯಾಗುವುದು ನಾವೀನ್ಯತೆ,
ಇದನ್ನು ಉಳಿಸಿಕೊಳ್ಳುವುದು ನಮ್ಮ ಆದ್ಯತೆ.