Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಾಣದ ಭಾವನೆ

ನನ್ನ ಮನಸಿನ ಕೋಣೆಯಲಿ
ಮಾತು ಮೌನವಾಗಿದೆ
ಹೃದಯ ಪ್ರತಿ ನಿಮಿಷವು
ನಿನಗಾಗಿ ಚಡಪಡಿಸಿದೆ
ಒಮ್ಮೆ ತಿರುಗಿ ಬರಬಾರದೇ
ಹೋದ ದಾರಿಯಲಿ
ಅತ್ತು ಕರೆದರು ಬರಲಾರೆ
ಮರಳಿ ಎಂದೆಂದೂ


ಕಾದು ಕಾದು ಬೇಸತ್ತು
ಇರುವ ಸಮಯವು ಇಂದು
ಮುಂದೆಯೂ ಸಾಗಲೂ ಆಗದೆ
ಹಿಂದೆಯೇ ಕುಳಿತಿದೆ ಬೆಪ್ಪಾಗಿ

ಜೀವನ ಇಲ್ಲಿಗೆ ಮುಗಿದ
ಆಗಿದೆ ನೀನ್ ಇಲ್ಲದೆ
ಇರುವ ದಿವಸವು ನನ್ನನ್ನು
ಹಿಂಬಾಲಿಸಿ ಕೊಲ್ಲುತಿದೆ
ಕಾರಣವಿಲ್ಲದೆ ನಿ ಹೋದೆ
ನನ್ನ ಬಿಟ್ಟು ಅಂದು
ಯಾರ ಮಾತಿಗೆ ಭಯಬಿದ್ದು
ಕಾಣೆಯಾದೆ ನೀ

ಕಳೆದ ಸಮಯವು ನಿನ್ನಲ್ಲಿ
ಮತ್ತೆ ಮತ್ತೆ ಕಾಡುತಿದೆ
ನೆನಪು ಅಳಿಸಲು ಆಗದಾಗೆ
ಬರೆದು ಹೋದೆ ನೀನು
ಇನ್ನಾದರು ದಿನವನು ನಾ
ಕಣ್ಣೀರಲಿ ಕಳೆಯದಂತೆ
ಎಲ್ಲವನ್ನು ಒಂದು ಕನಸೆಂದು
ಮರೆಯಲು ಪ್ರಯತ್ನಿಸುವೆನು.

- azna

22 Apr 2020, 09:33 am

ನಾ ಕಂಡ ಕನಸು ನಿನೆನಾ.

ಮನಸಲ್ಲಿ ಕಂಡೆ ಕನಸೊಂದನಾ
ಅದನ್ನು ಪೂರ್ತಿಗೋಳಿಸಿದವಳು ನೀನೆನಾ!

ಅರ್ಧಂಬರ್ದ ಬೆಯ್ದ ರೊಟ್ಟಿಯನ್ನು
ಪ್ರೀತಿ ಹಂಚಿ ಊನಬಡಿಸಿದವಳು ನೀನೆನಾ!

ನಿದ್ರೆ ಬಾರದ ರಾತ್ರಿಯಲಿ
ನಿದ್ರಾದೇವತೆಯ ರೂಪದಲ್ಲಿ ಆವರಿಸಿದಳು ನೀನೆನಾ!

ಮೌನ ಆವರಿಸಿದ ಮೂಗನಿಗೆ
ಮಾತಿನ ಮಲ್ಲನೆಂದು ಕರೆದವಳು ನೀನೆನಾ!

ನನ್ನ ನಾನು ಮರೆತಾಗ
ಪ್ರಪಂಚಕ್ಕೆ ಪರಿಚಯಿಸಿದವಳು ನೀನೆನಾ!

ನನ್ನ ನಗುವ ಮಾರೆತಾಗ
ಹಾಸ್ಯ ಚಟಾಕಿ ಸಿಡಿಸಿದವಳು ನೀನೆನಾ!

ಕದ ಮುಚ್ಚಿದ ಹೃದಯದಲಿ
ಮೆಲ್ಲನೆಯ ಹೆಜ್ಜೆ ಹಾಕಿ ಬಾಗಿಲು ತೆರೆದವಳು ನೀನೆನಾ!

ನಾನಿದ್ದೆ ಏಕಾಂಗಿಯಂತೆ
ನೀ ಬಂದೆ ದೇವಿಗೆಯಂತೆ
ನಾನರಿಯೆ ನಿನೆನ್ನ ಗೆಳತಿಯೊ,ಸಂಗಾತಿಯೊ
ಅಥವಾ ಸಿಹಿ ಅಪ್ಪುಗೆಯ ಅರ್ಧಾಂಗಿಯೊ

ಪ್ರೀತಿಯ ಪ್ರತಿರೂಪದಂತಿರುವ. ತಾಜಮಹಲನ ಒಡೆಯ ನಾನಲ್ಲನಾದರು
ನೀನಾದೆ ಈ ಹೃದಯ ಮಂದಿರದ ದೇವತೆ.

- kempayya

21 Apr 2020, 11:07 pm

ನಾ ಕಂಡ ತಾಯಿ

ಮೊದಲು ನನ್ನ ನೋಡಿ ನಕ್ಕಳು ನನ್ನವ್ವ
ಆ ಕ್ಷಣದಲ್ಲಿ ಮರೆತಳು ತನ್ನ ೯ ತಿಂಗಳ ನೋವ
ಉಣಿಸಿದಳು ತನ್ನ ಎದೆಯ ಹಾಲು
ಧಾರೆಯೇಳೆದಳು ತನ್ನ ಉಳಿದ ಜೀವನವ
ಆದಳು ಇ ಜನ್ಮಕ್ಕೆ ನನ್ನ ಹಡದವ್ವ
ಏಳು ಜನ್ಮವ ಎತ್ತಿದರು ತಿರಿಸಲೊಲ್ಲೆ ಇ ತಾಯಿಯ ಋಣವ.....

- kempayya

21 Apr 2020, 10:43 pm

ಆನಂದಮಯ

ಆಂತರಂಗದಲ್ಲಡಗಿಹ ಆನಂದವೆಂಬ
ಜ್ಯೋತಿರ್ಮಯ ಭಾವಕೆ ಪರದೆಯ
ಹಾಕಿಕೊಳ್ಳಲೇಕೆ !

ಮತಧರ್ಮವ ಪ್ರತಿಪಾದಿಸುತ ಸ್ವಾರ್ಥ
ಲಾಲಸೆಯಲಿ ತಮದತ್ತ ಎಲ್ಲರ ತಳ್ಳುತಾ
ನೀ ಮಾತ್ರ ಸಂತಸ ಹೊಂದಬೇಕೆ !

ಅವಿದ್ಯಾವಂತರೆಂಬ ಮುಖೇಡಿನವೋ
ದರ್ಪಕ್ಕೆ ಹೆದರಿದ ಸೊಗಲಾಡಿತನವೋ ನಿನಗೆಲ್ಲರೂ ಸೇವಕರಂತಿಹರು !

‌‌‌ನಾಯಿಗಳಿಗೆ ಮೂಳೆಯೆಸೆದಂತೆ ಕಾಲಬು
ಡದಲಿರುವ ಅವರೊಂದು ದಿನ‌ ‌ಎಚ್ಚರ
ವಾದರೆ ನಿನಗೆಂದೂ ಬಾಗಲಾರರು !

ವಿದ್ಯೆಯೊಂದು ಸ್ವಾಭಿಮಾನದ ಮೆರುಗ
ಹೊದಿಸುವುದು ಎಂದೂ ತಲೆತಗ್ಗಿಸದಂತೆ
ನಡೆಯುವರವರು !!
ಶಕುಂತಲಾಮೂರ್ತಿ
"""""""""""""""""""""""""""

- Shaku Thanks Amma Shaku

21 Apr 2020, 06:42 pm

ಆಕೆ

ಆಕೆಯ ಬೆರಳುಗಳಿಗೂ ಉಗುರುಗಳಿಗೂ ನಿಮಿಷಕ್ಕೊಮ್ಮೆ ಅದೆಂತಹ ಜಗಳ.
ಅದು ಅವಳ ಕಿವಿಯ ಮೇಲೆ ಕುಡುವುದಿಲ್ಲ.
ಅದನೆತ್ತಿ ಅಲ್ಲಿ ಕುಡಿಸುವತನ ಆಕೆ ಬಿಡುವುದಿಲ್ಲ.
ಇದನ್ನು ನೋಡಿದ ಮೇಲೆ ನನ್ನ ಮನಸ್ಸು ನನ್ನ ಬಳಿ ಉಳಿಯುವುದಿಲ್ಲ...

- smiley

21 Apr 2020, 05:54 pm

...ಮುದ್ದಿನ ಸೊಸೆ...

ನಿನ್ನ ಒಂದು ನೋಟ ಸಾಕು
ನನ್ನೇನೇ ನಾ ಕಳೆದು ಹೋಗಲ್ಲು
ನಿನ್ನ ಆ ನಗು ಸಾಕು
ಇಡೀ ಜಗತ್ತನ್ನೇ ನಾ ಮರೆಯಲು

ನಿನ್ನ ಒಂದು ಹೆಸರು
ಸಾಕು ನಾ ಉಸಿರಾಡಲು
ನಿನ್ನ ಮುದ್ದಾದ ಮಾತುಗಳು
ಸಾಕು ನಾ ಬದುಕಲು...

ನಿನ್ನ ಒಂದು ಸ್ವರ್ಶ ಸಾಕು
ಈ ಜನುಮ ಕಲಿಯಲು
ನಿನ್ನ ಒಂದು ಅಣತಿ
ಸಾಕು ನನ್ನನೆ ನಾ ಅಡಿಯಲು.....

ಹೇ ಮನಸ್ಸೇ ನಾ ಏನೇ
ಮಾಡಿದ್ರು ನಿನ್ನ ಪ್ರೀತಿಗಾಗಿಯೇ
ಹೇ ಪುಟ್ಟ ಮನಸ್ಸೇ ನನ್ನ ಮನಸ್ಸನ
ನೀ ಬೇಗ ಬಂದು ಸೇರುವಿಯಾ....

ಈ ಬದುಕು ನಿನ್ನಗಾಗಿ
ಬವಣೆ ನಿನ್ನಗಾಗಿ
ನನ್ನ ಪ್ರೀತಿ ಸುಳ್ಳಾದರೆ
ಈ ಜಗತ್ತೇ ಸುಳ್ಳು ಅಲ್ಲವೇ.....

ನನ್ನ ಅಮ್ಮನ ಮುದ್ದಿನ ಸೊಸೆಯೇ
ನಂದಾದೀಪವೇ ನೀ ಬಂದು ಬೆಳಗುವೆಯಾ
ನನ್ನ ಅರಮನೆಯ ದೀಪವಾ
ನೀ ಬರುವೆಂದು ನಾ ಎದುರು ನೋಡುವೆ....

- Ajay

21 Apr 2020, 04:34 pm

ನೆನಪು

ಹೇ ನೆನಪೇ,
ದರಿದ್ರವಾದ ದಟ್ಟಡವಿಯಲ್ಲಿ,
ಏಕಾಂಗಿಯಾಗಿ ಅಲೆದಾಡುವಾಗ,
ಬೆನ್ನಟ್ಟಿದ ಬೇತಾಳ ದಂತೆ ಹಿಂಬಾಲಿಸುತ್ತಿರುವೆ,
ನಾ ಎಲ್ಲಿ ಹೋದರೂ, ಎಲ್ಲಿ ಬಂದರೂ,
ಕಣ್ಮರೆಯಾಗಿಬಿಡು ಒಂದು ಬಾರಿ
ನನಗೂ ಹೇಳದೆ,
ಮರೆಯಾಗಿಬಿಡು ಯಾರಿಗೂ ಕಾಣದೆ..!

- Megha

21 Apr 2020, 12:25 pm

ಜಗಕೆ ಬೇಡದವ

ಹಣೆ ಬರಹದ ನತಾದೃಷ್ಟ
ಬಗೆದು ಕೊಂಡರು
ಹೂರಬರದ ರಕ್ತ
ಹಿಂಡಿ ಹಿಪ್ಪೆಯಾದ ದೇಹ
ಬಡಕಲು ಬದುಕು
ಬೆಲೆಯಿರದ ಬಾಳು
ಕಾಣದಾದ ಬೆಳಕು
ಬರಿ ಅಂಧಕಾರ
ಜಗದ ನಿರುತ್ತರ
ಪಡೆಯಲಾಗದ ಪ್ರೀತಿ
ನಿಸ್ಸಂದೇಹವಾಗಿ ನಾ
ಜಗಕೆ ಬೇಡದವ....

- suresh veera

21 Apr 2020, 11:35 am

ಕನ್ನಡ

ಕನ್ನಡ ನಾಡಿನ ವೀರರೇ
ಕರಿಮುಗಿಲ ಶೂರರೇ
ಕರೆತನ್ನಿ ಕನ್ನಡವ
ಕಂಗೊಳಿಸಿ ಕರ್ನಾಟಕವ

- Naveen r Mogaveera

21 Apr 2020, 11:06 am

ನನ್ನ ಅವಲೋಕನ

ಕನ್ನಡದ ಕಂದ
ನೀನೆಂದು ಚೆಂದ
ನೀ ನಗುತಿರಲು
ನನಗಾನಂದ

ಕಲ್ಕಟ್ಟೆ

- Naveen r Mogaveera

21 Apr 2020, 10:55 am